ಒಟ್ಟು 150 ಕಡೆಗಳಲ್ಲಿ , 55 ದಾಸರು , 136 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುದೇವರ ಸ್ತೋತ್ರ ಲಾಲಿ ಲಾಲಿ ತ್ರಿಭುವನ ಪಾವನ ಲಾಲಿ ಪ ಅಂಜನದೇವಿಯ ಕಂದಗೆ ಲಾಲಿಕಂಜಾಕ್ಷಿಗೆ ಮುದ್ರಿಕೆಯಿತ್ತಗೆ ಲಾಲಿ ||ಅಂಜದೆ ಅಸುರರ ಕೊಂದಗೆ ಲಾಲಿಸಂಜೀವನ ಗಿರಿ ತಂದಗೆ ಲಾಲಿ 1 ಕುಂತಿಯುದರದಿ ಬಂದಗೆ ಲಾಲಿದಂತಿಯ ಗಗನಕ್ಕೆ ಒಗದಗೆ ಲಾಲಿ ||ಭ್ರಾಂತನ ಉದರವ ಬಗೆದಗೆ ಲಾಲಿಚಿಂತಾಮಣಿ ಭೀಮರಾಯಗೆ ಲಾಲಿ 2 ಸೋಹಂ ಎಂಬರ ತರಿದಾಗೆ ಲಾಲಿ ದಾ-ಸೋಹಂ ಎಂಬರ ಪೊರೆದಗೆ ಲಾಲಿ ||ಮೋಹನ್ನ ವಿಠ್ಠಲನ್ನ ಭಜಿಪಗೆ ಲಾಲಿಸ್ನೇಹದಿ ಭಕತರ ಪೊರೆವಗೆ ಲಾಲಿ 3
--------------
ಮೋಹನದಾಸರು
ವಾಯುದೇವರು ಇದು ಏನು ಕೌತುಕವೊ ಹನುಮರಾಯ ಪದುಮನಾಭನ ದಯಾಪಾತ್ರ ಶುಭಕಾಯ ಪ. ಅಂಜನೆಯ ಸುತನಾಗಿ ಅಂದು ಶ್ರೀ ರಾಮರಡಿ ಕಂಜಗಳ ಸೇವಿಸುತ ಮುದ್ರಿಕೆಯನು ಕಂಜಾಕ್ಷಿಗಿತ್ತು ಕ್ಷೇಮವನರುಹಿ ಬಂದಾಗ ಸಂಜೀವ ನಿನಗಿಷ್ಟು ತೊಡಿಗೆ ಕೊಟ್ಟಳೆ ದೇವಿ 1 ಮರುವಾರ್ತೆ ತಂದು ರಾಮಗರುಹಿ ಸೇತುವೆಯ ಗಿರಿಯಿಂದ ಕಟ್ಟಿ ಕಾರ್ಯವ ಸಾಧಿಸೆ ಸಿರಿಸಹಿತ ಶ್ರೀ ರಾಮ ರಾಜ್ಯಕೆ ಬಂದಾಗ ಮರುತ ನಿನಗಿಷ್ಟು ಆಭರಣ ಕೊಟ್ಟನೆ ಪೇಳು 2 ಎಲ್ಲೆಲ್ಲಿ ನಿನ್ನ ಕೀರ್ತಿಯ ಕೇಳೆ ಕೌಪೀನ ವಲ್ಲದಲೆ ಮತ್ತೊಂದರ್ಹಂಬಲಿಲ್ಲ ಮಲ್ಲ ವೈರಾಗ್ಯದಲಿ ಎಂಬುದನು ಕೇಳಿದೆನು ಇಲ್ಲಿ ನೋಡಲು ಇಷ್ಟು ವೈಭವವ ಪಡುತಿರುವೆ 3 ರಾತ್ರೆಯಲಿ ಕೀಚಕನ ಕೊಲ್ಲಲೋಸುಗ ಅಂದು ಮಿತ್ರೆ ರೂಪವ ಧರಿಸಿ ಶೃಂಗರಿಸಿಕೊಂಡು ಕತ್ತಲೊಳು ನೋಡಿಕೊಳ್ಳಲು ಆಗಲಿಲ್ಲೆಂದು ಹಸ್ತ ಕಡಗ ಹರಡಿ ಇಟ್ಟು ಮೆರೆಯುವೆಯೊ 4 ಹುಟ್ಟುತಲೆ ಸಂನ್ಯಾಸ ತೊಟ್ಟು ಬ್ಯಾಸತ್ತೊ ನಡು ಪಟ್ಟಿ ಉಡುದಾರ ಉಡುಗೆಜ್ಜೆ ಕಾಲ್ಗಡಗ ಇಟ್ಟು ನಾನಾ ಬಗೆ ಕದರುಂಡಲಿಯಲಿ ನೆಲಸಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ಪ್ರಿಯನಾದಿ 5
--------------
ಅಂಬಾಬಾಯಿ
ವಾಯುದೇವರು ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ ಪ ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ ಸಿಂಧು ದಾಟಿ ಸೀತೆಗೆರಗಿ ನಿಂದು ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ ಕೊಂದ ರಕ್ಕಸ ಪುರವನನಲಗೆ ಇತ್ತೆ 1 ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ ಮಂದಮತಿಗಳನಳಿದು ತಂದಿ ಸೌಂಗಂಧಿಕವ ಪುಂಡ ಕೀಚಕರಳಿದ ಪಾಂಡವಪ್ರಿಯದೂತ 2 ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ ಬೋಧಿಸಿ ಸುಜನರಿಗೆ ಮಾಧವನ ಗುಣವ ಸಾಧು ವಂದಿತ ಬಾದರಾಯಣರು ಇರುತಿರುವ ಬದರಿಯಲ್ಲಿರುವಿ ಶ್ರೀ ನರಹರಿಯ ತೋರೋ 3
--------------
ಪ್ರದ್ಯುಮ್ನತೀರ್ಥರು
ವಾಯುದೇವರು ಮಾರುತೀ ಮತ್ಪ್ರಾಣೇಶ ಮಾರುತೀ ಪ ಮಾರುತಿ ನಮಿಪೆ ನಾ ನಿನ್ನಾ ಭವಭಾರವನಿಳಿಸು ನೀ ಯೆನ್ನ | ಗತಿ ತೋರು ಸದ್ಗುಣ ಸಂಪನ್ನಾ | ಬೇರೆ ಯಾರಿಲ್ಲ ಪೊರೆವರು ಯನ್ನಾ | ನಿನ್ನೀ ಚಾರುಚರಿತೆಯ ಪಾಡಿ ಕೊಂಡಾಡುವೆ | ಸೇರೆ ರಾಮನ ಪದವಾರಿಜ ತೋರಿಸು ಅ.ಪ ಲಂಕಾ ಪತಿಯನು ಕಂಡೆ 1 ಪುರದಿ ಭೂಜಾತೆಯನರಸೀ ಕಾಣದರಿತು ವನವ, ತಲೆ ದುರುಳ ರಾವಣನ ಪರಿಕಿಸಿ | ಆಹಾ | ಭರದಿ ಮುದ್ರಿಕೆಯಿತ್ತು | ಪುರವನುರಿಸಿ | ರಘು | ವರನಡಿಗಳ ಕಂಡ | ಧುರಧೀರರರಸನೇ 2 ದೊಡೆಯನಿಗೆಡೆಗುಡೆ ಶರಧೀ | ಲಂಕೆ ಯೆಡೆಯೊಳ್ರಕ್ಕಸರ ಸಮರದಿ | ಕೊಲ್ಲುತಡುವ ಭೂತಗಳುಣ್ಣೆ ಅಡಿಯೊಂದಿಗೊರೆಸಿ ರಾಘವನ ಮೆಚ್ಚಿಸಿದ 3 ನರವರಗ್ಹ ಸ್ತಿನ ಪುರದೀ | ವರನೊಡಗೂಡಿ ಕಾಳಗದೀ | ದುರುಳ ಕೌರವರ ಬೇರೊರೆಸಿದ ಬಲಭೀಮ ||4 ಪುಟ್ಟಿ | ಬಲಿದರ ಶಾಸ್ತ್ರ ಬಲದೀ | ಸ್ಥಾಪಿಸಿ ನೀ ನಲಿದೀ | ಭಲ | ಭಳಿರೆ ರಜತಪುರಿಯರಸನ ರಘುರಾಮವಿಠಲ ದೂತ 5
--------------
ರಘುರಾಮವಿಠಲದಾಸರು
ವಾಯುವೆ ತವಚರಣ | ಸುರಶಿರ ಭೂಷಣಉರು | ಗಾಯನ ದರ್ಶನ | ದಾಯವ ನೀವನೆರಾಯ ರಾಜ್ಯವಾಳ್ದ || ಭೋ ಯತಿವರ ||ಅ|| ಕಾಯ ಶೈಥಿಲ್ಯದಿದಾಯ ವರಿಯದಲೆ | ಮೊರೆ ಹೊಕ್ಕೆ ನಿನ್ನ ಅ.ಪ. ರಾಮರಾಜ್ಞೆಲಿ | ಆ ಮಹಾಬ್ಧಿಯ |ಸೀಮೆ ಮೀರಿ ನಿ | ಸ್ಸೀಮ ಮುದ್ರಿಕೆಭೂಮಿ ಜಾತೆಗೆ | ಇತ್ತು ನಿಶಿಚರಸ್ತೋಮ ಸಂಹರ | ಹೇ ಮಹಾದ್ಭುತ 1 ಪಾಂಡು ಕುವರ ಅ | ಜಾಂಡ ಸೃಜಿಪನೆ |ಹಿಂಡು ಕೌರವ | ದಿಂಡುಗಳ ಶೀಳಿಪಾಂಡುರಂಗಗೆ | ಮಂಡಿಸುತ ಬ್ರ |ಹ್ಮಾಂಡ ಭಾರವ | ಗೊಂಡ ಪ್ರಚಂಡನೆ 2 ಶೌರಿ ಯಾಜ್ಞದಿ | ಕ್ರೂರಿ ಮಾಯ್ಮತ |ಭಾರ ಕಳೆದು ವಿ | ಹಾರ ಗೈದೆಯೊಶೌರಿ ಗುರು ಗೋ | ವಿಂದ ವಿಠಲನ |ಚಾರು ಚರಣವ | ತೋರಿ ನೀ ಪೊರೆ 3
--------------
ಗುರುಗೋವಿಂದವಿಠಲರು
ವಿದ್ಯಾಮರವೇ ಉದ್ಯೋಗದ ಮರವೇ ಪ ಅಂಜನಾ ದೇವಿಯ ನೀ ಜಠರದಿ ಜನಿಸಿ ಕಂಜರಾಕ್ಷ ಶ್ರೀರಾಮಭದ್ರನ ಭೃತ್ಯನೆನಿಸಿ ಸಂಜೀವಿನಿಯ ತಂದೆ ಅಂಜದಾರ್ಣವ ದಾಂಟಿ ತಂದೆ ರಂಜಿಪ ಮುದ್ರಿಕೆಯ ಅವನಿಜಾತಳಿಗಿತ್ತು ಬಂದೆ1 ಹೆಸರಾದ ಕೌರವ ಬಲವ ಸವುರಿ ನೀ ಉಸುರಿಲ್ಲದವರನು ನೆಗಹಿ ನೀ ಮಿಸುಕದೆ ಅಸುರರ ಅಸುವ ಪೀಡಿಸಿದೆ ಅಸುನಾಥ ಹರಿಸಿ ನೀನತುಳ ತೋಷವನಿತ್ತೆ 2 ಧರೆಯೊಳು ನೀ ವರ ಕಾಪ್ಯಪುರದಿ ಜನಿಸಿ ಹರಿಮತವ ಹರಹಿ ಹರಿಸಿ ರೂಹುಗೊಳಿಸಿ ಹರಿಪರಬ್ರಹ್ಮನೆಂದರಿಯೆ ಜಗಕ್ಕೆ ಕೋರಿ ನರಸಿಂಹವಿಠಲನನುಗಾಲ ತೋರುವನು ದಾರಿ 3
--------------
ನರಸಿಂಹವಿಠಲರು
ವೇದಾಂತ ಸಾಮ್ರಾಜ್ಯ ರಾಜಾಧಿರಾಜ ತೇಜೋಮಯರ ಪಾದಾಬ್ಜನೇ ಶರಣಪ ರಾಜಾಧಿರಾಜ ಕರಾರ್ಚಿತ ಚರಣ ಪ್ರಾಜ್ಯಪ್ರಜ್ಞರ ಶುದ್ಧಕುಲ ದಿವ್ಯಾಭರಣ ಅ.ಪ ಭ್ರಾಂತಿಗೆ ನಿಧನ ಸುಖಶಾಂತಿಗೆ ಸದನವೇ ದಾಂತಿಯ ಮಾನಸ ಕಾಂತಿಗೆ ಸಾಧನ 1 ಇಂದಿರಾಪತಿಯ ಆನಂದಾದಿ ಸದ್ಗುಣ ವೃಂದ ತೋರಿದ ಶೇಷಚಂದ್ರಿಕಾಚಾರ್ಯ 2 ಹಿರಿದು ನಿಮ್ಮಯ ವ್ಯಾಪ್ತಿ ಕಿರಿದು ಎಮ್ಮಯ ಶಕ್ತಿ ಪರಮ ಪ್ರಸನ್ನ ಶ್ರೀಗುರು ಸಾರ್ವಭಾಮ 3
--------------
ವಿದ್ಯಾಪ್ರಸನ್ನತೀರ್ಥರು
ವ್ಯಾಸರಾಯ ನಿನ್ನ ಅನುದಿನಾ | ಸ್ಮರಿಪ ಜನಕೆತೋಷದಿಂದ ಲೀವೆ ಸಾಧನಾ |ವಾಸುದೇವ ಕೃಷ್ಣಲೀಲೆ | ರಾಶಿಗುಣವ ಬೋಧಿಸುತ್ತಶ್ರೀಶ ಪಾದಪದುಮ ಕಾಂಬ | ಲೇಸು ಮುಕ್ತಿ ಮಾರ್ಗತೋರ್ವೆ ಅ.ಪ. ಏಸೊ ಮುನಿಗಳಿದ್ದು ಮಾಡದಾ | ಶಾಸ್ತ್ರವೆಂಬ ಭೂಷಣಂಗಳ್ಹರಿಗೆ ತೊಡಿಸಿದಾ |ಕೇಶವನೆ ಸರ್ವೋತ್ತಮನು | ದೋಷದೂರನೆಂದು ತಿಳಿಸಿಮೋಸಪಡಿಪ ಮಾಯಿ ಮತವ | ಘಾಸಿಮಾಡಿ ಜಯವ ಪಡೆದೆ 1 ವಾಸುದೇವ ವಾಲೀಲೆಯಏಸೊ ವಾದಿ ಜಯದ ಪತ್ರ | ಭೂಷಣಗಳ್ ಶ್ರೀಶಗಿತ್ತೆ 2 ಶೇಷನಾವೇಶದಿಂದಲಿ | ಪುಟ್ಟಿ ನೀವುವ್ಯಾಸರಾಯರೆಂಬ ಪೆಸರಲಿ |ದೇಶ ಪತಿಗೆ ಬಂದ ಕುಹು | ದೋಷಯೋಗ ಹರಿಸುತ ಸಿಂಹಾಸನೇರಿ ಜಗದಿ ಬಹಳ | ಭಾಸುರ ಸುಕೀರ್ತಿ ಪಡೆದೆ 3 ನ್ಯಾಯ ಗ್ರಂಥವೆಂದು ಕರೆಸಿಹ | ಚಂದ್ರಿಕಾದಿನ್ಯಾಯಾ ಮೃತವು ತರ್ಕ ತಾಂಡವ |ಗೇಯದಿಂದ ತುಚ್ಛ ಭಾಷ್ಯ | ಗಾಯನ ಮಾಡ್ದದುರ್ಮತೆನ್ನ ಮಾಯಿಮತವ ಗೆದ್ದು ಮಧ್ವ | ಧೇಯ ಸಾಧಿಸೀದ ಗುರುವೆ 4 ಪರಮ ಶಿಷ್ಯರೆಂದು ಮೆರೆವರಾ | ವಿಜಯಿಂದ್ರವರ ಸುವಾದಿರಾಜರೆಂಬರಾ |ಗುರುಗಳಾಗಿ ಯತಿ ಸುರೇಂದ್ರ | ವರ ಸುಪುತ್ರ ಭಕ್ಷೆ ಬೇಡೆಪರಮ ಹರುಷದಿಂದ ವಿಜಯ | ಇಂದ್ರರನ್ನ ಕಳುಹಿ ಪೊರೆದೆ 5 ಜ್ಞಾನಿಯರಸ ವ್ಯಾಸ ಮುನಿಗಳಾ | ಮನುಜರೆಂದುಹೀನ ಜನರು ಪೇಳೆ ಆವರ್ಗಳಾ |ಭಾನುಸೂನು ನರಕ$ನೇಕ | ಕಾಣಿಸುತ್ತ ಹಿಂಸಿಸೂವಶ್ರೀನಿವಾಸ ಹರಿಯ ಮುಂದೆ | ಗಾನ ಗೈದು ಆಡುತಲಿಪ್ಪ 6 ಪರಮಹಂಸ ಮುನಿಯು ಮನದಲಿ | ಪೂಜೆಗೈದುಹರಿಯ ಕಾಂಬ ಹೃದಯ ಗುಹೆಯಲಿ |ಗುರುವರ ಬ್ರಹ್ಮಣ್ಯ ಪೂಜ್ಯ | ಗುರು ಗೋವಿಂದ ವಿಠ್ಠಲಾನಚರಣ ವನಜ ಧ್ಯಾನಾಸಕ್ತ | ವರ ಸುನವ ವೃಂದಾವನಸ್ಥ 7
--------------
ಗುರುಗೋವಿಂದವಿಠಲರು
ವ್ಯಾಸರಾಯರ ಚರಣವನೆ ಸೇವಿಸಿ ಪ ವ್ಯಾಸರಾಯರ ಚರಣ ಸರಸಿಜದ ಸೇವೆ ಬಲು ಮೀಸಲ ಮನದಿ ಮಾಡೆ ಆಶೆಪಾಶೆಯ ತೊರೆದು ಕ್ಲೇಶವೆಲ್ಲವ ಹರಿಸಿ ಭಾಸಿಸುವ ಬಿಡದಲೇ ಹೃದ್ದೇಶ ಖೇಶದೊಳಗೇ ಅ.ಪ. ಬನ್ನೂರು ಪುರದಲ್ಲಿ ಮುನ್ನೋರ್ವ ಬ್ರಾಹ್ಮಣನಮನ್ನೆಯೋಳ್ಳುದಿಸಲೂ ಸ್ವರ್ಣ ಪಾತ್ರೆಲಿ ತರಿಸಿಘನ್ನ ಮಹಿಮನ ತಂದು ಬ್ರಹ್ಮಣ್ಯ ಯತಿವರರು ತಮ್ಮ ಆಶ್ರಮದಿ ಪೊರೆಯೆ ||ಉನ್ನತದ ಗುಡ್ಡದಲಿ ಗವಿಯ ಮನೆಯಾಗಿರಲು ಚಿಣ್ಣನಾ ತೊಟ್ಟಿಲಿನ ಮೇಲಿನ ಗವಾಕ್ಷದಿಂಚೆನ್ನಗೋವ್ ದಿನದಿನದಿ ಪಾಲ ಕರೆಯುತ ಚಿಣ್ಣನನು ತಾ ಬಲು ಸಲಹಿತು 1 ತಾಪಸೋತ್ತಮರಾದ ಶ್ರೀಪಾದರಾಯರ ಸ-ಮೀಪದೊಳು ಆ ಪರಮ ಶಾಸ್ತ್ರ ವ್ಯಾಸಂಗದೀಭಾಪು ಭಾಪನೆ ಮೆರೆದು ಭಕ್ತಿ ಸುಪಥವ ಪಿಡಿದು ಮೈ ಮರೆದು ಕುಣಿಯುತಿರುವ ||ಶ್ರೀಪಾದ ಮುನಿಪ ತಾ ಮುಚ್ಚಳವ ತೆರೆಯದಿಹ ಸಂಪುಟವ ತೆರೆಯುತ್ತ ಶ್ರೀ ಪತಿಯನೆ ನೋದುತಶ್ರೀಪ ಶ್ರೀ ವೇಣುಗೋಪಾಲ ಕೃಷ್ಣನ್ನ ಕಾಣುತ್ತ ಕುಣಿ ಕುಣಿದಾಡಿದ 2 ಶಾಲಿಗ್ರಾಮವ ಪಿಡಿದು ತಾಳವನೆ ಹಾಕುತ್ತಬಲುಭಕ್ತಿ ಭರದಿಂದ ಘಲ್ಲು ಘಲ್ಲನೆ ಕುಣಿಯೆಖುಲ್ಲ ಜನರಿದರ ವಳ ಮರ್ಮವನೆ ತಿಳಿಯದಲೆ ಗುಲ್ಲುಗುಲ್ಲೆಂದು ನಗಲೂ || ಬಲ್ಲಿದ ಶ್ರೀಪಾದರಾಯರಿದ ಕೇಳಿ ಕಂಗಳಲಿ ಗಂಬನಿ ಗಲ್ಲದಲಿ ಕೈಯಿಡುತ ಸೊಲ್ಲ ಕೇಳಿರಿ ಸುಜನರೆಲ್ಲರು ಶ್ರೀ ಕೃಷ್ಣ ನಮ್ಮ ವ್ಯಾಸರೋಶನಾದನು 3 ಸಾರಥಿ ಹರಿಯನಿಜ ಮತವ ಬೋಧಿಸುತ ನಿಜ ಜನರ ಪೊರೆಯುತ್ತಕುಜನ ಕುತ್ಸಿತ ಮಾಯಿಮತ ಜೈಸಿಅಜನನಯ್ಯನ ಪ್ರೀತಿ ಸಂಪಾದಿಸಿ ||ಸುಜನ ಪಾಲಕ ಕೃಷ್ಣರಾಜನಿಗೆ ಕುಹುಯೋಗಗಜಬಜಿಸಿ ಬರುತಿರ್ಪುದನು ನಿಜ ಮನದಿ ತಿಳಿದುಗಜವರದ ನಂಘ್ರಿಯನೆ ಭಜಿಸುತ್ತ ವಿಜಯ ಪುರಿ ಸಿಂಹಾಸನವನೇರ್ಧರ 4 ಪರಿ ಗ್ರಂಥ ರಚನೆಯಲಿ ಕಳೆಯೆ ಕಾಲವಕಲು ಮನದ ಜನರಿವರ ಬಲು ಪರಿಯ ಮಹಿಮೆಗಳನೂ ತಾವ್ ತಿಳಿಯಲೊಶವೆ 5 ಇಂಪುಗೊಳ್ಳುತ ಮನದಿ ತಂಪಿನಿಂದಲಿ ಮೆರೆವಪಂಪೆ ಸುಕ್ಷೇತ್ರದಲಿ ಬಾಂಬೊಳೆಯ ಜನಕನ್ನಸಂಪ್ರೀತಿಯನೆ ಪಡೆದಿರುವ ಯಂತ್ರ ಉದ್ಧಾರರನ ಸ್ಥಾಪಿಸುತಲಿ||ನೋಂಪಿನಿಂದಲಿ ಬ್ರಾಹ್ಮಲಕ್ಷ ಗುಂಪಿಗೆ ಉಣಿಸಿ |ಸಂಪುಲ್ಲ ಲೋಚನನ ಶಂಫಲಿಯ ಪುರಗನನುಸಾಂಪ್ರದಾಯಕದಿಂದ ಸಂಪ್ರೀತಿ ಬಡಿಸಿದರ ಪದ ಪಾಂಸುವನೆ ಸಾರಿರೋ 6 ಪರಿ ಪರಿಯ ಪೂಜೆಯನೆ ಗೈಯ್ಯುತಲಿ ||ಶ್ರೀಶನ ಸುಪೂಜಾ ವಿಧಾನವನೆ ಗೈಸುತ್ತದೋಷದೂರನ ಸೇವೆ ಮೀಸಲಳಿಯದ ಮನದಿ ಒಸೆದು ತಾವ್ ಗೈಯ್ಯುತ ಭಾಸಿಸುವ ಸತ್ಕೀರ್ತಿಯುತರಾಗಿ ಮೆರೆಯುತಿಹರ 7 ಪುರಂದರ ವಿಠಲ ದಾಸನೆಂದೂದಾಸ ಪೀಠದಿ ನಿಲಿಸಿ ದಾಸ ಕೂಟವ ರಚಿಸಿ ಸತ್ಪಂಥವನೆ ಸಾರಿದ ||ಆಶುಕವಿತೆಯ ರಚಿಸಿ ಪ್ರಾಕೃತ ಸುಭಾಷೆಯಲಿಕೇಶವನ ಗುಣಧಿಯಲಿ ಲೇಸಾಗಿ ಈಸುತಲಿದಾಸರೊಡನಾಡುತಲಿ ಮೀಸಲಾಗಿರಿಸಿ ತನು ಕೇಶವನ ಗುಣ ಪೊಗಳಿದ 8 ಜಯ ಜಯತು ಶುಭಕಾಯ ಜಯ ಜಯತು ವ್ಯಾಸಾರ್ಯಜಯ ಮಧ್ವಮುನಿ ಪ್ರೀಯ ಜಯ ಚಂದ್ರಿಕಾಚಾರ್ಯಜಯತು ವಿದ್ವದ್ದಾರ್ಯ ಜಯತು ಸುರಮುನಿ ಪ್ರೀಯ ಜಯ ಜಯತು ಯತಿವರ್ಯನೆ ||ಕಾಯಭವ ಪಿತ ಗುರೂ ಗೋವಿಂದ ವಿಠ್ಠಲಗೆಪ್ರೀಯ ಗುರು ವ್ಯಾಸಾರ್ಯ ಸ್ತೋತ್ರವನು ಭಾವ ಶುದ್ಧಿಯೊಳಾವ ಭಜಿಸುವನವಗೆ ಭವವನಧಿ ಉತ್ತರಿಸೆ ನಾವೆಯೆನಿಸುವುದಿದು 9
--------------
ಗುರುಗೋವಿಂದವಿಠಲರು
ವ್ಯಾಸರಾಯರ ಸೇವೆ ಲೇಸಾಗಿ ಮಾಡಲು ದಾಸನೆಂದೆನಿಸಿಕೊಂಬ ಪ ಸಾಸಿರನಾಮದ ವಾಸುದೇವನ ಭಕ್ತ ಕಾಷಾಯ ವಸ್ತ್ರಧರಅ.ಪ ತಾ ಸಹಗಮನದಿ ಪತಿಸಹ ಪೋಗುವ ಆ ಸ್ತ್ರೀಯು ಬ್ರಹ್ಮಣ್ಯತೀರ್ಥರಲ್ಲಿಗೆ ಪೋಗೆ ಶ್ರೀಶ ಬದರಿಯಲ್ಲಿ ಪೇಳಿದ ಮಹಿಮೆಯ ಆ ಸುಮಹಿಮ ಪ್ರಹ್ಲಾದನ್ನ ಸ್ಮರಿಸುತ್ತ ಮೋಸ ಬರುವುದೆಂದಾಲೋಚನೆ ಇಲ್ಲದೆ ಸತಿ ವಂದಿಸೆ ಸುಮಂಗಲ್ಯವನಿತ್ತು ಆ ಸಮಯದಿ ಮಂತ್ರಾಘ್ರ್ಯಾವನೆ ಕೊಂಡು ತಾ ಸುಮ್ಮಾನದಿ ಬನ್ನೂರಿಗೆ ಪೋಗ್ಯತಿ ಯಾ ಸತಿಪತಿಯ ಪ್ರಾಣವನುಳಿಹಿ ರನ್ನ ತಾ ಸಮೀಪದಿ ಮಠದಲ್ಲಿ ವಾಸಮಾಡಿಸಿ ಕುಸುಮಾಕ್ಷತೆ ಫಲ ಮಂತ್ರಿಸಿ ಆಕೆಗೆ ಕೊಟ್ಟು ಆ ಸುಮಂಗಲಿಯಲ್ಲಿ ಪ್ರಹ್ಲಾದ ಪುಟ್ಟಿದ ಆ ಸಮಯದಿ ಚಿನ್ನದ ಹರಿವಾಣದಲಿ ಶಿಶು ತಾನು ಬಿಡದೆ ಕಣ್ವ ನದಿಯಲ್ಲೀ ಶಿಷ್ಯರಿಗೆ ತೊಳಸಿ ತಂದು ಮಠಕೆ ಆಗ ವಾಸುದೇವನಭಿಷೇಕ ಕ್ಷೀರವನ್ನು ಆ ಸುರಭಿಯ ಕರೆದಭಿಷೇಕÀವನೆ ಕೊಂಡ ಲೇಸಿನಿಂದಲಿ ಮೊಲೆಯುಂಡು