ಒಟ್ಟು 292 ಕಡೆಗಳಲ್ಲಿ , 72 ದಾಸರು , 281 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾನಕೀಮನೋಹರ ಪ್ರಭೋ ಜರಾಮರಣವಿದೂರ ರಾಮ ಪ ನಾನಾವತಾರ ಚಿದಾ ನಂದಾತ್ಮ ಶರೀರ ಅ.ಪ ಧರ್ಮಾತ್ಮ ಸತ್ಯಸಂಧ ದಿನಕರ ವಂಶಾಬ್ಧಿಚಂದ್ರ 1 ಶಾಶ್ವತ ತ್ರಿಜಗನ್ಮೋಹನ 2 ಶಿವಚಾಪಖಂಡನ ಆ ಶ್ರಿತಲೋಕ ಮಂಡನ 3 ರಾವಣಾದಿ ದನುಜ ಮಥನ ದೇವಪರಾತ್ಮರ ರಘುವರ 4 ತಾಮಸಗುಣ ವಿರಹಿತ ಗುರು ರಾಮವಿಠಲ ನಮೋ ನಮೋ 5
--------------
ಗುರುರಾಮವಿಠಲ
ಜ್ಞಾನಿಯ ಕಾಣಲು ಧಗದಲ್ಯನಾಗುವ ಶಾಸ್ತ್ರಿಜ್ಞಾನಿಗಳು ಶಾಸ್ತ್ರಿಗೇನ ಮಾಡಿದರೋಏನಾದರೂ ಪೂರ್ವದ್ವೇಷವಿತ್ತಾದರೂತಾನು ನಿಂದಿಸಿ ಕುಲಸಹ ಕೆಡಿಸುವನು ಶಾಸ್ತ್ರಿ ಪ ದನವ ಕಾಣುವ ವದನವರಿಹುತಲಿಹದನವ ಕಾಯ್ದವಗಿಂತ ಅತ್ತಿತ್ತ ಕಡೆ ಶಾಸ್ತ್ರಿಘನ ವೇದಾಂತವನೋದಿ ಜ್ಞಾನಿಗಳ ನರರೆಂಬಎನಿತುಗರ್ವ ಅಹಮ್ಮಲಿ ತನ್ನ ತಿಳಿಯ ಶಾಸ್ತ್ರಿ 1 ಓದೋದು ವೇದಾಂತ ಓದುವನಾರೆಂದು ಅರಿಯಓದಿಹೆನೆಂಬ ಗರ್ವವು ತಲೆಗೆ ಹತ್ತಿಓದಿಯೇ ಅಲ್ಲಿ ಗೆದ್ದೆ, ಇಲ್ಲಿ ಗೆದ್ದೆ ನೆಂಬಅದನೊಬ್ಬನೆಲ್ಲೋ ಇರೆ ಆರಗೆದ್ದನು ಶಾಸ್ತ್ರಿ 2 ಸಾಧುಗಳಿಗೆ ವಂದಿಸಲಿಲ್ಲ ಸಾಧುಗಳ ಮನೆ ಹೋಗಲಿಲ್ಲಸಾಧುವು ಮುಂದೆ ಹಾಯಲು ಕುಳಿತು ಏಳದಲಿಹನುಸಾಧುವ ಕಂಡು ನಡೆಯೇನು ನುಡಿಯೇನು ಎಂಬಸಾಧುವ ಭಜಿಪಗೆ ಬಹಿಷ್ಕಾರೆಂದನು ಶಾಸ್ತ್ರಿ 3 ನಾನು ಅರಿಯೆ ನಿನಗೆ ಗತಿಯೇನು ಮತಿಯೇನುನಾನು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆನಾನು ನನ್ಹೆಸರೇನು ಆರು ತಿಳಿಸುವರೆಂಬಜ್ಞಾನವಿಲ್ಲದೆ ಘಟಪದಿ ಮೆರೆದಿಹ ಶಾಸ್ತ್ರಿ 4 ನಾನೇ ಶ್ರೇಷ್ಠನೆಂದೂ ನಾನೇ ದೊಡ್ಡವನೆಂದೂನಾನು ಆರಿಹೆನೆಂಬ ಎಚ್ಚರವದು ಹೋಗಿತಾನಾದ ಚಿದಾನಂದರಾದ ಸತ್ಪುರುಷಏನೇನೋ ನಿಂದೆಯ ಮಾಡಿ ನರಕಕ್ಕಿಳಿಸುವ ಶಾಸ್ತ್ರಿ 5
--------------
ಚಿದಾನಂದ ಅವಧೂತರು
