ಒಟ್ಟು 151 ಕಡೆಗಳಲ್ಲಿ , 47 ದಾಸರು , 137 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದವನಾರಯ್ಯ ನೀನು ಒಂದಿನ ರಾತ್ರಿಲಿ ನಂದನಂದನು|ಹೊರಗಿಂದಲಿ ಬರಲು|ಚೆಂದದಿ ರುಕ್ಷಿಣಿ ಮನದೊಳರಿತು ನುಡಿ|ಎಂದಳು ಸರಸದಲಿ ಈಗ|ನೀನು- ಪ ಇರುಳುಮಧ್ಯದಲಿ ಧೀರತನದಲಿ| ಸಾರಿಸಾರಿಕದನೋತ್ತುತಲಿ| ಧ್ವನಿಯ ದೋರದೆ ಗುರುತವ ಮರೆಯಿಸಿ| ದ್ವಾರದಿಸುಳಿವವನು|ನೀನು 1 ಅಡಿಯಿಡದೆವೆ ಮೈ ಅಡಗಿಸಿಕೊಂಡು| ದೃಢದಲಿ ಅಬಲೆಯಕಂಡು| ಎಡಬಲನೊಡದೆ ಬಾಯ್ದೆರೆದು ಬೇಡುವ| ಪೊಡವಿಹಾರುವನೇನೋ|ನೀನು.....2 ಕೊರಳಗೊಯ್ಕನೋ ವನಚಾರಕನೋ| ತುರುಗಳ ಕಾಯ್ವವನೋ| ಮರುಳು ಮಾಡಿ ನಾರಿಯರ ಠಕ್ಕಿಸಿ| ದುರುಳವಾಜಿಯನೇರಿಪನೋ|ನೀನು....3 ಎಂದಮಾನಿನಿ ನುಡಿ ಬೆಡುಗವ ಕೇಳಿ| ನಿಂದಹರುಷ ತಾಳಿ| ಬಂದೆನಾ ಗುರುಮಹಿಪತಿ ಪ್ರಭು ಎನಲೋಡಿ| ಬಂದೆರಗಿದಳೀಗ|ನೀನು...... 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ ನೆಲೆ ತಿಳಿಯಲು ಅಳವಲ್ಲಾ ದುರಳತನ ನಡಿಗೆಂದು ಇವಸಲ್ಲಾ 1 ಮುನಿನೆಂದು ಗುರುತ ವಿಡ ಬ್ಯಾಡಿರಮ್ಮಾ ಮನುಜರಂತೆ ಲೀಲೆ ದೋರುವ ರೀಗಮ್ಮಾ ಮುನಿಮನೋಹರ ದಾಯಕ ಪರಬೊಮ್ಮ ಘನ ಪುಣ್ಯದಿಂದ ಶಿಶು ವಾದನಮ್ಮ 2 ಹುಟ್ಟುತಲಿ ಸ್ವಹಿತದ ನುಡಿಯಾಡಿ ನೆಟ್ಟ ನೆವೆಯ ಮುನಿಗೆ ಹಾದಿಬೇಡಿ ಮುಟ್ಟಿ ಗೋಕುಲಕ ಬಂದದಯ ಮಾಡಿ ಇಷ್ಟರೊಳು ತಿಳಿಯ ಬಾರದಿನ್ನು ನೋಡಿ 3 ಚಿಕ್ಕತನದಲಿ ಮೊಲೆಗುಡ ಬಂದಾ ರಕ್ಕಸಿಯ ಅಸು ಹೀರಿದಾವ ಕೊಂದಾ ಕಕ್ಕಸದ ಕಾಳಿಂಗ ನೆಳೆದು ತಂದಾ ಮಕ್ಕೂಳಾಟಿಕೆ ಇದೇನು ನೋಡಿಛಂದಾ4 ನಿರುತ ತಮ್ಮಾ ತಮ್ಮ ಮನಿಯೊಳಿಹನೆಂದು ಹರಿಯಗುಣ ಹೇಳುವಿರಿ ಎಲ್ಲ ಬಂದು ಅರಿತು ನೋಡಲು ಒಬ್ಬ ಬಹುರೂಪ ವಿಡಿದು ಚರಿಪಗುರು ಮಹಿಪತಿಸ್ವಾಮಿಯಿಂದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ನೂತನ ಗೃಹಕೆ ಹರಿಯೆ ಸಿರಿ ಮಾರುತ ಮುಖಸುರರೊಡಗೂಡಿ ಧೊರಿಯೆ ಪ ಯಾರು ಕೇಳದಲಿಹ ಸ್ಥಳವ ನೀನೆ ಪ್ರೇರಿಸಿ ಗೃಹವ ನಿರ್ಮಿಸಿದೆಯೋ ದೇವ ನೂರಾರು ಪರಿರೂಪಾಂತರವ ಪೊಂದಿ ಈ ರೀತಿ ನವಸುಸಂಸ್ಕøತವಾದ ಗೃಹವ 1 ಈರಪ್ಪÀ ಬಡಿಗನೆಂಬುವನು ಮನಿಯ ಚಾರುತನದಲಿಂದ ನಿರ್ಮಿಸಿರುವನು ತೋರುವ ಸಿಂಹಾಸನವನು ಮಧ್ಯಾ ಗಾರದಿನಿನಗಾಗಿ ವಿರಿಚಿಸಿಹನು 2 ಸುತ್ತಲು ನಿರ್ಭಯವಿಹುದು ವಂ - ಭತ್ತು ದ್ವಾರಗಳಿಂದ ಶೋಭಿಸುತಿಹುದು ಹತ್ತಿರೆ ಗುರುಗೃಹ ವಿಹುದು ಮುಂದೆ ಚಿತ್ತಜನಯ್ಯನ ಮಂದಿರ ವಿಹುದು 3 ಉತ್ತಮ ಗೃಹವೆನಿಸುವದು ಇ - ಪ್ತತ್ತುನಾಲಕುವಸ್ತುಗಳಕೂಡಿಹುದು ಸುತ್ತೇಳು ಪ್ರಾಕಾರವಿಹುದು ಸುತ್ತು ಮುತ್ತಲು ದ್ವಿಜಜನಹೊಂದಿ ಕೊಂಡಿಹುದು 4 ಗೃಹವುನಾಲ್ಕು ವಿಧವಿಹುದು ಸೂಕ್ಷ್ಮ ಗೃಹ ನಿನಗಾಗಿಯೆ ನೇಮಿಸಿಯಿಹುದು ಬಹಿರದಿ ಪಾಕಗೃಹ ವಿಹುದು ಅಲ್ಲಿ ಗೃಹಿಣಿಯಿಂ ತ್ರಿವಿಧಾನ್ನ ಪಕ್ವಗೈತಿಹುದು5 ನಡುಮನೆ ದೊಡ್ಡದಾಗಿಹುದು ಅಲ್ಲಿ ಸಡಗರದಲಿ ಬ್ರಹ್ಮವೃಂದ ಕೂಡುವದು ಬಿಡದೆ ಸತ್ಕಥೆನಡೆಯುವದು ಮುಂದೆ ಪಡಸಾಲೆಯಲಿ ಸರ್ವಜನ ಸಭೆಯಹುದು 6 ಶ್ವಸನ ಮಾರ್ಗವಲಂಬಿಸಿರುವೆ ಮನಿಯ ಹಸನ ಮೆಹದೀನಾದಿಯಿಂ ಮಾಡಿಸಿರುವೆ ಹೊಸಸುಣ್ಣವನು ಹಚ್ಚಿಸಿರುವೆ ಏಕಾ ದಶ ಸೇವಕರ ನಿನ್ನ ವಶದೊಳಿರುಸುವೆ 7 ನಾನಾಧನ ನಿನಗರ್ಪಿಸುವೆನು ತನು ಮಾನಿನಿಸಹ ನಿನ್ನಾಧೀನ ಮಾಡುವೆನು ಜ್ಞಾನಭಕ್ತಿಯೆ ಇಚ್ಛಿಸುವೆನು ನಿನ್ನ ಧ್ಯಾನಾನಂದದಿ ಧನ್ಯನೆಂದಿನಿಸುವೆನು8 ಹರಿಯೆ ಲಾಲಿಸು ಎನ್ನ ಸೊಲ್ಲಾ ಮುಂದೀ - ಪರಿಗೃಹದೊರೆವುದು ಸುಲಭವೇನಲ್ಲಾ ¨ರೆ ನಿನ್ನ ಬಿಡೆನೊ ಶ್ರೀ ನಲ್ಲಾ ಎನ್ನ ಮೊರೆಯ ನಾಲಿಸಿ ನೋಡೋ ವರದೇಶವಿಠಲಾ9
--------------
ವರದೇಶವಿಠಲ
ಬಿಗಿಯದಿರು ಬಿಗಿಯದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ ಅ ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆಶೂರತನದಲಿ ಶಂತನುತನಯನೇನೊಸ್ವರದಲಿ ತುಂಬುರನೆ ಗೀತದಲಿ ನಾರದನೆಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ 1 ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚÀ್ಚಂದ್ರನೆಛÀಲದಲ್ಲಿ ಋಷಿ ವಿಶ್ವಾಮಿತ್ರನೇನೋಬಲದಲ್ಲಿ ವಾಲಿಯೇ ಹಲಧರನೆ ಹಿರಣ್ಯಕನೆಬಿಲು ವಿದ್ಯದಲಿ ಪರಶುರಾಮನೇ ನೀನು 2 ತ್ಯಾಗದಲಿ ಕರ್ಣನೇ ಭೋಗದಲಿ ಶತಮಖನೆಯೋಗದಲಿ ಶುಕಸನಕ ಜನಕನೇನೋಭಾಗ್ಯದಲಿ ಬಲಿಚಕ್ರವರ್ತಿಯೋ ದಶಶಿರನೊದೀರ್ಘದಲಿ ಮೇರುವೇ ಮಂದರವೆ ನೀನು 3 ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆಮುಕ್ತಿ ಪಡೆವಲ್ಲಿ ಖಟ್ಟಾಂಗರಾಯನೇನೊ 4 ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆಕೋಪದಲಿ ಮಹೇಶನೇನೋ ನೀನುತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆಕೃಪೆಯಲ್ಲಿ ಶ್ರೀ ಕೃಷ್ಣದೇವನೆ ನೀನು 5
--------------
ವ್ಯಾಸರಾಯರು
ಬೇಡಿಕೊಂಬೆನು ನಿನ್ನ ಮನಬಿಚ್ಚಿ ತೋರಿಸುವೆ ಪ ಪಶುವಾದ ಎನ್ನ ಮನಸು ಪಿಸುಮಾತು ಹೇಳುತಿಹುದು ತುಸುಗುಣವಿಲ್ಲ ನಿನಗಂತೆ ಬಕುತಿಯೇಕಯ್ಯ ನಿನಗೆ ಅ.ಪ ಬದುಕು ತಪ್ಪಿಸಿ ನಿಲ್ಲು ನೀನಾಗಿ ಎನ್ನುತಿದೆ ಕದಿಮೋಸ ಮನವನು ನಂಬಿ ಬಾಳುವೆನೆಂತು ಬುದ್ಧಿ ಕಲಿಸಯ್ಯ ಮನಕೆ ಬೆಳಕು ತೋರಿಸು ನಿನ್ನ ಬದ್ಧಗೆಳೆಯನಾಗಿಸು ಅದನು ಬದುಕಿ ಬಾಳುವೆನಯ್ಯ 1 ಹಿಡಿಯಾಸೆ ಎನಗುಂಟು ಗಂಟುಕಟ್ಟಿ ನಿನ್ನೊಡನೆ ನಡೆವೆ ದಿಟ್ಟತನದಲಿ ಕಮಲಾಕ್ಷ ಲಾಲಿಸಯ್ಯ ಬಿಡಲಾರೆ ನಿನ್ನನೀಗ ಬೆಳಕು ಕಂಡಿತು ಎನಗೆ ಒಡೆಯ ಶೆಲ್ವರಾಯ ನನಸು ಕನಸಾಗಿ ಮಾಡದಿರು 2
--------------
ಸಂಪತ್ತಯ್ಯಂಗಾರ್
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿಶೀಲವು ತಿಳಿದು ನಿಜವಿರಕ್ತತನದಲಿ ಬಾಳಿ ಧ್ರುವ ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು ನಿರ್ಮಳದಲಿ ನಡಿಬೇಕು ಪಡೆದು ಸಮದೃಷ್ಟಿಗುಡಬೇಕು 1 ನಿತ್ಯ ವಿವೇಕವು ತಿಳಿದು ಪಥ್ಯದಲಿ ನಡಿಯಬೇಕು ಚಿತ್ತವೃತ್ತಿ ಸವೃತ್ತಿಯ ಮಾಡಿ ಸತ್ಯದಲಿ ನುಡಿಯಬೆಕು ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು 2 ಸೋಹ್ಯ ಸೋನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನೆ ಮುರಿಬೇಕು ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಗನೆಂದೆಂಬುವ ಇನ್ನು ಮತ್ತಾವನೊ ಜಗದೊಳಗೆ ನಿನ್ನ ವಿನಾ ಕಾಣೆಯೆಲ್ಲಿ ಪ ರಕ್ತ ಶುಕ್ಲ ಮಿಶ್ರವಾದ ಸಮ್ಮಂಧ ವಿಷ_ ಭುಕ್ತನಾಗಿದ್ದ ಸಂಸಾರದೊಳಗಾ ಸಕ್ತತನದಲಿ ಇಪ್ಪ ಎಂದಿಗೆಂದಿಗೆ ಇವನು ಮುಕ್ತಿ ಕೊಡುವನೇನೊ ಮುಂದೊಲಿದು ಕೊಂಡಾಡೆ1 ಪ್ರಕೃತಿ ಬದ್ಧನಾಗಿ ನಾನಾ ಜನುಮಗಳಲ್ಲಿ ವಿಕೃತಿಯ ಮಾಡುವ ಮದದಿಂದಲೀ ಸುಕೃತವನು ಮರೆದು ದೂರಾಗಿ ಸಂಚರಿಸುವ- ನುಕ್ರ ಮವಂದುಮಾಸ ಜನತೆ ಕ್ಯೆಡೆಯಿರದವ 2 ಪುತ್ರ ಉಳ್ಳರೆ ಅವಗೆ ಕಂಡಕಡೆ ತಿರುಗಿ ಉ- ನ್ಮತ್ತನಾಗಿ ಕೆಟ್ಟ ಗ್ರಾಸವನ್ನು ಹೊತ್ತಹೊತ್ತಿಗೆ ತಂದು ಹಾಕಬೇಕು ಸಾಕಿ ನಿತ್ಯದಲ್ಲಿ ಅವಗಾಗಿ ಕ್ಲೇಶಬಡಲಿ ಬೇಕು 3 ನಾಡೊಳಗೆ ನೀನೆ ಮಗನೆಂದವನ ಭಾಗ್ಯಕ್ಕೆ ಈಡುಗಾಣೆನು ಎಲ್ಲಿ ವಿಚಾರಿಸೆ ಕಾಡಿ ಬೇಡುವೆ ಮುನ್ನೆ ಪರಿಪರಿಬಾಧೆಬಡಿಸಿ ಕೂಡಿರುವೆ ಮುಕ್ತರೊಳು ಮುಕ್ತಿಗಳವಲ್ಲಿದೊ 4 ನಿನ್ನಂಥ ಮಗನ ಪಡದಮ್ಯಾಲೆ ಎನಗೆ ಅನ್ಯಚಿಂತೆಗಳಿಲ್ಲ ಚಿಂತಾಮಣೀ ಘನ್ನಮೂರುತಿ ನಮ್ಮ ವಿಜಯವಿಠ್ಠಲರೇಯ ಅನಂತಕಾಲಕ್ಕೆ ವಹಿಸುವ ದೇವ 5
--------------
ವಿಜಯದಾಸ
ಮಂಗಳಂ ಶ್ರೀ ಪಾರ್ಥಸಾರಥಿಗೆ ಮಂಗಳಂ ಸಂಕರ್ಷಣನಿಗೆ ಅನಿರುದ್ಧ ಸಾತ್ಯಕೀಸಹ ಬಂದು ನಿಂದವಗೆ ಪ ವಸುಧೆ ಭಾರವನಿಳುಹಲೆಂದು ದೇವಕೀ ವಸುದೇವರುದರದಿ ಶಿಶುವಾಗಿ ಅಸುರ ಪೂತನಿಯಸುವ ನೀಗಿದ ಕುಸುಮನಾಭಗೆ 1 ವಾತಾಸುರನಕೊಂದು ಬಾಯೊಳುಮಾತೆಗೆ ಬ್ರಹ್ಮಾಂಡತೋರ್ದಗೆ 2 ಒತ್ತಿ ಕಾಳಿಯ ಶಿರವನಾಗ ಸುತ್ತಿದಾ ಕಿಚ್ಚನ್ನು ನುಂಗಿ ಎತ್ತಿ ಗೋವರ್ಧನಗಿರಿಯ ಹತ್ತಿ ಗೋಮಂತವನು ಹಾರ್ದಗೆ 3 ಕೇಶಿಯನು ಸಂಹರಿಸಿ ದುಷ್ಟದ್ವೇಷಿಯಾದ ವೃಷಭನನು ಕೊಂದು ದಾಸಿ ತಂದ ಗಂಧವನು ಪೂಸಿ ಮೆರೆದ ಕ್ಲೇಶನಾಶಗೆ 4 ಬಿಲ್ಲು ಮುರಿದು ಬೀದಯಲ್ಲಿ ಎಲ್ಲರಿಗೆ ತಕ್ಕ ರೂಪ ತೋರಿ ಮಲ್ಲರನು ಮರ್ಧಿಸುತ ಮಾವನ ಸೊಲ್ಲನಡಗಿಸಿದ ಪುಲ್ಲನಾಭಗೆ 5 ರುಕ್ಮಿಣೀ ಸತ್ಯಭಾಮೆ ಕಾಳಂದಿ ಜಾಂಬವತಿಯು ಮೊದಲಾದ ಲಕ್ಷ್ಮಣೆ ಸತ್ಯಭದ್ರೆ ಮಿತ್ರವಿಂದೆಯು ತಂದ ಲಕ್ಷ್ಮೀರಮಣಗೆ 6 ಕೊಂದು ನರಕನ ಹದಿನಾರುಸಾವಿರ ಸ್ತ್ರೀಯರನು ಬೇಗ ತಂದು ದ್ವಾರಕಿಯಲ್ಲಿ ಸತಿಸಹ ಆನಂದದಿಂದಲಿ ನಿಂದಕೃಷ್ಣಗೆ 7 ಹೇಮದಾಭರಣವಿಟ್ಟು ರುಕ್ಮಿಣಿ ನೇಮದಿಂದಲೆ ಬೀಸುತಿರಲು ಪ್ರೇಮಕಲಹದಿ ಬೀಳಲಾಕ್ಷಣ ವಿರಾಮವಿಲ್ಲದೆ ಎತ್ತಿದವಗೆ8 ಎತ್ತಿ ಅಂಕದೊಳಿಟ್ಟು ಪ್ರೇಮದಿ ಅರ್ಥಿಯಿಂದಲೆ ಕುರುಳನೇವರಿಸಿ ತತ್ವವಾಕ್ಯವನ್ನು ಹೇಳಿದ ಮುಕ್ತಿದಾಯಕ ಮುದ್ದು ಕೃಷ್ಣಗೆ 9 ಜಾಣತನದಲಿ ಕಾಶಿಯನುಸುಟ್ಟು ಪೌಂಡ್ರಕನಪ್ರಣಾಪಹರಿಸಿದವಗೆ 10 ಮಿಥುಳವಾಸಿಗೆ ಮುಕ್ತಿಯನಿತ್ತು ಸುತನ ತಂದು ವಿಪ್ರನಿಗಿತ್ತು ಹತವಮಾಡಿ ವೃಕಾಸುರನ ಶ್ರುತಿಗಗೋಚರನಾದ ಸ್ವಾಮಿಗೆ 11 ಅರಗಿನಮನೆಯಿಂದ ರಕ್ಷಿಸಿ ದ್ರೌಪದಿ ಸುಭದ್ರೆಯ ಸಾಧಿಸಿತ್ತಗೆ 12 ನೆತ್ತವಾಡಿ ಕೌರವರೊಡನೆ ಅರ್ಥವನು ಸೋಲಲು ಪಾಂಡವರು ಭಕ್ತವತ್ಸಲನೆನ್ನೆ ದ್ರೌಪದಿಗೆ ವಸ್ತ್ರವಿತ್ತು ಕಾಯ್ದ ಕೃಷ್ಣಗೆ 13 ವನವಾಸದಲ್ಲಿ ಪಾಂಡವರು ಉಲ್ಲಾಸದಿಂದಲೆ ಇರುತಿರಲು ಪಾಶುಪತ ವನು ಪಾರ್ಥನಿಗೆ ಈಶನಲಿ ಕೊಡಿಸಿದ ಸರ್ವೇಶಗೆ 14 ವೇಷವನ್ನು ಮರೆಸಿಕೊಂಡು ವಿರಾಟನಗರದಿ ವಾಸ ಮಾಡಲು ಮೋಸದಿಂದಲೇ ಕೀಚಕಾದಿಗಳ ನಾಶಮಾಡಿಸಿದ ವಾಸುದೇವಗೆ 15 ಆನಂದರೂಪವ ತೋರಿದವಗೆ 16 ತೋರಿದವಗೆ 17 ಜಾಹ್ನವೀಸುತನ ಯುದ್ಧವನ್ನು ತಾಳಲಾರದೆ ಜನರ್ಧನಗೆ ಪೇಳೆ ಜಾಣತನದಲಿ ಶಿಖಂಡಿಯನುತೋರಿ ಬಾಣಮಂಚದಿ ಮಲಗಿಸಿದವಗೆ 18 ಸುಭದ್ರೆ ಪುತ್ರನ ಯುದ್ಧದಲ್ಲಿ ಪದ್ಮವ್ಯೂಹವ ಪೋಗಿಸಲಾಗ ಮುದ್ದುಬಾಲಕನ ಕೊಲಿಸಿದವಗೆ 19 ಸಿಂಧುರಾಜನ ಕೊಲ್ಲುವೆನೆಂದು ನರನು ಪ್ರತಿಜ್ಞೆಮಾಡಲು ತಂದಚಕ್ರವ ರವಿಗೆತೋರಿಸಿ ಸೈಂಧವನ ಕೊಲ್ಲಿಸಿದಸ್ವಾಮಿಗೆ 20 ದೃಪತಿಯತೋರಿದವಗೆ 21 ಕರ್ಣನು ಘಟ್ಟಿಯಾಗಿ ರಥವನೊತ್ತಿ ದಿಟ್ಟತನದಲಿ ಶಿರವ ಕಾಯ್ದಗೆ 22 ಮದ್ರರಾಜನ ಕೊಲ್ಲುವೆನೆಂದು ಸಮುದ್ರಶಯನನ ಸಹಾಯದಿಂದ ಭದ್ರಗಜವನು ಏರೆ ಧರ್ಮಜ ಕಾಲರುದ್ರನಂದದಿ ಕೊಲಿಸಿದವಗೆ 23 ಭೀಮ ದುರ್ಯೋಧನರು ಯುದ್ಧದಿ ಹೇಮದ ಗದೆಯನ್ನು ಪಿಡಿದು ಪ್ರೇಮದಿಂದಲೆ ಕಾದುತಿರಲು ನಿರ್ನಾಮವನು ಮಾಡಿಸಿದ ಸ್ವಾಮಿಗೆ 24 ಗೃಧ್ರ ಉಲೂಕದ ವೃತ್ತಿಯ ನೋಡಿ ಭದ್ರೆದ್ರೌಪದಿ ಪುತ್ರನನ್ನು ನಿದ್ರೆಕಾಲದಿ ಕೊರಳಕೊಯ್ಯಲು ಶಿರದಲಿದ್ದ ಮಣಿಯ ತೆಗೆಸಿದವಗೆ 25 ದ್ರೋಣಪುತ್ರನ ಬಾಣದಿಂದಲೆ ತ್ರಾಣಗೆಟ್ಟ ಶಿಶುವ ನೋಡಿ ಜಾಣತನದಲಿ ಚಕ್ರವಪಿಡಿದು ಪ್ರಾಣವನು ರಕ್ಷಿಸಿದ ಸ್ವಾಮಿಗೆ 26 ಏಳುಹನ್ನೊಂದು ಸೇನೆಗಳನೆಲ್ಲ ಹಾಳುಮಾಡಿ ಹದಿನೆಂಟುದಿವಸದಿ ಖೂಳಕೌರವರನೆಲ್ಲ ಕೊಂದು ಧರ್ಮನಲಿ ರಾಜ್ಯವಾಳಿಸಿದಗೆ 27 ಸೌಪ್ತಿಕದಲಿ ಪುತ್ರನ ಕೊಲ್ಲಿಸಿ ಸ್ತ್ರೀಪರ್ವದಿ ಭೂಮಿ ಭಾರವಡಗಿಸಿ ಶಾಂತಿಪರ್ವದಿ ಧರ್ಮರಾಯಗೆ ಪಟ್ಟಾಭಿಷೇಕವ ಮಾಡಿಸಿದಗೆ 28 ಮುಸಲದಲಿ ಯಾದವರನಡುಗಿಸಿ ಅನುಶಾಸನದಿ ಧರ್ಮಪೇಳಿಸಿ ಅಶ್ವಮೇಧ ಮಹಾಪ್ರಸ್ಥ ಸ್ವರ್ಗಾರೋಹಣವ ಮಾಡಿಸಿದಗೆ 29 ಅಂದುಪಾರ್ಥಗೆ ಸಾರಥ್ಯವಮಾಡಿ ಬಂಧುಗಳ ಸ್ವರ್ಗವಾಸಮಾಡಿಸಿ ಬಂದು ಬೃಂದಾರಣ್ಯದಲ್ಲಿ ಇಂದಿರೇ ಸಹನಿಂದ ಸ್ವಾಮಿಗೆ 30 ಅನಿರುದ್ಧ ಸಾತ್ಯಕಿ ರುಕ್ಮಿಣಿ ಸಹಿತಲೆ ಬಂದು ನಿಂದವಗೆ 31 [ವರ] ಕಲಿಯುಗದೊಳಗುಳ್ಳ ದುಷ್ಟಕರ್ಮಿಗಳನೆಲ್ಲ ಸಲಹುವೆನೆಂದು ಕೈರವಿಣಿತೀರದಲಿನಿಂದ ಕರುಣಿ ವೆಂಕಟಕೃಷ್ಣನಂಘ್ರಿಗೆ ಮಂಗಳಂ 32
--------------
ಯದುಗಿರಿಯಮ್ಮ
ಮಂಗಳಂ ಶ್ರೀ ರಾಮಚಂದ್ರನಿಗೆ ಕಂಗೊಳಿಪ ದೇವಗೆ ಪ. ಬಿಟ್ಟು ಪಟ್ಟ ತೊಟ್ಟು ವ್ರತವ ಮೆಟ್ಟಿ ವನವನೂ ದುಷ್ಟರನ್ನು ಕುಟ್ಟಿ ಬಂದು ಪಟ್ಟವಾಳ್ದ ಶ್ರೇಷ್ಠ ಮೂರ್ತಿಗೆ 1 ಸೀತೆ ಅನುಜರೊಡನೆ ವೆರಸಿ ವಾತತನಯನ ಪ್ರೀತಿ ಸೇವೆ ಕೊಳುತ ರಾಜ್ಯ ನೀತಿಯಿಂದ ನಡೆಸಿದವಗೆ 2 ಶ್ರೇಷ್ಠ ಭಕ್ತರೊಡನೆ ವೆರಸಿ ದಿಟ್ಟತನದಲಿ ಪಟ್ಟವಾಳಿ ಪ್ರಜರ ಪೊರೆದು ಇಷ್ಟ ಸಲಿಸಿ ಮುದವಿತ್ತವಗೆ 3 ರಾಮನಾಮ ಪಠಿಪ ಜನರ ಕಾಮಿತಾರ್ಥವ ಪ್ರೇಮದಿಂದ ಕೊಟ್ಟು ಪೊರೆವ ಸ್ವಾಮಿ ಸುಗುಣಧಾಮ ಹರಿಗೆ4 ಭೂಪರೊಳಗೆ ಶ್ರೇಷ್ಠ ರಾಮರೂಪ ಮಂಗಳಂಗೋಪಾಲಕೃಷ್ಣವಿಠ್ಠಲಗೆ ದೀಪದಾರತೀಯ ಬೆಳಗಿ 5
--------------
ಅಂಬಾಬಾಯಿ
ಮರೆಯಬಾರದು ನಮ್ಮ ಮುರವೈರಿಯ ಕರುಣಾಕರ ಸಿರಿವರನಾದ ದೊರೆಯ ಪ. ಪರಿಕಿಸುವನು ನಾನಾ ತರದಿಂದಲಿ ಜರಿವನು ಮತ್ತೆ ನೇವರಿಸುವನು ಸುರ ನರೋರಗ ಪಕ್ಷಿಯಿರೆ ತರು ಮೊದಲಾಗಿ ಪೊರೆವ ಮೆರೆವ ಕರೆದಲ್ಲಿ ಬರುವ 1 ಬಡತನದಲಿ ಭಾಗ್ಯಕಾಲದಲಿ ಕಡು ಕಷ್ಟದಲಿ ಸೌಖ್ಯ ವೇಳೆಯಲಿ ಅಡವಿಯಲಾದರು ಅರಮನೆಯಲ್ಯಾದ- ರೊಡೆಯ ಸಲಹನೆ ಮೀರನು ಭಿಡೆಯ 2 ಸರ್ವ ಸ್ವತಂತ್ರ ಶ್ರೀ ರಮಣೀಶ ನಿರ್ವಹಿಸುವನು ನಂಬುವರಾಶಾ ಭರ್ವಸವಿಡು ಶೇಷ ಪರ್ವತೇಶ್ವರನಲಿ ನೀರ್ವಾಣೇಶ ಸರ್ವರೊಳಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾನನಿಧಿ ಶ್ರೀಕೃಷ್ಣ ಮಧುರೆಗೈದುವನಂತೆಏನು ಪಥವಮ್ಮ ನಮಗೆ ಪ ಮಾನವೇನಿನ್ನಿದಕೆ ಮಾನಿನಿಯರೆಲ್ಲರುಆಣೆಯನು ಕಟ್ಟಿವನಿಗಡ್ಡ ನಿಲ್ಲುವ ಬನ್ನಿ ಅ.