ಒಟ್ಟು 151 ಕಡೆಗಳಲ್ಲಿ , 55 ದಾಸರು , 133 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಿರುವೆನು ಭೂಜಾತೆ | ಶರ- ದಿಂದುವದನೆ ವೋ ಸೀತೆ ಪ ಕೂಗುವುದೇತಕೆ ನಿಮ್ಮಯ ಪೆಸರೇ ನೀಗ ತಿಳಿಸಿರೈ ಸ್ವಾಮಿ | ನುಡಿ ಭಾಗವತ ಜನಪ್ರೇಮಿ ಅ.ಪ ಹೀನತಮವ ಮುರಿದಜಗೆ ಶೃತಿಗಳಿತ್ತ ಮೀನಾವತಾರನೆ ನಾನು | ಬಾ ಜಾನಕಿ ಬೇಗನೆ ನೀನು ಮೀನಾದರೆ ನೀರೊಳಗಿರುವುದು ಸರಿ ಮಾನಿನಿಯಲಿ ಕಾರ್ಯವೇನು | ನಡಿ ದೀನ ಜನರ ಸುರಧೇನು 1 ಕಮಲನಯನೆ ನಾ ಪೂರ್ವದಿ | ಗಜ- ಗಮನೆಯೆ ನೋಡನುರಾಗದಿ ಭ್ರಮೆಯಾತಕೆ ಕೇಳ್ ಕಠಿಣಾಂಗಗೆ ನಾ ಸಮಳೆ ನಿನಗೆ ನೀ ನೋಡು | ಸಂ ಭ್ರಮವಿದ್ದಲಿ ನಲಿದಾಡು 2 ವರಹಾರೂಪನೆ ಕಾಮಿನಿ | ಓ ತರುಣಿಯರೊಳಗೆ ಶಿರೋಮಣಿ ವರಾಹನಾದರೆ ಅಡವಿಯ ತಿರುಗುತ- ಲಿರದೇತಕೆ ಇಲ್ಲಿ ಬಂದೆ | ನಡಿ ಪರಿಪರಿ ಮೃಗಗಳ ಹಿಂದೆ 3 ಕರುಳ ಬಗೆದ ನರಸಿಂಹ | ನಾನು ಪರಮ ಪುರಷ ಪರಬ್ರಹ್ಮ ನರಸಿಂಹನು ನೀನಾದರೆ ನಡಿನಡಿ ಗಿರಿಗುಹೆಯೊಳಗಿರು ಹೋಗೈ | ಬಹು ಪರಿನುಡಿಗಳು ನಿನಗೇಕೈ 4 ಭೂಮಿಯ ದಾನವ ಬೇಡಿ ಬಲಿಯ ಗೆದ್ದ ವಾಮನ ನಾನೆಲೆ ನಾರಿ | ಸು ತ್ರಾಮಾದ್ಯರಿಗುಪಕಾರಿ ಬ್ರಾಹ್ಮಣನಾದರೆ ನಮಿಸುವೆ ಚರಣಕೆ ಹೋಮಧ್ಯಾನ ಜಪಮಾಡೈ | ನಿ ಷ್ಕಾಮ ಜನರ ಪಥನೋಡೈ 5 ದುರುಳನೃಪರ ಸಂಹರಿಸವನಿಯ ಭೂ ಸುರರಿಗೆ ಕೊಟ್ಟೆನೆ ದಾನವು | ಕೇಳ್ ಪರಶುರಾಮಾಭಿದಾನವು ವರಮಾತೆಯ ಶಿರವರಿದವ ನೀನಂತೆ ಸರಸವೇತಕೆನ್ನಲ್ಲಿ | ಮನ ಬರುವಲ್ಲಿಗೆ ತೆರಳಲ್ಲಿ 6 ತಾಯನುಡಿಗೆ ತಮ್ಮಗೆ ರಾಜ್ಯವ ಕೊಟ್ಟು ಪ್ರಿಯದಿ ವನದೊಳಗಿದ್ದೆನೆ | ದೈ ತ್ಯೇಯ ನಿಕರವನು ಗೆದ್ದೆನೆ ಸ್ರೀಯರಲ್ಲಿ ಹಿತವೇನು | ಕಮ ಲಾಯತಾಕ್ಷ ನಡಿ ನೀನು 7 ನಾರಿಯರನು ಕೂಡಿ ರಾಸ ಕ್ರೀಡೆಯೊಳ್ ತೋರಿದೆ ಪರಿಪರಿ ಚಿತ್ರವ | ವಿ- ಜಾರ ಪುರಷನಿಗೆ ಹೋಲುವಳಲ್ಲವು ಸಾರ ಪತಿವ್ರತೆ ನಾನು | ಇ- ನ್ನ್ಯಾರು ತಿಳಿಸು ಮತ್ತೆ ನೀನು 8 ಪತಿವ್ರತೆಯರ ಸದ್‍ವ್ರತವ ಕೆಡಿಸಿದಾ ಪ್ರತಿಮ ಬುದ್ಧನೆ ಲತಾಂಗಿ | ಓ ಮತಿವಂತಳೆ ಮೋಹನಾಂಗಿ ಕೃತಕವಾಡದಿರು ಒಲ್ಲೆ | ಕೇ ಳತಿ ಮೋಹಕ ನೀ ಬಲ್ಲೆ 9 ಹಲವು ನುಡಿಗಳೇನು ಕಲಿಯುಗಾಂತದಲಿ ಮಲೆತ ಮನುಜರನು ಕೊಲ್ವೆನೆ | ಓ ಲಲನೆ ನೋಡು ಬಲು ಚೆಲ್ವನೇ ಕಲಿತನವ ತೋರಿಸದಿರು ಈ ಪರಿ ಹಲವು ವೇಷ ನಿನಗೇಕೆ | ಕೇ ಳೆಲವೊ ಸ್ವಾಮಿ ನುಡಿ ಜೋಕೆ 10 ವೇಷವಲ್ಲ ಸರ್ವೇಶ ನಾನು ಪರಿ- ಪೋಷಿಸುವೆನು ನಿಜಭಕ್ತರ | ಸಂ- ತೋಷಿಸುವೆನು ಧರ್ಮಯುಕ್ತರ ಪೋಷಿಸುವನು ನೀನಾದರೆಲ್ಲಿ ನಿನ್ನ ವಾಸಪೇಳು ನಿಜವೀಗಾ | ಪರಿ ಹಾಸವೇಕೆ ನುಡಿಬೇಗ 11 ಪರಮಾತ್ಮನು ನಾ ಕೇಳೆ | ಎನ್ನ ಮರತೆಯೇನೆ ಎಲೆ ಬಾಲೆ ಅರಿತೆನೀಗ ಬಹು ಸಂತಸವಾಯಿತು ಎರಗುವೆ ಚರಣಕೆ ನಾನು | ನಿನ್ನ ಸರಿಯಾರೈ ದೊರೆ ನೀನು 12 ಧರೆಯೊಳಯೋಧ್ಯಾ ಪುರದರಸನ ಮಗ ಗುರುರಾಮವಿಠಲನೆ ನಾನು | ಓ ತರುಣಿ ನಿನಗೊಲಿದು ಬಂದೆನು ಧರಣಿ ತನಯೆ ನಸುನಾಚಿಕೆಯಿಂದಲಿ ಣಗಳನು ತೊಳೆದಳು ಬೇಗ 13
--------------
ಗುರುರಾಮವಿಠಲ
ಬಂದೆಯಾ ಬಂಧುವೆ ಭಾಗ್ಯದ ನಿಧಿಯೆ ಮಂದರದರ ನಿನ್ನ ಮಂದಿರಕ್ಕೆ ಪ ತಂದೆಯ ಮಮ ಹೃನ್ಮಂದಿರಕಾಗಲೇ ಬಂದೆಯೊ ಕರುಣಾಸಿಂಧುವೆ ಸ್ವಾಮಿ ಅ.ಪ ಆಗಮನುತ ನಿನ್ನಾಗಮನದಿ ಇನ್ನು ನೀಗಿತು ಚಿಂತೆಯು ನೀರಜನಯನ ಯಾಗ ಸಾಫಲ್ಯಕೆ ಸೂಚನೆಯಿದು ಮಹಾ ಭಾಗವತ ಪ್ರಿಯ 1 ಮುಂದಿನ ಕಾರ್ಯವ ನೀನೆ ವಹಿಪುದು ಎಂದೆಂದಿಗೂ ನೀನೆ ಗತಿಯು ನಂದನಂದನ ಗೋವಿಂದ ಮುಕುಂದನೆ ನಿಂದಿರಿಸಯ್ಯಾ ನಿನ್ನಾಜ್ಞೆಯಲೆಮ್ಮನು 2 ನಾಗಶಯನ ನಳಿನಾಯತ ಲೋಚನ ಯೋಗಿನಿಲಯ ಕಮಲಾಲಯವಾಸ ಯಾಗರಕ್ಷಕನೆ ಯಾಗ ಫಲಪ್ರದ ಬಾಗುವೆ ಚರಣಕೆ ಕರಿಗಿರೀಶನೆ 3
--------------
ವರಾವಾಣಿರಾಮರಾಯದಾಸರು
ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ ಪ ನಾಗವೇಣಿಯೆ ನಿನ್ನೀಗಲೆ ನೋಡಲು ಬೇಗನೆ ಬಂದೆನು ತೆಗಿ ಕದವಾ ಅ.ಪ ಯಾರದು ಈ ಸಮರಾತ್ರಿಯ ವೇಳದಿ ಬಾಗಿಲು ತೆಗೆ ಎಂದೆನುತಿಹರು ತೋರದು ಎನಗೊಂದಾಲೋಚನೆ ನಿಮ್ಮ ನಾಮವು ಪೇಳಲು ತೆಗೆಯುವೆನು 1 ನೀಲವೇಣಿಯೆ ಕೇಳೆನ್ನ ಮಾತನು ಬಹಳ ಚಿಂತೆಯಾತಕೆ ಮನದಿ ನೀಲಕಂಠನೆಂದೆನ್ನನು ಕರೆವರು ಕೇಳು ಮನಸು ಚಂಚಲ ಬಿಟ್ಟು 2 ನೀಲಕಂಠನೆಂದರೆ ನೆನಪಾಯಿತು ನವಿಲಿನ ಮರಿ ಬಂದಿಹುದೆಂದು ನಾರಿಯರೆಲ್ಲರು ಹಾಸ್ಯವ ಮಾಳ್ಪರು ಸಾರುತ ವನಗಳ ಚರಿಸೆಂದು 3 ಬೆದರದೆ ತೆರೆ ಕದ ಸುದತಿಮಣಿಯೆ ನಾ ಬದಲೊಂದು ನಾಮವ ಪೇಳುವೆನು ಬುಧ ಜನರೆಲ್ಲರು ಭಕುತಿಲಿ ಸ್ಥಾಣು- ವೆನ್ನುತ ನಾಮವ ಕೊಂಡಾಡುವರು4 ಬೂಟಾಟಿಕೆ ಮಾತುಗಳನ್ನ ಏತಕೆ ಸಾಟಿಯಾರು ಜಗದೊಳಗಿನ್ನು ಮೋಟುಮರಕೆ ಸ್ಥಾಣುವೆನ್ನುತ ಕರೆವರು ಈ ಪೃಥ್ವಿಯ ಮೇಲಿನ ಜನರು 5 ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ ಪಶುಪತಿಯೆಂದು ಕರೆವರೆನ್ನ ವಸುಧೆಯ ಮೇಲಿನ ಪೆಸರುಗಳಿಗೆ ನೀ ಪ್ರತಿಯಾಗರ್ಥವ ಕಲ್ಪಿಸುವಿ 6 ವೃಷಭರಾಜ ನೀನಾದರೆ ಮುಂದಕೆ ಪಶುಗಳ ಮಂದೆಗೆ ತೆರಳುವದು ಕುಸುಮಗಂಧಿಯರ ಸದನದಿ ಕಾರ್ಯವು ವೃಷಭರಾಜಗಿಲ್ಲವು ಕೇಳೌ 7 ಶೀಲವಾಣಿಯೆ ಸುಶೀಲೆಯೆ ಎನ್ನಯ ವಾಣಿ ಕೇಳಿ ಕದವನು ತೆಗಿಯೆ ಪೇಳುವೆ ಮತ್ತೊಂದು ನಾಮವ ಎನ್ನನು ಶೂಲಿ ಎಂದು ಕರೆವರು ಜನರು 8 ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು ಯಾರಿಗೆ ಸಾಧ್ಯವು ಜಗದೊಳಗೆ ನಾರಿಯರಿಗೆ ಹೇಳದೆ ಮುಂದಕೆ ನಡೆ ಶೂರರಾದ ವೈದ್ಯರ ಬಳಿಗೆ 9 ಕರಿಯ ಮುಖನ ಮಾತೆಯೆ ತಡಮಾಡದೆ ಕನಕಮಯದ ಕದ ತೆರೆ ಬೇಗ ಕಮಲನಾಭ ವಿಠ್ಠಲನನು ಪಾಡುತ ಶಿವನ ನಮಿಸಿ ತೆಗೆದಳು ಕದವ 10
--------------
ನಿಡಗುರುಕಿ ಜೀವೂಬಾಯಿ
ಬಾಳು ಸೌಖ್ಯದಿಂ ತನಯನೆ ಬಾಳು ಸೌಖ್ಯದಿಂ ಪ ಲೀಲೆಯೊಳನುದಿನ ಸಂತಸವಾಂತು ನೀಂ ಅ.ಪ. ಮುರಹರ ಪರಮಾಯುಷ್ಯವ ನೀಯಲಿ ಪೊಂದುತ ನಲಿಯುತ 1 ಇಂದ್ರನಂತೆ ವರ ಭೋಗವ ಪೊಂದುತ ಮಂದಿರಕಾನಂದವನಿತ್ತು 2 ಧರ್ಮ ಕಾರ್ಯವನ್ನಾಚರಿಸುತ ನೀಂ ಪೊಂದುತ ಸುಜನರ ಸೇವಿಸಿ 3 ಕೀರ್ತಿವಂತ ನೀನಾಗಿರು ಸರ್ವದ ಆರ್ತರನ್ನು ರಕ್ಷಣೆಯ ಗೈಯುತ 4 ಶಾರದೆ ನಿನ್ನಯ ಸೇರಲಿ ಸತತಂ ನಿತ್ಯವು ಸಲಹಲಿ ನಿನ್ನನು 5 ಅನ್ನಧಾನ ಧೇನುದಾನವ ಗೈಯುತ ಕನ್ಯಾದಾನವ ವಿರಚಿಸುತ ಮನ್ನಿಸಿ ಹಿರಿಯರ ಗುರುಗಳ ಸೇವಿಸಿ 6 ಮಾನವಂತ ನೀನಾಗಿರು ಸರ್ವದ ಜ್ಞಾನವಂತನಾಗಿರು ನಿರತಂ ಧೇನುಪುರೀಶನ ಶ್ರೀಶನ ಸ್ಮರಿಸುತ 7
--------------
ಬೇಟೆರಾಯ ದೀಕ್ಷಿತರು
ಬಿನ್ನೈಸಲೇನಿನ್ನು ಎನ್ನ ಗುರುವೇ ನಿ ಮ್ಮ ನಿತ್ಯಾನಂದನಿರುವ ಬಗೆಯನ್ನ ಪ. ತನ್ನ ಕಾರ್ಯಗಳನ್ನು ನಿಮ್ಮ ಮೇಲೊರಗಿಸಿ ಬೆನ್ನಿನಂದದಿ ನಿಮ್ಮ ಕಾಡುತಿಹನು ತನ್ನಿಂದಲಾಗದ ಕಾರ್ಯಗಳು ಇನ್ನುಂಟೆ ತನ್ನನೆ ತಾನು ಮರೆತಂತೆ ಇರುತಿಹನು 1 ತನ್ನ ಮಾರ್ಗಕೆ ಬರುವ ಜೀವರುಗಳೆಲ್ಲರನು ನಿಮ್ಮ ವಶಕೊಪ್ಪಿಸಿ ಓರೆಯಾಗಿಹನು ತಾನೊಬ್ಬ ನಿಮ್ಮಿಂದ ತೇರ್ಗಡೆಯಾದಮೇಲ್ ತನ್ನವರ ತಾನು ಸಲಹದಲೆ ಇರುತಿಹರೆ 2 ಬನ್ನಬಡುತಲಿ ಇರುವ ಘನ್ನ ಜೀವರುಗಳನು ಮನ್ನಿಸಿ ಕರೆದು ಅಂಕಿತವಿತ್ತಿರಿ ಇನ್ನಾದರೂ ತಾನು ನಿಮ್ಮ ಕಾರ್ಯಕೆ ನಿಂತು ನಿಮ್ಮ ಸೇವೆಯನು ಮಾಡದಲೆ ಇರುತಿಹನು 3 ಒಂದೊಂದು ಸೇವೆಗೆ ಒಬ್ಬೊಬ್ಬರಿಹರೆಂದು ಮುಂದೆ ತನಗಾವುದೂ ತಿಳಿಯದೆಂದು ಇಂದು ಈ ಪರಿಯಿಂದ ಇರುತಿಹುದು ನ್ಯಾಯವೆ ತಂದೆ ಮುದ್ದು ಮೋಹನಗುರುವೆ ನೀವ್ ಪೇಳಿ 4 ಸಾಕು ನಿಮ್ಮಯ ಶ್ರಮವ ನೋಡಲಾರೆ ನಾನು ಈ ಕಂದನಿಗೆ ಇನ್ನು ವರವ ಕೊಟ್ಟು ಲೋಕಕಾರ್ಯವ ನಡೆಸಿ ನೋಡಿ ಸಂತಸಪಡಿರಿ ಲೋಕೇಶ ಗೋಪಾಲಕೃಷ್ಣವಿಠ್ಠಲ ಪ್ರಿಯರೆ 5
--------------
ಅಂಬಾಬಾಯಿ
