ಒಟ್ಟು 4215 ಕಡೆಗಳಲ್ಲಿ , 121 ದಾಸರು , 2577 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ತಾತ್ವಿಕ ಕೃತಿಗಳು ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಪ ರಾಮಾನುಜ ಬೆಳೆದ ಧರೆಯೊಳಗೆ ಅ.ಪ ನಾರದ ಬಿತ್ತಿದ ನಾರಾಯಣ ಬೀಜಕೆ ಧೀರಾಂಬರೀಷನು ಗೊಬ್ಬರವಾದ ಕು- ಮಾರ ಪ್ರಹ್ಲಾದನು ನೀರಾಗೆರೆದ ಆ ರುಕುಮಾಂಗದ ಗಾಳಿಯಾದ1 ನಾರಾಯಣನೆಂಬ ಬೀಜಮಂತ್ರವು ಕು- ವರ ಧ್ರುವನ ಕಾವಲಿನಲ್ಲಿ ಸರಸರ ಬೆಳೆಯಿತು ಆಳುವಾರರು ಭೂ ಸುರ ಭಾಗವತರುಗಳಲಿ 2 ರಮಾನುಜನಿದರ ಒಕ್ಕಣೆಮಾಡಿ ಸಮಾನತೆಯಿಂದ ಹಂಚಿದನು ಶ್ರಿಮಣಿಯಲ್ಲಿ ತುಂಬಿದನು ಸಮಾನ ವೇದವೆನಿಸಿದನು 3 ಹಬ್ಬಿತು ಹರಡಿತು ಧರೆಯೆಲ್ಲ ಉಬ್ಬಿತು ಉಲಿಯಿತು ಗಿರಿಯೆಲ್ಲ ಅಬ್ಬಬ್ಬ ಜಾಜಿಪುರೀಶ ಕೇಶವನಾಮವು ಹಬ್ಬವಾಯಿತು ನಮಗೆಲ್ಲ 4
--------------
ನಾರಾಯಣಶರ್ಮರು
(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
(ಈ) ಲೋಕನೀತಿಯನ್ನು ಕುರಿತ ಕೃತಿಗಳು ಏನಯ್ಯ ದೊರೆಯೆ ನಿನಗಾನಂದವೆ ದೊರೆಯೆ ಪ ಮಾನಿತ ಜನರವಮಾನವ ನೋಡದೆ ಹೀನ ಜನರ ನುಡಿ ನೀನಿಲಿದಾಲಿಪುದು ಅ.ಪ ಜಾತಿಧರ್ಮವಿಲ್ಲಾ ಶಾಸ್ತ್ರದ ರೀತಿ ನಡತೆಯಿಲ್ಲ ಮಾತಿದು ಪುಸಿಯಲ್ಲಾ ಮಾನದ ಭೀತಿಯು ಮೊದಲಿಲ್ಲಾ ನೀತಿಯನರಿಯದ ಕೋತಿಗಳಂದದ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು ದೋಷ ವಿವರ್ಜಿತರನ್ನು ಜರಿದು ಲಜ್ಜೆಯ ನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಗಿಎ ಕುಲ ಕಜ್ಜಳರವಮತಿಗುಜ್ಜುಗಿಸುತ್ತಿಹ 2 ಗಂಡಬಿಟ್ಟಿಹರು ಗರತಿಯ ಕಂಡು ನಗುತಿಹರು ಮಿಂಡರ ಬೆರೆದಿಹರು ಮೇಲತಿ ದಿಂಡೆಯರಾಗಿಹರು ಭಂಡತನದಿ ಪರಗಂಡಸರೊಳು ಸಮ- ದಂಡೆಯೆನಿಸಿ ಬಲು ಚಂಡಿಸುತಿರ್ಪರೋ 3 ಕೇಳು ಹಂದೆಯಾಳು ಕ್ಲೇಶವ ಪೇಳಲು ಮತಿತಾಳು ಕೀಳುಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಕಾಳಮೂಳಿಯರ ಮೇಳದಿ ಹಿಗ್ಗುವ ಬಾಳುಗೇಡಿ ಜನರೊಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀಪುಲಿಗಿರಿಯೊಳು ನೆಲೆಯಾದ ಸಿರಿವರ ನಿಜಪಾದ ಸೇವೆಯ ಕರುಣಿಸು ಬಹುಮೋದ ಶರಣಾಭರಣ ನಿಜಕರುಣವ ತೋರಿಸು ವರದವಿಠಲ ದೊರೆ ವರದದಯಾನಿಧೆ 5
--------------
ವೆಂಕಟವರದಾರ್ಯರು
(ಈ) ಸರ್ವದೇವತಾಸ್ತುತಿಗಳು 1. ಶಂಕರ ಭಾಗವತಾಗ್ರೇಸರಾ ಶಿವಶಂಕರ ಭಾಗವತ ಪ್ರಿಯಂಕರ ಪ ಯೋಗಿ ಹೃತ್ಪದ್ಮಸ್ಥಿತ ಆಗಮನುತ ವಿಶ್ವನಾಥ ಶ್ರೀಗಣಪತಿ ಷಣ್ಮುಖ ಪಿತ ಭಾಗ್ಯದಾತ ಪ್ರಖ್ಯಾತ ಅ.ಪ ಬಾಲಚಂದ್ರಶೇಖರ ಹರ ಭವಹರ ಕಾಲಕಾಲ ಕಲ್ಮಷಹರ ಕರುಣಾಕರ ಶೂಲಪಾಣಿ ಡಮರುಗಾಕರ ಬಾಲಗೊಲಿದ ಭಸ್ಮಧರ ಶ್ರೀಲಲಿತಾ ಮನೋಹರ ನೀಲಕಂಠ ಮಹೇಶ್ವರ 1 ರಾಮನಾಮ ಬೋಧಕ ಭಕ್ತಪ್ರೇರಕ ಪ್ರೇಮರೂಪ ತ್ರ್ಯಂಬಕ ತ್ರಿಪುರಾಂತಕ ವಾಮದೇವ ವರಗಿರೀಶ ಕಾಮವೈರಿ ಕೃತ್ತಿವಾಸ ಶ್ರೀಮಜ್ಜಾಜಿಕೇಶವ ಸ್ವಾಮಿ ಭಜನದಾಯಕವರ 2
--------------
ಶಾಮಶರ್ಮರು
(ಉ) ಗುರುನಮನ ಶ್ರೀ ರಾಘವೇಂದ್ರರು ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ ಪ ಕರುವು ತಾಯನು ನೋಡಬರಲೊಡೆಕರೆದುಕೊಳ್ಳದೆ ದೂಡಬಹುದೆಭರದಿ ದರುಶನಕೆಂದು ಧಾವಿಸೆಬರಲು ಬರಗೊಡದಂತೆ ಮಾಡಿದೆ 1 ದ್ರೋಹ ಮಾಡಿದೆನೇನು ನಿಮ್ಮೊಳುದ್ರೋಹ ಮಾಡಿದುದನ್ನು ತಿಳಿಯೆನುದ್ರೋಹಿಯಾದಡೆ ಕ್ಷಮಿಸದೆನ್ನನು ಸ್ನೇಹದಿಂದೆನ್ನೆತ್ತಿಕೊಳ್ಳದೆ 2 ಹಣದೊಳಾಕೆಯನಿಟ್ಟೆನೆಂದೊಡೆಹಣವು ಸಂಸಾರಿಗಗೆ ಬೇಡವೆಸೆಣಸಿ ಗದುಗಿನ ವೀರನಾರಾಯಣಭಕುತರ ಸಲಹದೆ 3
--------------
ವೀರನಾರಾಯಣ
(ಉ) ರುದ್ರದೇವರು ನಮೋ ಪಾರ್ವತೀಪತಿ ನುತಜನಪರ ನಮೋ ವಿರೂಪಾಕ್ಷ ಪ ರಮಾರಮಣನಲ್ಲಮಲ ಭಕುತಿ ಕೊಡು ನಮೋ ವಿಶಾಲಾಕ್ಷ ಅ.ಪ ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷಫಾಲನೇತ್ರ ಕಪಾಲ ರುಂಡಮಣಿ ಮಾಲಾಧೃತ ವಕ್ಷಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ 1 ವಾಸವನುತ ಹರಿದಾಸ ಈಶ ಕೈಲಾಸವಾಸ ದೇವದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವಭಾಸಿಸುತಿಹುದಶೇಷ ಜೀವರಿಗೆ ಈಶನೆಂಬ ಭಾವಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ 2 ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೊ ಸರ್ವತ್ರಹತ್ತಿರ ಕರೆದು ಅಪತ್ಯನಂದದಿ ಪೊರೆಯುತ್ತಿರೊ ತ್ರಿನೇತ್ರತೆತ್ತಿಗನಂತೆÉ ಕಾಯುತ್ತಿಹ ಬಾಣನ ಸತ್ಯದಿ ಸುಚರಿತ್ರಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತೃ ಕೃಪಾಪಾತ್ರ3
--------------
ವ್ಯಾಸರಾಯರು
(ಉ) ಲೋಕನೀತಿ ಕುರಿತ ಕೀರ್ತನೆಗಳು ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ ಬಾಳುವ ಮಗನನು ಕೋಳುವಿಡಿದುದು ಯಮನ ನಾಳಿದೊಡೆಯ ವೇಲಾಪುರದರಸಾ ಪ ಪತಿಯನು ನೀಗಿದ ಸತಿಮಾದಮ್ಮನು ಸುತನಿಂ ಬದುಕುವೆನೆಂದೀ ಊರೊಳು ಅತಿ ತಿರಿತಂದೋವುತಲಿದ್ದಳು ಸುತ ಅಚ್ಯುತ ಸಲಹಯ್ಯಾ 1 ಉರಿಯೊಳು ಬಿದ್ದಂತೊರಲಿ ಪೊರಲಿ ವೋ ಹರಿ ಹರಿ ಹರಿ ಯೆಂದುರುಳಿ ಬಡಿದುಕೊಳ್ಳೇ ದುರಿಯಶ ವೊಡೆಯಗೆ ಬರುವುದೆಂದು ನರ ಹರಿ ರಕ್ಷಿಪನೆಂದೊರೆದೆನು ಹರಿಯೆ 2 ಸತ್ತಮಗನ ನೀ ತಂದಿತ್ತುದಿಲ್ಲವೇ ಹೇ ಕತರ್ುೃವೆ ಸಾಂದೀಪೋತ್ತಮನಿಗೆ ಅಂದು ಉತ್ತರೆಯೊಡಲೊಳು ಅತ್ತು ಶಿಶುವು ಸಾ ವುತ್ತಿರಲುಳುಹಿದೆ ಚಿತ್ತಜನಯ್ಯಾ 3 ಇರಿದಪಮೃತ್ಯು ಪೊತ್ತಿರಿದಪವಾದವು ಉರುಳಿದೆ ನೋಡುತ್ತಿರುವರೆ ಸುಮ್ಮನೆ ಅರಿಯದಂತಿರ್ದಡೆ ಪರಿಪಾಲಿಪರಾರು ವರಮೃತ್ಯುಂಜಯ ಕರುಣಾಕರನೇ 4 ಮರಣವನೈದಿದ ತರಳ ನಂಜುಂಡನ ಕರುಣಿಸದಿರ್ದಡೆ ಶಿರವನರಿದು ನಾ ಚರಣದೊಳಿಡುವೆನು ದುರಿತಬಾಹುದು ನಿನ ಗರಿಯದೆ ವೈಕುಂಠವಿಠಲ ಚೆನ್ನಿಗನೇ 5
--------------
ಬೇಲೂರು ವೈಕುಂಠದಾಸರು
(ಉ) ವಿಶೇಷ ಸಂದರ್ಭದ ಹಾಡುಗಳು 486 (1) ಹೆಜ್ಜಾಜಿಕೇಶವಸುಪ್ರಭಾತ ಏಳಯ್ಯ ಜಾಜಿಪುರೀಶ ಕೇಶವರಾಯ ಬೆಳಗಾಯಿತೇಳಯ್ಯ ಎದ್ದುರುಳಯ್ಯ ಪ ಕೋಟೆ ಚನ್ನಿಗನೆಂದು ಹೆಸರಾದವನೆ ಪೇಟೆ ಚನ್ನಿಗನಾಗಿ ನೆಲೆಸಿರುವವನೆ ಏಳಯ್ಯ ಬೆಳಗಾಯಿತು 1 ಗರುಡ ವಾಹನನಾಗಿ ಕಣ್ಗಾವಲಾಗಿಹನೆ ಕು- ದುರೆ ವಾಹನನಾಗಿ ಊರೆಲ್ಲ ಕಾಯುವನೆ ಏಳಯ್ಯ ಬೆಳಗಾಯಿತು 2 ಶ್ರೀದೇವಿ ಭೂದೇವಿಯರ ನಡುವೆ ಅರಸಾಗಿ ಬಾಧೆಹೊತ್ತಾಜನರ ಹಾರೈಸುತಿರುವನೆ ಏಳಯ್ಯ ಬೆಳಗಾಯಿತು 3 ನಾರದರು ತುಂಬುರರು ದೇವತೆಗಳೆಲ್ಲ ಎ- ದುರಲಿ ನಿಂದು ವಂದಿಸುತಿಹರಲ್ಲ ಏಳಯ್ಯ ಬೆಳಗಾಯಿತು 4 ವಂದಿ ಮಾಗಧರು ಜಯಘೋಷ ಮಾಡುತ್ತ ಮಂದಿ ಮಂದಿಯೆ ನಿಂತು ನುತಿಸುತ್ತಿಹರು ಏಳಯ್ಯ ಬೆಳಗಾಯಿತು 5 ಭಂಟರು ಬಂದು ಮಂಗಳರವದಿಂದ ಗಂಟೆ ಜಾಗಟೆಗಳ ನುಡಿಸುತಲಿಹರು ಏಳಯ್ಯ ಬೆಳಗಾಯಿತು 6 ಮುನ್ನಿನ ರವಿಯು ಉದಯಿಸುತಿರುವನು ಹೊನ್ನಿನ ಕಿರಣಗಳ ಪಸರಿಸುತಿರಿವನು ಏಳಯ್ಯ ಬೆಳಗಾಯಿತು 7 ಬೀದಿಯ ಜನರೆಲ್ಲ ಬೇಗ ಬೇಗನೆ ಎದ್ದು ಹಾದಿಯ ಸಿಂಗರಿಸಿ ಕಾಯುತಲಿರುವರು ಏಳಯ್ಯ ಬೆಳಗಾಯಿತು 8 ಪೇಟೆ ಚೆನ್ನಿಗನ ಕಡೆಯಿಂದ ದಂಡೊಂದು ಭ ರಾಟೆ ವಾದ್ಯಗಳ ನುಡಿಸುತ್ತ ಬರುತಿಹುದು ಏಳಯ್ಯ ಬೆಳಗಾಯಿತು 9 ಕೊಂಬು ಕಹಳೆಗಳ ಊದುವರು ಕೆಲವರು ತುಂಬು ಮಂತ್ರಗಳ ಹೇಳುವರು ವೈಷ್ಣವರು ಏಳಯ್ಯ ಬೆಳಗಾಯಿತು 10 ಸುಮಂಗಲೆಯರು ಕಳಸ ಹೊತ್ತಿಹರು ಸುಮ್ಮಾನದಿ ಭಕುತರು ಕುಣಿಯುತಲಿಹರು ಏಳಯ್ಯ ಬೆಳಗಾಯಿತು 11 ಅಭಯ ಹಸ್ತನೆ ಏಳ ಕಮಲವದನನೆ ಏಳು ಉಭಯ ಜನರುಗಳೆಲ್ಲ ದರುಶನಕೆ ಕಾದಿಹರು ಏಳಯ್ಯ ಬೆಳಗಾಯಿತು 12 ನಿನ್ನ ಭಕ್ತರು ನಿಂತು ಧ್ಯಾನ ಮಾಡುತಲಿಹರು ಎನ್ನರಸ ಜಾಜಿಪುರ ವರದ ಕೇಶವರಾಯ ಏಳಯ್ಯ ಬೆಳಗಾಯಿತು 13
--------------
ನಾರಾಯಣಶರ್ಮರು
(ಊ) ಯತಿವರರು ಶ್ರೀ ಜಯತೀರ್ಥರು ಎದುರಾರೊ ಗುರುವೆ ಸಮರಾರೊ ಪ ಮದನ ಗೋಪಾಲನ ಪ್ರಿಯ ಜಯರಾಯ ಅ.ಪ ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ ಮಾಯ್ಗಳುಅಡವಿಯೋಳಡÀÀಗೋರು ನಿಮ್ಮ ಭೀತಿಯಲಿ 1 ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆಪಟುತರ ತತ್ವ ಪ್ರಕಾಶಿಕೆಂತೆಂಬಚಟುಲಾ ತಪದಿಂದ ಖಂಡಿಸಿ ತೇಜೋ-ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ2 ಅಮಿತ ದ್ವಿಜಾವಳಿ ಕುಮುದಗಳರಳಿಸಿವಿಮತರ ಮುಖ ಕಮಲಂಗಳ ಬಾಡಿಸಿಸ್ವಮತರÀ ಹೃತ್ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ 3 