ಒಟ್ಟು 1096 ಕಡೆಗಳಲ್ಲಿ , 100 ದಾಸರು , 962 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೈ ರಂಗ ಬಾರೈ ಕೃಷ್ಣ ಬಾರೈ ದೇವ ಕೃಷ್ಣತೋರೈ ನಿನ್ನಯ ಚಾರುಚರಣವತೋಯಜಾಕ್ಷಪಘಲು ಘಲುರೆನ್ನುತ ರುಳಿಗೆಜ್ಜೆಯನಿಟ್ಟು ಬಾರೈ ದೇವ ಕೃಷ್ಣಕುಣಿಕುಣಿಯುತ ಬಾ ಕುಂತಿಸುತರಪ್ರಿಯ ಬಾರೈ ದೇವ ಕೃಷ್ಣಥಳಥಳಿಸುವ ಪೀತಾಂಬರ ಹೊಳೆಯುತ ಬಾರೈ ದೇವ ಕೃಷ್ಣನಡುವಿಲಿ ಹೊಳೆಯುತ ಪಟ್ಟೆವಲ್ಲಿಯು ಬಾರೈ ದೇವ ಕೃಷ್ಣ 1ಕಂಕಣ ಕರಭೂಷಣಗಳು ಹೊಳೆಯುತ ಬಾರೈ ದೇವ ಕೃಷ್ಣಪಂಕಜನಾಭಪಾರ್ಥಸಖನೆ ಕೃಷ್ಣ ಬಾರೈ ದೇವ ಕೃಷ್ಣಶಂಖ ಚಕ್ರಗಳ ಧರಿಸುತ ಮುದದಲಿ ಬಾರೈ ದೇವ ಕೃಷ್ಣಶಂಕಿಸದೆಲೆ ಬಾ ಬಿಂಕವ ತೊರೆದು ಬಾರೈ ದೇವ ಕೃಷ್ಣ 2ಮುಂಗುರುಳಲಿ ಮುತ್ತಿನರಳೆಲೆ ಹೊಳೆಯುತಬಾರೈ ದೇವ ಕೃಷ್ಣಶೃಂಗಾರದ ಕಿರೀಟವು ಹೊಳೆಯುತಬಾರೈ ದೇವ ಕೃಷ್ಣಸುಂದರ ಕಸ್ತೂರಿ ತಿಲಕವು ಹೊಳೆಯುತಬಾರೈ ದೇವ ಕೃಷ್ಣಕಂಧರದಲಿ ಶೋಭಿಪ ಪದಕಗಳಿಂದಬಾರೈ ದೇವ ಕೃಷ್ಣ 3ಪೊಂಗೊಳಲೂದುತ ಹೆಂಗಳರೊಡನೆಬಾರೈ ದೇವ ಕೃಷ್ಣಮಂಗಳ ಮಹಿಮ ವಿಹಂಗವಾಹನ ಕೃಷ್ಣಬಾರೈ ದೇವ ಕೃಷ್ಣಅಂಗಳದೊಳಗಾಡುತ ನಲಿಯುತ ಬಲು ಚಂದದಿಬಾರೈ ದೇವ ಕೃಷ್ಣಇಂದಿರೆಯರಸನೆ ವಂದಿಸಿ ಬೇಡುವೆ ಬಾರೈ ದೇವ ಕೃಷ್ಣ 4ಕಿಲಿಕಿಲಿನಗುತಲಿ ಕುಣಿಕುಣಿಯುತಬೇಗ ಬಾರೈ ದೇವ ಕೃಷ್ಣಕನಕಾಭರಣಗಳಿಂದೊಪ್ಪುತ ಬೇಗ ಬಾರೈದೇವ ಕೃಷ್ಣನಲಿನಲಿಯುತ ಬಾ ಮಣಿಯುತ ಬೇಡುವೆಬಾರೈ ದೇವ ಕೃಷ್ಣದಣಿಸದೆ ಕಮಲನಾಭವಿಠ್ಠಲ ಬೇಗ ಬಾರೈ ದೇವ ಕೃಷ್ಣ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ಬಾ ಮನೆಗೇ ರಂಗಯ್ಯ ನೀ |ತೋರೋ ಮುಖವೆನಗೆ ಪಘೋರಶರೀರ ಸುಂ |ದರಸೂಕ್ಷ್ಮಾಕಾರನೆ |ಕ್ರೂರ ದಯಾಕರ ಧೀರ ಉದಾರಿಯೆ ಅ.