ಒಟ್ಟು 2013 ಕಡೆಗಳಲ್ಲಿ , 111 ದಾಸರು , 1731 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ. ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ 1 ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು2 ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ 3 ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು4 ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ5 ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ6 ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ 7 ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ8 ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ9 ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ10
--------------
ಗಲಗಲಿಅವ್ವನವರು
ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಪ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಅ ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ 1 ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು ಮುಟ್ಟ ಹೇಸುವರು ಕುರುಹ ನಾರಿಯರು ನೆಂಟರಿಷ್ಟರೆ ಕಾಣರು 2 ಸತಿ ಬದ್ಧದ್ವೇಷದಿ ಬೈವಳು ಇದ್ದ ಮನುಜರ ಪಾಡೇನು ನೀ ಬಂದು ಹೊದ್ದಿದ ಮಾತ್ರದಲಿ ನಿದ್ದೆ ಹಸಿವು ಬಳಲಿಕೆ ದಟ್ಟ-ದಾರಿದ್ರ್ಯವು ಕೈಗೊಂಬುದು 3 ಒಳ್ಳೆದಾಗಿದ್ದ ಸಂಗಾತಿಯ ಸ್ನೇಹವೆಲ್ಲವನು ಬಿಡಿಸಿ ಅಲ್ಲಲ್ಲಿ ಕೊಡುವ ದಾನಿಗಳ ಮನದಿ ಪೊಕ್ಕು ಇಲ್ಲಿಲ್ಲ ಹೋಗೆನಿಸಿ ಇಲ್ಲದ ಅಪವಾದ ಭಾಳ ಕಂಟಕ-ರೋಗದಲ್ಲಿ ನೋಯಿಸಿ ಒಲ್ಲೆನೀ ಜನ್ಮವೆಂದೆನಿಸಿ ಸಾಧಿಸಿ ಕಡೆಯಲ್ಲಿ ಗುಣ ತೋರಿಸಿ4 ದೇಶದೇಶದ ರಾಯರ್ಗಳನೆಲ್ಲರನು ಪರದೇಶಿಗಳನು ಮಾಡಿದೆ ವಾಸವನೆ ಬಿಡಿಸಿ ತಿರುಗಿಸಿ ಗಾಸಿ-ಯಿಂದಲೆ ನೋಯಿಸಿ ಶೇಷಶಯನ ಸರ್ವೇಶ ದೇವೇಶನೆ ಲೇಸು ಪಾಲಿಸೊ ಎನಗೆ ದೇಶದಂತರ್ಯಾಮಿ ನೆಲೆಯಾದಿಕೇಶವತೋಷದಿ ಸಲಹೊ ಎನ್ನ 5
--------------
ಕನಕದಾಸ