ಬೇಗನೆ ಬಾರೊ ದೇವ ಜಾಗೂ ಮಾಡದೆ ಪ ಬೇಗನೆ ಬಾರೊ ನೀನು ನಾಗಶÀಯನ ಕೃಷ್ಣ ಯೋಗಿ ಜನರು ಕಂಡು ಪೋಗಲೀಸರೆ ನಿನ್ನ ಅ.ಪ. ಹತ್ತಾವತಾರವಾಯ್ತು ಮತ್ತಗಜವ ಪೊರೆದೆ ಉತ್ತಮಪದ ಧ್ರುವಗಿತ್ತೆ ಮತ್ತೇನು ಕಾರ್ಯವೈಯ್ಯ 1 ತರಳ ಪ್ರಹ್ಲಾದನ ಕರುಣಾದಿ ಸಲಹಿದೆ ದುರುಳರ ಸದೆದ ಪರಿಯೆಲ್ಲವಾಯಿತು2 ಪರಿ ರೂಪವ ಧರಿಸಿದ ಎನ್ನದೇವ ಸಿರಿರಂಗೇಶವಿಠಲನೆ ಕರವೆತ್ತಿ ಮುಗಿಯುವೆ 3
--------------
ರಂಗೇಶವಿಠಲದಾಸರು
ಬ್ಯಾಗ ಬರುವೇನೆಂದು ಸಾಗಿ ಮಧುರೆಗೆ ಹೋದ ಹ್ಯಾಗೆ ಮಾಡುವೊಣುದ್ಧವ ಭಾಗವತಪ್ರಿಯಗಿನ್ನು ಬಾಗಿ ನಮಿಸುತ ನಾವು ಉದ್ಧವ ಪ ಗೋಕುಲವಾಸ ಬಿಟ್ಟ್ಯಾಕೆ ತೆರಳಿದ ಸ್ವಾಮಿ ಈ ಕಾರ್ಯವನು ತಿಳುಹಿಸೊ ಶ್ರೀಕರ ಕಮಲಾರ್ಚಿತ ಚರಣಧ್ವಜವಜ್ರ- ರೇಖಪಾದವ ಚಲಿಸಿದ ಪಾಕಶಾಸನಪ್ರಿಯನು ಪರಮ ನಿರ್ದಯ ಮಾಡಿ ಉದ್ಧವ 1 ಯಂತ್ರಮಾಯದಲಿ ಶ್ರೀಕಾಂತನೊಲಿಸುವುದಕ್ಕೆ ಮಂತ್ರವನು ಮಾಡರಿಯೆವೊ ಅಂತರಂಗದಲಿ ಅನಂತಗುಣ ಸ್ತುತಿಸಲೇ- ಕಾಂತ ಭಕ್ತರಲ್ಲವೊ ನಿಂತು ನಿತ್ಯಾನಂದಮೂರ್ತಿಯ ನೋಡದಲೆ ಉದ್ಧವ 2 ಅತಿಕ್ರೂರನೆನಿಸುವಕ್ರೂರ ಬಂದು ನಮಗ- ಹಿತಮಾಡಿ ಪೋದನಲ್ಲೊ ಮತಿಹೀನರಾಗ್ಹರಿಯ ರಥವ ನಿಲಿಸದಲೆ ಮುಂ- ದೆತನ (ಯತ್ನ ?) ಮರಿಯದೆ ನಿಂತೆವೊ ಪೃಥಿವಿ ಒಳಗಿಂಥ ಗೋಪಿಕಾಸ್ತ್ರೀಯರೆಂದು ಭಾಳಪ- ಉದ್ಧವ 3 ಸಕ್ಕರೆಯಂಥ ಸವಿಮಾತನಾಡುತ ನಮಗೆ ದಕ್ಕಿದಕ್ಕದಲ್ಹೋದನೊ ಮತ್ತೇನು ಪೇಳೋಣ ಮಂದಭಾಗ್ಯರು ಹರಿಯ ದಕ್ಕಿಸಿಕೊಳ್ಳದ್ಹೋದೆವೊ ಸಿಕ್ಕರೆ ಧನವು ಶತಸಾವಿರ ಕೊಪ್ಪರಿಗೆ ಅಷ್ಟ- ಉದ್ಧವ 4 ಮಡದಿಯರು ಕೇಳಿಗೆ ಮಧುರಾಪಟ್ಟಣದಂಥ ಚೆದುರೆಯರು ನಾವಲ್ಲವೊ ಮದನನಾಟಕೆ ಮದಗಜಗಮನೇರಿಗಿನ್ನು ಮುದದಿ ಮರುಳಾಗಿಪ್ಪನೊ ವಿಧಿ ಬರೆದನೇನೆಂದರೀ ನಮ್ಮ ಪಣೆಯಲ್ಲಿ ಉದ್ಧವ 5 ಮಲ್ಲರನೆ ಮಡುಹಿದ್ದ ಮಾವನ್ವೈರಿಯು ನಮ್ಮ ಕೊಲ್ಲಿ ಪೋದಂತಾಯಿತೊ ಸಲ್ಲ ನಡತೆಯ ಸೊಟ್ಟಕುಬ್ಜೆಗೆ ಕಡೆಯು ನಾ- ವಲ್ಲವೆಂದವಗೆ ಪೇಳೊ ನಿಲ್ಲದ್ಹೋಗ್ಹಿಂದಕೆ ಸುಳ್ಳಲ್ಲೊಂದು ಬೆರೆಸದಲೆ ಉದ್ಧವ 6 ಕಲ್ಲಾಗದೀವಿಧಿಯ ಕಾಮನಪಿತನಗಲಿ ಸೊಲ್ಲು ಸೊಲ್ಲಿಗೆ ಬಳಲ್ದೆವೊ ಮಲ್ಲಿಗ್ವೊಣಗಿದ ದಾರದಂತೆ ಗೋವ್ರಜಮೂಲೆ- ಯಲ್ಲಿ ನಾವಿರಲಾರೆವೊ ಎಲ್ಲಿ ಬಂದೊದಗಿತೀ ಬಿಲ್ಲ ್ಹಬ್ಬನಮಗೆ ಭೀ- ಉದ್ಧವ 7
--------------
ಹರಪನಹಳ್ಳಿಭೀಮವ್ವ