ವೇದ ಶಾಸ್ತ್ರಗಳೆಂಬೊ ಶೃಂಗಗಳಿಂದ ಸು-ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ವಬೋಧನೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆಆದರದಲಿ ಕೊಟ್ಟ ಯತಿಸುರಧೇನು 4 ವ್ಯಾಸ ಸೂತ್ರಗಳೆಂಬ ಮಂದರವನು ವೇದರಾಸಿಯೆಂಬ ವಾರಾಶಿಯೊಳಿಟ್ಟುಶ್ರೀ ಸರ್ವಜ್ಞರ ವಾಕ್ಯ ಪಾಶದಿ ಸುತ್ತಿಭಾಸುರ ನ್ಯಾಯಸುಧಾ ಪಡೆದೆ ಯತೀಂದ್ರ5 ವನಜನಾಭನ ಗುಣಮಣಿಗಳು ಸರ್ವಜ್ಞಮುನಿಕೃತ ಗ್ರಂಥಗಳವನಿಯೊಳಡಗಿರೆ ಸ-ಜ್ಜನರಿಗೆ ಟೀಕಾಂಜನದಿಂದ ತೋರಿಸಿಘನ ಸುಖಸಾಧನ ಮಾಡಿದ್ಯೊ ಧೀರ 6 ಅರ್ಥಿಮಂದಾರ ವೇದಾರ್ಥ ವಿಚಾರ ಸ-ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ-ತೀರ್ಥಕರ ಜಾತ ಜಯತೀರ್ಥ ಯತೀಂದ್ರ 7
--------------
ವ್ಯಾಸರಾಯರು
(ಋ) ಕ್ಷೇತ್ರವರ್ಣನೆ (1) ಮೇಲುಕೋಟೆ ಯತಿರಾಜ ಸಂಪತ್ಕುಮಾರಾ ಸ ತ್ಕøತದೊಳಗಿರಿಸೆನ್ನ ಧೀರಾ ಪ ಸತತ ಶ್ರೀಮದ್ವೈಷ್ಣವರನಾ ನುತಿಸುವಾನಂದ ದೊಳಗಿರಿಸೈ ಪತಿತಪಾವನ ಕಂಕಣಾಧ್ರುತ ಕ್ಷಿತಿಯ ಪಾಲ ಮಹಾನುಭಾವನೆ 1 ನೋಡಲಿಚ್ಚೈಸಿ ನಾಂ ಬಂದೆ ನನ್ನ ಮೂಢಾಕೃತದೊಳು ನಿಂದೆ ಕೇಡುಗಳು ಬಂದೆನ್ನ ವಿಧ ವಿಧ ಬಾಧೆ ಪಡಿಸುತ್ತಿರುವದಿದೆಕೊ ನೋಡಿ ಸುಜನರ ಕೂಡಿ ಭಜನೆಯ ಮಾಡುವೆನು ಶ್ರೀಮಾಧವಾಗ್ರಣಿ 2 ತುಲಶಿಮಣಿಹಾರ ಲೀಲಾ ಸ ತ್ಫಲತಂತ್ರ ದಾಸಾನುಕೂಲಾ ಕಾಲಕಲನಹುದೊ ಶ್ರೀಮನ್ ಬಾಲಬ್ರಹ್ಮಚಾರಿ ಮದ್ಗುರು ಮೇಲುಕೋಟೆಯೊಳಿರುವೊ ನಿಜವರ ಲೀಲಾಮಾನುಷವಿಗ್ರಹನೆ ನಿಜ ಯತಿರಾಜ ಸಂಪತ್ಕುಮಾರಾ 3
--------------
ಚನ್ನಪಟ್ಟಣದ ಅಹೋಬಲದಾಸರು
(ಋ) ತಾತ್ತ್ವಿಕ ಕೃತಿಗಳು ಜಗವ ಪೆತ್ತಿಹ ಪ್ರಭು ನೀನಯ್ಯ ಶ್ರೀರಂಗದ ವಿಜಯ ಪ ಸಾಸಿರ ಶೀರ್ಷನೆ ಸಾಸಿರನೇತ್ರನೆ ಭಾಸಿಸುವಾನಂತ ಪಾದನೆ ಹಸ್ತನೆ 1 ಆದಿಮಧ್ಯಾಂತರಹಿತ ಅಸಂಖ್ಯನಾಮನೆ ಆಧಾರಮೂರುತಿ ಸಾಧುಸಂರಕ್ಷಕ 2 ಆಖಿಲಾಂಡಕೋಟಿ ಬ್ರಹ್ಮಾಂಡ ನಾಯಕನೆ ಸಕಲಚರಾಚರ ಕರ್ತೃವು ನೀನೆ 3 ಚರಂಗಳೆಲ್ಲ ಯೀ ಭೂಮಿತಳವೋ ಪರಮನಾಭಿಯೆ ಆಕಾಶವಯ್ಯ 4 ಶಿರವೇ ವೈಕುಂಠ ಕವಿಗಳೆ ದಶದಿಕ್ಕು ಉರುತರ ಮನಸೇ ಮನ್ಮಥನಹುದು 5 ಹರಿಯ ಪಾಶ್ರ್ವಂಗಳೆ ಹಗಲು ರಾತ್ರಿಗಳು ಪರಮವೇದಂಗಳು ಸಕಲಶರೀರವು 6 ಮುಖ ಭುಜ ತೊಡೆ ಪಾದಗಳಲಿ ವರ್ಣಂಗಳ ಸುಕರದಿ ಪಡೆದ ಭೂಸೂತ್ರಧಾರಿಯು ನೀಂ7 ಇಂದ್ರ ಮೊದಲಾದ ದೇವರೆಲ್ಲ ನಿನ್ನಯ ಮುಖ ಚಂದ್ರಸೂರ್ಯರ ಕಣ್ಣಿನಿಂದ ಪಡೆದಾತನೆ 8 ಮಗುವಾದೆನ್ನ ಪಿಡಿ ಮೂಜಗದೊಡೆಯ ಹಗರಣ ಹರಿಯೊ ಜಾಜಿಕೇಶವ 9
--------------
ಶಾಮಶರ್ಮರು
(ಋು) ಬ್ರಹ್ಮ ಕಂಜಲೋಚನ ಪ್ರಿಯಾ | ಮಧ್ವಾಖ್ಯರಾಯಾ | ಸಂಜೀವಧರಣ ಧನಂಜಯ ಪೂರ್ವಜ | ಅಂಜದ ದುರ್ವಾದಿ ಭಂಜ ಪೂಭಂಜನ ಪ ಯಾಗಾಭಿಮಾನಿಗಳನು | ಯೋಗದಿಂದಲಿ ಪಡೆದಾ | ಆಗಮತತಿ ವಂದ್ಯ ಅನಿಂದ್ಯಾ | ಭಾಗತ್ರಯದಲ್ಲಿ ವಿ | ಪೆತ್ತಾಸೆ ಚಿತ್ತ | ಭಾಗವೆ ನಿನ್ನ ವೈ | ಭೋಗದ ಚರಣಕೆ | ಸಾಗರ ಹಾರಿದ ಹೇ ಗುಣಪೂರ್ಣನೆ | ರಾಗ ಭಕುತಿಯಿಂದ ಭೋಗದೊಳಗೆ ಮೇಲು | ಬಾಗಿಲ ಸಾರುವ ವೇಗವನೀಯೋ 1 ನಿತ್ಯ ಪ್ರವಾಸ ರೂಪಾ | ವ್ಯಕ್ತಿ ಜ್ಞಾನ ಪ್ರತಾಪಾ | ಸುತ್ತು ತುಂಬಿದೆ ಕೀರ್ತಿ ಇತ್ತು ಸಂತತಾ | ಸ್ಛೂರ್ತಿ ಕಿತ್ತಿ ಬಿಸಾಟು ಪಂಕಾ | ನಿಷ್ಕಲಂಕಾ | ರಿಪುಬಲ | ಕತ್ತರಿಸಿದಿ ಭೀಮಾ | ಉತ್ತಮನೆಂಬೋದೀ ಉತ್ತರ ಬರಲಿ2 ದುರುಳ ಸಮೂಹವೆಂಬೋ | ಸ್ಮರನಾ ನಿನ್ನಯ ಮೈಗೆ ಈ ಕೈಗೆ | ಭರದಿಂದ ಸೋಂಕಲು | ವರಗಲ್ಲಿನ ಮೇಲೆ ವರಸಿದಂತಾಗುವದೊ ಇದಹುದೋ | ಅರುಹಿದ ಆನಂದ | ವರ ಮುನಿಯೇ ವಿ | ಸ್ತರ ಕರುಣಾಂಬುಧಿ ವಿಜಯವಿಠ್ಠಲನ್ನ ಚರಣವ ತೋರಿಸಿ ತೊರೆಯಯ್ಯಾ ಪ್ರಾಣಾ 3
--------------
ವಿಜಯದಾಸ
(ಏ) ಮಧ್ವಾಚಾರ್ಯ ಇದು ನಿನಗೆ ಬಲು ಚಂದವಾಗಿದೇನೋ | ಬಾದರಾಯಣನ ಮೆಚ್ಚಿಸಿ ಸೇವೆ ಮಾಡಬೇ | ಕಾದರೂ ಮತ್ತಾವ ಪರಿಯಿಲ್ಲವೇ | ಭೋದವಾಗದಂತೆ ಇದ್ದದ್ದೇನು ಬಗೆ 1 ಸಂಪುಟಾಕಾರವನು ಧರಿಸಿ ಅಲಂಕಾರ | ಸಂಪತ್ತಿನಿಂದ ಯತಿಗಳ ಕೈಯ್ಯಲಿ | ಸೊಂಪಾಗಿ ಮಿಗೆ ಪೂಜೆ ಕೊಳುತ ಪೊಗಳಿದ ಜನಕೆ | ತಂಪಾಗಿ ಗುರು ಶ್ರೀ ಮದಾಚಾಯರ್ಸ 2 ಪೆಟ್ಟಿಗೆಯಂದದಲಿ ಒಪ್ಪುವನೆಂದದಕೆ | ದಿಟ್ಟವಾಯಿತು ದಾಸರು ನುಡಿದುದು | ವಿಷ್ಣುತೀರ್ಥರಿಂದ ಆರಿಸಿ ಬಂದ | ವಿಜಯವಿಠ್ಠಲ ವೇದ | ವ್ಯಾಸನಂಘ್ರಿವಾರಿಜ ಮಧುಪಾ3