ಪನೀಲಮೇಘ ಶ್ಯಾಮ ನಿರ್ಮಲವನ | ಮಾಲ ಪೂರ್ಣಕಾಮ |ಕಾಲಭಯ ವಿದೂರ | ಫಾಳನೇತ್ರನಮಿತ್ರ|ಪಾಲಾಬ್ಧಿವಾಸ ಶ್ರೀಲೋಲ ಗೋಪಾಲನೇ 1ಶೇಷಶಯನ ದೇವಾ | ಭಕ್ತರಭವ|ದೋಷಹರ ಸಂಜೀವಾ |ನಾಶರಹಿತ ಸರ್ವ | ಆಶವಿನಾಶನ |ಭಾಸುರಾಂಗನೆ ಜಗ | ದೀಶ ಕೇಶವಮೂರ್ತಿ 2ಕಾಲೊಳಂದುಗೆಯೂ | ಪೀತಾಂಬರ |ಶಾಲುಮುದ್ರಿಕೆಯೂ | ತೋಳ ಸರಿಗೆ ಬಳೆ |ವೈಜಯಂತಿಯ ಮಾಲೇ ಮೇಲಾದರತ್ನಕಿರೀಟಕುಂಡಲಧಾರೀ | ಗರುಡನ ಏರಿ 3ಶಂಕೆಯಿಲ್ಲದ ಭಕ್ತರೂ | ನಿನ್ನಯ ಸದೃ-ಶಾಂಕದಿ ಸೇವಿಪರೂ | ಶಂಖಚಕ್ರಗದಾ |ಪದ್ಮವ ಧರಿಸಿದ | ಪಂಕಜನೇತ್ರವೈ- |ಕುಂಠ ವೆಂಕಟಪತೇ 4ಧಾರುಣಿ ಭಾರವನೇ | ಇಳುಹಲವ |ತಾರಗಳೆತ್ತುವನೆ |ಚಾರುಭುಜಾನ್ವಿತ |ಕೌಸ್ತುಭಮಣಿಹಾರ | ವಾರಿಜನಾx
--------------
ಗೋವಿಂದದಾಸ
ಬಾರೋ ವೆಂಕಟಗಿರಿನಾಥ| ದಯ-ದೋರೈ ಭಕುತರ ಪ್ರೀತ ಪ.ಮಾರಪಿತ ಗುಣಹಾರ ಮಂದರ-ಧಾರ ದೈತ್ಯಸಂಹಾರ ಸುಜನೋದ್ಧಾರ ಮಮಹೃದಯಾರವಿಂದಕೆಬಾರೋ ಕೃಪೆದೋರೋ ವೆಂಕಟ ಅ.ಪ.ವೃಷಭಾಸುರನೊಳು ಕಾದಿ ಸಾ-ಹಸವ ಮೆರೆಸಿದ ವಿನೋದಿವಶಗೈದು ದೈತ್ಯನ ಶಿರವ ಕತ್ತ-ರಿಸುತಲಿ ನೀನಿತ್ತೆ ವರವವಸುಧೆಯೊಳಗಿಹ ಸುಜನರನು ಮ-ನ್ನಿಸುತಲಿಷ್ಟವನಿತ್ತು ಕರುಣಾ-ರಸದಿ ಸಲಹುವ ಬಿಸಜನಾಭ ಶ್ರೀ-ವೃಷಭಾಚಲವೊಡೆಯ ವೆಂಕಟ 1ಅಂಜನೆಯೆಂಬಳ ತಪಕೆ ಭಕ್ತ-ಸಂಜೀವನೆಂಬ ಶಪಥಕೆರಂಜಿಪ ಪದವಿತ್ತೆ ಮುದದಿ ಖಿಲ-ಭಂಜನಮೂರ್ತಿ ಕರುಣದಿ|ಮಂಜುಳಾಂಗ ಶ್ರೀರಂಗ ಸುರವರಕಂಜಭವವಿನುತಾದಿ ಮಾಯಾ-ರಂಜಿತಾಂಘ್ರಿ ಸರೋರುಹದ್ವಯಅಂಜನಾಚಲವೊಡೆಯ ವೆಂಕಟ 2ಶೇಷನ ಮೊರೆಯ ತಾಕೇಳಿಬಲುತೋಷವ ಮನಸಿನೊಳ್ತಾಳಿದೋಷರಹಿತನೆಂದೆನಿಸಿ ಕರು-ಣಾಶರಧಿಯ ತಾನೆ ಧರಿಸಿಶ್ರೀಶಹರಿಸರ್ವೇಶ ನತಜನ-ಪೋಷ ದುರ್ಜನನಾಶ ರವಿಶತ-ಭಾಸ ಕೌಸ್ತುಭಭೂಷವರಶ್ರೀ-ಶೇಷಾಚಲವಾಸ ವೆಂಕಟ 3ಮಾಧವವಿಪ್ರ ವಿರಹದಿ ಭ್ರಷ್ಟಹೊಲತಿಗಳನು