ಒಟ್ಟು 148 ಕಡೆಗಳಲ್ಲಿ , 50 ದಾಸರು , 142 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ಭಾರತೀಶ ಕಾಂತ ವಿಠಲ | ಪೊರೆಯ ಬೇಕಿವಳ |ಭೂರಿ ದೈವರ ಗಂಡ | ಮರುತಾಂತರಾತ್ಮಾ ಅ.ಪ. ಸುಕೃತ | ರಾಶಿ ಒದಗಲು ಈಗದಾಸ ಪಂಥಕೆ ಮನವ | ಆಶಿಸುತ್ತಿಹಳೋಆಶುಗತಿ ಮತ ಪೊಂದಿ | ದೋಷಗಳ ಕಳೆದಿಹಳಕೇಶವನೆ ಪೊರೆಯೆಂದು | ಲೇಸು ಬಿನ್ನವಿಪೇ 1 ಮೂರೆರಡು ಭೇದಗಳು | ತಾರತಮ್ಯವ ತಿಳುಹಿಆರು ಮೂರೂಭಕ್ತಿ | ವೈರಾಗ್ಯ ಭಾಗ್ಯಸಾರ ತತ್ವ ಜ್ಞಾನ | ದರಿವ ಇವಳಿಗೆ ಇತ್ತುಪಾರುಗೈ ಭವದ ಕೂ | ಪಾರ ಶ್ರೀ ಹರಿಯೇ 2 ಲೌಕಿಕ ಸುಸಖ್ಯ | ವೈದೀಕವೆಂದೆನಿಸುತ್ತಕಾಕು ಸಂಗವ ಕೊಡದೆ | ನೀ ಕೊಟ್ಟು ಸತ್ಸಂಗಪ್ರಾಕ್ಕು ಕರ್ಮವ ಕಳೆದು | ಸಾಕ ಬೇಕೆಂದಿವಳಮಾಕಳತ್ರನೆ ಹರಿಯೆ | ನಾಕೇಳ್ವೆ ವರವಾ 3 ಪತಿಯೆ ಪರದೈವ ವೆಂ | ಬತಿ ಶಯದ ಮನೆಯಿತ್ತುಹಿತದಿ ಹರಿ ಗುರು ಸೇವೆ | ಸತತ ಒದಗಿಸುತಗತಿಗೋತ್ರ ನೀನೆಂಬ | ಮತಿಯನೇ ಕರುಣಿಸುತಕ್ಷಿತಿಯೊಳಿವಳನು ಮೆರೆಸೊ | ಪತಿತ ಪಾವನ್ನಾ 4 ದೇವ ಹೂತಿಯ ಪೊರೆದ | ಆವ ಕಪಿಲಾತ್ಮಕನೆಭಾವದಲಿ ಮೈದೋರಿ | ನೀವೊಲಿಯಲೆಂದೂಭಾವದಲಿ ಬಿನ್ನವಿಪೆ | ಬಾವಜ್ಞ ಸಲಿಸುವುದುದೇವ ದೇವನೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಭೂತೇಶನುತ ವಿಠಲ | ಕಾಪಾಡೊ ಇವನಾ ಪ ಓತ ಪ್ರೋತನು ಆಗಿ | ದಾತನೀನಿರುವೇ ಅ.ಪ. ಪಾದ | ದಾಸ್ಯವನೆ ಕಾಂಕ್ಷಿಸುವವಾಲಿಭಂಜನ ರಾಮ | ಪಾಲಿಸೋ ಇವನಾ 1 ತೈಜಸನೆ ನೀನು ಗುರು | ರಾಜರೂಪಿಲಿ ತೋರಿನೈಜೋಪದೇಶವನು | ಪೊಂದುವುದು ಎನುತಾ |ಮಾಜದಲೆ ಪೇಳಿರಲು | ವಾಜಿವದನನೆ ನಿನ್ನಬ್ರಾಜಿಷ್ಣು ನಾಮದಲಿ | ಅಂಕನವ ಗೈದೇ 2 ದಾಸ ದಾಸರ ಗುಣಾ | ದಾಸನೆಂದೆನಿಸುತ್ತಕೇಶವನ ಗುಣನಾಮ | ಸೂಸಿಕೊಂಡಾಡಿ |ಲೇಸಾದ ಆನಂದ | ಭಾಸಿಸುತ್ತಲಿ ಗುಹಾ ವಾಸನನು ಕಾಂಬಂಥ | ಮಾರ್ಗದನು ಆಗೋ 3 ಮಧ್ವಮತ ತತ್ವಗಳು | ಬುದ್ಧಿಯಲ್ಲಿ ಸ್ಛುರಿಸುತ್ತಶುದ್ಧಭಾವದಿ ಮನನ | ಸಿದ್ಧಿಸುತಲಿವಗೇ |ಅದ್ವೈತ ತ್ರಯಜ್ಞಾನ | ಶ್ರದ್ಧೆ ಭಕ್ತಿಯ ಉದಿಸೆಮಧ್ವರಮಣನೆ ಹರಿಯೆ | ಉದ್ಧಾರ ಮಾಡೋ4 ಸರ್ವಜ್ಞಾ ಸರ್ವೇಶ | ಸರ್ವಾಂತರಾತ್ಮಕನೆದರ್ಪಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೇ |ದುರ್ವಿ ಭಾವ್ಯನೆ ಗುರು | ಗೋವಿಂದ ವಿಠ್ಠಲನೆಅವ್ಯಾಜ ಕರುಣನಿಧಿ | ಭಿನ್ನಪವ ಸಲಿಸೋ5
--------------
ಗುರುಗೋವಿಂದವಿಠಲರು
ಮಂಗಳ ವೇಣು ಗೋಪಾಲಾ ಸಿರಿಲೋಲ ಗಜಪಾಲಾ ಗಜಪಾಲಾ ಶುಭಲೀಲಾ ಪ ಅಂಗುಟಾಗ್ರದಿಂ ಗಂಗೆಯ ಪಡೆದಿಹ ಮಂಗಳ ಚರಿತ ಶುಭಾಂಗ ಶ್ರೀ ರಂಗ ದಯಪಾಂಗ ದಯಪಾಂಗ ನೀಲಾಂಗ 1 ನವನೀತ ಚೋರ ವೃಂದಾವನ ಸುವಿಹಾರ ಭವದೂರ ಸುಕುಮಾರಸುಕುಮಾರ ಶರೀರ2 ಧರೆಯೊಳು ಮೆರೆಯುವ ಸಿರಿಕಾರ್ಪರ ನರಹರಿ ರೂಪನೆ ಪೊರೆಯೆನ್ನ ಅಘ ಹರಣ ತವಚರಣ ತವಚರಣಕೆರಗುವನ 3
--------------
ಕಾರ್ಪರ ನರಹರಿದಾಸರು
ಮಂದರೊದ್ಧಾರ ಮುಚುಕುಂದವರದ ಮುಕುಂದ ಇಂದಿರಾನಂದ ಗೋವಿಂದ ವರದ ಕಂದನತಿ ದೈನ್ಯದಿಂ ತಂದೆ ಬಾರೆನ್ನಲಾ ನಂದದಿಂ ಭದಿಂ ಬಂದೆ ಭರದಿಂ ನಂದಾತ್ಮ ಸಂಜಾತನೆಂದೆನಿಸಿ ನಲವಿನಿಂ ಬೃಂದಾವನದಿ ನಿಂದೆ ವರದನೆಂದೆ ನಂದಮಂ ಕೃಪೆಗೆಯ್ದುದರರೆ ಪಿರಿದು ಅಚ್ಚುತಾನಂತ ಚಿದ್ರೂಪ ವಿಭವ ಪಚ್ಚಕರ್ಪೂರದಿಂ ಮಿಳಿತವಾಗಿ ಪೆರ್ಚೆ ಪರಿಮಳ ವೀಳ್ವಮಿದನುಕೊಂಡು ಮೆಚ್ಚಿ ಪೊರೆಯೆನ್ನ ಶೇಷಾದ್ರಿರನ್ನ
--------------
ನಂಜನಗೂಡು ತಿರುಮಲಾಂಬಾ
ಮಧ್ವವರದಾ ಕೃಷ್ಣಾ ವಿಠಲ ಪೊರೆಯಿವಳ ಪ ಅಧ್ವರೇಡ್ಯನೆ | ದೇವ ಕಾರುಣ್ಯ ಮೂರ್ತೇ ಅ.ಪ. ಸುಸ್ತೇಶ ಸೂಚಿಸಿದ ಕ್ಲುಪ್ತಿಯನ್ನನುಸರಿಸಿಇತ್ತಿಹೆನು ಉಪದೇಶ ಚಿತ್ತಜನಪಿತನೆಅರ್ಥಿಯಲಿ ಮನ್ನಿಸುತ ಚಿತ್ತೈಸು ಬಿನ್ನಪವಕೃತ್ತಿವಾಸನ ತಾತ ಸ್ತುತ್ಯ ಸರ್ವೇಶ 1 ಸನ್ನುತ ಚರಣ ಸೀಮೆ ಮೀರಿದ ಮಹಿಮಭಾಮಿನಿಯ ಪೊರೆಯೆಂದು ಪ್ರಾರ್ಥಿಸುವೆ ಹರಿಯೇ2 ತರತಮದ ಸುಜ್ಞಾನ ಎರಡು ಮೂರ್ಭೇದಗಳುಅರಿವನೇ ಇತ್ತಿವಳ ಪೊರೆವುದೈ ಹರಿಯೆಮರುತ ಮತದಲ್ಲಿಹಳ ನಿರುತ ಕಾಯಲಿ ಬೇಕುಕರಿವರದ ಧೃವವರದ ತರಳೆಹಲ್ಯಯ ವರದ 3 ಪತಿಸೇವೆ ಹಿತದಿಂದ ಕೃತನಾಗಿಯಿವಳಿಂದಗತಿಗೆ ಸಾಧನವೆನಿಸೋ ಮರುತಾಂತರಾತ್ಮಹಿತ ವಹಿತವೆರಡರಲಿ ರತಿ ಸಮತೆ ಪ್ರದನಾಗಿಕೃತ ಕೃತ್ಯಳೆಂದೆನಿಸೊ | ಕೃತಿರಮಣದೇವ 4 ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರಜೀವ ಜಡರೂ ದೇವರಾಧೀನ ವೆಂಬಭಾವನೆ ತಿಳಿಸು ಗುರುಗೋವಿಂದ ವಿಠಲಯ್ಯಸಾವಧಾನದಿಯಿವಳ ಕೈಯನೇ ಪಿಡಿಯೋ 5
--------------
ಗುರುಗೋವಿಂದವಿಠಲರು