ಬಹಳ ದೇಹವ ದಂಡನೆ ಮಾಡಿ ದೇಹ ಘನ ಬಳಲಿಸಿ ಅಹಿಶಯನನು ನಿನ್ನ ಬೆಂಬಲನಾಗಿಹ ಚಿಂತೆ ಮಾಡಲಿ ಬ್ಯಾಡಾ ಪ ಅರಿವರ್ಗಗಳು ಕ್ರೀಡಿಸುತಿಹ ಮನದಿ ಧರ್ಮವ ಮಾಡಲಾದೀತೆ ಪಾಪಿಗೆ ಹಿತವಾದೀತೆ 1 ದುರ್ವಿಕ್ಷಯ ಭುಂಜಿಪ ದುರುಳಗೆ ಅಸಮ ಫಲಪ್ರದ ಹರಿದಿನ ಮಾಡ್ದರೆ ನರಕ ಬಾಧೆ ಬಿಟ್ಟೀತೆ 2 ಪರವಿತ್ತವಪಹರಿಸಿ ಧರೆಯ ಪ್ರದಕ್ಷಿಣೆ ಮಾಡ್ದರೆ ಗತಿಯಾದೀತೆ ನರಸಿಂಹವಿಠ್ಠಲನ ಸ್ಮರಿಪ ಸುಜ್ಞಾನಿಗಿ ಬಹುಭಾಗ್ಯ ತಪ್ಪೀತೆ 3
--------------
ನರಸಿಂಹವಿಠಲರು
ಬಹುತೀರ್ಥ ಸಂಗಮದ ಭಾಗವತಗಂಗೆಯಲಿಬಹುಸ್ನಾನ ದೊರಕಿ ಜೀವನ್ಮುಕ್ತನಾದೆ ಪಶುಭ್ರವರ್ಣದ ಗಂಗೆ ತಾನೆ ನಾರದನಾಗೆಅಭ್ರವರ್ಣದ ಯಮುನೆ ವ್ಯಾಸನಾಗೆಇಬ್ಬರೊಂದಾಗಿ ಪ್ರವ'ಸಿ ಬಂದು ದೋಷಗಳದಬ್ಬುತಿಹ ಪುಣ್ಯ ಪ್ರಯಾಗಿಯಾಗಿರುತಿರುವ 1ಪೂರ್ವಪಶ್ಚಿಮವಾಗಿ ದಕ್ಷಿಣೋತ್ತರವಾಗಿಶರ್ವಾಗ್ನಿ ನೈಋತ್ಯವಾಯು ಮುಖದಿಪರ್ವಕಾಲಗಳೆಂದು ಪ್ರವ'ಸುವ ನದಿಯಲ್ಲಸರ್ವವ್ಯಾಪಕವಾಗಿ ತುಂಬಿ ಸೂಸುತಲಿರುವ 2ನಾರಾಯಣಾದ್ರಿಯಲಿ ಪುಟ್ಟ ಬ್ರಹ್ಮಾಂಡವನುಪೂರೈಸಿ ಪರಮಪಾವನ ಗಂಗೆಯೂಸೇರುವರೆ ತನಗೊಂದು ತೀರ್ಥಬೇಕೆಂದೆನುತಧೀರಶುಕ ಕಾವೇರಿಯಲಿ ಕೂಡಿ ನೆಲಸಿರುವ 3ಕಮಲಸಂಭವನೆಂಬ ಗೋದಾವರಿಯದೆನಿಸಿ'ಮಲಮತಿ ಸೂತ ಶೌನಕ ಸಂಗದಿಭ್ರಮನಿವಾರಣ ತುಂಗಭದ್ರೆಯೆಂದೆನಿಸುವದುರಮೆಯ ರಸನೊಲಿದವರಿಗದು ದೊರಕುತಿಹುದು 4ಈ ನದಿಯ ಕೂಡಿರುವ ತೀರ್ಥಗಳನೆಣಿಸುವರೆನಾನೆಂಬ ಕ' ಯಾರು ಶೇಷ ತೊಡಗಿಸ್ವಾನುಭವ ಸಂಸಿದ್ಧ ನಿಜಭಕ್ತರೆಂದೆನಿಪಜ್ಞಾನಿಗಳ ಮ'ಮೆಗಳ ನದಿಗಳೊಡೆ ಬೆರೆದಿರುವ 5ಶೀತಬಾಧೆಯು ಲೇಶಮಾತ್ರ'ದರೊಳಗಿಲ್ಲವಾತಾದಿ ವ್ಯಾಧಿಗಳ ಕೊಡುವುದಲ್ಲನೂತನದ ಕಾಲದೇಶಗಳ ಬಯಕೆಯದಲ್ಲಆತುಕೊಳದಿದ್ದರೂ ಪಾತಕವ ಪರಿಹರಿಪ 6ಉತ್ತಮ ಪರೀಕ್ಷಿತನೇನು ಮೈತ್ರೇಯ 'ದುರರುಸತ್ಯಸಂಧನು ಕಪಿಲ ದೇವಹೂತಿಮತ್ತೆ ಉತ್ತಾನಪಾದನು ಧ್ರುವನು ಪೃಥು ಚಕ್ರವರ್ತಿಯೆಂಬೀ ತೀರ್ಥವ ತರಿಸಿಕೊಂಡಿರುವ 7ಪುಣ್ಯಾತ್ಮ ಪ್ರಾಚೀನ ಬರ್'ಯಾತ್ಮಜರಾದಸನ್ಮನದ ಮ'ಮರವರೀರೈವರುಇನ್ನಿವಳ ಗರ್ಭದಲಿ ಬಂದ ದಕ್ಷನು ತಾನುಕನ್ನೆಯರನರುವತ್ತ ಪಡೆದ ತೀರ್ಥಗಳಿರುವ 8ಅಪರ ಸೂರ್ಯನ ತೆರದ ಪ್ರಿಯವ್ರತನ ಸಂತತಿಯುತಪದಲನುಪಮ ವೃಷಭದೇವನುದಿಸೀಗುಪಿತ ತೇಜೋಮೂರ್ತಿ ಭರತನವತರಿಸಿರಲುಉಪಮಾನ'ಲ್ಲದೀ ತೀರ್ಥಗಳು ಬೆರೆದಿರುವ 9ದ್ವೀಪವೇಳರ ಸುತ್ತ ವ್ಯಾಪಿಸಿದ ವನಧಿಗಳುದೀಪಿಸುವ ಸೂರ್ಯಾದಿ ಚಕ್ರಗತಿಯೂಈ ಪರಿಯ ತೀರ್ಥಗಳು ಭೂ'ು ಸ್ವರ್ಗಾದಿಗಳವ್ಯಾಪಿಸಿಹ ಮ'ಮ ನದಿಗಳು ಒಂದುಕೂಡಿರುವ 10ನದಿಗಳಿಗೆ ನಿಜರೂಪವಾದ ನಾಮದ ಮ'ಮೆಒದಗಿಯಜ'ುಳನಘವನೊದೆದು ನಿಜದೀಹುದುಗಿಸಿದ ವರ್ಣನೆಯ ತಂಪು ಬಹುರುಚಿಕರವುಸದಮಲಾನಂದ ನಿಧಿಯಾಗಿ ಹುದುಗಿರುತಿರುವ 11ವೃತ್ರ ಚಾರಿತ್ರ ನದಿ ಮತ್ತೀತನಾರೆನಲು ಚಿತ್ರಕೇತುವು ಚಕ್ರವರ್ತಿಯಾಗಿಪುತ್ರ ಸಂತತಿುಂದ ಪ್ರಖ್ಯಾತ 'ಮಗಿರಿಯಪುತ್ರಿಶಾಪವು ಬಂದ ಸಿದ್ಧ ನದಿ ಬೆರೆದಿರುವ 12ನರಹರಿಯ ಚರಣಾರ'ಂದ ಮಕರಂದದಲಿಎರಗಿ ತುಂಬಿಯ ತೆರದಿ ಭಜಿಸುತಿರುವನೆರೆ ಭಕ್ತಪ್ರಹ್ಲಾದ ಗಜರಾಜ ಮನುಚರಿತಪರಮ ಪುಣ್ಯೋದಯದ ನದಿಗಳೊಂದಾಗಿರುವ 13ಕ್ಷೀರಸಾಗರ ಮಥನ ಕೂರ್ಮನಾದನು ಹರಿಯುಶ್ರೀರಮಣಿ ಸುಧೆಯುದಿಸಿದತಿ ಮ'ಮೆಯೂಶ್ರೀರಮಣ ವಟುವಾಗಿ ಬಲಿಯ ಸಲ'ದ ಬಗೆಯುಸಾರತರ ನದಿಗಳಿವು ಸೇರಿಕೊಂಡಿಹವಾಗಿ 14ಉಷ್ಣ 'ಮಕರರಂಶಸಂಭವ ಮಹಾತ್ಮರನುವ್ಣೃ ಸಂತತ್ಯುದ್ಧವಾದಿಗಳನೂ'ಷ್ಣುವಾದರು ಗಣಿಸಲಾರನೀ ತೀರ್ಥಗಳುಕೃಷ್ಣಸಾಗರದಲ್ಲಿ ಸೇರಿ ಪೂರೈಸಿರುವ 15ಯದುಕುಲಾಂಬುಧಿಯಲ್ಲಿ ಮದನಪಿತ ತಾ ಜನಿಸಿಮುದದಿಂದ ಗೋಕುಲದಿ ಬೆಳೆದು ನಲಿದುಚದುರಿಂದ ಗೋವು ಗೋವತ್ಸಪರನೊಡಗೂಡಿಸದದು ದೈತ್ಯರ ನಂದಗಾನಂದ'ತ್ತಾ 16ಬಾಲಕರ ಭೋಜನದ ನೆವದಿ ಬ್ರಹ್ಮನಿಗೊಲಿದುಕಾಳೀಯ ಫಣಗಣಾಗ್ರದಿ ನರ್ತಿಸಿಜ್ವಾಲೆಯನು ನೆರೆನುಂಗಿ ಗೋಕುಲದವರ ಸಲ'ಬಾಲಲೀಲೆಯ ಬಹಳ ಪುಣ್ಯತೀರ್ಥಗಳಿರುವ17ಗೋವಕ್ಕಳೊಡಗೂಡಿ ವನಮಧ್ಯದಲಿ ಚರಿಸಿದೇವತಾ ಯಜ್ಞ ಪತ್ನಿಯರಿಗೊಲಿದೂಗೋವರ್ಧನೋದ್ಧರಣ ಗೋಪಾಂಗನಾ ಜನದಭಾವನೆಯ ಪೂರ್ತಿಗೊಳಿಸಿದ ತೀರ್ಥ'ರುವಾ 18ವರಧನು'ನುದಯ ದರ್ಶನನೆವದಿ ಮಧುರೆಯನುನೆರೆಪೊಕ್ಕು ಕುಬ್ಜೆಗತಿಶಯದ ರೂಪಕರೆದಿತ್ತು ಕುಸುಮವನು ಕೊಟ್ಟವನಿಗೊಲಿದಾಗಪಿರಿದಾಗಿ ಕಂಸನಿಗೆ ತಾನೆ ಮುಕ್ತಿಯ ಕೊಟ್ಟು 19ದ್ವಾರಕಾ ನಿರ್ಮಾಣ ದುರುಳ ಜನಸಂಹರಣನಾರಿಯರ ನೆಂಟನೊಡಗೂಡಿ ಬಳಿಕಾಪಾರಿಜಾತವ ಕಂಡು ಈರೆಂಟು ಸಾಸಿರದನೀರೆಯರ ಸಂಸಾರ ಸಂಪತ್ತಿನತಿಶಯದ20ಮಾಸಿದರುವೆಯ ಭಕ್ತನವಲಕ್ಕಿಯನು ಮೆದ್ದುಲೇಸಾದ ಸಂಪತ್ತನೊಳಗೆ ಕೊಟ್ಟೂ'ುೀಸಲಳಿಯದ ಮ'ಮ ಭಕ್ತಜನಸಂಸಾರಿವಾಸುದೇವನ ಮ'ಮೆ ಜಲನಿಧಿಯ ಕೂಡಿರುವ 21ತತ್ವಸಾರವನು ನವಯೋಗಿಗಳು ನಿ'ುಗೊರೆದುಮತ್ತೆ ನಾರದನು ವಸುದೇವನೆಡೆಗೆಚಿತ್ತಜನ ಜನಕನಭಿಮತದಿಂದವತರಿಸಿಚಿತ್ತವನು ವಸ್ತು'ನೊಳೈಕ್ಯವನು ಮಾಡಿಸಿದ 22ವೇದಾಂತ ನಿಧಿಯಾದ ಉದ್ಧವಗೆ ತತ್ವವನುಮಾಧವನೆ ತಾನೊರೆದು ಧರಣಿಯೊಳಗೆವೇದಾಂತ 'ಸ್ತರಕೆ ನಿಲಿಸಿ ನಿಜಪಾದುಕೆಯವೇದವೇದ್ಯನು ಕೊಟ್ಟು ನಿಜಜನಕೆ ನಿಧಿಯಾದ23ಕಾಲಗತಿಗಳನೊರೆದು ಮತ್ತೆ ಭೂಲೋಕವನುಪಾಲಿಸುವ ದೊರೆಗಳಭಿಮತದ ಗತಿಯೂಮೇಲಾಗಿ ಕಲಿಯುಗದ ಗತಿ'ಸ್ತರವನೆಲ್ಲಲೋಲನೃಪಗೊಲ'ಂದ ಪೇಳ್ದ 'ವರಗಳಿರುವ 24ಪರಮಾತ್ಮನೊಡನಾಡಿ ಪರಮ ಪಾವನರಾಗಿಮೆರೆವ ಗೋಪೀ ರತ್ನ ಮಾಲೆಯೊಡನೆನೆರೆಶಿಖಾಮಣಿಯೆನಿಸಿ ತಿರುಪತಿಯ ವೆಂಕಟನುಧರಣಿಯೊಳು ಸಕಲರನು ನೆರೆ ಸಲಹುತಿಹನೂ25
