ಒಟ್ಟು 1354 ಕಡೆಗಳಲ್ಲಿ , 89 ದಾಸರು , 1015 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸತ್ಯಾಧಿರಾಜಸುಜನತಾರಾರಾಜಪೊರೆಎನ್ನ ಕಲ್ಪಭೂಜಸ್ಮರನಯ್ಯನ ಸಿರಿಚರಣಕಮಲಭೃಂಗವಿರತ್ಯಾದಿ ಗುಣೋತ್ತುಂಗ ಶುಭಾಂಗ ಪ.ಕರಿವಿಂಡು ಶಂಕೆಯಿಲ್ಲದೆ ತಿರುಗುತ ಕೇಸರಿಯ ಕಂಡೋಡುವಂತೆಧರೆಯೊಳು ದುರ್ವಾದಿಗಳು ನಿನ್ನಿದಿರು ಸಂಚರಿಸಲಂಜುವರಮ್ಮಮ್ಮ ಮಹಿಮ 1ಕಾಲವರಿತ ಸ್ನಾನ ಮೌನ ಜಪ ಸೃಕ್ಜಾಲವ್ಯಾಖ್ಯಾನಗಳಪೇಳಿ ಶ್ರೀರಾಮನ ಮೆಚ್ಚಿಸುವಪೂತಶೀಲ ತತ್ವಕಲ್ಲೋಲ ವಿಶಾಲ 2ಹಾಟಕಕುವಧುಕಾಂಕ್ಷೆರಹಿತ ಪ್ರಸನ್ನವೆಂಕಟಪತಿ ಪದದ್ವಯವತ್ರುಟಿಯೊಳಗಲ ಸತ್ಯಾಭಿನವ ತೀರ್ಥಕರಕಟ ಸಂಜಾತ ಸುಪ್ರೀತ 3
--------------
ಪ್ರಸನ್ನವೆಂಕಟದಾಸರು
ಗೋಕುಲದೊಳಗೆಲ್ಲ ಕೊಳಲೂದಲು |ಬೇಕಾದ ಧ್ವನಿಗಳು ಕೂಡಿ ಕೃಷ್ಣ-ಗೋ- ||ಪಿಕಾಸ್ತ್ರೀಯರುತವಕದಿಂದ ನೋಡ- |ಬೇಕೆಂದು ನಡೆಯೆ ನೂಕ್ಯಾಡುತ ಪಎಂತೆಂತು ಪೊರಟರಂತು ನಾರಿಯರು |ಇಂಥ ವಿಪರೀತ ಯಿಂತಿಲ್ಲ ಮುಂದಿಲ್ಲ |ಸಂತೋಷವಹದು ಚಿಂತೆ ಪೋಗುವುದು |ಸಂತರು ಕೇಳಲುತಂತುಮಾತ್ರಾ ||ಭ್ರಾಂತರಾಗಿ ಯೇನು-ಎಂತು ತಿಳಿಯದೆ |ನಿಂತು ನಿಲ್ಲಲಾರದಂತರದಲೆವೆ |ಧ್ವಾಂತಕಿರಣನಂತಾನ ಮುತ್ತೂರು |ಅಂತರವಿಲ್ಲದ ಸಂತೆಯಂತೆ 1ಚಿಕ್ಕಟುಯೆಂದು ಒಬ್ಬಕ್ಕನು ಗಂಡನ |ತೆಕ್ಕೆಲಿ ಪಿಡಿದುಕಕ್ಕಸಬಡುತ |ಪೊಕ್ಕಳಿಗೆ ಬಟ್ಟನಿಕ್ಕಿ ಒಬ್ಬವಳು |ಅಕ್ಕಿಯ ನುಚ್ಚನೆ ಸಕ್ಕರೆಂದು ||ಮಕ್ಕಳಿಗೀವುತ ಮಿಕ್ಕವರೆಲ್ಲರು |ನಕ್ಕು ತಂತಮ್ಮೊಳಗೆ ಗುಕ್ಕುತ ತಲೆಯ |ಹಿಕ್ಕುತ ಬಂದರು ಫಕ್ಕನೆ ಈಕ್ಷಿಸ-ರಕ್ಕಸ ದಲ್ಲಣನಕ್ಕರದಿ 2ತತ್ತರಿಸಿ ಕರವೆತ್ತಿಗೆ ಬಿಟ್ಟರು |ಮುತ್ತಿನ ಕಟ್ಟಾಣಿವೊತ್ತಿ ಮುಡಿಗಿಟ್ಟು |ನೆತ್ತಿಗೆ ಸೀರೆಯ ಸುತ್ತಿಕೊಂಡು ಬರೆ |ಸುತ್ತಲಂಗನೆರು ಬತ್ತಲಾಗಿ ||ತುತ್ತು ಮಾಡಿ ಮಾಡಿ ಹತ್ತಿಸೆ ಎದೆಗೆ |ಹೊಸ್ತಲಿ ದಾಟಲಿ ಗತ್ತಿಡಲಾರದೆ |ಹತ್ತೆಂಟು ಮಂದಿಯು ಚಿತ್ತಪಲ್ಲಟಾಗಿ |ಉತ್ತಮಾಂಗನಿಗೆ ಸುತ್ತಿದರೊ 3ಹಾಲಿಗೆ ಪಿಲ್ಲೆಯು ಫಾಲವಿದೇಯೆಂದು |ಕಾಲಿಗೆ ಕುಂಕುಮ ವಾಲಿಟ್ಟು ಮೂಗಿಗೆ |ಮೇಲಾದ ಹೂವಿನ ಮಾಲಿಕೆ ಕಟಿಗೆ |ತೋಲಾದ ಸರಿಗೆ ಬಾಳಿಗಿಟ್ಟು ||ಹೇಳುವ ಮಾತನುಕೇಳಿಕೇಳದಂತೆ |ಇಳೆಗೆ ಅಗಾಧ ಧೂಳಿಯ ಮುಚ್ಚುತ |ಜಾಲಸಂಭ್ರಮದಿ ವಾಲಯ ಬಂದರು |ಜಾಲಜಾನಾಭನ ವಾಲಗಕ್ಕೆ 4ಭೋರೆಂಬ ಶಬ್ದವ ಮರೆತಳೆಮುನೆ |ಗಿರಿಯು ಬ್ಯಾವಿಯೆ ? ತುರುವು ಮೇವನು |ತೊರೆಯೆ, ಫಣಿಯು ಶಿರವ ತೂಗಿತು |ತೆರೆಯ ಕಟ್ಟಿತು ಶರಧಿಯು ||ಸುರರುನಭದಿ ನೆರೆದು ಪೂಮಳೆ |ಗರೆಯೆದುಂದುಭಿಮೊರೆಯೆ ಸುಖವ |ಸುರಿಯೆ ಪ್ರಾಣೇಶ ವಿಠಲ ಕೊಳಲ |ತ್ವರನುಡಿಸುವ ಸ್ವರಗೇಳಿ 5
--------------
ಪ್ರಾಣೇಶದಾಸರು
ಗೋಪಿಹೇಳೆ ರಂಗಗೆ ಬುದ್ಧಿ ಪಗೋಪಿಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯಸೆರಗುಪಿಡಿವರೇನೇ ||ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ 1ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ |ಗೋಪಿ||ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿಮಾನಕೊಂಬನೆ | ಗೋಪಿ 2ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ |ಗೋಪಿ||ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ 3ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು |ಗೋಪಿ||ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವಮಾರಕಾಣೆವೇ | ಗೋಪಿ 4ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ |ಗೋಪಿ||ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ 5ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ |ಗೋಪಿ||ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವಗಂಡಕರೆಕರೆಮಾಡುವ ಪರಿಪರಿ | ಗೋಪಿ 6ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ |ಗೋಪಿ||ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ 7