ಸೇರ್ದ ಮುದದಿಸಾದರದಲಿ ನಿನ್ನ ಬಳಿಗೆ ಬರೆನೀ ದಯಾನಿಧಿ ಕಂಡು ಅವಗೆಶೋಧಿಸುತ ಪಾಪಗಳೆಲ್ಲವಛೇದಿ ಬಿಸುಡುತನಿಂದುವೆಂಕಟ-ಭೂಧರದ ನೆಲೆಯಾದ ನಾದವಿ-ಭೇದಬಿಂದು ಕಲಾದಿಮೂರುತಿ 4ಧನಪತಿಯೊಳು ತಾನು ಸಾಲಕೊಂಡಘನಕೀರ್ತಿಯಿಂದ ಶ್ರೀಲೋಲವನಿತೆ ಪದ್ಮಾವತಿಪ್ರೀತ ಭಕ್ತ-ಜನಸುರಧೇನು ಶ್ರೀನಾಥವನಧಿಶಯನ ಮುರಾರಿಹರಿಚಿ-ಧ್ವನಿನಿಭಾಂಗ ಸುಶೀಲ ಕೋಮಲವನಜನಾಭನೀಯೆನ್ನ ಕೃಪೆಯೊಳ-ಗನುದಿನದಿ ಕಾಯೊ ಕೃಪಾಕರ 5ಛಪ್ಪನ್ನೈವತ್ತಾರು ದೇಶದಿಂದಕಪ್ಪವಗೊಂಬ ಸರ್ವೇಶಅಪ್ಪ ಹೋಳಿಗೆಯನ್ನುಮಾರಿಹಣ-ಒಪ್ಪಿಸಿಕೊಂಬ ಉದಾರಿಸರ್ಪಶಯನ ಕಂದರ್ಪಪಿತ ಭಜಿ-ಸಿರ್ಪವರ ಸಲಹಿರ್ಪ ಕುಜನರದರ್ಪಹರಿಸುತ ಕಪ್ಪಕಾಣಿಕೆಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6ಚಾರುಚರಣತೀರ್ಥವೀಂಟಿ ನಿನ್ನೊ-ಳ್ಸಾರಿ ಬರುವ ಪುಣ್ಯಕೋಟಿಸೇರಿದೆ ಕೊಡು ಮನೋರಥವ ಲಕ್ಷ್ಮೀ-ನಾರಾಯಣನೆನ್ನೊಳ್ದಯವತೋರುನಿರತಸಮೀರಭವ ವರ-ದಾರವಿಂದದಳಾಕ್ಷ ತಿರುಪತಿವೀರ ವೆಂಕಟರಮಣ ಮದ್ಬಹು-ಭಾರನಿನ್ನದು ಪಾಲಿಸೆನ್ನನು7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿಡು ನಾಚಿಕೆಯನು ಉಗ್ಗಡಿಸು ಚಕ್ರಿಯನುಹಿಡಿಯೈ ವೈಕುಂಠ ಚಾವಡಿಯವನಡಿಯ ಪ.ಎಳೆತನ ಯೌವನ ಮುಪ್ಪೆಂದಲಸಿಸಿ ಹೆಬ್ಬುಲಿಯಂಥ ಮೃತ್ಯುಗಂಟಲ ಬಲೆಗೆಸಿಲುಕಿ ಸಿಲುಕಿ ಸಂದುಗಡಿಯದ ಲೇಖವನಳಿಯೆ ರಾಮನ ಪೊಗಳೆಲೆಲೆ ಜೀವವೆ 1ಅಹಂಕಾರ ವಾರಿಧಿಯಲ್ಲೀಸಾಡಿ ಬರೆಬಹಿರ ಸದ್ಗುಣದಿ ನಿರಯಕೆ ಸಾಗದೆಅಹರ್ನಿಶಾಂಬುಜನಾಭನೊಲಿವಂತೆ ಭಕುತಿಯಸಹಸ ಸಾಧಿಸು ಡಂಭವ್ಯಾಕೆನ್ನ ಮನವೆ 2ಯೋಚನೆಗೊದಗದ ಅನಂತ ಮಹಿಮನೆಂದುವಾಚಿಸ್ಯವನ ಕರ್ಮಗುಣ ನಾಮವಲೋಚನ ದಣಿಯೆ ಪ್ರತಿಮೆಯ ನೋಡಿ ಪ್ರಸನ್ವೆಂಕಟಾಚಲಪತಿ ಮುಂದೆ ಕುಣಿದಾಡು ಗಡ 3
--------------
