ಒಟ್ಟು 7149 ಕಡೆಗಳಲ್ಲಿ , 128 ದಾಸರು , 3568 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ ಪ ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1 ಸುರಪನ ಗರ್ವವ ಹರಣವ ಮಾಡಿ ನೀ ವರವಿತ್ತೆ ಕಾಳಿಂಗ ಉರಗನಿಗೆ ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2 ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ ಮರೆಯೋದು ಯನ್ನನು ಸರಿಯೆನೊ ಹರಿಯೆ ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3
--------------
ಸಿರಿವತ್ಸಾಂಕಿತರು
ಗೋಪಿ ಇವನು ನಿನ್ನಾ ಪ ಜಗವ ನಿರ್ಮಿಸಿ ಪಾಲಿಸಿ ಅಳಿಸುವ ಅಗಣಿತ ಸುಗುಣಾ ಭರಣನೆ ಇವನು ಅ.ಪ ಬೆಣ್ಣೆಯ ಕದ್ದನು ಸಣ್ಣವನಿಹ ಬಹು ಚಿಣ್ಣರ ಕೂಡುತ ಗೋಗಣ ಕಾಯುವ ಮನ್ಮನ ಪುಥ್ಥಳಿ ಕಳಿಸುವದಾಗದು ಎನ್ನುವ ನುಡಿಗಳ ಬದಿಗಿಡು ತಾಯಿ ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ ಉನ್ನತ ರಕ್ಕಸಿ ಪೂತಣಿಯನ್ನಿವ ಮಣ್ಣನು ಕಂಡರು ಕಂಸನದೂತರು ಪೂರ್ಣಾನಂದನು ಸರಿ ಇವನಮ್ಮ 1 ಜಾರ ಚೋರ ಸುಕುಮಾರನು ಸುಂದರ ನಾರೇರ ವಲಿಸಿ ಸೇರಿದ ನಿಶಿಯಲಿ ಪೋರನೆಂಬ ಮನ ದೂರವಗೈದುಗ ಭೀರ ಮಹಿಮ ಜಗ ಸಾರನೆಂದರಿಯೆ ಭಾರಿಗಿರಿಯನೆತ್ತಿ ಊರಿಗೆ ಊರನು ಸೇರಿಸಿ ಪೊರೆದಿಹಪಾರಮಹಿಮ ಜಂ ಭಾರಿದರ್ಪಹರ ಪೋರನೆ ಬಿಡುಬಿಡು ನಿಗಮ ಸಂಚಾರನೆ ಖರೆಯೆ 2 ಕಾಲ್ಗಳು ಸೋಕಲು ಶಕಟನು ಬಿದ್ದನು ಶೀಳುತ ಕೊಕ್ಕನು ಬಕನಂ ಕೊಂದನು ಕಾಳಿಯ ತುಳಿಯುತ ಗರ್ವವ ನಿಳಿಸಿದ ಲೀಲಾಜಾಲದಿ ಜ್ವಾಲೆಯ ನುಂಗಿದ ಬಾಲರು ಕೇಳಲು ಆಲಯತೋರಿದ ಪಾಲಿಸಿ ವರುಣನ ತಂದೆಯ ಕಂದನ ಲೋಲನೆ ಸರಿ ಜಗಮೂಲನು ಕೇಳೆ 3 ನೀರಜ ನಾಭಗೆ ಗೊಲ್ಲತಿಯ ಗಣ ಬೀರಲ್ ಸಾಧ್ಯವೆ ಮೋಹವ ನೆಂದಿಗು ಶ್ರೀರತಿದಾಯಕ ಕೊಳ್ಳುವನೇ ರತಿ ಭವ ತಾರಕ ಶುಭ ಶೃಂಗಾರ ಪೂರ್ಣ ಪರಿವಾರದಭೀಷ್ಠವ ಖರೆ ಭೂರಿದಯಾಮಯ ನಾರಾಯಣನಿವ ದೋಷ ವಿದೂರ 4 ಮೆಲ್ಲಗೆ ಬಾಯೊಳು ಎಲ್ಲವ ತೋರಿದ ಮಲ್ಲನು ಸರ್ವರ ವಲ್ಲಭ ಸಿದ್ಧವು ಗೊಲ್ಲನ ವೇಷದಿ ಇಲ್ಲಿಹನಮ್ಮ ಇಲ್ಲವೆ ಸಮರಿವಗೆಲ್ಲಿಯ ಸತ್ಯ ಮಲ್ಲರ ಮರ್ದಿಸಿ ಕೊಲ್ಲುತ ಕಂಸನ ನಿಲ್ಲಿಸಿ ಧರ್ಮವ ಕಾಯುವ ನಮ್ಮ ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ 5
--------------
ಕೃಷ್ಣವಿಠಲದಾಸರು
