ಒಟ್ಟು 318 ಕಡೆಗಳಲ್ಲಿ , 64 ದಾಸರು , 291 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಲೇನು ಪುಣ್ಯವ ಮಾಡಿ ರಂಗನ ಬಳಿಗೆ ಬಂದಿತೇ ಪ ನಳಿನ ನೇತ್ರೆಯರ ಮನಸು ಎಲ್ಲಾ ಸೆಳೆದು ಪೋದೀತೇ ಅ.ಪ. ವನಜನಾಭನು ಯಮುನೆಯಲ್ಲಿ ಕೊಳಲನೂದುವಮನಸು ನಿಲ್ಲದ ನಡೀರೆ ಪೋಗೋಣ ಕೇಳಿ ನಾದವ 1 ಇಂದು ಗೋವುಗಳ 2 ಎಂಥ ರಾಗ ಮಾಡುವೋನು ಕಂತುಪಿತನುಅಂತರಂಗಕೆ ಸುಖವನಿತ್ತು ಭ್ರಾಂತಿಗೊಳಿಸುವ 3 ಕುಂಡಲ ಹಾರಪದಕ ಧರಿಸಿ ಕುಳಿತಿಹಸರಸಿಜಾಕ್ಷಿಯರೆ ನೋಳ್ಪ ಜನಕೆ ಹರುಷ ಕೊಡುತಿಹ 4 ಸಿರಿಯು ಬಂದು ಮುರಳಿಯಾಗಿ ಮರುಳು ಮಾಡುವನೆಪರರಿಗಿಂಥ ಸುಖವುಂಟೆಂದು ಭ್ರಾಂತಿಗೊಳಿಸುವನೆ ] 5 ಇಂದು ನಮ್ಮೊಳು ಸರಸವಾಡುವನೆ 6
--------------
ಇಂದಿರೇಶರು
ಕೋಲ ಕೋಲೆನ್ನ ಕೋಲ ಕೃಷ್ಣ ನೀಮದನಗೋಪಾಲನಾಗಿಮೆರೆದಿಯಲೊ ಕೃಷ್ಣ ಪ. ಅಂಬರ ತಕ್ಕ ಸುರುಳಿಯ ಮುಂಡಾಸಮುರಿಗಿಯವಂಕಿ ನಡುವಿಟ್ಟುಮುರಿಗಿಯವಂಕಿ ನಡುವಿಟ್ಟು ರುಕ್ಮಿಣಿಯವರಪುತ್ರ ಪ್ರದ್ಯುಮ್ನಗೆ ಉಡುಗೊರೆ1 ಮುತ್ತಿನಾಭರಣ ಹೆಚ್ಚಿನ್ಹೆಚ್ಚಿನ ಜವಳಿಮತ್ತೆ ಕೃಷ್ಣಯ್ಯನ ಸಭೆಯೊಳು ಮತ್ತೆ ಕೃಷ್ಣಯ್ಯನ ಸಭೆಯೊಳು ಇಟ್ಟೆವಪಾರ್ಥನು ಕೊಟ್ಟ ಉಡುಗೊರೆ 2 ಬೆಳಕಿನಂತೊಪ್ಪುವ ಥಳಥಳಿಸುವ ಜವಳಿ ನಳಿನಾಕ್ಷಿಯರು ಕುಳಿತ ಸಭೆಯಾಳು ನಳಿನಾಕ್ಷಿಯರು ಕುಳಿತ ಸಭೆಯಾಳಗೆ ಇಟ್ಟೆವಕುಳಿತ ಜನಕೆಲ್ಲ ಉಡುಗೊರೆ 3 ಅಂದವಾದ ಬಲು ಚಂದ ಚಂದದ ಜವಳಿ ತಂದೆ ಕೃಷ್ಣಯ್ಯನ ಸಭೆಯೊಳು ತಂದೆ ಕೃಷ್ಣಯ್ಯನ ಸಭೆಯೊಳಗೆ ಇಟ್ಟೆವಬಂದ ಜನಕೆಲ್ಲ ಉಡುಗೊರೆ 4 ಸಾಸಿವೆ ಬಣ್ಣದ ಸೀರೆ ಕುಸುಬೆ ಬಣ್ಣದ ಕುಪ್ಪುಸ ಲೇಸಾದ ಅಡಿಕೆ ನಡುವಿಟ್ಟುಲೇಸಾದ ಅಡಿಕೆ ನಡುವಿಟ್ಟು ರುಕ್ಮಿಣಿಯದಾಸಿಯರಿಗೆಲ್ಲ ಉಡುಗೊರೆ 5 ಹತ್ತೆಂಟು ಸಾವಿರ ಸುತ್ತುವ ಮುಂಡಾಸ ಮತ್ತ ಬೆಟ್ಟಡಕಿ ನಡುವಿಟ್ಟುಮತ್ತ ಬೆಟ್ಟಡಕಿ ನಡುವಿಟ್ಟು ರಂಗಯ್ಯನ ಭೃತ್ಯರಿಗೆಲ್ಲ ಉಡುಗೊರೆ6 ಸುಳಿಬಳ್ಳಿಯಂತೊಪ್ಪುವ ಬಿಳಿ ಚೀಟಿನ ಜೂಲು ಎಳೆ ಮಾವುಗಳ ನಡುವಿಟ್ಟುಎಳೆ ಮಾವುಗಳ ನಡುವಿಟ್ಟು ರಂಗಯ್ಯನ ಗಿಳಿಗಳಿಗೆಲ್ಲ ಉಡುಗೊರೆ 7 ಅಕ್ಕರದಿಂದ ಹೊಸ ಚಿಕ್ಕ ಚೀಟಿನ ಜೂಲುತಕ್ಕ ಕುಲಾಯಿ ಮುರುವಿಟ್ಟುತಕ್ಕ ಕುಲಾಯಿ ಮುರುವಿಟ್ಟು