--------------
ಪ್ರಾಣೇಶದಾಸರು
ಚರಣಕಮಲವನ್ನು ನೆನೆವೆ ನಾಸುರದ್ವಿಜವೇಷದಿಂದುದಿತನ್ನ ತ್ರಾಣಿಪರಮತಗಳನು ಖಂಡ್ರಿಸಿದನ್ನ ಸತ್ಯಪರಿಪರಿ ವ್ರತಾಚರಿಸಿದನ್ನ ಮನೋಶುದ್ಧಾದ ಸಂಪ್ರದಾಯಕನನ್ನ ತತ್ವಪರಸತಿ ಪರಧನ ತೊರೆದನ್ನ ತನ್ನದೂರದರ್ಶಿ ಸರ್ವಕಂಡನ್ನ ನಿಜವೈಷ್ಣವ ಸಿದ್ಧಾಂತ ಒರೆದನ್ನ ಆತಪಸೆ ಸಂಗರವೆಂದರಿದನ್ನ ತನ್ನವಿಜಯವಿಠಲದಾಸನ್ನ ತನ್ನ
--------------
ಗೋಪಾಲದಾಸರು
ಜಯ ಮಂಗಳಂ ಮಹಾ ಶುಭಮಂಗಳಂಮಂಗಳಂ ಮಧುಹರಗೆ ಮಾವರನಿಗೆ ಪ.ಶ್ರುತಿಹೃತ ವಿಹೃತನಾದಗೆಕ್ಷಿತಿಭೃತ ವಿಭೃತನಾದಗೆಧೃತಿಜಿತವಿಜಿತ ಕುಪಿತಗೆ ವಿತರಣಾಂತಗೆಪತಿತತನು ಕ್ಷತಕೃತಗೆಕೃತಪೂತಹಿಸತಿನುತಗೆಪತಿವ್ರತ ಮೋಹಿತ ತುರಗಯುತವ್ಯಾಕೃತಗೆ 1ತತ್ವಾಮೃತ ಸತ್ಯವ್ರತಗೆಮಥÀನಾಮೃತ ದಿತಿಜಾತರ್ಗೆಕಥಾಮೃತ ಸುಮತಿಗೆ ಕೃಪಾಮೃತ ದೈತ್ಯಜಗೆಭ್ರಾತಪಿತ ಸ್ತ್ರೀಸತಿವ್ರಾತಕೆಭೂತಪತಿಗೆ ಜಾತಧರ್ಮಕೆಹಿತಾಮೃತ ತಾಮೃತೋಪೇತಗೆ ಮೂತ್ರ್ಯಮಲನಿಗೆ 2ಅನಿಮಿಷಾನಿಮಿಷ ಮಾನಿಗೆಕನಕಾಕ್ಷಕನಕಕಶ್ಯಪುವಿನ ನಿಘಘ್ನ ಅಕ್ಷಯತನುಗೆ ಜನನಿಜಘ್ನುಗೆಆನನದಶದಾನವಮಾನಿನಿಹನನಶೀಲ ಮೋನಾನ್ವಿತಗೆಜ್ಞಾನಜನೇಶ ಪ್ರಸನ್ವೆಂಕಟ ಅನಾಥನಾಥಗೆ 3
--------------
ಪ್ರಸನ್ನವೆಂಕಟದಾಸರು
ಜಯ ಮಂಗಳಂ ಮಹಾ ಶುಭಮಂಗಳಂಮಂಗಳಂ ಮಧುಹರಗೆ ಮಾವರನಿಗೆ ಪ.ಶ್ರುತಿಹೃತ ವಿಹೃತನಾದಗೆಕ್ಷಿತಿಭೃತ ವಿಭೃತನಾದಗೆಧೃತಿಜಿತವಿಜಿತ ಕುಪಿತಗೆ ವಿತರಣಾಂತಗೆಪತಿತತನು ಕ್ಷತಕೃತಗೆಕೃತಪೂತಹಿಸತಿನುತಗೆಪತಿವ್ರತ ಮೋಹಿತ ತುರಗಯುತವ್ಯಾಕೃತಗೆ 1ತತ್ವಾಮೃತ ಸತ್ಯವ್ರತಗೆಮಥÀನಾಮೃತ ದಿತಿಜಾತರ್ಗೆಕಥಾಮೃತ ಸುಮತಿಗೆ ಕೃಪಾಮೃತ ದೈತ್ಯಜಗೆಭ್ರಾತಪಿತ ಸ್ತ್ರೀಸತಿವ್ರಾತಕೆಭೂತಪತಿಗೆ ಜಾತಧರ್ಮಕೆಹಿತಾಮೃತ ತಾಮೃತೋಪೇತಗೆ ಮೂತ್ರ್ಯಮಲನಿಗೆ 2ಅನಿಮಿಷಾನಿಮಿಷ ಮಾನಿಗೆಕನಕಾಕ್ಷಕನಕಕಶ್ಯಪುವಿನ ನಿಘಘ್ನ ಅಕ್ಷಯತನುಗೆ ಜನನಿಜಘ್ನುಗೆಆನನದಶದಾನವಮಾನಿನಿಹನನಶೀಲ ಮೋನಾನ್ವಿತಗೆಜ್ಞಾನಜನೇಶ ಪ್ರಸನ್ವೆಂಕಟ ಅನಾಥನಾಥಗೆ 3