ತನುಮನದಲ್ಲಿ ಯೋಚನೆ ಮಾಡೀ ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ ಪ ನರನಾರಾಯಣನೀತ ಕೃಷ್ಣ ಹರಿ ಹೃದ್ಭಾನು ಕಪಿಲನೀತ ಹರಿನಾರಾಯಣೇನೀತ ಯೋಗೀ ಶ್ವರ ತಾಪಸ ವೈಕುಂಠನೀತ ಹರನಸಖ ಸ್ವಧಾಮನೀತ ಕರುಣಿ ಸಾರ್ವಭೌಮನನೀತಾ 1 ಅಜಿತಯಜ್ಞನಾಮನೀತ ಅಜಗೆ ಪೇಳಿದ ಹಂಸನೀತ ಸುಜನಪಾಲ ವ್ಯಾಸ ವೀ ರಜ ಮಹಿದಾಸ ದತ್ತನೀತ ನಿಜ ಮಹಿಮ ಧನ್ವಂತ್ರಿ ಈತ ತ್ರಿಜಗವಳೆದುಪೇಂದ್ರನೀತ ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ 2 ಚಲುವ ಧರ್ಮಶೇತು ಈತ ಬಲುವುಳ್ಳ ಶಿಂಶುಮಾರನೀತ ಮತ್ಸ್ಯ ಕೂರ್ಮವರಹ ಲಲಿತನರಸಿಂಹನೀತ ಬಲಿಗೊಲಿದ ವಾಮನ್ನನೀತ ಕುಲವೈರಿ ರಘರಾಮನೀತ ಕಲಕಿ ರೂಪನಾದನೀತಾ 3 ವಾಸುದೇವ ಜಯಪತಿ ಸುಂ ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ ತುರ ವಿಂಶತಿ ಮೂರುತಿಯೇ ಈತ ಮೆರೆವ ಅಜಾದಿ ನಾಮಕನೀತ ವರ ಪಂಚಮೂರುತಿಯೇ ಈತಾ ಎರಡೈದು ಮೇಲೊಂದನೀತ 4 ಪರಿಪರಿ ರೂಪ ಉಳ್ಳನೀತ ಹೊರಗೆ ಒಳಗೆ ವ್ಯಾಪ್ತನಾಗಿ ಸರಿಸರಿ ಬಂದ ತೆರದಿ ಜಗವ ಸರಸದಲಿ ಆಡಿಪನೀತ ಸ್ಮರಣೆ ಮಾಡಲು ಸಕಲ ಇಷ್ಟವ ಕರೆÀದು ಕೊಡವನೀತ ಮರಣ ಜನನರಹಿತ ನೀತ 5
--------------
ವಿಜಯದಾಸ
ತರತಮದಿ ಶರಣು ಮಾಡುವೆ ನಿಮಗೆ ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು ನಿರುತ ಬಿಡದೆ ಮನ ಸಿರಿಹರಿ ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಪ ಪರಮೇಷ್ಠಿ ವಾಯು ಸರಸ್ವತಿ ಭಾರತೀ ಉರಗ ಈಶ ಹರಿ ಸತಿಯರು ಮೂ ರೆರಡು ಜನರು ಆ ತರುವಾಯ ಸೌಪರ್ಣಿ ಸಿರಿ ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ ವರು ಸನಕಾದ್ಯರು ದುರಿತಶಾಸನ ಶಶಿ ತರಣಿ ಶತರೂಪ ವರುಣ ನಾರದರ 1 ಮುನಿಗಳ ಶ್ರೇಷ್ಠ ಭೃಗು ಅನಲ ಪ್ರಸೂತಗಾಧಿ ತನುಜ ವಾರಿಜಾಜನ್ನತನಯರು ವೈವಸ್ವತ ಸೂರ್ಯ ದನು ಪ್ರವಾಹವೆಂಬ ಅನಿಲನ್ನ ತಳೋದರಿ ಅನಿಲದೇವಜ ಅಶ್ವಿನಿ ದೇವತೆಗಳು ಅನಳಾಕ್ಷಸುತ ಧನಪತಿ ಪ್ರಹ್ಲಾದ ಗುಣಿಸುವೆ ವಸು ಏ ಳನು ದಶರುದ್ರರು ಇನಿತರೊಳಗೆ ಒಬ್ಬನ ಬಿಟ್ಟನು ದಿನ 2 ದಶ ವಿಶ್ವದೇವತರು ಸ್ವಶನರೊಳಗೆಗೀರ್ವರ ರಸದ್ಯುನವಕೋಟಿ ತ್ರಿದಶರೂಪ ಪಿತ್ರರೂ ಎಸವ ಸೋಮ ಪುನರ್ವಾಪಸರಿಪಶತಸ್ಥರು ನಸುನಗೆ ಕರ್ಮಜ ಋಷಿ ಈರ್ವರು ಮನು ಕುಶಲ ಸಪ್ತ್ತರಿಗೆ ತುತಿಸೆ ಕಾಲಕಾಲದಿ 3 ಮಾಂಧಾತ ಬಲಿ ಶಶಿಬಿಂದುವೆ ಪ್ರಿಯವ್ರತ ಪರೀಕ್ಷಿತ ನಂದ ಕಕುಸ್ಥ ಗಯ ಕುಂದದೆ ಯದುಕುಲದಿಂದ ಬಂದ ಹೈಹಯನು ಚಂದ್ರನ ಮಡದಿ ಏಳೊಂದನೆ ಸೂರ್ಯನು ಮಂದಹಾಸಾಂಬುಜ ಬಾಂಧವನಸತಿ ಕಲದರ್ಪನಸೂಸೆ ವೃಂದಾರಕರಿಗೆ 4 ಸದಮಲ ಸ್ವಾಹಾದೇವಿ ಬುಧಾ ಉಷಾದೇವಿ ಶನಿ ಮುದದಿಂದ ಪುಷ್ಕರ ಸಹೃದಯ ತುಂಬರರಿಂದ ಮೊದಲಾಗಿ ನೂರುಮಂದಿ ತ್ರಿದಶ ಗಂಧರ್ವರು ಚದುರೆ ಊರ್ವಸಿ ರಂಭೆ ಅದಿತಿ ಕಶ್ಯಪದಿತಿ ಹದಿನಾರು ಸಾವಿರ ಬುಧನ ಮಕ್ಕಳು ತಪೋನಿಧಿಗಳು ಎಂಭತ್ತು ತದುಪರಿ ಅಜಾನಜ ತ್ರಿದಶರು ಓಜಸ್ತರೆದರಾಗಿ ನಾನಿಂದು 5 ಹರಿಭಕ್ತರಾದ ಅಪ್ಸರ ಸ್ತ್ರೀಯರು ಕೆಲಕೆಲವು ಮರಳೆ ಚಿರಾಖ್ಯನಾಮದಿರುತಿಪ್ಪ ಪಿತೃಗಳು ಪರಿಪರಿ ನೂರುಕೋಟಿ ಪರಮಋಷಿಗಳಿಗೆ ಸುರ ಗಂಧರ್ವರ ವಿಸ್ತರ ಮನುಜ ಗಂಧರ್ವ ಧರಿಣಿಜಾಕವಿ ಮೇಲರಿದು ಜಯಂತಗೆ ಕರ ಮುಗಿವೆ ಕ್ಷಿತಿಪರನು ಕೊಂಡಾಡುತ ಇರುಳು ಹಗಲು ಉತ್ತಮರ ಮನುಜರ ಪಾಡಿ ನಿರುತ ಜಂಗಮ ಸ್ಥಾವರಗಳ ನೋಡುತ 6 ಭುಜಗಶಯನನಿಂದ ಸೃಜಿಸಿದ್ದ ಸರ್ವರಿಗೆ ನಿಜವಾಗಿ ಶಿರವಾಗಿ ಭಜಿಸುವೆ ಚನ್ನಾಗಿ ತ್ರಿಜಗದೊಳಗೆ ಎನ್ನ ರಜ ತಾಮಸ ಗುಣದ ವೃಜವೆ ಓಡಿಸಿ ನಿತ್ಯಸುಜನ ಮಾರ್ಗವ ತೋರಿ ರಜನಿ ಚರಾಂತಕ ವಿಜಯವಿಠ್ಠಲನ್ನ ಭಜಿಪೆನದಕೆ ನಿಮ್ಮ ನಿಜವ್ಯಾಪಾರದಿ ಸೃಜಿಸಿ ಕೊಡುತ ಧರ್ಮ ವೃಜಗಳೊದಗಿಸುತ್ತ ಕುಜನ ಮತದ ಮೇಲೆ ಧ್ವಜವೆತ್ತಿಸುವುದು 7
--------------
ವಿಜಯದಾಸ
ತಾಯಿ ಪಾಲಿಸು ಎನ್ನ ದಯದಿ ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ ಚಾರುಚರಿತಂಗಳು ಸಾರುವೆ ನಿಜಮಂತ್ರ ಮೂರುಲೋಕದ ಸೂತ್ರಧಾರಿ ನೀ ನಿಜ ಓಂ ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ ಚಾರಿ ನಿಜಸುಖ ತೋರು ಬೇಗನೆ 1 ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ ವನು ಕೊಟ್ಟು ಸಲಹಿದಿ ಕನಿಕರದೊಡನೆ ಮಿನುಗುವ ಶತಕೋಟಿದಿನ ಕರಪ್ರಭಾಮಯೆ ಅನುಪಮುನಿಜಜ್ಞಾನವನು ನೀಡು ಬೇಗನೆ ಚಿನುಮಯಾತ್ಮಳೆ ಘನಕೆ ಘನ ನಿನ್ನ ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ 2 ಪನ್ನಂಗಧರ ಸುರಸನುತ ಶ್ರೀರಾಮ ಸುನ್ನತ ಮಹಿಮಂಗಳನ್ನು ಬಲ್ಲವಳೆ ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ ಮನ್ನಿಸು ಬಡವನ ಬಿನ್ನಪ ಕರುಣೆ ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ಹøದಯೆ 3
--------------
ರಾಮದಾಸರು
ತಾಯೆ ಲಕ್ಷುಮಿ ದೇವಿಯೇ | ನೀನೇ ಗತಿತಾಯೆ ಲಕ್ಷುಮಿ ದೇವಿಯೇ ಪ ಕಾಯ ಮಮತೆಯ ಕಳೆದು ಬೇಗನೆ | ತೋಯಜಾಕ್ಷನ ತೋರಿ ಪೊರೆಯುವದಾಯ ನಿನ್ನದು ತಾಯೆ ಶ್ರೀಹರಿ | ಪ್ರೀಯೆ ನಿನ್ನನು ನಮಿಸಿ ಬೇಡುವೆ ಅ.ಪ. ಗೋಪಿ ನಂದನೆ ಹೇ ದುರ್ಗೇ | ಕಠೋರೆ ಉಗ್ರೆತಾಪತ್ರಯಗಳ ವಿನಾಶೇ | ಮೋಕ್ಷ ಪ್ರದಾತೇ ||ಶ್ರೀಪತಿಯ ಪಾದಾಬ್ಜ ಮಧುಪೆ | ಪಾಪಹರ ತವ ಪತಿಯ ನಾಮವಪ್ರಾಪಿಸುತ ದಿನದಿನದಿ ಯನ್ನನು | ಕೈ ಪಿಡಿದು ಕಾಪಾಡು ದೇವಿ 1 ಭವ ವಂದಿತೇ | ತ್ರಿಜಗನ್ಮಾತೆಹರಿಗೆ ಸಮಾಸಮವ್ಯಾಪ್ತೆ | ಹರಿಯಂಕ ಸಂಸ್ಥೇ ||ಅರಿದರಾಂಕುಶ ಪರಶು ಶಕ್ತಿ | ಧರಿಸಿ ಮೆರೆಯುವ ಹರಿಯ ರಾಣಿಯೆವಾರೆ ನೋಟದಿ ಬ್ರಹ್ಮ ಭವರಿಗೆ | ವರ ಸುಪದವಿಗಳಿತ್ತು ಪೊರೆವಳೆ 2 ಭವ ಚಾರು ಚರಣವ ತೋರು ಎನಗೆ 3
--------------
ಗುರುಗೋವಿಂದವಿಠಲರು
ತುತಿಸಲೆನ್ನೊಶವೆ ನಿನ್ನ ಶ್ರೀ ಗುರುರನ್ನ ಪ ತುತಿಸಲೆನ್ನೊಶವೆ ನಿ -ನ್ನತುಳ ಮಹಿಮ ಮಹಾ ಮತಿವಂತ ಜನರು ಸು - ಮತಿಗೆ ಸಿಲ್ಕದ ನಿನ್ನ ಅ.ಪ ಸ್ಮರಿಪ ಜನರ ಸುರ ತರು ಪಾಪಕಾಂತಾರ ನರ ಸಮ ಸಜ್ಜನ | ಶರಜನಿಚಯ ದಿನ ಪಾದ | ಸರಸಿಜ ಭಜಿಸುವ ಪರಮ ಭಕ್ತರ ಕುಮುದ | ವರ ನಿಚಯಕೆ ಸುಧಾ - ಪರಮ ಕರುಣಿಯು ಎಂದು ನಿನ್ನಯ ಪಾದ ಮೊರೆಯ ಪೊಕ್ಕೇನೊ ನಾನಿಂದು ನೀನೆ ಎನ್ನ ಮೊರೆಯ ಲಾಲಿಸು ಎಂದು ಬಿನ್ನೈಸಿದೆ ಪರಮಕೃಪಾಕರ ಪೊರೆಯೊ ಅನಾಥ ಬಂಧೂ 1 ದಯಕರ ನಿಜ - ಭಕ್ತಾ | ಮಯ ಹರ ಸುಖಸಾರಾ ಶ್ರಯವಾಗಿ ಸಂತತ | ನಯದಿಂದ ನಿಜಜನ ಭಯಕರ ಭವಹರ | ಜಯ ಜಯ ಜಯದಾತ ಜಯ ವಿಜಯಾತ್ಮಜ | ಜಯಕುಲ ದಿಗ್ವಿಜಯ ಜಯ ಕಾಲದಲಿ ನಿಜ | ಹಯಗ್ರೀವಮೂರ್ತಿಯ ದಯದಿಳೆಯೊಳು ಜನಿಸೀ | ಜನ್ಮದಿ ಮೂರ್ತಿ ತ್ರಯ ಪಾದವನೆ ಭಜಿಸಿ - ಧರಿಯೊಳು ಕ್ಷ - ತ್ರಿಯ ಕುಲದೊಳು ಜನಿಸಿ ಯುಧಿ ಭೀಮ - ಶಯನನಿಂದ ಹತನಾಗ್ಯಭüಯ ಸ್ಥಾನವನೆ ಬಯಸಿ 2 ಭೂಸುರ ವರನಾಗಿ | ಕಾಶ್ಯಪಿ ಸ್ಥಳದಲ್ಲಿ ವಾಸಮಾಡಿ ಶಿರಿ ವ್ಯಾಸ ಕೃಷ್ಣ ಪಾದೋ - ಪಾಸನ ಮಾಡುತ | ವ್ಯಾಸಮುನಿ ಆಗಿ ಭಾರ | ತೀಶ ಪ್ರತೀಕವ ವಾಸವಾಸರ ಸ್ಥಾ - ಪಿಸಿ ಯಂತ್ರೋದ್ಧಾರಾ ಶ್ರೀಶ ಮಧ್ವಮುನಿಯಾ - ಸ್ಥಾಪಿಸಿ ಅಲ್ಲಿ ವಾಸವ ಮಾಡಿ ತಾನೂ - ಪುರಂದರ ದಾಸರಾಯರಿಗೆ ಇನ್ನು - ಸುಮಂತ್ರೋಪ - ಅನುದಿನ ವಾಸಮಾಡಿದಿ ನೀನು 3 ಕ್ಷೋಣಿತಳದಿ ಕುಂಭ | ಕೋಣನಗರದಲ್ಲಿ ಕ್ಷೋಣಿದೆವೋತ್ತುಮ | ವೀಣವೆಂಕಟನಾಮಾ - ಕ್ಷೀಣಬಲ ಙÁ್ಞನ ತಾಣ | ಗೊಡದೆ ನಿನ್ನ ಜಾಣತನದಿ ನರ | ಮಾಣವಕನಂತೆ ಪಾಣಿ ಭಿಕ್ಷಾನ್ನವಾ | ಟಾಣಿ ಮಾಡುತ ನೀನು ಕ್ಷೋಣಿಪ ಮನಿಗೆ ಬಾರೇ - ನಿನ್ನ ವೀ - ಶುಭ ಲ - ಕ್ಷಣ ಬ್ಯಾರೆ ಬ್ಯಾರೇ ಇರಲು ನಿನ್ನ ಕ್ಷಣ ಬಿಡದಲೆ ಜನ ಮಣಿದು ನಮಿಸುತಿರೆ 4 ಜನಪ ನಿನ್ನಯ ಮಹ | ಘನ ಚರ್ಯವನೆ ನೋಡಿ ದಿನದಿನದಲಿ ಬಹು | ವಿನಯಪೂರ್ವಕ ಪಾದ ವನಜ ಸೇವಕÀನಾಗಿ |ತನು ಮನ ಧನ ಧಾನ್ಯ ಘನ ನಿನಗರ್ಪಿಸಿ | ನಿನ ಸಂಗವಾಗಲೂ ಜನುಮ ಇಲ್ಲೆಂಬುವ | ಘನ ಙÁ್ಞನ ಭಕುತಿಯ ಮನದಲ್ಲಿ ಯೈದುತಲೆ - ತಾನು ನಿತ್ಯ ಅನುಮಾನ ಮಾಡದಲೆ - ಇರಲು ಅವನ ಘನಸುಖ ರೂಪದಲ್ಲೆ - ಇರುವಂತೆ ಮನಪೂರ್ತಿ ಕರುಣಸಿದ್ಯನುಪಮ ಚರಿತಲ್ಲೆ 5 ಸತ್ಯನಾಮಕ ಸುತ | ಮೃತ್ಯುನಿಂದಲಿ ತಾನು ಸತ್ತುಪೋದ ವಾರ್ತೆ | ಬಿತ್ತರಿಸೆ ಲೋಕದಿ ಉತ್ತುಮ ನೀನಾಗ | ಸತ್ಯ ಸಂಕಲ್ಪವ ಗೊತ್ತು ತಿಳಿದು ಅವನ | ಮತ್ತೆ ಈ ಲೋಕಕ್ಕೆ ತತ್ಕಾಲದಲಿ ತಂದು | ಉತ್ತುಮ ಭಾರ್ಯಳ ಜತ್ತು ಮಾಡಿದ ವಾರ್ತೆಯಾ - ಕೇಳೀ ಶೈವ - ರುತ್ತುಮನಾತ್ಮಜನಾ - ಇವಾನಂತೆ ಸತ್ಯವೆಂದು ಪೇಳಿ ಮತ್ತೆ ಪೊರೆದ್ಯೊ ಜೀಯಾ 6 ಇನತೆ ಮೊದಲಾದ | ಫನತರ ನಿನ ಮಹಿಮೆ ನಿತ್ಯ | ಅನಿಮಿಷ ಮುನಿಜನ ಮನಕೆ ಸಿಲ್ಕದೆ ವೃಂದಾ - |ವನದಲಿ ನೀ ನಿಂತು ವನುತೆ ಸುತ ಧನ | ಧಾನ್ಯ ಮೊದಲಾದ ಅನುದಿನ ಸಲಿಸುತ್ತ ಜನರ ಪಾಲಿಸೊಗೋಸುಗಾ - ಹರಿಯು ನಿನಗೆ ಜನುಮಾವನಿತ್ತನೀಗ - ಅದಕೆ ನಿನ್ನ ಅನುದಿನ ತವಪಾದ ವನಜ ನಂಬಿದೆ ವೇಗ 7 ರಕ್ಷಿಸೋ ನೀ ಎನ್ನ | ಲಕ್ಷ್ಮೀರಮಣ ದೂತ ಮೋಕ್ಷಾದಿ ಪುರುಷಾರ್ಥ - | ಪೇಕ್ಷ ಪ್ರದಾಯಕ ಲಕ್ಷ ಜನರೊಳೆನ್ನ | ವೀಕ್ಷಿಸಿ ಪರಜನಾ - ಪೇಕ್ಷಾ ಮಾಡದಂತೆ | ಲಕ್ಷ್ಮೀಶ ನಾತ್ಮಜ ಭಿಕ್ಷಾನ್ನ ಬೇಡೋದು | ಲಕ್ಷಣವೇನಿದು - ಪೇಕ್ಷಾ ಮಾಡದೆ ನೀ ಎನ್ನಾ - ಕಾಯಲಿಬೇಕು ವಿಕ್ಷೀಸಿ ಙÁ್ಞನವನ್ನಾ - ಭಕುತಿ ಇತ್ತು - ರಕ್ಷಿಸು ಎಂದೆ ನಿನ್ನಾ ಇದೆ ಒಂದಾ ಪÉೀಕ್ಷೆ ಪೂರ್ತಿಸೊ ಕಲ್ಪವೃಕ್ಷ ನೀ ಎನಗೆ ಇನ್ನ 8 ಕಿಟಿಜ ಸರಿದ್ವರ | ತಟ ಕೃತ ಮಂದಿರ ಚಟುಲ ಮಧ್ವಮುನಿ | ಪಟು ಶಾಸ್ತ್ರದಿಂದಲಿ ಕುಟಿಲ ದುರ್ವಾದಿಗ | ಳ್ಥಟನೆ ಮುರಿದು ನಿಜ ಘಟನೆ ಮಾಡಿ ಪ್ರತಿ | ಭಟರಿಲ್ಲದಲೆ ನೀನು ಧಿಟನಾಗಿ ತ್ರಿಜಗದಿ - ಮೆರೆಯುತ ಶಠÀಜನರನು ತ್ವರದಿ - ಮರಿದು ಙÁ್ಞನಿ ಕಟಕ ಸುಪಾಲನದಿ ಪಟೋ ಎನಿಸಿ ಧಿಟಗುರು ಜಗನ್ನಾಥ ವಿಠಲನ್ನ ಭಜಿಸಿದೆ 9