ರುಕ್ಮಿಣಿಯ ಬೆಕ್ಕಿಗೆ ಕೊಟ್ಟ ಉಡುಗೊರೆ 8 ಅಷ್ಟೂರಿಗೆ ಉಡುಗೊರೆ ತಕ್ಕಷ್ಟು ಕೊಟ್ಟೆವಕೃಷ್ಣಯ್ಯನ ಮನಕೆ ಬರಲಿಲ್ಲಕೃಷ್ಣಯ್ಯನ ಮನಕೆ ಬರಲಿಲ್ಲ ಕುಬ್ಚಿಎಂಬೊ ಸೊಟ್ಟ ಸ್ತ್ರೀಯಳ ಕರೆಸಿಲ್ಲ9 ಎಲ್ಲರಿಗುಡಗೊರೆ ಬಲ್ಲಷ್ಟು ಕೊಟ್ಟೆವಚಲುವನ ಮನಕೆ ಬರಲಿಲ್ಲಚಲುವನ ಮನಕೆ ಬರಲಿಲ್ಲ ಗೋಕುಲದಗೊಲ್ಲ ನಾರಿಯರ ಕರೆಸಿಲ್ಲ10 ತರಹ ತರಹದ ಜವಳಿ ದುಂಡು ಮುತ್ತಿನ ಪದಕಪೆಂಡಿ ಸರಗಳ ನಡುವಿಟ್ಟುಪೆಂಡಿ ಸರಗಳ ನಡುವಿಟ್ಟು ರಾಮೇಶನಿನ್ನ ಪಂಡಿತರಿಗೆಲ್ಲ ಉಡುಗೊರೆ 11
--------------
ಗಲಗಲಿಅವ್ವನವರು
ಕೋಲೆಂದು ಪಾಡಿರೆ ಕೋಮಲೆಯರೆಲ್ಲ ಅಮ್ಮಯ್ಯಬಾಲೆಯರು ಅರಿಷಿಣ ಕುಂಕುಮ ಹಚ್ಚಿಹೊಯಿದಾರಮ್ಮಯ್ಯ ಕೋಲ ಹೊಯಿದಾರಮ್ಮಯ್ಯ ಪ. ಹಿಂಡು ನಾರಿಯರೆಲ್ಲ ಕೂಡಿ ದುಂಡು ಗಟ್ಟುತ ಕೊಂಡಾಡಿ ಕೃಷ್ಣನ ಕೋ¯ ಹೊಯಿದಾರಮ್ಮಯ್ಯ 1 ಹಸ್ತ ಕಡಗ ಹರಡಿ ದೋರೆ ಹವಳ ಕಂಕಣಹಸ್ತಿಗಮನೆಯರು ಎತ್ತಿ ಕೋಲ ಹೊಯಿದಾರಮ್ಮಯ್ಯ 2 ವಾಲೆ ಮೂಗುತಿ ಮುದ್ದು ಸುರಿಯುತ್ತಜತ್ತಾಗಿ ಜಾಣೆಯರು ಕೋಲ ಹೊಯಿದಾರಮ್ಮಯ್ಯ 3 ನಳಿನ ಮುಖಿಯರಿಟ್ಟ ಕೋಲ ಹೊಯಿದಾರಮ್ಮಯ್ಯ 4 ಮಲ್ಲಿಗೆ ಸಂಪಿಗೆ ಮುಡಿದ ನಲ್ಲೆಯರೆಲ್ಲರುನಮ್ಮ ಫುಲ್ಲನಾಭನ ಪಾಡಿ ಕೋಲ ಹೊಯಿದಾರಮ್ಮಯ್ಯ5 ಚವರಿ ರಾಗಟೆ ಚಲ್ವಗೊಂಡ್ಯ ಛಂದಾಗಿ ಒಪ್ಪುತಚದುರೆಯರು ಛಂದಾಗಿ ಕೋಲ ಹೊಯಿದಾರಮ್ಮಯ್ಯ 6 ಭಾರ ಧರಿಸುತ ರಘುವೀರನ ಕೊಂಡಾಡಿ ಕೋಲ ಹೊಯಿದಾರಮ್ಮಯ್ಯ 7 ನಡುವಿಗೆ ಒಡ್ಯಾಣವಿಟ್ಟು ನಾರಿಯರೆಲ್ಲರು ತಮ್ಮ ಬಡನಡಬಳುಕುತ ಕೋಲ ಹೊಯಿದಾರಮ್ಮಯ್ಯ8 ಉಟ್ಟ ಪೀತಾಂಬರ ಕಾಲಿಗಿಟ್ಟ ಗೆಜ್ಜೆಯುನಮ್ಮ ಧಿಟ್ಟರಮಿಅರಸನೆಂದು ಕೋಲ ಹೊಯಿದಾರಮ್ಮಯ್ಯ9
--------------
ಗಲಗಲಿಅವ್ವನವರು
ಗಂಧವಾಹನ ಮತವ ಪೊಂದವರು ಹಂದಿನಾಯಿಗಳಾಗಿ ಬಹುಕಾಲ ಕಳೆದಂತೆ ಪ ಇಳೆಯಾಣ್ಮನಿಲ್ಲದಾ ನಾಡು ಶೋಭಿಸದಂತೆ ಜಲವಿಲ್ಲದಾ ವಾಪಿ ಕೂಪದಂತೆ ನಳಿನ ಬಾಂಧವ ಮಿತ್ರನುದಯಿಸದ ದಿನದಂತೆ ಕುಲಹೀನನಾದವರ ಸಂಗಮಾಡಿದಂತೆ 1 ಕೋಣನಾ ಸಮ್ಮುಖದಿ ವೀಣೆ ಬಾರಿಸಿದಂತೆ ಜಾಣತನವಿಲ್ಲದಾಮಾತ್ಯನಂತೆ ವಾನರನ ಕೈಯಲ್ಲಿ ಮಾಣಿಕವ ಕೊಟ್ಟಂತೆ 2 ಶಾಮಸುಂದರನಾಮ ವರ್ಣಿಸದÀ ಕವಿಯಂತೆ ಪಾಮರಗೆ ಪೌರಾಣ ಪೇಳಿದಂತೆ ಕಾಮಾದಿಗುಣ ಬಿಡದೆ ಸನ್ಯಾಸಿಯಾದಂತೆ ಕೋಮಲಾಂಗದ ಸತಿಗೆ ಕ್ಲೀಬ ದೊರಕಿದಂತೆ 3