--------------
ವಿಜಯದಾಸ
(ಏ) ವಿಶೇಷ ಸಂದರ್ಭದ ಹಾಡುಗಳು (1) ಶ್ರೀ ಶೃಂಗೇರಿ ಸ್ವಾಮಿಗಳ ಜಯತಿಯ ಮೆರವಣೆಗೆ ಗುರುವೆ ಪೂಜಿಪೆ ನಿಮ್ಮಯ ಚರಣಗಳನೂ ಪ ದರುಹಿನೊಳಗೆನ್ನನಿರಿಸಿ ಪಾಲಿಸೊ ದುರಿತದೂತವಿಚಾರ ಶ್ರೀಮದ್ಗುರು ಅ.ಪ ಶ್ರೀಸರಸ್ವತಿಸುಪ್ರಸನ್ನ ವಿಶೇಷ ದಿವ್ಯಪಾದಾಬ್ಜ ಕುಶಲನೆ ಬೇಸರಾಂತಕಮಾದ ಶಾಸ್ತ್ರಾಭ್ಯಾಸ ನಿಜಸನ್ಯಾಸಿ ಕಾರಣ 1 ವೇದನಾಲ್ಕು ಪ್ರಣವ ಪ್ರಸಾದ ವಿದ್ಯ ಸಬೋಧದಾಯಕ ಆದಿಗುರು ಶೃಂಗೇರಿಮಠವೆಂದೋದಿಹೇಳುವುದಾದ ಕಾರಣ 2 ರಾಜಸೋಮಿ ಜಗದ್ಗುರು ಜಯ ಆದಿ ಬೀಜಸಪೂಜ ದೈವಸಮಾಜ ಸತ್ಯಸಭೋಜ ಕಾರಣ 3 ರಾಜ ರಾಜ ಸಮಾಜದೊಳು ದುರ್ಬೀಜ ವಸ್ತುಗಳಿಡಲು ನಿಜಯತಿ ರಾಜಧಾನಿಗೆ ರಮ್ಯವಾದ ಸುವಸ್ತು ಪುಷ್ಪಗಳಾದಕಾರಣ 4 ಕುಂಪಿಣೀಧೊರೆಯ ನೀನೆ ಪರಮಪದನೆಂದೊಗಳಿ ಇಂಪಾದ ಸವಾರಿಯೆದುರಿಗೆ ದಂಪತಿಗಳಡಿಯಾದ ಕಾರಣ 5 ಎಲ್ಲ ದೇಶದ ರಾಜರೆಲ್ಲರು ಬಲ್ಲ ಗುರು ನೀನೆಂದು ನಿಮಗತಿ ಬಿಲ್ಲು ಬಾಣಗಳಿತ್ತು ಗುರುತುಗಳುಳ, ಸತ್ಯಸಮಾಜಭೋಜನೆ 6 ಆನೆಕುದುರೆಗಳೆತ್ತಲೆತ್ತಲು ಮತ್ತೆ ಮುತ್ತಿನ ತೊಂಪೆ ವೈಭವ ಏನು ಸಂಭ್ರಮದಿಂದ ಬಂದೆಯೊ ಭಾನುಕೋಟಿಪ್ರಕಾಶ ಕಾರಣ 7 ವೀರಶೈಯ್ಯಾಚಾರ ರತ್ನ ತಿರಿವುಮುತ್ತಿನಹಾರ ನಿರ್ಗುಣ ಧೀರ ತತ್ವವಿಚಾರ ಕಲ್ಮಷದೂರ ಅದ್ವಯಸಾರ ಕಾರಣ8 ಗೌರ್ನಮೆಂಟಿನೊಳಿತ್ತ ಸತ್ಯಾ ಮುಖ್ಯ ಜನರಲ್ ಬಾವುಟಗಳೂ ಶೌರಿ ತಮ್ಮ ಸವಾರಿಯೊಳಗದು ಫಾರಮೆಂಟಿನನೊಳಿರುವ ಕಾರಣ9 ಪಾದಸೇವೆಗೆ ಬರುವ ಭಕ್ತರ ಪಾಪಅಂತಕ ಪರಮಹಂಸನೆ ದೀಪವಿಲ್ಲದ ಬೆಳಕು ತಮ್ಮೊಳಗಾ ಪಯೋನಿಧಿ ಕಂಡ ಕಾರಣ10 ದಿಕ್ಕು ದೇಶದಿ ನಿಬಿಡಮಾಗಿದೆ ನಿಮ್ಮ ನಾಮಜಯಂತಿಯುತ್ಸವ ಮುಕ್ತಿಯಂಬೆನಗೀವ ನಿಜಪದ ಮೋಕ್ಷದಾಯಕನಾದ ಕಾರಣ11 ಕೈವಲ್ಯ ಪರಶಿವನೆಂಬೊ ನಿಶ್ಚಯ ಬಲ್ಲೆನೆಂಬುವ ಭಾಗ್ಯವಂ ಜನಕಿಲ್ಲಿ ಕೊಟ್ಟಕಾರಣ 12 ವಿಜಯನಗರಕ್ಕೈದ ಸಂಪದ ಅಜನು ಪೊಗಳಲ್ ತೋರಿಸಾಕ್ಷಾತ್ ದ್ವಿಜಪ್ರಜಾವತಿ ನಿಮ್ಮಭಜಿಸುವೆ ನಿಜಗುರು ನೀನಾದ ಕಾರಣ 13 ಸೀಮೆ ಭೂಮಿಯ ಜನಗಳೆಲ್ಲರು ಕಾಮಿತಾರ್ಥವ ಬೇಡುತಿರ್ಪರು ಸ್ವಾಮಿಯಹುದೋ ಜಗದ್ಗುರು ಶೃಂಗೇರಿಮಠದೊಳಗಿರುವಕಾರಣ 14 ವೀರಕಂಕಣ ಧೀರ ತತ್ವವಿಚಾರ ಶುಭಕರ ಧೀರನಹುದೆಲೊ ದಾರಿತೋರಿದ ಗುರುವು ತುಲಸೀಹಾರ ಕಂಟಕದೂರ15
--------------
ಚನ್ನಪಟ್ಟಣದ ಅಹೋಬಲದಾಸರು
(ಏ) ವಿಶೇಷ ಸಂದರ್ಭದ ಹಾಡುಗಳು ಬರಗಾಲ ಮತ್ತು ಯುದ್ಧವನ್ನು ಕುರಿತು ನಿರ್ದಯನಾಗಬೇಡವೋ ಭಗವಂತ ದುರ್ದಿನ ದೂರಮಾಡೋ ದೇಶಕ್ಕೆ ಪ್ರಶಾಂತ ಪ ಮಳೆಗಾಲ ಮರೆತುಹೋಗಿ ಬೇಸಗೆ ಬೆಳೆದು ಬಂದು ನೆಲವೆಲ್ಲ ದುರ್ಭಿಕ್ಷ ತಾಂಡವವಾಡುತಿದೇ 1 ಕೆರೆಕಟ್ಟೆತೊರೆಭಾವಿ ಹೊಳೆಯಲ್ಲಿ ನೀರಿಲ್ಲ ಧರೆಯಲ್ಲಿ ತೃಣವಿಲ್ಲ ಬರಿಗಾಡಾಯ್ತೋ 2 ಹೊಲಗದ್ದೆ ತೋಟಗಳ ಬೆಳೆಯೆಲ್ಲ ಒಣಗಿತು ಫಲವಿಲ್ಲ ಜನವೆಲ್ಲ ಗೋಳಾಡುತಿಹರೋ 3 ಅನ್ನಾಹಾರಗಳಿಲ್ಲ ಗೋಗಳಿಗೆ ಗ್ರಾಸವಿಲ್ಲ ಚಿನ್ನದಂಥ ಮಕ್ಕಳೆಲ್ಲ ಉಣಿಸಿಲ್ಲದಿಹರೋ4 ಧನಿಕರ್ಗೆ ಧನದಾಸೆ ಬಡವರ್ಗೆ ಕೂಳಿಲ್ಲ ದಿನಕಳೆವುದು ಕಷ್ಟವಾಗಿ ಬರಗಾಲ ಬಂತೋ 5 ಕಳವು ಕೊಲೆಯು ದಂಗೆ ದಾರಿದರೋಡೆಯು ಉಳಿಗಾಲ ಬರಲಿಲ್ಲ ಯುದ್ಧದ ಭಯವು6 ಒಂದೊಂಬತ್ತಾರೈದು ಹತ್ತು ಹನ್ನೊಂದರ ಮಧ್ಯೆ ಬಂದು ಜಗದ ಕುತ್ತು ಕತ್ತಿಯಂತೆ ಕಂಡಿತು 7 ಬೆಳಗುಪೂರ್ವ ಆಶ್ವಿಜ ಕಾರ್ತಿಕದೆ ಧೂಮಕೇತು ಇಳೆಗಂಡಕಳೆ ಯಮದ್ವಾರವ ಮುಚ್ಚಿ 8 ಅವಿಶ್ವಾಸದ ವಿಶ್ವವಸುವ ಪರಾಭವದಿಂ ಪ್ರೀತಿತೋರಿ ಭಂಗ ಹರಿಸೋ 9 ಪಾಕಿ-ಚೀನಾ ಪತನಗೈದು ಜೋಕೆಯಿಂ ಭಾರತವ ರಕ್ಷಿಸಿ ಲೋಕಕ್ಕೆ ಕ್ಷಾಮಹರಿಸಿ ಕ್ಷೇಮಕೊಟ್ಟು ಪೊರೆಯೋ10 ನಗೆಯಿಲ್ಲ ಸಂತೋಷ ಸುದ್ಧಿ ಕೇಳುತಲಿಲ್ಲ ಮಿಗಿಲಾಗಿ ಜನರೆಲ್ಲ ಸೊರಗಿ ಸುತ್ತುವರೋ11 ಕನ್ನಡದ ನಾಡಿಗೆ ಹೊನ್ನಿನ ಬಿರುದಿದೆ ಖಿನ್ನತೆ ತಾರದೆ ಉನ್ನತಿ ಕಾಪಾಡು 12 ಮುಂದೆಮಗೆ ಗತಿಯೇನು ಬಾಳುವಬಗೆಯೆಂತು ಬಂಧು ನೀನಿದ್ದುಕೊಂಡು ಅನ್ಯಾಯವಾಗಿದೆ13 ತಂದೆ ತಾಯಿಯು ನೀನು ಹೊಂದಿದ ಬಳಗ ನೀನು ಕುಂದಿಲ್ಲದೆಮ್ಮನ್ನು ಕಾವ ಪ್ರಭು ನೀನು 14 ಸುವೃಷ್ಟಿ ಸಸ್ಯವೃದ್ಧಿ ಜೀವನ ಸಮೃದ್ಧಿಯು ಸುವೃತ್ತಿ ಕರುಣಿಸಿ ಪೊರೆ ಜಾಜಿಶ್ರೀಶ 15
--------------
ಶಾಮಶರ್ಮರು