ಪ್ರಸನ್ನವೆಂಕಟದಾಸರು
ಬುದ್ಧಿಯ ಪೇಳೇ ಗೋಪಮ್ಮ ನಿನ್ನಮುದ್ದು ಮಗನ ಲೂಟಿ ಘನವಾದುದಮ್ಮ ಪಸದ್ದು ಇಲ್ಲದ ಹಾಗೆ ಬಂದಾನೆಕದ್ದು ಬೆಣ್ಣೆಯನೆಲ್ಲ ತಿಂದಾನೆಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲುಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ 1ಜಲಜ ಗಂಧಿನಿಯರು ಕೂಡೀ ನಾವುಜಲದೊಳಾಡುವುದನ್ನು ನೋಡೀಜಲಜನಾಭನು ಮರದ ತಲೆಯ ಮೇಲ್ಕಟ್ಟಿದಸುಲಿದಿಟ್ಟ ಸೀರೆಯ ಬಲರಾಮನನುಜ 2ಹಾಲ ಮಾರಲು ಪೋದ ಮಗಳಾ ಕಂಡುಮೇಲೆ ಬೀಳುತ ಮಾಡೆ ಜಗಳಾಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನುಮೂರ್ಲೋಕದೊಡೆಂiÀುಶ್ರೀಲೋಲಗೋವಿಂದ 3
--------------
ಗೋವಿಂದದಾಸ
ಬೇಡುವೆ ನಿನ್ನನು ಜೋಡಿಸಿ ಕರಗಳ |ಕೂಡಲೆ ವರಗಳ | ನೀಡುವದೀಶನೆ ಪನಂದನ ಕಂದ ಮುಕುಂದ ಮುರಾರೆ |ಸುಂದರ ಶುಭಕರ | ಮಂದರೋದ್ಧಾರ 1ಶಂಕರ ಹಿತನೇ ಪಂಕಜನಾಭನೇ |ವೆಂಕಟರಮಣನೆ | ಶಂಖಚಕ್ರಧರನೇ 2ಸುರನರಕಿನ್ನರ| ತುಂಬುರ ನಾರದರ್ |ಪರಿಪರಿಯಲಿ ನಿನ್ನ | ಸ್ಮರಿಸುತಲಿಹರೂ 3ಅಸುರರ ಬಾಧೆಯೊಳ್ | ಸುರರೆಲ್ಲ ಭಜಿಸಲು |ಕುಶಲದಿ ಭಕ್ತರ|ಪೊರೆದೆ | ಗೋವಿಂದನೇ 4
--------------
ಗೋವಿಂದದಾಸ
ಭಾಪು ಹರಿಮತನೆ ಪ.ಭಾಪು ಹರಿಮತಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯು ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ ಅ.ಪ.ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀದ್ಯುಮಣಿಕುಲಮೇದಿನೀಶನ ಪಾದಕೆರಗಿ ಅಂಬೋಧಿದಾಟ್ಯಾಜÕದಿಆ ದಶಾಸ್ಯನ ಲಂಕಾ ದಹಿಸಿ ಜಾನಕೀದೇವಿಯ ಸುದ್ದಿ ಶ್ರೀಧರಗರುಹಿಯೋಧ ಬಾಧಿತರಾದ ಕಪಿಚೇತನದಾಯಕ ತೇ ನಮೊ 1ತುಂಗಗಿರಿ ಶತಶೃಂಗಕೃತ ಸುವಜ್ರಾಂಗ ಅಗ್ನಿಜಾಸಂಗಮತ್ತನೃಪಂಗಳನು ಭುಜದಿಂ ಗೆಲಿದು ಯಜÕ ಸಂಗ್ರಹವ ಪೂರಿಸಿಸಂಗಡಿಸಿದರಿ ಸಂಗರವ ಪೊಕ್ಕುಸಿಂಗಗರ್ಜನೆಯಿಂ ಗದೆಯ ಕೊಂಡುಭಂಗಿಸಿದೆಯೊ ಯುಗ್ಮಾಂಗ ಕೃಷ್ಣ ಸೇವಾಂಗೀಕೃತ ತೇ ನಮೊ 2ತುಚ್ಛರಿಳೆಯೊಳು ಪೆಚ್ಚಿ ಬಗೆ ಬಗೆಕುಚ್ಛಿತಾರ್ಥ ವಿರಚ್ಚಿಸ್ಯಾತ್ಮಗೆಅಚ್ಚುತೈಕ್ಯವ ಉಚ್ಚರಿಸುತಿರೆ ಸ್ವಚ್ಛ ಯತಿರೂಪದಿಮಚ್ಚರಿಪರನು ಕೊಚ್ಚಿ ತಂತ್ರಸಾರಾರ್ಚನೆಯಭೇದ ನಿಶ್ಚೈಸಿದೆ ಶಿರಿಸಚ್ಚಿದಾತ್ಮ ಶ್ರೀವತ್ಸ ಪ್ರಸನ್ವೆಂಕಟೇಚ್ಛಮತ ತೇ ನಮೊ 3
--------------
ಪ್ರಸನ್ನವೆಂಕಟದಾಸರು
ಭಾರತೀರಮಣ ನಂಬಿದೆ ಪಾದವಾರಿಜಾಕರುಣಾ ವಾರಿಧೆ ಯನ್ನನು |ದೂರ ನೋಡದೆ ನಿನ್ನ ಸಾರೆಗರೆದುಭಯ ನಿವಾರಿಸಿ ಸಲಹೋ ಪನೀಲಲೋಹಿತನ ಪಿತನೇ ಗೋಪಾಲನ ಸುತಾ |ಕಾಳಕೂಟ ಪಾನಿ ವಿಶಾಲಾಂಬಕಾ ಮಾರರಿಂದ ||ವೇಳೆ ವೇಳೆಗಳಲ್ಲಿ ವೋಲಗವ ಕೈಕೊಂಬುವ |ಕಾಳೀವಲ್ಲಭಭೇಶಭಾಸ್ಕರರೋಲು ಸನ್ನಿಭ ||ಈ ಲೌಕಿಕ ನರರಾಲಯ ಕಾಯಿಸದೆ |ವಾಲಯ ಸುಮತಿಯ ಪಾಲಿಪುದೊಲಿದು 1ಜಾನಕೀಪತಿ ಸೇವೆ ಮಾಡಿದೈ ಕಾಣೆನೋಪ್ರತಿ|ಯಾ ನಿನಗಾರಾರಾ ಭುವನದೊಳಗೆ ಗಂಧವಹನೆ ||ಮುದ್ರಿಯ ಕೊಂಡು ಕ್ಷಣದೊಳಗೆ ಜಲಧಿಯನ್ನೆ ಹಾರಿದೆ |ಸೀತೆಗುಂಗುರವನ್ನೆ ತೋರಿದೆ ||ಆ ನಗರವನು ದಹನಗೈಸಿ ಬಹು |ದಾನವರನಳಿದು ದಶಾನನನೊದ್ದೆ 2ಪಾಪದೂರನೆ ವೃಕೋದರ ಶ್ರೀ ದ್ರೌಪದೀಶನೇ |ವಿಪಿನಚರಿಸಿ ಕುರುಪತಿಯ ತರಿದು ||ಕ್ಷಿತಿಪರನ್ನು ಬಿಡಿಸಿದೆಯೈ ಪಾಂಡವರ (ಪರಿ) ಪಾಲಕ |ಕೋಪನಾಶನ ಉದ್ಧರಿಸೆನ್ನ ಚಾಪಭಂಜನ ||ಶ್ರೀಪತಿ ದ್ವಯ ಪದ ಆಪಜ ಭಜಿಸುವ |ನೇ ಪರಮೇಷ್ಠಿಯರೂಪಗುಣಾಢ್ಯ 3ದೇಶಿಕೋತ್ತಮ ಮಾರುತಿ ಇಂದಿರೇಶನ ಪ್ರೇಮ |ಸಂಪಾದಿಸಿಕೊಂಡತಿಶಯ ಭಕುತಿಯಿಂದಲೀ ಸಮೀಚೀನವಾಗಿ ||ತ್ರಿಂಶತಿ ಸಪ್ತ ಸಂಖ್ಯಾ ದರುಶನ ಗ್ರಂಥ ವಿರಚಿಸಿ ದು |ರ್ಭಾಷ್ಯವ ಸಂತರಾ ಸಲಹುವರನಾಭಾಸ ಮಾಡಿದೆ ||ವ್ಯಾಸಭಜಕ ನಿನ್ನ ದಾಸನೆನಿಸಿಕೊಳ್ಳೋ4ಅಂಜನಾಸುತ ಪ್ರಾಣೇಶ ವಿಠಲನೆಂಜಲನೊಯ್ಯುತ |ಭುಂಜಿಸಿದಿಯಲೊನಿರಂಜನಕಪಿ ಪ್ರ- ||ಭಂಜನಕೊಡು ಕೃತಾಂಜಲಿಯಿಂ ಬೇಡುವೆ |ಕಂಜನಾಭನ ಸ್ಮರಣೆ ದಿವಾ ಸಂಜೆಯಲಿಘನ||ಪುಂಜ ಸುಗುಣಮಣಿ ಮಂಜರಿ ಅರ್ಥ ಪ- |ರಂಜಳ ತಿಳಿಸೋ ಧನಂಜಯ ರಕ್ಷ 5
--------------
ಪ್ರಾಣೇಶದಾಸರು
ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ.ತುಂಗಬಲ ಭದ್ರಾಂಗ ಸದಯಾ-ಪಾಂಗ ಭಕ್ತಜನಾಂಗರಕ್ಷಗೆಅಂಗಜಾರಿ ಕುರಂಗಹಸ್ತಗೆಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1ವಾಮದೇವಗೆ ವಾಸವಾದಿ ಸು-ಧಾಮವಿಬುಧಸ್ತೋಮ ವಿನುತಗೆವ್ಯೋಮಕೇಶಗೆ ಸೋಮಚೂಡಗೆಭೀಮವಿಕ್ರಮಗೆ ಹೈಮವತಿಪತಿಗೆ 2ಪ್ರಾಣಪತಿ ಲಕ್ಷ್ಮೀನಾರಾಯಣ-ಧ್ಯಾನಪರಗೆ ಪಾವಂಜೆಗ್ರಾಮ ಪ್ರ-ಧಾನಪುರುಷಗೆ ದೀನಜನಸಂ-ತಾನಗೀಶಾನಗೆಜ್ಞಾನಿಜಗದ್ಗುರುವಿಗೆ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಗಲ ಮೂರುತಿಗೇ ನಮೋ ನಮೋ ಹರೀಮಂಗಲ ಚರಿತಗೆ ನಮೋ ನಮೋಪರಂಗಾ ಕೃಪಾಂಗಾ ಶ್ರೀರಂಗಾ ನರಸಿಂಹಗೆಅಂಗಾ ಶೃಂಗಾರನಿಗೆ ನಮೋ ನಮೋಅ.ಪಶೇಷಶಯನ ವಿಧೀಶ ಸುರಾರ್ಚಿತಕೇಶವ ತ್ರೈಜಗದೀಶ ಜಲಜನಾಭದಾಸರ ಸಾಸಿರ ದೋಷ ವಿನಾಶನಶ್ರೀಶ ಸಂದೇಶಗೆ ನಮೋ ನಮೋ1ಮಾರಜನಕದೈತ್ಯಾರಿ ಚಕ್ರಾಂಕಿತಸಾರಸಾಕ್ಷ ಯತಿ ವಾರವಂದಿತಚರಣಹಾರಾ ಹೀರಾವಳಿ ಕೇಯೂರವ ಧರಿಸಿದಧೀರ ಉದಾರಿಗೆ ನಮೋ ನಮೋ2ಮಂದರೋದ್ಧರ ಭವಬಂಧ ವಿಮೋಚನಇಂದಿರೆಪತಿ ಮಂದಾಕಿನಿಪಿತ ದೇವಾಸಿಂಧುಮಂದಿರದಲಿ ನಿಂದ ಗೋವಿಂದಗೆನಂದನ PÀಂದಗೆ ನಮೋ ನಮೋ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಂಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7ಪೊಂಗೊಳಲೂದುತ ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
--------------
ಪ್ರಸನ್ನವೆಂಕಟದಾಸರು
ಮಂಗಳ ಮುಖ್ಯ ಪ್ರಾಣೇಶಗೆ ಜಯಅಂಜನಾದೇವಿಯ ಕಂದಗೆ ಮಂಗಳಅತಿ ಬಲವಂತ ಶ್ರೀಭೀಮಗೆ ಮಂಗಳಸೀತಾದೇವಿಯ ಬಾಲಗೆ ಮಂಗಳ
--------------
ಗೋಪಾಲದಾಸರು
ಮಂಗಳಾರತಿ ಕೀರ್ತನೆಗಳು259ಮಂಗಳಂ ಜಯ ಮಂಗಳಂ | ಜಯಮಂಗಳಂಪರಮೇಷ್ಟಿಜನಕ ಉಪೇಂದ್ರಾ ಪವೇದ ಉದ್ಧಾರ ಶ್ರೀಬಾದರಾಯಣಮಧು |ಸೂದನ ಅಮರರ ಕಾಯ್ದ ದಯಾಬ್ಧೀ 1ನಂದಗೋಪಾತ್ಮಜಸಿಂಧೂರಪಾಲ ಮು- |ಕುಂದಪಾಲಿಪುದೆನ್ನ ಇಂದೀವರಾಕ್ಷಾ 2ತುಂಗವಿಕ್ರಮನೆ ಕಾಳಿಂಗ ಮರ್ದನ ದೇವಾ |ಗಂಗ ಜನಕ ಶ್ರೀವಿಹಂಗವಾಹನನೇ 3ಸಣ್ಣರೂಪದಿ ಬಲಿಯನ್ನು ತುಳಿದ ಶ್ರೀ ವಾ- |ಮನ್ನ ಕ್ಷಿತಿಪಹರ ವನ್ನಜನಾಭಾ 4ಪ್ರಾಣೇಶ ವಿಠಲ ಶ್ರೀಮಾನಿನಿಪ್ರತಿಶತ|ಮೀನಾಂಕಲಾವಣ್ಯಭಾನುಪ್ರಕಾಶಾ 5
--------------
ಪ್ರಾಣೇಶದಾಸರು
ಮನವೆ ಚಂಚಲ ಮತಿಯ ಬಿಡು - ನಮ್ಮ |ವನಜನಾಭನ ಪಾದಭಜನೆಯಮಾಡುಪ.ಬಡಮನುಜಗೆ ಬಾಯಬಿಡುವ ದೈನ್ಯದಲವನ |ಅಡಿಗಳಿಗೆರಗಲು ಕೊಡುವನೇನೊ ||ಕಡಲಶಯನ ಜಗದೊಡೆಯನ ನೆನೆಯಕ್ಕೆ - |ಪಿಡಿದು ತಾ ಸಲಹುವ ಬಿಡದಲೆಅನುಗಾಲ1ಬಲ್ಲಿದ ಭಕುತರ ಬಲ್ಲವ ಬಹುಸಿರಿ |ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗುನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2ಮುಗಿಲು ಮೇಲದೆಗಡೆ ಅಗಣಿತವಾದಾಪ - |ತ್ತುಗಳು ಬಂದಡರಲು ನಗುತಲಿರು ||ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |ಪೊಗಳುತ ಬಾಳು ನೀ ಅಘಗಳ ಗಣಿಸದೆ 3ಆವಾವ ಕಾಲಕೆ ದೇವನಿಚ್ಛೆಯಿಂದ |ಆವಾವುದು ಬರೆ ನಿಜಸುಖವೆನ್ನು ||ಶ್ರೀವರ ಅನಾದಿಜೀವರ ಕ್ಲಪ್ತದಂತೆ |ಈವನು ನಿಜಸ್ವಭಾವ ಬಿಡದೆನಿತ್ಯ4ಕೇಶವಾಚ್ಯುತ ಶ್ರೀನಿವಾಸ ಮುರಾರೇ |ದೋಷರಹಿತ ದೀನ ಪೋಷಕನೆನ್ನು ||ಮೋಸಗೊಳಿಪ ಭವಪಾಶವ ಖಂಡಿಪ |ಶ್ರೀಶ ಪುರಂದರವಿಠಲನು ಜಗಕಿರೆ 5