--------------
ಶಾಮಸುಂದರ ವಿಠಲ
ಗುರುವರ್ಯರನು ಭಜಿಸೋ ರಾಘವೇಂದ್ರ ಗುರುವರ್ಯರನು ಭಜಿಸೋ ಪ ಧರೆತಲದಲಿ ಅವತರಿಸಿ ಸುಜನರನು ಪರಿಪÀರಿ ವಿಧದಲಿ ಪೊರೆಯುತಲಿರುವ ಸದ್ ಅ.ಪ ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ ಖಳರ ದುರ್ಮತಗಳನಳಿಸಿ ದಶಪ್ರಮತಿ ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ ಇಳೆಯೊಳು ಸುಜನಕೆ ತಿಳಿಯುವ ತೆರದಲಿ ಬೆಳಗುತಿರುವ ಪರಿಮಳ ಮುಖವರ ಗ್ರಂಥ ಗಳನು ರಚಿಸುತ ಉಳಿಸಿ ಸುಮತಿಯನು ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ 1 ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ ಕಂಗೊಳಿಸುತ ಚರಣಂಗಳ ಭಜಿಪರ ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ ಮಂಗಳ ತತಿಗಳ ನೀಡಿ ಅವರ ಆಘ ಭಂಗವಗೈಯುತ ಅನುದಿನದಲಿ ದ್ವಿಜ ಪುಂಗವ ನಿಕರದಿ ಪೂಜೆಯಗೊಂಬ ಉ ತ್ತುಂಗ ಚರಿತರಥಾಂಗಧರ ಪ್ರಿಯ 2 ಮುನ್ನ ಪ್ರಹ್ಲಾದನೆನೆಸಿ ಶ್ರೀ ನರಹರಿಯನ್ನು ಸತತ ಭಜಿಸಿ ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ ಯೆನ್ನಿಸಿ ಖಲಮತವನ್ನು ಖಂಡಿಸುತಲಿ ಚಿನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ ಳನ್ನು ಬೋಧಿಸುತ ತನ್ನ ಭಕುತಜನ ರನ್ನು ಹರುಷದಲಿ ಧನ್ಯರೆನಿಸಿದ ಪ್ರ ಸನ್ನ ಶ್ರೀರಾಮರ ಭಕುತ ಶಿರೋಮಣಿ 3
--------------
ವಿದ್ಯಾಪ್ರಸನ್ನತೀರ್ಥರು
ಗೆಲವ ನೀಡೆನಗೆ ಇಹ್ಯದ ಗೆಲವ ನೀಡೆನಗೆ ಪ ಗೆಲವ ನೀಡಿಯೆನ್ನ ಮಲಿನಬಿಡಿಸಿ ನಿನ್ನ ವರ ದಿವ್ಯಪಾದನಳಿನದೊಲುಮೆಯಿತ್ತು ಅ.ಪ ಎಡರು ಆವರಿಸಿದ ಕಾಲದಿ ದೈರ್ಯವ ದಯಮಾಡೊ ಸಡಗರಸಿರಿ ಬಂದ ಕಾಲದಿ ಶಾಂತಿ ವಿನಯ ಕೊಡೊ ಕಡುಜವ್ವನದಲಿ ದುಡುಕನುಕೊಡದಿರು ಪಿಡಿದು ನೇಮವನು ಬಿಡದ ಛಲವನಿತ್ತು 1 ಧರಣಿಯ ಸುಖಕಾಗಿ ಎನ್ನಿಂ ಪುಸಿಯ ನುಡಿಸದಿರೋ ಹರಣಪೋದರು ಪರರಿಗೆ ದೇಹಿಯೆನಿಸದಿರೋ ಪರಮಹರುಷದಿಂದ ಹರಿಶರಣರು ಮೆಚ್ಚಿ ಶಿರವದೂಗುವಂಥ ನಿರುತವರ್ತನೆಯಿತ್ತು 2 ಸತತದಿ ಕರ್ಣಕ್ಕೆ ಹರಿಕಥೆ ಕೀರ್ತನೆ ಕರುಣಿಸೊ ಪತಿತಪಾವನವೆನಿಪ ಭಜನಾನಂದವ ಪಾಲಿಸೊ ಕ್ಷಿತಿಯೋಳಧಿಕ ಸದುಗತಿ ಮೋಕ್ಷಾಧಿ ಪತಿ ಶ್ರೀರಾಮ ನಿಮ್ಮ ಪಾದಭಕ್ತಿಯಿತ್ತು 3
