ಒಟ್ಟು 36191 ಕಡೆಗಳಲ್ಲಿ , 138 ದಾಸರು , 9678 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
--------------
ಪ್ರಸನ್ನವೆಂಕಟದಾಸರು
ಬುದ್ಧಿ ಪೇಳಬಾರದೇನೆ ಗೋಪ್ಯಮ್ಮ ಕೃಷ್ಣಗೆಬುದ್ಧಿ ಪೇಳದಿದ್ದ ಕಾರಣ ಸದ್ದುಮಾಡದೆ ಮುದ್ದುಕೃಷ್ಣನುಮಿಕ್ಕ ಮಕ್ಕಳಂದದಿ ಕೃಷ್ಣನು ಚಿಕ್ಕವನೇನೆಸೀರೆ ದಡದಮ್ಯಾಲಿಟ್ಟು ನೀರಿನಾಟಗಳ ಮಾಡೆ ನಾವೆಲ್ಲರು ಪೋಗಿಕೇಳು ಕೃಷ್ಣನ ದುಡುಕುಗಳನು ವಿಶಾಲ ನೇತ್ರೆಯೋಳೆ
--------------
ಗೋಪಾಲದಾಸರು
ಬುದ್ಧಿಯ ಪೇಳೇ ಗೋಪಮ್ಮ ನಿನ್ನಮುದ್ದು ಮಗನ ಲೂಟಿ ಘನವಾದುದಮ್ಮ ಪಸದ್ದು ಇಲ್ಲದ ಹಾಗೆ ಬಂದಾನೆಕದ್ದು ಬೆಣ್ಣೆಯನೆಲ್ಲ ತಿಂದಾನೆಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲುಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ 1ಜಲಜ ಗಂಧಿನಿಯರು ಕೂಡೀ ನಾವುಜಲದೊಳಾಡುವುದನ್ನು ನೋಡೀಜಲಜನಾಭನು ಮರದ ತಲೆಯ ಮೇಲ್ಕಟ್ಟಿದಸುಲಿದಿಟ್ಟ ಸೀರೆಯ ಬಲರಾಮನನುಜ 2ಹಾಲ ಮಾರಲು ಪೋದ ಮಗಳಾ ಕಂಡುಮೇಲೆ ಬೀಳುತ ಮಾಡೆ ಜಗಳಾಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನುಮೂರ್ಲೋಕದೊಡೆಂiÀುಶ್ರೀಲೋಲಗೋವಿಂದ 3
--------------
ಗೋವಿಂದದಾಸ
ಬೂಚಿಬಂದಿದೆ-ರಂಗ-ಬೂಚಿ ಬಂದಿದೆಪಚಾಚಿ ಕುಡಿದು ಸುಮ್ಮನೆ ನೀಪಾಚಿಕೊಳ್ಳೊ ಕೃಷ್ಣಯ್ಯ ಅ.ಪನಾಕು ಮುಖದ ಬೂಚಿಯೊಂದು |ಗೋಕುಲಕ್ಕೆ ಓಡಿ ಬಂದು ||ತೋಕರನ್ನು ಎಳೆದುಕೊಂಡು |ಕಾಕುಮಾಡಿ ಒಯ್ಯುವುದಕೆ 1ಮೂರು ಕಣ್ಣಿನ ಬೂಚಿಯೊಂದು |ಊರು ಊರು ಸುತ್ತಿ ಬಂದು ||ದ್ವಾರದಲ್ಲಿ ನಿಂದಿದೆ ನೋಡೊ |ಪೋರರನ್ನು ಒಯ್ಯುವುದಕೆ 2ಅಂಗವೆಲ್ಲ ಕಂಗಳುಳ್ಳ |ಶೃಂಗಾರ ಮುಖದಬೂಚಿ||ಬಂಗಾರದ ಮಕ್ಕಳನೆಲ್ಲ |ಕೆಂಗೆಡಿಸಿ ಒಯ್ಯುವುದಕೆ 3ಆರು ಮುಖದ ಬೂಚಿಯೊಂದು |ಈರಾರುಕಂಗಳದಕೆ ||ಬಾರಿಬಾರಿಅಳುವ ಮಕ್ಕಳ |ದೂರ ಸೆಳೆದು ಒಯ್ಯುವುದಕೆ 4ಮರದ ಮೇಲೆ ಇರುವುದೊಂದು |ಕರಿಕರಾಳದ ಮುಖದಬೂಚಿ||ತರಳರನ್ನು ಎಳೆದುಕೊಂಡು |ಪುರಂದರವಿಠಲಗೊಪ್ಪಿಸಲಿಕ್ಕೆ 5
--------------
ಪುರಂದರದಾಸರು
ಬೆದರದಿರೆಲೆ ಆತ್ಮಮಧುಸೂದನನ ಕೃಪೆ ಹೊಂದು ದುಷ್ಕøತಕೆಬೆದರದಿರೆಲೆ ಆತ್ಮ ಪ.ಹರಿಮುಖ್ಯಪ್ರಾಣರ ಸ್ಮರಣೆಯೊಂದಿರಲಿದುರಿತನೊರಜುವಿಂಡು ಉರಿಯ ನುಂಗುವವೆ1ಪರವನಿತೆಗೆ ಚಿತ್ತ ಬೆರೆಯದಲಿರಲಿಮರುಳು ಕೀನಾಶಭಟರ ಊಳಿಗಕ್ಕೆ 2ಭೂತದಯ ವಿನಯ ಮಾತುಗಳಿರಲಿಪಾತಕದಾರಿದ್ರ್ಯಾವ್ರಾತ ಬೊಬ್ಬುಳಿಗೆ3ದ್ವಿಜರಾಜಗಮನನ ದ್ವಿಜಭಜನಿರಲಿಸುಜನಪವಾದ ಶೀಲ ರಚಕ ಸಮೂಹಕೆ 4ವಿಬುಧರು ಬರೆದಿತ್ತ ಅಭಯಪತ್ರಿರಲಿಶುಭಪಥ ತಡೆವ ಅಬುಧಸುಂಕಿಗರ್ಗೆ 5ಸುವೈರಾಗ್ಯಮನೆ ದೃಢ ಕವಟ ಬಲ್ಕಿರಲಿಭವಾಂಬುಧಿ ಗೋಷ್ಪಾದವಹುದು ತಿಳಿಯದೆ 6ಪ್ರಸನ್ವೆಂಕಟೇಶನ್ನ ದಾಸರೆ ರಂಭೆಯರುಹೇಸಿ ನೃಪಾಂಗನೇರು ಎಳೆಸಲಿ ಕಂಗೆಟ್ಟು 7
--------------
ಪ್ರಸನ್ನವೆಂಕಟದಾಸರು
ಬೆದರದಿರೊ ಬೋವು ಬರಲಿಲ್ಲ ನಿನ್ನಮೃದುಲ ಸವಿ ತೊದಲು ಮಾತಾಡೊ ಬಾಲ ಪ.ಕಣ್ಣೆವೆಯಿಕ್ಕದೆ ನೋಡಬ್ಯಾಡನಿನ್ನ ಮೈಮರವಿಟ್ಟಾಡ ಬ್ಯಾಡಗುನ್ನಗನ್ಯೆಳೆದಂಬೆಗಾಲಿಕ್ಕಬ್ಯಾಡಹೊನ್ನೋಲೆ ಕೆಂಪೇರೆ ಹುಯಿಲಿಡಬ್ಯಾಡ 1ನೆಲವಿದು ದೈನ್ಯವ ಬಿಡಬ್ಯಾಡಕೊಲ್ಲುವರ್ಯಾರಿಲ್ಲ ಕೊಲೆಗಂಜಬ್ಯಾಡನಲವ ಬಿಟ್ಟಡವಿಯನೈದ ಬ್ಯಾಡಕಳವಲಿ ಹುದುಗಿಕೊಂಡಿರಬ್ಯಾಡ 2ಹುಸಿಗೆ ಬೇಸರಬ್ಯಾಡ ಕೃಷ್ಣಮ್ಮಹೊಸ ಕಲ್ಕ್ಯಾಟಬ್ಯಾಡ ನಮ್ಮಮ್ಮಪ್ರಸನ್ನವೆಂಕಟಪತಿ ಪರಬೊಮ್ಮ ನಿನ್ನಕುಶಲಕ್ಕೇನೇನುಪಾಯವಿಲ್ಲಮ್ಮಾ 3
--------------
ಪ್ರಸನ್ನವೆಂಕಟದಾಸರು