ಬೆಳೆದನು ವಾಸವನುತ ದೇವೇಶನ ಪಾಡುತ ವಾಸವಾದರು ಮಳೂರಿನಲಿ1 ಆ ಶಂಕುಕÀರ್ಣನೇ ಶೇಷಾವೇಶದಲ್ಲಿ ಶ್ರೀಶನ ಕÀಂಭದಿ ತೋರಿಸಿದಾತನೆ ತಾ ಸುಮ್ಮಾನದಿ ನರಸಿಂಹನ ಪೂಜೆಗೆ ತಾಸು ಬಿಡದೆ ಆಸೆ ತೀರಿಸಿದಾತನೆ ಈಸು ಮಹಿಮೆಗೆ ವ್ಯಾಸ ನಾಮಕರಣವು ಆ ಸುಮನೋಯತಿ ಆಶೀರ್ವಾದವಮಾಡೆ ತಾ ಸುಮ್ಮನಿರದಲೆ ಕೃಷ್ಣನ್ನ ಸ್ಮರಿಸುತ್ತ ಈ ಶಿಶುಬೆಳೆಯೆ ಆಭರಣದಿ ಶೋಭಿತ ವೀ ಸುಮತಿಯ ಮಂಗುರುಳಿಗೆ ಮುತ್ತಿನ ಗೊಂಡೆ ಆ ಸುಮನೋಹರಗಳೆಲೆ ಮಾಗಾಯಿ ಭೂಸುರ ನಿಕರವ ಮೋಹಿಪ ಬಗೆವಂಟಿ ಭೂಸುರ ಕರ್ಣಕೆ ಚಳತುಂಬು ಬಾವಲಿ ನಾಸಿಕಛಂದವು ಪದ್ಮವಿಕಸಿತ ಮುಖನೇತ್ರ ಸೂರ್ಯ ಕಾಂತಿಯ ಮುಖ ಫಣೆ ತಿಲಕನ ನೃ ಕೇಸರಿ ಪ್ರಾಯಗೆ ಹಾರಪದಕÀವಿಟ್ಟು ಆ ಸುಕರಗಳಲಿ ಉಂಗುರ ಪೊಳೆಯುತ ಆ ಸುಕಾಂತಿಯ ಕಡಗ ಸರಪಳಿ ವಂಕಿಯೂ ಲೇಸು ವಡ್ಯಾಣವ ನಡುವಿಗೆ ಧರಿಸಿ ಆ ಸಣ್ಣ ಪಾದಕ್ಕೆ ಗೆಜ್ಜೆ ಕಾಲ್ಗಡಗವು ಈ ಶಿಶುವಿನ ಹರಿ ಆಡಿಸುವಾ 2 ವರ್ಷವೈದಕೆ ಚೌಲ ಅಕ್ಷರಾಭ್ಯಾಸ ವತ್ಸರ ಉಪನಯನ ಮಾಡಿ ಧೀರಗೆ ಸಪ್ತ ವರ್ಷಕೆ ತುರ್ಯಾಶ್ರಮ ಕಾರುಣ್ಯದಿಂದ ಶ್ರೀಪಾದರಾಯರಲ್ಲಿ ಅರುಹಿಸಲು ವೇದಶಾಸ್ತ್ರ ನಿಗಮಪಾಠ ಸಾರವ ತರ್ಕತಾಂಡವ ಚಂದ್ರಿಕೆಯ ಮಾಡಿ ಸೂರಿಶಿಷ್ಯ ವಾದಿರಾಜನ್ನ ಪಡೆದೆಯೋ ಶೂರಕೇಸರಿಯಂತೆ ವಾದಿದಿಗ್ಗಜಗಳ ಧಾರಿಣಿಯಲ್ಲಿ ತಲೆ ಎತ್ತದಂತೆ ಮಾಡಿ ನೂರೆಂಟು ಮಂದಿ ಶೂರವಾದಿಗಳಿಂದ ವಾರಿಧಿ ಕಟ್ಟಿ ಮಾರುತಿಯನು ಪ್ರತಿಷ್ಠೆಯ ತಾಮಾಡಿ ಶ್ರೀ ರುಕ್ಮಿಣಿಪತಿ ಗೋಪಾಲ ಕೃಷ್ಣನ ಸಾರಸಾಕ್ಷನ ಸೇವೆ ಅನುದಿನವು ಮಾಡಿ ಪುರಂದರ ದಾಸರಿಗಂಕಿತಾ ಪಾರ ಕುಹುಯೋಗವ ನೂಕಿ ಭೂಷತಿಯನು ಕಾಯ್ದ ಪಾರ ಮಹಿಮೆ ಫಾಲ್ಗುಣ ಬಹುಳ ಚೌತಿಯು ಶ್ರೀ ರಮಣನ ಪುರಿಯಾತ್ರೆಗೆ ರಥವೇರಿ ತೋರಿದ ವರದ ವಿಜಯವಿಠ್ಠಲನಾ ಪಾ ಸೇರೀದರಿವರು ಆನಂದದಿ * 3 * ಈ ಕೀರ್ತನೆ ವರದ ವಿಜಯವಿಠಲಾಂಕಿತದಲ್ಲಿ ದಾವಣಗೆರೆಶ್ರೀನಿವಾಸದಾಸಕೃತ ವ್ಯಾಸರಾಜ ಚರಿತೆಯಲ್ಲಿ ಉಪಲಬ್ಧವಿದೆ.
--------------
ವಿಜಯದಾಸ
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪ ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಅಚ್ಯುತನ ವರದಿಂದ ಬಂದು 1 ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ ಮುನಿ ಮೆಲ್ಲನೇ ನಡತಂದನು2 ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು ಇಂದು ನಿಮ್ಮಯಾ ದರುಶನಾ ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ ಬಂದ ವಿಚಾರ ಪೇಳೆಂದು ಬಿನ್ನೈಸಲು ನಂದದಲಿ ಹಾಹಾ ಎನುತಾ 3 ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು ವೈದಿಕ ಮಾರ್ಗವನ್ನೇ ಧರಿಸಿ ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ ಜಕನಾಗಿಪ್ಪೆನೆಂದು ತಲೆವಾಗಲು ಇಂದು ಪ್ರಕಟವಾಯಿತು ಧರೆಯೊಳು 4 ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ ಮೈಮರೆದು ದೇವಕಿ ನಂದನನ ನೆನೆದು ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ 5 ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ 6 ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ ಸುವರ್ಣ ಛಾಯದಂತೆ ಕಾಂತಿಲೀ ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ ಸ್ಥಾಯವಾದರು ಪೊಂಪದಿ7 ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ ಸಂತ ವಾದಿರಾಜಗೊಲಿದು ಪುರಂದರ ಮಂತ್ರ ಸಿದ್ಧಿಯನೆ ಕೊಟ್ಟು ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು ಚಿಂತಿತಾ ಫಲದಾಯಕ 8 ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ ಪದ್ಧತಿಯನು ಪೇಳಿ ತವಕದಿಂದಲಿ ತಾವು ಸದ್ವೈಷ್ಣವ ಲೋಕ ಸಿರಿಮರಳೈದಿದರು ಪಾದದ್ವಯವ ಭಜಿಸುವವರೂ ಕೇಳಿ 9
--------------
ವಿಜಯದಾಸ
ವ್ಯಾಸಾರ್ಯಾ - ವ್ಯಾಸಾರ್ಯ ಪ ದೈಶಿಕಾರ್ಯ ಬ್ರಹ್ಮಣ್ಯರ ಕರಜನೆ ಅ.ಪ. ಭವ ಪರಿಹರಿಸುವೆ 1 ಭೀಕರವೆನೆ ನೃಪ | ಗಾಕುಹುಯೋಗವತಾಕುವ ಮುನ್ನವೆ | ನೀ ಕಳೆದೆಯೊ ಗುರು 2 ಪನ್ನಗ ನಗಪ ಪ್ರಪನ್ನ ಭಜಕ ನಿನ | ಗಿನ್ನುಂಟೇ ಸಮ 3 ಮಂದ ಜನರೋದ್ಧರ | ವೆಂದು ರಚಿಸಿದೇಚಂದ್ರಿಕಾದಿ ತ್ರಯ | ಸುಂದರ ಗ್ರಂಥ 4 ವ್ಯಾಸ ತ್ರಯಾಭಿಧ | ಲೇಸು ಗ್ರಂಥ ಸಂಕಾಶಿಸೆ ಬಹು ವಿಧ | ಆಸುರಿ ಮತ ಹನ5 ದಾಸ ಪಂಥ ಉಪ | ದೇಶಿಸೆ ಶ್ರೀನಿವಾಸ ನಾಯಕರ | ದಾಸರೆಂದೆನಿಸಿದೆ 6 ವಾಸವ ನಾಮಕ | ದಾಸರಿಂದ ದಿಗ್ದೇಶ ಪ್ರಸರ ಮಹಿ | ದಾಸನ ನಾಮವು 7 ಶ್ವಸನನ ಮತ ವಿ | ದ್ವೇಷಿವಾದ ಹರದೇಶ ದೇಶ ಹನು | ಮೇಶ ಪ್ರತಿಷ್ಠಿತ 8 ಸಾರ್ವ ಭೌಮ ಗುರು | ಗೋವಿಂದ ವಿಠಲನತೋರ್ವುದೆನ್ನ ಹೃದ | ಯಾ ಕಾಶದಲಿ 9