--------------
ರಾಮದಾಸರು
ಚಂದ್ರನ ನೋಡಿರೈ ಸುಶೀಲೇಂದ್ರ ಪಾಡಿರೈ ಸುಜನ ಮಂದಾರ | ಮಾಘ ವಿರೋಧಿ ಸುಮ ತಪಯೋಗಿ ಪ ಯತಿ ಕುಲವರ್ಯ ಸುವೃತೀಂದ್ರ ಕರಾಂಬುಜ | ಜಾತ ಜಿತ ಮನೋಜಾತ || ಪೃಥ್ವಿ ಸುರಾರ್ಚಿತ ಪತಿತ ಮತಾರಣ್ಯಜಾತ ವೇದಸನೀತ ನಳಿನ ಷಟ್ಚರಣ ಅತಿಶಯ ವಿಭವದಿ ಜಗದಿ ಮೆರೆದರವಿತೇಜ ಕುಜನ ಸರೋಜ1 ವರದುಕೂಲದಿ ಪರಿಶೋಭಿಪರಿತ್ತಿಗ್ರಾಮ ಕೃತ ನಿಜಧಾಮ ಪೂರ್ಣಸುಪ್ರೇಮ ಪಡೆದಸನ್ಮಹಿಮ || ಪರಿಮಳ ಸುಧಾನ್ಯಾಯಾಮೃತ ತತ್ವದಸಾರವರೀತ ಗಂಭೀರ ಧರಣಿ ಸುರಾಗ್ರಣಿ ಸುವೃತೀಂದ್ರ ಹೃಕುಮದ ಸುಮನ ಶರತದ 2 ಅಕ್ಷಯ ವತ್ಸರಾಷಾಢ ಸುನೀತ ತಿಥಿ ತ್ರಯದಲಿ | ಲಕ್ಷ್ಯವಿಟ್ಟು ಲಯ ಚಿಂತನೆ ಗೈದ್ಹರುಷದಲಿ ಸುಸ್ವಾಂತದಲಿ || ತ್ರ್ಯಕ್ಷವಿನುತ ಶಾಮಸುಂದರನಂಘ್ರಿ ಧ್ಯಾನಿಸುತಕ್ಷೋಣಿತ್ಯಜಿಸುತ ಚಕೋರ 3
--------------
ಶಾಮಸುಂದರ ವಿಠಲ
ಚರಣಕೆರಗುವೆ ಕೃಷ್ಣಾ ಪರಿಹರಿಸು ಜನ್ಮವನುಶರಣಜನಬಂಧು ನೀನು ಕೃಷ್ಣಾ ಪಕರುಣನಿಧಿಯಡಿಗೊಮ್ಮೆ ಶಿರವೆರಗಿದವರು ಭವಶರಧಿಯೊಳು ಬೀಳರೆಂದೂ ಕೃಷ್ಣಾ ಅ.ಪಹಲವು ದೇಹಂಗಳಲಿ ಮಾಡಿದಘ ವೃಂದಗಳುಬಲವಂದಡವಕೆ ಲಯವು ಕೃಷ್ಣಾಜಲಜಸಂಭವ ತೊಡಗಿ ಶಲಭಾಂಕದೊಳಗೊಂದನುಳಿಯದೇ ಪ್ರಾಣಿಗಳಲಿ ಕೃಷ್ಣಾತೊಳಲಿ ಬಂದೆನು ನೀನು ನಿರ್ಮಿಸಿದ ಪರಿಯಲ್ಲಿತೊಲಗಿಸಿನ್ನೀ ಭವವನು ಕೃಷ್ಣಾನಳಿನಾಕ್ಷ ನಿನ್ನ ಪ್ರಾದಕ್ಷಿಣವು ಬಳಿಕಾಯ್ತುನಿಲಿಸೆನ್ನ ನಿನ್ನಡಿಯೊಳು ಕೃಷ್ಣಾ 1ಜನನ ಜನನಗಳಲ್ಲಿ ಕಿವಿಮುಚ್ಚಿ ತಲೆವಾಗಿನಿನಗೆರಗಿದವನಾದೆನು ಕೃಷ್ಣಾಗಣನೆುಲ್ಲದ ಜನ್ಮಗಳಲಿನಿತು ನಮಿಸಿದರೆಗಣನೆಗೊಳದಿಪ್ಪುದೇನು ಕೃಷ್ಣಾಅಣು ಮಾತ್ರದವನಾಗಿ ಘನತರದವಿದ್ಯೆಯಲಿಮನಮುಳುಗಿ ಬಹು ನೊಂದೆನೋ ಕೃಷ್ಣಾಯೆಣಿಸದಪರಾಧ ಕೋಟಿಗಳ ಭವ ಭೀತನನುಅನುಪಮನೆ ಕೊಡು ಗತಿಯನು ಕೃಷ್ಣಾ 2ಮರೆಯೊಕ್ಕವರ ಕಾಯ್ವ ಬಿರಿದು ನಿನ್ನದು ದೇವಮರೆಯೊಕ್ಕೆನೆಂದೆನೀಗ ಕೃಷ್ಣಾಮರಳಿ ನುಡಿವರೆ ಗುಣಗಳಡಿಮೆಟ್ಟುತಿವೆ ಬೇಗಸ್ಮರಣೆದೊರಕೊಳ್ಳದಾಗ ಕೃಷ್ಣಾಸೆರೆಯವನ ಬಂಧುಗಳು ಬಿಡಿಸುವರು ಕಂಡಾಗಸೆರೆಯವನಿಗುಂಟೆ ಯೋಗ ಕೃಷ್ಣಾತಿರುಪತಿವಿಹಾರಿ ದುರಿತಾರಿ ವೆಂಕಟರಮಣಕರವಿಡಿಯೆ ಸದ್ಗತಿ ಸರಾಗ ಕೃಷ್ಣಾ 3ಓಂ ವಿದುರಾಕ್ರೂರಾಯ ನಮಃ