ಬೇಡಬೇಡೆಲಾ ಕೊಡಬೇಡೆಲಾ ಸೀರೆಬೇಡಿದರೆ ದೇವರಾಣೆಲಾ ಪಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ 1ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||ಖೂಳಪೂತನಿ ಕೊಂದ ಧಾಳಿ ಬಲ್ಲರವರು |ಬಾಲಕನೆನ್ನರು ನಿನ್ನಗೆಲಾ 2ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |ವತ್ತಿ ನಮ್ಮನು ಕೊಲ್ಲರವರೆಲಾ ||ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |ನಿತ್ಯನಮ್ಮೊಳು ನಡತೆಲಾ 3ಕರಕರಿಗಾರದೆ ಮೈಮರೆದು ಊರಿಗೆ ಹೋಗಿ |ಭರದಿಂದೆಶೋದೆಗೆ ದೂರೆವೆಲಾ ||ತರುಣಿಯರೆಲ್ಲ ಹಿಂದೆ ಮೊರೆಯಿಡೆ ಲಾಲಿಸಿ |ಒರಳಿಗೆ ಕಟ್ಟಿಸಿದ್ದೆವೆಲಾ 4ಲಲನೆಯರೆಲ್ಲ ಕೂಡಿ ಜಲಬಿಟ್ಟು ಬಂದರೆ |ಕೊಳುವೆ ನಿನ್ನಯ ಪ್ರಾಣಾ | ತಿಳಿಯಲೊಗಳಿಸಿ ಸಂಸಾರವ ಸಲುಹುತಿಹರು ನಾವೇ |ಕಳವೇನೊ ಪ್ರಾಣೇಶ ವಿಠಲ 5
--------------
ಪ್ರಾಣೇಶದಾಸರು
ಬೇಡವೆನ್ನೆ ನೀನು ಗೋಪಮ್ಮ ಪಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಬೇವ ಬೆಲ್ಲದೊಳಿಡಲೇನು ಫಲಹಾವಿಗೆ ಹಾಲೆರೆದೇನು ಫಲ ? ಪ.ಕುಟಿಲವ ಬಿಡದಲೆ ಕುಜನರು ಮಂತ್ರವಪಠನೆಯ ಮಾಡಿದರೇನು ಫಲ?ಸಟೆಯನ್ನಾಡುವ ಮನುಜರು ಮನದಲಿವಿಠಲನ ನೆನೆದರೆ ಏನು ಫಲ ? 1ಮಾತಾ - ಷತೃಗಳ ಬಳಲಿಸುವಾತನುಯಾತ್ರೆಯ ಮಾಡಿದರೇನು ಫಲ ?ಘಾತಕತನವನು ಬಿಡದೆ ನಿರಂತರನೀತಿಯನೋದಿದರೇನು ಫಲ ? 2ಕಪಟತನದಲಿ - ಕಾಡುವರೆಲ್ಲರುಜಪಗಳ ಮಾಡಿದರೇನು ಫಲ ?ಕುಪಿತ ಬುದ್ಧಿಯನು ಬಿಡದೆ ನಿರಂತರಉಪವಾಸ ಮಾಡಿದರೇನು ಫಲ ? 3ಪತಿಗಳ ನಿಂದಿಸಿ ಬೊಗಳುವ ಸತಿಯರುವ್ರತಗಳ ಮಾಡಿದರೇನು ಫಲ ?ಅತಿಥಿಗಳೆಯಡೆಯಲಿ ಭೇದವ ಮಾಡಿ ಸದ್ಗತಿಯನು ಬಯಸಿದರೇನು ಫಲ ? 4ಹೀನ ಗುಣಂಗಳ ಬಿಡದೆ ನದಿಯೊಳುಸ್ನಾನವ ಮಾಡಿದರೇನು ಫಲ ?ಜಾÕನಿ ಪುರಂದರವಿಠಲನ ನೆನೆಯದೆಮೌನವ ಮಾಡಿದರೇನು ಫಲ? 5
