ಒಟ್ಟು 127 ಕಡೆಗಳಲ್ಲಿ , 40 ದಾಸರು , 123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನ್ನೊಳಿಂತು ನಿರ್ದಯವೆಲೊ ದೇವ ನೀ ಕರುಣದಿ ನೋಡದಿರಲು ಮತ್ತಾವ ಕಾವ ಪ ಗಜರಾಜನ ನೀ ಸಲಹಲಿಲ್ಲೇ ಅಂದು ನಿಜಭಕ್ತ ಪ್ರಹ್ಲಾದನ ಪೊರೆಯಲಿಲ್ಲೇ ಪರಿ ಎಲ್ಲ ಬಲ್ಲೆ ನಿನ್ನ ಭಜನೆಯೊಳಿಹ ಎನ್ನನೇಕೆ ನೋಡಲೊಲ್ಲೆ 1 ದ್ರೌಪದಿ ಕರೆಯಲಕ್ಷಯ ವಸ್ತ್ರವ ಕೊಟ್ಟೆ ನೀನು ಶಾಪದ ಶಿಲೆಯ ಕುಲಕೆ ತರಲಡಿಯಿಟ್ಟೆ ಪಾಪಿ ಅಜಮಿಳನ ಅಘಗಳ ಸುಟ್ಟೆ ಸ್ವಾಮಿ ಶ್ರೀಪದಗ್ರಸ್ತನಾದೆನ್ನ ನೀ ಕೈಬಿಟ್ಟೆ 2 ಬಿಡಬೇಡೆನ್ನ ಕೈಯ ಶ್ರೀನಿವಾಸ ಬಹು ಬಡವ ನಾನಹುದು ಮಧ್ವಗೃಹವಾಸ ಕಡುಪಾಪಿ ನಾನಲ್ಲವೊ ರಂಗೇಶವಿಠಲ ದೃಢವಾಗಿ ನಂಬಿಹೆನೊ ನಿನ್ನ ಸರ್ವೇಶ 3
--------------
ರಂಗೇಶವಿಠಲದಾಸರು
ರಂಗ ಬಾರನ್ಹ್ಯಾಗೆ ಮಾಡಲಂಬುಜಾಕ್ಷಿಯೆ ರಂಗ ಬಾರನ್ಹ್ಯಾಗೆ ಮಾಡಲೆ ಪ ತಾಪ ಹೋಗದು ಶೀತ ಕಳೆವೊ ಸೂರ್ಯನಂತೆ ದ್ವಾರಾವತಿಯ ನಿಲಯನಮ್ಮ 1 ಅಕ್ಕ ರುಕ್ಮಿಣಿಯಲ್ಲಿ ನಕ್ಷತ್ರಮಧ್ಯಚಂದ್ರನಂತೆ ಪೊಕ್ಕಳಿಂದಲಜನ ಪಡೆದ ಚಕ್ರಧಾರಿ ಅಕ್ಕರ ಪಡುವೊ 2 ಕರೆದುತಾಹೋರೊಬ್ಬರಿಲ್ಲ ಕರುಣಾನಿಧಿಯೆಂಬುವುದು ಸಲ್ಲ ತರುಣಿ ಸತ್ಯಭಾಮೆಗಧಿಕ ತಿಳಿದು ತನ್ನ ರುಕ್ಮಿಣಿಯಲ್ಲಿರುವ 3 ಉಂಗುರದ ಹರಳಿನಂತೆ ಹೊಂದಿಕೊಂಡು ರುಕ್ಮಿಣಿಯನ್ನು ಇಂದಿರೇಶ ಬಿಟ್ಟಿನ್ನೊಬ್ಬರ ಮಂದಿರಕ್ಕೆ ಬಂದಿಹನ್ಹ್ಯಾಗೆ 4 ಮಂದಮತಿಯು ಆದನೇನೆ ತಂದೆಯಾದ ಸತ್ರಾಜಿತನು ತಂದುಕೊಟ್ಟನೆನ್ನ ಈ ಸುಂದರಳಾದ ಸೌ(ಸವ?) ತಿ ಕೆಳಗೆ 5 ಅಕ್ರೂರಜಮಿಳಂಬರೀಷ ಚಿಕ್ಕಧ್ರುವ ಪ್ರಹ್ಲಾದ ಗಜನು ಭಕ್ತಿಯಿಂದ ಕರೆಯೆ ಕಣ್ಣೆತ್ತಿ ನೋಡನವರನೀಕಾಲಕ್ಕೆ 6 ಗಾಯನದಿ ಗಂಧರ್ವ ಬಂದು ನಾರದ ಸುದಾಮ ಬಂದು ಬೇಡಿಕೊಂಡು ಕರೆಯಲವರ ನೋಡಿ ಮುಂದಕೆ ಬರುವನಲ್ಲ 7 ಸೋಳ ಸಾವಿರ ಸತಿಯರೆಲ್ಲ ಭಾಳ ಚಿತ್ರಭೂಷಿತರಾಗಿ ಏಳು ಕೃಷ್ಣೇಳೆಂದು ನಾಲ್ಕು ತೋಳು ಪಿಡಿದು ಕರೆವೋಣೇನೆ 8 ನೀಲ ಜಾಂಬವಂತಿ ಹಚ್ಚಿದ್ಹಗಲು ಬತ್ತಿಯಂತೆ ಸುತ್ತುಗಟ್ಟಿ ಕರೆವೋಣೇನೇ 9 ಪುತ್ಥಳ್ಯಂತ ರುಕ್ಮಿಣಿ ತೊಡೆಯಲಿಟ್ಟು ಕುಳಿತನಿಂದಿರೇಶ ಬಿಟ್ಟರಾಕೆ ನಮ್ಮನು ಕಣ್ಣೆತ್ತಿ ನೋಡೋದಷ್ಟೆ ಹೊರತು 10 ಗೊಲ್ಲ ಸತಿಯರೆಲ್ಲ ತಮ್ಮಲ್ಲಿ ದಧಿಬೆಣ್ಣೆಗಳ ತಂದು ಮೆಲ್ಲು ಕೃಷ್ಣಯೆಂದು ಕರೆಯೆ ಫುಲ್ಲನೇತ್ರ ತೆಗೆದುಕೊಂಡ11 ಕುಬ್ಜೆ ಕರದಿ ಗಂಧ ಹಚ್ಚೇನೆಂದು ಕರೆಯೆ ಬೆನ್ಹತ್ತಿ ಬರುವನೇನೆ ಕೃಷ್ಣ 12 ಸಾಸಿರ್ಹೆಡೆಯ ಮಂಚವಿಳಿದು ಸರಸವಾದ ವಚನದಿಂದ ಭೀಷ್ಮೆ ಭಿಡಿಯವೇನೆ ಭೀಮೇಶಕೃಷ್ಣನ ಕರೆವೋದಕ್ಕೆ13
--------------
ಹರಪನಹಳ್ಳಿಭೀಮವ್ವ
ರಾಮರಾಮ ರಾಮ ರಾಮಸೀತಾರಾಮ ದಶರಥನಂದನ ರಾಮ ದಯಮಾಡು ಶ್ರೀರಾಮ ಪಶುಪತಿ ಪಾಲಕರಾಮ ಪಾಲಿಸೊಯನ್ನನು ಶ್ರೀರಾಮ ಪ ಭಕ್ತವತ್ಸಲರಾಮ ಪಾಂಡವ ಪಕ್ಷಕರಾಮ ಮುಕ್ತಿದಾಯಕ ರಾಮ ಮುನಿಗಣ ವಂದ್ಯರಾಮ ಯುಕ್ತ ಜಗತ್ಕರ್ತರಾಮ ಇನಕೂಲಭೂಷಣರಾಮ ಮೌಕ್ತಿಕ ಮಣಿಗಣರಾಮ ಮಾಣಿಕ್ಯ ಮುಕುಟಧರರಾಮ 1 ಅಹಿಪಶಯನ ಶ್ರೀರಾಮ ಅನೇಕ ಚರಿತರಾಮ ಅಮಿತ ಪರಾಕ್ರಮ ರಾಮ ಇಹಪರ ಬಾಂಧವ ರಾಮ ವಿಶ್ವಕುಟುಂಬ ರಾಮ ಮಹಾಮಹಿಮ ಶ್ರೀರಾಮ ಮನುಜಾಧಿಪತಿರಾಮ 2 ಭೂತದಯಾಪರರಾಮ ಪುಣ್ಯಪುರುಷ ಶ್ರೀರಾಮ ಪಾತಕ ಭಯಹರರಾಮ ಪತಿತ ಪಾವನ ರಾಮ ನಾಥ ಜಗತ್ರಯರಾಮ ಅನಾಥ ರಕ್ಷಕರಾಮ ಸೇತುಬಂಧನ ರಾಮ ಶಾಶ್ವತ ವಿಗ್ರಹರಾಮ 3 ಮಂಗಳ ಮೂರುತಿ ರಾಮ ಮಧುಸೂದನ ಶ್ರೀರಾಮ ಗಂಗಾಪಿತ ಹರಿರಾಮ ಗೌರೀವಲ್ಲಭರಾಮ ಶೃಂಗಾರಾಂಗ ರಾಮಾಶ್ರಿತಜನ ಪೋಷಿತರಾಮ ರಾಜೀವ ನಯನ ರಾಮ 4 ಸತ್ಯವಾಕ್ಯ ಶ್ರೀರಾಮ ಸದಾನಂದ ರಾಮ ನಿತ್ಯನಿರಂಜನ ರಾಮ ನಿರ್ವಿಕಲ್ಪ ಶ್ರೀರಾಮ ಭೃತ್ಯಕೋಟಿ ಸಂಘರಾಮ ಪುಣ್ಯಪ್ರಭಾವ ಶ್ರೀರಾಮ ದೈತ್ಯಾಂತಕ ಶ್ರೀರಾಮ ತಾಟಕಮರ್ದನ ಶ್ರೀರಾಮ 5 ನವನೀತ ಹೃದಯರಾಮ ಕೋಟಿ ಭಾನುತೇಜ ರಾಮ ಕರುಣಸಾಗರ ರಾಮ ಹಾಟಕಾಂಬರಧರ ರಾಮ ಆದಿನಾರಾಯಣ ರಾಮ ಕೋಟಿಕಂದರ್ಪರೂಪ ರಾಮ ಕೋಮಲಗಾತ್ರರಾಮ 6 ಯದುಕುಲಾಬ್ಧಿಚಂದ್ರ ರಾಮ ಯಶೋದಾನಂದನ ರಾಮ ಮೃದು ಮಧು ಭಾಷಣರಾಮ ಮೂಲರೂಪ ಶ್ರೀರಾಮ ಗದಧರ ವಂದ್ಯರಾಮ ಘನಗಂಭೀರರಾಮ ಪದುಮನಾಭ ಶ್ರೀರಾಮ ಪರಮಕೃಪಾಳುರಾಮ 7 ಸರಸಿಜಭವನುತರಾಮ ಸದ್ವಿಲಾಸ ಶ್ರೀರಾಮ ಕರಿರಾಜ ಪಾಲಕ ರಾಮ ಕಲ್ಮಷ ಪರಿಹರರಾಮ ಸುರಪತಿ ವಂದ್ಯರಾಮ ಸುಜನಾಂತರ್ಯಾಮಿ ರಾಮ ಶರಧಿಶಯನ ಶ್ರೀರಾಮ ಶಾಙ್ರ್ಞಪಾಣಿ ರಾಮ 8 ಕಮಲೋದರರಾಮ ಘನಗುಣಶಾಂತ ರಾಮ ಸಾರಥಿ ರಾಮ ಕಮಲಮನೋಹರ ರಾಮ ಗರುಡವಾಹನರಾಮ ಕಮಲಾಪ್ತ ಶಶಿನೇತ್ರ ಕರ್ಮಸಾಕ್ಷಿ ಭೂತರಾಮ 9 ಈಶ ಜಗತ್ರಯ ರಾಮ ವಿಷ್ಣುಸರ್ವೋತ್ತಮ ರಾಮ ವಾಸುದೇವ ಕೃಷ್ಣರಾಮ ವಸುದೇವ ನಂದನ ರಾಮ ಭೂಸುರಪ್ರಿಯ ಶ್ರೀರಾಮ ಸರ್ವಪೂಜಿತರಾಮ ವಸುಗಿರಿ ವಾಸರಾಮ ವೈಕುಂಠನಿಲಯರಾಮ 10 ನೀಲಮೇಘವರ್ಣರಾಮ ನಿಖಿಲವೈಭವರಾಮ ಪುಂಡರೀಕ ವರದ ರಾಮ ಫಾಲಲೋಚನ ಪ್ರಿಯರಾಮ ಪಾಂಡುರಂಗ ಶ್ರೀರಾಮ ಕಾಲಿಯಾಮರ್ದನರಾಮ ದ್ವಾರಕಾವಾಸರಾಮ 11 ವೇಣುನಾದ ಶ್ರೀರಾಮ ವೆಂಕಟರಮಣ ರಾಮ ಗಾನಲೋಲ ಶ್ರೀ ರಾಮ ಕಂಬುಕಂಧರರಾಮ ಮಾನಿತ ತ್ರಿಭುವನರಾಮ ಮಂದರಧರ ಶ್ರೀರಾಮ ಧೇನು ಪಾಲಕ ರಾಮ ದೇವಾಧಿದೇವ ರಾಮ 12 ಕುಂಭಿನೀಧವ ರಾಮ ಕುಶಲವ ಜನಕರಾಮ ಅಂಬರ ಧ್ರುವನಂತೆ ರಾಮ ಅಜಮಿಳನಂತೆ ರಾಮ ಪೊರೆದಂಥ ರಾಮ 13 ತಾಪತ್ರಯದಲಿ ರಾಮ ನಾತಪಿಸುತಿರುವೆ ರಾಮ ಪರಿ ತಾಪವ ರಾಮ ಹೆದರಿಸಿ ಕಳೆಯೊ ರಾಮ ಭೂಪ ನೀನಲ್ಲದೆ ರಾಮ ಭೂವಿಯೊಳಧಿಕ ನೀನಲ್ಲವೆರಾಮ ಕಾಪಾಡುವ ಭಾರರಾಮ ಕರ್ತನು ನೀನೆ ರಾಮ 14 ನಿತ್ಯ ಕಲ್ಯಾಣರಾಮ ಅಘನಾಶನ ಶ್ರೀರಾಮ ಅನಂತನಾಮರಾಮ ಜಗದೊಳಧಿಕನಾದರಾಮ ಜಯ`ಹೆನ್ನೆವಿಠಲ’ ರಾಮ ಮನ್ನಿಸಿ ಸಲಹೊರಾಮ 15
--------------
ಹೆನ್ನೆರಂಗದಾಸರು
ಲೋಕನೀತಿ ಅಂತರಂಗದ ರೋಗ ಯಾವುದು ಅದುಚಿಂತೆಯಲ್ಲದೆ ಮತ್ತ್ಯಾವುದು ಪ. ಸಂತತ ಶ್ರೀಹರಿನಾಮದಿಂದ್ಹೋಹುದುಅಂತ್ಯಕೊದಗಿತಜಮಿಳನಿಗಿನ್ನಾವುದು ಅ.ಪ. ಶ್ರವಣ ಮನನ ಸಾಧನ ನವವಿಧಭಕ್ತಿಭವಬೇರ ಕಡಿವುದೆಂದರಿಯಬೇಕುರವಿಕುಲಾಂಬುಧಿಸೋಮ ರಾಮನ್ನ ಚಿಂತಿಸಿಭವವಾರಿಧಿಯ ದಾಟುವರೆಲ್ಲರು ಕೇಳಿ 1 ಜರಾಮರಣಾದಿ ದುಃಖಗಳ ಪರಿಹರಿಸಿಪರಿಪರಿಯಾನಂದ ಕೊಡುವುದಿದುಮರೆಯದೆ ಮನದಲಿ ಒಮ್ಮೆ ನೆನೆದು ಪಾಡೆಸರುವಾಭೀಷ್ಟವ ಕೊಡುವುದಿದೊಂದೆವೆ 2 ಭಯಗಳ ಬಿಡಿಸಿ ಅಭಯಗಳ ಕೊಡಿಸುವಭವದೂರ ಗೋವಿಂದನೆಂದರಿತುಹಯವದನನೆ ಎನ್ನ ಉದ್ಧರಿಸೊ ಎಂದುನಯದಿಂದ ಬೇಡುವರ ಭಾಗ್ಯವೆ ಭಾಗ್ಯ 3