ಮನವ ಶೋಧಿಸದೆಲೆ ಡಂಭದಿ ದಿನದಿನದಲಿ ಕರ್ಮಮಾಡೆ ತನುವಿಗೆ ಬಲು ಕ್ಲೇಶವಲ್ಲದೆ ಅನುಕೂಲವೇನು ಪ ಕಾಮಕ್ರೋಧ ಲೋಭಮೋಹ ಮದ ಮತ್ಸರಗಳನು ಬಿಡದೆ ನಾಮಗಳನು ಬಳೆದು ಮರೆದರೆ ಶ್ರೀ ರಾಮನರಿಯನೆ 1 ಈಶ ಸೇವೆಗೆಂದು ಬಹಳ ಮೋಸದಿಂದ ಧನವ ಗಳಿಸಿ ಈಶನನ್ನು ಮರೆವ ನರನನು ಜಗದೀಶನರಿಯನೆ 2 ಪರಸತಿಯರ ಸರಸಗಳಿಗೆ ಜರಿದು ಮನವ ಮರುಳು ಮಾಡೆ ಸರಳತನದಿ ದಾನ ಮಾಡಲು ನರಹರಿಯು ಅರಿಯನೆ3 ಒಡಲು ಪೊರೆಯೆ ಸಡಗರದಲಿ ಮಡಿ ಮಡಿಯೆಂದು ನುಡಿವ ಮೂಢನ ಪೊಡವೀಶನರಿಯನೆ4 ಪನ್ನಗಾರಿವಾಹನ ಪ್ರಸನ್ನವದನ ಕೃಷ್ಣಮೂರ್ತಿಯ ಉನ್ನತ ಮಹಿಮೆಗಳನರಿತಗೆ ಇನ್ನೇನು ಬೇಕು 5
--------------
ವಿದ್ಯಾಪ್ರಸನ್ನತೀರ್ಥರು
ಮನುವಂಶ ಜಲಧಿಜಾತೆ ಸೀತೆ ಪೊರೆಯೆ ಜಾನಕಿ ಘನ ಪುಣ್ಯವಿನಯೆ ದಿವ್ಯರೂಪೆ ಜನನಿ ಭಾಮಿನಿ ಪ ರಾಮಚಂದ್ರ ಭಾಸಮಾನ ಹೃದಯ ಕುವಲಯೆ ಕಾಮದಗ್ಧ ದನುಜನಯನ ಕಾಲರೂಪಿಣಿ 1 ಲಕ್ಷ್ಮಣಾದಿ ಭಕ್ತಪಾಲೆ ನಿತ್ಯರೂಪಿಣಿ ಚಿತ್ತದಲ್ಲಿ ನೆಲಸು ದೇವಿ ತತ್ವಭೂಷಿಣೆ 2 ಆದಿಶಕ್ತಿ ಭೇದರಹಿತೆ ಮೋದದಾಯಕಿ ಮಾಧವಾಂಘ್ರಿ ಯುಗಳ ಸೇವೆಯನ್ನು ಕರುಣಿಸು 3 ಭೂಮಿತನಯೆ ಭೂಮ ಮಹಿಮೆ ಕಾಮಿನೀ ರಮೆ ಸಾಮಜಾಕರೋರು ಯುಗಳೆ ರಾಮ ಸುಂದರಿ4 ಪಂಕಜಾದಿ ಕುಸುಮಲೋಲೆ ಶಂಕರೀಪ್ರಿಯೆ ಅಂಕದಲ್ಲಿ ಪೊರೆಯೆ ಮಾತೆ ಪಂಕಜಾನನೆÀ 5
--------------
ಬೇಟೆರಾಯ ದೀಕ್ಷಿತರು
ಮಾತೆ ದಾತೆ ಹಿತೆ| ಘನ ಸುಚರಿತೆ| ಮಾತೆ ದಾತೆ ಹಿತೆ ಪ ಮಾತೆ ಸದ್ಗುಣ ಭರಿತೆ ಘನ ವಿ| ಖ್ಯಾತೆ ಭುವನ ವಿರಾಜಿತೆ|| ದಾತೆ ದೀನಾನಾಥ ಜನಸಂ|ಪ್ರೀತಿಯುತೆ ಪರಿಪೋಷಿತೆಅ.