--------------
ಪುರಂದರದಾಸರು
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11
--------------
ಪ್ರಸನ್ನವೆಂಕಟದಾಸರು
ಬ್ಯಾಡಿರವ್ವ ಎನ್ನ ಕಂದನ್ನ ದೂರಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿಪಿಡಿದು ತಂದು ದುರುಳನೆನ್ನ ಬ್ಯಾಡಿರೆ ಪ.ಹಸಿದೆ ಮಗುವೆ ಹಸಿದೆ ಚಿನ್ನಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುನಿಬಟ್ಟಲೊಳಿಟ್ಟ ಪಾಲಿನಬಿಸಿಗೆ ಬೊವ್ವೆಂದು ಬೆದರುವಮೊಸರ ಹರವಿಯೊಡೆದು ನಿಮ್ಮನೆಪೊಸಬೆಣ್ಣೆಗಳ ಮೆಲುವನೆಂದುಅಸಿಯರೊಂದುಗೂಡೆನ್ನ ಕೂಸಿಗೆಪುಸಿಯ ವಾಕನುಸುರಿ ದೂರ ಬ್ಯಾಡಿರೆ 1ಮುದ್ದು ತಾರೊ ರಂಗ ಎನಲುಎದ್ದು ತಪ್ಪಡಿಗಳನಿಡುತಬಿದ್ದು ಅಂಬೆಗಾಲನಿಕ್ಕಿಮುದ್ದು ನೀಡಲರಿಯನೆಕದ್ದು ನಿಮ್ಮನೆ ಕೆನೆವಾಲನುಗೆದ್ದು ನಿಮ್ಮ ಬಾಲರ ಬೆನ್ನಗುದ್ದಿ ಓಡಿ ಬರುವನೆಂತೆಬುದ್ಧಿ ಇಲ್ಲವೆ ನಿಮಗೆ ದೂರ ಬ್ಯಾಡಿರೆ 2ಎತ್ತಿಕೊಂಡು ರಂಬಿಸಿ ಬಾಯೊಳುತುತ್ತನಿಡಲು ಉಣ್ಣಲರಿಯಕತ್ತಲೆಯೊಳು ಹೆಂಗಳ ಪಿಡಿದುಚಿತ್ತ ಮೋಹಿಸಬಲ್ಲನೆಹೆತ್ತ ಮಕ್ಕಳಿಲ್ಲವೆ ನಿಮಗೆವ್ಯರ್ಥ ಜಾರನೆನ್ನುವಿರಮ್ಮಕರ್ತಪ್ರಸನ್ವೆಂಕಟರಾಯಗೆಭಕ್ತವತ್ಸಲನಲ್ಲೆಂದು ದೂರ ಬ್ಯಾಡಿರೆ 3
--------------
ಪ್ರಸನ್ನವೆಂಕಟದಾಸರು
ಬ್ರಹ್ಮದೇವರ ಸ್ತುತಿಸರಸೀಜಾಸನ ವಾಣಿ | ತರುಣೀವಲ್ಲಭಕ್ಷೋಣಿ|ಗುರುವೆ ಮುಗಿವೆನುಪಾಣಿ|ಹರಿಪಾದದಾಣಿ 1ಇನ್ನೊಬ್ಬರಾ ಬಲ್ಲೀನೆ | ಎನ್ನ ಸ್ವರೂಪೋದ್ಧಾರ ||ರನ್ನು ಜಗದೊಳು | ನಿನ್ವೆತಿರಿಕ್ತಾ 2ಈ ಕಥಿಗೆ ಮಂಗಳವಾ | ಕರುಣೀಸುತ್ವರ||ಲೋಕಾಧೀಶ ಪ್ರಾಣೇಶ | ವಿಠ್ಠಲನ್ನ ದಾಸಾ 3(ಈ ಪದವನ್ನು ದಾಸರಾಯರ ಮುಯ್ಯದ ಪದದಿಂದ ಸಂಗ್ರಹಿಸಲಾಗಿದೆ.)
