ಒಟ್ಟು 36720 ಕಡೆಗಳಲ್ಲಿ , 136 ದಾಸರು , 10408 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಳ್ಳು ಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯಬೆಳ್ಳಕ್ಕಿಯಂತೆ ನಿನ್ನ ಧ್ಯಾನವ ಮಾಡುವೆನಯ್ಯಾ ಪಗಂಡು ಮುಳುಗಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿಮಂಡೆಶೂಲೆಯಲ್ಲದೆ ಗತಿಯು ಇಲ್ಲಮಂಡೆಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ1ಗಾಣದೆತ್ತಿನಂತೆ ಕಣ್ಣಕಟ್ಟಿ ಪ್ರದಕ್ಷಿಣೆ ಮಾಡಿಕಾಣದೆ ನಾ ತಿರುಗಿದೆ ಕಂಡುದಿಲ್ಲಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿಆಣಿಕಾರಿಕೆ ಮಾಡಿದಂಥ ಈ ಕುಯುಕ್ತಿಯು 2ಇಕ್ಕಳವ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲಪೊಕ್ಕಳ ಪೂವಿನ ಶ್ರೀ ಪುರಂದರವಿಠಲನೆಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ 3
--------------
ಪುರಂದರದಾಸರು
ಏಕಾರತಿಯನೆತ್ತುವ ಬನ್ನಿ ನಮ್ಮಲೋಕನಾಥನಸಿರಿಪಾದವ ಬೆಳಗುವಪ.ತುಪ್ಪದೊಳ್ಬೆರಸಿದ ಮೂರು ಬತ್ತಿಯನಿಟ್ಟುಒಪ್ಪುವ ದೀಪಕ್ಕೆ ದೀಪಹಚ್ಚಿ ||ತಪ್ಪದೆ ಸಕಲ ಪಾಪಂಗಳ ಹರಿಸುವಅಪ್ಪ ವಿಠಲನ ಪದಾಬ್ಜವ ಬೆಳಗುವ 1ಹರುಷದಿ ಏಕಾರತಿ ಬೆಳಗಿದ ಫಲನರಕದಿಂದುದ್ಧಾರ ಮಾಡುವುದು ||ಪರಮ ಭಕುತಿಯಿಂದ ಬೆಳಗುವ ನರರನುಹರಿತನ್ನ ಹೃದಯದಿ ಧರಿಸುವನಯ್ಯ2ಅನ್ಯ ಚಿಂತೆ ಮಾಡದೆ ಅನ್ಯರ ಭಜಿಸದೆ ಮತ್ತನ್ಯ ದೇವರನು ಸ್ಮರಿಸದೆ ಅ ||ನನ್ಯವಾಗಿ ಶ್ರೀ ಪುರಂದರವಿಠಲನಪುಣ್ಯನಾಮಗಳ ಧ್ಯಾನಿಸುತ 3
--------------
ಪುರಂದರದಾಸರು
