ಒಟ್ಟು 259 ಕಡೆಗಳಲ್ಲಿ , 71 ದಾಸರು , 245 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ವರಿತದಿ ಬಾರೆ ಸಖಿ ಸುನೇತ್ರೆ | ಹರುಷದಿ ಪೀಠಕೆ ಮಂಗಳಗೀತೆ ಪ ಮಿನುಗುವ ನಯನಾ ಕನಕಾಭರಣಾ | ಮಣಿಮುತ್ತಿನ ವನಮಾಲೆಯು ಧರಿಸುತ 1 ರತ್ನದಹಾರ ದಿವ್ಯಾಂಬರದಿ | ಮಿತ್ರಿ ನೀಶೋಭಿಸುತ ಪೀಠಕೆ ಮುದದಿ 2 ಕೋಮಲೆ ಬಾಲೆ ಸುಶೀಲೆ ಶಾಮಸುಂದರನ ನಾಮವ ಪಾಡುತ 3
--------------
ಶಾಮಸುಂದರ ವಿಠಲ
ದರುಶನವನು ಕೊಡೆಲೊ ದೇವ ಪ ಸರಸಿಜ ಮಿತ್ರನು ಮೂಡೆ ಪ್ರಾರ್ಥಿಸುವೆನು ಅ.ಪ ತುಂಗಾ ಕೃಷ್ಣ ಕಾವೇರಿ ಗಂಗೆ ಯಮುನೆ ಗೋದಾವರಿ ನರ್ಮದಾ ಮಂಗಳ ನದಿಗಳು ಕಾದುಕೊಂಡಿರುವುವು ರಂಗ ನಿನ್ನ ಚರಣಂಗಳ ಸೇವೆಗೆ 1 ಜಗವನುದ್ಧರಿಸಿದ ಸುಂದರ ನಿನ್ನಯ ಮೊಗವನು ನೋಡುತ ಸಂಭ್ರಮದಿ ಬಗೆ ಬಗೆ ಹೈಮವಸ್ತ್ರಗಳನು ಧರಿಸುತ ನಗವೃಂದವು ಕಾದಿರುವುದು ದೇವ 2 ತರುಲತೆಗಳು ಕಾದಿರುವುದು ಪೂಮಳೆ ಗರೆಯಲು ನಿನ್ನಯ ಶಿರದಲ್ಲಿ ಪರಮಹಂಸರುಗಳು ಕರದಲಿ ಜಪಮಣಿ ಧರಿಸಿ ಜಪಿಸುವರೊ ಕರುಣಾ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ದುಮ್ಮ ದುಮ್ಮೆನ್ನಿ ದುಮ್ಮ ಸಾಲವೆನ್ನಿ ಪ ನರಜನ್ಮ ಫಾಲ್ಗುಣ ಪೌರ್ಣಿಮೆ ಬಂದಿದೆ | ಮರಿಯ ಬ್ಯಾಡಿ ತನು ಧನ ಮನದೀ | ಹರಿದಾಸ ರಾಹವರೆಲ್ಲರು ಹೋಳಿಯ | ಪರಮಾನಂದದ ಲ್ಯಾಡುವ ಬನ್ನಿರಣ್ಣಾ 1 ಜ್ಞಾನಾಗ್ನಿಯ ಪ್ರಜ್ವಲದಿಂದಾ | ಹಮ್ಮೆಂಬ ಕಾಮನ ಹೋಳಿಯದಹಿಸಿ | ಒಮ್ಮನದಿ ನಲಿದಾಡಿರಣ್ಣಾ 2 ಹರಿನಾಮ ಕುಂಕುಮ ಸಾರಿ ಚಲ್ಯಾಡುತ | ಧರಿಸುತ ಹೃದಯ ಶಿರಸದಲಿ | ಕರದಲಿ ವಿಚಾರ ಬೆತ್ತ ಹೊಯ್ದಾಡುತ | ಹರುಷದಿಂದಲಿ ಕುಣಿದಾಡಿರಣ್ಣಾ 3 ಪರಿ ಪರಿ ಸಾಧನ ದೋರಿಸುತಾ | ಕರುಣದಿ ಆಡಿಸುತಿಲ್ಲಿ ನಿಂದಿರಲು | ದುರಿತಭಯಕ ಅಂಜ ಬ್ಯಾಡಿರಣ್ಣಾ 4 ಸಂಚಿತ ಬೂದಿಯ ಚಲ್ಲಿ ಪರಮಾ | ರ್ಥದ ಗಂಗಿಯೊಳು ಮಿಂದು ಶುಚಿಯಾಗಿ | ಪದುಮಾಶ್ರಯದಿಂದ ಗತಿಪಡಿರಣ್ಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದುರ್ಜನರ ಸಂಗವನು ತ್ಯಜಿಸು ಮನವೆ, ಸಾಧು ಸಜ್ಜನರ ಸಂಗವನು ಭಜಿಸಿ ಸುಖಿಯಾಗೆಲವೊ ಪ ದುಷ್ಟ ವ್ಯಾಘ್ರನ ಕೈಯ ಮುಟ್ಟಿ ಹಿಡಿ ತರಬಹುದು ಅಟ್ಟಿಬಹ ಮದಕರಿಯ ಕಟ್ಟಬಹುದು ಕೃಷ್ಣಸರ್ಪನ ಹುತ್ತ ಕಲಕಿ ಜೀವಿಸಬಹುದು ದುಷ್ಟಾತ್ಮರಾದವರ ಬಿಟ್ಟು ಕಳೆ ಮನವೆ 1 ಚೇಳಬಾಲದ ಉರಿಯ ಜ್ವಾಲೆ ತಾಳಲುಬಹುದು ಕಾಲಮೇಘದ ಸಿಡಿಲು ಬೀಳಬಹುದು ಶೂಲಪಾಣಿಯ ಫಣೆಯ ಆಲಿ ಕೀಳಲುಬಹುದು ಕಾಳುಮೂಳರ ಸಂಗ ಮರೆದು ಕಳೆ ಮನವೆ 2 ಹರಿವ ಗರಗಸಿನಲ್ಲಿ ಶಿರವನೊಡ್ಡಲುಬಹುದು ಬೆರಸಿಬಹ ಕಾಡ್ಗಿಚ್ಚ ಧರಿಸಬಹುದು ಸರಿಸದಲಿ ನಿಂತು ಕೇಸರಿಯ ಕೆಣಕಲುಬಹುದು ಮರೆಸಿ ಕೊರಳನು ಕೊಯ್ವ ನರರ ಮರೆ ಮನವೆ 3 ಒಂದು ಜಾತಿಗೆ ವಿಷವು ಪುಚ್ಚದೊಳಗಿರುತಿಹುದು ಮ- ತ್ತೊಂದು ಜಾತಿಗೆ ದಂತದೊಳಗೆ ವಿಷವು ಒಂದು ಜಾತಿಗೆ ಮೈಯ ಅಂದವೆಲ್ಲವು ವಿಷವು ಹಿಂದೆಯಾಡುವ ನುಡಿಯು ಘೋರ ವಿಷ ಮನವೆ 4 ತೇರ ಕಂಡರೆ ತೊಲಗು ಮಾರೈದನಾಕ್ಷಣದಿ ವಾರುವಗೆ ಕಡೆ ಸಾರು ಈರೈದು ಮಾರುವನು ದಾರಿಯನು ಬಿಡು ಗಜಕೆ ಮೂರು ಸಾವಿರವನ್ನು ಊರ ಬಿಡು ದುರ್ಜನರ ಸೇರದಿರು ಮನವೆ 5 ಸತ್ಯವಂತರ ಕಂಡರರ್ಥಿಯಿಂದಲೆ ಎರಗು ನಿತ್ಯದೊಳು ಶ್ರೀಹರಿಯ ಕೀರ್ತನೆಯ ಮಾಡು ಉತ್ತಮೋತ್ತಮ ಪದವ ಹತ್ತಿಸುವವರ ಬೇಡು ಧೂರ್ತಮನುಜರ ಸಂಗ ಕಿತ್ತು ಕಳೆ ಮನವೆ 6 ಶುದ್ಧಮನವೆ ಎನ್ನ ಬುದ್ಧಿಯೊಳಗಡಗಿರ್ದು ಉದ್ಧರಿಸು ವರಾಹತಿಮ್ಮಪ್ಪನನು ನೆನೆದು ಮದ್ದನರೆ ಜನ್ಮದೊಳು ಮರಳಿಬಾರದ ಹಾಗೆ ಗದ್ದುಗೆಯ ಹಾಯ್ಕೆನ್ನ ಹೃದಯ ಮಧ್ಯದಲಿ 7
--------------
ವರಹತಿಮ್ಮಪ್ಪ
ದೇವಾದಿ ದೇವ ನೀನವಧರಿಸು ಭಿನ್ನಪವ ಪ ಈ ವಿವಿಧ ಸುರರೊಳಗೆ ಸರಿಯಲ್ಲ ನಿನಗೆ ಅ.ಪ. ಸರಸಿಜಾಸನ ಶಂಭು ಮೊದಲಾದ ಸುರರೆಲ್ಲಾ ಪರತಂತ್ರರವರಲಿ ಕೊರತೆಯುಂಟು ನಿರ್ದೋಷ ನಿರವಧಿಕ ಕಲ್ಯಾಣಗುಣಪೂರ್ಣ ನಿರ್ದುಃಖ ನಿರತಿಶಯ ನಿರುಪಮಾನಂದಾತ್ಮ ಸರ್ವಜ್ಞ ಸರ್ವೇಶ ಸರ್ವತಂತ್ರ ಸ್ವತಂತ್ರ ಸರ್ವವಸ್ತುಗಳಲಿ ಸರ್ವದಾ ಪರಿಪೂರ್ಣ ಪರಿಪೂರ್ಣಕಾಮ ನಿನ್ನುರದಲೆನಗೆ ಸ್ಥಿರವಾಸಕೆಡೆಯ ನೀ ಕರುಣದಿಂದಿತ್ತು ಹರುಷಪಡಿಸುವುದೆನ್ನ ಶರಧಿಮಂದಿರನೆ ಗಿರಿಯ ಧರಿಸಿದೆ ಕರಿಗಿರೀಶನೆ
--------------