--------------
ತಿಮ್ಮಪ್ಪದಾಸರು
ಚರಣವ ನರ್ಚಿಸುವೆ ಹರಿ ನಿನ್ನ ಮರೆಯದೆ ಕೀರ್ತಿಸುವೆ ನೀನೆ ಎನ್ನರಸ ರಕ್ಷಿಸು ಎಂದು ಪ ರಕ್ಷಿಸು ಎಂದು 1 ಸುಗುಣಂಬರೀಶ ಭೂಪಗೆ ಕೊಡಲಾಕ್ಷಣ ಗಮನ ಚನ್ನಿಗನೆ ರಕ್ಷಿಸು ಎಂದು 2 ಮುಳಿದು ಗಜವ ನೆಗಳೆಳೆಯಲು ಭಯದಲಿ ನಳಿನಾಕ್ಷ ನಿನಗೆ ದೂರಲು ಬೇಗದಲಿ ಸಾರಿ ಸುಲಲಿತ ಮಹಿಮನೆಗಳ ಸೀಳಿ ಕರಿಯನು ಸಲಹಿದೆ ದೇವ ಗೋವಳನೆ ರಕ್ಷಿಸು ಎಂದು 3 ಬೇಗದಲಿ ಕಂಬದಿಬಂದು ಸದೆದು ದಾನವನ ದಾಯದಲಿ ಕಾಯ್ದು ಪದುಮಾಕ್ಷ ನರಹರಿ ಮುದದಿ ರಕ್ಷಿಸು ಎಂದು 4 ದುರುಳ ದುಶ್ಯಾಸನ ಭೂವರ ಪಾಂಡು ತನುಜರ ಅರಸಿಯ ಸೀರೆಯ ಭರದಿ ಸೆಳೆಯಲಾಗ ಮೊರೆಯಿಡಲಕ್ಷಯ ವರವನಿತ್ತು ಸಲಹಿದ ಹರಿ ಸುತ ಕೋಣೆಯ ಲಕ್ಷ್ಮೀಶ ರಕ್ಷಿಸು ಎಂದು 5
--------------
ಕವಿ ಪರಮದೇವದಾಸರು
ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ ಪಾದ ವನರುಹ ಧ್ಯಾನ ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾಂಛಿತವೀವಗುಣ ಪೂರ್ಣ ಜ್ಞಾನ ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ನೀ ಪ್ರತಿದಿನದಿ ದಣಿಸುವುದು ಘನವೆ ಗುರುವೆ ಪಾವನತರ ಚರಿತ 1 ಪಾದ ಕೀಲಾಲಜ ಮಧುಪಾ ಬಾಲಕನ ಬಿನ್ನಪವ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸಂತಾಪ ಕೇಳೋವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಧವ ಕೋಲನಂದನಾ ಕೂಲಗವರ ಮಂತ್ರಾಲಯ ನಿಲಯ 2 ಕಲಿಕಲ್ಮಷವಿದೂರ ಕುಜನ ಕುಠರಾ ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ ಗಳ ಸುಶೋಭಿತ ಕಮಂಡಲ ದಂಡಧರಾ ಜಲಧಿ ವಿಹಾರಾ ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
--------------
ಜಗನ್ನಾಥದಾಸರು