--------------
ಪ್ರಸನ್ನವೆಂಕಟದಾಸರು
ಜಯಜನನೀ ಶಾರದೆ ಜನನಮೃತಿಭಯಭಿದೆ ಪ.ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ.ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ 1ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ 2ಅನಘಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದಸನಕನುತೆ ಸನ್ನುತೆ ಘನಪಾಪಾಪಹ್ನುತೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯಮಂಗಳಂನಿತ್ಯಶುಭಮಂಗಳಂಪ.ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವಿಟ್ಟು ||ಪರತತ್ತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೆ ಆರತಿಯೆತ್ತಿರೆ 1ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳೆದುವೇದ ಮುಖವೆಂಬ ಕುಂಕುಮವನಿಟ್ಟು ||ಸಾಧು - ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಂ ಲಕ್ಷ್ಮೀಗಾರತಿಯೆತ್ತಿರೆ 2ತನುವೆಂಬ ತಟ್ಟಿಯಲಿ ಮನದ ಸೊಡರನು ಇಡಿಸಿಘನಶಾಂತಿಯೆಂಬ ಆಜ್ಯವನುತುಂಬಿ ||ಆನಂದವೆಂತೆಂಬ ಜ್ಯೋತಿಯನು ಹಚ್ಚಿತುಚಿನುಮಯ ಹರಿಗೆ ಆರತಿಯೆತ್ತಿರೆ 3ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನು ಕದಡಿ ||ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿಸೋಮಧರವರದಗಾರತಿಯೆತ್ತಿರೆ 4ನಾರದವಂದ್ಯಗೆನವನೀತ ಚೋರಗೆನಾರಾಯಣಗೆ ಶ್ರೀ ವರಲಕ್ಷ್ಮೀಗೆ ||ಸಾರಿದವರನು ಪೊರೆವ ಪುರಂದರವಿಠಲಗೆನೀರಜಮುಖಿಯರಾರತಿಯೆತ್ತಿರೆ5
--------------
ಪುರಂದರದಾಸರು
