ಒಟ್ಟು 242 ಕಡೆಗಳಲ್ಲಿ , 64 ದಾಸರು , 224 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದ್ರೋಹಿಯೋ ನಾನಿನಗೆ ದ್ರೋಹಿಯೋ ಪ ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ ತೈಜಸ ವಿಶ್ವ ಅಪ್ಪತುರೀಯನಾಗಿ ದಾತ ನಿನ್ನನ್ನು ಬಿಟ್ಟು ಬೆಪ್ಪನಂದದಿ ನರರ ಯೆಂಜಲ ಬಯಸುವೆ 1 ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2 ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ ಹಿತರವರು ಬರಿದೆಂಬ ಭ್ರಾಂತಿಯ ನೀಗದೆ ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ ಗತಿಯೇನು ಜಗದೀಶ ಮರೆತು ನಿನ್ನನು ದೇವ 3 ಕಸವ ರಸವೆಂದು ಬಯಸುವೆ ವಿಷಯವ ರಸವ ವಿಷವೆಂದು ತೊರೆದು ಜೀವಿಸುತಿರ್ಪೆ ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ ತುಸಸಹ ನೆನೆಯದೆ ಹುಸಿಯ ದಾಸನಾಗಿ 4 ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5 ವೇದ ವೋದುವ ನಾನು ನಾನೆನೀನೆಂಬುವೆ ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ ಬಾದರಾಯಣಗುದರ ಭೇದವ ನುಡಿಯುವೆ ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6 ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7 ಜನನ ಮರಣ ರಹಿತ ಜನಿಸುವೆ ನಮ್ಮೊಡನೆ ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8 ನಿರಯ ಭಾಜನ ನಾದೆ ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ ಧೀರ ಜಯತೀರ್ಥ ವಾಯು ಅಂತರದಿರ್ಪ ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
--------------
ಕೃಷ್ಣವಿಠಲದಾಸರು
ನಂಬಿದೆ ನಿನ್ನ ಪಾದವ ಕಾಣಬೇಕೆಂದು ಹಂಬಲಿಸಿದೆ ಮಾಧವ ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ ಕಮಲಾಂಬಕ ರಂಗಾ ಪ ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ ಇಂದಿರಾ ಮನೋವಿಲಾಸ ವೃಂದಾರಕರ ನಿಜಕೋಶಾ ಮಂದರಧರ ವಸುಂಧರಪತಿ ಪುರಂದರ ವಂದಿತ ಸುಂದರಾಂಗ ಕಂಬು ಇಂದೀಗ ತೊಂದರೆಕಿಡದಿರು 1 ತಂದಿತಾಯಿಗಳವರಾರೊ ತಾವಳಿದು ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು ಪೊಂದದೆನಲೊ ಇಳಿಜಾರು ಎಂದೆಂದಿಗಿದರ ಗಂಧದೊಳಗೆ ನಾ ಬಂದು ಬಳಲಿ ಸಂ ಬಂಧದೊಳುರಳಿದೆ ಮುಂದಾದರು ದಾರಿ ಒಂದಾದರು ಕಾಣೆ ತಂದೆ ತಾಯಿ ಸರ್ವಂದವು ನೀನೆ 2 ನೊಂದೆನೊ ನಾನಾ ಜೀವಿಲಿ ನೋಡು ನೋವಿನಲಿ ಕುಂದಿದೆ ಎಲ್ಲ ಕಾವಿಲಿ ಬೆಂದೆನೋ ಬಲು ಕೋವಿಲಿ ಅಂದದರ್ಚನೆಯಿಂದ ಮಾಡಿದ ಪಾಪಗೊಂದಿಗೆಳೆದು ಎನ್ನ ಇಂದು ಚರಣರವಿಂದವ ತೋರಿಸುವ ಬಂಧು ವಿಜಯವಿಠ್ಠಲೆಂದಹುದೆಂದು 3
--------------
ವಿಜಯದಾಸ
ನಮಿಸುವೆನು ನಮಿಸುವೆನು | ವಿಜಯದಾಸರಿಗೇ ಪ ಅಮಮ ಮಹಿಮೆಗಳ್ನಿಮ್ಮ | ವರ್ಣಿಸಲು ಅಳವೇ ಅ.ಪ. ಕವಚ ವಿಜಯವ ಪಠಿಸಿ | ಅವನಿಯೊಳು ಸಜ್ಜನರುಬವಣೆಗಳ ಕಳಕೊಂಡು | ಸುಖದಿಂದ ಜೀವಿಪರೋ |ಅವರನುಗ್ರಹದಿಂದ | ಭವಣೆ ಎನೆ ಮದ್ಭಯವುಸವೆದು ಪೋಗುತ ಗ್ರಂಥ | ಮುದ್ರಣವ ಮುಂಬರಿಸಿದೆ 1 ಹಯಾಸ್ಯ ನಂಘ್ರಿಯಲಿಕಾರ್ಯಮುಂಬರಿಸಿರುವ | ಮಹ ಕಾರುಣ್ಯ ಮೂರ್ತೇ 2 ಹರಿಗುರು ಗೋವಿಂದ | ವಿಠಲ ಚರಣಬ್ಜವನುಪರಿಪರಿಯಲಿಂದತುತಿಸಿ | ಮರಳಿ ಕಾಂಬುವ ಸುಹವನಾವರ ವಿಜಯ ದಾಸಾರ್ಯಾ | ಕರುಣಿಸೆನೆ ಬಿನ್ನಪವಕರಗತವ ಮಾಡುವುದು | ಉರುಕರುಣ ಸಂಪನ್ನಾ 3
--------------
ಗುರುಗೋವಿಂದವಿಠಲರು
ನವವಿಧ ಭಕ್ತಿ ಶ್ರವಣ ಪಾವನವಾದ ಹರಿಕಥೆ ಪುರಾಣ ಮೊದ ಲಾದುದನು ಕೇಳುತ್ತಿ ಪರಮಾತ್ಮನನ್ನು ಹೃದಯ ಪೀಠದಲಿರಿಸಿ ಪೂಜಿಸುವ ಭಕ್ತನೇ ಶ್ರವಣ ಫಲ ಹೊಂದಿದವ ಶ್ರವಣಭಕ್ತಿಯಿದು 64 ದಾಸಕೂಟದ ಭಕ್ತರಿಂ ರಚಿತವಾದ ಸು ಶ್ರಾವ್ಯ ಹಾಡುಗಳನ್ನು ಪಾಡಿ ಕುಣಿಯುತ್ತ ದೇವರನು ನೆನೆನೆನೆದು ಧ್ಯಾನಿಸುವ ಭಕ್ತರೇ ಕೀರ್ತನದ ಭಕ್ತರೆಂದರಿ ಮನುಜ ನೀನು 65 ವ್ಯಾಸ ದಾಸರ ಕೂಟದಿಂದರಿತ ದೇವರನು ಮಾನಸದ ಮಂಟಪದಲ್ಲಿರಿಸಿ ಪೂಜಿಸುತ ಅದನೆ ಪೌನಃಪುನ್ಯದಿಂದ ಮೆಲುಕಾಡುವದು ಸ್ಮರಣಭಕ್ತಿಯಿದೆಂದು ತಿಳಿ ಮನುಜ ನೀನು 66 ಅವತಾರ ರೂಪಗಳ ಮೂರ್ತಿಗಳ ರಚಿಸುತಲಿ ನಿನ್ನ ಚಿತ್ತದ ದೇವರನ್ನಲ್ಲಿಯಿರಿಸಿ ಅವನ ಗುಣಗಳ ನೆನೆದು ಪಾದಸೇವೆಯ ಮಾಡೆ ಪಾದಸೇವನಭಕ್ತಿಯೆಂದು ತಿಳಿ ಮನುಜ 67 ಹೂ ತುಳಸಿ ಮೊದಲಾದ ವಸ್ತುಗಳ ಶೇಖರಿಸಿ ದೇವ ಮೂರ್ತಿಗಳನ್ನು ಇದಿರಲ್ಲಿಯಿರಿಸಿ ಷೋಡಶದ ಉಪಚಾರ ಪೂಜೆಗಳ ನಿತ್ಯದಲಿ ಮಾಡುವುದೆ ಅರ್ಚನದ ಭಕ್ತಿಯಿದು ತಿಳಿಯೈ 68 ಎದೆ ಶಿರಸು ಕಣ್ಣು ಮನ ಕೈಕಾಲು ಮೊಣಕಾಲು ವಾಗೆಂಬುದೆಂಟಂಗಗಳನು ಪಾದದೆಡೆಯೀಡಾಡಿ ನಮಿಸುವುದೇ ವಂದನವು ಸಾಷ್ಟಾಂಗನಮನವಿದು ತಿಳಿಯೈ 69 ದಾಸೋಹವೆಂಬುದನು ತಿಳಿದು ನೀನನವರತ ಫಲದ ಬಯಕೆಯ ತೊರೆದು ಸೇವೆಯನು ಮಾಡೆ ಸೇವಕನ ನಿನ್ನನ್ನು ತನ್ನ ಬಳಿಗೊಯ್ಯುವನು ಭವಬಂಧ ತೊರೆಯಿಸುತ ಪಾಲಿಸುವನವನು 70 ಸಚ್ಚಿದಾನಂದ ಸ್ವರೂಪದವ ಪರಮಾತ್ಮ ತನ್ನ ಗುಣಗಳನ್ನೆಲ್ಲ ಭಕ್ತರಿಗೆ ಕೊಡುವ ನೀರು ಹಾಲನು ನಂಬಿದಂತೆ ನಂಬುವನನ್ನು ಭಕ್ತರಕ್ಷಕನವನು ಮುಕ್ತಿದಾಯಕನು 71 ಕೃಷ್ಣನು ಪರಬ್ರಹ್ಮ ಕೃಷ್ಣನನು ವಂದಿಸುವೆ ಕೃಷ್ಣನಿಂದಲೆ ಸಕಲ ವಿಶ್ವಗಳ ಸೃಷ್ಟಿ ಸುಕೃತ ದುಷ್ಕøತವೆಲ್ಲ ಕೃಷ್ಣನಡಿಯಲಿ ಮುಡಿಯು ಕೃಷ್ಣನಲಿ ಮನವು 72 ಕಾಮಹತಕನು ರುದ್ರದೇವನಿಲ್ಲಿಯೆ ಇದ್ದು ಅಷ್ಟಯತಿಗಳ ಶುದ್ಧಮಾನಸರ ಮಾಡಿ ಬಾಲಯತಿಗಳ ಮೂಲಕವೆ ಪೂಜೆಯನು ಪಡೆದು ರಾರಾಜಿಸುವೆ ದೇವ ಕೃಷ್ಣರೂಪದಲಿ 73 ಭಾರ್ಗವೀಪತಿಯಾದ ಸಿರಿವರನು ಮಾಧವನು ಭಾರ್ಗವೀರೂಪವನು ಶುಕ್ರವಾರದಲಿ ತಾಳ್ದು ಭಕುತರ ಹೃದಯವನ್ನರಳಿಸುವೆ ನೀನು ಮೋಹಿನೀರೂಪವದು ಮೋಹಕವದಲ್ತೆ 74 ಬಲ್ಲಾಳ ವಂಶಜರು ಉಡುಪ ಕುಲದವರೆಂದು ಭಕುತ ಗುರುವಾದಿರಾಜರ ಹಸ್ತದಿಂದ ಮೂರು ಅವತಾರ ಚಿಹ್ನೆಯ ತಾಳ್ದ ಮಾರುತಿಯ ಆರಾಧ್ಯ ಭೂವರಾಹರ ಕೊಡಿಸಿ ಪೊರೆದೆ 75 ದುಷ್ಟ ಜನಮರ್ದನ ಜನಾರ್ದನನು ನೀನಿರುವೆ ನಿನ್ನ ರೂಪವೆ ಪಕ್ಷನಾಥ ಸೇವಿತವು ಚಕ್ರ ಶಂಖಾಸಿ ಪಾನದ ಪಾತ್ರೆಗಳ ಧರಿಸಿ ದುಷ್ಟ ಶಿಕ್ಷಣಕಾಗಿ ಕಾಳಿ ಸೇವಿಪಳು 76 ಜಮದಗ್ನಿಪುತ್ರನಾಗವತರಿಸಿ ನೀನೊಮ್ಮೆ ಕೊಡಲಿಯಿಂ ಕಡಿಕಡಿದು ದುಷ್ಟರಾಜರನು ನಕ್ಷತ್ರ ಮಂಡಲವ ಭೂ ಮಂಡಲವ ಮಾಡಿ ಪರಶುರಾಮನು ಎಂಬ ಪೆಸರನ್ನು ಪಡೆದೆ 77 ಪರಶುರಾಮನು ರಾಮ ಪರಶುರಾಮನು ಕೃಷ್ಣ ಒಬ್ಬನೇ ಹಲವಾರು ರೂಪಗಳ ತಾಳಿ ಸಾಸಿರದ ನಾಮದಿಂ ಸ್ತುತಿಸಿಕೊಳ್ಳುವೆ ಹರಿಯೆ ನಿನ್ನ ಮಾಯಾರೂಪ ತಿಳಿದವರು ಯಾರು? 78 ಮೇಘದೆಡೆಯಿರುವ ಮಿಂಚಿನ ಹಾಗೆ ನೀನೆಂದು ತಿಳಿಸಲ್ಕೆ ನೀನು ಮೇಘದ ವರ್ಣದವನು ನೀಲತೋಯದ ಮಧ್ಯದಲ್ಲಿರುವ ವಿದ್ಯುತ್ತಿನಂತಿರುವಿ ಯೆಂದು ಶ್ರುತಿ ಹೇಳುವುದು ತಿಳಿಯೈ79 ಪುರುಷೋತ್ತಮನೆ ನಿನ್ನ ಪುರವೆಯೆನ್ನಯ ದೇಹ ಉತ್ತಮನು ನೀನಿರುವೆ ಅಧಮ ನಾನಿರುವೆ ಅಜ್ಞಾನದಾಚ್ಛಾದಿಕೆಯನೆನಗೆ ಹಾಕುತಲಿ ಬಿಂಬರೂಪದಲಿದ್ದು ಬೆಳಗಿಸುವೆ ನನ್ನ 80 ಶ್ರವಣಮನನಾದಿ ಸಾಧನದ ಬಲದಿಂದ ನಾ ನನ್ನ ಮುಸುಕನು ತೆಗೆದರೂ ನೀನು ಎನ್ನ ಬಳಿಯಲ್ಲಿದ್ದು ಕಾಣದಿಹೆ ಪರಮಾತ್ಮ ನಿನ್ನ ಪರಮಾಚ್ಛಾದಿಕೆಯ ತೆಗೆದು ತೋರು 81 ಗೋವರ್ಧನೋದ್ಧಾರಿ ಸಿರಿವರನೆ ನೀನೊಮ್ಮೆ ನಾಭಿರಾಜನ ಪುತ್ರನಾಗಿಯವತರಿಸಿ ಅಜನಾಭವೆಂಬ ಮೋಡವನು ಸೃಷ್ಟಿಸಿ ನೀನು ಲೋಕದ ಕ್ಷಾಮವನು ಹೋಗಲಾಡಿಸಿದೆ 82 ನೀನೊಮ್ಮೆ ದಕ್ಷಿಣದ ಕರ್ಣಾಟಕಕೆ ಬಂದು ಅಜಗರದ ವೃತ್ತಿಯಲಿ ದೇಹವನು ತೊರೆದು ನಿರ್ವಾಣ ಬೌದ್ಧಮತ ಜೈನಾದಿ ಮತಗಳಿಗೆ ಮೂಲಪುರುಷನದಾಗಿ ಮೆರೆದೆ ಪರಮಾತ್ಮ 83 ಸತ್ವ ರಜ ತಮವೆಂಬ ಮೂರು ಗುಣ ಪ್ರಕೃತಿಯದು ಪ್ರಾಕೃತದ ದೇಹವನು ಹೊಂದಿದಾ ಜನರು ಹುಟ್ಟುಗುಣ ಮೂರರಿಂ ಕರ್ಮವನು ಮಾಡುತ್ತ ಸುಖ ದುಃಖವನು ಹೊಂದಿ ಜೀವಿಸುವರವರು 84 ಸತ್ಯಾತ್ಮಕನು ನೀನು ಚ್ಯುತಿಯಿಲ್ಲ ಸತ್ಯಕ್ಕೆ ಅಚ್ಯುತನ ನಾಮದಿಂ ಪಾಪ ಪರಿಹರಿಪೆ ಅಂತವಿಲ್ಲದುದಾತ್ಮ ಆತ್ಮರಕ್ಷಕನಾಗಿ ನಾಮದಲನಂತನೆನಿಸಿರುವೆ ಶ್ರೀಹರಿಯೇ 85 ವೇದರಕ್ಷಕನಾಗಿ ಗೋವುಗಳ ರಕ್ಷಿಸುತ ಗೋವಿಂದನಾಮವನು ಧರಿಸುತಲಿ ನೀನು ನಾಮತ್ರಯಗಳಿವನು ಕರ್ಮಾಂತದಲಿ ಪಠಿಸೆ ಕರ್ಮದೋಷದ ಪಾಪ ಪರಿಹಾರವಹುದು 86 ಸಚ್ಚಿದಾನಂದಸ್ವರೂಪ ಹರಿ ನೀನಿರುವೆ ನಿನ್ನ ರೂಪಗಳೆಲ್ಲ ಪೂರ್ಣವಾಗಿಹವು ಜ್ಞಾನವಾನೆಂದವನು ಹೆರವರ್ಗೆ ತಿಳಿಸುತಿರೆ ನಮ್ಮಲ್ಲಿ ಹೆಚ್ಚುವವು ಅದರಿಂದ ಪೂರ್ಣ 87 ಹರದಾರಿ ಸಾವಿರಾರಿದ್ದರೂ ನಾದವನು ಚಣದೊಳಗೆಯಾಕಾಶವಾಣಿ ಕೇಳಿಸುವದು ಕಾಣದಿಹ ವಿದ್ಯುತ್ತುರೂಪವನು ತಾಳಿದವ ದೇವನಲ್ಲದೆ ಬೇರೆ ಯಾರ ಮಾಯೆಯಿದು 88
--------------
ನಿಡಂಬೂರು ರಾಮದಾಸ
ನಾರಾಯಣ ಹರಿ ವಿಠಲ | ಪೊರೆಯ ಬೇಕಿವಳಾ ಪ ಕಾರುಣಿಕ ಹರಿಯೇಅ.ಪ. ನಾದ ಮೂರುತಿ ನಿನ್ನ | ಪಾದಾನುವರ್ತಿ ಇಹಸಾಧು ತರುಳೆಯ ಕಾಯೊ | ವೇದ ವೇದ್ಯಾ |ಶೋಧಿಸಿದ ಸಂಸ್ಕಾರ | ಕಾದಿಹುದು ಸತ್ಪುಣ್ಯಬೋಧವಿದು ಸಂಪಿಗೆಯ | ಸ್ವಾದು ದರ್ಶಾ 1 ಭವ | ಸಾಗರವ ದಾಂಟಿಸುವೆಯೋಗಿ ಕುಲ ಸದ್ವಂದ್ಯ | ಅಗಜೆದರ್ಶನದೀ 2 ಭಾವಿ ಬೊಮ್ಮನ ಮತವ | ಭಾವದಲ್ಯಭಿವೃದ್ಧಿಗೈವ ಹವಣೆಯು ನಿಂದು | ದೇವದೇವೇಶಾಭಾವಿ ಕಾರ್ಯವು ಎನ್ನೆ | ಜೀವಗಂಕಿತಸೂಚಿಭಾವದಲಿ ತೋರಿರುವೆ | ಶ್ರೀ ವರನೆ ಹರಿಯೇ 3 ಕೈವಲ್ಯ | ದಿಂತ ತವದಾಸ್ಯವನುಈ ತರಳೆಗಿತ್ತು ಸುಖ | ದಿಂದ ನಾಗುವುದೋ 4 ಸಾರ್ವ ಭೌಮ ಸ್ವಾಮಿ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ದರ್ವಿಜೀವಿಯನೂಕಾವುದೆನೆ ಭಿನ್ನಪವ | ನೀ ವೊಲಿದು ಸಲಿಸುವುದುದೇವ ದೇವೇಶ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನಿತ್ಯ ನೂತನ ಮಹಿಮಭೃತ್ಯನನು ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತ ಕರ್ತು ನೀನಾಗಿರಲುಆರ್ತರುದ್ಧರ ಕಾರ್ಯ | ಪೂರ್ತಿಗೊಳಿಸೋ 1 ಉದಧಿ ವಿಧಿ ಜನಕ ವಿಶ್ವೇಶ | ಮುದ ಮುನಿಯ ಸದ್ವಂದ್ಯವದಗಿ ವರಪ್ರದನಾಗಿ | ಮುದವನ್ನೆ ಬೀರೋ 2 ಯೇಸೊ ಜನ್ಮದ ಪುಣ್ಯ | ರಾಶಿ ವದಗಿತೊ ಇವಗೆಆಶಿಸುವ ಹರಿದಾಸ್ಯ | ವಾಸವಾನುಜನೇ ಆಸುರೀ ಭಾವಗಳ | ನಾಶನವ ಗೈಯ್ಯುತ್ತಪೋಷಿಸುವುದಿವನ ಹರಿ | ದಾಸ್ಯ ಕರುಣಿಸುತಾ 3 ನಾನು ನನ್ನದು ಎಂಬ | ಹೀನ ಮತಿಯನೆ ಕಡಿದುದಾಸವಾಂತಕ ಸಲಹೊ | ಜ್ಞಾನ ಪ್ರದನಾಗೀಮೌನಿ ಮಧ್ವರ ಮತದಿ | ಸಾನು ಕೂಲಿಸಿ ದೀಕ್ಷೆಮಾನನಿಧಿ ಗುಣಪೂರ್ಣ | ನೀನಾಗಿ ಪೊರೆಯೋ 4 ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ಸರ್ವೇಶ | ಸರ್ವಸಮ ಮೂರ್ತೇಗುರ್ವಂತರಾತ್ಮಕನೆ | ದರ್ವಿಜೀವಿಯ ಕಾಯೊದುರ್ವಿ ಭಾವ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನಿನ್ನ ಬಗೆ ಬಗೆ ರೂಪಗಳ ಉರಗ ಶಯ್ಯ ರಂಗಯ್ಯಾ ಪ ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ ಶತಧೃತಿ ತಲೆವಾಗಿ ಚತುರತೆÉಯಿಂದಲಿ ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು ರಿತ ಪುಂಜದಾನವನ ತರಿದೊಟ್ಟಿ ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ 1 ಕೃತು ಭುಕು ದೇವಾರಿತತಿ ಸಂಗತಿಯಿಂದ ಮತಿ ಏಕರಾಗಿ ಸಂಮತದಿಂದ ನಡೆದು ಪ ರ್ವತವ ಕಿತ್ತಿ ತಂದು ಉ ನ್ನತವಾದ ಕ್ಷೀರೋದ ಪತಿಯೊಳಗಿಟ್ಟು ಅತಿಬಲದಿಂದ ನಗುತ ಮಥಿಸಲು ಮಹಾ ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ2 ಗತಮಂದ ಮಾರೀಚ ಸುತ ಹೇಮನೇತುರಾ ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧÀರ ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ 3 ಚತುರ ಮೊಗನವರನುತಿಸಿ ಪಡೆದು ಪ್ರಾಗ ರ್ವಿತನಾಗಿ ನೀಲಲೋಹಿತನ ಭಕುತಿಯಿಂದ ತತುವೇಶಜನರ ಶಕುತಿ ಕುಂದಿಸಿ ತಾನೆ ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ ಗತಿಯೆಂದು ವಂದಿಸಲೆ ಕಂಭದಿ ಬಂದು ಸುರರು ಪೂಮಳೆ ಚೆಲ್ಲೆ 4 ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ ಕೃತಕಾರ್ಯನಾಗಿರೆ ರಿತಮದದಲಿ ತಾ ನುತಿಸಲಾದಿತಿಯ ಗರ್ಭದಲ್ಲಿ ಜ ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ ತತಿ ವಿಕ್ರಮತೀರಿತವಾದ ದಯಾಸಿಂಧು 5 ಸೂನು ಪೂಜಿತನಾಗಿ ಮುನಿಯಿಂದ ಪಿತನಗೋಸುಗ ಉಗ ಳುತ ರೋಷ ಕಿಡಿಗಳಾದ ಈರೈದು ಬಾಹೋ ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ ರುತ ಸತ್ಯವತಿ ನಂದನಕುವರ ಪರುಶ ಪಾಣಿ ಮೃತ ಜೀವಿಗಳ ಬದುಕಿಸಿದ ಮಹಾಧೀರಾ 6 ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ ಅನುಜ ಸಹಿತ ಪೋಗಿ ಮುನಿಯ ವಾ ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ ಪುರವಸಾರಿ ಪಿತನಾಜ್ಞ ತಿಳಿದು ಮಾ ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ ಹಿತದಿಂದ ಭಕ್ತಗೆ ಪಟ್ಟಗಟ್ಟಿದÀ ನೋಡಿ 7 ಶತ್ರಪತ್ರಾರುಣ ದಳಾಯುತ ನಯನಾದೇವ| ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ | ಭಂಗ ಬಲಾ | ಚರಿತಪೂರ್ಣ ಕಂಸಾರಿ ಯುತ ಷೋಡಶಾಖ್ಯ ಯುವತಿಯರ ತಂದ ಅ| ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ | ಸಾರಥಿ ಎನಿಸಿ ಕಾಳಗದೊಳು | ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ | ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ 8 ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ | ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು | ಅಪ್ರಾಕೃತ ಕಾಯ ಶಿಶುವಾಗಿ || ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ | ಚಿತ ಮಾರ್ಗದ ಬಿಡಿಸಿ ನಿ | ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ 9 ವಿಹಿತ ಧರ್ಮ ಮರೆದು | ಮಮತೆ ಜಾತಿ ಸಂಕರ | ವ್ರತದಲ್ಲಿ ನಾನಾ ದುಷ್ಕøತ ತುಂಬಿರಲು ದೇವತೆಗಳು ಮರುಗಿ ಅ | ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ | ಸಿತ ಖಡ್ಗಧರಿಸಿ ರಾ ಶೌರಿ | ಸುಕೃತ ನೆನೆವವರಿಗೆ ಭವಸಾಗರ ತಾರಿ10 ಶ್ರುತಿ ಶೀರ್ಷ ಶ್ರುತಿ ಉಪ | ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ | ವತ ಮೂಲ ರಹಸ್ಯ | ತತುವಾದಿನಾಮನು | ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ | ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ ಪ್ಪುತ ಕೊಂಡಾಡುವರು ನಿಂದು | ಭಕುತಪೂ ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು11
--------------
ವಿಜಯದಾಸ
ನಿನ್ನ ಸಂಭ್ರಮದೊಳಗೆ ನೀನೆ ಇರುತಿರುವಿ ಎನ್ನಯ್ಯ ಮರೆದೇನು ಮುನ್ನಾದ ಬವಣೆ ಪ ಅನ್ನವನು ಕಾಣದೆ ಅನ್ನದಿಕ್ಕಿಲ್ಲದೆ ಉನ್ನತೋನ್ನತವಾದ ಚಿನ್ನದರಮನೆಯಲ್ಲಿ ಬಿನ್ನವಿಲ್ಲದೆ ಸಿರಿಯರನ್ನಬಡಿಪ ಮದವೋ 1 ಮಡದಿಯನು ಕಳಕೊಂಡು ಎಡೆಬಿಡದೆ ಅಡವ್ಯಡವಿ ಹುಡುಹುಡುಕಿ ಬೇಸತ್ತು ಕಡುಬಾಯ ಬಿಡುವಗೆ ಮೃಡಮಹಾದೇವತೇರು ಸಡಗರದಿ ನಿನ್ನಡಿಯ ದೃಢದಿ ಪೂಜಿಪರೆಂಬ ಕಡುಗರವದಿರವೇ 2 ನೀರೊಳ್ಜೀವಿಸಿ ಬಲು ನಾರುತಲಿರುವವಗೆ ಹಾರ ಹೀರಾವಳಿ ಗಂಧ ಕಸ್ತುರಿಯ ಮದವೋ ಸಾರಿ ಮನು ಮುನಿಗಳು ಸೇರಿ ನಿಮ್ಮಯ ಚರಣ ವಾರಿಜ ಭಜಿಪ ಮದ ಮೀರಿಹ್ಯದೋ ನಿನಗೆ 3 ತಿರುಕನು ತಾನಾಗಿ ಧರೆಯ ದಾನವ ಬೇಡಿ ಧರೆವರನ ಬಾಗಿಲವ ನಿರುತ ಕಾಯ್ದವಗೆ ಸುರರು ಗಂಧರ್ವ ತುಂಬುರರು ಸಂಗೀತದಿಂ ಹರುಷಗೊಳಿಪುದಕೆ ನೀ ನೇತ್ರ ಮುಚ್ಚಿರುವ್ಯೋ 4 ಭಾರಬೆನ್ನಲಿ ಪೊತ್ತು ಘೋರ ಬಡುತಿರುವವಗೆ ಈರೇಳುಲೋಕದ ದೊರೆಯೆಂಬಹಂಕಾರವೋ ಮಾರಪಿತ ಗತಿಯೆಂದು ಸೇರಿ ಭಜಿಸುವ ದಾಸರರಿಕೆ ಪೂರೈಸದಿದು ತರವೆ ಶ್ರೀರಾಮ 5