ಪ ಕರವ ಜೋಡಿಸಿ| ವಿನಯದಿಂದಲಿ ಬೇಡುವ|| ಅಖಿಳ ಸಂಪದವೀಯುತ 1 ಪಾದ ಸೇವೆಯ ಗೈಯುವೆ|| ಆದರಿಸಿ ಪೊರೆಯೆನ್ನ ಸರ್ವಪ| ರಾಧಗಳನು ಕ್ಷಮಿಸುತ 2 ಜನನಿ ನೀನತಿಕರುಣೆಯಿಂದಲಿ| ಸುರರಿಗಭಯವನೀಯುತ|| ದುರುಳ ದೈತ್ಯನ ವಧಿಸಿ ನಂದಿನಿ| ನದಿಯ ಮಧ್ಯದಿ ನೆಲೆಸಿದ3 ಪಂಕಜಾಂಬಕಿ ಪರಮಪಾವನೆ| ಶಂಕರಿ ಸರ್ವೇಶ್ವರಿ|| ವೆಂಕಟಾಚಲನಿಲಯ ಶ್ರೀವರ| ವೆಂಕಟೇಶನ ಸೋದರಿ4
--------------
ವೆಂಕಟ್‍ರಾವ್
ಮಾನವ ನಿನಗೆ ಪ ನಿರತಂ ಹರಿಪಾದ ಭಜನೆ ಅ.ಪ ಸುಜನಂಗಳ ಸಂಗದಲೀ | ಬೆರೆಯುತಲಿ ಗಜರಾಜರಕ್ಷಕನೇ ಹರಿ ಪೊರೆಯೆಂಬುವುದು 1 ಗುರುವಾಕ್ಯವನು ನಂಬಿ ವರಭಕ್ತಿಯಿಂ ರೋಮಾಂಚನದಿ ಕುಣಿದಾಡುವದು 2 ಹೇಮಭೂಮಿ ಕಾಮಿನೀಯರನು | ಕೋರದಲೇ ತಾ ಕ್ಷೇಮಿಯಾಗುತ್ತಾ ಗುರು- ರಾಮವಿಠಲನೇ ದೊರೆ ನಮಗೆಂಬುವದು 3
--------------
ಗುರುರಾಮವಿಠಲ
ಯಕ್ಷಿಣೀ ಸರ್ವಲಕ್ಷ್ಮಿಣೀ ರಕ್ಷಿಸು ಮಗನ ಅಪೇಕ್ಷವ ಪೂರೈಸಿ ಪ ಕಂಟಕ ಸಕಲಪೂರ್ಣ ಕರುಣವಿಟ್ಟು ಮಾಡು ಸಫಲ ತ್ರಾಣಿ ಕರುಣದಿ ಬಡತನವಖಿಲ ಜಾಣೆ ಪರಿಹರಿಸಿ ಕೊಡು ಎನಗೆ ಸುಫಲನ ಆಹ ಮೊರೆಯಿಟ್ಟು ಬೇಡುವೆ ಪರಮಪಾವನೆ ಎನ್ನ ಇರವ ತೀರಿಸು ತಾಯಿ ಸರುವ ಸಿದ್ಧಾಂತಳೆ 1 ಮನುಮುನಿಗಳಿಗಾದಿ ಒಲುಮೆ ನೀನು ಘನ ಸಿದ್ಧಿನಿತ್ತು ಸದ್ಧರ್ಮಿ ಜಾಣ ರೆನಿಸಿದಿ ದಯದಿ ಸುಪ್ರೇಮಿ ಮಾಣ ದನುಪಮಮತಿ ನಿಜಮಹಿಮೆ ಆಹ ವನರುಹ ಬ್ರಹ್ಮಾಂಡ ಘನ ಘನ ಎನುವಂಥ ಅನುಪಮಪದದೆನ್ನ ಕನಿಕರದಿಂ ಕಾಯೆ 2 ಸರುವ ಸಿಧ್ದಿಯ ನೀಡಿ ಕರುಣಿ ಎನ್ನ ಸರುವ ಶುದ್ಧವೆನಿಸೆ ಜನನೀ ಪೂರ್ಣೆ ಸರ್ವಜ್ಞೆ ಪಾಲಿಸೆ ನಿಪುಣೆ ವಾಣಿ ಸರ್ವಮಂಗಲಿ ಸುಪ್ರವೀಣೆ ಆಹ ಸರ್ವಶಕ್ತ ಜಗದಾರ್ಯ ಶ್ರೀರಾಮನ ಭಾರ್ಯೆ ಸಕಲ ಐಶ್ಚರ್ಯದಿಂ ಪೊರೆಯೆನ್ನ 3