--------------
ಗುರುಜಗನ್ನಾಥದಾಸರು
ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ ಆಲಯ ಶರಣ್ಯ ವಿಟ್ಠಲ ಪ ಹೃದಯಕಮಲ ಮಧ್ಯದಲಿ ಮುದದಿ ಖಗವನೇರಿ ಚರಿಪ ಯದುಕುಲಾಬ್ಧಿ ಜಾತ ಚಂದ್ರ ವಿಧಿಶಿವಾದಿ ಉಡುಗಣಾರ್ಚಿತ 1 ದಿಟ್ಟಭಕ್ತ ಕೊಟ್ಟ ಇಟ್ಟಗೀ ಮೆಟ್ಟಿನಿಂತಿ ಸಿಟ್ಟು ಇಲ್ಲದೆ ಹೊಟ್ಟೆ ಮನೆಯ ಮಾಡಿಕೊಟ್ಟಿ ಕೆಟ್ಟಮಾತು ನುಡಿದ ಚೈದ್ಯಗೆ 2 ಕರಗಳನ್ನೆ ಕಟಿಯಲಿಟ್ಟು ಶರಣುಬಂದ ಭಕ್ತಗೆ ಭವ ಪರಿಮಿತಿಯ ತೋರಿ ನಿರುತ ಪೊರೆಯುವಂಥ ಕರುಣನಿಧಿಯೇ 3 ಪುಂಡರೀಕ ವರದನೆಂದು ಹಿಂಡುಭಕ್ತರು ಪೊಗಳುತಿಹರೊ ಪುಂಡರೀಕ ತೋರಿಸಿನ್ನು 4 ಶ್ರೀ ನರಹರಿಯೆ ನಿನ್ನ ಗಾನ ಮಾಡಲೆಷ್ಟು ಸಾಮ ಗಾನಕೆ ನಿಲುಕದ ಮಹಿಮ ಜ್ಞಾನ ಭಕ್ತಿ ಇತ್ತು ಬೇಗ 5
--------------
ಪ್ರದ್ಯುಮ್ನತೀರ್ಥರು
ತ್ರಿಜಗ ವಂದಿತಗಾರತಿ ಎತ್ತಿರೆ ಪ ಎಳ್ಳುಂಡಲಿಗೆ ಕಬ್ಬು ಮೆಲುವವವಗೆ ಬೆಳ್ಳಿಯ ಹುರಿಗೆಜ್ಜೆಗಳ ಕಟ್ಟಿನಲಿವಗೆ ಡೊಳ್ಳಿನ ಗಣಪಗಾರತಿ ಎತ್ತಿರೆ1 ಭಕ್ತರ ಪೊರೆವವಗೆ ಉರಗ ಕುಂಡಲನ ಕುಮಾರ ಗಜವದನಗೆ ಶರಣ ಜನಕಗಾರತಿ ಎತ್ತಿರೆ 2 ದೇವತೆಗಳ ಕೈಯ ಕಪ್ಪವ ಕೊಂಬುವಗೆ ದಾವಾಗ್ನಿಯಿಂದ ಮೀರಿರುವಗೆ ಗಣೇಶಗಾರತಿ ಎತ್ತಿರೇ 3
--------------
ಕವಿ ಪರಮದೇವದಾಸರು
ದಯವು ಏತಕೆ ಬಾರದೌ ದೇವಿ ಭಯವಿಮೋಚನೆ ಭಕ್ತ ಸಂಜೀವಿ ಪ ಚರಣಕಮಲಕ್ಕೆ ಶಿರವ ಬಾಗಿದೆನೆ ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ ಕರುಣಭರಿತ ಮೊರೆಯ ಕೇಳ ದಿರು ವಿಜಯವಾಣಿ ಪರಮಕಲ್ಯಾಣಿ ಸರಿಯೆ ನಿನಗಿದು ಶರಣಜನರ ಕರುಣಾಕರಿ ಅಂಬ ಪರತರ ಬಿರುದು ಇದೆಯೇನೆ 1 ಮಾರಮರ್ದನರಸಿ ಗಂಭೀರೆ ಶಾರದಾಂಬೆಯೆ ಮೂರುಲೋಕಂಗಳಿಗೆ ಆ ಧಾರಿ ಪಾರಮಹಿಮೆಯೆ ತೋರು ಕರುಣವ ಬೇಗ ವರಗೌರಿ ಮರೆಯದಿರು ಶೌರಿ ಚಾರು ಚರಿತವ ಪಾಡಿ ಬೇಡುವೆ ಸಾರಮನದಿಷ್ಟ ಪೂರೈಸಿದ ರೌದ್ರಿ 2 ಸ್ವಾಮಿ ರಾಮನನಾಮಮಹಿಮರತಿ ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ ಗನ್ಮಾತೆ ವಿಮಲಚರಿತೆ ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು ನಾಮರೂಪರಹಿತೆ ವಿಮಲೆ ಅಮಿತಮಹಿಮಳೆ ಮಮತೆದೋರೆ 3