--------------
ರಾಮದಾಸರು
ನಿನ್ನಪಾದ ದೊರಕುವುದು ಎಂತೆನಗೆ ರಂಗ ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ 1 ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ ಬನ್ನ ಬಡಿಸಿದೆನಯ್ಯ ನನ್ನನಂಬಿದವರ ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ ನಿನ್ನ ಧ್ಯಾನದ ಖೂನವನ್ನರಿಯೆ ದೇವ 2 ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು ಪರರಿಗೊಂದಿಕ್ಕಿ ನಾನುಂಡಿರುವೆನೊಂದು ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ 3
--------------
ರಾಮದಾಸರು
ನಿನ್ನವ ನಾನು ಎನ್ನಯ್ಯ ನೀನು ನಿನ್ನಿಂದೆನಾನಾ ಎಂದೆಂಬೆ ನಾನು ಧ್ರುವ ನಿನ್ನೊಳು ದಾವ ನಾನು ಎನ್ನೊಳಗಿಹೆ ನೀನು ನಿನ್ನಿಂದೆ ಜೀವಿಸುವನಾಗಿಹೆನು 1 ನನ್ನವಿಡಿದು ನಾನು ಎನ್ನ ಬಾಹ್ಯಾಂತ್ರ ನೀನು ಸೂತ್ರ ನೀನು 2 ಎನ್ನ ಪ್ರೇರಕ ನೀನು ನಿನ್ನ ಪ್ರೀತ್ಯರ್ಥ ನಾನು ನಿನ್ನಿಂದಾದೆ ಪವಿತ್ರ ಪಾತ್ರ ನಾನು 3 ನೀನೆ ಸ್ವಯಂ ಭಾನು ನಿನ್ನಿಂದುದಯ ನಾನು ನಿನ್ನಿಂದಾದ ಮಹಿಗೆ ಪತಿಯೇ ನೀನು 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನೊರೆಗೆ ನಾ ತಿಳಿಯಲಾರೆ ಪ ಪನ್ನಗಾದ್ರಿವಾಸ ಶ್ರೀಹರೆ ಅ.ಪ. ಮಾನವ ನಾನು ಎನ್ನಿಂದ ಸಾಧ್ಯವಿರೆಇನ್ನೂ ಹೆಚ್ಚು ಹೆಚ್ಚು ಭಕುತಿಯನ್ನು ಬೇಡ ಬೇಡ 1 ಬೊಮ್ಮಾದಿ ದೇವತೆಗಳು ಅಮ್ಮ ಲಕುಮಿಯ ಸಹನಿಮ್ಮನ್ನು ತಿಳಿಯರಿನ್ನು ತಿಳಿವ ಹಮ್ಮು ನನಗೇಕೆ ಶೌರೇ 2 ಅನ್ಯಜೀವಿಯಂತರಂಗ ಎಂದೂ ತಿಳಿಯಲಾರೆ ನಾನುಇನ್ನು ಸರಸಿಜಾಮನೊಡಲ ನಿನ್ನ ತಿಳಿವುದೆಂತಹನೇ 3 ಇಷ್ಟೇ ಭಕುತಿಯಿಂದ ನೀನು ತುಷ್ಟನಾಗಿ ಸಲಹಬೇಕುಎಷ್ಟು ಕಷ್ಟಪಟ್ಟರೂ ನಿನ್ನಿಷ್ಟಕೆ ಸರಿ ಹೋಗುವದೆಷ್ಟು 4 ಭಕುತಿಯಲ್ಲಿ ಸತತವಿರಲು ಶಕುತಿಯನ್ನುನ್ನೀಯೊ ಎನಗೆಸಕಲ ಜಗದಿ ಮೆರೆವ ಗದುಗು ವೀರನಾರಾಯಣ5
--------------
ವೀರನಾರಾಯಣ
ನಿರ್ವಿಕಲ್ಪರೂಪವೇ ಆನಂದರುಪವೇ ಸರ್ವಾಧಾರ ಚಿನ್ನಭಾ ನೀನೆ ಆ ಸ್ವಯಂಪ್ರಭಾ ಪ ನೀ...... ಅನುಭವದಿ ಮನಗಾಣುವಧೀ ಭಾವಾತೀತ ಬೋಧವಾ ನಿತ್ಯಾನಂದದಾತ್ಮವಾ ಕಲ್ಪನೆ ಎರಡರ ಮಧ್ಯದೊಳಿರುವ ಕಲ್ಪನೆ ಸಾಕ್ಷಿರೂಪವೇ ಪೂರ್ಣಾನಂದ ನೀನಿಹೆ 1 ಈ........... ತೋರಿಕೆ ಎಲ್ಲಾ ಕಲ್ಪಿತಾ ಮನಸಿನದೆಲ್ಲ ಜೀವಿತಾ ಮನವೇ ಚಿತ್ತಾಕಾಶ ತಾ ಪರಿ ಈ ತೋರಿಕೆ ಮಿಥ್ಯಾ ಚಿನುಮಯ ಮಾತ್ರ ನೀನಿಹೆ ಶಂಕರಗುರುವಿನ ಬೋಧವೇ2
--------------
ಶಂಕರಭಟ್ಟ ಅಗ್ನಿಹೋತ್ರಿ