ಛೀ ಛೀ ಮನವೆ ನಾಚದ ತನುವೆನೀಚವೃತ್ತಿಯ ಬಿಟ್ಟುನೆನೆ ಕಂಡ್ಯ ಹರಿಯ ಪ. ಕಿವಿಗೊಟ್ಟು ಗಂಟೆಯ ನಾದಕ್ಕೆ ಹುಲ್ಲೆಯನಿವಹ ಬಲೆಗೆ ಸಿಕ್ಕಿ ಬಿದ್ದುದನರಿಯನವ ಯೌವನೆಯರ ಕೋಕಿಲಾಲಾಪದಸವಿನುಡಿಗೇಳದಚ್ಯುತನ ಕಥೆ ಕೇಳೊ 1 ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದುಉಣ್ಣದುರಿವುದ ನೀ ಕಂಡು ಕಂಡರಿಯಬಣ್ಣದಬಲೆಯರ ರೂಪಿಗೆ ಮರುಳಾಗಿಮಣ್ಣ ತಿನ್ನದೆ ಮಾಧವನ್ನ ನೀ ಸ್ಮರಿಸೋ 2 ಗಾಣದ ತುದಿಯ ಮಾಂಸವ ಮೆಲ್ಲುವ ಮತ್ಸ್ಯಪ್ರಾಣವ ಬಿಡುವುದಂಗನೆಯರಧರವಮಾಣದೆ ಬಯಸಿ ಕೆಡದೆ ಶ್ರೀಮನ್ನಾರಾ-ಯಣ ನಾಮಾಮೃತಸವಿ ಎಲೆ ಮನವೆ 3 ಕರಿ ಕರಿಣಿಯ ಸ್ಪರುಶಕೆ ಪೋಗಿಕುಳಿಯ ಬಿದ್ದುದ ನೀ ಕಂಡು ಕಂಡರಿಯಲಲನೆಯರಾಲಿಂಗನಕೆÀಳೆಸದೆ ಸಿರಿ-ಲಲನೇಶನಂಘ್ರಿಯ ಅಪ್ಪಿಕೋ ಮನವೆ 4 ಅಳಿ ಪರಿಮಳಕ್ಕಾಗಿ ನಳಿನದೊಳಗೆ ಸಿಕ್ಕಿಅಳಿವಂತಂಗನೆಯ ಮೈಗಂಧವ ಬಯಸಿಬಳಲದೆ ವರದ ಶ್ರೀಕೃಷ್ಣನಂಘ್ರಿಯೊಳಿಪ್ಪತುಳಸಿಯನಾಘ್ರಾಣಿಸು ಕಂಡ್ಯಮನವೆ 5
--------------
ವ್ಯಾಸರಾಯರು
ಜಗದ್ಗುರೋ ರಾಮ ತ್ರಾಹಿ ಶ್ರೀ ರಾಮಚಂದ್ರಜಗದ್ಗುರೋ ರಾಮ ತ್ರಾಹಿ ಪದಶರಥನಂದನ ದನುಜ ವಿಮರ್ದನಪಶುಪತಿನುತ ಗುಣ ರವಿನಯನ 1ಕೌಸಲ್ಯಾತ್ಮಜ ಕಮನೀಯಾನನಕೋಮಲ ಕುವಲಯ ದಳ ವರ್ಣ 2ವನಚರ ಪೋಷಕ ಸೇತು ವಿಧಾಯಕಘನ ಧನುಃಶರಧರ ಧೃತಲೋಕ 3ಜಯಜಯ ರಾಘವ ಜಾನಕೀವಲ್ಲಭಭಯಗಣ ನಾಶನ ಭಾನು ನಿಭ 4ದಶಮುಖ ನಂದನ ಮಾನ ವಿಭಂಜನಬಿಸಜಜ ಪೂಜಿತ ಪದನಳಿನ 5ಮುನಿಮಖಪಾಲಕ ತಾಟಕೀಶಿಕ್ಷಕಮುನಿಸತಿದಾಯಕ ಮುನಿತಿಲಕ 6ತರಣಿ ಕುಲೋದ್ಭವ ತಿರುಪತಿ ಗಿರಿವರಸ್ಥಿರಸ್ಥಿತ ವೆಂಕಟ ಸುಖಸಾರ 7ಓಂ ಮ್ಟುಕಾಸುರ ಚಾಣೂರ ಮಲ್ಲಯುದ್ಧವಿಶಾರದಾಯ ನಮಃಕಂ||ಸ್ಥಿರವಾರದರ್ಚನೆಯು ಸುಸ್ಥಿರ ಸಂಪದ್ಭಕ್ತಿ ವಿಜ್ಞಾನಪ್ರದವೆಂದೇಸ್ಥಿರಚಿತ್ತನಾಗಿ ಮಾಡ್ದೆನುಸ್ಥಿರವಾಗಿರು ಮನದಿ ನೀನೆ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಜನ್ಯಧರ ದೂರ್ವಾಸ ಪ್ರಮುಖ ಮುನಿ ಸ ನ್ಮಾನ ಕರುಣಿ ವಿಲಾಸ ಶ್ರೀ ಶ್ರೀನಿವಾಸ ಪ ಎನ್ನವಗುಣ ಸಹಸ್ರವೆಣಿಸದೆ ನಿನ್ನವರೊಳಗೆಣಿಸಿ ಅನುದಿನ ಮನ್ಮನಾಲಯದೊಳು ನೆಲಸು ಮೈ ಗಣ್ಣನನುಜ ವರಾಭಯ ಶ್ರೀಕರ ಅ.ಪ. ಕಾಮಿತಪ್ರದಕೋಲಾ ಅಂಜನಾಧಿರÀ ಧಾರ ಧಾಮ ಭೂಮಿ ವಿಲೋಲಾ ಶಂಖಣನೃಪವರದ ಹೇಮ ಲೋಚನ ಕಾಲಾ ದ್ವಿಜ ಮಹಿಳೆಯುಳುಹಿದ ಶಾಮಲಾಂಗ ಸುಶೀಲಾ ವೆಂಕಟ ಕುಲಾಲ ಭೀಮಗೊಲಿದ ಮಹಾಮಹಿಮನೆ ಪಿ ತಾಮಹನ ನಾಸೋದ್ಭವನೆ ವಿಯ ಜಾಮಾತ ಕಟಿಸು ತ್ರಾಮಸುತಸೂತ ಪ್ರಮೋದಾಸು ಧಾಮ ಸೌಖ್ಯ ಪ್ರದವರಾಹ ತ್ರಯೀಮಯನೆ ಪ್ರಣತಾರ್ತಿಹರ ಬಲ ಸದನ ಸಹಸ್ರನಾಮ ಸಾಮಜಪತಿ ಪೋಷಕ ರಿಪುವನ ಧೂಮಧ್ವಜ ವಿಧಿಭ ಸೇವಿತ ವ್ಯೋಮಾಳಕಸಖ ಸರ್ವಜ್ಞರ ಮಾಮನೋಹರ ಮನ್ನಿಪುದೆಮ್ಮ 1 ದೀನಜನ ಮಂದಾರ ದೇವಕಿಸುತ ಜಗ ತ್ರಾಣ ಗುಣ ಗಂಭೀರ ಪೃಥ್ವೀಶ ತೋಂಡ ಮಾನವರದ ಉದಾರ ಲುಬ್ದಕನ ವಿಷ್ವ ವೈನತೇಯ ವರೂಥ ಖಳ ಸ್ವ ರ್ಭಾನುವಿನ ತಲೆಗಡಿದು ರವಿಶಶಿ ಕವಿ ಶನಿಗಳ ಶ್ರೇಣಿಯಲಿ ಮಾನಿಗಳ ಮಾಡ್ಡ ಮ ಕಲಿಮಲಾಪಹಾರಿ ಕೃ ಶಾನುಸಖ ಸಂಪೂಜ್ಯ ಸುಮನಸ ಧೇನು ಶರಣ ಜನರ್ಗೆ ಸಂತತ ಆ ನಮಿಸುವೆ ನಳಿನಜಪಿತ ನಿ ನಿರವದ್ಯ ನಿರುಜ ಬ್ರ ಹ್ಮಾಣಿ ಸುರನಿಕರ ನಿಲಯನುಸಂ ಧಾನಕೆ ಕೊಡು ಬಹುವಿಧಕರ್ಮ 2 ಸೇವ್ಯ ದಾರವಿಂದ ಮಹಂತಾ ಸತ್ವಾದಿ ತ್ರಿಗುಣವಿ ದೂರ ದಿತಿಜ ಕೃತಾಂತಾ ಗುಣರೂಪ ಪಾರಾ ವಾರ ವಿಗತಾದ್ಯಂತಾ ಶ್ರೀ ಭೂಮಿಕಾಂತಾ ಕಮಠ ವರಹ ಕ ಕಶಿಪು ವಿದಾರಣನೆ ಭಾ ಗೀರಥಿಯ ಪದನಖದಿಪಡದಂಗಾರ ವರ್ಣನೆ ಭೃಗುಕುಲೋದ್ಭವ ವಾರಿನಿಧಿಬಂಧನ ವನೌಕಸ ವಾರ ಪೋಷಕ ನಂದಗೋಪ ಕು ಮಾರ ತ್ರಿಪುರ ವಿದೂರ ತುರಗವನೇರಿದ ಜಗನ್ನಾಥವಿಠಲ ಸಾರುವೆ ತವÀ ಪದಪಂಕಜ ಜಂ ಭವ ಭಯ ತಾರಕ ನಿನ್ನವರೊಳು ತತ್ವ ವಿಚಾರಕೊಡು ಚಿರಕಾಲದಲಿ 3
--------------
ಜಗನ್ನಾಥದಾಸರು
ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ ಕಪಟಗುಣ ಕಲುಷವಿದ್ದವರು ಪ ಆದಿಗುರುವರಿಯದೆ ಅತ್ತಲಿತ್ತಲು ತೊಳಲಿವೇದಶಾಸ್ತ್ರವನೋದಿ ಬಾಯಾರಲುಹಾದಿಯನು ಕಾಣದಂತಿರುತಿರ್ದು ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು 1 ತುಂಬಿ ಬತ್ತಿದಂತೆಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ 2 ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ 3
--------------
ಕನಕದಾಸ
ಜಯ ಕಮಲಾಲಯ ರಮಣ ಜಯಪಾದಾಶ್ರಿತಭರಣ ಜಯಪೂರ್ಣಾಮೃತ ಕರುಣ ಜಯರತ್ನಾಭರಣ ಪ. ನಳಿನನಾಭನು ಪದ್ಮಲಲನೆಯರೊಡಗೂಡಿ ನಲಿವ ಕಾಲದೊಳೊಂದ ನುಡಿದ ಗೋವಿಂದ ಕಲಿಯೊಳಗವತಾರಗೊಳೆನೆಂದ ಮೊದಲಾಗಿ ಚೆಲುವೆ ದಾಸರಿಗೆನ್ನ ನೆಲೆ ತೋರ್ಪದೆಂದು 1 ಇಂದಿರೆ ತೋಷವ ತಾಳಿ ಮಂದಹಾಸದಿ ಪೇಳ್ದಳೊಂದುಪಾಯವನು ಹಿಂದೆ ಲಂಕಾಪುರದಿ ನೊಂದ ವೇದಾವತಿಯ ತಂದು ಲಗ್ನವ ಗಯ್ಯಲೆಂದು ಪೋಗುವುದು 2 ಹೀಗಾದರವತಾರವಾಗದ ಮರ್ಮವು ಸತ್ಯ ಸಾಗುವುದಖಿಳಾರ್ಥ ಭೋಗವ ನೀಡುವುದು ಈಗ ಮುನಿವ ನೆವದಿ ಸಾಗಿ ಕೊಲ್ಲಾಪುರದಿ ನಾಗಶಯನನೆ ನಿನ್ನ ನೆಲೆಯ ನಂಬಿರುವೆ 3 ವಿಕಸಿತ ಪದ್ಮಾನನೆಯ ಯುಕುತಿಯ ಮಾತಿಗೆ ಮೆಚ್ಚಿ ಸಕಲಾವತಾರ ಸಂಭೃತ ಶಕ್ತಿ ಹೆಚ್ಚಿ ಭಕುತ ವತ್ಸಲ ಭೂವರಾಹ ಮೂರ್ತಿಯ ಕಂಡು ಬಕುಳ ದೇವಿಯ ಸಹಾಯವನೆ ಕೈಗೊಂಡು 4 ರಮಾದೇವಿಯ ಕರಸಿ ಬ್ರಹ್ಮಾದಿಗಳ ಬೆರಸಿ ಬ್ರಹ್ಮ ಘೋಷವ ಬೆಳೆಸಿ ಬಹು ಸಂತೋಷಗೊಳಿಸಿ ಅಮರ ಸಭೆಯಲಿ ಭರ್ಮಪೀಠದಿ ಕುಳಿತ ನಿರ್ಮಲಾತ್ಮನ ನೋಡಿ ನಗುತೆಂದಳೊಧುವು 5 ಶುದ್ಧ ಪೂರ್ಣಾನಂದ ಶುಭಗುಣ ಗಣ ಸಾಂದ್ರ ಮುದ್ದು ಮುಖಾಂಬುಜವ ತೋರೊ ಗೋವಿಂದ ಮುದ್ದೆ ಕಸ್ತೂರಿ ಗಂಧಾ ಮೃಗಮದಾದಿಗಳಿಂದ ಮರ್ದಿಸೀದರಶಿನವ ಕೊಳ್ಳೊ ಮುಕುಂದ 6 ಹೂವ ತರುವೆನೆಂದು ಭಾಮೆಯರೊಡಗೊಂಡು ನಾವಂದು ವನದಲ್ಲಿ ನಿಂತಿರುವಲ್ಲಿ ಕಾವಿದಟ್ಟಿಯನುಟ್ಟು ಕುದುರೆ ಮೇಲಳವಟ್ಟು ಕೋವಿದ ಬಂದ್ಯಲ್ಲಿ ಕೋಪವ್ಯಾಕಿಲ್ಲಿ 7 ಮಾನಸವಾಗ ವಿಷಯದ ಮಾತುಗಳಾಡಿದ ಬಗೆಯ ನೀನಿಂದ ಮರೆತೆಯಾ ನಿನ್ನ ಸಂಸ್ಥಿತಿಯ ನಾನಾ ಚಿತ್ರದ ಗತಿಯ ನಿಜ ತುರಂಗದ ಗತಿಯ ಹೀನವಾದರೆ ಹೀಗೆ ತಾಳುವರೆ ಖತಿಯ 8 ಹಳತಾದದೊಂದಶ್ವ ಕಳದ ಚಿಂತೆಯ ತ್ಯಜಿಸು ಪೊಳೆವ ಸಾಸಿರ ಸಂಖ್ಯಗಳಲಿ ಕಣ್ಣಿರಿಸು ಬಳಲಿಸಿದವಳೆಂಬೊ ಛಲವತಾರದೆ ಮನಕೆ ನಲಿನಾಕ್ಷ ಮುಖವೆತ್ತಿ ತೋರೊ ಮಜ್ಜನಕೆ 9 ಹದಿನಾರು ಸಾವಿರ ಚದುರೆಯರನು ರಮಿಸಿ ಮೂರ್ತಿ ಸಾಕೆನಗೆ ಮದನಜನಕ ನಿನ್ನ ಮಹಾತ್ಮ್ಯಯನು ಬಲ್ಲೆ ಪದ ಪದ ಪಾಲಿಸಿದರರಸಿನ ಹಚ್ಚುವೆನು 10 ಕರಿವರ್ಣ ಸಂಕೋಚ ತರದಿರೊ ಮನದಲ್ಲಿ ಕರಿಯಾದ ಕಸ್ತೂರಿ ಪರಿಮಳವಿರದೆ ಸರಸಿಜಾತನ ಶಿರದ ಮೇಲಿರಿಸಿರುವ ಕರಕಂಜವನು ತೋರಲರಿಸಿನ ಹಚ್ಚುವೆನು 11 ಹಿಂಡು ಕೂಡಿದ ದೇವ ಮಂಡಲದೊಳಗಿಂಥ ಪುಂಡು ಮಾತುಗಳೆಂಬ ದಿಂಡೆಯಾತನವು ಗಂಡರಿದಿರು ಚಿಕ್ಕ ಹೆಂಡಿರಾಡುವ ಪರಿಯು ಪುಂಡರೀಕಾಕ್ಷ ಪಾಲಿಸು ತಪ್ಪಿದರೆಯು12 ಈ ನಿಂದಾಸ್ತುತಿಗಳನು ಧ್ಯಾನಿಸಿ ವೆಂಕಟವರನು ಮಾನಿನಿ ಪದ್ಮಾವತಿಗೆ ಮುಖವ ತೋರಿದನು ಸಾನುರಾಗದಿ ಶ್ರೀಭೂಮಾನಿನಿಯರೊಡಗೂಡಿ ತಾನಾಗಿ ದಯಮಾಡಿಲ್ಲಿಗೆ ಬಂದ ನೋಡಿ 13
--------------
ತುಪಾಕಿ ವೆಂಕಟರಮಣಾಚಾರ್ಯ