ವರಾವಾಣಿರಾಮರಾಯದಾಸರು
ಧನವ ಗೆದ್ದವರುಂಟೆ ಜನರೊಳಗೆ ಶ್ರೀನಿವಾಸ ಪ ಕನಸಿಲಾದರು ಬಿಡದು ಕನಕದಾಶೆಯು ಈಶ ಅ.ಪ. ಹೆಂಡತಿಯ ಬಿಡಬಹುದು ಮಂಡೆಬೋಳಿಸಬಹುದು ಕಂಡ ಕಂಡವರೀಗೆ ದಂಡ ಬೀಳಲಿ ಬಹುದು ಪುಂಡರೀಕಾಕ್ಷನಿಗೆ ತೊಂಡನಾಗಲಿ ಬಹುದು ದುಡ್ಡು ಕಾಸುಗಳನ್ನು ನೀಡಲಾಗದು ಮನಸು 1 ನಾಮ ಹಾಕಲಿಬಹುದು ನೇಮಮಾಡಲಿಬಹುದು ಹೋಮಮಾಡುತಲಿ ಬಹು ಕರ್ಮಿಷ್ಟನೆನಿಸಬಹುದು ನಾಮ ಪಾಡಲಿಬಹುದು ಧರ್ಮಪೇಳಲಿ ಬಹುದು ಹೇಮದಾಶೆಯು ಬಿಡದೂ ಶ್ರೀ ಮನೋಹರನೇ 2 ಜಪಮಾಲೆಧರಿಸುತಲಿ ಉಪವಾಸ ಮಾಡಬಹುದು ತಾಪಸನು ಎನಿಸುತಲಿ ಪುರಾಣಗಳ ಪೇಳಲಿಬಹುದು ಶ್ರೀಪತಿಯ ಸೇವಿಸುತ ಜಪತಪವ ನಡೆಸಬಹುದು ರೂಪಾಯಿ ಮಮತೆ ತಾ ಮುಪ್ಪಿನಲು ತೊಲಗದೈಯ್ಯ 3 ಯಾತ್ರೆಮಾಡಲಿಬಹುದು ಸ್ತೋತ್ರ ಘಟ್ಯಾಗಿ ಹೇಳಬಹುದು ನೀತಿ ಪೇಳಲಿಬಹುದು ಪೂತನೆನಿಸಬಹುದು ಮಾತು ಮಾತಿಗೆವೇದ ಎತ್ತಿ ಪೇಳಲಿಬಹುದು ಪ್ರೀತಿ ತಪ್ಪದೂ ಯೆಂದೂ ಆಸ್ತಿ ಧನಕನಕದಲಿ 4 ಲಜ್ಜೆಬಿಡುತಲಿ ಬೇಗ ಗೆಜ್ಜೆಕಟ್ಟಲಿ ಬಹುದು ಸಜ್ಜನನುಯೆಂದೆನಿಸಿ ಮೂರ್ಜಗದಿ ಮೆರೆಯಬಹುದು ಮಜ್ಜನಕ ಜಯತೀರ್ಥ ವಾಯು ಹೃದಯದಲಿರ್ಪಜ ಗಜ್ಜನಕ “ಶ್ರೀಕೃಷ್ಣವಿಠಲ”ನೆ ನೀವಲಿವ ತನಕ 5
--------------
ಕೃಷ್ಣವಿಠಲದಾಸರು
ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ ನ್ನೆರಡನೆಯದಾವುದುಂಟು ಪ. ಪರಿಪರಿಯಲಿ ನೋಡೆ ಪರಮ ವೈಭವದಿಂದ ಧರಣಿಯೊಳು ಮೆರೆಯುತಿಹುದು ಇಹುದುಅ.ಪ. ಹಂಸನಾಮಕನಿಂದ ಹರಿದು ಬಂದಂಥ ಯತಿ ಸಂಸ್ಥಾನ ಸುರನದಿಯೊ ಕಂಸಾರಿಪ್ರಿಯ ಶ್ರೀ ಮಧ್ವಮುನಿ ಮತ ಸಾರ ಹಂಸಗಳು ಸುರಿಯುತಿರಲು ಸಂಶಯವ ಪರಿಹರಿಸಿ ಸದ್ಗ್ರಂಥಗಳ ಸ- ದ್ವಂಶರಿಗೆ ಸಾರುತಿರಲು ಅಂಶ ಹರಿಪರ್ಯಂಕ ಸಹಿತ ಬಾಹ್ಲೀಕ ಯತಿ ವಂಶದಲಿ ಉದಿಸಿ ಬರಲು ಬರಲು 1 ಬನ್ನೂರು ಸ್ಥಳದಲ್ಲಿ ಜನ್ಮವೆತ್ತುತಲಿ ಬ್ರ ಹ್ಮಣ್ಯರಾ ಕರದಿ ಬೆಳೆದು ಚಿಣ್ಣತನದಲಿ ಮೌಂಜಿಧರಿಸಿ ಕಿತ್ತೊಗೆಯುತಲಿ ಧನ್ಯಯತಿಯಾಗಿ ಮೆರೆದು ಘನ್ನ ಶ್ರೀಪಾದರಾಯರಲಿ ಸದ್ಗ್ರಂಥಗಳ ಚನ್ನಾಗಿ ಮನನಗೈದು ಸಣ್ಣ ಪೆಟ್ಟಿಗೆಯೊಳಡಗಿದ್ದ ಶ್ರೀ ಕೃಷ್ಣನ ತನ್ನ ಭಕ್ತಿಯೊಳ್ ಕುಣಿಸಿ ನಲಿದು 2 ಪಡೆದು ಪರಿಪರಿಯ ಮಹಿಮೆಗಳ ತೋರುತಲಿ ದುರ್ವಾದಿ ದುರುಳ ಮತಗಳನೆ ಮುರಿದು ಮರುತ ಮತ ಶೀತಾಂಶುಕಿರಣ ಚಂದ್ರಿಕೆಯನ್ನು ಹರಹಿ ಪ್ರಕಾಶಗೈದು ಸರ್ವ ಸಜ್ಜನರ ಮನದಂದಕಾರವ ಕಳೆದು ಸಿರಿವರನ ಪ್ರೀತಿ ಪಡೆದು ತಿರುವೆಂಗಳೇಶನ ಪರಮ ಮಂಗಳ ಪೂಜೆ ವರುಷ ದ್ವಾದಶವಗೈದು ಮೆರೆದು 3 ಆರಸನಿಗೆ ಬಂದಂಥ ಆಪತ್ಕುಯೋಗ ಪರಿ ಹರಿಸಿ ಸಂಸ್ಥಾನ ಪಡೆದು ಪರಮ ಸಾಮ್ರಾಜ್ಯ ಪಟ್ಟಾಭಿಷೇಕವ ತಳೆದು ಪರಮ ವೈಭವದಿ ಮೆರೆದು ಚಿರಕಾಲ ವಿಜಯನಗರವು ಮೆರೆಯಲೆಂದ್ಹರಸಿ ಅರಸನಿಗೆ ರಾಜ್ಯವೆರೆದು ಕರುಣಾಳುವೆನಿಸಿ ವೈರಾಗ್ಯ ಶಿಖರದಿ ಮೆರೆದು ಮೊರೆಪೊಂದಿದವರ ಪೊರೆದು ಬಿರುದು 4 ಎಲ್ಲೆಲ್ಲಿ ನೋಡಲಲ್ಲಲ್ಲಿ ಶ್ರೀ ಮರುತನ್ನ ನಿಲ್ಲಿಸುತ ಪೂಜೆಗೈದು ನಿಲ್ಲದಿರೆ ಹಂಪೆಯಲಿ ಪ್ರಾಣಾರಾಯನು ಯಂತ್ರ ದಲ್ಲಿ ಬಂಧನವಗೈದು ಚಲ್ಲಾಡಿ ಸುವರ್ಣವೃಷ್ಟಿಯಿಂ ದುರ್ಭಿಕ್ಷ ನಿಲ್ಲಿಸದೆ ದೂರಗೈದು ಎಲ್ಲ ಕ್ಷೇತ್ರಗಳ ಸಂಚರಿಸಿ ಬಹುದಿನ ಹಂಪೆ ಯಲ್ಲಿ ಶಿಷ್ಯರನು ಪಡೆದು ನಿಂದು 5 ನವಕೋಟಿ ಧನಿಕ ವೈರಾಗ್ಯ ಧರಿಸುತ ಭವದ ಬವಣೆಯಲಿ ನೊಂದು ಬಂದು ನವ ಜನ್ಮಕೊಟ್ಟು ಉದ್ಧರಿಸಬೇಕೆಂದೆರಗೆ ಅವನಂತರಂಗವರಿದು ಪವಮಾನ ಮತವರುಹಿ ತಪ್ತ ಮುದ್ರಾಂಕಿತದಿ ನವ ಜನ್ಮವಿತ್ತು ಪೊರೆದು ಪವನ ಗ್ರಂಥಾಂಬುಧಿಯೊಳಡಗಿದ್ದ ದಾಸ್ಯ ರ ತ್ನವ ಪೂರ್ವಗುರುವಿಗೊರೆದು ಸುರಿದು 6 ಪುರಂದರ ಕನಕರೆಂ ಬತುಲ ಶಿಷ್ಯರ ಕೂಡುತಾ ಸತತ ಹರಿ ಚರ್ಯ ಮಹಿಮಾದಿಗಳ ಸ್ಮರಿಸುತ್ತ ಸ್ಮøತಿ ಮರೆದು ಕುಣಿದಾಡುತಾ ರತಿಪಿತನ ಗಾನ ಭಕ್ತಿಯಲಿ ಕನ್ನಡ ಕವನ ಮತಿಯೊಳ್ ನಾಲ್ವರುಗೈಯುತಾ ಕ್ಷಿತಿಯಲ್ಲಿ ದಾಸಪದ್ಧತಿ ಬಾಳಲೆಂದೆನುತ ಯತಿವರರ ಸೃಷ್ಟಿಸುತ್ತಾ | ಸತತ 7 ಅಂದು ವಿಜಯೀಂದ್ರರನು ಯತಿವರರು ಬೇಡÉ ಆನಂದದಲಿ ಭಿಕ್ಷವಿತ್ತ ಬಂದು ಕೈ ಸೇರಿದಾ ರಾಜ್ಯವನು ಕ್ಷಿತಿಪನಿಗೆ ಮುಂದಾಳಲೆನುತಲಿತ್ತ ಪತಿ ವೆಂಕಟೇಶನ್ನ ಪೂಜೆ ವರ ಕಂದನಿಗೆ ಒಲಿದು ಇತ್ತ ಒಂದೊಂದು ವೈಭವವು ಕೈ ಸೇರೆ ವೈರಾಗ್ಯ ತಂದು ಅಭಿರೂಪ ಬಿಡುತಾ | ಕೊಡುತ 8 ನವವಿಧದÀ ಭಕ್ತಿಯಲಿ ಜ್ಞಾನ ವೈರಾಗ್ಯದಲಿ ಕವನದಲಿ ಶಾಂತತೆಯಲಿ ನವಗ್ರಂಥ ನಿರ್ಮಾಣ ಪವನ ಗ್ರಂಥೋದ್ಧಾರ ಸವಿನಯವು ಸದ್ಗುಣದಲೀ ಸುವಿವೇಕ ಸತ್ಕರ್ಮ ಅಂತರ್ಮುಖ ಧ್ಯಾನ ಅವನಿ ಸಂಚಾರದಲ್ಲಿ ಇವರ ಸರಿಯಿಲ್ಲ ದಾಸ ವ್ಯಾಸ ಕೂಟದಲಿ ಭುವನದಲಿ ಮೆರೆದ ಧನ್ಯಾ | ಮಾನ್ಯ 9 ಪಾಪಿಗಳ ಸಲಹಿ ಪಾವನ್ನಗೈಯುತ ಭವದ ಕೂಪದಿಂದುದ್ಧರಿಸಿದಾ ಆಪಾರ ಮಹಿಮೆ ಆದ್ಯಂತ ವರ್ಣಿಸಲಳವೆ ಶ್ರೀಪಾದ ಪದುಮ ರಜದಾ ವ್ಯಾಪಾರವೆನ್ನ ಗುರು ದಯದಿ ಎನ್ನೊಳು ನಿಂದು ತಾ ಪಾಲಿಸುತ ನುಡಿಸಿದ ಗೋಪಾಲಕೃಷ್ಣವಿಠಲ ಧ್ಯಾನದಲಿ ಹಂಪೆ ಗೋಪ್ಯಸ್ಥಳದಲಡಗಿದಾ 10
--------------
ಅಂಬಾಬಾಯಿ
ಧೀಮಂತರ ದಯಪಡೆದು ಮಾಧವನ ಪದ ವಿಡಿದು | ಪ್ರೇಮದಿ ಭಜಿಸೆನ್ನ ಮನವೇ | ಪ ಕಾರ್ಮುಗಿಲದುಗ್ಧರಾಶಿಯನು ಶೃತಿಗೆ ಬೀಳಲ್ಪ | ಯೋರ್ಮನದಿ ಸಂತೋಷಿಪಂತೇ ನಿರ್ಮಳಾಂಗಣ ಕಥೆಯ ಘೋಷವೇನು ಕೇಳಿ ಅತಿ | ಪೆರ್ಮೆಯಿಂದಲೆ ನಲಿದು ಬಾಳು 1 ನೋಡಲಾಕ್ಷಣ ತನ್ನ ಮಾತೆಯನು ಮುದದಲಿಂ | ಲೋಡಿ ಬಪ್ಪುವ ಶಿಶುವಂತೆ | ರೂಢಿಯೊಳು ಸಜ್ಜನರ ಕಂಡಾಕ್ಷಣಕ ತನುವ | ನೀಡಿ ಸಾಷ್ಟಾಂಗದಿಂದೆರಗು 2 ಮಿಗಿಲಾಸೆಯನು ತ್ಯಜಿಸಿ ದಾಗಸದ-ಲಿಂಬರ್ವ | ನಿಗಳುಂಬ ಚಾತಕನ ತೆರದಿ | ಮುಗಳೆ ದಯದಿಂದ ಸಜ್ಜನ ಮುಖದಿ ಬಪ್ಪಬೋ | ಧೆಗಳ್ಪೊತನು-ವಾನುಗ್ರಹಿಸು ಧರಿಸು 3 ಮಣಿ ದೀಪವಾದಂತೆ ಸ | ಪಾದ ಕಮಲಗಳಾ | ಅತ್ಯಧಿಕ ಹರುಷದಿಂ ಹೃದಯದೊಳ್ ಧರಿಸಲ್ಕೆ | ಮೊತ್ತದ ಜ್ಞಾನ ತೊಳಗುವದು 4 ಗರ ಹೊಡೆದು | ಧರಿಯೊಳಗ ಗರ್ವಿಸಲಿ ಬ್ಯಾಡಾ | ಸಿರಿಯು ತೊಲಗಲು ಕುನ್ನಿಯಂತನ್ನ ದಾಸಿಂಗೆ | ಪರರು ಮನವಡಿದು ಬಳಲದಿರು 5 ಕಮಲಜನ ಪದಕ ಕತ್ತದೀವರ ಅನುಮತದ | ವಿಮಲಮಾರ್ಗ ಹೊಲಬ ನರಿದು | ಅಮಲೂಧ್ರ್ಪ ಪೌಂಡ್ರ ಹರಿ ಲಾಂಛನವು ತುಳಸಿ ಸರ ಕ್ರಮದಿಂದ ಧರಿಸಿ ಸುಖಿಯಾಗು 6 ಹರಿಪರದೈವವೆಂದು ಅರಿತು ಭಾವದಿ ನಿಂದು | ಹರಿ ಕೋಟಿ ನಿಭಕ ಮಿಗಿಲೆನಿಸಿ | ಮೆರೆವ ಮಹಿಪತಿ ನಂದನೋಡಿಯ ನಾಮಂಗಳನು | ಸ್ಮರಿಸಿ ಇರಳ್ಹಗಳ ಕೊಂಡಾಡು 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಗಬೇಡಿ ನಗಬೇಡಿ ನೀವ್ ನಗಬೇಡಿ ನಗಬೇಡಿ ಪ. ನಿಗಮನುತನ ಭಜಿಸುವ ನಿಜದಾಸರ ಬಗೆಯರಿಯದೆ ಬಿನ್ನಾಣದಿಂದ ನೀವ್ ಅ.