ಏಕೆ ಕಡೆಗಣ್ಣಿಂದ ನೋಡುವೆ - ಕೃಷ್ಣ |ನೀ ಕರುಣಾಕರನಲ್ಲವೆ ? ಪಭಕ್ತ ವತ್ಸಲ ನೀನಲ್ಲವೆ -ಕೃಷ್ಣ |ಚಿತ್ಸುಖದಾತ ನೀನಲ್ಲವೆ ? ||ಅತ್ಯಂತ ಅಪರಾಧಿ ನಾನಾದಡೇನಯ್ಯ|ಇತ್ತಿತ್ತ ಬಾ ಎನ್ನಬಾರದೆ ರಂಗ 1ಇಂದಿರೆಯರಸ ನೀನಲ್ಲವೆ - ಬಹುಸೌಂದರ್ಯನಿಧಿ ನೀನಲ್ಲವೆ ? ||ಮಂದಮತಿ ನಾನಾದಡೇನು ಕೃಪಾ-ಸಿಂಧುನೀ ರಕ್ಷಿಸಬಾರದೆ ರಂಗ2ದೋಷಿಯು ನಾನಾದಡೇನಯ್ಯ - ಸರ್ವ -ದೋಷರಹಿತ ನೀನಲ್ಲವೆ ? ||ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ |ಶೇಷಶಾಯಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ಏಕೆ ಚಿಂತಿಪೆ ಬರಿದೆ ನೀ -ವಿಧಿಬರೆದ - |ವಾಕುತಪ್ಪದು ಪಣೆಯೊಳುಪಹುಟ್ಟುವುದಕೆ ಮೊದಲೆ ತಾಯ್ಮೊಲೆಯೊಳು |ಇಟ್ಟಿದ್ದೆಯೊ ಪಾಲನು ||ತೊಟ್ಟಿಲೊಳಿರುವಾಗಲೆ - ಗಳಿಸಿ ತಂ - |ದಿಟ್ಟು ಕೊಂಡುಣುತಿದ್ದೀಯಾ 1ಉರಗವೃಶ್ಚಿಕಪಾವಕ-ಕರಿಸಿಂಹ |ಅರಸು ಹುಲಿ ಚೋರ ಭಯವು ||ಹರಿಯಾಜೆÕಯಿಂದಲ್ಲದೆ - ಇವು ಏಳು - |ಶರಧಿಪೊಕ್ಕರು ಬಿಡವೊ- ಮರುಳೆ2ಇಂತು ಸುಖ - ದುಃಖದೊಳ್ಸಿಲುಕಿ - ಮರುಗಿ ನೀನು - |ಭ್ರಾಂತನಾಗಿ ಕೆಡಬೇಡವೊ ||ಸಂತೋಷದಿಂದ ಅರ್ಚಿಸಿ - ಭಜಿಸೋ ನೀ - |ಸಂತತಪುರಂದರವಿಠಲನ - ಮರುಳೆ3
--------------
ಪುರಂದರದಾಸರು
ಏಕೆ ದಯಮಾಡಲೊಲ್ಲೆ - ಎಲೊ ಹರಿಯೆ |ಮೂಕನಾಗುವರೆ ಹೀಗೆ ಪಲೋಕವನು ರಕ್ಷಿಪ ಲಕ್ಷ್ಮೀಕಾಂತನು ನೀನೇ |ವಾಕುಮೊರೆಗಳಕೇಳಿಒಲಿದು ದಯಮಾಡಯ್ಯಅ.ಪಅರ್ಥವಿಲ್ಲದ ಬಾಳ್ವೆಯು - ಇರುವುದಿದು|ವ್ಯರ್ಥವಾಗಿದೆ ಶ್ರೀಪತಿ ||ಕರ್ತುನಿನ್ನೊಳು ನಾನು ಕಾಡಿ ಬೇಡುವನಲ್ಲ|ಸತ್ವರದಿ ದಯಮಾಡೊ ತುಳಸೀದಳಪ್ರಿಯ 1ಮನದೊಳಗಿನ ಬಯಕೆ - ಎಲೈಸ್ವಾಮಿ |ನಿನಗೆ ಪೇಳುವೆನು ನಾನು ||ಬಿನುಗುದೇವತೆಗಳಿಗೆ ಪೇಳಲಾರೆವೊ ಹರಿಯೆ|ತನುಮನ ನಿನ್ನ ಕೂಡ ಇಹವು ದಯಮಾಡೊ 2ಮೂರು ಲೋಕವ ಪಾಲಿಪ - ಎನ್ನಯ ಸ್ವಾಮಿ |ಭಾರವೆ ನಿನಗೆ ನಾನು ||ಕಾರುಣ್ಯನಿಧಿ ನಮ್ಮ ಪುರಂದರವಿಠಲ ಶ್ರೀ - |ದಾರಾಮನೋಹರ ಸಾಕಾರ ದಯವಾಗೊ3
--------------
ಪುರಂದರದಾಸರು