--------------
ಗುರುಗೋವಿಂದವಿಠಲರು
ಶರಣು ಶರಣುಶರಣು ದಶರಥ ರಾಮದೂತಗೆ ಪ ಶರಣು ಕುರುಕುಲಾಧೀಶಗೆಶರಣು ವೈಷ್ಣವ ಮತ ವಿಲಾಸಗೆಶರಣು ಮುಖ್ಯಪ್ರಾಣಗೆ ಅ ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತಗೆಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ 1 ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆರಾಜ ಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ2 ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ 3
--------------
ಕನಕದಾಸ
ಶ್ರೀ ಚಂದ್ರಿಕಾಚಾರ್ಯ ಗುರುವೇ ಪ ಯಾಚಿಪೆ ನಿನ್ನ ಶ್ರೀ ಚರಣ ಸೇವೆ ಅ.ಪ ಜಲಧಿ ಚಂದ್ರ ಯತೀಂದ್ರ ಭೂಪೂರ್ವ ಪ್ರಹ್ಲಾದ ಸಜ್ಜನಾಹ್ಲಾದ ಗೋಪಾಲಕೃಷ್ಣ ಚರಣಾಂಬುರುಹ ಲೋಲ ಶ್ರೀಪಾದರಾಜಪ್ರಿಯ ಬಾಲಸುಶೀಲ 1 ಸಮೀರನ ರಾಶಿಯನು ರಚಿಸಿ ಸನ್ಮಾನ್ಯರೆನಿಸಿ ದಾಸಕೂಟಕೆ ನೆಲೆಯಿತÀ್ತು ಪುರಂದರ ದಾಸರನು ಕರುಣಿಸಿದೆ ಧೀರ ಉದಾರ 2 ಕುಹುಯೋಗ ಪರಿಹಾರಗೈದ ಮಹಾಯೋಗಿವರ ಕುಹಕ ವರ್ಜಿತ ಚಿತ್ತ ಶೋಭಿತ ಸುಖಾಂತ ಪಾದ ಧ್ಯಾನಿಪರ ಸಹವಾಸವೆನಗಿತ್ತು ಸಲಹುವುದು ಸತತ 3
--------------
ವರಾವಾಣಿರಾಮರಾಯದಾಸರು
ಶ್ರೀ ಪ್ರಾಣದೇವರ ಸ್ತೋತ್ರಗಳು ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ ಜ್ಞಾನ ಪೂರ್ವಕದಿ ಶ್ರೀನಿವಾಸನಗುಣ ಗಾನ ಮಾಡುವಮತಿ ಸಾನುರಾಗದಿ ಕೊಡು ಪ ಶರಧಿಯ ಲಂಘಿಸಿಧರಿಜೆ ದೇವಿಪದ - ಕ್ಕೆರಗಿ ಮುದ್ರಿಕೆ ಕೊಟ್ಟಹರುಷದಿ ಹನುಮನೆ 1 ಹೇಮನಗರ ದಹಿಸಿ ಸತ್ವರ ರಾಮ ಪದಕೆ ನಮಿಸಿ ಪ್ರೇಮದಿ ಜಾನಕಿ ಕ್ಷೇಮವ ತಿಳುಹಿಸಿ ತಾಮರಸಜಪದ ನೇಮದಿ ಐದಿದ 2 ಕುಂತಿಗರ್ಭದಿ ಜನಿಸಿ ರುಕ್ಮಿಣಿಕಾಂತನಣುಗನೆನಿಸಿ ಅಂತಕಾತ್ಮಜನ ಸಂತತ ಸಲಹಿದೆ ಹಂತಧಾರ್ತೃರಾಷ್ಟ್ರಾಂತಕ ಭೀಮನೆ 3 ದೇಶಿಕಪತಿಯನಿಸಿ ಬದರಿನಿವಾಸನ ಪದ ಭಜಿಸೆ ವಾಸುದೇವಸರ್ವೇಶನೆಂದರುಹಿದೆ ದೂಷಿತ ಮತ ತಮ ನೇಸರಮಧ್ವನೆ 4 ಕಾಮಕ್ರೋಧದಿ ಬೆಂದೆ ನಾ ಬಲು ತಾಮಸದಲಿ ನೊಂದೆ ಶ್ರೀ ಮನೋಹರ ವರದೇಶ ವಿಠಲನ ನಾಮ ಬರೆದೆ ಕುಪ್ಪೀ ಭೀಮನೆ ಪಾಲಿಸು 5
--------------
ವರದೇಶವಿಠಲ