--------------
ವಾದಿರಾಜ
ಲೋಕನೀತಿಯ ಹಾಡುಗಳು ಆರು ಹಿತರಾದಾರು ಈ ವಿಶ್ವದೊಳಗೆ ಕೃತಿ ಹೊರತು ಪ ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ ಪತಿತ ಪಾವನ ಹರಿಯ ನಾಮ ಹಿತವಾಯ್ತು 1 ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ ತನುವಲ್ಲ ಡಂಬರದ ವೇದಾಂತವಲ್ಲ2 ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ ಕರಿರಾಜ ಹನುಮಾದಿ ನಿಜ ಭಕ್ತರಿಂಗೇ ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ ಪರಮ ಪತಿವ್ರತಾ ರಮಣಿ ದ್ರೌಪದಿಗೇ 3 ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ ನಿರುತವೂ ಭಜಿಸಿದ ಪರಮ ದಾಸರಿಗೆ ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು 4 ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು 5
--------------
ಕರ್ಕಿ ಕೇಶವದಾಸ
ವಂದಿಸುವೆನು ನಿನ್ನ ಅರವಿಂದಲೋಚನ- ದಿಂದ ನೋಡೊ ನೀ ಎನ್ನ ವಂದಿಸುವೆ ಅರವಿಂದಲೋಚನ- ದಿಂದ ನೋಡೊ ದಯಾಸಿಂಧು ಎನಿಸುವೆ ನಂದನಂದನನಾದ ಶ್ರೀ ಮುಕುಂದ ನೀ ಮುಚು- ಕುಂದ ವರದ ವಂದಿಸುವೆನು ನಿನ್ನ ಪ ಅಂಬರೀಷನು ಏನೋ ಮುಚುಕುಂದ ಮುನಿವರ- ನೆಂದು ರಕ್ಷಿಸುವೇನೊ ದ್ವಿಜ ತಂದವಲಕ್ಕಿ ತಿಂದ ಭಿಡೆಯಗಳೇನೊ ನೀನೆ ಸುರಧೇನು ಕಂದ ಧ್ರುವಪ್ರಹ್ಲಾದ ಕರೆಯಲು ಬಂದು ಭರದಿಂದವರ ಸಲಹಿದೆ ಮಂದಮತಿ ನಾ ಮ- ತ್ತೊಂದನರಿಯದೆ ವಂದಿಸುವೆ ನಿನ್ನ 1 ಗಜನು ಅಜಮಿಳನೇನೊ ಪಾದಾಂಬುಜ ಸ್ತುತಿಸ- ಲಜಸುತನು ನಾರದನೇನೊ ನಿಜ ಭಕುತಿಯಿಂದಿರಲ್ವಿದುರ ಉದ್ಧವನೇನೊ ನದಿಯಲ್ಲಿ ನಿನ್ನ ನಿಜಸ್ವರೂಪವ ತೋರಲಿಕ್ಕೆ ನಿನ್ನ ಬಾಂಧವಕ್ರೂರನೇ ನಾ ಕೇಳು ಘನ್ನ ಮಹಿಮ ಪ್ರಸನ್ನನಾಗಲಿಕ್ವಂದಿಸುವೆನು ನಿನ್ನ 2 ಸತ್ವರೊಳು ನಾನಲ್ಲ ಅಹಲ್ಯೆ ದ್ರೌಪದಿ ಭಕ್ತಿ ಮೊದಲೆನಗಿಲ್ಲ ಪಾಂಡವರ ದುರಿತಾಪತ್ತು ಕಳೆದ್ಯೊ ನೀಯೆಲ್ಲ ಕೇಳೆನ್ನ ಸೊಲ್ಲ ಭಕ್ತಾಧೀನನೆ ಭಯನಿವಾರಣ ಇಷ್ಟು ಭವಭಯ ಬಿಡಿಸಿ ಭೀಮೇಶಕೃಷ್ಣ ನಿನ್ನದಯ- ವಿಟ್ಟುಕರುಣಿಸೊ ವಂದಿಸುವೆನು ನಿನ್ನ 3
--------------
ಹರಪನಹಳ್ಳಿಭೀಮವ್ವ
ವರದವಿಠಲ ದೇವನ ಪೊರೆಯವುದಾನರನ ಪ ಬಂದ ವಿಭೀಷಣನ ಚಂದದಿ ಸಲಹಿದನು 1 ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ ವಿಜಯನ ರಥಸೂತನ 2 ಗಂಗೆಯ ಪಡೆದವನ ರಥಾಂಗವ ಪಿಡಿದವನ 3 ಖ್ಯಾತ ಪಾದಾಂಬುಜನ ಸೇತುವಿಧಾತನ 4 ರಾಮನ ಜಗದಭಿರಾಮನ ದೈತ್ಯ ವಿ ರಾಮನ ಭಜಕನಾ ರಾಮನ ದಶರಥ ರಾಮನ ಸೀತಾ ರಾಮನ ಗುಣಧಾಮನ 5 ಪಂಕಜನೇತ್ರನ ಪರಮ ಪವಿತ್ರನ ಶಂಕರ ನುತಿ ಪಾತ್ರನ ವೆಂಕಟರಮಣನ ಕಿಂಕರ ಶರಣನ ಸಂಕಟಹರ ನಾಮನ6
--------------
ವೆಂಕಟವರದಾರ್ಯರು
ವೆಂಕಟೇಶನ ನಂಬಿರೊ ನೀವೆಲ್ಲರೂ | ವೆಂಕಟೇಶನ ನಂಬಿರೋ || ವೆಂಕಟೇಶನ ನಂಬಿ | ಮಂಕುಜನರೆ ನಿಮ್ಮ | ಸಂಕಟ ಪರಿಹರಿಸಿ ತ | ನ್ನಂಕಿತವ ನೀವ ಪ ಗುಣ ಒಂದು ನೋಡಿದಿಯಾ ಅಜಮಿಳ | ಗುಣವೇನು ಮಾಡಿದನು | ಗುಣ ಶಿರೋಮಣಿ ಮ | ರಣ ಬಂದಾಗ ಸ್ಮ | ರಣೆ ಇತ್ತು ಅವನ ನಿ | ರ್ವಾಣಕ್ಕೆ ಕರಿಸಿದಾ 1 ಕುಲದಲ್ಯಾತರವನು | ಕುಲಶಿಖಾಮಣಿ | ನಿಳಗೆ ಪೋಗಿ ಕುಡತಿ ಪಾಲಿಗೆ ಅವನಿಗೊಲಿದು ನಿ | ಶ್ಚಲ ಭಾಗ್ಯವನಿತ್ತ 2 ಗುಣ ಒಂದು ನೋಡಿದಿಯಾ | ವಾಲ್ಮೀಕಿ | ಗಣದ ಕೂಟದವನೆ | ಕ | ರುಣ ಮಾಡಿ ಅವಗೆ ಚ | ರಣವನ್ನು ತೋರಿ ಆ | ಕ್ಷಣದಲ್ಲಿ ಸಾಕೀದ 3 ಪತಿವ್ರತರ ನೋಡಿದಿಯಾ | ಗೋಪಿಯರು ಪತಿ ಧರ್ಮದಲ್ಲಿ ಇದ್ದರೇ | ಪತಿತಪಾವನ ಸಂಗತಿಯಲ್ಲಿ ಆ ನಾರಿಯರಿಗೆ | ಅತಿಶಯವಾದ ಸದ್ಗತಿಯ ಕರುಣಿಸಿದ4 ಗುಣಿ ಕುಲ ಗಣ ಮಿಕ್ಕಾದ ವ್ರತಂಗಳು | ದಣಿದು ಮಾಡಲಿಬೇಡಿರೊ | ಬಣಗುದೈವದ ಗಂಡ ವಿಜಯವಿಠ್ಠಲನ್ನ | ಮನದೊಳು ನೆನೆದರೆ ನೆನೆಸಿದ ಫಲನೀವಾ 5
--------------
ವಿಜಯದಾಸ