ಬ್ರಹ್ಮಾನಂದದ ಸಭಾ ಮಧ್ಯದಲಿಸುಮ್ಮನೆ ಇರುತಿಹುದೇನಮ್ಮಬ್ರಹ್ಮಾದಿಗಳಿಗೆ ದೂರಾಗಿಹನಿರ್ಮಲ ನಿರುಪಮ ತಾನಮ್ಮ ಪ ಹೇಳಲು ಬಾರದ ಸುಖರೂಪದಲಿಹೊಳೆಯುತ ಅಹುದು ಏನಮ್ಮಮೇಳದ ಲೋಕಕೆ ಕರ್ತೃ ತಾನಾಗಿಹಲೋಲ ಪರಾತ್ಪರ ತಾನಮ್ಮ 1 ಬೋಧದ ರೂಪದಿ ಹಾ.... ಎಂಬಂದದಿಬೆಳಗುತಲಿಹುದದು ಏನಮ್ಮಆದಿ ಅನಾಧಿಯು ಅವ್ಯಕ್ತವೆನಿಪಅಚಲಾನಂದವೆ ತಾನಮ್ಮ 2 ತೃಪ್ತಾನಂದದಿ ತೂಷ್ಣೀ ಭಾವದಿದೀಪ್ತವಾಗಿಹುದದು ಏನಮ್ಮಸಪ್ತಾವರಣದ ಮೀರಿ ಮಿಂಚುವಗುಪ್ತಜ್ಞಪ್ತಿಯು ತಾನಮ್ಮ 3 ಕದಲದೆ ಚೆದುರದೆ ಕೈ ಕಾಲಿಲ್ಲದೆಉಕ್ಕುತಲಿಹುದದು ಏನಮ್ಮಸದಮಲ ಸರ್ವಾತ್ಮತ್ವವೆಯಾಗಿಹಸಾಕ್ಷೀಭೂತವು ತಾನಮ್ಮ4 ತೋರುತಲಡಗದ ಸಹಜಭಾವದಿಥಳಥಳಿಸುತಿಹುದದು ಏನಮ್ಮಕಾರಣ ಕಾರ್ಯವ ಕಳೆದ ಚಿದಾನಂದಕಾಲಾತೀತನು ತಾನಮ್ಮ 5
--------------
ಚಿದಾನಂದ ಅವಧೂತರು
ಭಜಿಪೇನೆ ನಿನ್ನ ಭಕುತಿಯಿತ್ತು ಪೊರೆ ಎಮ್ಮಾ ಪ ಭಾರ ನಿನ್ನದು ಭರತರಾಯನ ಪ್ರೀತಿ ವಿಷಯಳೆ ಅ.ಪ. ಬಂದ ಕಾರ್ಯವಾಗುವಂತೆ ಮಾಡೆನಿನ್ನ ದ್ವಂದ್ವಕೆ ನಮಿಪೆ ಅನ್ಯರ ಬೇಡೇಬನ್ನ ಬಡುತಿಹ ಧಮ್ಮ ಭಕುತನ ನೋಡೆ ಸುಜ್ಞಾನವಿತ್ತು ಕರಪಿಡಿದು ಕಾಪಾಡೆ 1 ತರಳನ ಮತಿಯನ್ನು ಸರಳಮಾಡಿ ಉರುಳಿಸು ಸುಧೆಯಾಂಬುಧಿಯೊಳಗೆನ್ನ ಗರಳವಾಗಿದೆ ಮನವೆಲ್ಲಾ...ಪಾಶಾದಿ ಸುತ್ತಿ ಇನ್ನು ಅರಳಿಸಿದೆ ಮೋಹಸತಿಯೊಡನೆ ಪಾದಾ 2 ದಾಸಾನಿಗೆ ನಿನ್ನ ದಾಸನಾಗುವದೆಂಬೊ ಆಶಾಪುಟ್ಟಿದ್ದಕ್ಕೆ ದಾಸನ ಮಾಡಿಕೊ ಉದಾಶಿಸದೆ ಏಸು ಮಾತುಗಳಾಡಿದರೂ ಕಾಸು ಬಾಳದು ಸಾಸಿರ ಮಾತಿಗೆ ಒಂದೇ ತಂದೆವರದಗೋಪಾಲವಿಠ್ಠಲನತೋರೆ 3
--------------
ತಂದೆವರದಗೋಪಾಲವಿಠಲರು
ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ ಪ್ರೇಮ ಪಾತ್ರನೆ ಪಾಹಿಮಾಂ ಪ ಭೂಮಿಯೊಳು ಶೇವಿಸುವರಿಗೆ ಸುರ ಭೂಮಿರುಹ ವೆಂದೆನಿಸಿ ಪೊರೆಯಲು ಗ್ರಾಮ ಮೋತಂಪಲ್ಲಿ ಕ್ಷೇತ್ರ ಸುಧಾಮರಿಪುಕುಲ ಭೀಮನೆನಿಸಿದ ಅ.ಪ ರಾಮಕಾರ್ಯವನು ನಿಷ್ಕಾಮದಿ ಸಾಧಿಸಿ ಧಾಮ ಕಿಂಪುರುಷದಲ್ಲಿ ಭೂಮಿಜಾವಲ್ಲಭನ ಶುಭಗುಣ ಸ್ತೋಮಗಾನದಿ ರಮಿಸುತಿರೆ ಬಡ ಭೂಮಿದೇವನ ಪ್ರಾರ್ಥನದಿ ಬಂದೀ ಮಹಾ ಶಿಲೆ ಯೊಳಗೆ ನೆಲಸಿಹ 1 ರಾಜಕುಲಜ ಪಾಂಡುರಾಜ ನಾತ್ಮಜ ಧರ್ಮರಾಜನನುಜನೆನಿಸಿ ರಾಜ ಸೂಯಾಗವನೆ ಮಾಡಿಸಿ ಪೂಜಿಸಿದಿ ಸಿರಿಕೃಷ್ಣನಂಘ್ರಿಯ ರಾಜ ಕೌರವ ಬಲವ ಮದಿಸಿ ವಿರಾಜಿಸಿದ ಸುರರಾಜ ನಮೋ ನಮೋ 2 ಪುಟ್ಟಿಮೇದಿನಿ ಸುರಸದ್ಮದಿ ಗಜ ಪಂಚಾಸ್ಯನೆನಿಸಿಸು ಜನಕತಿ ಮೋದನೀಡಿದ 3 ಗಣಕೆ ಗಂಧವಾಹನನೆನಸಿ ಶೇಷ ಗಿರೀಂದ್ರಯಾತ್ರೆಗೆ ವೃಂದ ಸಲಹುವಿ 4 ಶೇರಿದವನೆ ಧನ್ಯನೋ ಭಜಿಸಿ ವಿಮುಕ್ತನಾದನು ಸುರಋಷಿಯ ಪದವನು 5 ಸುವಿಶಾಲ ಮಂಟಪ ಮಧ್ಯದಿ ಕೈಕೊಳುತ ಭಕುತರ ಗುರುವರ ಪಾಲಿಸೆನ್ನನು 6 ಬಂಗಾರದಾಭರಣಂಗಳಿಂದೊಪ್ಪುತ ಶೃಂಗಾರದಿಂ ಶೋಭಿತ ಸರ್ವೇಷ್ಟದಾಯಕ ಪ್ರಥಮಾಂಗನೆನಿಸಿದ 7
--------------
ಕಾರ್ಪರ ನರಹರಿದಾಸರು
ಭೂಮಿಯನೆ ಬಿಡಿಸೋ ಭೂದೇವಿ ರಮಣಾ ನಾ ಮಾಡುವೆ ನಿನಗೆ ಶರಣಾ ಪ. ಕರಿ ಕರಿಯಾ ಸಂಸಾರ ಥೆರಿಯಾ ಅ.ಪ. ಯನ್ನಿಂದ ದುಷ್ಟಕಾರ್ಯವನು ಮಾಡಿಸಿದಿಯೋ ನೀನು ಇಷ್ಟು ನಾನೀಗ ಉದಾಶೀನಳಾಗಿ ಇರುವೊದುಕಿಂತಾ ವೊಂದಷ್ಟು ಪ್ರಾಣವನು ಬಿಡಿಸೊ ಶ್ರೀಶಾ ಶ್ರೀನಿವಾಸಾ 1 ಸರ್ವಜ್ಞರ ಮತದೊಳಗೆನ್ನ ಪುಟ್ಟಿಸಿದೆಯೋ ಅಜ್ಞಾನ ಅಧಃಪತದಲಿ ಮಗ್ನಳಾಗಿರುವೆನು ಸುಜ್ಞಾನವನು ನಾನರಿಯೆನು ಭವಾಬ್ಧಿಯನು ದಾಟಿಸು ನೀನು 2 ದುರ್ಜನರ ಸಂಗವಾ ಕೊಡಬ್ಯಾಡ ಸಜ್ಜನರ ಸಂಗವ ಕೊಡು ಬ್ಯಾಗ ಮೂರ್ಜಗದೊಡೆಯನೇ ನೀಯನ್ನ ಪಾಲಿಸಯ್ಯ ಕಾಳಿಮರ್ಧನ ಕೃಷ್ಣರಾಯ 3
--------------
ಕಳಸದ ಸುಂದರಮ್ಮ
ಭೂಮಿಸುರರ ಘನ | ಸ್ತೋಮವಂದಿತ ಮಹಾ ಮಹಿಮಾ ಮಹಾಮಹಿಮ ಸಜ್ಜನ - ತತಿ - ಪ್ರೇಮಾ ಪ ಕಾಮಧೇನು ಸುಕಲ್ಪತರು ಚಿಂ - ತಾಮಣಿಯು ತಾನೆನಿಸಿ ಸರ್ವದ ಕಾಮಿತಾರ್ಥವನಿತ್ತು ಮೆರೆವನು ಈ ಮಹಿಯೊಳು ಸಾರ್ವಭೌಮನು ಅ.ಪ ಪ್ರಾಣತನಯ ವಿಷ್ವಕ್ಸೇನ ಶ್ರೀಹರಿ ಶಾಪದಿಂದ ಶಾಪದಿಂದ ಭೂತಳದಲಿ ಬಂದಾ ಮಾಣವಕ ಪ್ರಹ್ಲಾದನೆನಿಸಿ - ಪ್ರಾಣದೇವಾವೇಶ ಶೇಷನು ಕ್ಷೋಣಿಯೊಳು ಶಿರಿವ್ಯಾಸನೆನಿಸೀ ಮಾಣದಲೆ ಗುರುರಾಘವೇಂದ್ರನು 1 ಅಲವಬೋಧರ ಮತ - ಜಲಧಿಚಂದಿರನೆನಿಪನೀತಾ ನೆನಿಪನೀತ ಲೋಕದಿ ಬಹು ಖ್ಯಾತಾ ಲಲಿತ ವೃಂದಾವನದಿ ನಿಂತು ಹಲವು ಭಕುತರಭೀಷ್ಠಕಾರ್ಯವ ಸಲಿಸಿ ಸುಜನರ ಸಲಹೊಗೋಸುಗ ಸುಲಭತರನಾಗಿರುವ ಗುರುವರ 2 ಕಿಟಜಸರಿದ್ವರ - ತಟದಿ ಸಂತತ ತಾನಿರುವ ತಾನಿರುವ ಭಕ್ತರು ಕರೆಯೆ ಬರುವಾ ಧಿಟ ಸುಭಕ್ತರ ಬಿಡದೆ ತಾನು ಪ್ರ - ಕಟನಾಗಿ ಮಹಿಮೆ ತೋರುವ ಧಿಟ ಗುರು ಜಗನ್ನಾಥ ವಿಠಲನ ಭಟಜನಾಗ್ರಣಿ ಎನಿಸಿ ಮೆರೆವ 3
--------------
ಗುರುಜಗನ್ನಾಥದಾಸರು
ಮತ್ಸ್ಯಾದಿ ದಶಾವತಾರಗಳು ಮತ್ಸ್ಯಾದ್ಯವತಾರವನು ತಾಳ್ದು ನೀ ಪರದೇವ ಮನ್ವಂತರ ಪ್ರಳಯಜಲಧಿಯನು ಪೊಕ್ಕು ಸೂರ್ಯಪುತ್ರನ ಮನುವ ದೋಣಿಯಲ್ಲಿರಿಸಿ ನೀನ್ ನೀರಾಟವಾಡಿದೆಯ ಲೀಲೆಯಿಂದಲಿ ನೀಂ 33 ಮಂದರ ಪೊಕ್ಕೆ ಕೂರ್ಮರೂಪವ ತಾಳ್ದು ಕಡಲಿನಡಿ ಸೇರಿ ದೇವತೆಗಳಿಗೆಯಮೃತ ಕಲಶವನು ತೆತ್ತು ನೀನ್ ದೈತ್ಯರನು ವಂಚಿಸಿದೆ ಮೋಹಿನಿಯದಾಗಿ34 ಸೂಕರದ ರೂಪವನು ತಾಳ್ದು ನೀನ್ ಸಿರಿವರನೆ ಚಿನ್ನ ಕಣ್ಣಿನ ದೈತ್ಯಸೇವಕನ ಕೊಂದು ದೈತ್ಯನಾತ್ಮಜ್ಯೋತಿಯನು ತನ್ನಲಿಯಿರಿಸಿ ವಾರಾಹ ರೂಪದಿಂದಲಿ ಆಟವಾಡ್ದೆ35 ಶಿಲ್ಪಿಯಿಂ ರೂಪುಗೊಂಡಿಹ ಕಂಬದಲಿಯಿದ್ದು ವಿಷ್ಣುವೇ ಪ್ರಹ್ಲಾದ ಮಗುವನುದ್ಧರಿಸೆ ನಂಬಿದೆಡೆಯೆಲ್ಲೆಲ್ಲು ಇರುವೆನೆಂಬುದ ತಿಳಿಸೆ ನರಸಿಂಹ ರೂಪವನು ತಾಳ್ದೆ ಪರಮಾತ್ಮ 36 ಇಂದ್ರಾವರಜನೊಮ್ಮೆ ವಟುವಾಮನನು ಬಂದು ಬಲಿಯ ಯಾಗದ ಸಮಯ ಮೂಹೆಜ್ಜೆ ಬೇಡೆ ರಾಜ ಕೊಡಬಯಸಲದ ಗುರು ಶುಕ್ರತಡೆದಾಗ ದಾನಿ ಬಲಿ ಕೊಟ್ಟವನು ಸಿದ್ಧಿಯನು ಪಡೆದಾ 37 ಸಂಹಾರ ಲೀಲೆಯನು ತೋರಲವ ಪರಮಾತ್ಮ ಪಿತೃವಾಕ್ಯಪಾಲನೆಗೆ ತಾಯ ತಲೆ ಕಡಿದು ಮಾತೆಯನು ಬದುಕಿಸುತ ದುಷ್ಟರಾಜರ ತರಿದು ರಾಜವಂಶವನು ನಿರ್ವಂಶ ಮಾಡಿದನು 38 ಎದೆಯೊಳಿಹ ಸೀತೆಯನು ಕಾಡೆಲ್ಲ ಹುಡುಕುತ್ತ ಜಲಧಿಗೇ ಕಟ್ಟಿ ಸೇತುವೆಯ ಸಿರಿವರನು ಕಪಿ ಸೈನ್ಯದೊಡಗೂಡಿ ಲಂಕೆಯನ್ನೈದುತ್ತ ರಾವಣನ ಕೊಂದು ಸೀತೆಯ ಮರಳಿ ತಂದೆ 39 ಇಬ್ಬರನು ತಾಯಂದಿರನು ರಮಿಸಿ ಮಗುವಾಗಿ ಪದಿನಾರು ಸಾಸಿರದ ಸತಿಯರನು ಒಲಿಸಿ ಏಕಕಾಲದಲಿ ಎಲ್ಲರನು ಮೆಚ್ಚಿಸಿದ ಹರಿ ಆನಂದರೂಪದವ ಪರಮಾತ್ಮ ನಿಜವು 40 ತಾಮಸದ ಜೀವರನಧೋಗತಿಗೆಯಿಳಿಸುತಲಿ ಬುದ್ಧ ರೂಪದಲಿ ತ್ರಿವಿಧ ಜೀವಂಗಳಿಗೆ ಯೋಗ್ಯತೆಗೆ ತಕ್ಕಂತೆ ಗತಿಯಾಗಿಸುವದೆ ನಿನ್ನ ಸಂಕಲ್ಪವದಲಾ 41 ಧರ್ಮವದು ನಶಿಸುತಲಿ ದುಷ್ಟರಾಜರು ತುಂಬೆ ಕಲಿಯುಗದ ಕೊನೆಯಲ್ಲಿ ಕಲ್ಕಿ ರೂಪದಲಿ ಅಶ್ವವನ್ನೇರುತಲಿ ದುಷ್ಟರನು ಸಂಹರಿಸಿ ಕೃತಯುಗವ ಮಾಡಿದೆಯ ಪರಮಾತ್ಮ ನೀನು 42 ಕಾಣದಾ ದೇವರಿಗೆ ಭಕ್ತಿಯಿಂ ಪೂಜಿಸಲು ಹತ್ತು ರೂಪಗಳಿವುಗಳೇ ಮುಖ್ಯವದರಿಂ ಅವತಾರ ರೂಪಗಳ ಪ್ರತಿಮೆಗಳ ಪೂಜಿಸುತ ಸರ್ವಾರ್ಥಸಿದ್ಧಿಗಳ ಪಡೆಯುವರು ಜನರು 43 ವೇದೋಕ್ತ ಪದಗಳಿಗೆ ಮುಖ್ಯಾರ್ಥ ಹರಿಯಿಹನು ಅಗ್ನ್ಯಾದಿ ನಾಮಗಳು ದೇವರಿಗೆಯಿಹವು ದೇವತೆಗಳಿಗೆಲ್ಲ ಅಗ್ರಣಿಯು ತಾನಾಗಿ ಅಗ್ನಿನಾಮವು ನಿನಗೆ ಒಪ್ಪುವುದು ಹರಿಯೆ 44 ಇಂದ್ರಿಯಂಗಳೆ ಕುದುರೆ ಬುದ್ಧಿಯೇ ಸಾರಥಿಯು ಮನವೆಂಬ ಕಡಿವಾಣ ಹಿಡಿದೋಡಿಸುವವನು ಜೀವನೇ ರಥಿಕನವ ವಿಷಯಬೇಟೆಗಳಲ್ಲಿ ಪರಮಾತ್ಮನರಿವೆಂತು ಮೂಡುವುದು ಅವಗೆ 45 ವಾಸದಿಂ ಬೆಳಗಿಸುವ ವಾಸುದೇವನು ತಾನು ವರುಣನಂತರ್ಗತನು ಶಿರದಲ್ಲಿಯಿಹನು ಸಪ್ತರಂಧ್ರಗಳಲ್ಲಿ ವಿದ್ಯುತ್ತ ಹರಿಸುತಲಿ ಜ್ಞಾನವನ್ನೊದಗಿಪನು ಶ್ರೀಕೃಷ್ಣನವನು 46 ವಿಜ್ಞಾನಿ ಭಗವಂತ ಹೃದಯ ಗುಹೆಯಲ್ಲಿಹನು ಅನಿರುದ್ಧ ಯಜ್ಞೇಶ ಮೊದಲಾದ ಪೆಸರಿಂ ಪ್ರಾಣವಾಯುಗಳ ಜೊತೆ ಪಾಕವನು ಗೈಯುತ್ತ ರಕ್ತರೂಪವ ಮಾಡಿ ಪಾಲಿಸುವ ನಮ್ಮ47 ಪ್ರಾಕೃತ ಜ್ಯೋತಿಯಾದೊಡೆ ದೇಹ ಸುಡದಿರದು ಅಪ್ರಾಕೃತ ಜ್ಯೋತಿ ಯಜ್ಞೇಶಗಿಹುದು ಭಕ್ಷ್ಯಭೋಜ್ಯಗಳೆಂಬ ಲೇಹ್ಯಪೇಯಗಳೆಂಬ ನಾಲ್ಕುವಿಧ ವಸ್ತುವಿನ ಪಾಕ ಮಾಡುವನು 48 ವಾಯುವಂತರ್ಗತನು ನೀಲರೂಪದ ದೇವ ಪ್ರದ್ಯುಮ್ನನಾಮಕನು ನಾಭಿಯಲ್ಲಿಹನು ಕಾಮರೂಪಿಯು ಅವನಪಾನಕ್ಕೆ ಒಡೆಯನವ ಪುರುಷರಿಂದಲಿ ಸೃಷ್ಟಿಗವನೆ ಕಾರಣನು 49 ಪೃಥ್ವಿವಿಯಪ್ ತೇಜಸ್ಸು ಮೂರು ದೇಹದ ಮೂಲ ಶ್ರೇಷ್ಠ ವಾಯುವು ಸೇರಿ ದೇಹಕ್ಕೆ ಚಲನೆ ಹೃದಯದಲ್ಲಾಗಸವು ಇರುವ ಕಾರಣದಿಂದ ಪಂಚಭೂತಂಗಳಿವು ದೇಹದಲ್ಲಿಹವು 50 ವಾಯುವಿನ ಜೊತೆಗೂಡಿ ದೇಹಚಾಲಕನು ಯಂತ್ರರೂಪದಲ್ಲಿದ್ದು ಯೋಗ್ಯತೆಗೆ ತಕ್ಕಂತೆ ಕಾರ್ಯವನು ಮಾಡಿಸುತ ಫಲವನ್ನು ಕೊಡುವ 51
--------------
ನಿಡಂಬೂರು ರಾಮದಾಸ
ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮರವೆ ಮುಸುಕಿದುದುತಾ ಪರಮ ಕೃಪೆವಂತ ಬಂದು ಪ್ರಳಾಪವೇನಿದುಯೆಂದು ನನ್ನಯತಾಪವನು ತಂಪಿಸುತ ಬಿಗಿಯಪ್ಪಿದನು ದೇಶಿಕನು 1ಕಂಗಳೊಳಗಾನಂದಜಲ ಸುರಿದಂಗದೊಳು ರೋಮಾಂಚವಾಗಿಯೆಮಂಗಳಾಕೃತಿಗಂಡು ಚರಣಕ್ಕೆರಗಿದೆನು ಮರಳಿಕಂಗಳೊರತೆಯ ತೊಡೆದು ದಿವ್ಯ ಕರಂಗಳಿಂದಲಿ ಶಿರತಡ' ಸರ್ವಾಂಗವನು ಬಿಗಿಯಪ್ಪಿಯಭಯವನಿತ್ತ ದೇಶಿಕನು 2ನಿನ್ನೊಳಾನಿಹೆನೆಲ್ಲಿ ಪೋಪೆಡೆಯನ್ನು ತೋರಿಸು ನನಗೆ ನೀನಾರೆನ್ನ ಮನ ನಿನ್ನುವನುಳಿದು ನಿಲಬಲ್ಲುದೇ ಮಗನೇಇನ್ನು ಧೈರ್ಯವ ಮಾಡು ಗಿರಿಗುಹೆಯನ್ನು ಸೇರ್ವೆನು ನಾನು ಜನತತಿಯನ್ನು ಹೊದ್ದುವದಿಲ್ಲವೆಂದುಸುರಿದನು ದೇಶಿಕನು 3ಇರಿಸಿರುವೆನೀ ಪಾದುಕೆಗಳನು ಹರುಷದಿಂದರ್ಚಿಸುತ ಭಾ'ಸುಬರಿಯ ಭ್ರಾಂತಿಯ ಬಿಟ್ಟು ಭಕ್ತಿಯ ಬಲದಿ ಮಂತ್ರವನುನಿರುತ ಜಪಿಸುತ್ತಿರು ಯಥೇಚ್ಛೆಯೊಳರಿವು ಸುಖಸಂಪತ್ತಿ ಲಭಿಪುದುಪರಮ ಭಕತನು ನೀನೆನುತ ವಾಚಿಸಿದನು ದೇಶಿಕನು 4'ಜಯದಶ'ುಯ ದಿವಸ ಲಭಿಸಿತು 'ಜಯಕರ ಮುಂದಿನ್ನು ನಿನಗೆಲೆದ್ವಿಜನೆ ಸುತ ಪೌತ್ರಾದಿ ಕುಲಪಾರಂಪರೆಗೆ ನಿನ್ನಾಸುಜನತೆಯ ಕರುಣಿಪುದು ಭಕ್ತವ್ರಜದೊಲೋಲಾಡುವದು ತಪ್ಪದು'ಜಯಸಾರಥಿ ನಿನ್ನ ವಶವೆಂದನು ಗುರೂತ್ತಮನು 5ಅನಿತರೊಳು ಜನಸಂದಣಿಯ ಧ್ವನಿಯನು ತಿಳಿದು ನಾನೆದ್ದೆ ಬೇಗದಿಘನಕೃಪಾನಿಧಿ ಗುರುವ ಕಾಣದೆ ಮತ್ತೆ ಬಳಲಿದೆನುಇನನುದಿಸಿದೊಂದರೆಘಳಿಗೆ ತಲೆಯನು ಬಿಡದೆುದ್ದಲ್ಲಿ ಪಾದುಕೆಯನು ಶಿರದಿ ತಾಳಿದೆನು ಮನೆಗೈದಿದೆನು ಹರುಷದಲಿ 6ತಿರುಪತಿಯ ವೆಂಕಟನು ಸುಖವನು ಕರುಣಿಸಲು ದೇಶಿಕನ ತನುವನುಧರಿಸಿ ಪಾದುಕೆುತ್ತು ಸಲ'ದನೊಲಿದು ಕೃಪೆುಂದಹರುಷದಿಂದೀ ದಿವಸ ಶ್ರೀ ಗುರುವರನ ಪೂಜಾಕಾರ್ಯವೆನಿಪುದುನಿರುತ ಭಜಿಸುವರಿಂಗೆ ಸಕಲೇಷ್ಟಾರ್ಥ ಸಿದ್ಧಿಪುದು * 7
--------------
ತಿಮ್ಮಪ್ಪದಾಸರು