--------------
ತಿಮ್ಮಪ್ಪದಾಸರು
ಬಾ ಗೋಪತಿ ಗೋಪನೆ ಮನ್ಮನಕೆ | ತಡಮಾಡುವುದ್ಯಾಕೆಭೋಗಿ ಮದಾಪಹ | ಆಗಮ ವೇದ್ಯನೆ | ನಮಿಸುವೆ ತವಪದಕೆ ಪ ಯೋಗಿ ವರೇಣ್ಯಾ ಅ.ಪ. ನೀರಜ ಸಂಭವಮುರಾರಿಗಳಿಂದಲಿ ಆರಾಧಿಪ ಪದ 1 ನವನೀತ ಚೋರ | ಪಾವನ ಚರಿತ | ಸ್ವರತ ಅನವರತಭುವನೈಕ ವಂದ್ಯ ವಿಶೋಕದಾತ | ಸಮಅಧಿಕ ರಹಿತಅವನಿಜೆ ವಲ್ಲಭ | ತ್ರಿವಿಧರಿ ಗೋಸುಗವಿವಿಧ ರೂಪಂಗಳ | ತಾಳುವ ಖ್ಯಾತ 2 ಹಂಸ ಡಿಬಿಕ ಶಕಟಾರಿ ಮುರವೈರಿ | ಮುಷ್ಠಿಕಮಲ್ಲಾರಿಕಂಸಾರಿ ವತ್ಸಾರಿ ಪರಮ ಉದಾರಿ | ಬಾಬಾರೆಲೊ ಶೌರಿಶಿಂಶುಮಾರ ಸುರ ಸಂಶಯ ಹರಿಸಲು |ಸ್ವಾಂಶದಿ ಜನಿಸುತ ಭಕ್ತರುದ್ಧರಿಸಲು 3 ಕರುಣ ವನದಿ ಶರಣಾಗತ ಪರಿಪಾಲ || ಶಿರಹರ ಶಿಶುಪಾಲತರಳ ದೃವಾದಿಯ ಪೊರೆವುದು ತವಶೀಲ | ಪಾಲಿಸು ಶ್ರೀಲೋಲಕರಣ ನಿಯಾಮಕ ವರ್ಣ ವೇದ್ಯತವಚರಣ ಬಯಸುವೆ ಹೃದಯ ಸದನಕೇ 4 ತೋಂಡ ಬೋವ ಮಾಯಾ ಪಟಲ 5
--------------
ಗುರುಗೋವಿಂದವಿಠಲರು
ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ ಬೇಗ ಬಾರೆಂದು ಭಕುತರು ಕರೆಯಲು ಹರಿ ಪ. ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ ಶೇಷಶಯನ ಎನ್ನಪ್ಪನೆ ಬಾ 1 ಮತ್ಸ್ಯನಾಗಿ ಜಲದೊಳಾಡಿದವನೆ ಬಾ ಕಚ್ಛಪವತಾರವ ಮಾಳ್ದನೆ ಬಾ 2 ಧsÀರೆಗಾಗಿ ಜಲದೊಳಗಿಳಿದನೆ ಬಾ ಹಿರಣ್ಯಕನುದರವ ಸೀಳ್ದನೆ ಬಾ 3 ಶಕ್ರನ ಪೊರೆದ ಶ್ರೀ ವಾಮನನೆ ಬಾ ವಕ್ರನೃಪಾಲಕುಲಶಮನನೆ ಬಾ 4 ರಾವಣಾಂತಕ ರಘುರಾಮನೆ ಬಾ ದೇವಕಿ ನಿಜಸುತ ಪ್ರೇಮನೆ ಬಾ 5 ಸತಿಯರ ವ್ರತವ ಕೆಡಿಸಿದನೆ ಬಾ ಚತುರ ಕಲಿಯನೋಡಿಸಿದನೆ ಬಾ 6 ಹಯವದನಾಶ್ರಿತ ಶರಣನೆ ಬಾ ಪ್ರಿಯಸುರ ಸೇವಿತ ಚರಣನೆ ಬಾ 7
--------------
ವಾದಿರಾಜ
ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ ಪ ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ ಅ.ಪ. ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾ- ಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ 1 ಜಾಂಬೂನಾದಾಂಬರ ಸಾಂಬಜನಕ-ನೀ ಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿ ಡಂಬನ ತೋರಿದ ಮಹಿಮ ಕಾಂಬುವೆ ನಿನ್ನ ಚರಣಾಂಬುಜ ಮನದೊಳು ಜಾಂಬುವಂತನ ಪರಿಪಾಲಾ ವಿ- ಶ್ವಂಭರಂಬರಗ್ಗಣಿಯ ಪಡೆದ ವೃ- ತ್ತುಂಬರೇಶಾಂಬುಧಿ ಶಾಯಿ 2 ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ ಕಾಳೆ ಹೆಗ್ಗಾಳೆ ತಮ್ಮಟಿ ನಿ- ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ ಕಂಬುಡಿಕ್ಕಿ ವಾದ್ಯ ಸೂಳೈಸುತಲಿರೆ ಭಾಗವತರು ಸಂ ಮೇಳದಿ ಕುಣಿದೊಲಿದಾಡೆ ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ ಢಾಲುಗಳು ಒಪ್ಪಿರಲು3 ಹಂಸವಾಹನ ಕ್ರತುಧ್ವಂಸಿ ಸುಮನಸೋ ತ್ತಂಸ ಕೃಶಾನು ಪಾಪಿಗಳ ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ ಕೌಂಶಿಕಾಪತಿಯು ಧನವ ಅಂಶಮಾಲಿ ಸೋಮಕಂಶಿಕಮುನಿ ಪರಮ ಹಂಸರು ಅಲ್ಲಲ್ಲಿ ನಿಂದು ಸಂಶಯ ಮಾಡದೆ ಸಮ್ಮೊಗರಾಗಿಹರು ಕಂಸಾರಿ ತ್ರಿಗುಣಾತೀಶ 4 ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು 5 ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು ಬಂದು ಕೆಣಕೆ ನಗುತ ಮಹಾಲೀಲೆ ಯಿಂದಲಿ ನೀನಾ ಖಳನ ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ ಅಂದವಾಗಿಹುದೇನೊ ದೇವ6 ಬಂಗಾರ ರಥದೊಳು ಶೃಂಗಾರವಾದ ಶ್ರೀ ಮಂಗಳಾಂಗ ಕಳಿಂಗ ಭಂಗ ನರಸಿಂಗÀ ಅಂಗಜ ಜನಕ ಸಾ- ರಥಾಂಗ ಪಾಣಿ ವಿಹಂಗ ಪ್ಲ- ಸಂಗೀತ ಲೋಲ ಗೋಪಾಂಗನೆಯರ ಅಂತ- ರಂಗ ಸಂತಾಪ ವಿದೂರ 7 ತಡಮಾಡಲಾಗದೊ ಪೊಡವೀಶ ನೀನಿಂದು ತಡೆವರಿನ್ನಾರೈಯ ವಡೆಯ ವೇದವೇದ್ಯ ಕಡೆಗಣ್ಣಿನಿಂದ ನೋಡಿದಲೆ ನಡೆವುದು ನುಡಿವುದು ಅಡಿಗಡಿಗೆ ನೀನು ಬಿಡದೆ ಒಳಗೆ ಹೊರಗಿದ್ದು ಸಡಗರ ದೈವವೆ ನುಡಿಯ ಲಾಲಿಸುವುದು ವಡನೊಡನೆ ಪಾಲಿಸುತ್ತ 8 ಹತ್ತವತಾರದ ಹರಿಯೆ ಘನಸಿರಿಯೆ ಮತ್ತೊಬ್ಬರನು ಹೀಗೆ ಕರೆಯೆ ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎ- ನ್ಹತ್ತಿಲಿ ಆಡುವ ಮರಿಯೆ ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ ಎತ್ತನೋಡಲು ನಿನಗೆ ಸರಿಯೆ ಅತ್ತಿತ್ತ ಪೋಗದೆ ಇತ್ತ ಬಾರೈಯ ಎ- ನ್ಹತ್ತಿಲಿ ವೆಂಕಟದೊರೆಯ 9
--------------
ವಿಜಯದಾಸ
ಬಾ ಹರಿ ಭಕುತರ ಭಯ ಪರಿಹರಿಸುತ ಸರಸಿಜ ಸದನೆಯರೊಡಗೂಡಿ ನಲಿಯುತ ಪ ನೀರೊಳು ಮುಳುಗಿ ಮೀನನೆಂದೆನಿಸಿ ಭಾರವ ಪೊತ್ತಿಹ ಕೂರ್ಮನೆ ಜವದಿ 1 ಕೋರೆಗಳಿಂದ ಧಾರುಣಿತಂದ ಕ್ರೂರನುದರ ಕರುಳ್ಹಾರವೆ ಚಂದ 2 ಮೂರಡಿ ಭೂಮಿಯ ಬೇಡುತ ಬಂದೆ ನಾಡೊಳು ಕೊಡಲಿಯ ಪಿಡಿಯುತ ನಿಂದೆ3 ಸೇತುವೆ ಕಟ್ಟುತ ಸೀತೆಯ ತಂದೆ ಪಾತಕಿ ಕಂಸನ ನಾಶವ ಗೈದೆ4 ಬುದ್ಧನೆಂದೆನಿಸಿದೆ ಶುದ್ಧಮೂರುತಿಯ ಮುದ್ದು ತೇಜಿಯ ನೇರುತ ಮೆರೆದವನೆ 5 ಬಾ ಮುರವೈರಿ ಬಾ ಬಾರೊ ಶೌರಿ ಭಾಸುರ ವಂದ್ಯ ಬಾ ಮುದದಿಂದ6 ಪಾದ ದೃಢದಿ ಭಜಿಪೆನೈ ಕಡಲ ಶಯನ ಕಮಲನಾಭ ವಿಠ್ಠಲನೆ 7