ಗೋಪಿ ಸುಕೃತ ಪ ಸುಕೃತ 1 ಕೌಸ್ತುಭ ಸುಕೃತ 2 ಕಸ್ತೂರಿಯಿಟ್ಟು ಕಂಗಳಿಗೆ ಕಾಡಿಗೆ ಹಚ್ಚಿಮತ್ತೆ ಕದಪಿನಲಿ ಕುಂಕುಮವನೊತ್ತಿಮುತ್ತಿನಂದದೊಳಿರುವ ಬೆವರ ಸೆರಗಿನೊಳೊರೆಸಿಮುತ್ತು ತಾರೈಯೆಂದು ಮುದ್ದಾಡುವೋ ಸುಕೃತ3 ಅಸುರಕುಲ ಹರಣನಿಗೆ ಅಂಗಿಯನು ತೊಡಿಸಿ ಬಲುಕುಶಲದಿ ಪೀತಾಂಬರವನ್ನು ಉಡಿಸಿಪೊಸ ರತುನ ಬಿಗಿದ ಮಣಿಮಯದ ಮಕುಟವ ಮಂಡೆ-ಗೊಸವಿಟ್ಟು ನಲಿ ನಲಿದು ಮುದ್ದಾಡುವೊ ಸುಕೃತ4 ಶಂಖ ಚಕ್ರಾಂಕಿತಗೆ ಭುಜಕೀರ್ತಿಯನೆ ಧರಿಸ್ಯ-ಲಂಕಾರದಲಿ ತಾರೆ ಮಣಿಯ ಕಟ್ಟಿಕಂಕಣವು ಕಡಗ ಥಳಥಳಿಪ ಪವಳದಿ ರಚಿಸಿಬಿಂಕದಲಿ ತೊಟ್ಟಿಲೊಳಗಿಟ್ಟು ತೂಗುವ ಸುಕೃತ5 ಮುಂಗೈಯ ಮುರಿ ಮುತ್ತಿನುಂಗುರವು ಥಳಥಳಿಸೆರಂಗು ಮಾಣಿಕದ ಒಡ್ಯಾಣ ಹೊಳೆಯೆಕಂಗೊಳಿಸುತಿಹ ಕಾಂಚಿದಾಮವಲಂಕರಿಸಿ ಸ-ರ್ವಾಂಗದೊಳು ಗಂಧ ಪರಿಮಳವ ಸೂಸುವ ಸುಕೃತ6 ಕಡಗ ಪೊಂಗೆಜ್ಜೆ ಕನಕದ ಘಂಟೆ ಸರಪಳಿಯಬಿಡದೆ ಶ್ರೀಹರಿಯ ಚರಣದಲ್ಲಿ ಧರಿಸಿಪೊಡವಿಯನು ಅಳೆದ ಶ್ರೀಪುರುಷೋತ್ತಮನಿಗೆ ಮೆ-ಲ್ಲಡಿಯನಿಡು ಎಂದೆನುತ ನಡೆಯ ಕಲಿಸುವ ಸುಕೃತ7 ನೆಲನ ಈರಡಿಮಾಡಿ ಬಲಿಯ ಮೆಟ್ಟಿದ ಪಾದಚೆಲುವ ಚರಣದಿ ಭೂಮಿಯಳೆದ ಪಾದಶಿಲೆಯೆಡಹಿ ಬಾಲೆಯನು ಮಾಡಿದ ದಿವ್ಯವಾದಒಲಿದಿಟ್ಟು ನಡೆಯೆಂದು ನಡೆಯ ಕಲಿಸುವ ಸುಕೃತ8 ಅಂದಿಗೆ ಪಾಯ್ವಟ್ಟು ಕುಂದಣದ ಕಿರುಗೆಜ್ಜೆಸಂದಣಿಸಿ ಕಿರಿಬೆರಳೊಳುಂಗುರಗಳುಚೆಂದದ ಕಡಗ ಪಾಡಗ ಘಂಟೆ ಸರಪಣಿಯುಮಂದಗಮನನ ಪಾದಪದ್ಮಕ್ಕಿಡುವೊ ಸುಕೃತ9 ಸುಕೃತ 10 ದಿನಕರ ನಿಭಾಂಗ ಕೇಶವ ರಾಮಚಂದ್ರ ಮುನಿಸನಕಾದಿವಿನುತ ಕುಣಿದಾಡು ಎನುತತನ್ನ ಕರಗಳಲಿ ತಕ್ಕೈಸಿ ಕೃಷ್ಣನ ದಿವ್ಯಘನ್ನ ಚರಿತೆಯ ಪಾಡಿ ಪೊಗಳುವ ಸುಕೃತ11
--------------
ವ್ಯಾಸರಾಯರು
ಗೋವರ್ಧನೋದ್ಧಾರ ಗೋಪಿಕಾಜನಜಾರ ರುಕ್ಮಿಣೀ ಮನೋಹರ ರುಕ್ಮಗರ್ವನಿವಾರ ಚಕ್ರಧರ ಶ್ರೀರಂಗ ಶ್ಯಾಮಲಾಂಗ ಪಾಂಡುಸುತ ಸನ್ಮಿತ್ರ ಮಾಂಡವ್ಯಸನ್ನುತಾ ಖಂಡಲಾರ್ಚನಪಾತೃ ನುತಚರಿತ್ರ ದ್ವಾರಕಾಪುರಿವಾಸ ಧರ್ಮರಕ್ಷಣದೀಕ್ಷ ವೈರಿಶಿಕ್ಷಣದಕ್ಷ ಶ್ರೀಕಟಾಕ್ಷ ದ್ರೌಪದೀ ಮಾನದಾ ಪಾಹಿವರದ | ತಾಪತ್ರಯ ಹರಣ ಭಕ್ತ್ಯಧೀನ | ಆಪನ್ನಿವಾರಣಾಮೋಘ ವಚನ ಭೋ ಪರಂಧಾಮ ಶ್ರೀ ಶೈಲಧಾಮ
--------------
ನಂಜನಗೂಡು ತಿರುಮಲಾಂಬಾ
ಗೋವಿಂದ ನಿನ್ನಾನಂದದಲ್ಲಿಡೋ ಗೋವಿಂದ ಪ ಗೋವಿಂದ ಹೃದಯಾರವಿಂದದಲ್ಲಿ ಇಂದೂ ಮುಂದೂ ಚರಣಾರವಿಂದ ತೋರೊ ಅ.ಪ ಬೆಟ್ಟದ ದರುಶನ ಲಾಭವು ಕಷ್ಟ ಪಟ್ಟರು ದೊರೆಯಲಸಾಧ್ಯವು ನೋಡೆ ಸುಟ್ಟು ಹೋಗುವುದಘರಾಶಿಯು ಪಟ್ಟ ಶ್ರಮವು ಇಷ್ಟಾರ್ಥವು ದಿಟ್ಟ ಮನವ ಕೊಟ್ಟು ಅಟ್ಟುರಿಯ ಕಳೆದು ಮೆಟ್ಟು ಮೆಟ್ಟಲನೇರಿ ದಿಟ್ಟಿಪರೋ ನಿನ್ನ1 ಪದುಮಜಾಂಡ ಕೋಟಿ ನಾಯಕ ದೇವ ಶ್ರೀದ ಸೃಷ್ಟಾದ್ಯಷ್ಟ ಕರ್ತೃ ನೀನೆ ಆದ್ಯಂತ ಜಗದಾಧಾರಕ ಅಂತರಾತ್ಮಕ ವಿಶ್ವವ್ಯಾಪಕ ಆದಿಮೂಲ ಚತುಷ್ಪಾದ ಎಂದೆನಿಸಿ ತ್ರಿ- ಪಾದ ಇಳೆಯೊಳಿಟ್ಟೆ 2 ಸದಮಲಾತ್ಮಕನೇ ದೇವ ಸರ್ವದಾ ಎಲ್ಲಾ ಹದಿನಾಲ್ಕು ಲೋಕವ ಧರಿಸಿದೆ ದಿವ್ಯ ನೆಲೆಸಿದೆ ಸರ್ವರ ಹೃದಯದ ಪದುಮದಲಿ ಪೊಳೆದು ತ್ರಿಜಗವಂದಿತನಾಗಿ ಮೇದಿನಿಯೊಳು ಮೆರೆಯುತಿಹೆ 3 ಧ್ವಜವಜ್ರಾಂಕುಶಯುಕ್ತಲಾಂಛನ ದೆÉೀವ ಅಬ್ಜಭವಾರಾಧ್ಯ ಚರಣದಿವ್ಯ- ಅಬ್ಜಸಖಕೋಟಿಕಿರಣ ಪಾದಾಭರಣದಿಂದ ಕಿರಣಾ ತಾ ಝಗಝಗಿಸುತ್ತ ನೂಪುರ ಕಾಲಂದಿಗೆ ಗೆಜ್ಜೆ ಸಜ್ಜುಗೊಂಡಿಹ ಮೂರ್ಜಗದೊಡೆಯನೆ ಹರಿ 4 ತಟಿತಕೋಟಿನಿಭಸಮಕಾಯ ಕಟಿಯ ದಿವ್ಯರತ್ನಖಚಿತದಟ್ಟಿಯಾ ತೊಟ್ಟ ಪಟ್ಟೆಪೀತಾಂಬರ ಬಟ್ಟೆಯಾ ಸೊಂಟಪಟ್ಟಿಯ ಇಟ್ಟ ಪರಿಯಾ ಅಟ್ಟಹಾಸದಿ ನಿಂದ ಸೃಷ್ಟಿಗೊಡೆಯ ಮನೋ- ಭೀಷ್ಟದಾಯಕ ಬೆಟ್ಟದೊಡೆಯನೆ 5 ಕರಚತುಷ್ಟಯದಲ್ಲಿ ಮೆರಯುವಾ ಶ್ರೀ ಸು- ದರ್ಶನ ಶಂಖದಿಂದಿರುವಾ ದೀನ ಶರಣಜನರಿಗಭಯ ಹಸ್ತವಾ ಕರೆದು ನೀಡುವ ಕಾಮಿತಾರ್ಥವ ಪರಿಪರಿ ಭಾಪುರಿ ಭುಜಗಾಭರಣಾದಿಗಳ ಧರಿಸಿರುತ ಭಕ್ತಜನರಘ ಹರಿಸುವಾ6 ವಕ್ಷಸ್ಥಳದಲ್ಲಿ ಶ್ರೀವತ್ಸವೂ ಕಂಠ ದಕ್ಷಿಣದಲ್ಲಿ ತೋರ ನಕ್ಷತ್ರದಂತಿಹ ಹಾರವೂ ಕುಕ್ಷಿ ಅಂದವೂ ಮೋಕ್ಷದಾತೃವು ಅಕ್ಷರ ವಾಚ್ಯತ್ರ್ಯಕ್ಷಾದಿ ಸುರವಂದ್ಯ ಈ ಕ್ಷಿತಿಗಿಳಿದು ಪ್ರತ್ಯಕ್ಷನಾಗಿ ನಿಂದೆ 7 ಮಂದಹಾಸಮುಖ ಅರವಿಂದ ದಂತ ಚಂದಕರ್ಣಕುಂಡಲದಿಂದ ಕೆಂದುಟಿಯಿಂದ ಒಪ್ಪುವ ಚೆಂದ ಪೊಂದಿ ಮಕುಟ ಸರ್ವಾಲಂಕಾರ ಪರಿಪೂರ್u ಬಂಧ ಮೋಚನ ಹರಿ ಶ್ರೀ ವೇಂಕಟೇಶನೆ 8 ಪರಿಪರಿ ಮುಕ್ತಜೀವರುಗಳು ಇಲ್ಲಿ ಪರಿವಾರ ತರುಲತೆ ಶಿಲೆಗಳು ಇನ್ನು ವಿರಜೆ ಮೊದಲಾದ ಸರ್ವತೀರ್ಥವು ಸ್ವಾಮಿ ತೀರ್ಥವೂ ಮೋಕ್ಷದಾತೃವೂ ಭವ ಶಕ್ರಾದಿನುತಉರಗಾದ್ರಿವಾಸವಿಠಲ ಜಗದೀಶನೆ 9
--------------
ಉರಗಾದ್ರಿವಾಸವಿಠಲದಾಸರು
ಗೋವಿಂದ ಸಲಹೆನ್ನನು - ಸದಾನಂದಗೋವಿಂದ ಸಲಹೆನ್ನನು ಪ ಗೋವಿಂದ ಸಲಹೆನ್ನ ಕುಮುದಲೋಚನ ನಿನ್ನಸೇವಕರಡಿಯ ಸೇವಕನಯ್ಯ ಗೋವಿಂದ ಅ ಅಚ್ಯುತ ಸರ್ವೋ-ತ್ತಮನೆ ಚಿನ್ಮಯ ಗೋವಿಂದ - ನಿಶ್ಚಲಭಕ್ತಿಕ್ರಮವ ಬೋಧಿಸೊ ಗೋವಿಂದ - ಪಾಪವನೆಲ್ಲಶಮನಗೊಳಿಪ ಗೋವಿಂದ - ಲಕ್ಷ್ಮೀರಮಣನಮೋ ದಶಾವತಾರಿ ಗೋವಿಂದ 1 ಮನವೆನ್ನ ಮಾತು ಕೇಳದು ಕಾಣೊ ಗೋವಿಂದಮನವ ಗೆಲ್ಲುವ ಬಲ ಎನಗಿಲ್ಲ ಗೋವಿಂದಕನಸಿನಂತಿಹ ದೇಹ ಸ್ಥಿರವಲ್ಲ ಗೋವಿಂದಬಿನುಗು ಬುದ್ಧಿಗಳ ಬಿಡಿಸಯ್ಯ ಗೋವಿಂದನೆನಹು ನಿನ್ನೊಳಗಿಟ್ಟು ನಡೆಸಯ್ಯ ಗೋವಿಂದನೆನೆವ ದಾಸರ ಮನದೊಳಗಿರ್ಪ ಗೋವಿಂದವನಜಲೋಚನ ನಾ ನಿನ್ನವನಯ್ಯ ಗೋವಿಂದಘನ ಮಹಿಮನೆ ನಿನ್ನ ಮೊರೆಹೊಕ್ಕೆ ಗೋವಿಂದಮುನಿಗಳ ಮನದೊಳು ಮಿನುಗುವ ಗೋವಿಂದನಿನಗಲ್ಲದಪಕೀರ್ತಿ ಎನಗೇನೊ ಗೋವಿಂದಜನನ ರಹಿತ ಗೋವಿಂದ - ನಿನ್ನಡಿಗಳನೆನವು ಕೊಡೊ ಗೋವಿಂದ - ದುರ್ವಿಷಯ ವಾ-ಸನೆಯ ಬಿಡಿಸೊ ಗೋವಿಂದ - ಕುತ್ಸಿತ ಕೆಟ್ಟತನವ ಬಿಡಿಸೊ ಗೋವಿಂದ - ಸದ್ಗುಣವೆಂಬಧನವ ತುಂಬಿಸೊ ಗೋವಿಂದ - ಇದಕ್ಕೆ ಬಡ-ತನವೆ ನಿನಗೆ ಗೋವಿಂದ - ಸದಾ ನಿನ್ನಘನ ಸ್ಮರಣೆ ಕೊಡು ಗೋವಿಂದ - ಸನಕಸನಂದನಾರ್ಚಿತ ಗೋವಿಂದ 2 ಕಿನ್ನರ ಸನ್ನುತ ಗೋವಿಂದ - ಅಪರಿಮಿತಕರುಣಾಸಾಗರ ಗೋವಿಂದ - ಅರಿಯದಂಥಪರಮ ಜ್ಯೋತಿಯೆ ಗೋವಿಂದ - ಗಂಗೆಯ ಪೆತ್ತಚರಣ ನಿರ್ಮಲ ಗೋವಿಂದ - ತೆತ್ತೀಸ ಕೋಟಿಸುರರ ಪೊರೆವ ಗೋವಿಂದ - ಶ್ರೀವೈಕುಂಠಪುರದೊಳಗಿಹ ಗೋವಿಂದ - ಅಚ್ಯುತಾನಂತತಿರುಪತಿ ನೆಲೆಯಾದಿ ಕೇಶವ ಗೋವಿಂದ 3
--------------
ಕನಕದಾಸ
ಗೋವಿಂದಾಷ್ಟೋತ್ತರ ನಾಮಾವಳಿ ಹೃದ್ಗತ ತಮನಾಶ ಗೋವಿಂದ | ಎನ್ನಹೃದ್ಗುಹದೊಳು ತೋರೋ ಗೋವಿಂದ ಪ ಅಲವ ಮಹಿಮ ಹರಿ ಗೋವಿಂದ | ನಮ್ಮಅಲವ ಭೋದರ ಪ್ರೀಯ ಗೋವಿಂದ ||ಆಲಯದೊಳು ನಿಲ್ಲೊ ಗೋವಿಂದ | ಹೃ-ದಾಲಯದಲಿ ತೋರೊ ಗೋವಿಂದ 1 ಇಕ್ಷುಚಾಪನ ಪಿತನೆ ಗೋವಿಂದ | ನೀನಿಕ್ಷುಧನ್ವಾರಿ ನುತ ಗೋವಿಂದ ||ಈಕ್ಷಿಸೋ ಕರುಣದಿ ಗೋವಿಂದ | ನಿ-ನ್ನೀಕ್ಷಿಸ ಲೋಶವೇನೊ ಗೋವಿಂದ 2 ಉರಗ ಶಯನನೆ ಗೋವಿಂದ | ನಮ್ಮಉರಗಾಯಿ ವೈಕುಂಠ ಗೋವಿಂದ ||ಊರೂರು ಚರಿಸಿದೆ ಗೋವಿಂದ | ನಿ-ಮ್ಮೂರಿಗೆ ಕರೆದೊಯ್ಯೊ ಗೋವಿಂದ 3 ಋಗಾದಿ ತ್ರಯಿಮಯಿ ಗೋವಿಂದ | ಹರಿಋಗ್ವಿನುತನೆ ಗುರು ಗೋವಿಂದ ||Iೂಕ್ಷ ಸದ್ವಿನುತನೆ ಗೋವಿಂದ | ಹರಿIೂಕಾರ ಪ್ರತಿಪಾದ್ಯ ಗೋವಿಂದ 4 ಏತತ್ತೆನಿಸಿಯು ಹೃದ್ಗ ಗೋವಿಂದ | ನೀ ನೇತಕೆ ಕಾಣಿಯಾಗಿಹೆ ಗೋವಿಂದ ||ಐತದಾತ್ಮ್ಯಕ ಸರ್ವ ಗೋವಿಂದ | ನೀನೈತರುವುದು ಮನಕೆ ಗೋವಿಂದ 5 ಸತಿ ಗೋವಿಂದ | ನೀನೌತು ಕೊಂಡಿಹದೇಕೊ ಗೋವಿಂದ 6 ಅಂಗಾಂಗಿ ಭಾವದಿ ಗೋವಿಂದ | ನೀನಂಗಾಂಗದಿ ಕ್ರೀಡಿಪೆ ಗೋವಿಂದ ||ಅಹರರ್ಹಮನದಲಿ ಗೋವಿಂದ | ನೀಅಹರಹರ್ವಿಹರಿಸೋ ಗೋವಿಂದ 7 ಕಪಿಲಾತ್ಮ ಶ್ರೀ ಹರಿ ಗೋವಿಂದ | ನಮ್ಮಕಪಿವರ ಪೂಜ್ಯನೆ ಗೋವಿಂದ ||ಖಪತಿಗಮನ ಗುರು ಗೋವಿಂದ | ಜಗಖರ್ಪರ ಸೀಳಿದ ಗೋವಿಂದ 8 ಗರುಡಧ್ವಜನೆ ಬಾರೋ ಗೋವಿಂದ | ಜಗಂಗರುವವ ಕಳೆಯೊ ಗೋವಿಂದ ||ಘರ್ಮಾಸ ಸಮಂತಾತು ಗೋವಿಂದ | ಸೂಕ್ತಘರ್ಮಕ್ಕೆ ವಿಷಯನೆ ಗೋವಿಂದ 9 ಓಂಕಾರ ಪ್ರತಿಪಾದ್ಯ ಗೋವಿಂದ | ಪಾ-ಙ್ತವು ಜಗವೆಲ್ಲ ಗೋವಿಂದ ||ಚರ್ಮದೊಳುದ್ಗೀಥ ಗೋವಿಂದ | ಇದ್ದುಚರ್ಮ ಲಾವಣ್ಯದ ಗೋವಿಂದ 10 ಛಂದಸ್ಸಿನಿಂಛನ್ನ ಗೋವಿಂದ | ನಾಗಿಛಂದೋಭಿಧನೆನಿಪೆ ಗೋವಿಂದ ||ಜಂಗಮ ಚರವ್ಯಾಪ್ತ ಗೋವಿಂದ | ಎಮ್ಮಜಂಗುಳಿಗಳ ಕಳೆಯೊ ಗೋವಿಂದ 11 ಝಷ ರೂಪಿ ಕಮಠನೆ ಗೋವಿಂದ | ನಮ್ಮಝಷ ಕೇತುಪಿತ ಕಾಯೊ ಗೋವಿಂದ ||ಜ್ಞಾನ ಜ್ಞೇಯ ಜ್ಞಾತೃ ಗೋವಿಂದ | ಪ್ರ-ಜ್ಞಾನ ಘನನೆನಿಪೆ ಗೋವಿಂದ 12 ಟಂಕಿ ಎಂಬುವನೆ ಗೋವಿಂದ | ನಮ್ಮಾಟಂಕವ ಕಳೆಯೋ ಗೋವಿಂದ ||ಠಕ್ಕು ಠವಳಿಗಾರ ಗೋವಿಂದ | ನಮ್ಮಠಕ್ಕಸಿ ಹಾಕದಿರು ಗೋವಿಂದ 13 ಡರಕೊ ಡರ್ಯಾಭಿಧ ಗೋವಿಂದ | ನಮ್ಮೆಡರನು ಪರಿಹರಿಸೊ ಗೋವಿಂದ ||ಢಣ ಢಣ ನಾದದಿ ಗೋವಿಂದ | ಬಲುಢಣಿರೆಂಬೊ ವಾದ್ಯದಿ ಗೋವಿಂದ 14 ಣನಾಮ ವಾಚ್ಯನೆ ಗೋವಿಂದ | ಪ್ರ-ಣಮನ ಮಾಡುವೆನೋ ಗೋವಿಂದ ||ತರುಣಾರ್ಕ ಪ್ರಭೆಯ ಗೋವಿಂದ | ನಮ್ಮತರುಣಿ ದ್ರೌಪದಿ ವರದ ಗೋವಿಂದ 15 ಥರಥರವರ್ಣನೆ ಗೋವಿಂದ | ಬಲ್ಪ್ರಮಥನ ಶೀಲನೆ ಗುರು ಗೋವಿಂದ ||ದರ ಕಂಬುಧರನೆ ಗೋವಿಂದ | ತ್ರಿ-ದಶರ ಪರಿಪಾಲ ಗೋವಿಂದ 16 ಧರ್ಮಸು ಗೋಪ್ತನೆ ಗೋವಿಂದ | ಸ-ಧ್ದರ್ಮ ನಾಮಕ ಗುರು ಗೋವಿಂದ ||ನರೆಯಣಾಭಿಧ ಗುರು ಗೋವಿಂದ | ನಮ್ಮನರಸಖನೆನಿಸಿಹೆ ಗೋವಿಂದ 17 ಪರಮ ಪುರುಷ ಗುರು ಗೋವಿಂದ | ಕಾಯೊಪರಮಾನಂದ ಪ್ರದನೆ ಗೋವಿಂದ ||ಫಲರೂಪನು ನೀನೆ ಗೋವಿಂದ | ಇದೆಫಲಿತಾರ್ಥವೊ ಗುರು ಗೋವಿಂದ 18 ಬಗೆ ಬಗೆ ಕರ್ಮಗಳ್ ಗೋವಿಂದ | ಮಾಡಿಬಗೆ ಬಗೆ ಲೀಲನೆ ಗೋವಿಂದ ||ಭರ್ಗ ರೂಪಿಯೆ ಗುರು ಗೋವಿಂದ | ನಮ್ಮಭರ್ಮ ಗರ್ಭನ ಪಿತ ಗೋವಿಂದ 19 ಮದಜನಕಮಜ್ಜದಿ ಗೋವಿಂದ | ನಮ್ಮಮದನ ಗೋಪಾಲನೆ ಗೋವಿಂದ ||ಯಜ್ಞ ಭುಗ್ಯಜ್ಞನೆ ಗೋವಿಂದ | ಮತ್ತೆಯಜ್ಞ ಸಾಧನ ನೀನೇ ಗೋವಿಂದ 20 ರಣದೊಳರ್ಜುನ ಪಾಲ ಗೋವಿಂದ | ಹಗರಣವನೆ ಕಳೆಯೊ ಗೋವಿಂದ ||ಲವಕುಶ ಪಿತನೆನಿಪೆ ಗೋವಿಂದ | ನೀನಲವಪೂರ್ಣ ಮಹಿಮ ಗೋವಿಂದ 21 ವರ್ಣಗಳ್ಧ್ವನಿಗಳು ಗೋವಿಂದ | ಸರ್ವವರ್ಣಿಪುದು ನಿನ್ನ ಗೋವಿಂದ ||ಶರೊ ಆಭಿಧ ಜೀವನ್ನ ಗೋವಿಂದ | ಮೀಟಿಶರೀರಾಖ್ಯನೆನಿಸುವೆ ಗೋವಿಂದ 22 ಷಡ್ಗುಣ ಪರಿಪೂರ್ಣ ಗೋವಿಂದ | ನೀನೆಷಡ್ವಾದಿ ಸ್ವರ ವ್ಯಾಪಿ ಗೋವಿಂದ ||ಸತ್ತಾದಿ ಪ್ರದ ರೂಪಿ ಗೋವಿಂದ | ನೀನೆಸತ್ತತ್ವ ಪ್ರತಿಪಾದ್ಯ ಗೋವಿಂದ 23 ಹರಿ ಹರಿ ಎಂದರೆ ಗೋವಿಂದ | ಪಾಪಹರಿ ಸೂವಿ ನೀನೇ ಗೋವಿಂದ ||ಳಾಳೂಕ ಆಭಿಧ ಗೋವಿಂದ | ಕಾಯೊಳಕಾರ ಪ್ರತಿಪಾದ್ಯ ಗೋವಿಂದ 24 ಕ್ಷಮಿಸೆನ್ನ ಅಪರಾಧ ಗೋವಿಂದ | ಬಲಿಕ್ಷಮೆಯನಳೆದ ಗುರು ಗೋವಿಂದ ||ಕ್ಷಮಕ್ಷಾಮಾಭಿಧ ಗುರು ಗೋವಿಂದ | ನೀಲಕ್ಷುಮಿ ಸಹ ನೆಲಸೊ ಗೋವಿಂದ 25 ಜ್ಞಾನಗಮ್ಯನೆ ಗುರು ಗೋವಿಂದ | ತತ್ವಜ್ಞಾನವ ಪಾಲಿಸೋ ಗೋವಿಂದ ||ಜ್ಞಾನಿಗೆ ಪ್ರಿಯತಮ ಗೋವಿಂದ | ನಿನಗೆಜ್ಞಾನಿ ಜನರು ಪ್ರಿಯರು ಗೋವಿಂದ 26 ಏಕ ಪಂಚಾಶತು ಗೋವಿಂದ | ವರ್ಣಏಕಾತ್ಮ ಮಾಲೇಯ ಗೋವಿಂದ ||ಲೋಕೈಕನಾಥ ಗುರು ಗೋವಿಂದ | ವಿಠಲಸ್ವೀಕರಿಸೆನ್ನ ಕಾಯೋ ಗೋವಿಂದ 27
--------------
ಗುರುಗೋವಿಂದವಿಠಲರು
ಘನ್ನ ಮಹಿಮನೆ ನಿನಗೆ ಇವನು ಅನ್ಯನಲ್ಲವೊ ಸ್ವಾಮಿ ನಿನ್ನ ವರವನು ಜನ್ಮಜನ್ಮದಿ ಮನ್ನಿಸಿ ಪಾಲಿಸಬೇಕಾ ಪÀನ್ನ ಜನರ ಪಾಲಾ ನಿನ್ನುಳಿದು ಮತ್ತಾರಿಲ್ಲವೆಂಬುವದು ಎನ್ನ ಮಾತಲ್ಲ ದೇವ ಯನ್ನ ಪಿರಿಯರ ಮಾತು ನಿನ್ನಯ ದಿವ್ಯ ಮನಕೆ ಚನ್ನಾಗಿ ನೀತಂದು ನಿನ್ನಯ ಜ್ಞಾನ ಭಕುತಿ ವೈರಾಗ್ಯಗಳನ್ನು ಅನ್ನ ವಸÀನ ಧನ - ಧಾನ್ಯವೇ ಮೊದಲಾದ ಘನ್ನ ಸಂಪತ್ತುವಿತ್ತು ಅನ್ಯಜನಕÀ ಭಾವದಿಂದ ಮುನ್ನ ಧನ್ಯನಮಾಡು ಸೊನ್ನೊಡಲ ಪಿತ ಸರ್ವದಾ ತಾ ಚಿನ್ನಗೊಲಿದ ವರದೇಶ ವಿಠಲನೆ ಮನ್ನದೊಳಗೆ ಪೊಳೆಯೊಯನ್ನನುಡಿ ಲಾಲಿಸು
--------------
ವರದೇಶವಿಠಲ
ಘೋರವಿದು ಮಹ ಘೋರವಿದು ಸಂ ಸಾರದ ನೆಲೆ ದಾರಿಗರಿತಿಹ್ಯದು ಪ ತೋರದೆ ಮೂಜಗ ಹಾರೈಸಿದನು ದು:ಖ ವಾರಿಧಿಯೊಳು ಘೋರ ಬಡುತಿಹ್ಯದು ಅ.ಪ ಪರಮೇಷ್ಠಿ ಶಿರವಂದು ತೆಗೆಸಿಹ್ಯದು ಮುರಹರನನು ಸುಡುಗಾಡು ಹೊಗಿಸಿಹ್ಯದು ಸಿರಿವರ ಹರಿಯನು ಪರಿಪರಿ ಜನುಮವ ಧರಿಸುತ ಧರೆಮೇಲೆಳೆಸಿಹ್ಯದು 1 ಚಂದ್ರಗೆ ಕುಂದುರೋಗ್ಹಚ್ಚಿಹ್ಯದೋ ಬಲು ಮೇಂದ್ರ ಸೂರ್ಯನ ಪೊಲ್ಲ ಕಳಚಿಹ್ಯದು ಇಂದ್ರನ ಅಂಗಾಂಗ ಸಂದು ಬಿಡದಲತಿ ರಂಧ್ರಗೊಳಿಸಿ ಹೇಯ ಸುರಿವುವುದು 2 ಕಾಲ ತಂದಿಹ್ಯದು ಪಾ ತಾಳಕೆ ಬಲಿಯನು ಇಳಿಸಿಹ್ಯದು ವಾಲಿಯ ನಿಗ್ರಹ ಮಾಡಿಸಿ ಲಂಕೆಯ ಪಾಲದಶಕಂಠನ ವಧಿಸಿಹ್ಯದು 3 ಪರಮ ಪಾಂಡವರನ್ವನಕೆಳಸಿಹ್ಯದು ಆ ಕುರುಪನ ಕುಲನಾಶ ಮಾಡಿಹ್ಯದು ಪರಮ ತ್ರಿಪುರ ಶಿರಸೆರೆ ಸೂರೆಮಾಡಿಸಿ ಸುರನಿಕರರಿಗ್ಹಂಚಿಕೊಟ್ಟಹ್ಯದೊ 4 ಹಿರಿಯರನೀ ಪಾಡ ಪಡಿಸಿಹ್ಯದು ಈ ಮರುಳ ನರರ ಪಾಡೇನಿಹ್ಯದು ಗುರುವರ ಶ್ರೀರಾಮನೋರ್ವನ ಹೊರತಾಗಿ ಸರುವ ಜಗವ ಗೋಳಾಡಿಸಿಹ್ಯದು 5
--------------
ರಾಮದಾಸರು
ಚಕ್ಷು ಶ್ರ್ಯವನೆ ಶೇಷಾ - ಪಾಲಯ ಪ ಕ | ಟಾಕ್ಷದಿ ನಾಗನೆಅ.ಪ. ಅಕ್ಷಾರಿಪದಪಾಂಸು ಧರನೇ | ವಾಯುಪುಚ್ಛಾಶ್ರಯಿಸಿ ಜಗಧಾರನೇ ||ಪಕ್ಷಿ ವಾಹಗೆ ಶಯ್ಯ | ಪಕ್ಷೀಯ ಸಮ ಪೂರ್ವತ್ರ್ಯಕ್ಷನೆ ಸೋಮರ್ಕ | ಅಕ್ಷಿ ಅನಲ ಕಾಯೊ 1 ತಾಮಸ್ಸಾಹಂ ತತ್ವ ಮಾನಿಯೇ || ಕಾಯೊಭೂಮಿ ಧರನೆ ಬಹು ಮಾನಿಯೇ |ಆಮಹ ಪಂಚರಾ | ತ್ರಗಮಗಳ್ ಮಾನಿಕಾಮಿತ ಪಾಲಿಸೊ | ಸ್ವಾಮಿ ನಿಮಗೆ ನಮೊ 2 ವಾಸವ ವಂದಿತ ವಾತಾಶನಾ | ನಿನ್ನಆಸನ ಮಾಡಿಹ ರಮೇಶನಾ ||ಹಾಸಿಗೆ ಎನಿಸುತ್ತ | ಲೇಸು ಸೇವಿಸಿ ಹರಿಸಾಸಿರ ನಾಮನ | ದಾಸನೆಂದೆನಿಸಿದೆ 3 ಮುಕ್ತಿಗೆ ಯೋಗ್ಯರ ಮಾರ್ಗದಾ | ಹರಿಭಕ್ತಿಯ ಪಾಲಿಸೊ ದೀರ್ಘದಾ ||ಸಕ್ತಿಯಾಗಲಿ ಮನ | ಸೂಕ್ತಮೇಯನಲ್ಲಿಉಕ್ತಿ ಇದೊಂದನ | ಇತ್ತು ಪಾಲಿಸು ಶೇಷ 4 ಕಾಳೀಯ ಮಡುವಿಗೆ ಹಾರ್ದನ | ಮತ್ತೆಕಾಳೀಯ ನೆಡೆಯಲಿ ಕುಣಿದನಾ ||ಕಾಳಿರಮಣ ಗುರು | ಗೋವಿಂದ ವಿಠಲನಭಾಳ ತುತಿಪ ಮನ | ಪಾಲಿಸೊ ಶೇಷ ಗುರು 5