ಪ. ಕಳ್ಳತನವೇ ನಮ್ಮ ವಲ್ಲಭರು ಈ ಸುಳುವುಎಲ್ಲವನು ಬಲ್ಲರಮ್ಮಒಲ್ಲದಲೆ ನಮ್ಮ ಬಿಟ್ಟರೆ ಒಳಿತು ವನಜಾಕ್ಷಎಲ್ಲಿಗೈದಿದರೆ ನಾವಲ್ಲಿಗೈದುವ ಬನ್ನಿ1 ಇಂದುದಯದಿ ಮೊದಲು ಇಂದೀವರಾಕ್ಷಿಯರುಗೋವಿಂದನ ಬಳಿಗೈದುವಒಂದು ಕಡೆಯಲಿ ಕುಳಿತು [ವನಜಾಕ್ಷಿಯೋರ್ವ ಕೈಯಂದಲಲ್ಲಿಗೆ ಕಳುಹಿ] ಕೇಳ್ವೆವೇನು ಪೇಳುವನೋ 2 ಹರಿಣಾಂಕವದನೆಯರು ನೆರೆದು ಬರುತಿರೆ ಕಂಡುಪರಮ ಹರುಷದಲಿ ಬಂದುಸರಿ ರಾತ್ರಿಯೊಳು ಹೀಗೆ ಬರುವುದೇನೆಂದೆನಲುಎರಗಿ ಬಿನ್ನೈಸಿದರು ಅಂಬುಜದಳಾಕ್ಷನಿಗೆ3 ಶ್ಲೋಕ ಹಲವು ಕಾಲವು ನಿನ್ನ ಸ್ನೇಹ ಸುಖವ ಹಾರೈಸಿಕೊಂಡಿರುತಿಹಲಲನಾವ್ಯೂಹವ ಬಿಟ್ಟು ಅಕ್ರೂರನೊಡನೆ ನೀ ಮಧುರೆಗೆ ಪೋದರೆಕಳೆಯಲಾಪವೇ ಕಾಂತ ಕೇಳು ದಿನವ ಈ ಕಂತುವಿನ ಬಾಧೆಗೆಘಳಿಗೊಂದು ಯುಗವಾಗಿ ತೋರುತಿÀಹುದೋ ಜಲಜಾಕ್ಷ ನೀನಿಲ್ಲದೆ ಪದ ಮಾಧವ ಕೃಪಾಕರನೆ4 ಶ್ಲೋಕ ಬಾಲಭಾವದಲಿಂದಲಂಗಸುಖವ ಬಹುಬಗೆಯಲಿಂದುಳುಹಿದೆಲೋಲಲೋಚನೆ ನಿಮ್ಮ ಬಿಟ್ಟು ಪುರದ ನಾರೇರಿಗಾನೊಲಿದರೆನೀಲಕಂಠನು ಮೆಚ್ಚ ನೋಡು ನಿಜವ ನಿಮಗ್ಯಾತಕೀ ಸಂಶಯಕಾಲಕ್ಷೇಪವನಲ್ಲಿ ಮಾಡೆ ಕಿಂಚಿತ್ಕಾಲದೊಳಾನೈದುವೆ ಪದ ಪಾಲಿಸಿರೆನಗಪ್ಪಣೆಯ ಪಾಟಲ ಸುಗಂಧಿಯರೆಕಾಲಹರಣವ ಮಾಡದೆನಾಳೆ ಉದಯಕೆ ಪೋಗಿ ನಾಲ್ಕೆಂಟು ದಿನದೊಳುವ್ಯಾಳೆಗಿಲ್ಲಿಗೆ ಬರುವೆ ಕಾಳಾಹಿವೇಣಿಯರೆ 5 ಶ್ಲೋಕ ಮಾರನಯ್ಯನೆ ಕೇಳು ಅಲ್ಲಿರುತಿಹ ನಾರೇರು ಬಲು ನಿಪುಣರೋನೀರಜಾಂಬಕ ನೋಡು ನಿನ್ನ ಮನವ ನಿಮಿಷಾರ್ಧದೊಳುಸೆಳೆವರೋಮಾರಕೇಳಿಯ ಶಾಸ್ತ್ರಮರ್ಮವರಿದ ಆ ನಾರೇರು ನೆರೆಯಲುಗಾರು ಪಳ್ಳಿಯಲಿಪ್ಪ ಗೋಪಿಯರ ವಿಚಾರಂಗಳ ಸ್ಮರಿಪೆಯಾ ಪದ ಬಿಲ್ಲ ಹಬ್ಬವೆ ಸುಳ್ಳು ಬಿಸುರುಹಾಕ್ಷಿಯರಿಕ್ಷುಬಿಲ್ಲಿನುತ್ಸವಕೆ ನಿನ್ನಖುಲ್ಲ ಅಕ್ರೂರನನು ಕಳುಹಿ ಕರೆಸಿದರಲ್ಲಿವಲ್ಲಭೆಯರನ್ನು ನೆರೆವೆ ನಮ್ಮೆಲ್ಲರನು ಮರೆವೆ 6 ಶ್ಲೋಕ ನಾರೀಹಾರ ಕಿರೀಟ ಕುಂಡಲಯುಗ ಕೇಯೂರವಲಯಾದಿಗಳುಚಾರು ವಸ್ತ್ರ ಸುಗಂಧ ಪುಷ್ಪನಿಚಯ ಹಾರಂಗಳಂ ಧರಿಸದೆಮಾರ ಕೇಳಿಯ ಮಾತಿಲಿಂದಲವರ ಮನಸೆಮ್ಮೊಳೊಂದಾಗದೆನಾರೇರೊಲುಮೆಯುಂಟೆ ಲೋಕದೊಳಗೆ ನನ್ನ್ಯಾತಕೆ ದೂರ್ವಿರೇ ಪದ ಮಲ್ಲಯುದ್ಧವ ನೋಡಬೇಕೆನುತ ನಮ್ಮಾವಅಲ್ಲಿಗೆ ಕರೆಸಲದಕೆಇಲ್ಲದಪವಾದ ಈ ಸುಳ್ಳು ಸುದ್ದಿಗಳ ನೀ -ವೆಲ್ಲ ಸೃಜಿಸಿದಿರಿ ಸರಿಯಲ್ಲ ನಿಮಗಿಳೆಯೊಳಗೆ 7 ಶ್ಲೋಕ ವಾರಿಜಾಂಬಕ ವಾರಿಜಾರಿವದನ ವಾರಾಶಿಜಾವಲ್ಲಭವಾರಿವಾಹನಿಭಾಂಗ ವಾಸವನುತ ವಾಕೆಮ್ಮದೊಂದಾಲಿಸೋವಾರಿಜೋದ್ಭವನಯ್ಯ ನಿನ್ನ ವಿರಹ ವಾರಾಶಿಯೊಳು ಮುಳುಗಿಹನಾರೀನಿಚಯವ ಪಾರುಗಾಣಿಸು ಕೃಪಾನಾವೆಯಲಿಂದೆಮ್ಮನು ಪದ ಮಾರನೆಂಬುವನು ಬಲು ಕ್ರೂರ ನಮ್ಮಗಲಿ ನೀ ಊರಿಗ್ಹೋದುದನು ಕೇಳಿವಾರಿಜಾಸ್ತ್ರವನು ಎದೆಗೇರಿಸೆಮ್ಮನು ಬಿಡದೆಹೋರುವನು ಅಹÉೂೀ ರಾತ್ರಿಯಲಿ ತಪಿಸುತ 8 ಶ್ಲೋಕ ನೀಲಕುಂತಳೆ ಕೇಳು ನಿಮ್ಮ ಮನೆಯೊಳಾ ನೆಲುವಿನ ಮ್ಯಾಲಿನಪಾಲು ಬೆಣ್ಣೆಯ ಕದ್ದು ಮೆದ್ದು ಬಹಳ ಕಾಲಂಗಳಂ ಕಳೆದೆನೆಬಾಲೆ ಮನ್ಮಥಬಾಣದೆಚ್ಚು ತಪಿಸೆ ಬಹು ಬಗೆಯಲಿಂದುಳುಹಿದಲೋಲಲೋಚನೆ ನಿಮ್ಮೊಳಾನು