ಜಾಲಿಯ ಮರದಂತೆ - ದುರ್ಜನರೆಲ್ಲಜಾಲಿಯ ಮರದಂತೆ ಪ.ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲಹಸಿದು ಬಂದವರಿಗೆ ಹಣ್ಣಿಲ್ಲವೊಕುಸುಮವಾಸನೆಯಿಲ್ಲ ಕುಳ್ಳಿರಲು ಸ್ಥಳವಿಲ್ಲವಿಷಮರ ದುಸ್ಸಂಗ ಪಡೆದರೇನುಂಟು 1ಊರ ಹಂದಿಗೆ ಅಲಂಕಾರವ ಮಾಡಲುನಾರುವ ದುರ್ಗಂಧ ಬಿಡಬಲ್ಲುದೆಸಾರ ತತ್ತ್ವಜಾÕನ ಪಾಪಿಗೆ ಹೇಳಲುಕ್ರೂರಬುದ್ಧಿಯ ಬಿಟ್ಟು ಸಜ್ಜನವಪ್ಪಗೆ ? 2ತನ್ನಿಂದ ಉಪಕಾರ ತೊಟಕಾದರೂ ಇಲ್ಲಬಿನ್ನಣ ಮಾತುಗಳು ಮೊದಲೆ ಇಲ್ಲಪನ್ನಗಶಯನ ಪುರಂದರವಿಠಲನಲ್ಲದೆಅನ್ಯದೈವಂಗಳ ಭಜಿಸದೆ ನರರು 3
--------------
ಪುರಂದರದಾಸರು
ಜೀವನ ಕಳೆಗಳು ಮುಳುಗುವ ತನಕಜೀವನ್ಮುಕ್ತನು ತಾನಲ್ಲ || ಜೀವನಕಳೆತಾನೇತಾನಾದರೆ | ಜ್ಯೋತಿರ್ಮಯವೀ ಜಗವೆಲ್ಲಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಎಲ್ಲ ಪ್ರಪಂಚವು ಸೋಗಿನ ಪರಿಯಲಿ |ಪಸರಿಸಿ ತೋರುವದೆಲ್ಲಾ ||ಬೆಲ್ಲದ ಮೂಲವು ಕಬ್ಬಿನ ರಸವನು |ಅನುಭವ ಯೋಗಿಯೆ ತಾ ಬಲ್ಲಾ1ಮುತ್ತಿನ ಆಕೃತಿ ಬೇರೆ ಬೇರಾದರೆ |ತೇಜವೆ ತತ್ತ್ವಗಳೆಲ್ಲಾ ||ಮುತ್ತಿನ ಮೂಲವು ಸ್ವಾತಿ ಬಿಂದುವು |ಸಿಂಧುವಾದವನೆ ತಾ ಬಲ್ಲಾ2ಸುಮನ ಪರಾಗವು ಬೇರೆ ಬೇರಾದರೆ |ಘಮ ಘಮ ಮಕರಂದೆಲ್ಲಾ |ಸುಮನ ಪರಾಗವು ಭೃಂಗಾವಳಿ ಸುಖಸದ್ಗುರು ಶಂಕರ ತಾ ಬಲ್ಲಾ3
--------------
ಜಕ್ಕಪ್ಪಯ್ಯನವರು
ಜೋ ಜೋ ಜೋ ಅಂಜನಿ ಕಂದಾ ಜೋ ಜೋಸಂಜೀವನ ತಂದಾ | ಜೋ ಜೋ ಸಾಧುಸಜ್ಜನ ವೃಂದಾ | ಜೋ ಜೋ ವಾಯು ಬಾಲಮುಕುಂದಾ ಜೋ ಜೋಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಭೂತೈದೆಂಬೊ ಕನ್ನಡಿ ಮಂಟಪದೊಳಗೆ |ಜ್ಯೋತಿ ದೀಪದ ಭಾಸ ಉನ್ಮನಿಯೊಳಗೆ |ಪ್ರೀತಿಂದ ಪ್ರಣವೆಂಬ ಮೇಲ್ಕಟ್ಟ ಕೆಳಗೆ ರಕ್ತಶ್ವೇತಶ್ಯಾಮನೀಲಖಿಡಕಿಯೊಳಗೆ ಜೋ ಜೋ1ಪಂಚ ಭೂತವೆಂಬ ಮಂಚವ ನಿಲಿಸಿ |ಪಂಚವಿಂಶತಿ ತತ್ತ್ವ ನವಾರ ಬಿಗಿಸಿ | ಪಂಚಕರಣವೆಂಬೋ ಹಾಸೀಗಿ ಹಾಸಿ | ಪಂಚ ಪ್ರಾಣವೆಂಬೋಲೇಪ ತೀವಿಸಿ ಜೋ ಜೋ2ಆರು ಚಕ್ರ ಮೀರಿದ ಸ್ಥಾನದಲ್ಲಿ |ಘೋರಘೋರಘೋಷ ಉನ್ಮನಿಯಲ್ಲಿ |ತುರ್ಯಾತೀತ ಶಂಕರ ತಾನೇ ಅಲ್ಲಿ |ಸೂರ್ಯಚಂದ್ರ ಅಗ್ನಿ ಮೂಜಗದಲ್ಲಿ ಜೋ ಜೋ3