ನೀ ಬಿಟ್ಟ ಬಳಿಕೆನ್ನ ಸಾಧ್ಯವೇನಿಹ್ಯದು ನೀ ಕರುಣಗೈದರೆ ಸಕಲ ಸಾಧ್ಯ್ಹರಿಯೆ ಪ ಯಂತ್ರವಾಹನೆ ಯಂತ್ರ ನಡೆಸದೆಯಿರಲು ಯಂತ್ರ ನಡೆಯುವುದೆಂತು ಸ್ವಂತ ತಾನೇ ಮಂತ್ರಗಾರಿಲ್ಲದೆ ತಂತ್ರ ತೋರ್ವುದೆ ಸ್ವ ತಂತ್ರ ನೀನಲ್ಲದೆ ಅತಂತ್ರನಿಂದೇನಹುದು 1 ಪಡೆದ ಮಾತೆಯು ಕೂಸಿನೊಡಲು ತಾ ನೋಡದಿರೆ ಒಡಲೊಳಿಟ್ಟ್ಹದಿನಾಲ್ಕುಪೊಡವಿಗಳನಾಳುವ ಒಡೆಯ ಕೊಡದಿರೆ ಕೀರ್ತಿ ಪಡೆಯುವುದೆ ಜೀವಿ 2 ನಿನ್ನಿಂದೆ ಬೆಳಗುವುದು ನಿನ್ನಿಂದೆ ಮುಳುಗುವುದು ನಿನ್ನಿಂದಳಿಯುವುದು ನಿನ್ನಿಂದಲುಳಿಯುವುದು ನಿನ್ನಿಬಿಟ್ಟಿನ್ನಿಲ್ಲ ಎನ್ನಯ್ಯ ಶ್ರೀರಾಮ ಮನ್ನಿಸಿ ಕೃಪೆಮಾಡು ಎನ್ನ ನೀ ಬಿಡದೆ3
--------------
ರಾಮದಾಸರು
ನೀರೇ ನೀಕರೆ ತಾರೇ ಪ್ರಾಣದೊಲ್ಲಭನಾ|ಜಾಣ ಸುಜ್ಷಾನೇ ಪ ಹೃದಯ ಮಂದಿರದೊಳು ಅರುಹುದೀಪವಹಚ್ಚಿ| ಹಾಡಿ ನೋಡಲಿಹೆ ಮೈದೋರನ್ಯಾಕ|ಮೈದೋರ ನ್ಯಾಕ 1 ಧ್ಯಾಸಮಂಚದಿ ಭಕುತಿ ಹಾಸಿಕೆಯು ಸು| ವಾಸನೆಪುಣ್ಯಕ ವಲಿದು ಬಾರನೇ|ವಲಿದು ಬಾರನೇ 2 ಸಕಲ ನುಕೂಲಿರಲು ಕ್ರೀಡೆಗೆ ಇನಿಯನು ಪುಕಟ ದೊಲಿಯಭಾಗ್ಯ ಮಂದಳು ಕಾಣೇ|ಮಂದಳು ಕಾಣೇ 3 ಅರಿದವಳು ಎಂದು ಅರಿತು ಕೈಯ್ಯವಿಡಿದು| ಮರಳೆನ್ನ ಅಂತ ನೊಡುವರೇನೇ ನೋಡುವರೇನೇ 4 ಧರೆಯೊಳು ಭೋಗಪದಾರ್ಥಿವು ಸರ್ಪದ| ಸರಸದ ಓಲಾಯಿತು ಅಗಲಿರಲಾರೇ|ಅಗಲಿರಲಾರೇ 5 ಬಂದರೊಂದಿನ ನಿಶೆದಲಿ ಕಳೆಗೂಡದೇ| ಒಂದು ಜಾವ ವ್ಯರ್ಥಿಹೋಯಿತಲ್ಲಮ್ಮಾ|ಹೋಯಿತಲ್ಲಮ್ಮಾ 6 ಗುರುವರ ಮಹಿಪತಿ ನಂದನ ಪ್ರಭುವಿನ| ಚರಣವಗಾಣದೇ ಜೀವಿಸಲಾರೆ|ಜೀವಿಸಲಾರೆ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೊಂದೆನಯ್ಯ ಭವದೊಳು ಸಿಂಧುಶಯನ ವೆಂಕಟೇಶ ಪ ಒಂದು ದಿನಸುಖವಿಲ್ಲ ಗೋ- ವಿಂದ ಬಹಳ ಕರುಣದಿಂದ ನಿ- ರ್ಬಂಧವನ್ನು ಕಳೆದು ಎನ್ನ ತಂದೆ ನೀನೇ ರಕ್ಷಿಸಯ್ಯ 1 ಕಪಟ ನಾಟಕ ಸೂತ್ರಧಾರಿ ಅಪರಿಮಿತ ಮಹಿಮ ಎನ್ನ ಅಪರಾಧವನು ಕ್ಷಮಿಸಿ ಮುಂದೆ ಕಪಟವಿಲ್ಲದೆ ರಕ್ಷಿಸಯ್ಯ 2 ಕಂದ ಪ್ರಹ್ಲಾದನಂತೆ ತಂದೆ ಮುನಿದಾಡುವ ತೆರದಿ ಗ- ಜೇಂದ್ರನಂತೆ ದೃಢವಿಲ್ಲ ಮಂದಮತಿಯ ರಕ್ಷಿಸಯ್ಯ 3 ನರ ಜನ್ಮದೊಳಗೆ ಪುಟ್ಟಿ ನರಕ ಭಾಜನ ತಾನಾಗಿ ದುರಿತ ಪಂಜರದೊಳಗೆ ನಾನು ಸೆರೆಯ ಬಿದ್ದೆ ರಕ್ಷಿಸಯ್ಯ 4 ಹಗಲು ದೃಷ್ಟಿ ಕಾಣದವಗೆ ಮೊಗವುಗೊಂಡು ರಾತ್ರಿಯೊಳು ಹಗೆಯ ವನದಿ ಸಿಕ್ಕಿದವನ ಅಗಲಿ ಹೋಗದೆ ರಕ್ಷಿಸಯ್ಯ 5 ಸಾವಿರ ಅಪರಾಧವನು ಜೀವಿತಾತ್ಮನೆ ಕ್ಷಮಿಸಿ ಎನ್ನ ಮೂವಿಧಿಯೊಳು ಸಿಲುಕದಂತೆ ಭಾವಿಸಿಯೆ ರಕ್ಷಿಸಯ್ಯ 6 ವರಾಹತಿಮ್ಮಪ್ಪ ಮನದ ಘೋರ ದುಃಖವನ್ನು ಕಳೆದು ಮೀರಿ ಬಂದಾಪತ್ತಿನೊಳು ಕಾರಣಿಕನೆ ರಕ್ಷಿಸಯ್ಯ 7
--------------
ವರಹತಿಮ್ಮಪ್ಪ