--------------
ನಿಡಗುರುಕಿ ಜೀವೂಬಾಯಿ
ಬಾಗಿ ಬೇಡುವೆ ಪಿಡಿಯೊ ಬೇಗ ಕೈಯಾ ಭಾಗವತ ಜನಪ್ರೀಯ ಭಾಗಣ್ಣದಾಸಾರ್ಯ ಪ ದ್ವಿಜ ಕುಲಾಬ್ಧಿಗೆ ಪೂರ್ಣ | ದ್ವಿಜರಾಜನೆಂದೆನಿಪ ವಿಜಯವಿಠಲದಾಸರೊಲುಮೆ ಪಾತ್ರ || ನಿಜಮನದಿ ನಿತ್ಯದಲಿ | ಭುಜಗಶಯನನಪಾದ ಭಜಿಪ ಭಾಗ್ಯದಿನಲಿವ | ಸುಜನರೊಳಿಡು ಎಂದು 1 ನೀನೇವೆ ಗತಿಯೆಂದ | ದೀನರಿಗೆ ನಾನೆಂಬ ಹೀನಮತಿ ಕಳೆದು ಪವಮಾನ ಪಿತನ | ಧ್ಯಾನಗೈಯ್ಯುವ ದಿವ್ಯ ಜ್ಞಾನ ಮಾರ್ಗವ ತೋರಿ | ಸಾನುರಾಗದಿ ಪೊರೆವ | ದಾನಿ ದಯಾವಾರಿಧಿಯೆ 2 ಮಂದಜನ ಸಂದೋಹ | ಮಂದಾರ ತರುವಿಜಿತ || ಕಂದರ್ಪ ಕಾರುಣ್ಯಸಿಂಧು ಬಂಧೋ || ಕಂದನಂದರಿದೆನ್ನ | ಕುಂದು ಎಣಿಸದೆ ಹೃದಯ ಮಂದಿರದಿ ಶ್ರೀ ಶಾಮಸುಂದರನ ತೋರೆಂದು 3
--------------
ಶಾಮಸುಂದರ ವಿಠಲ
ಬಾಗಿ ಭಜಿಸಿರೋ | ಭಾಗಣ್ಣ ದಾಸರನಾ | ನಮಿಪರ ಬೀಷ್ಟದನಾ ಪ ಭೋಗಿ ಭೂಷಣ ಸುತನಾ | ಮನ್ಮಥ ಸದೃಶನನಾ ಅ.ಪ. ಮುರಹರ ನಾಮಕನರಸಿಯುದರದಲ್ಲಿ | ಜನುಮತಾಳಿ ಅಲ್ಲೀಸುರಪುರ ವೈದಲು ತನ್ನ ಪಿತನು ಮುಂದೇ | ಸಂಕಾರ ಪುರಸೇರ್ದೇ | ವರಚಿಂತಲ ವೇಲಿಲಿ ಧ್ಯಾನಕಾಗಿ ನಿಂದು | ಗಾಯಿತ್ರಿ ಜಪಿಸು ತಂದು ವರಮಾರುತಿ ಗುಡಿಯೊಳು ನೆಲಿಸುತ್ತಾ | ವರಪಡೆದೆಯೊ ಜಪಿಸುತ್ತಾ 1 ತ್ರಿಲಿಂಗಪುರಕೇ ಕವಿಯೈತರಲೂ | ಪಂಡಿತರನು ಗೆಲಲೂಬಲುಚಿಂತಿಸಿ ಜನಸಭೆಯ ಸೇರಿ ಆಗ | ತೀರ್ಮಾನಿಸಿ ವೇಗ |ಕಳುಹಿದರವನ ಭಾಗಣ್ಣನ ಬಳಿಗಾಗೀ | ಬಲವನು ತೋರೆನಲಾಗೀ ನಿಲಲಾರದೆ ತೆರಳಿದ ಭೀತಿಯಲೀ | ವರಕವಿ ಮೆರೆದನು ಕೀರ್ತಿಯಲೀ2 ಪರಿ ನಿತ್ಯ ಶ್ರೀ ವೆಂಕಟಕೃಷ್ಣನ ಪಾಡುತ್ತಾ | ನರ್ತನ ಗೈಯ್ಯುತ್ತಾ ಸುತ್ತಿ ಬರುವ ಜನರ ದೃಷ್ಠಾರ್ಥಾ | ಪೇಳುತ ಗಳಿಸಿದೆ ಅರ್ಥಾ 3 ತಿಮ್ಮಣ್ಣ ದಾಸಾರ್ಯರ ಬಳಿಯಲೀ | ಆದವಾನಿಯಲ್ಲೀನೆಮ್ಮದಿಲಿದ್ದಲ್ಲಿಂದಲಿ ತೆರಳಿ | ಕಾಶೀಶನ ಬಳೀಕ್ರಮ್ಮಿಸಿ ದಿನ ಗುರು ಸೇವೆಯಲ್ಲಿ ಬಹಳಾ | ಮೆಚ್ಚಿಸಿ ಗುರುಗಳ | ಹಮ್ಮಿನ ವಿಜಯರಿಂದುಪದೇಶಾ | ಗೋಪಾಲ ವಿಠ್ಠಲದಾಸ 4 ವೆಂಕಟರಾಮಗೆ ರಾತ್ರಿಕಾಲದಲ್ಲೀ | ಆಘ್ರ್ಯವ ಕೊಡುವಲ್ಲೀ ಪಂಕಜಮಿತ್ರನ ತೋರುತಲವರೀಗೆ | ಸಂಶಯ ಕಳೆದವಗೆ | ವೆಂಕಟೇಶನೊಳ್ ಭಕುತಿ ಪುಟ್ಟುವಂತೆ | ಸೇವೆ ವಿಧಿಸಿ ಅಂತೇ ಪಂಕಜನಾಭನ ಕೀರ್ತನಾದಿಗಳನೂ | ಮಾಡಿ ಕಳೆದ ದಿನಗಳನೂ 5 