ವೇದವಿದಿತ ಶೌರೀ ಮುರಾರೀ ಮಧು ಕೈಟಭವೈರೀ ಪ ಭೋಗಿ ಶಯನ ಮಾಯ ಶ್ರೀಗುರು ಚಿನ್ಮಯ ನಾಗಭೂಷಣಹೃದಯಾ ಸದಯಾ ಅ.ಪ ನಡುಗಡಲಿನೊಳೆನ್ನ ಬಿಡಬೇಡ ಸಲಹೆನ್ನ ಅಡಿಗೆರಗುವೆ ನಿನ್ನ ಶ್ರೀಶ ಮೋಹನ್ನಾ ಕಡುಬಾಲ ಧ್ರುವ ತನ್ನದೃಢದಿ ನೆನೆಯೆ ನಿನ್ನ ಪಡೆದನು ಪದವಿಯ ತಾ ವಿನೀತ 1 ಅಜಮಿಳವರದನೆ ಗಜರಾಜಗೊಲಿದನೆ ಸುಜನ ಸಮ್ಮಾನಿತನೆ ಮಾಂಗಿರಿಯರಸನೆ ಅಜಸುರ ವಿನುತನೆ ರಾಮದಾಸಾರ್ಚಿತನೆ ಭಜಕ ವಾರಿಧಿಸೋಮ ವಿರಾಮಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವ್ಯರ್ಥದಲಿ ತೋರುವನೆ ತ್ರೈಲೋಕ್ಯಕರ್ತ ಭಕ್ತನಾದರೆ ಪರಮ ಮುಕ್ತಿ ಸೇರುವುದು ಪ ಉತ್ತಾನ ಭೂಪತಿಯ ಪುತ್ರನಂತಿರಬೇಕು ಸತ್ಯವೊಂದಿರಬೇಕು ಹರಿಶ್ಚಂದ್ರನಂತೆ ಭಕ್ತಿರಸವಿರಬೇಕು ಪ್ರಹ್ಲಾದನಂತೆ ಹಸ್ತವಿರಬೇಕು ಶ್ರೀರಾಮ ಭಕ್ತನಂತೆ 1 ವ್ರತವ ಮಾಡಲು ಬೇಕು ಅಂಬರೀಶನ ಪರಿಯ ಪಥವ ನಡೆಯಲು ಬೇಕು ವಿಹಗನಂತೆ ಶತಮುಖವ ರಚಿಸಿದರೆ ಪುರುಹೂತನಂತಿಹನು ಯತಿಯಾಗಬೇಕು ಗುರುಮಧ್ವಪತಿಯಂತೆ 2 ಗೀತಸೇವನೆ ಬೇಕು ನಾರದರ ತೆರನಂತೆ ಪ್ರೀತನಾಗಲು ಬೇಕು ಪಾರ್ಥನಂತೆ ನೀತಿಶಾಸ್ತ್ರವು ಬೇಕು ಶುಕಶೌನಕರಂತೆ ಖ್ಯಾತಿಯಿರಬೇಕು ರವಿಜಾತನಂತೆ 3 ಶುದ್ದನಾಗಿರಬೇಕು ಉದ್ಧವನ ತೆರನಂತೆ ಬದ್ಧನಾಗಿರಬೇಕು ಅಕ್ರೂರನಂತೆ ಹೊದ್ದಿಕೊಂಡಿರಬೇಕು ಫಣಿರಾಜನಂದದಲಿ ಮುದ್ದಾಗಿಯಿರಬೇಕು ಆ ವಿದುರನಂತೆ 4 ವೇದವೋದಲು ಬೇಕು ವ್ಯಾಸಮುನಿಯಂದದಲಿ ಆದರಿಸಬೇಕು ತಾ ಧರ್ಮನಂದದಲಿ ಪಾದಪೂಜೆಯು ಬೇಕು ಲಂಕಾಧಿಪತಿಯಂತೆ ಭೇದ ನೋಡಲು ಬೇಕು ವಸಿಷ್ಠನಂತೆ 5 ಸ್ಮøತಿಯ ನೋಡಲು ಬೇಕು ಪಾರಾಶರಂದದಲಿ ಮಿತಿಯಿರಲು ಬೇಕು ಆ ಭೀಷ್ಮನಂದದಲಿ ಜೊತೆಯಾಗಿಯಿರಬೇಕು ಪುಂಡರೀಕನ ತೆರದಿ ವ್ರತವಿರಲು ಬೇಕು ರುಕುಮಾಂಗನಂದದಲಿ 6 ದಾನ ಮಾಡಲು ಬೇಕು ಬಲಿಯ ಪ್ರೌಢಿಕೆಯಿಂದ ಧ್ಯಾನವಿರಬೇಕು ಋಷಿ ಗಾಗ್ರ್ಯನಂದದಲಿ ಪ್ರಾಣ ಸಂದೇಹದೊಳು ಕರಿರಾಜನಂದದಲಿ ಕಾಣಬೇಕಾ ಹರಿಯ ಅಜಮಿಳನ ತೆರದಿ 7 ಜಪಗಳನು ತಪಗಳನು ದಾನಧರ್ಮಂಗಳನು ಅಪರೂಪವಾಗಿರ್ದ ಪೂಜೆಗಳನು ಉಪವಾಸವನು ಮಾಡಿ ವ್ರತ ನೇಮ ನಿಷ್ಠೆಗಳ ಕಪಟವಿಲ್ಲದೆ ರಚಿಸಿ ಕಂಡರೈ ನಿನ್ನ 8 ಇವರಂತೆ ನೋಡುವರೆ ಸ್ಥಿರವಿಲ್ಲ ಬುದ್ಧಿಗಳು ಇವರ ದಾಸರ ದಾಸ ದಾಸ ನಾನು ನಿತ್ಯ ಮನದೊಳಗೆ ನಿಲುವಂತೆ ಭಾವಿಸೈ ಕೋನೇರಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಶಾಮ ಸುಂದರ ಪ್ರೇಮವÀ ತೋರೆಲೊ ಪ ತಾಮಸವಿಲ್ಲದೆ ಕಾಮಿತಗಳ ನೀಡೊ ಅ.