--------------
ಗುರುಗೋವಿಂದವಿಠಲರು
ಚತುರ್ದಶಿಯ ದಿನ (ಹನುಮಂತನನ್ನು ಕುರಿತು) ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆಪ. ಇವನ್ಯಾರೆ ಮಹಾಶಿವನಂದದಿ ಮಾ- ಧವನ ಪೆಗಲೊಳಾಂತು ತವಕದಿ ಬರುವವ1 ದಾಡೆದಂತಮಸಗೀಡಿರುವದು ಮಹಾ ಕೋಡಗದಂತೆ ಸಗಾಢದಿ ಬರುವವ2 ಕಡಲೊಡೆಯನು ಮೃದುವಡಿಯಡರಿಸಿ ಬಿಡ ದಡಿಗಡಿಗಾಶ್ರೀತರೊಡಗೂಡಿ ಬರುವವ3 ಊರ್ವಶಿ :ನಾರಿ ಕೇಳೆಲೆಗೆ ವೈಯಾರಿ ನೀ ಮುದದಿ ನಾರಾಯಣನಿಗೀತ ಬಂಟನಾದಾದರಿದಿ ವೀರ ರಾಮವತಾರದಿ ಹಿಂದೆ ಹರಿಯ ಚಾರಕನಾಗಿ ಸೇವೆಯ ಗೈದ ಪರಿಯ ಕ್ರೂರ ದಶಾಸ್ಯನ ಗಾರುಗೆಡಿಸಿ ನೃಪ ವೀರನ ಪೆಗಲಿನೊಳೇರಿಸಿ ದೈತ್ಯರ ಭೂರಿವಧೆಗೆ ತಾ ಸಾರಥಿಯಾದವ ಕಾರುಣೀಕ ಮಹಾವೀರ್ಹನುಮಂತ1 ಆಮೇಲೆ ವೀರಾವೇಶದಿ ವಾರಿಧಿಯನು ರಾಮನಪ್ಪಣೆಯಿಂದ ದಾಟಿದನಿವನು ಭೂಮಿಜೆಗುಂಗುರ ಕೊಟ್ಟ ನಂತರದಿ ಕಾಮುಕರನು ಸದೆಬಡಿದನಾ ಕ್ಷಣದಿ ಹೇಮಖಚಿತ ಲಂಕಾಮಹಾನಗರವ ಹೋಮವ ಗೈದು ಸುತ್ರಾಮಾರಿಗಳ ನಿ- ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ- ಡಾಮಣಿ ತಂದ ಮಹಾಮಹಿಮನು ಇವ2 ವಾರಿಮುಖಿ ನೀ ಕೇಳಿದರಿಂದ ಬಂದ ವೀರ ಹನುಮಂತನನೇರಿ ಗೋವಿಂದ ಸ್ವಾರಿಗೆ ಪೊರಟ ಚಾತುರ್ದಶಿ ದಿವಸ ಆರತಿಯನು ಕೈಕೊಳ್ಳುವ ಶ್ರೀನಿವಾಸ ಭೇರಿ ಮೃದಂಗ ಮಹಾರವದಿಂದ ಸ- ರೋರುಹನಾಭ ಮುರಾರಿ ಶರಣರು ದ್ಧಾರಣಗೈಯುವ ಕಾರಣದಿಂದ ಪಾ- ದಾರವಿಂದಗಳ ತೋರಿಸಿ ಕೊಡುವ3 ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿ ನಲವಿಂದ ವೇದಘೋಷವ ಕೇಳ್ವ ಶೌರಿ ಜಲಜಭವಾದಿ ನಿರ್ಜರರಿಗಸಾಧ್ಯ ಸುಲಭನಾದನು ಭಕ್ತಜನಕಿದು ಚೋದ್ಯ ಸುಲಲಿತ ಮಂಟಪದೊಳೊ ನೆಲಸುತ ನಿ- ಶ್ಚಲಿತಾನಂದ ಮಂಗಲದ ಮಹೋತ್ಸವ ಗಳನೆಲ್ಲವ ಕೈಕೊಳುತಲಿ ಭಕ್ತರ ಸಲಹುವ ನಿರುತದಿ ಮಲಯಜಗಂಧಿನಿ4 ಶ್ರೀಕಾಂತ ಬಳಿಕ ಭಕ್ತರ ಒಡಗೂಡಿ ಏಕಾಂತ ಸೇವೆಯಗೊಂಡ ಕೃಪೆಮಾಡಿ ಸಾಕಾರವಾಗಿ ತೋರುವ ಕಾಣೆ ನಮಗೆ ಬೇಕಾದ ಇಷ್ಟವ ಕೊಡುವ ಭಕ್ತರಿಗೆ ಶ್ರೀಕರ ನಾರಾಯಣ ಶ್ರೀನಿವಾಸ ಕೃ- ಪಾಕರ ವಿಬುಧಾನೇಕಾರ್ಚಿತ ರ- ತ್ನಾಕರಶಯನ ಸುಖಾಕರ ಕೋಟಿ ವಿ- ಚಾರಕ ಭಾಸತ್ರಿಲೋಕಾಧಿಪನಿವ5
--------------
ತುಪಾಕಿ ವೆಂಕಟರಮಣಾಚಾರ್ಯ
ಚಂದ್ರಭಾಗ ಹರಿ ವಿಠಲ | ಸಲಹ ಬೇಕಿವಳಾ ಪ ಇಂದೀವರಾಕ್ಷ ಹರಿ | ಮಂದರೋದ್ಧಾರೀ ಅ.ಪ. ಮೋದ ಬಡಿಸುವ ಭಾರಮೋದ ಮಯ ನಿನಗಲ್ಲ | ದಧಾರಿಸಿಹುದೋಆದಿ ಮೂರುತಿ ಹರಿಯೆ | ಸಾಧನ ಸಾಧ್ಯವಾಗಿಕಾದುಕೋ ಬಿಡದಿವಳ | ಮಾಧವನೆ ದೇವಾ 1 ತರತಮಾತ್ಮಕ ಜ್ಞಾನ | ಅರುಹುತಿವಳಿಗೆ ಭೇದಎರಡು ಮೂರರ ಅರಿವು | ನೆರೆ ಕೈಗೂಡಲೀಹರಿಯೆ ಸರ್ವೋತ್ತಮನು | ಸುರಪಾದಿ ಸುರರೆಲ್ಲಹರಿಯ ಕಿಂಕರರೆಂಬ | ವರಜ್ಞಾನ ವಿರಲಿ 2 ಆಗು ಹೋಗುಗಳಲ್ಲಿ | ವೇಗ ಸಮತೆಯು ಬರಲಿಜಾಗು ಮಾಡದೆ ದ್ವಂದ್ವ | ಸಹನೆ ಬರುತಿರಲೀನಾಗಾರಿ ವಾಹನನ | ನಾಮ ಸುಧೆ ಸರ್ವದಾಸಾಗಿ ಮನ ಸವಿವಂತೆ | ಹಗಲಿರುಳು ಇರಲೀ 3 ಕಾಲ | ಮೋದದಿಂ ಕಳೆವಂತೆನೀ ದಯದಿ ಪಾಲಿಸುತ | ಕಾದುಕೋ ಇವಳಾಬೋಧ ಮೂರುತಿಯಾಗಿ | ಹೇ ದಯಾಕರ ಕೃಷ್ಣಾಆದರದಿ ಸುಜ್ಞಾನ | ಭಕ್ತಿಯನ್ನೀಯೋ 4 ಭವ ಬಂಧ ಬಿಡಿಸುವುದುಶ್ರೀವರನೆ ಶ್ರೀಗುರೂ | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಚನ್ನಾಗಿ ಸ್ತುತಿಸುವ ರಾ ಆಶ್ರಿತ ಜನರಾಧಾರಾ ಪ ನಾರದವರದನ ಯೋಗಿಗಳ ಹೃದಯ ಯೋಗವಿಲಾಸನ ಯಾದವ ಕುಲೋದ್ಭವನ ಭಾಗೀರಥಿಯ ಪಡೆದ ಧೀರನಾ ಪಾಂಡವ ಪಕ್ಷಕನಾ 1 ವೇದಗೋಚರನೆ ವೇಣುನಾದ ಶ್ರೀ ವೇಂಕಟ ಶ್ರೀಶನಾ ಸಾಧು ಸಜ್ಜನರ ಸರ್ವದಿ ಸಲಹುವ ಸಕಲಲೋಕ ಕರ್ತನಾ ಆದಿ ಮೂರುತಿ ಅನೇಕ ಚರಿತನ ಅನಂತ ಅವತಾರನಾ ಮನುಜರ ಪೋಷಕನಾ 2 ಗಾನಲೋಲ ಶ್ರೀಕರುಣಕೃಪಕ್ಷಾನ ಕಾಮಿತ ಫಲವೀವನಾ ಕಮಲಸಂಭವ ವಪಿತನ ಮಾನಾಭಿಮಾನ ಮಹಾನುಭಾವ---------------- ಆದ ಅವನಾ 3
--------------
ಹೆನ್ನೆರಂಗದಾಸರು
ಚಂಪಕನಾಸೇ ವಿರೂಪಾಕ್ಷಜಾಯೆನೋಂಪಿಗೈವೆನಮ್ಮ | ಕರುಣದಿಂದ ಕಾಯೆ ಪ ಇಂಪು ಹರಿಯ ನಾಮ | ಸ್ಮರಣೆ ಕರುಣಿಸುತ್ತಮಾಂ ಪಾಹಿ ಗೌರೀ | ಅನ್ಯ ಬೇಡೆ ದೇವಿ ಅ.ಪ. ಅಂಗನಾಮಣೀ | ನುಡಿಗಭಿಮಾನೀಸಂಗೀತ ಲೋಲೆ | ವಿಸ್ತøತ ಸುಫಾಲೆಕಂಗಳು ವಿಶಾಲೆ | ಕೊರಳೊಳು ಸುಮಾಲೆಅಂಗಜನ ವೈರೀ | ಶಿವ ಮನೋಹರೀ 1 ಧವಳಗಂಗೆ ಪೊತ್ತ | ಶಿವನ ಸ್ಮರಿಸುತ್ತಸವನ ಮೂರು ಕಳೆವ | ಭುವಿ ಪಾಲಿಸುವಭುವಿಧರಭಿಧಶಯೈ | ಕವನ ನುಡಿಸಮ್ಮಶರ್ವಳೆ ನಿನ್ನನು | ಸರ್ವದ ಸ್ಮರಿಸುವೆ 2 ಮಾವಾರಿ ಎನಿಪ | ಗೋವುಗಳ ಪಾಲಗೋವ್ರಜ ಸುಪೋಷ | ಗೋವತ್ಸ ಧ್ವನಿಗೇಧಾವಿಪಂತೆ ಗುರು | ಗೋವಿಂದ ವಿಠಲನತೀವ್ರದುಪಾಸನ | ನೀ ಪಾಲಿಸಮ್ಮ
--------------
ಗುರುಗೋವಿಂದವಿಠಲರು
ಚರಣವ ತೋರೈ ಚಲುವರಸನೇ ಚರಣವ ತೋರೈ ಪ ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ಅ.ಪ ರಮ್ಮೆಯ ಮನಕೆ ಬೆಡಗು ತೋರುವ ಚರಣ ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ 1 ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ 2 ಬಿಡದಲೆ ಸರ್ವಜ್ಞತೀರ್ಥರಿಗೊಲಿದಾ ಚರಣವ ತೋರೈ ಬಡವರಾಧಾರ ದಿವ್ಯಭೂಷಣವಿಟ್ಟು ಚರಣವ ತೋರೈ ಕಡು ಮುದ್ದು ಸಿರಿಕೃಷ್ಣ ವಿಜಯವಿಠ್ಠಲ ನಿನ್ನ ಚರಣವ ತೋರೈ ಪೂಜೆಯಗೊಂಬ ಚರಣವ ತೋರೈ3
--------------
ವಿಜಯದಾಸ