--------------
ರಾಮದಾಸರು
ಯತಿಗಳ ಸ್ತುತಿ ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ಪ. ಸದ್ಗುರುವೆ ನಿನ್ನ ಪದ್ಮಪಾದಗಳಿಗೆ ಕರ ಮಣಿ ಅ.ಪ. ವರಕಲ್ಪ ಕಲ್ಪದಲಿ ಹರಿಯ ಮೆಚ್ಚಿಸಿ ಸಿರಿವರನಲಿ ಜನಿಸಿ ವಾಯುವೆಂದೆನಿಸಿ ಸುರರೆಲ್ಲ ಮೊರೆಯಿಡೆ ಹರಿಯವತರಿಸಿ ಹರಿಯ ಸೇವೆಗೆ ನೀ ಮಾರುತಿ ಎನಿಸಿ ಶರಧಿ ಲಂಘಿಸಿ ಉಂಗುರ ಸೀತೆಗೆ ಇತ್ತು ದುರುಳನ ಪುರ ಸುರಮುಖನಿಗರ್ಪಿಸಿದೆ 1 ಚಂದ್ರವಂಶದಲಿ ಬಂದ್ಯೊ ಬಲಶಾಲಿ ನಂದಕಂದನ ಲೀಲೆ ಅಂದ ಪಾಡುತಲಿ ಬಂದಿತು ಕಲಹ ಅಲ್ಲಿ ದ್ವಂದ್ವ ಭಾಗದಲಿ ಅಂದು ಕೌರವರಲಿ ನಿಂದ್ಯೊ ದ್ವೇಷದಲಿ ಇಂದುಮುಖಿಗೆ ಸೌಗಂಧಿಕ ಇತ್ತು ಕುರು ನಂದನ ವಂಶವನಂದು ಛೇದಿಸಿದೆ 2 ದುರುಳರೆಲ್ಲರು ಬಂದು ಕಲಿಯುಗದಿ ನಿಂದು ಹರಿಯು ನರನು ಒಂದು ಅರುಹಲಿಂತೆಂದು ಸುರರೆಲ್ಲ ಬಲುನೊಂದು ಕ್ಷೀರಾಬ್ಧಿಗೆ ಬಂದು ಸಿರಿವರ ಪೊರೆಯೆಂದು ಮೊರೆಯಿಡಲಂದು ಹರಿ ನಿನಗರುಹಲು ಧರೆಯಲ್ಲಿಗೆ ಬಂದು ಸುರ ಭೂ ಶ್ರೇಷ್ಠನುದರದಲಿ ಜನಿಸಿದೆ 3 ಪರಮಾಯಿಗಳ ಮತ ತರಿದು ಕೆಡಹುತ್ತ ಹರಿ ಸರ್ವೋತ್ತಮೆನುತ ಧರೆಯೊಳ್ ಸಾರುತ್ತ ತರತಮ್ಯ ಸತ್ಯವೆನುತ ಪಂಚಭೇದೆನುತ ಸಿರಿರಮಣಗೆ ನರಭೃತ್ಯನೆನ್ನುತ್ತ ಪರಿ ಬೋಧಿüಸಿ ದುರುಳರ ಛೇಡಿಸಿ ಸರಸಿಜಾಕ್ಷಗೆ ಬಲು ಸಮ್ಮತನೆನಿಸಿ 4 ವೈಷ್ಣವಾಗ್ರಣೀ ಲೀಲೆ ಪೇಳಲಳವಲ್ಲ ಜಿಷ್ಣುಸಖನ ಲೀಲೆ ನುಡಿಸೆನಗೆ ಸೊಲ್ಲ ಕಷ್ಟಪಡುತಿಹೆನಲ್ಲ ಕರುಣವೇಕಿಲ್ಲ ಶ್ರೇಷ್ಠನೆ ಗೋಪಾಲಕೃಷ್ಣವಿಠಲ ಇಷ್ಟು ತಿಳಿಸುತ ಅಷ್ಟದಳದಲಿ ಶ್ರೇಷ್ಠದಿ ಪೂಜಿಪ ಗುಟ್ಟು ತೋರೆನಗೆ 5