--------------
ಪ್ರಾಣೇಶದಾಸರು
ಬ್ರಹ್ಮಾಂಡದೊಳಗಿದ್ದ ಚರ್ಯೆಯ ತಂದು |ಪಿಂಡಾಂಡದೊಳಗೆಲ್ಲ ತೋರಬೇಕೆಂದು |ಪುಂಡಲೀಕನ ಭಕ್ತಿಗೆ ತಾನೆ ಬಂದು |ಪಾಂಡುರಂಗ ನಾಮ ರೂಪದಿ ನಿಂದೂ ಜೋ ಜೋ ||ಜೋ ಜೋ ಜೋ ಶ್ರೀ ಗಂಗಾಧರನೆ ಜೋ ಜೋ ಜೋಶ್ರೀ ವತ್ಸಧರನೇ ಜೋ ಜೋ ಜೋ ಶ್ರೀ ಶಶಿಧರನೇ |ಜೋ ಜೋ ಜೋ ಶ್ರೀ ದತ್ತಾತ್ರೇಯನೇ ಜೋ ಜೋ ಜೋ1<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತನ್ನ ವಾಯು ಸಾಧು ಸಂತರೊಳಾಡಿ |ತನ್ನ ಸ್ಫುರಣಿ ಮಾಯಗಳಿತವೆ ಕೂಡಿ |ತನ್ನ ಸ್ವಸುಖವೆ ಬೋಧರಿಯೆತ್ತಿ ನೋಡಿ |ತನ್ನಿಂದುತ್ಪತ್ತಿ ಸ್ಥಿತಿ ಲಯವು ತೋರಡಗಿ | ಜೋ ಜೋ2ನಿತ್ಯಶುದ್ಧಬುದ್ಧಸರ್ವಾಂತರಾತ್ಮಾ |ಸತ್ಯ ಶಾಶ್ವತ ಸಾಧು ದಯ ಸಾರ್ವಭೌಮಾ |ಪ್ರತ್ಯಾತ್ಮ ಪರಮಾತ್ಮ ಐಕ್ಯಮೇಕಾತ್ಮಾ |ನಿತ್ಯಅಪರೋಕ್ಷನಿರ್ಗುಣ ನಿಜ ಧಾಮಾ ಜೋ ಜೋ3ಕಾಶೀ ನಿವಾಸಿ ವಿಶ್ವೇಶ ವೃಷಾತ್ಮಾ |ನಾಸಿಕತ್ರ್ಯಂಬಕ ನೀನೆ ಮಹಾತ್ಮಾ |ವಾಸುದೇವನ ಪ್ರಾಣ ಪ್ರಿಯ ಪರಮಾತ್ಮಾ |ಕ್ಲೇಶಭಕ್ತರಿಗಾಗಿ ವಾಸಿಸುವಾತ್ಮಾ ಜೋ ಜೋ4
--------------
ಜಕ್ಕಪ್ಪಯ್ಯನವರು
ಬ್ರಹ್ಮಾದಿಕರನು ಪರಬ್ರಹ್ಮದಿಚ್ಛಿಲಿ ಪಡೆದಳಮ್ಮಪರಂಜ್ಯೋತಿ ಪರಬ್ರಹ್ಮಿಣೀಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಾಣಿ ಕಲ್ಯಾಣಿಫಣಿವೇಣಿ| ರುದ್ರಾಣಿಶರ್ವಾಣಿಸುವಾಣಿ ಗೀರ್ವಾಣಿ ವರದೆ | ಗಾಣಿತ್ರಿನಯನ ಅಜನ ರಾಣಿ ಶಂಕರ ಪ್ರಾಣಿ ಪುಸ್ತಕಪಾಣಿನಾರಾಯಣೀ1ಅಂಬೆ ಲೋಕಾಂಬೆ ಭ್ರಮರಾಂಬೆ ಮೂಕಾಂಬೆಹರಡಿಂಬೆ ಪ್ರತಿಬಿಂಬೆ ಕುಚಕುಂಭೆ ಸಾಂಬೆ |ರಂಭೆ ಹೇರಂಬೆ ಶರಣೆಂಬೆ ವರಗೊಂಬೆ ಭಕ್ತರಬೊಂಬೆ ಹೊಳೆವ ಗೊಂಬೆ2ಕಾಳೆ ಹಿಮ ಬಾಳೆ ಭೂ ಪಾಳೆ ಕುಸುಮಾಳೆವನಮಾಳೆಕಂದರಮೌಳೆ ಕುಟಿಲ ಕುರುಳೆ |ಕೇಳಿನಿನ್ನಯ ಲೀಲೆ ಕಾಲಿಗೆರಗುವರಘವ ಮೂಲಕೆತ್ತೆತ್ತಿಬಿಸುಟುವ ಕೃಪಾಳೆ3ಬೇಕೆಂಬೊ ಬಯಕಿತ್ತು ಸಾಕು ಸಾಕೆನಿಸುವರುಲೋಕದೊಳಗ್ಯಾರುಂಟು ನಿನ್ನ ಬಿಟ್ಟು |ಏಕೆ ವಿವೇಕೆ ಎನ್ನೀ ಕುಟಿಲಗುಣನೋಡ ಬೇಕೆಕ್ಷಮೆಮಾಡಿದರೆ ಮೈಯುಳಿಯುವದು4ಕಾಯಜನ ಮಾತೆ ಸಿತಕಾಯನರ್ಧಾಂಗಿ ಜಗಕಾರ್ಯನಿರ್ಮಿಸುವ ನರರುದಿಸಿ ಮೂರು || ಕಾಯಡಗಿ ಹೋದನಿಷ್ಕಾಯ ಪರಶಕ್ತ್ಯೆನ್ನ ಕಾಯ್ದುಕೊಳ್ಳೆಲೆತಾಯಿ ಸ್ತ್ರೀಯರನ್ನೆ5ಸಾರಿದರಹೊರೆವಸಂಸಾರದೊಳು ಮುಳುಗಿದರೆತಾರಿಸುವ ತವಕದಿಂತರುಳೆತರುಣೀ |ಸೇರಿಸುತ ತಿರುಗಿ ತನು ಬಾರದ್ಹಾದಿಗೆ ಒಯ್ದುತಾರಿಸುವ ಸ್ಥಿರದಿ ನೀ ತೋಯಜಾಕ್ಷಿ6ಕುಸುಮಸರ್ಪಾದಿಗಳು ಕುಸುಮಗಂಧಿಯ ಪದಕೆಕುಸುಮವೃಷ್ಟಿಗವು ದೇವಿಯ ಸುಕೃತಿಗಳೂ |ಕುಸುಮದೊಳು ಕರಕಂಜ ಕುಸುಮದೊಳುವರವಿಡಿದ ಕುಸುಮಶರರಿಪುಶಂಕರನ ಶಂಕರೀ7
--------------
ಜಕ್ಕಪ್ಪಯ್ಯನವರು
ಭಕುತ ಜನ ಮುಂದೆ ನೀನವರ ಹಿಂದೆ - ಇದಕೆ |ಯುಕುತಿ ಕೈಕೊಳದಯ್ಯ ಗಯಾಗದಾಧರನೆ ಪಕಟ್ಟೆರಡು ಕೂಡಿ ತಾ ನದಿಸೂಸಿ ಹರಿವಾಗ |ಕಟ್ಟುಕ್ಕಿದಾಗ ಹರಿಗೋಲ ಹಾಕೆ ||ನೆಟ್ಟನೆ ಜಿಗಿಜಿಗಿದು ದಾಟಿ ತಾ ಪೋಪಾಗ |ಹುಟ್ಟು ಮುಂದಲ್ಲದಲೆ ಹರಿಗೋಲು ಮುಂದೆ? 1ಕಾಳೆಹೆಗ್ಗಾಳೆದುಂದುಭಿನಾನಾ ವಾದ್ಯದಿಂ |ಓಲಗದಿಂದೈದೆ ಅರಸು ತಾ ಬರುವಾಗ ||ಸಾಲಾಗಿ ಬಳಿವಿಡಿದು ಸಂಭ್ರಮದಿ ಇರುವಾಗ |ಆಳು ಮುಂದಲ್ಲದೆ ಅರಸು ತಾ ಮುಂದೆ 2ಉತ್ಸವ ಮೂರುತಿಯು ಬೀದಿ ಮೆರೆಯುತ ಬರಲು |ಸತ್ಸಂಗತಿಗೆ ಹರಿದಾಸರೆಲ್ಲ ||ಅಚ್ಚ ಸಿರಿಯರಸು ಸಿರಿಪುರಂದರ ವಿಠಲನೆ |ವತ್ಸಮುಂದಲ್ಲದೆಧೇನುತಾ ಮುಂದೆ?
--------------
ಪುರಂದರದಾಸರು