--------------
ರಾಮದಾಸರು
ದಾತ ದೀನನಾಥ ಧ್ಯಾನದಾಯಕ ಜಾನಕೀ ಪ್ರೀತ ಪ ಬಹುಕುಂದುನಿಂದೆ ಸರ್ವ ಅಹುದು ಅಲ್ಲ ನಿನ್ನದಭವ ಅಹಿತಸುಖದ ಪ್ರೇಮಬಿಡಿಸಿ ದಹಿಪ ಭವದ ಬಾಧೆ ಗೆಲಿಸು 1 ಬಂದ ಬಂಧ ಬಯಲುಮಾಡಿ ಕಂದನೆಂದು ಕರಪಿಡಿದು ತಂದೆ ನಿನ್ನ ಪರಮಧ್ಯಾನಾನಂದ ಪಾಲಿಸಿ ಪೋಷಿಸೆನ್ನ 2 ಕಾವದೇವ ನೀನೆ ಪತಿತಪಾವನ ತ್ರಿಜಗಸೂತ್ರಧಾರಿ ಭಾವಜಪಿತ ಶ್ರೀರಾಮ ನಿಮ್ಮ ಸೇವಕನೆನಿಸಿ ಸಲಹು ಸತತ 3
--------------
ರಾಮದಾಸರು
ದಾತ ಸನ್ಮುನಿಗಣ - ನಾಥ ಕಾಮಿತ ಕಲ್ಪವೃಕ್ಷಾ - ಕಲ್ಪವೃಕ್ಷಾ ಆಶ್ರಿತಜನದಕ್ಷಾ ಪ ಧಾತ ಮುಖ ಸುರಮುನಿಯ ಸಂತತಿ ಪ್ರೀತಿ ಪೂರ್ವಕದಿಪ್ಪ ಕಾರಣ ಜೋತಿ ವೃಂದಾವನದಿ ತಾ ನಿ - ರ್ಭೀತ ಮಹಿಮೆಯ ತೋರ್ಪಜಗದಿ ಅ.ಪ ಬಿಕ್ಷುನಾಯಕ ಸರ್ವಾಪೇಕ್ಷದಾಯಕನೆಂಬ ಬಿರಿದು ನೆಂಬ ಬಿರಿದು ಪೊತ್ತಿಹ ಪಾಪ ತÀರಿದು ಪಾದ ಪದುಮವ ವಕ್ಷೋಮಂದಿರದೊಳಗೆ ತಾನಪ - ರೋಕ್ಷಕರಿಸೀ ಸರ್ವಜನರಾ - ಪೇಕ್ಷ ಪೂರ್ತಿಸಿ ಮೆರೆವ ಗುರುವರ 1 ಕ - ಮಂಡುಲಧರ ಹಂಸರೂಪಾ ಅಮಿತ ಪ್ರತಾಪ ಕರ ಮಾ - ತ್ರಿಜಗ - ಸುಜನ ಮನ್ಮನೋ - ಪುಂಡರೀಕ ನಿವಾಸ ನಿರ್ಮಲ 2 ಕಿಟಜ ಸರಿದ್ವರ - ತಟವಾಸ ಗುರುಜಗನ್ನಾಥ ಜಗನ್ನಾಥ ವಿಠಲ ಗುಣಗಾಥ ತಟನಿ ಲಹರೀ ಮಧ್ಯ ತನ ಹೃ ತ್ಪುಟ ಸುನಾವಿಯ ಮಾಡಿ ಸಂತತ ಅಟನಗೈಯುತ ಜಗದಿರಾಜಿಪ ಚಟುಲ ವಿಕ್ರಮ ಕರುಣಸಾಗರ 3
--------------
ಗುರುಜಗನ್ನಾಥದಾಸರು
ದಾಸರು ಭಜಿಸುವೆ ನಿನ್ನನು ವಿಜಯದಾಸಾರ್ಯನೆ ಪೊರೆಯೊ ಪ ಭಜಿಸುವೆ ನಿನ್ನ ಪಾದಭಜಕಜನರ ಪಾದ ರಜದೊಳಿಟ್ಟು ನನ್ನ ರಜತಮ ಹರಿಸೊಅ.ಪ ವಿಜಯಸಾರಥಿಪ್ರಿಯ ನಿಜದಾಸ ನೀನೆಲೋ ಗುರುವೆ ಅಜಪಿತನಜಸುತ ನಿಜಲೋಕಗಳೆಲ್ಲ ಬಿಜಯ ಮಾಡಿ ನಿಜಗತಿಪ್ರದನಾರೆಂದು ನಿಜವನರಿತು ದೈವಾವೆಂದರುಹಿದ ಭೃಗುಮುನಿ1 ರಕ್ಷಿಸಬೇಕೋ ಶ್ರೀ ಲಕ್ಷ್ಮೀಶ ದಾಸನೆ ಗುರುವೆ ಪಕ್ಷಿವಾಹನನ ನೀ ವಕ್ಷತಾಡನ ಮಾಡೆ ತಕ್ಷಣ ಕ್ಷಿತಿ ಕುಕ್ಷಿಯೊಳು ಜಗದ್ರಕ್ಷಕನಾದ ಮು ಮುಕ್ಷುಗಳೊಡೆಯನೆ ನೀಕ್ಷಿಸಿದಾ ಧೀರಾ2 ದ್ವಾಪರದಲ್ಲಿ ನಿಕಂಪನೆಂದೆನಿಸಿದೆ ಮೆರೆದೆ ಶಾಪತನದಿ ವ್ಯಾಧರೂಪದಿಂದ ಶ್ರೀ ಗೋಪಾಲಗೆ ಬಾಣ ಮ್ಮಪ್ಪನೆಂದು ತ್ರಿಜಗಕೆ ತೋರ್ದೆ 3 ಉದ್ಧರಿಸಲು ನೀನುದ್ಭವಿಸಿದೆಯೋ ಮಧ್ವಪತಿಯ ಅಭಿದಾನದಿ ನೀನು ಮಧ್ವಾಗಮ ಶೋಧಿಸಿ ಸುಧೆಯ ತಂದು ಶುದ್ಧ ದುಗ್ಧರನೆಲ್ಲ ಉದ್ಧಾರಮಾಡಿ ಪ್ರ ಸಿದ್ಧಿ ಪಡೆದ ಅನಿರುದ್ಧನ ದಾಸನೆ 4 ಪುರಂದರದಾಸರ ವರ ಸುಕುಮಾರ ಧೀರಾ ಉರಗಾದ್ರಿವಾಸವಿಠಲನ ದಾಸ ಭೂಸುರನಾಗಿ ಚಿಪ್ಪಗಿರಿಯೊಳು ಪರಿಪರಿ ಸಾಧನ ತೋರಿ ಮೆರೆವ ಗುರು 5
--------------
ಉರಗಾದ್ರಿವಾಸವಿಠಲದಾಸರು
ದೇವ ನೀನಹುದೋ ದೇವರದೇವ ನೀನಹುದೋ ಪ ದೇವ ರಿಪುವನದಾವ ದುರಿತಾಖ್ಯನಾವ ನಮಿತರ ಕಾವ ಕರುಣಸಂಜೀವ ಜಿತಪೂರ್ಣಕಾಮ ಅ.ಪ ದೇವಕಿಯಲ್ಲವತರಿಸಿ ಗೋಕುಲವನ್ನು ಪಾವನವನ್ನು ಮಾಡಿ ಮಡುಹಿ ಮಾವನ ಮಧು- ರಾವನಿಯನುಗ್ರಸೇನಗಿತ್ತು ದೈತ್ಯಾಳಿಯ ಸವರಿ ಜೀವ ಸಖನಾಗಿ ಪಾಂಡವರಿಗೆ, ಪಾರ್ಥ ಸೇವೆಯಲಿ ಸಂದು ಕೀಲಿಸಿ ಕೌರವರನ್ನು ಭೂವರನ ಹಯಮೇಧಕೊಲಿದು ಬಂದಾ 1 ಧರ್ಮರಾಜನ ಯಜ್ಞತುರಗ ರಕ್ಷೆಗೆ ಕೃತ- ವರ್ಮಜರು ಕೂಡಿ ನಡಸಿ ನೀಲಾಂಕನ ಮರ್ಮವರಿತು ಸೋಲಿಸಿ ಹಂಸಧ್ವಜರನ್ನು ಮಾಮಳಿದಡರಿ ಕರ್ಮವಶದಿಂದ ಬಭ್ರುವಾಹನನ ಕೈಯ ದುರ್ಮರಣವಾದ ವಿಜಯ ಕರ್ಣರನು ನಿತ್ಯ ನಿರ್ಮಳಿಕನಹುದೊ 2 ಮುಂತೆ ನಡೆದರ್ಜುನಿಯ ಗೂಡಿ ತಾಮ್ರಧ್ವ ಜಂ ತುಡುಕಿ ಬರೆ ದ್ವಿಜನಾಗಿ ಶಿಖಿ ದಂತಿಪುರಕೆ ಬಂದರಸನ ಹಯಮೇಧ- ಮಂ ಪಾಲಿಸಿ ತ್ರಿಜಗವನು ಪಾಂಡವರಿ- ಗಿತ್ತೊಲಿದು ಸುರಪುರವ ಪೊರೆವ ಲಕ್ಷ್ಮೀಕಾಂತ ನೀನಹುದೋ 3
--------------
ಕವಿ ಲಕ್ಷ್ಮೀಶ
ದೋಷ ರಾಸಿಯಳಿದು ಪ ಭಾಸುರ ಗುಣಗಣ ಭವ್ಯ ಶರೀರ ಅ.ಪ ಚಿತ್ತ ನಿನ್ನ ಪದ ಸೇವೆಯೊಳಿರಲಿ-ಚಿಂತೆ ಇತರ ಬಿಡಲಿ ಅಂತರಂಗದಲ್ಲಾನಂದಿಸಲಿ-ಅಹಂಕೃತಿಯನ್ನೆ ಬಿಡಲಿ ಪಂಕಜ ಪಂಥವ ಪಾಲಿಸೊ ಪರಮ ಪುರುಷ ಹರಿ 1 ಅರಿಷಡ್ವರ್ಗಗಳಟವಿಯ ಖಂಡಿಸು-ಆನಂದದಲಿರಿಸು ದುರ್ಮತಿಯನೆ ಬಿಡಿಸು ಸನ್ನುತ ನಿರುತವು ನಿಲ್ಲಿಸೋ ನೀರಜಾಕ್ಷ ಹರಿ2 ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ ಭಜಕರ ಪಾವನ ಭವನುತ ಚರಣ-ಋಜಗಣನುತಾಭರಣ ವಿದಾರಣ ಕೋವಿದನುತ ಹರಿ 3
--------------
ವಿಜಯದಾಸ