ಏಕೆ ದೇಹವನು ದಂಡಿಸುವೆ ವೃಥಾ - ಬಿಡ - |ದೇಕ ಚಿತ್ತದಿ ಲಕ್ಷ್ಮೀಕಾಂತಹರಿಎನ್ನದೆಪ.ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - |ಮೌನವನು ಪಿಡಿದು ಬಕಪಕ್ಷಿಯಂತೆ |ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||ದಾನವಾಂತಕನ ನಾಮಕೆ ಮೌನವುಂಟೆ ? 1ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |ಗುಪಿತದಿಂದಲಿ ನೀನು ಕುಳಿತು ಫಲವೇನು ||ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ 2ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |ಸಂದೇಹವೇಕೆ ನೀನೊಂದು ಕ್ಷಣವಗಲದೆ |ತಂದೆ ಶ್ರೀ ಪುರಂದರವಿಠಲ ನೆನೆಮನವೆ 3
--------------
ಪುರಂದರದಾಸರು
ಏಕೆ ನಿರ್ದಯನಾದೆ ಎಲೋ ದೇವನೇಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ಪಕಂಗೆಟ್ಟು ಕಂಬವನು ಒಡೆದು ಬಯಲಿಗೆ ಬಂದುಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆಬಂಗಾರವೆಷ್ಟು ಕೊಟ್ಟನು ಹೇಳೋ ಹರಿಯೇ 1ಸಿರಿಗೆ ಪೇಳದೆ ಮುನ್ನ ಸೆರಗ ಸಂವರಿಸದೆಗರುಡನ ಮೇಲೆ ಗಮನವಾಗದೆ ||ಭರದಿಂದ ನೀ ಬಂದು ಕರಿಯನುದ್ದರಿಸಿದೆಕರಿರಾಜನೇನು ಕೊಟ್ಟನು ಹೇಳು ಹರಿಯೇ 2ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆನಿಜದಿ ರುಕ್ಮಾಂಗದ ಮೊಮ್ಮಗನೆ ||ಭಜನೆಗೈವರೆ ಹಿತರೆ ನಾ ನಿನಗನ್ಯನೆತ್ರಿಜಗಪತಿ ಸಲಹೆನ್ನಪುರಂದರವಿಠಲ3
--------------
ಪುರಂದರದಾಸರು
ಏಕೆ ಮುರ್ಖನಾದೆ - ಮನುಜಾಏಕೆ ಮುರ್ಖನಾದೆ ? ಪ.ಏಕೆ ಮೂರ್ಖನಾದೆ ನೀನುಕಾಕು ಬುದ್ಧಿಗಳನು ಬಿಟ್ಟುಲೋಕನಾಥನ ನೆನೆಯೊ ಮನುಜಾ ಅಪಮಕ್ಕಳು ಹೆಂಡರು ತನ್ನವರೆಂದುರೊಕ್ಕವನು ಗಳಿಸಿಕೊಂಡುಸೊಕ್ಕಿಂದ ತಿರುಗುವರೇನೊ ಹೇ ಮನುಜಾ 1ಕಕ್ಕಸದ ಯಮದೂತರು ಬಂದುಲೆಕ್ಕವಾಯಿತು ನಡೆಯೆಂದರೆಸಿಕ್ಕವರೆಲ್ಲ ಬಿಡಿಸುವರೇನೊ ಹೇ ಮನುಜಾ 2ಅರಿಷಡ್ವರ್ಗದ ಆಟವ ಬಿಟ್ಟುಪುರಂದರವಿಠಲನ ಹೊಂದಲುಬೇಕುಹರಿಯನು ಸೇರುವ ಮಾರ್ಗವ ನೋಡೋ ಹೇ ಮನುಜಾ 3
--------------