--------------
ಜಕ್ಕಪ್ಪಯ್ಯನವರು
ಜ್ಞಾನಿಯಾಗಬೇಕು ಅಜ್ಞಾನ ನೀಗಬೇಕು ತತ್ವಜ್ಞಾನದಿಂದಿರಬೇಕು ಮುಕ್ತಿ ತಾನೆ ಆವಾಗಕ್ಕು ಪ.ಅಬ್ಜಾನನನ್ನ ಪಾದಾಬ್ಜ ನಂಬಿರಿನ್ನು ಕುಶಬ್ದಗುಂದಿರಣ್ಣಭವಾಬ್ಧಿದಾಟಿರಣ್ಣ1ಮಾಡಿ ಸಾಧುಸಂಗ ಬಿಡಿ ಖಳರಹಂಗನೀವುನೋಡಿ ಅಂತರಂಗ ಕೈ ನೀಡುವನು ರಂಗ 2ತ್ಯಾಗಭೋಗಸರ್ವ ಶ್ರೀಹರಿಗೆ ಒಪ್ಪಿಸಿರುವ ಆಯೋಗಿಯನ್ನು ಕರೆವ ಶ್ರೀ ನಾಗಶಯನಹೊರೆವ3ತಿದ್ದಿನೋಡಿವರ್ಮಅಸಾಧ್ಯ ಶರ್ಮನರ್ಮ ಬೇಗೆದ್ದು ಬಿಡಿ ಅಧರ್ಮ ನಿನ್ನದು ಶುಭಕರ್ಮ 4ದಾಸರ ಜೀವನ ಭಕ್ತಪೋಷಕ ಪಾವನ ಶ್ರೀಪ್ರಸನ್ನ ವೆಂಕಟ ಪ್ರಸನ್ನ ಅಭಿಲಾಷೆ ಸಂಜÕನೆ ಧನ್ಯ 5
--------------
ಪ್ರಸನ್ನವೆಂಕಟದಾಸರು
ತನುವ ನೀರೊಳಗದ್ದಿ ಫಲವೇನುಮನದಲ್ಲಿ ದೃಢಭಕುತಿ ಇಲ್ಲದ ಮನುಜನು ಪ.ಧಾನ - ಧರ್ಮಗಳನು ಮಾಡುವುದೇ ಸ್ನಾನಜಾÕನ - ತತ್ತ್ವಂಗಳ ತಿಳಿಯುವುದೇ ಸ್ನಾನಹೀನಪಾಪಂಗಳ ಬಿಡುವುದೆ ಸ್ನಾನಧ್ಯಾನದಿ ಮಾಧವನ ನಂಬುವುದೆ ಸ್ನಾನ 1ಗುರುಗಳ ಶ್ರೀಪಾದತೀರ್ಥವೆ ಸ್ನಾನಹಿರಿಯರ ದರುಶನ ಮಾಡುವುದೆ ಸ್ನಾನಕರೆದು ಅನ್ನವನು ಇಕ್ಕುವುದೊಂದು ಸ್ನಾನಸಿರಿಹರಿತರಣ ನಂಬುವುದೊಂದು ಸ್ನಾನ 2ದುಷ್ಟರ ಸಂಗವ ಬಿಡುವುದೊಂದು ಸ್ನಾನಕಷ್ಟಪಾಪಂಗಳನು ಹರಿವುದೆ ಸ್ನಾನಸೃಷ್ಟಿಯೊಳಗೆ ಸಿರಿಪುರಂದರವಿಠಲನಮುಟ್ಟಿ ಭಜಿಸಿ ಪುಣ್ಯ ಪಡೆವುದೇ ಸ್ನಾನ 3
--------------
ಪುರಂದರದಾಸರು
ತಪ್ಪ ಪಾಲಿಸಯ್ಯ ತಿಮ್ಮಯ್ಯತಪ್ಪ ಪಾಲಿಸಯ್ಯ ಪ.ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳುಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆ ಅ.ಪ.