--------------
ಅಂಬಾಬಾಯಿ
ರಾಘವೇಂದ್ರ ವಿಠಲ | ಪೊರೆಯ ಬೇಕಿವನ ಪ ಯೋಗಿಯನೆಗೈಯುತ್ತ | ಯೋಗಮಾರ್ಗದಲಿ ಅ.ಪ. ಪತಿ ಪ್ರಿಯನೇ 1 ಉತ್ತಮ ಸುಸಂಸ್ಕತಿಯ | ಪೊತ್ತು ಶ್ರಮಿಸುತ್ತಿಹಗೆಭಕ್ತಿ ಜ್ಞಾನಗಳನ್ನೆ | ಇತ್ತಿವನ ಸಲಹೋ |ಕರ್ತ ನೀನೆಂಬಮತಿ | ವ್ಯಕ್ತಿಗೈ ಇವನಲ್ಲಿಭಕ್ತಪರಿಪಾಲಕನೆ | ಅವ್ಯಕ್ತಮಹಿಮಾ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಭರ್ಮಗರ್ಭನ ಪಿತನೆ | ಪೇರ್ಮೆಯಲಿ ಪೊರೆಯೋಕರ್ಮಗಳ ಮಾಳ್ಪಲ್ಲಿ | ನಿರ್ಮಮತೆ ನೀಡಯ್ಯನಿರ್ಮಲಾತ್ಮನೆ ಹರಿಯೆ | ಧರ್ಮಗಳ ಗೋಪ್ತಾ 3 ಸಾರ | ಉಣಿಸಿವಗೆ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವವ್ಯಾಪ್ತನೆ ದೇವಸರ್ವ ಪ್ರೇರಕ ಹರಿಯೆ | ಸರ್ವಾಂತರಾತ್ಮಾದುರ್ನಿಭಾವ್ಯನೆ ಗುರು | ಗೋವಿಂದ ವಿಠಲನೆದರ್ವಿ ಜೀವಿಯ ಪೊರೆಯೆ | ಬಿನ್ನವಿಪೆ ಹರಿಯೇ 5
--------------
ಗುರುಗೋವಿಂದವಿಠಲರು
ರಾಜಮುಖೀ ಬೇಗ ಪ. ಚಿತ್ರವಿಚಿತ್ರಮಾಗಿ ಮೆರೆವ ರತ್ನಖಚಿತ ಮಂಟಪದಿ ಕೆತ್ತನೆಯ ಹಸೆಯಮೇಲೆ ರತ್ನಗಂಬಳಿಯ ಹಾಸಿ 1 ಪರಿಪರಿಯ ರಾಗದಿಂದ ತರುಣಿಯರು ನಿನ್ನ ಪಾಡಿ ಕರೆಯುತಿಹರೋಳ್ ಕರುಣೆಯಿರಿಸಿ ಅರಸನೊಡನೆ ಸರಸದಿಂದ2 ಪಂಕಜಾಕ್ಷಿ ನಿನ್ನ ಚರಣಕಿಂಕರರ ಮೊರೆಯ ಕೇಳಿ ಕನಕಪೀಠದಲ್ಲಿ ಕುಳಿತು ಕಾಂಕ್ಷಿತಾರ್ಥವಿತ್ತು ಸಲಹು 3 ಪರಮಪುರುಷ ಶೇಷಶೈಲವರದನರಸಿ ನಿನ್ನ ಗುಣವೆ ಸ್ಮರಿಸಿ ಸ್ಮರಿಸಿ ಕರೆಯುತಿರುವ ತರಳೆಯರಂ ಪೊರೆಯೆ ತಾಯೆ4