ವೆಂಕಟೇಶನ ಪರೋಕ್ಷಿ ದಾಸರೆಂದು | ಪೇಳೆ ಜನರು ಅಂದು ವೆಂಕಟ ನರಸಿಂಹಾಚಾರ್ಯಾ | ದಾಸರೊಳು ಮಾತ್ಸರ್ಯಾ | ಶಂಕೆಪಟ್ಟು ಭಜನೆಯೊಳಿರುವಂದೂ | ಮುಂದಿನ ಪೀಠದಲೊಂದೂ ಲಂಕೆಯ ಪುರವನು ದಹಿಸಿದನಾ | ಕಂಡರು ಕೋಡಗನಾ 6 ವಾಸುದೇವ ವಿಠಲನ್ನಾ | ಕಾಣುತಲಿ ಮುನ್ನಾ ಅಂಕಿತ ನಾಮದಿ ಪದಪದ್ಯಾ | ರಚಿಸಿ ಮೆರೆದ ನಿರವದ್ಯಾ7 ರೋಗದಿ ಶ್ರೀನಿವಾಸಾಚಾರ್ಯಾ | ಬರಲಾಗ ದಾಸಾರ್ಯ ಜಾಗ ಗುಡಿಯಲಿ ಶುದ್ಧಿ ಮಾಡುತಿರಲು | ಕೇಳಿ ಗೃಹಕೆ ಹೋಗಲು | ವೇಗದಿ ಮಂತ್ರಿತ ರೊಟ್ಟಿ ತಿಂದು ಇನ್ನ | ಕಳೆದ ರೋಗವನ್ನ ನಾಗಶಯನ ಶ್ರೀ ಜಗನ್ನಾಥ ವಿಠಲನ್ನಾ | ತೋರ್ಯರ್ಧಾಯು ಇತ್ತವನ್ನಾ 8 ಮುದದಲಿ ನಿಜಜನರನು ಪೊರೆಯೇ | ಶಾಸ್ತ್ರರ್ಥವ ನೊರೆಯೆ ಪದ ಸುಳಾದಿಯನೆ ಬಲುರಚಿಸೀ | ಭಕುತಿ ಮಾರ್ಗ ಬೆಸಸೀ | ಸುಧೆಸಮವೆನೆ ಹರಿಕಥೆಸಾರ | ರಚಿಸಿ ಜನೋದ್ಧಾರ ಮುದಮುನಿ ಮತಗ್ರಂಥಗಳೊರೆದೇ | ಸಚ್ಛಾಸ್ತ್ರಪೊರೆದೇ 9 ಹತ್ತೆಂಟು ಒಂದು ಮೊಗದ ರೂಪ | ಶ್ರೀ ವಿಶ್ವರೂಪನಿತ್ಯ ಚಿಂತಿಪ ತನ್ನ ಬಿಂಬರೂಪ | ಅಂಶದಿಹನು ಗಣಪಚಿತ್ರಿಸಿರುವ ಚಕ್ರಾಬ್ಜ ವಲಯವನ್ನ | ಧೇನಿಸಿ ವಿಜಯರನ್ನಕೃತ್ಯ ಪೇಳಲೊಶವೆ ಅಪರೋಕ್ಷಿಗಳ | ಮಂದನು ನಾ ಬಹಳ 10 ಚಿತ್ರಮಾರ್ಗದಿ ಭ್ರಾತೃವರ್ಗವನ್ನ | ದೂರಕಳಿಸಿ ಮುನ್ನಚಿತ್ರಭಾನು ಸಂವತ್ಸರದಲ್ಲಿ | ದಶಮಾಸಾಷ್ಟಮಿಲೀ |ಚಿಂತಿಸುತ ಯೋಗಮಾರ್ಗದಲ್ಲಿ | ದಹಿಸಿ ದೇಹವಲ್ಲೀ |ಚಿತ್ರ ಚರಿತ ಗುರುಗೋವಿಂದ ವಿಠ್ಠಲನಾ | ಪದಕಮಲವ ಸೇರಿದನ 11
--------------
ಗುರುಗೋವಿಂದವಿಠಲರು
ಬಾಗಿಲ ತೆಗೆಯವ್ವಾ ಲಕ್ಷ್ಮೀದೇವಿ ಬಾಗಿಲ ತೆಗೆಯವ್ವಾ ಪ ಬಾಗಿಲ ತೆಗೆಯವ್ವಾ ಸಾಗಿ ಬಂದಿಹನಯ್ಯಾ ಭೋಗಿ ಭೂಷಣ ಪ್ರಿಯ ಕೇಶವನ ದಾಸಾ ಅ.ಪ. ಸಂಸಾರ ಜಾಲದಲೀ ಸಿಲುಕಿ ಬೆಂದೇ ಸಂಸಾರ ಮಾಯದಲೀ ಹಿಂಸೆ ಮಾಡಿದವಯ್ಯಾ ಐದಾರುರಿಪುಗಳು ಸಂಶಯ ಪಡದೆ ಬಂದೇ ಶರಣೆಂದೇ 1 ಭವದೊಳುರಳಿ ಬಿದ್ದೆನೋ ಪ್ರಾಣಾಂತಕ ಸವೆದು ಕರಗಿ ಬೆಂದೆನೋ ಯುವತಿಯರೊಡಗೂಢಿ ಇಹವೆನ್ನೆ ನೆರೆನಂಬಿ ವಿವಿಧ ಕಷ್ಟವ ಪೊಂದಿ ಬಂದೇ ಶರಣೆಂದೇ 2 ಹಲವು ಜನ್ಮಗಳಿಂದ ನೋಡಲು ಬಂದೆ ಹಲವು ರೀತಿಗಳಿಂದ ನಳಿನ ನಾಭನ ದಿವ್ಯ ರೂಪವ ನೋಡುವೆ ನಳಿನಾಕ್ಷಿ ತಾಯ ಕೇಶವನ ಸೇರುವನು 3
--------------
ಕರ್ಕಿ ಕೇಶವದಾಸ
ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ ಭೋಗ ನರಸಿಂಹಸ್ವಾಮಿ ಪ. ನಾಗಶಯನನೆ ದೇವ ಕರಿಗಿರಿ ನಿಲಯ ಹರಿ ಯೋಗಿ ಶ್ರೀಗುರು ಹೃದಯ ನಿಲಯ ಅ.ಪ. ಸಿರಿಯನ್ನೆ ತೊಡೆಯ ಮೇಲೆರಿಸಿಕೊಂಡು ನಗುತ ಪರಿಪರೀ ಸೇವೆಯನು ಭಕ್ತರಿಂ ಕೊಳುತ ಪರಮಾತ್ಮ ಪಂಚಾಮೃತದ ಅಭಿಷೇಕವನು ಎರೆಯುತಿರೆ ಕಂಡು ನಾ ಹರುಷಪಟ್ಟೆನೊ ಸ್ವಾಮಿ 1 ಸುರನದಿಯ ಜಲ ತಂದು ನಿನಗಭಿಷೇಕವನೆ ಎರೆದು ಪರಿಪರಿಯ ಪೂಜೆ ಅಲಂಕಾರವನೆ ಮಾಡಿ ತರತರದ ಷಡ್ರಸವ ಭೋಜನವಗೈಸುತಲಿ ವರ ಮಂಗಳಾರತಿಯನೆತ್ತಿದುದ ಕಂಡೆ 2 ಘನ್ನ ಮಹಿಮೆನೆ ಸ್ವಾಮಿ ಎನ್ನ ಬಿನ್ನಪ ಕೇಳಿ ಮನ್ನಿಸಿ ದರುಶನವ ಇನ್ನು ಕರುಣಿಸಿದೆ ನಿನ್ನ ಸಮರಿನ್ಯಾರೊ ಪನ್ನಗಶಯನನೆ ಧನ್ಯರೋ ನಿನ್ನ ಪದವ ನಂಬಿದವರು3 ಶಾಂತರೂಪವ ಧರಿಸಿ ಶಾಂತ ಮೂರುತಿ ಎನಿಸಿ ಅಂತರಂಗದಿ ನಿನ್ನ ಧ್ಯಾನಿಸುವರ ಸಂತೋಷಪಡಿಸುತಲಿ ಕಾಯ್ವ ಕಮಲಾಕಾಂತ ಅಂತರಂಗವ ತಿಳಿದು ಸಂತೈಸೊ ಎನ್ನ 4 ಪಾಪಿ ದೈತ್ಯನ ಕೊಂದು ಕೋಪಿಸದೆ ಭಕ್ತನೊಳು ಕಾಪಾಡಿದೆಯೊ ಪರಮಪ್ರೇಮದಿಂದ ಗೋಪಾಲಕೃಷ್ಣವಿಠ್ಠಲನೆ ಅದರಂದದಲಿ ಕಾಪಾಡೊ ಭಕ್ತರನು ಹೃದಯದಲಿ ನೆಲಸಿ 5
--------------
ಅಂಬಾಬಾಯಿ
ಬಾಗೀನಮಿಪೆ ಬೇಗಬಾರೋ ಶ್ರೀ ನರಹರಿಯೇ ಪ ಭಾಗವತರು ನಿನ್ನ ಕೂಗಿ ಕರೆವರಯ್ಯ ಅ.ಪ ನಾಗಶಯನೆ ನಿನ್ನ ನಾಗರಾಜನು ಸ್ತುತಿಸೆ ಬೇಗಸಲಹಿದಿ ಬಂದು ನಾಗಾರಿವಾಹನ 1 ಸ್ತಂಭದಿಂದಲಿ ಬಂದು ಡಿಂಭಗೊಲಿದವನೆಂದು ನಂಬಿದ ಭಕುತರ ಹಂಬಲ ಪೂರ್ತಿಸಲು2 ಕಾರ್ಪರ ಋಷಿ ತಪಕೆ ಒಪ್ಪಿ ಭುವಿಯೊಳ್ ಬಂದು ಪಿಪ್ಪಲ ತರುವಿನೊಳ್ ಇಪ್ಪ 'ಶ್ರೀನರಹರಿಯೇ' 3
--------------
ಕಾರ್ಪರ ನರಹರಿದಾಸರು
ಬಾದರಾಯಣರು ಬಾರೋ ಬೇಗನೆ ಬಾದರಾಯಣ ನಿನ್ನಸಾರುವೆ ಸಂತತ ಪ ಗ್ರಂಥಗಳನು ತೋರಿಸು ತವ ಸುಸ್ಮಿತ ವದನದೇಹಗಾರದೊಳಗೆ ತಪ್ಪಿಸಭಿಮಾನ ಅ.ಪ. ಬಾದರಿ ಸುಖ ವಲಜೆ ಮುನಿತವ ಪೂರ್ಣ-ಬೋಧ ವೈಶಂಪಾಯನ ಮುನಿಸಾಧು ಸಂಸೇವಿತ ಪದಾಂಭೋಜಿನೀ ಯೆಮಗ-ಗಾಧ ಮಹಿಮೆ ತೋರಿಸೋ 1 ವೃಂದ ಚಕೂತ ಮುನಿಗಳಿಗೆ ಸುಖಸಂದೋಹದಾರ್ಥ ಪೇಳುತಿರಲುಬಂದ ಸಂಶಯ ಹರಿಸುತ ಬೇಗ ಮಹಾ-ನಂದ ನೀಡಿದಿ ಕೇಳಿದವರಿಗೆ 2 ಸತ್ಯವತಿಯ ಸುಕುಮಾರನೆಧಾತ್ರಿಯೊಳಗೆ ಪುಣ್ಯಚರಿತನೆಸುತ್ತಮುತ್ತಲೂ ಶೇಷಶಯ್ಯನೆ ಎನ್ನನೇತ್ರಕ್ಕೆ ಪೊಳಿ ಇಂದಿರೇಶನೆ 3
--------------
ಇಂದಿರೇಶರು
ಬಾರದೇನೆಲೋ ಕರುಣಿ ನಿನಗೆ ಅ ಪಾರಮಹಿಮ ಸಾರಸಾಕ್ಷ ಪ ದುರಿತನಾಶ ಬಾ ಸರ್ವೇಶ ಸ್ಮರಿಪಜನವಿವಾಸ ಈಶ ಕರುಣವಿಟ್ಟು ಪೊರೆ ಪ್ರಕಾಶ 1 ಜಯವ ನೀಡೋ ಜವದಿ ಮನಕೆ ಭಯನಿವಾರಣ ಕರುಣಾಭರಣ ದಯದಿ ನೋವ ಗೈ ನಿವಾರಣ2 ಬೇಗೀ ಬಂಧನ ನೀಗಿಸಭವ ನಾಗಶಯನ ಶ್ರೀರಾಮ ಸ್ವಾಮಿ ಬಾಗಿದೆನು ನಿನ್ನಡಿಯ ನಂಬಿ 3
--------------
ರಾಮದಾಸರು