ಒಟ್ಟು 196 ಕಡೆಗಳಲ್ಲಿ , 49 ದಾಸರು , 171 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಪ ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ 1 ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ ಮಂದಿರದಲ್ಲಿ ಜನಿಸಿ ಎಂದು ನುಡಿದಡೆ ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ ಬಂಧನದಲ್ಲಿಡು ಅಲ್ಲಿ ಪೊಂದುವರಾರೊ 2 ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ ಯೋನಿಯೊಳು ಕಟ್ಟಿಹಾಕಿ ಹೀನಾಯ ಉಣಸೀ ಅನಂತ ಕಲ್ಪಕ್ಕೆ ಪವಮಾನ ಮತ ಪೊಂದಿಸಿ ನಿರ್ವಾಣವೀವೆನೆಂದರಾಗೆ ನಾನಾದಿ ಬಯಿಪೆ 3 ಗುರುಪ್ರಸಾದದಿಂದಲಿ ಪರಮ ಸದ್ಗತಿ ಎನ ಗರಿದಲ್ಲ್ಯಾವಾಗಾದರು ಸ್ಥಿರವೆ ಸಿದ್ಧ ನಿರಯ ದುರಾತ್ಮಗಿಲ್ಲ ಕರವ ಮುಗಿದು ಒಂದು ವರ ಬೇಡುವೆ 4 ಭಾಗವತರ ಸಹವಾಸ ಭಾಗವತರ ಕಥಾಗುಣ ಭಾಗ ಗುಣಿಸುವ ಮತಿ ಭಾಗೀರಥಿ ಯಾತ್ರೆ ಭಾಗ್ಯವೆ ಪಾಲಿಸು ದುಷ್ಟ ಭಾಗಾದಿಯರೋಡಿಸಿ ಕಡೆ ಭಾಗಕ್ಕೆ ಎನ್ನೆಡಬಲ ಭಾಗದಲಿ ಸುಳಿಯೊ 5 ಕಾಣಿಕಾಣೆ ಙÁ್ಞನವಿಲ್ಲ ತುತಿಪುದಕ್ಕೆ ಧ್ಯಾನವÀರಿಯೆ ನಿನ್ನನೆ ನಿದಾನಿಸಲಿಕ್ಕೆ ನಾನಾಪರಾಧವ ಮಾಡಿದ ಮಾನವನೋ ದೀನಬಂಧೊ ನೀನೊಲಿದು ಎನ್ನ ಮನಕೆ ಆನಂದ ತೋರೋ 6 ರಜತಪೀಠ ಪುರನಿವಾಸಾ ರಜನಿಪತಿ ಸಂಕಾಶಾ ರಜನಿಚರ ವಿನಾಶಾ ಸುಜನಮಾನಸಹಂಸ ರಜದೂರ ಮಂದಹಾಸಾ ವಿಜಯವಿಠ್ಠಲ ಶ್ರೀಶಾ ಭಜಿಪೆ ಲೇಶಾ 7
--------------
ವಿಜಯದಾಸ
ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ ಅಹಂಬ್ರಹ್ಮಭಾವವ ಬಿಡಿಸೋ ಪ ಬ್ರಹ್ಮಾನ ಜನಕನೆ ಬ್ರಹ್ಮಾಂಡದೊಡೆಯ ಬ್ರಹ್ಮಾಂಡಾಂತರ್ಯಾಮಿ ಸಲಹೋ ಅ.ಪ ಸತ್ಯವ್ರತನೆ ನೀ ಸತ್ಯಪರನು ಜಗ ಸತ್ಯ ಸೃಜಿಸಿ ಪೊರೆವೇ ನಿತ್ಯ ನಿರ್ಲಿಪ್ತನಹುದೋ 1 ಏಕರೂಪನೆ ಅನೇಕ ರೂಪದಿ ಎಲ್ಲಾ ಲೋಕಗಳೆಲ್ಲಾ ಪಾಲಿಪೆ ಲೋಕಗಳನೆಲ್ಲ ಮಾಳ್ವೆ 2 ನಿನ್ನಾಶ್ರೈಸಿದ ಭಿನ್ನಪ್ರಕೃತಿ ತ್ರಿಭಿನ್ನಗೈಸಿ ಅಂದು ಜಗದಾ ಬನ್ನ ಪಣ್ಣನ್ನ ನಿರ್ಮಿಸಿದೆಯೋ 3 ಪಣ್ಣಿಗೆ ನಾಲ್ಕು ರಸವೋ ಘನ್ನಷಡೂರ್ಮಿಗಳನ್ನೆ ನಿರ್ಮಿಸಿ ಪೊರೆವೇ 4 ಕೊಟ್ಟೆ ಸಪ್ತಧಾತು ಅಷ್ಟವಿಟಪಿಗಳನಿಟ್ಟೆ ನವಾಕ್ಷಪೊಟರೆ ದಟ್ಟದಶಚ್ಛದ ಕೊಟ್ಟು ಜಗವೃಕ್ಷ ಸೃಷ್ಟಿಯ ಮಾಡಿ ಮೆರೆದೇ 5 ಅಟ್ಟಹಾಸದಿ ಫಲಮುಟ್ಟದೆ ಇಹ ಖಗಶ್ರೇಷ್ಟನೆ ನೀ ತುಷ್ಟನೋ ಕೊಟ್ಟ ಫಲವನುಂಡಷ್ಟೂ ಸುಖಿಪ ಜೀವರೆಷ್ಟೋ ಜಗವರಿಯೇ 6 ವ್ಯಷ್ಟೀಸಮಷ್ಟಿಯ ಸೃಷ್ಟೀಯೊಳು ನೀನೆ ಶ್ರೇಷ್ಠನೇ ವ್ಯಾಪಿಸಿರುವೇ ದೃಷ್ಟಿಗೋಚರವಲ್ಲ ಅಷ್ಟಕರ್ತೃ ಪರಮೇಷ್ಟೀಜನಕ ಸಲಹೋ 7 ಅಪ್ರಾಪ್ಯಮನೋವಚ ತ್ವತ್ ಪ್ರಾಪ್ತಿಎಂತಯ್ಯ ತ್ವತ್ಪ್ರಸಾದವಿಲ್ಲದೇ ಎನ್ನ ಬಂಧಪ್ರಕೃತಿಯನೆ ಹರಿಸೋ 8 ಸೃಷ್ಟಿಯೊಳಗೆ ಸ್ವನಿಷ್ಠೆಯಿಂದಲೀ ಜಗದೃಷ್ಟೀಗೋಚರನಾಗುವೆ 9 ಮುಮುಕ್ಷುಗಳಿಗೆ ಸಾಕ್ಷಿ ಮನದಕ್ಷಿಯೊಳು ಪೊಳೆವೇ 10 ಭಕ್ತಿವಿರಹಿತ ದುರ್ಯುಕ್ತಕಾರ್ಯದಿ ಮನ ಸಕ್ತವಾಗಿಹುದು ತ್ವಧ್ಭಕ್ತಿಯ ಕೊಡು ನಿತ್ಯ11 ಹತ್ತಿಬಹುದೂ ಬೆನ್ಹತ್ತಿಕರ್ಮವು ಮತ್ತೆ ಸುತ್ತೀಸುತ್ತುತ ಜನ್ಮವಾ ಎನಗೆ ಉತ್ತಮಗತಿ ತೋರದೇ12 ಘೋರದುರಿತ ಪರಿಹಾರ ಮಾಡಿ ಪೊರೆ ಮಾರಾರಿಪಿತವಂದ್ಯ ಚಾರು ಚರಣಸ್ಮರಣಾರಾಧನೆ (ಅದು) ಸಾಕೋ 13 ಸಾರಿದೆನೋ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸ ವಿಠಲಾ ಪಾರುಗಾಣಿಸಿ ಪೊರೆಯೋ 14
--------------
ಉರಗಾದ್ರಿವಾಸವಿಠಲದಾಸರು
ಭಜಿಸಿರೊ ಭವಭಂಜನ ಹರಿಯಾ ರಜತ ಪೀಠ ಪುರದಿ ರಾಜಿಪ ದೊರೆಯಾ ಪ. ಮುಷ್ಟಿ ಪೃಥುಕವನ್ನು ಕೊಟ್ಟ ಕುಚೇಲಗೆ ಶ್ರೇಷ್ಠ ಭಾಗ್ಯವನಿತ್ತ ಸಿರಿವರನಾ ಅಷ್ಟಮಠೀಯರು ಮುಟ್ಟಿ ಪೂಜಿಸುವಂಥ ವಿಠಲನಿಂದ ಸರ್ವಾಭೀಷ್ಟವ ಪಡೆಯಿರಿ 1 ಯುಕ್ತಿಯನರಿಯದ ಭಕ್ತರಿಗಿಹಪರ ಭುಕ್ತಿ ಮುಕ್ತಿದನೆಂಬ ಬಹು ಬಿರುದಾ ವ್ಯಕ್ತ ಮಾಡುತ ಕಡು ರಿಕ್ತಜನರ ರಕ್ಷಾ ಸಕ್ತನಾಗಿಹ ಭೈಷ್ಮೀನಕ್ತ ಮಾನಸನನ್ನು 2 ನಿತ್ಯ ಮಧ್ವ ಸರಸಿಯೊಳಗೆ ಮಿಂದು ಉರಗ ಗಿರೀಶ ಸತ್ಯ ವರನ ಮೂರ್ತಿಯ ಕಂಡು ಸುರವರ ಪ್ರಾರ್ಥನೆಯ ವರ ಪ್ರಸಾದವನುಂಡು 3
--------------
ತುಪಾಕಿ ವೆಂಕಟರಮಣಾಚಾರ್ಯ
ಭವ ಎನಗೆ ಹಿಂಗಿತು ಪ ಪದುಮನಾಭನ ಪಾದದೊಲುಮೆ ಎನಗಾಯಿತು ಅ ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತುಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು 1 ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರುಕುಮಿಣಿಯರಸ ಕೈವಶನಾದನೆನಗೆ 2 ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತುಮುಂದೆನ್ನ ಜನ್ಮ ಸಫಲವಾಯಿತುತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ 3