--------------
ನಂಜನಗೂಡು ತಿರುಮಲಾಂಬಾ
ರುದ್ರದೇವರು ಗಂಗಾಧರ ಮಹಾದೇವ ಶಂಭೊಶಂಕರ ಪ. ಗಂಗಾಧರಾ ನಿನ್ನ ನಂಬಿದ ಭಕ್ತರಘ ದ್ಹಂಬ ಕಡಿದು ಹರಿ ಇಂಬ ತೋರೆ ಜಗ ಕಂಬಾರಮಣ ನಿನ್ನ ಸಂಭ್ರಮದಿ ಸ್ತುತಿಪೆ ಅ.ಪ. ಚಾರು ಚರ್ಮಾಂಬರ ಧೀರ ಧರಿಶಿ ಮೆರೆವ ಚಾರು ಭೂತಗಣ ಸಂಚಾರ ಭಸ್ಮಧರಾ ಹಾರ ಕೇಯೂರ ಮಧ್ಯ ಥೋರ ಸರ್ಪ ಭೂಷ ನಿನ್ನ ಚಾರು ರೂಪ ವರ್ಣಿಸಲಳವೆ ಸಾರಸಾಕ್ಷ ಪಾರ್ವತಿಪ್ರಿಯ ಕರುಣಾಕರಸ ದೊರಕದೆ ಶ್ರೀರಮಣನು ಸಿಗ ಕೋರೆ ಹರಿಯ ನಿನ್ನ ಪಾದಪಂಕಜ ಹಾರೈಸುವೆ ಸಂಸಾರ ಶರಧಿಂ 1 ಪರಮಪುರುಷ ಶ್ರೀ ರಾಮನ ತಾರಕ ವರಮಂತ್ರ ಜಪಿಸುವ ವರ ಪಾರ್ವತಿಗರುಹಿ ಧರೆಯೊಳು ಮನುಜರ ವರಮನ ಪರಿಪರಿ ಬೇಡುವೆ ಹರಿಸ್ಮರಣೇಯ ಎನಗೀಯೋ ಕರುಣದಿ ಮಾರ್ಕಂಡೇಯಗೆ ವರವಿತ್ತು ಚಿರಂಜೀವತ್ವವ ಪರಿಪಾಲಿಸಿದಂತೆ ಪರಿಪರಿ ಭಕ್ತರ ಪೊರೆದಂತೆ ಪೊರೆಯೆನ್ನ ಪರಿ ಇತ್ತು 2 ಪಾಶಾಂಕುರಧರ ಪರಮಪವಿತ್ರನೆ ಈಶ ಭಕ್ತರ ಭವಪಾಶದಿಂದುದ್ಧರಿಪೆ ಶ್ರೀಶ ಶ್ರೀ ಶ್ರೀನಿವಾಸನಾಸಕ್ತಿಯಲಿ ಭಜಿಪ ದೋಷರಹಿತ ಮನ ಭಾಸಿ ಪಂಥದಿ ಈವೆ ಕಾಶೀಶ್ವರ ನಿನ್ನ ಲೇಸು ಭಕ್ತಿಲಿ ಸ್ತುತಿಪಾ ದಾಸ ಸಂಗದೊಳಿರಲು ಲೇಸು ಮನವ ಕೊಡು ವಾಸುಕಿಶಯನ ಸುತನ ಸುತನೆ ನಿನ್ನ ಏಸು ದಿನದಿ ಸ್ತುತಿಸುತ ಹಾರೈಸುವೆ 3
--------------
ಸರಸ್ವತಿ ಬಾಯಿ