ಜಲಜನಾಭ ನಿನ್ನ ಮಹಿಮೆಯನೆಲೆಯನರಿಯದೆನ್ನ ಮನವದುನೆಲೆಯಿಲ್ಲದ ಭವಜಲಧಿಯೊಳಾಡುತ್ತಲಲನಾ ವಿಷಯದ ಬಲೆಗೆ ಮೋಹಿಸಿ ಮನಸಿಲುಕಿ ಮಲಿನವಾಯ್ತು ತತ್ವದನೆಲೆಯನರಿಯದಾಯ್ತು ಹೀಗೆನ್ನುತಕಳೆದುಹೋಯ್ತು ವಿಂಶತಿ ವತ್ಸರಗಳುತೊಳಲಿ ಸಕಲ ಭವದೊಳಗಾರ್ಜಿತವಹ 1ಹಾಳು ಮನವು ಕೂಡಿ ನಾನಾಚಾಳಿ ಮಾಳ್ಪುದಾಡಿ ಬುದ್ಧಿಯಪೇಳಿದಷ್ಟು ದುಶ್ಯೀಲವೆ ಮಾಳ್ಪುದುತಾಳೆಂದರೆ ಒಂದು ವೇಳೆಗೆ ಸುಮತಿಯಆಲೋಚನೆಯೊಳಗೆ ಬಿದ್ದರೆಮೇಲಿಲ್ಲವು ಕ್ಷಣಕೆ ತನ್ನಯಶೀಲವನೆ ಸ್ವೀಕರಿಸುತಿರುವುದುಪೇಳಲೇನು ಕರುಣಾಳು ನೀ ಯೆನ್ನಯ 2ನಾನಾ ಕಷ್ಟಪಟ್ಟೆ ಇನ್ನಾದರುಮಾನಿಸಬೇಕಷ್ಟೆ ಎನ್ನೊಳುಊನ ಗ್ರಹಿಸಿ ಅನುಮಾನ ಸಾಧಿಸಿದರೆನಾನೆಂಬುವದೇನು ಸ್ವತಂತ್ರವಕಾಣೆನು ಎನ್ನೊಳಗೆ ಸಂತತನೀನೇ ಗತಿಯೆನಗೆ ಇದಕನು-ಮಾನವಿಲ್ಲ ಪಾದಾನತಜನರಾಧೀನನೆಂಬ ಬಿರುದಾನಬೇಕಾದರೆ 3ಅಪರಾಧಿಯೆ ನಾನು ಹೇಗೈಅಖಿಲಾತ್ಮನು ನೀನು ಹೃದಯದಿಕೃಪೆಯ ಬೀರಿ ತೋರಿಪ ಪರಮಾತ್ಮನೆಚಪಲನಾಗಿ ಎನ್ನುಪಮೆಗೆಯೊಡ್ಡಿದೆಸಫಲವಾಯ್ತು ಎನಗೆ ಕೀರ್ತಿಯುಅಪಕೀರ್ತಿಯು ನಿನಗೆ ಪಾದವಜಪಿಸುವಂತೆ ಕರುಣಿಪುದಿನ್ನಾದರೂಕಪಟವಾಯ್ತೆ ಸರೀಸೃಪಗಿರಿರಾಜನೆ 4ದೂಷಣಾರಿ ನಿನ್ನ ಪಾದದದಾಸಗೈಯ್ಯೊ ಎನ್ನ ಎನ್ನೊಳುದೋಷವಿಲ್ಲ ಜಗದೀಶ ಜನಾರ್ದನದಾಶರಥಿಯ ಕರುಣಾಶರಧಿಯೊಳಗೆಈಸಾಡಿದ ದಾಸ ಕಾರ್ಕಳಾಧೀಶ ಶ್ರೀನಿವಾಸ ರವಿಶತಭಾಸ ಶ್ರೀಲಕ್ಷ್ಮೀನಾರಾಯಣ ಸರ್ವೇಶ ಭಕ್ತಜನಪೋಷ ನೀಯೆನ್ನಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತಾಂಡವಾಡಿದನಂದು ಯಶೋದೆಕಂದÀ ಪ.ಅಂದದಿ ಬೆಣ್ಣೆಯ ಪಿಡಿದು ಶುದ್ಧಗತಿಗಳಿಂದ ತಗಡಧಂ ಧಾಂ ಧಿಮಿಕಿಟ ಧಿಗಿ ಧಿಗಿ ಥೈಯೆಂದು 1ಕುಚಮಾಟದ ಗದ್ದಿಗೇಲಿ ಒಂದಡಿಯಿಟ್ಟ ತಾಳನಿಚಯದಿ ತತ್ತಂ ತಾಹಂ ಥರಿಕುಟ ತಕುಂದ ಕಿಡಿಕಿಟಿಲೆಂದು 2ಕಂಕಣ ಕುಂಡಲಹಾರ ಪದಕ ದಾಮಾಲಂಕೃತಕಿಂಕಿಣಿಕಿಣಿ ಝಣ ಎನೆ ವನಜನಯನನು3ಅಜಭವಾದ್ಯರು ತಾಳ ವೀಣೆ ಆವುಜ ಮೃದುಋಜು ಧಳಂ ಧಳಂ ಝೈಂ ಝೈಂ ಝಕಿಂ ನುಡಿಸೆ ಜಡಿಜಡಿದೆÉೂಡನೆ 4ಮಂದಹಾಸದಿ ನಂದವ್ರಜದ ಗೋವರ ಕೂಡತಂದೆ ಪ್ರಸನ್ನವೆಂಕಟಗಿರಿತಟಸ್ಫುಟಿದ್ಧಾಟಕನಿಲಯ5
--------------
ಪ್ರಸನ್ನವೆಂಕಟದಾಸರು