ಪುರಂದರದಾಸರು
ಏಕೆ ಮೈ ಮರೆದೆ ನೀನು - ಜೀವನವೇ - |ಏಕೆ ಮೈಮರೆದೆ ನೀನು ಪಏಕೆ ಮೈಮರೆದೆ ನೀ - ಲೋಕಾರಾಧ್ಯನ ಪಾದ|ಬೇಕೆಂದು ಭಜಿಸು ಕಾಣೋ - ಜೀವನವೇ ಅ.ಪ.ಮದ್ದಾನೆಗಳೆಂಟು ಸೊಕ್ಕಿನಿಂ ಬರುವಾಗ |ಎದ್ದು ಕುಳ್ಳಿರಬಾರದೆ - ಜೀವನವೇ ||ಅಧ್ಯಾತ್ಮಕಾ ಹರಿನಾಮವ ಶ್ರುತಿಮಾಡಿ |ಒದ್ದು ಬಿಸಾಡು ಕಣೊ - ಜೀವನವೇ 1ಕಂದರ್ಪನೆಂಬವ ಕಾದುತ ಬರುವಾಗ |ನಿಂದಿಸುತಿರಬಾರದೆ - ಜೀವನವೇ ||ಒಂದೇ ಮನಸು ಎಂಬ ವಜ್ರಾಯುಧವ ಪಿಡಿದು |ಕೊಂದು ಬೀಸಾಡು ಕಾಣೊ - ಜೀವನವೇ 2ವಿಷಯದಿ ಸುಖಕಾಣೆ ಪಶುಜನರೊಳು ದೇಹ |ಹಸನುಗಳೆಯಲು ಬೇಡವೋ - ಜೀವನವೇ||ಬಿಸಜಾಕ್ಷ ಪುರಂದರವಿಠಲನೊಲಿಯೆ ಸುಖ -|ರಸದಿ ಲೋಲಾಡು ಕಾಣೋ - ಜೀವನವೇ 3
--------------
ಪುರಂದರದಾಸರು
ಏಕೆ ವೃಂದಾವನವು ಸಾಕು ಗೋಕುಲವಾಸ |ಏಕೆ ಬಂದೆಯೊ ಉದ್ಧವಾ? ಪಸಾಕು ಸ್ನೇಹದ ಮಾತನೇಕ ಮಹಿಮನು ತಾನು |ಆ ಕುಬುಜೆಯನು ಕೂಡಿದ-ಉದ್ಧವಾ ಅ.ಪಬಿಲ್ಲು ಬಿಳಿಯಯ್ಯನ ಬೇಟ ನಗೆನುಡಿ ನೋಟ |ಇಲ್ಲದಂತಾಯಿತಲ್ಲ ||ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನವ |ವಲ್ಲಭನ ಒಯ್ದನಲ್ಲ ||ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದು |ಘಲ್ಲನಾಭನ ತಂದು ತೋರೈ-ಉದ್ಧವಾ 1ಅನುದಿನೊಳಾದರಿಸಿ ಅಧರಾಮೃತವನಿತ್ತು |ಇನಿದಾದ ಮಾತುಗಳಲಿ ||ಮನದ ಮರ್ಮವ ತಿಳಿದ ಮನಸಿಜಪಿತನ ಸಖವು |ಮನಸಿಜನ ಕೇಳಿಯಲ್ಲಿ ||ಕನಸಿನಲಿ ಕಂಡ ತೆರನಾಯಿತಾತನ ಕಾಂಬು |ವನಕ ಬದುಕುವ ಭರವಸೆ ಹೇಳು-ಉದ್ಧವಾ 2ಕರುಣನಿಧಿಯೆಂಬುವರು ಕಪಟನಾಟಕದರಸು |ಸರಸ ವಿರಸವ ಮಾಡಿದ ||ಸ್ಮರಿಸಿದವರನು ಕಾಯ್ವ ಬಿರುದುಳ್ಳ ಸಿರಿರಮಣ |ಮರೆದು ಮಧುರೆಯ ಸೇರಿದ ||ಪರಮಭಕ್ತರ ಪ್ರಿಯ ಪುರಂದರವಿಠಲನ |ನೆರೆಗೂಡಿಸೈ ಕೋವಿದ-ಉದ್ಧವಾ 3
--------------
ಪುರಂದರದಾಸರು