--------------
ಕನಕದಾಸ
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ
ಮಗುಟ ವಿಶ್ವದೊಳೊಬ್ಬನೆ ಪ್ರಗಟ ಭಾಸ್ಕರ ಗುರು ದಯನೋಟ ರಸಕಾಯ ಸವಿದುಂಬೂಟ ಧ್ರುವ ಭಾಸ್ಕರ ಗುರು ನಿಜದಯ ಲೇಸುದೋರುವ ವಿಜಯ ಭಾಸ್ಕರ ಗುರು ಅಭಯ ಹಸನಾದ ಪುಣ್ಯೋದಯ 1 ಭಾಸ್ಕರ ಕರುಣಾಕಟಾಕ್ಷ ಭಾಸುದು ಘನಪ್ರತ್ಯಕ್ಷ ಭಾಸ್ಕರ ಗುರು ನಿಜ ಭಿಕ್ಷ ಹಸನಾಗಿ ಮಾಡುವಾ ಸಂರಕ್ಷ 2 ಭಾಸ್ಕರ ಗುರು ನಿಜಬೋಧ ಭಾಸುವ ಘನಸರ್ವದಾ ಭಾಸ್ಕರ ಗುರು ಪ್ರಸಾದ ಸ್ವಸುಖದೋರುವ ಸಂವಿಸ್ವಾದ(?) 3 ಭಾಸ್ಕರ ಗುರು ಉಪದೇಶ ಭಾಸಲು ಬಲು ಸಂತೋಷ ಭಾಸ್ಕರ ಗುರುವರೇಶ ಈಶನಹುದೊ ಸರ್ವೇಶ 4 ಭಾಸ್ಕರ ಗುರುಕೃಪೆ ಙÁ್ಞನ ಲೇಸಾಗಿ ತೋರುವದುನ್ಮನ ಭಾಸ್ಕರ ಗುರುದಯ ಕರುಣ ದಾಸ ಮಹಿಪತಿಗಾಭರಣ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮತವೆ ಒಳ್ಳೆಯದು ಭಾಗವತವು - ನಮ್ಮಯತಿ ರಾಮಾನುಜಯೆಂಬ ಬೇರೆ ಮನಸಿನ ಮತವೆ ಒಳ್ಳೆಯದು ಪ ಹರಿದಾಸ ಸರ್ವೇಶತೆಗೆ ನಿಮ್ಮ ವೇಷತೊರೆಯಿರಿ ನಿಮ್ಮ ದೋಷವರ ತೀರ್ಥ ಪ್ರಸಾದವೇಪರಗತಿ ಎಂಬ ದಾಸ1 ಕಣಿಯೇ ಶಿಕ್ಷಾ ರ-ಮಣಿಯೇ ಮೋಕ್ಷದರಗಿಣಿಯೇ ನಿಮ್ಮ ಶ್ರೀಮಣಿ ತಿರುಮಂತ್ರವೇ ಗತಿ ಎಂಬ ದಾಸ2 ಹರಿದಾರಿ ತಿರುಕಾವಳೂರಿನಪರಮ ಪದವಿಯೆಂಬ ಪಟ್ಟಣಸೇರಿ ನಮ್ಮ ನೆಲೆಯಾದಿಕೇಶವಸಿರಿ ರಂಗ ಪರರುಪಕಾರಿ 3
--------------
ಕನಕದಾಸ
ಮಧ್ವಮತವ ಪೊಂದದವನ ಭಕುತಿಯಾತಕೆ ಪ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆಅ.ಪ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ 1 ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ 2 ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ | ನಿಂದೆಗಳು ಮಾಡುತಿಹನಾಚಾರವ್ಯಾತಕೆ 3 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆ | ಹಿರಿಯರನ್ನು ಸಾಕದವನ ಪುಣ್ಯವ್ಯಾತಕೆ || ಚರಿಸಿ ತೀರ್ಥಯಾತ್ರೆ ಮಾಡದ ದೇಹವ್ಯಾತಕೆ | ವರ-ಪ್ರಸಾದವೀಯದಂಥ ದೇವರ್ಯಾತಕೆ4 ಏಕಾದಶಿಯ ಮಾಡದವನ ವ್ರತವು ಯಾತಕೆ | ಏಕಮನಸು ಇಲ್ಲದವನ ನಡತೆ ಯಾತಕೆ || ಸಾಕಿದವನ ಕೊಲ್ಲುವಂಥ ಭಂಟನ್ಯಾತಕೆ | ಲೋಕವಾರ್ತೆ ಬಿಡದವನ ಜಪವು ಯಾತಕೆ 5 ಭಾಷೆ ಬದ್ಧವಿಲ್ಲದವನ ಮಾತು ಯಾತಕೆ | ಕಾಸುವೀಸÀಕೆ ಬಡಿದಾಡುವ ಅನುಜರ್ಯಾತಕೆ || ಲೇಸು ಹೊಲ್ಲೆಹ ನೋಡದಂಥ ಗೆಳೆಯನ್ಯಾತಕೆ | ಆಸೆಯನ್ನು ಬಿಡದ ಸನ್ಯಾಸವ್ಯಾತಕೆ 6 ತಪ್ತ ಮುದ್ರೆಯಿಲ್ಲದವನ ಜನ್ಮವ್ಯಾತಕೆ | ಗುಪ್ತದಲ್ಲಿ ನಡೆಯದಿಪ್ಪ ದಾಸನ್ಯಾತಕೆ || ಆಪ್ತಬಂಧು ವಿಜಯವಿಠ್ಠಲನ ಶ್ರೀ ಚರಣದಿ | ಕ್ಲುಪ್ತ ಮೀರದೆ ನಡೆದ ಮೇಲೆ ನರಕವ್ಯಾತಕೆ 7
--------------
ವಿಜಯದಾಸ
ಮಾಡಿ ನೀವು ಸತ್ಸಂಗ ನೋಡಿ ಘನ ಅಂತರಂಗ ಧ್ರುವ ಸಾರಿದೂರಲಿಕ್ಕೆ ವೇದ ಅರರಿವದೆನಗಗಾಧ ದಾರಿದೋರಿಕುಡು ಬೋಧ ಗುರುಪ್ರಸಾದ 1 ಬದಿಲಿರಲಿಕ್ಕೆ ಖೂನ ಇದಕ್ಯಾಕುದ್ದರಿ ಜ್ಞಾನ ಛೇದಿಸಿ ಅನುಮಾನ ಭೇದಿಸಿರೊ ಪೂರ್ಣ 2 ಹಿಡಿಯಲಿಕ್ಕೆ ಸತ್ಸಂಗ ಓಡಿಬಾವ್ಹಾ ಶ್ರೀರಂಗ ಮಾಡಿ ಭವಭಯಭಂಗ ನೋಡುವ ಕೃಪಾಂಗ3 ಎಲ್ಲಕ್ಕೆ ಶಿಖಾಮಣಿ ಸುಲಭ ಈ ಸಾಧನಿ ಸೊಲ್ಲಿಗೆ ಮುಟ್ಟಿದ ಪ್ರಾಣಿ ಬಲ್ಲವ ಸುಜ್ಞಾನಿ 4 ಪಿಡಿದು ಸತ್ಸಂಗತಿ ಕಡಿದು ಹೋಯಿತು ಭ್ರಾಂತಿ ಪಡೆದ ಸುಖ ವಿಶ್ರಾಂತಿ ಮೂಢ ಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಧವಮಧುಸೂದನೆನಿಪಪಾದಭಜನೆಯಮಾಡುವೇ ಸಾಧು ಶಿಖರನೆ ಸರ್ವತಂತ್ರನೇ ಬೋಧಿಸೆನುತಾ ಬೇಡುವೇ ಪ ವಾರಿಧಿಶಯನ ಪಾರಮಹಿಮ ಪರಾತ್ಪರ ಪಾಪವಿದೂರನೇ ಅ.ಪ ಆತೊಡರ್ಚಿತುವೋತಡಂತಿಸೂ ಭೂತಪಕ್ಷದಯಾನಿಧೆ ಭೀತಿಗೊಳಿಸದಿರೆನ್ನ ನೀನೆ ಅನಾಥರಕ್ಷ ಕೃಪಾನಿಧೇ 1 ನೀನೆ ಕಲುಷವಿಖಂಡ ನಿಶ್ಚಲ ನೀನೆ ವೇದಾಂತಾರ್ಯನೂ ಶ್ರೀನಿವಾಸದಯಾನಿಧೆ ಜಗದಾನುಭವತತ್ತೂರ್ಯನೂ 2 ದೇಶಿಕನೆ ತ್ವದ್ದಾಸನಾಡೆಯ ಆಶೆಯಳಿದೀಗೆರಿನನೂ ಪಾಶರಹಿತನ ಮಾಡೊಯೆನುತಲಿ ಪಾಡುವೆನಾ ನಿನಗೆನ್ನನೂ 3 ನಿತ್ಯಪೂರ್ಣನೆ ಸತ್ವಗುಣಮಣಿ ಚಿತ್ಸುಖಾಂಶ ಚಿದಂಬರಾ ತತ್ವಮೆನಗೆ ಪ್ರಸಾದಿಸಿದ ಶ್ರೀತುಲಶಿರಾಮ ದಿಗಂಬರಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಮಾನವ ನೀನುವಾದಿರಾಜರ ಪೂಜಿಸೋ ಪ ಶಾರ್ವರಿ ವತ್ಸರದೀ | ಜನಿಸಿ ಗೌರಿಗರ್ಭ ಸುಧಾಂಬುಧಿಲೀ ||ಪುರಬಾಹ್ಯ ಪುಟ್ಟಿದ | ಕಾರಣದಿಂದಲಿವರಯತಿ ವಾಗೀಶ | ಕರಜನೆನಿಸಿ ಮೆರೆದ 1 ವಿನುತ ಸಿರಿ ಹರಿಯ ಪೂಜಿಸಿದ 2 ವಾಲಿ ಭಂಡಾರವನೂ | ಶೋಧಿಸೆ ಅಲ್ಲಿಶೀಲ ಇನಜಾರ್ಚಿಸಿದ ||ಲೀಲ ವಿಗ್ರಹ ರಾಮ | ವಿಠಲ ಮೂರ್ತಿಗಳನ್ನಕೋಲಾಹಲದಿ ತಂದು | ಭಾಳ ಪೂಜಿಸಿದ 3 ವ್ಯಾಸರಾಜಾರ್ಚಿತನಾ | ದೇವನವೇದವ್ಯಾಸರಿಂದಲಿ ಗಳಿಸಿದಾ |ವ್ಯಾಸಮುಷ್ಠಿಕೆಯ ವಿ | ಶ್ವಾಸದಿಂದಲಿ ಪೊಂದಿಶ್ರೀಶ ಉಡುಪಿನ ಕೃಷ್ಣ | ವಾಸ ಸ್ಥಾನಕೆ ಬಂದ 4 ಕವಿಕುಲ ಸಭೆಯೊಳಗೇ | ಪೂಣೆಯ ಪುರದಿನವರಸಲಂಕಾರದೀ ||ಕವನ ರಚಿಸಿ ರುಕ್ಮಿ | ಣೀಶ ವಿಜಯ ಗ್ರಂಥಕವಿ ಕುಲೋತ್ತಂಸ | ತಾನೆನಿಸುತ್ತ ಮೆರೆದಂಥ 5 ಪಂಢರಿ ಪುರ ಮಾರ್ಗವ | ಸವೆಸುತ ಬರೆಪುಂಡು ಸೈನಿಕರ್ ಬರಲೂ ||ಪುಂಡಲೀಕಗೆ ವರದ | ಪುಂಡರೀಕಾಕ್ಷನಹಿಂಡು ಶ್ವೇತಾಶ್ವಗಳಿಂದ ವಾರಿಸಿದಾ 6 ಹರಿವಾಣ ಪೂರಣವ ||ಹಯವದನನು ಬಂದು | ಜಯ ಘೋಷದಲಿ ಮೆದ್ದುದಯ ದೃಷ್ಟಿ ತೋರಿದ | ಭಾವಿ ಮಾರುತರ 7 ಪಾದ | ಬಿಸಜವ ಕಂಡರ 8 ಬೊಮ್ಮ ರಕ್ಕಸನಾಗೀ 9 ಸಕಲ ಶಿಷ್ಯರವೆರಸಿ | ರಾಜರು ಬರೆರಕ್ಕಸ ಕರೆದ ವಾದಕ್ಕೇ ||`ಆಕಾಮವೈ` ಕೋ ನಸ್ನಾತನೆಂದೆನೆ ಅವಕಾಕು ರಂಡೆಯ ಪುತ್ರ | ತೋಕ ನೀನೆಂದ 10 ಮೇನೆ ಪಾಲಕಿ ಹೊರುವ | ನರೆಯಣ ಭೂತಯಾನ ವಾಹಕನಾದನೂ ||ಆನೆಂತು ಬಣ್ಣಿಪೆ | ಮುನಿಕುಲ ದಿನಮಣಿವೇಣುಗಾನ ಪ್ರಿಯ | ಕೃಷ್ಣ ಸೇವಕರಾ 11 ಆ ಮಹ ನೇತ್ರಾವತಿ | ಸಂಗಮವೆನ್ನಕೌಮಾರ ನದಿ ಸನಿಯದಿ ||ಈ ಮಹಾ ಮಹಿಮರು | ಸಾಸಿರ ಲಿಂಗದನೇಮದ ಪೂಜೆಗೆ | ನಿರ್ಮಿಸಿದರು ತೀರ್ಥ 12 ಪಾದ್ಯ | ಸ್ವರ್ಣ ಗರ್ಭನ ಪಿತಪೂರ್ಣಗೆ ಸುಪ್ರೀಯ | ಗಸದಳವೇನಿದು13 ಗರಳ ಮಿಶ್ರಿತ ನೈವೇದ್ಯ | ಪಾಚಕತೆರೆಹರಿಗೆ ಸಮರ್ಪಿಸಿದಾ ||ಸಿರಿಪತಿ ಕಂಠದೋಳ್ | ಕರಿಯ ವರ್ಣವ ಕಂಡುಅರಿತು ಸೇವಿಸಿದನು | ಹರಿಯ ಪ್ರಸಾದವ 14 ಸಿರಿ ಕೃಷ್ಣ | ನಂಘ್ರಿಗರ್ಪಿಸಿದ 15 ಅರಿಯು ಮುತ್ತಲು ಪುರವ | ಸೋದಾಧಿಪಮೊರೆಯ ಹೊಕ್ಕನು ರಾಜರ ||ಭರದಿ ನಾರಾಯಣ | ವರ ಭೂತನನ ಕಳುಹಿಅರಿಭಯ ವಾರಿಸಿ | ಪೊರೆದ ನಾಯಕನಾ 16 ಸೋದೆಯಲ್ಲೋರ್ವ ಶೈವ | ಬಲುಗರ್ವದಿವಾದ ಮಾಡುತಲವನೂ ||ವೇದ ಮತವ ಬಲು | ವಿಧದಿ ದೂಷಿಸಿ ಕಡುಬಾಧೆ ಪಡಿಸುತಲಿದ್ದ | ಬುಧಜನ ವೃಂದವ 17 ಭೃತ್ಯ ಭಾವದಿ | ವಿಜಯ ಪತ್ರವನಿತ್ತುನಿಜ ಬಿರುದುಗಳವರ | ಪದಕೆ ಅರ್ಪಿಸಿದ 18 ತ್ರಿವಿಕ್ರಮಾಲಯ ಸ್ಥಾಪನೆ | ರಚಿಸಿ ಮೆರೆದ ದಿವ್ಯ ಶಾಲೀವಾಹನ್ನ ||ಸಾವಿರೈನೂರ್ನಾಲ್ಕು | ಚಿತ್ರ ಭಾನುವಿನಲ್ಲಿರವಿಯು ಮೇಷಾರ್ಧದಿ | ಚರಿಸುವ ದಿನದಿ 19 ರಥದಿಮೂರ್ತಿಯ ಸೇರಿಸಿ | ಬದರಿಯಿಂದಭೂತ ನರೆಯಣ ಬರುತಿರೆ ||ಪಥದಿ ರಕ್ಕಸ ಸೆಣೆಸೆ | ಪೃಥುಕು ಆಯುಧ ಬಿಟ್ಟುರಥದ ಗಾಲಿಯಲಿಂದ | ಹತಗೈದನವನ 20 ವೇದಾರ್ಥ ಬೃಂಹಿತದ | ಬಹು ಗ್ರಂಥಗಳ್‍ಪದ ಪದ್ಯ ಸೂಳ್ಹಾದಿಯ ||ಸೋದೆ ಮಠದಿ ನಿಂದು | ವಾದಿರಾಜರು ರಚಿಸಿಬುಧರಿಗಾನಂದವ | ಮುದದಿ ಪಾಲಿಸಿದ 21 ತ್ರಿವಿಕ್ರಮ ರಥೋತ್ಸವದಿ | ಕರೆಯಲು ಬಂದದಿವಿರಾಜ ಜನರು ಕಳುಹಿ ||ಭವ್ಯ ಸು ಪಂಚ ವೃಂದಾವನಗಳ ರಚಿಸಿದಿವಿರಾಜ ಗರುಹಿದರ್ ತಮ್ಮಯ ಬರವನು 22 ಶಾರ್ವರಿ ವತ್ಸರದೀ | ಫಾಲ್ಗುಣ ವದ್ಯಮೂರನೆ ದಿವಸದಲ್ಲೀ ||ವರ ವೃಂದಾವನ ಪೊಕ್ಕು | ಗುರು ಗೋವಿಂದ ವಿಠಲನನಿರುತ ಧ್ಯಾನದೊಳಲ್ಲಿ | ವರವ ಪಾಲಿಸುತಿಹರ 23
--------------
ಗುರುಗೋವಿಂದವಿಠಲರು
ಮುಖ್ಯಬೇಕು ಗುರುಭಕ್ತಿಗೆ ತಾ ಸದ್ಭಾವನೆ ಸಪ್ರೇಮ ಸಿಕ್ಕಿ ಬಾಹ್ವ ಸಾಧಿಸಿ ತನ್ನೊಳು ಶ್ರೀಗುರುಸರ್ವೋತ್ತಮ ಧ್ರುವ ಸೋಹ್ಯ ತಿಳಿದರೆ ಸಾಧಿಸಿಬಾಹುದು ಶ್ರೀಗುರುವಿನ ಶ್ರೀಪಾದ ದೇಹ ನಾನಲ್ಲೆಂಬು ಭಾವನಿ ಬಲಿವುದು ತಾ ಸರ್ವದಾ ಗುಹ್ಯಮಾತು ಗುರುತಕೆ ಬಾಹುದು ಸದ್ಗುರು ಸುಪ್ರಸಾದ ಬೋಧ 1 ಕೀಲು ತಿಳಿದರೆ ಕಿವಿ ಸಂದಿಲ್ಯಾದೆ ಮೂಲಮಂತರದ ಖೂನ ಕೂಲವಾದರೆ ಗುರುದಯದಿಂದಲಿ ಕೇಳಿಸುವದು ಪೂರ್ಣ ಮ್ಯಾಲೆ ಮಂದಿರದೊಳು ತಾ ತುಂಬೇದ ಥಳಥಳಿಸುವ ವಿಧಾನ ಶೀಲ ಸುಪಥ ಸಾಧಿಸಿ ಸದ್ಗತಿ ಸಾಧನ 2 ಟೂಕಿ ಬ್ಯಾರ್ಯಾದೆ ಏಕೋಭಾವದಿ ಕೇಳಿರೊ ನೀವೆಲ್ಲ ಹೋಕು ಹೋಗಿ ಹುಡುಕಿದರೆ ತಾ ಎಂದಿಗೆ ತೋರುವದಲ್ಲ ಶೂನ್ಯ ಜೋಕೆಯಿಂದ ಜಾಗಿಸಿಕೊಡುವಾ ಮಹಿಪತಿಗುರು ಮಹಾಮಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ಪ ಕಟ್ಟು ಮಾಡಿದ ಯಮನು ತನ್ನ ದೂತರಿಗೆಅ ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರಸಿರಿತುಳಸಿ ವನಮಾಲೆಯಿಂದೊಪ್ಪುವವರತಿರುಮಂತ್ರ ತೀರ್ಥಪ್ರಸಾದಕೊಳಗಾದವರತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ 1 ಬಡವರಾಗಲಿ ಭಾಗ್ಯವಂತರಾಗಲಿ ಅವರುಕಡು ಕರ್ಮಿ ಘೋರಪಾತಕರಾಗಲಿನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರಗೊಡವೆ ಬೇಡೆಂದು ಯಮಧರ್ಮ ಸಾರಿದನು 2 ವಾಸುದೇವನ ವಾಸರವನಾಚರಿಸುವವರಬೇಸರಿಸದೆ ಹರಿಪ್ರಸಂಗ ಮಾಳ್ಪವರಶೇಷಶಯನ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸರಾದವರ3
--------------
ಕನಕದಾಸ
ಮುಳಬಾಗಲುರಂಗಸ್ವಾ'ುೀ ಯಮ್ಮನುಳುಹಬೇಕು ಭಕ್ತಪ್ರೇ'ುೀ ಪನಳಿತೋಳು ಕಳೆಮುಖ ತಲೆಗೆ ಕಿರೀಟವುನಳಿನಲೋಚನಮೂರ್ತಿ ಕಳೆುಂದ ಬೆಳಗುವೆಅ.ಪಅದ್ವೈತ ಶಾಸ್ತ್ರಾನುಭವರು ನಮ್ಮಅಣ್ಣಯ್ಯಸ್ವಾ'ುಯ ಸುತರೂಸಾಧ್ವೀಗುರ್ರಮಗರ್ಭಾಂಬುಧಿ ಶಶಿಯಾಗಿಸದ್ವಿಲಾಸದೊಳು ಸಂಜನಿಸಿದ ಚಲುವ 1ಕೃತ್ತಿಕಾನಕ್ಷತ್ರ ಪ್ರಥಮಾ ಪಾದತಿಥಿಯು ದ್ವಾದಶಿ 'ಭವನಾಮಾ'ತವಾದ ಧನುರ್ಮಾಸ ಸ್ಥಿರವಾರದುದಯದೊಳ್‍ಪೃಥಿ'ೀಪಥನವಾದ ಪರಮಪುರುಷಮೂರ್ತಿ 2ಸದ್ಗುಣದಾಟಿನೋಟಗಳೂ ಶಾಸ್ತ್ರ'ದ್ಯ ಸಂಯೋಗಪಾಠಗಳೂ ಸದ್‍ವೃದ್ಧಿ ಸ'ಯ ವ್ಯಾಪಾರ ವರ್ಜಿತಮಾಡಿಶುದ್ಧವೈಷ್ಣವ ತುಲಸಿರಾಮರ ಭಜಿಸುವ 3ಹರಸೀ ವಾಗೀಶಕಿರೀಟಾ ಗುರುಪರಂಪರೆ ಕಥೆನುಡಿದಾಟ ಹರುಷದಿ ಮೆಚ್ಚಿಸಿ ಧರಿಸಿ ಕಿರೀಟಾ ನಿರುಪಮ ಪರತತ್ವದೊಳಗೆ 'ಶೇಷಾ 4ಪರಕಾಲಮಠಕಾಗಾ'ುಸಿದೇ ಜನರತರುಣೋಪಾಯಗಳ ಮಾಡಿಸಿದೇತಿರುಮಂತ್ರಸಂಸ್ಕಾರ ಚರಮಾರ್ಥದೊರಕಿಸಿಪರಮಪಾವನರಾಗಿ ಮಾಡುತಲಿರುತಿಹ 5ವರಯತಿಗುರುಗಳ ಭಾಷಾ ಪೂರ್ಣಪರತತ್ವಬೋಧೆ ಗುಣಭೂಷಪರಮಾನುಭವಜ್ಞಾನ ಅರು' ಭಕ್ತರನೆಲ್ಲ ಪರಲೋಕಸಾಧನ ಅರಿವು ತೋರಿಸುವಂಥಾ 6ಚನ್ನಪಟ್ಣಾದಿರಾಮಕೋಟಿ ಅಲ್ಲಿಜನಕೆನೀ ತುಂಬಿದೆ ನಾಟಿಮುನ್ನುಮಾಡಿದ ಪಾಪವೆಲ್ಲವು ಪರಿಹಾರವುನ್ನತಮಾರ್ಗವ ತೋರಿದ ಗುರುದೇವ 7ರಾಮಕೃಷ್ಣೋತ್ಸವಗಳನೂ ಬಹುಪ್ರೇಮದಿನಡೆಸಿದಾದರನೂಆಮಹಾ ಕಾರ್ಯಕಾತುರದುರಂಧರನೂುೀಮ'ಯೊಳು ಪ್ರಖ್ಯಾತನಾಗಿಹನೂ 8ಪುರಪುರಗ್ರಾಮಗಳಲ್ಲಿ ಗುರು ತಿರುನಕ್ಷತ್ರೋತ್ಸವವಲ್ಲಿಪರಮವೈಭವದಿಂದ ಸ್ಥಿರವಾಗಿ ನಡೆಯಲುಹರುಷದಿ ಸೌಲಭ್ಯ ದೊರಿಕಿಸಿ ಇರುವಂಥಾ 9ಪ್ರತಿವರ್ಷ ಧನುರ್ಮಾಸ ಭಜನೇ ಒಳ್ಳೆಶೃತಿಮೃದಂಗವು ತಾಳರಚನೇಸತತವು ಹರಿಕಥೆ ತೀರ್ಥಪ್ರಸಾದವು'ತಕರಗುರುಸೇವಾ ದುರಂಧರಬಿರುದುಳ್ಳ 10ಭರತಪುರೀವಾಸಶ್ರೇಷ್ಟಾ ಗುರುವರತುಲಸಿರಾಮ ಪ್ರತಿಷ್ಠಾಪರಿಪರಿತತ್ಸೇವಾನಿರತ ಸಂತುಷ್ಟಾಗುರುಪಾದಸರಸಿಜ ಭೃಂಗಾವೆ ಸ್ವಷ್ಟಾ 11ಅಪರೋಕ್ಷಜ್ಞಾನ ಸಂಪೂರ್ಣ ಜನ್ಮಸಫಲಮಾರ್ಗದಲ್ಲಿ ಉತ್ತೀರ್ಣಾ ಅಪರಾಧಗಳನು ಮನ್ನಿಸಿ ಶ್ರಿತಜನರನ್ನುಸಫಲಗೊಳಿಸಿ ಜನ್ಮಸಾರ್ಥಕಪಡಿಸುವ 12ಪತಿತಪಾಮರರಿಗೆಯೆಲ್ಲಾಪ್ರತಿಫಲ'ಲ್ಲಾದುಪದೇಶ ಬಲ್ಲಾ'ತಕರವಾಗಿ ತೋರ್ಪುದು ಶಿಷ್ಯಜನಕೆಲ್ಲಾ ಸತತವು ತವಪಾದ ಗತಿಮೋಕ್ಷದಾಯಕ 13ಜ್ಞಾನಭಕ್ತಿಯು ವೈರಾಗ್ಯ ಸುಜ್ಞಾನದಿ ತುಳುಕುವ ಭಾಗ್ಯಮಾನವ ಜನ್ಮದಿ ಅವತರಿಸಿರುತಿಹದೀನರ ಮುಕ್ತಿಗೆ ಕಾರಣವಾಗಿಹ 14ಅಂಗ ದ್ವಾದಶನಾಮಧಾರಾ ಬಹುಶೃಂಗಾರತರ ಮಕುಟಾಂಬರಾರಂಗುಮಂಟಪದಿ ಲಂಘಿಸಿ ರಾಗ ಪಾಡುತ್ತಮಂಗಳಕರ ತುಲಸಿನಳಿನಾಕ್ಷಹಾರುಳ್ಳ 15ಗೃಹಮಣಿ ಸುಬ್ಬಾಂಬನವರೂ ನಿಮ್ಮಮಹದಾಂಶ ಸುಗುಣವಂತೆಯರುಸಹಚರಿಸುತ ಪುರಗ್ರಾಮ ಮಾದರಿಯಾಗಿಸಹಪತ್ನಿಸ'ತ ಭಕ್ತರನು ಪಾಲಿಸತಿರ್ಪಾ 16ದಿನಚರಿಬರುವ ದಾಸರನೂ ಮನದನುವಾರಿತಾನ್ನದಾನವನೂಮನದೊಳು ಭಕ್ತರವೊಡಲ ಪರೀಕ್ಷಿಸಿಘನವಾದ ಮೋಕ್ಷಾರ್ಹವಾದನರ ಕೈಪಿಡಿದ 17ಅಂಕಿತಮಾಡದೆ ುಹೆನೂ ಚಕ್ರಾಂಕಿತ 'ಲ್ಲದ್ಯೋಚಿಪೆನೂ ಕಿಂಕರನಾಗಿ ಬೇಡುವೆ ಪಾದವನೂಅಂಕಿತಕನುವiತಿ ಆಗಹೊಂದುವೆನೂ 18ಸೋಮೆಗೌಡನ ಪುರವಾಸಾ ರಂಗಸ್ವಾ'ುದಾಸರ ದಾಸದಾಸಪ್ರೇಮಭೈರವಗೌಡನೊಳಗೆ ತೋರಿಸಬೇಕು ಸ್ವಾ'ುನಿನ್ನಾಜ್ಞೆಗೇ ಬಾಗಿದಂಕಿತ'ದು19
--------------
ಮಳಿಗೆ ರಂಗಸ್ವಾಮಿದಾಸರು
ಮೊಸರ್ಬೇಕ್ ಮೊಸರು ಧೇಂಡಿಯ ಮೊಸರು ಪ ಕರಣೆಯೆಂದ್ಹೆಸರು ಕೇಳ್ಬೇಡಿ ಕೊಸರು ಅ.ಪ ಗೋಕುಲದಲಿ ಶ್ರೀಕೃಷ್ಣನು ತಾನೆ ಆಕಳಮಂದೆಯ ಹೊಂದಿರುತಾನೆ ಆ ಕರುಣಾನಿಧಿ ಕಳಿಸಿರುತಾನೆ ಬೇಕಾದರೆ ಬನ್ನಿ ನಾ ಇಕ್ಕುತ್ತೇನೆ 1 ಎಳಗಂದಿಯಲ್ಲವು ತಿಳಿಗಟ್ಟುವುದಿಲ್ಲ ಕೊಳೆಯಿಲ್ಲವು ಈ ಬಿಳಿಮೊಸರಿನಲಿ ತಿಳಿಯ ವೈರಾಗ್ಯ ಭಕ್ತಿಗಳುಳ್ಳ ಜನಕೆ ಗೆಳೆಯ ಶ್ರೀ ಕೃಷ್ಣನು ಕಳಸಿದನಮ್ಮ 2 ಬಿಂದು ಮಾತ್ರದಿ ನಿಜಾನಂದವ ಕೊಡುವುದು ಬಿಂದಿಗೆ ತಂಬಿಗೆ ತರಬೇಡಿರಮ್ಮ ಮಂದ ಜನರು ತಾವರಿಯರು ಇದನು ತಂದೆ ಪ್ರಸನ್ನನ ಪರಮ ಪ್ರಸಾದವ 3
--------------
ವಿದ್ಯಾಪ್ರಸನ್ನತೀರ್ಥರು