--------------
ಪುರಂದರದಾಸರು
ಮನವೆ ಶ್ರೀನಾರಾಯಣನನು ಸ್ಮರಿಸದೆಮಾಯಾಪಾಶಕೆ ಸಿಲುಕುವರೇ ಪ.ವನಜನಾಭನ ಪದ ವನರುಹಯುಗ್ಮವಅನುದಿನನೆನೆಯದೆ ಒಣಗುವರೇವನಿತಾಲಂಪಟನಾಗುತ ಸಂತತಮನಸಿಜಯಂತ್ರಕೆ ಮನಮರಗುವರೇ ಅ.ಪ.ತುಂಡು ಸೂಳೆಯರ ದುಂಡುಕುಚವ ಪಿಡಿದುಗಂಡಸುತನವನು ಕೆಡಿಸುವರೆದಂಡಧರನ ಬಾಧೆ ಹೆಂಡತಿಯನು ಪಡಕೊಂಡು ವೇದನೆಯನು ತಾಳುವರೆಕಂಡು ಕಂಡು ನೀ ಗುಂಡಿಗೆ ಬಾಳ್ವರೆಹೆಂಡಿರ ಸುಖರಸ ಉಂಡರು ಸಾಲದೆ 1ಬಂದ ಸುಖಕೆ ನೀ ಮುಂದುವರೆಯುತಲಿಮಂದಅಸಮ ದುಃಖ ತಾಳುವರೇಬಂದುದೆನ್ನ ಕಣ್ಣ ಮುಂದೆಯನುಭವಿಪೆಎಂದಿಗೆನ್ನಾಜೆÕಯು ಬಂದಪುದೋ ನಿಜ 2ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹಪಟ್ಟ ಭಾಗ್ಯವನೆಲ್ಲ ತೋರೊ ನೀನುಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ-ನಷ್ಟು ಸುಖವನ್ನು ಕಾಣೆನಿನ್ನುಇಷ್ಟಾರ್ಥಗಳೆಲ್ಲ ದೊರೆಕುವುದೈಪರಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3ವಿಷಯ ಪಳಂಚಿತನಾಗುವ ಸಂತತಪಂಚಡಕೀರನು ಆಗುವರೇಮುಂಚೆ ಮಾಡಿದಕರ್ಮಸಾಲದೆಂದೆನುತಲಿಸಂಚಿತಪಾಪವ ಸಂಗ್ರಹಿಸುವರೇಚಂಚಲಾಕ್ಷಿಯರ ಚಪಲದ ಮಾತನುವಂಚನೆ ಎಂಬುದು ತಿಳಿಯದೆ ಇರುವರೆ 4ಸಾರಿಸಾರಿ ಕೈ ಮುಗಿದು ಬೇಡುವೆನು ವಿ-ಕಾರ ದುರ್ಬುದ್ಧಿಯ ಬಿಡು ಎಂದುಭಾರಿ ತಪ್ಪುಗಳ ಕ್ಷಮಿಸಿಕಾವಲಕ್ಷ್ಮೀನಾರಾಯಣ ನೀನೇ ಗತಿಯೆಂದುಪಾರಮಾರ್ಥಿಕ ವಿಚಾರವ ಮಾಡುತಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