ಪ. ಹರಿಸರ್ವೋತ್ತಮ ಹೌದ್ಹೌದೆಂಬುವ ಹರಿದಾಸರ ಲಕ್ಷಣಗಳ ತಿಳಿಯದೆ1 ಸ್ಥಿರವಲ್ಲದ ತನುಭ್ರಾಂತಿಯ ಪೊಂದುತ ಗುರುಚರಣ ನಂಬಿದ ದಾಸರ ಕಂಡು 2 ಲಜ್ಜೆಯ ತೊರೆಯುತ ಮೂರ್ಜಗದೊಡೆಯನ ಘರ್ಜಿಸಿ ಪಾಡುವ ಸಜ್ಜನರನೆ ಕಂಡು 3 ಲೋಕವಿಲಕ್ಷಣ ಚರ್ಯೆಯ ಧರಿಸುತ ಶ್ರೀ ಕಾಂತನ ಧ್ಯಾನಿಪರಿವರನರಿಯದೆ4 ಗೋಪಾಲಕೃಷ್ಣವಿಠ್ಠಲನಂಘ್ರಿಗಳನು ಭೋಪರಿ ನಂಬಿದ ನಿಜದಾಸರ ಕಂಡು 5
--------------
ಅಂಬಾಬಾಯಿ
ನನ್ನ ಮಗನೆಂಬರು ನಾಯಿ ಮಕ್ಕಳುತನ್ನ ತಾನೆ ಬ್ರಹ್ಮವದು ತಾನೆ ವೇಷ ಹಾಕಿ ಬರೆ ಪ ಸತಿಪತಿ ತಾವು ಆಗ ಸಂಯೋಗದ ಕಾಲದಲ್ಲಿಸುತನ ಕಿವಿ ಮೂಗ ಏನ ತಿದ್ದಿದರೇನೋಅತಿ ಆಶ್ಚರ್ಯವಲ್ಲದೆ ಅವಯವ ತಾಳಿಕೊಂಡುಕ್ಷಿತಿಗೆ ಮೈದೋರುತ ತಾನೆ ಬಂದರೆ 1 ಗಂಧ ಕಸ್ತೂರಿಯ ಪೂವು ಗಮಕದಲಿ ಧರಿಸುವಾಗಒಂದನ್ನ ಸುತೆಗೆ ಗುರುತು ಮಾಡಿದರೇನೋಇಂದು ಇದೆನೆವವೆಂದು ಇಳಿದು ಸಪ್ತಧಾತು ತಾಳಿಛಂದದಿ ವಿನೋದಕಾಗಿ ತಾನೆ ಬಂದರೆ 2 ಮಂಚವೇನು ಸಂಪತ್ತಿಗೆ ಮಡಿಹಾಸಿಗೆಯೊಳಿರ್ದುಮಂಚದಲಿರುತ ಸುತಗೆ ಚೇತನ ತುಂಬಿದರೇನೋಹೊಂಚಿನೋಡಿ ಚಿದಾನಂದ ಹೊರೆಯೇರಿ ಹರುಷದಿಪಂಚವಿಂಶತಿ ತತ್ವ ಕೊಡಿ ತಾನೆ ಬಂದರೆ 3
--------------
ಚಿದಾನಂದ ಅವಧೂತರು
ನಂಬಿ ನಡಿಯಿರೋ | ನಂಬಿ ನಡಿಯಿರೋ | ಗುರುಪಾದವಾ ನಡಿಯಿರೋ ನಂಬಿ ನಡಿಯಿರೋ | ನೇಮದಲಿ ಅತಿ | ಪ್ರೇಮದಲಿ ಪ ತಿರುಗುವರೇ ನೀ ಮರಗುವರೇ | ಇಹದೇನೋ ಗುಣವಹುದೇನೋ | ತಾರಕರಿಲ್ಲ ಪೋಷಕರಿಲ್ಲಾ | ಸುವರುಂಟೆ ಬೆಳಗುವರುಂಟೆ1 ಬಾಳಿ ತೊಳಲಿ ಘನ ಬಳಲಿ | ಬಂದೀಗ ನೀ ನಿಂದೀಗ | ಹಾದಿಯನು ತಿಳಿ ಭೇದಿಯನು | ಶರಣವನು ಪಿಡಿ ಚರಣವನು 2 ನಿರ್ಜರ ತರುವೆ ಸರ್ವರ | ನಿಜದರುವೆ ಕರುಣವಗರವೇ | ಪಾಡುತಲೀ ನಲಿದಾಡುತಲಿ | ಡ್ಯಾಡಿ ನಮನವನೇ ಮಾಡಿ | ಸ್ವಾನಂದದ ಸುಖ ಸೂರ್ಯಾಡಿ | 3 ಮೌಳಿ ಉಚ್ಛಿಷ್ಟ ಚಾಂಡಾಳಿ | ಳೆಂಬೋಪಾಸನ ಧ್ಯಾಸನಾ | ಹಾದಿಲಿ ನಡೆವರೇ ನೋಡುವರೇ | ಅಮೃತ ಕೊಂಡಂತಾಯಿತು ಗುಣಹೇತು 4 ತಿಗಳ್ಯಾಕೆ ಚಿಂತಿಗಳ್ಯಾಕೆ | ಆಚರಿಯಾ ನೀ ಕೇಳರಿಯಾ | ಗೋವಿಂದಾ ಶ್ರೀ ಮುಕ್ಕುಂದಾ | ಇಹಪರವು ನಿಜ ಸುಖದರವು 5 ಮನದೊಳಗೆ ಈ ಜÀನದೊಳಗೆ | ಡಂಭವ ದೋರುತ ಎರೆಯುತ | ತೋರುವುದಲ್ಲಾ ಗುಣಸಲ್ಲಾ | ಕಿಡಿಸುವರೇ ನೀ ಧರಿಸುವರೇ6 ವಾರ್ತೆಗಳಾ ಮನೆವಾರ್ತೆಗಳಾ | ಪ್ರಾಣವನು ಅಪಾನವನು | ಹಾರಿಸಿದೀ ನೀ ತೋರಿಸಿದೀ | ಏನಾದರೂ ಏನಿಲ್ಲಾ ಸಮ್ಯಕ್ | ಜ್ಞಾನವಾಗದೆ ಸಿಲ್ಕುವದೀ 7 ಸೌಮ್ಯದಲಿ ನಿಷ್ಕಾಮ್ಯದಲಿ | ಸವನಿಟ್ಟು ರತಿಗಳನಿಟ್ಟು | ನಿಲದ್ಹಾಂಗ ಚಲಿಸದಲ್ಹಾಂಗ | ಗುರುವಾಜ್ಞೆಯಲಿ ಅಭಿಜ್ಞೆಯಲಿ 8 ಭಕ್ತಿಯಲಿ ನಿಜವೃತ್ತಿಯಲಿ | ಮಹೀಪತಿಯಾ ಸುಚರಿತೆಯಾ | ಪಡಕೊಂಡವರನವರಿತಾ ಸುಖಭರಿತಾ | ಭವ ಸುಗಮದಲಿ ನೀ ಬೇಗದಲಿ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು
ನಮಿಸು ಮನವೆ ನೃಹರಿ ರೂಪವಾ | ರೋಗ ಹರಣನಾ ಪ ಹರಣ | ಸುರಪ ಪಾಲಕನಾ ಅ.ಪ. ಸಕಲ ಸುರರ ದನುಜ ಭಾದಿಸೆ | ಹರಿಗೆ ಮೊರೆಯಿಡೇಅಕಳಂಕ ಮಹಿಮ ಅಭಯವಿತ್ತು | ಅವರ ಕಳುಹಿದಾ 1 ಸುರರು ಪಾಡಿದರೂ 2 ಪಿತನು ತನ್ನ ಸುತನ ಭಾದಿಸೆ | ಹರಿಯೆ ಚರಣವಾಸತತ ನಮಿಸಿ ಭಜಿಸಿ ಭರದಿ | ಕಂಬದಿ ಕರೆದನೂ 3 ಭೃತ್ಯನ್ವೊಚನ ಸತ್ಯ ಮಾಡೆ | ಸ್ತಂಭವ ಸೀಳುತಾವೃತ್ಯಸ್ತವಾಗೆ ಸಕಲರ್ ಹೃದಯ | ಘಡ ಘಡೀಸುತಾ 4 ದೈತ್ಯನುದರ ಬಗೆದು ಕರುಳ | ಮಾಲೆ ಧರಿಸುತಾನೃತ್ಯವಾಡಿ ತನ್ನ ಪ್ರಳಯ ರೂಪವ ತೋರಿದಾ 5 ಅಕ್ಷರಜ್ಞೆ ಲಕುಮಿ ದೇವಿ | ಪಕ್ಷಿವಾಹನನಾಲಕ್ಷಣ ವೀಕ್ಷಿಸಿ ಕುಕ್ಷಿಯ ಬಿಡುತ | ವತ್ಸನ ನೂಕಿದಳು 6 ಮೋದ ಪಡಿಸುತಾಸದಯದಿಂದ ಗೈದ ಅವನ | ಭಕ್ತ ಶ್ರೇಷ್ಟನಾ 7 ಪತಿ 8 ಭವ ಕೂಪಾ9
--------------
ಗುರುಗೋವಿಂದವಿಠಲರು
ನರಸಿಂಹಾವತಾರ ಕಮಲ ಸ ಮಾಧಿರೂಢ ಪದಾಬ್ಜ ಪೂರ್ಣ ಸು ಭಂಜನ ಮಾಧವ ಮುರಾರೆ ವ್ಯಾಧಿ ಪೀಡೆಯ ಪರಿಹರಿಸು ಮಹ ದಾದಿ ತತ್ವಯಂತ್ರೆ ನುತ ಪ್ರ ಲ್ಹಾದ ರಕ್ಷಕ ನರಹರಿಯೆ ದಹಿಸಖಿಳ ಶತ್ರುಗಳ 1 ಪ್ರಳಯಕಾಲದ ರವಿ ಸಮೂಹದ ಕಳೆಗು ಮಿಗಿಲಾಗಿರುವ ಮುಖದೊಳ್ ಥಳತಳಿಪ ದಂಷ್ಟ್ರಗಳ ತೋರುತ ಕಳೆದು ವದನವನು ಛಲದಿ ಚೀರುತ ದಾನವನ ಕಂ- ಗಳನು ಮುಚ್ಚಿಸಿ ಪಿಡಿದು