ಏಕೆಕಕುಲಾತಿಪಡುವೆ - ಎಲೆ ಮನವೆಪಲೋಕವನೆ ಸಲಹುವ ಶ್ರೀನಿವಾಸನು ನಮ್ಮ |ಸಾಕಲಾರದೆ ಬಿಡುವನೇ - ಮನವೆ ಅಪಆನೆಗಳಿಗೆಯ್ದಾರು ಮಣವಿನಾಹಾರವನು ಅಲ್ಲಿ ತಂದಿತ್ತವರದಾರೊ |ಜೇನುನೊಣ ಮೊದಲಾದ ಕ್ರಿಮಿ - ಕೀಟಗಳಿಗೆಲ್ಲ |ತಾನುಣಿಸದಲೆ ಬಿಡುವನೇ - ಮರುಳೆ 1ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನುಅಲ್ಲಿ ತಂದಿತ್ತವರದಾರೊ |ಎಲ್ಲವನು ತೊರೆದು ಅರಣ್ಯ ಸೇರಿದ್ರ್ದವರ |ಅಲ್ಲಿ ನಡಸದೆ ಬಿಡುವನೇ - ಮರುಳೆ 2ಅಡವಿಯೊಳಗೇ ಪುಟ್ಟುವಾ ಮೃಗಕುಲಕ್ಕೆಲ್ಲಒಡೆಯನಾರುಂಟು ಪೇಳೊ |ಗಿಡದಿಂದ ಗಿಡಕೆಹಾರುವ ಪಕ್ಷಿಗಳಿಗಲ್ಲಿ |ಪಡಿಯ ನಡೆಸದೆ ಬಿಡುವನೇ - ಮರುಳೆ 3ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆಮಂಡೆ ದಡ್ಡಾಯಿತಲ್ಲ |ಭಂಡ ಮನವೇ ನೀನು ಕಂಡವರಿಗೆರಗದಿರುಕೊಂಡಾಡಿ ಹರಿಯ ಭಜಿಸೋ - ಮರುಳೆ 4ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನ್ನುಬೆಂಬಿಡದೆ ಸಲುಹುತಿಹನು |ನಂಬು ಶ್ರೀ ಪುರಂದರವಿಠಲನ ಪಾದವನುನಂಬಿದರೆ ಸಲಹದಲೆ ಬಿಡುವನೇ - ಮರುಳೆ 5
--------------
ಪುರಂದರದಾಸರು
ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆಕಾಕಮಾಡದೆ ಕಾಯೊ ಸಂಗದೊಳು ಬಳಲಿದೆನು ಪಕಂದರ್ಪಬಾಧೆಯಿಂ ಮಾನಿನಿಯ ವಶನಾಗಿಮಂದಮತಿಯಿಂದ ನಾ ಮರುಳಾದೆನೋ ||ಸಂದಿತೈ ಯೌವನವು ಬುದ್ದಿ ಬಂದಿತು ಈಗಸಂದೇಹಪಡದೆ ನೀ ಕರುಣಿಸೈ ಎನ್ನ 1ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗಹಿಂಡುಮಕ್ಕಳು ಎನ್ನ ತಿನ್ನುತಿಹರು ||ಮುಂಡಮೋಚಿದೆ ನಾನು ಇನ್ನಾರು ಗತಿಯೆನಗೆಪುಂಡರೀಕಾಕ್ಷನೀ ಪಾಲಿಸೈ ಎನ್ನ2ಅಟ್ಟಮೇಲೊಲೆಯುರಿಯುವಂತೆಹರಿಎನಗೀಗಕೆಟ್ಟ ಮೇಲರಿವು ತಾ ಬಂದಿತಯ್ಯ ||ನೆಟ್ಟನೇಪುರಂದರವಿಠಲನೆ ಕೈ ಬಿಡದೆದಿಟ್ಟಿಯಲಿ ನೋಡಿ ಪರಿಪಾಲಿಸೈ ಎನ್ನ 3
--------------
ಪುರಂದರದಾಸರು