ಬಹಳ ಜಾರತ್ವಮಂ ಮಾಳ್ಪೆನೇ ಪದ ಬಟ್ಟಗಂಗಳೆ ನಿಮ್ಮ ಬಿಟ್ಟು ಘಳಿಗಿರಲಾರೆದುಷ್ಟ ಕಂಸನು ಕರೆಸಲುಅಟ್ಟಿದರೆ ಪೋಗದಿರೆ ಸಿಟ್ಟಿನಿಂದಲಿ ವ್ರಜಕೆಅಟ್ಟುಳಿಯ ಮಾಡುವನು ಅಂಬುಜಸುಗಂಧಿಯರೆ 9 ಶ್ಲೋಕ ಪತಿ ಸುತ ಪಿತೃ ಮುಖ್ಯ ಭ್ರಾತೃ ಬಾಂಧವರು ಎಂಬಅತಿಶಯ ನಮಗಿಲ್ಲ ಆಲಿಸೋ ಮಾತನೆಲ್ಲರತಿಪತಿಪಿತ ನೀನೇ ರಾತ್ರಿಯೊಳು ಕೊಳಲನೂದೆಕ್ಷಿತಿಪತಿ ನಿನ್ನೆಡೆಗೆ ಕ್ಷಿಪ್ರದಿಂ ಬಂದೆವಲ್ಲೊ ಪದ ಬಾಲತನದಲಿ ಯಮುನಾ ತೀರದಲಿ ನೀ ವತ್ಸ-ಪಾಲನೆಯ ಮಾಡುತಿರಲು ಆಕಾಲ ಮೊದಲಾಗಿ ಈ ವ್ಯಾಳೆ ಪರಿಯಂತರವುಕಾಲುಘಳಿಗಗಲದಿಹ ಕಾಂತೆಯರ ತ್ಯಜಿಸುವರೆ10 ಶ್ಲೋಕ ಪರಿಪರಿಯಲಿ ನಿಮ್ಮ ಪಾಲಿಸಿ ನೋಡೆ ಮುನ್ನಕರುಣಕೆ ಕೊರತಿಲ್ಲ ಕಾಂತೆ ಕೇಳೆನ್ನ ಸೊಲ್ಲತ್ವರಿತದಿ ಬಾರದಲೆ ತಡೆದು ನಾ ನಿಂತರಲ್ಲೆಸರಸಿಜಭವ ಮಾರರಾಣೆ ಕಾಣೆ ಪ್ರವೀಣೆ ಪದ ಕ್ಲುಪ್ತ ಕಾಲಕೆ ಬಂದುನೆರೆಯದಿದ್ದರೆ ನಾನು ಪರಮ ಪುರುಷೋತ್ತಮನೆ11 ಶ್ಲೋಕ ಮಾರನೆಂಬುವನಂದೆ ಮಡಿದನು ಶಿವನ ಮೂರನೆ ಕಣ್ಣಿಲಿನಾರೇರಿಲ್ಲದೆ ನಾಭಿಯಿಂದ ಪಡೆದ ಆ ಬ್ರಹ್ಮನೆಂಬಾತನ ನಾರಿ ಈರ್ವ ಕುಮಾರರಾಣೆ ಹರಿಯು ತಾನಿಟ್ಟನೇನೆಂಬೆವೆಮಾರಿ ಹೊರಗಿನ ಹೊರಗೆ ಹೊಯಿತೆಂಬೊ ತೀರಾಯಿತೆ ಭಾವುಕಿ ಪದ ಹಲವು ಮಾತುಗಳ್ಯಾಕೆ ಜಲಜಾಕ್ಷ ನಿನ್ನ ಪದನಳಿನಗಳ ನೆರೆ ನಂಬಿಹಒಲುಮೆಯಲ್ಲಿರುತಿಪ್ಪ ಲಲನೆಯರನೆಲ್ಲರನುಸಲಹೊ ಸಲಹದೆ ಮಾಣು ರಂಗವಿಠಲರೇಯ12
--------------
ಶ್ರೀಪಾದರಾಜರು
ಮುದ್ದು ಮೋಹನ ರಾಯಾ | ಸುಜನರಉದ್ಧರಿಸಿದ್ಯೊ ಜೀಯಾ | ಪ ಶ್ರದ್ಧಾಳುತನದಲಿ | ಬದ್ಧ ದೀಕ್ಷಿತನೆಮಧ್ವಮತವು ಎನೆ | ದುಗ್ಧಾಬ್ದಿ ಚಂದಿರ ಅ.ಪ. ಚಿಪ್ಪಗಿರಿ ಸುಕ್ಷೇತ್ರಾ | ದೊಳಗೆಅಪ್ಪ ಶ್ರೀ ವರರಿಂದಾ |ಗೊಪ್ಪ ಸದುಪ ದೇಶ | ಅಪ್ಪುತದಾಸನೆನೆಪ್ಪು ಕೊಡುತ ತಿ | ಮ್ಮಪ್ಪನೊಳಗೆಮನ 1 ತೀರ್ಥಕ್ಷೇತ್ರ ಚರಿಸೆ | ದೇಹವುಸಾರ್ಥಕಾಯಿತು ಎನಿಸೀ |ಯಾತ್ರೆ ಮಾಡಿದೆ ಸ | ತ್ಪಾತ್ರರ ಸೇರುತಗಾತ್ರ ಗೈಸಿದೆ ಪಾವಿ | ತ್ರ್ಯ ಬಾಹ್ಯಾಂತರ 2 ಗುರುಗೋವಿಂದ ವಿಠಲನೇ | ಪರತತ್ವಸರ್ವೋತ್ತಮನವನೇ |ಒರೆಯುತ ಸುಜನರ | ಪರಿಪಾಲಿಸಿದಿಯೊವರಬಳ್ಳಾಪುರದಲಿ | ವಿಠಲನ ಸನಿಯ 3
--------------
ಗುರುಗೋವಿಂದವಿಠಲರು
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ
ಮುನಿಯುವರೇ ಕೃಷ್ಣಾ ಮುನಿಯುವರೆ ಪ ದಣಿಸಲಾಗದೊ ನಿನ್ನ ನೆನೆವ ಭಕುತರೊಳು ಅ.ಪ ಮುನಿಗಳು ಮನದೊಳು ಕ್ಷಣಬಿಡದಲೆ ನಿನ್ನ ದಣಿಸಿ ಕುಣಿಸುವರೊ ಮೌನದಿಂದಲಿ ನಾ ಮಣಿದು ಬೇಡುವೆ ಬರಿದೆ ಹಣಿದು ಬಿಸುಡುವರೆ ಕೆಣಕಿದವರ ನೀ ಕ್ಷಣದಿ ಕಾಪಾಡಿದೆ 1 ಬಲಿಯ ಯಾಚಿಸಿ ಭಕ್ತಿಬಲೆಗೆ ನೀ ಸಿಲುಕಿದೆ ಶಿಲೆಯನೊತ್ತಿ ಸುಶೀಲೆಯ ಪೊರೆದೆ ಜಲಧಿಶಯನಾ ನೀ ರಥಕೆ ಸಾರಥಿಯಾದೆ ಛಲವೇತಕೆನ್ನೊಳು ನೀನೆ ಗತಿ ಎಂದರೆ2 ಎಂಜಲಾಸೆಗೆ ಸೋತು ಶಬರಿಯ ಪೊರೆದೆ ಸಂಜೆ ಹಗಲೆನ್ನದೆ ಎಂಜಲ ಬಳಿದೆ ಅಂಜದೆ ಅಜಾಮಿಳಗೊಲಿದೆಯೋದೇವ ಅಂಜೆನೊ ಎಂದಿಗೂ ಕುಂಜರವರದಾ 3 ಶಪಥಮಾಡಿ ನಿನ್ನ ಪಂಥವ ಕೆಡಿಸಲು ಕುಪಿತನಾಗಲಿಲ್ಲ ಕುರುಪಿತಾಮಹನೊಳು ಆಪ್ತನಿಮಿತ್ತಬಾಂಧವನೆಂದು ನಿನ್ನ ಪ್ರಾಪ್ತಿಯ ಬೇಡಲು ಬಂದುದಕೆ ಈಗ 4 ಪರಿ ಅಂಕಿತ ಪೇಳದೆ ಬಿಂಕತನದಲಿ ಕಾಲವ ಕಳೆದೆ ಶಂಕರನುತ ಶ್ರೀ ವೇಂಕಟೇಶ ನಿನ್ನ ಕಿಂಕರನೆನಿಸೆನ್ನ ಸಂಕಟ ಹರಿಸೂ5
--------------
ಉರಗಾದ್ರಿವಾಸವಿಠಲದಾಸರು
ಮೆಚ್ಚಿದೆ ಯಾಕಮ್ಮ ಲಕ್ಕುಮಿದೇವಿ ಸಚ್ಚಿದಾನಂದಾತ್ಮ ಹರಿಯೆಂದರಿಯದಲೆ ಪ ರಕ್ಕಸಾಂತಕ ಹರಿಗೆ ಸೊಗಸಿನ ತಕ್ಕ ವಾಹನವಿಲ್ಲದಿದ್ದೊಡೆ ಹಕ್ಕಿಯ ಹೆಗಲೇರಿ ತಿರುಗುವ ಚಿಕ್ಕ ಬುದ್ಧಿಯ ಚಲುವ ಕೃಷ್ಣಗೆಅ.ಪ ನೀರೊಳು ಮುಳುಗಿ ಭಾರವಪೊತ್ತು ಧರಣಿಯ ಕೋರೆದಾಡೆಲಿ ತಂದ ಕ್ರೂರ ರೂಪನಿಗೆ ಮೂರಡಿ ಭೂಮಿಯ ಬೇಡಿ ಕ್ಷಿತಿಪರ ಕೊಂದು ನಾರು ವಸ್ತ್ರಗಳುಟ್ಟು ಸೀರೆ ಕದ್ದವಗೆ ಶೂರತನದಲಿ ತ್ರಿಪುರರಗೆದ್ದು ವಿ- ಹಾರ ಮಾಡ್ಡ ಏರ್ದ ಕುದುರೆಯ ಮಾರಪಿತ ಮಧುಸೂಧನನ ವ್ಯಾ- ಪಾರ ತಿಳಿಯದೆ ವಾರಿಜಾಕ್ಷಿ 1 ಹಾಸಿಕಿಲ್ಲದೆ ಹಾವಿನ ಮೇಲೆ ಮಲಗುವ ಹೇಸಿಕಿಲ್ಲದೆ ಎಂಜಲ್ಹಣ್ಣನೆ ಮೆಲುವ ದೋಷಕಂಜದೆ ಮಾವನ ಕೊಂದು ಮಧುರೆಲಿ ದಾಸಿ ಕುಬ್ಜೆಯ ಡೊಂಕು ತಿದ್ದಿ ಪರಿಮಳ ಪೂಸಿ ಸೋಸಿನಿಂದಲಿ ಕರಡಿ ಮಗಳನು ಯೋಚಿಸದೆ ಕೈಪಿಡಿದು ಸೌಳ- ಸಾಸಿರದ ಸತಿಯರನು ಕೂಡಿದ ವಾಸುದೇವನ ಮೋಸವರಿಯದೆ 2 ಮೋಸದಿಂದಲಿ ಬಂದು ಶಿಶುವನೆತ್ತಿದ ದೈತ್ಯ ದಾಸಿಯ ಕೊಂದ ಉದಾಸೀನದಿಂದ ಗ್ರಾಸಕಿಲ್ಲದೆ ಗೋಪೇರ ಮನೆಗಳ ಪೊಕ್ಕು ಮೀಸಲು ಬೆಣ್ಣೆ ಪಾಲ್ಮೊಸರನೆ ಸವಿದು ರಾಸಕ್ರೀಡೆಯ ವನಿತೆಯರ ಮನ ದಾಸೆ ಪೂರೈಸಿ ರಾತ್ರಿ ವೇಳದಿ ವಾಸುದೇವನು ಓರ್ವ ಸತಿಯೊಳು ಕ್ಲೇಶಪಡಿಸದೆ ಮೋಸವರಿಯದೆ3 ಅಖಿಳ ಮಹಿಮನೆನೆ ಊಳಿಗ ಮಾಡಬಹುದೆ ಚಂಡನಾಡುವ ನೆವದಿಂದ ಕಾಳಿಂಗನ ಮಂಡೆಯ ತುಳಿದು ನಾಟ್ಯವನಾಡಬಹುದೆ ಗಂಡುಗಲಿ ಅರ್ಜುನನು ರಥಕೆ ಬಂಡಿಬೋವನ ಮಾಡಬಹುದೆ ಪುಂಡಲೀಕನು ಇಟ್ಟೆಗೆಯ ಮೇ- ಲ್ಪಾಂಡುರಂಗ ನಿಲಿಸಬಹುದೆ4 ಕಮಲಾಕ್ಷ ಯಾಗಶಾಲೆಗೆ ಗೋಪರನು ಕಳುಹಿ ರಮೆಯರಸಗೆ ಬಹಳ್ಹಸಿವೆನುತಿರಲು ಕಮಲಾಕ್ಷನ ನುಡಿ ಗಮನಿಸದೆ ರುಷಿವರರಿಗೆ ಕಮಲ ಮುಖಿಯರೆಲ್ಲ ಪರಮ ಸಂಭ್ರಮದಿಂದ ಕಮಲನೇತ್ರಗೆ ವಿವಿಧ ಭಕ್ಷಗ- ಘೃತ ಪರಮಾನ್ನಗಳನು ಕಮಲನಾಭ ವಿಠ್ಠಲಗೆ ಅರ್ಪಿಸಿ ಶ್ರಮವ ಕಳೆದೈದಿದರು ಮುಕ್ತಿಯ 5 ಯಾಕೆ ಮೆಚ್ಚಿದೆಯಮ್ಮ ಲೋಕ ಸುಂದರಿಯೆಶ್ರೀ ಕಮಲಜಪಿತ ಲೋಕ ಮೋಹಕನ
--------------
ನಿಡಗುರುಕಿ ಜೀವೂಬಾಯಿ