ತಿಕ್ಕಿದ ಬಲ ಪಯೋನಿಧಿ ನರಹರಿಯೆ ದಹಿಸಖಿಳ ಶತ್ರುಗಳ 2 ಕಂಭದೊಳಗಂದಾದ ರವ ಕೇ- ದಿವಿಜ ಕ- ದಂಬ ಭಯಗೊಂಡಂಬರದ ಮೇಲಿಂಬುಗೊಂಡಿರಲು ಜಂಭ ವೈರಿಯ ಜರಿದು ಕೆಡಹಿದ ಕುಂಭಿ ಕುಂಭ ಭುಜದ್ವಯನ ಮುರಿ ದಂಬುಜಾಲಯರಮಣ ನರಹರಿ ದಹಿಸಖಿಳ ಶತ್ರುಗಳ 3 ಅಡಿಯಿಡುವ ರಭಸಕೆ ದಿಗಿಭಗಳು ನಡು ನಡುಗಲು ನಿಶಾಮುಖದಿ ಕೆಂ ಗಿಡಿಯನುಗುಳುತಲಾದಿ ದೈತ್ಯನ ಪಿಡಿದು ಖತಿಯಿಂಗ ತೊಡೆಯೊಳಿಕ್ಕೀರೈದು ಖರತರ ಕೊಡಲಿಯಂತಿಹ ನಖಗಳಿಂದ ನೊಡಲ ಬಗೆದಿಹ ನರಹರಿಯೆ ದಹಿಸಖಿಳ ಶತ್ರುಗಳ 4 ವರರಥಾಂಗಾದಿಗಳ ದ್ವಾದಶ ಕರದಿ ಧರಿಸುತಲೆರಡು ಕರದೊ ಳ್ಕರುಳಮಾಲೆಯ ಪಿಡಿದು ಮಿಕ್ಕಾದೆರಡು ಹಸ್ತಗಳ ಬೆರಳ ಕೊನೆಗಳ ತಿರುಹಿ ದಾನವ ಸುರವರನಖ ಮುಖದಿಂದ ಬಿಚ್ಚಿದ ನಿರವಧಿಕ ಬಲಪೂರ್ವ ನರಹರಿ ದಹಿಸಖಿಳ ಶತ್ರುಗಳ 5 ದತ್ತ ಸ್ವಾತಂತ್ರ್ಯವನು ಮೀರ್ದಾ ಪತ್ತು ಘಟಿಸುವ ಕಾಲದಲಿ ಪುರು- ಷೋತ್ತಮನ ನೆನೆದವರ ಕೈಪಿಡಿದೆತ್ತುತಿಹನೆಂದು ನಿತ್ಯ ಶಾಸ್ತ್ರಾದಿಗಳ ಶೋಧಿಸು ತುತ್ತುಮರು ಮೊದಲೆಂದ ಪೌರಾ- ಣೋಕ್ತಿಗಳ ನಿಜದೋರು ನರಹರಿ ದಹಿಸಖಿಳ ಶತ್ರುಗಳ 6 ಶೇಷಶಿಖರನಿವಾಸ ತತ್ಪದ ದಾಸರನು ಕಾಪಾಡಿ ಸಲಹುವ ಭಾಷೆಯನು ನೀ ಮರೆಪರೆ ಮದುಪಾಸ್ಯ ಸರ್ವೇಶ ಈಷದಂಜದ ದ್ವೇಷಿ ದುರ್ಜನ ನಾಶಗೈಸುವುದುಚಿತವೈ ಸವ ಕಾಶವ್ಯಾತಕೆ ನರಹರಿಯೆ ದಹಿಸಖಿಳ ಶತ್ರುಗಳ 7
--------------
ತುಪಾಕಿ ವೆಂಕಟರಮಣಾಚಾರ್ಯ
ನರಿಯುವುದಸದಳವು ಪ ಪರಿಪರಿವಿಧದೊಳು| ರೂಪವ ಧರಿಸುತ್ತ || ಧರಣಿ ಭಾರವನ್ನೆಲ್ಲ| ಪರಿಹಾರ ಮಾಡುವ ಅ.ಪ ಕೂರ್ಮರೂಪವ ತಳೆದೆ || ವರಹನು ನೀನಾದೆ | ನರಹರಿಯಾದೆ ನೀ|| ಮೂರಡಿ ಭೂಮಿಯ | ವಟುವಾಗಿ ಬೇಡಿದೆ 1 ಕಾಕುಸ್ಥ ರಾಮನಾದೆ || ಕಲ್ಕಿರೂಪದಿ ಬಂದು | ಧರೆಂiÀiನುದ್ಧರಿಸಿದೆ 2 ಜಗದಾದಿ ದೇವ ನೀನು | ಏನನ್ನುವೆ | ಜಗದೇಕನಾಯಕನು || ಜಗವನÀುದ್ಧರಿಸುವ | ಜಗನ್ನಿಯಾಮಕ ನೀನು || ಅಗಣಿತ ಮಹಿಮನು 3 ಪ್ರಣವ ಸ್ವರೂಪ ನೀನು || ಅಣುರೇಣು ತೃಣಕಾಷ್ಠ | ಭರಿತನಾಗಿಹ ನೀನು || ಜನನಮರಣವಿರ | ಹಿತನಾದ ದೇವನು 4
--------------
ವೆಂಕಟ್‍ರಾವ್