ಏನ ಮಾಡಲಿ ಶ್ರೀಹರಿ- ಇಂಥ |ಮಾನವಜನ್ಮ ನಚ್ಚಿಸಬಹುದೆ? ಪಮಾತನಾಡದೆ ಮೌನದೊಳಿದ್ದರೆ-ಮೂಕ-|ನೀತನೆಂದು ಧಿಕ್ಕರಿಸುವರು ||ಚಾತುರ್ಯದಿಂದಲಿ ಮಾತುಗಳಾಡಲು |ಈತನು ಬಲು ಬಾಯ್ಬಡಿಕನೆಂಬುವರಯ್ಯ 1ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |ಬಡಿವಾರದವನೆಂದಾಡುವರು ||ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |ನಡತೆ ಹೀನನೆಂದು ಬಲು ನಿಂದಿಸುವರಯ್ಯ 2ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |ನಿಷ್ಟೆಯೇನು ಸುಟ್ಟಿತೆಂಬರು |ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ 3ಒಲಪಿನೊಳ್ಚೆನ್ನಿಗತನವನು ಮಾಡಲು |ಬಲು ಹೆಮ್ಮೆಗಾರನೆಂದಾಡುವರು ||ಸುಲಭತನದಿ ತಾ ನಿಗರ್ವಿಯಾಗಿದ್ದರೆ |ಕಲಿಯುಗದಲಿ ಮಂದಮತಿಯೆಂಬುವರಯ್ಯ 4ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||ಧರೆಯೊಳಗಿಹ ಪರಿಯಂತರ ಸಲಹೆನ್ನ |ಕರುಣವಾರಿಧಿ ಶ್ರೀಪುರಂದರವಿಠಲ5
--------------
ಪುರಂದರದಾಸರು
ಏನಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
--------------
ಪುರಂದರದಾಸರು
ಏನಯ್ಯ ನಿನ್ನ ಸಂಗದಪರಿ - |ಮಾನಿನಿಯ ಮರುಳು ಮಾಡಿ ನೋಡಿದವಗೆ ಪಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |ಕರವ ಗಲ್ಲದೊಳಿಟ್ಟು ಕಡುಸುಯ್ವಳು ||ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |ಬರವ ಕಾಣದೆ ಕಂದಿ ಕುಂದಿ ಬಡವಾದಳೈ 1ಕಂಬನಿಯ ತುಂಬುವಳು ಕರೆವಳು ಪೆಸಗೊರ್ಂಡು |ಹಂಬಲಿಸುವಳು ಕಂಡ ಕಾಂತೆಯರೊಳು ||ಬೆಂಬಿಡದೆ ಜಡೆ ಮುಡಿಯೆ ತೊಡಿಗೆ ಬೀಸಾಡುವಳು |ಬಿಂಬವರಿತು ಪೊಗುಳುವಳು ನಿನ್ನ ಗುಣಗಣವ 2ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |ಘನತಾಪದಿಂದ ಗೋಚರವಾಗಿದೆ ||`ಅನುತಾಪದಿಂದ ಸಲೆ ಬಳಲಿದ ಮಾನಿನಿಯ |ವನಜಾಕ್ಷಪುರಂದರ ವಿಠಲ ಬಂದು ಸಂತಯಿಸೊ3
--------------
ಪುರಂದರದಾಸರು