ಪ ಹಿಂದೆ ಅಜಮಿಳ ಒಂದನರಿಯದೆ ಕಂದನನ್ನು ನಾರಾ ಎಂದು ಕರೆಯಲು ಬಂಧುವೆಂದರಿತು ಮಂದಹಾಸದಿಂದ ಬಂದು ರಕ್ಷಿಸಿದೆ ಎಂದು ಕೇಳಿರುವೆ 1 ಕ್ರೂರ ಶಾಸನ ನಾರಿ ದ್ರೌಪದಿಯ ಸೀರೆ ಸೆಳೆದು ಮಾನ ಸೂರೆಗೊಳುತಿರೆ ಸಾರಿ ಕೂಗಲು ಭೂರಿದಯವನು ತೋರಿರುವೆ ಎಂದು ಕೋರಿರುವೆ ನಿನ್ನ 2 ಮುನ್ನ ಮಾಡಿದ ಎನ್ನ ಪಾಪಗಳಿಗೆ ಖಿನ್ನನಾಗಿರುವೆ ಎನ್ನ ಮನದಲಿ ಮನ್ನಿಸುತ್ತ ಸುಪ್ರಸನ್ನನಾಗಿ ಸದಾ ಎನ್ನ ಹೃದಯ ಶುದ್ಧಿಯನ್ನೆ ಮಾಡಿ ಪೊರೆಯೊ 3
--------------
ವಿದ್ಯಾಪ್ರಸನ್ನತೀರ್ಥರು
ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ ಪ ನೆಲೆಯಿಲ್ಲದಾ ಮಹಿಮ ಶ್ರೀರಾಮ ಗೋಚರಿಸೊ ಅ.ಪ ಶ್ರುತಿಗಗೋಚರ ನೀನು ಸರ್ವೇಶ ಸ್ವಾತಂತ್ರ ನೀನು ಕೃತಿಮಗ್ನ ಪಶು ನಾನು ಗೋಪಾಲದೇವ ಮೃತಿ ಭೀತಿ ವಶನಾಗಿ ನೆಲೆತಪ್ಪಿ ಪೋಗುತಿಹೆ ಅತಿಭಯದಿ ನಡುಗುವೆ ಹೇ ಶ್ರುತಿನಾಥ ಪೊರೆ ಎನ್ನ 1 ಪರಮ ಮಂಗಳ ಅನಿಲದೇವ ಮಂದಿರ ಶ್ರೀಶ ಪರತತ್ವ ಪರಮಾತ್ಮ ಪಿಡಿಯೊ ಕರವ ಮರುವೆಂಬ ಮಾರಿಯನು ನಿರ್ಮೂಲ ಮಾಡಯ್ಯ ದೊರಿ ನಿನ್ನ ಸ್ಮøತಿ ಸತತ ಅಚ್ಛಿನ್ನವಾಗಿರಲಿ 2 ಭಾನು ಕೋಟಿ ತೇಜ ಶ್ರೀ ಕ್ರೀಡೆಮಾಳ್ಪ ಜ್ಞಾನ ಪಾಲಿಸು ಎನಗೆ ಜಯೇಶವಿಠಲ ಆನಿ ಅಜಮಿಳ ಅನಿಮಿತ್ತ ಬಾಂಧವನೆ 3
--------------
ಜಯೇಶವಿಠಲ
ಶ್ರೀಮಾಧವ ಪಾದವ ಸಂತತ ಮನದಿ ನೇಮದಿ ಧ್ಯಾನಿಸು ನೀ ಪ ಪ್ರೇಮಮೂರ್ತಿಯನೆನೆವರಾರಾದರೇನಯ್ಯ ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ ಮದಗಜವನುಸರದಿ ಮೊಸಲೆಯನು ತಾನು ಅಧಿಕ ಕಷ್ಟವ ಗೊಳಸೆ ಪದುಮನಾಭ ನೀನೆ ಪೊರೆಯಬೇಕೆನ್ನಲು ಮುದದಿಂದಲೊದಗುತ್ತ ಸೌಖ್ಯವ ತೋರಿದೆ 1 ತರಳನಾದ ಧ್ರುವನು ಪ್ರಹ್ಲಾದನು ಶರಣೆಂದು ಮೊರೆವೋಗಲು ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ 2 ಮಾನಿನಿ ದ್ರೌಪದಿಯು ತನ್ನಯ ಘನ ಮಾನಭಂಗದ ಕಾಲದಿ ದೀನರಕ್ಷಕ ಕೃಷ್ಣ ದಾನವಾರಿಯೆನೆ ಸಾನುರಾಗದಿಂದಲಕ್ಷಯ ವರವಿತ್ತ3 ಅಜಮಿಳ ಬಹುಪಾಪದಿ ಮೆರೆಯುತಲಿದ್ದು ನಿಜಸುಖ ಮರೆತಂತ್ಯ ಕಾಲದಿ ಬಜಬಜಿಸುತಮಗನನು ಹೆಸರೆತ್ತಲು ಭಜನೆಯಾಯ್ತು ನಾರಾಯಣ ನಾಮವು 4 ವಿದುರನುಧ್ದವನರ್ಜುನ ಕುಚೇಲನು ಮೊದಲಾದ ಭಕ್ತರೆಲ್ಲ ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ ಪದವಿಯಿತ್ತು ಕಾಯ್ದ ಜಾಜಿಯೀಶನ5
--------------
ಶಾಮಶರ್ಮರು
ಶ್ರೀರಂಗನಾಥ ನಂಬಿದೇ ನಿನ್ನ ನಾನೇ ಅನಾಥ ಪ ಅನಾಥರಕ್ಷಕ ಎನ್ನಾ ಪ್ರೀತಿಯಿಂದಲೆ ಕಾಯೊ ಲೋ ಕನಾಥನೆಂದು ಬಂದು ನಂಬಿದೆ ನಿನ್ನ ಅ.ಪ ನಿಮ್ಮ ರಘುಪತಿ ನಿಮ್ಮ ವಿಭೀಷಣಗೆ ಕೊಡಲು ತಾಮುನ್ನಾ ಶ್ರೀರಂಗಕ್ಷೇತ್ರದಿ ನೆಲಸಿ ಸಂತೋಷದಿ ಧರ್ಮವರ್ಮಾದಿ ಚೋಳೇಂದ್ರ ಪೂಜಿತಪಾದ 1 ಕಂದ ಪ್ರಹ್ಲಾದ ಕರೆಯೆ ಕಂಬದಿಂದಲೆ ಬೇಗ ಬಂದು ಅವನ ತಂದೆಯನು ಸಂಹರಿಸಿದೆ ಕಂದನ ಕಾಯ್ದ ಗೋವಿಂದ ರಕ್ಷಿಸೊ ಎನ್ನ 2 ಅಜಮಿಳ ಕರೆಯೆ ಆಪತ್ತಿಗೆ ಬಂದು ನೀನೊದಗೆ ನಿಜಸ್ಮರಣೆ ಮಾತ್ರದಲವನ ದುರಿತವೆಲ್ಲವ ಕಳೆದು ನಿಜ ಪಾದವನಿತ್ತೆ ಕರುಣದಿಂದಲೆ ರಂಗ 3 ಕಂದ ಧ್ರುವ ತಾನು ಅಡವಿಯಲಿ ನಿಂತು ತಪವನು ಚಂದದಿ ಮಾಡಲು ಬಂದು ಸೇವೆಯನಿತ್ತೆ ಆ ನಂದಪದವನಿತ್ತ ಸುಂದರಾಯನೆ ನೀನು 4 ಅರ್ಕಸುತನಾಗ ನಿಮ್ಮನ್ನು ಸೇರಿ ಸೌಖ್ಯವ ಬೇಗ ಮಾಡೆ ಸೊಕ್ಕಿದ ವಾಲಿಯನೊಂದು ಬಾಣದಿಂ ಕೊಂದು ಮರ್ಕಟಗೆ ರಾಜ್ಯವನಿತ್ತ ರಂಗಯ್ಯ ನೀನು5 ಮಕರಿ ಕಾಲ್ಪಿಡಿಯೆ ಮತಂಗಜ ನಿಮ್ಮನು ಕರೆಯೆ ನಕ್ರವ ಕೊಂದು ಚಕ್ರದಿ ಅತಿವೇಗದಿಂ ಕರಿಯ ರಕ್ಷಿಸೆ ಬಂದೆ ಕರುಣದಿಂದೆ 6 ಭವಕೆ ನಾ ಬೆದರಿ ಬಂದೆನೊರಂಗ ಕಾಯೋ ನೀ ಭವದಿ ಈಶಣತ್ರಯವನ್ನು ಬಿಡಿಸಿ ನಿನ್ನಯ ಪಾ ದವಾಸವ ಮಾಡಿಸೊ ವಾಸುಕಿಶಯನನೆ 7 ಆರುಜನ ಕಳ್ಳರು ಎನ್ನಲಿ ಸೇರಿ ಬಾಧಿಸುತಿಹರು ದೂರಮಾಡವರನ್ನು ಸೇರಿಹೃದಯದಲ್ಲಿ ಶ್ರೀನಿವಾಸನೆ ನಿಮ್ಮ ಪಾದದೊಳಿರಿಸೆನ್ನ 8
--------------
ಯದುಗಿರಿಯಮ್ಮ
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು