ಒಟ್ಟು 39871 ಕಡೆಗಳಲ್ಲಿ , 136 ದಾಸರು , 11580 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕು ಸಾಕು ರಂಗನಾಥ ಮನುಜ ಜನ್ಮವು ಲೋಕ ದೊಳಗೆ ಜನಿಸಲಾರೆ ಸಾಕು ಭವದಬೇಗೆಯಿನ್ನು ಬೇಕು ನಿನ್ನ ನಾಮವೊಂದೆ ಸಾಕುರಂಗ ಪಾಲಿಸೋ ಪ ಸುದತಿ ಸುತರ ಪೊರೆವುದಕ್ಕೆ ತಿರುಗಿ ಹೋಯಿತು ಸದನಕೈದಿ ಬರಲುಹಸಿದು ದಣಿದುಸ್ನಾನ ಜಪವ ತೊರೆದು ಕುಡಿದು ತಿಂದು ಒಡಲ ಹೊರೆದು ಬಿಟ್ಟುದಾಯಿತು1 ಕೊಂಡ ಭ್ರಷ್ಟ ಹಣವ ಕೊಟ್ಟು ಹೋಗು ಎಂಬುದಾಯಿತು ಕಷ್ಟ ಬೇಡವೆಂದು ಗಡುವ ಕೊಟ್ಟು ಕಳುಹಲವರ ಬಳಿಕ ಹೊಟ್ಟೆ ಹಸಿದು ನೇಮಗಳನು ಬಿಟ್ಟುದಾಯಿತು 2 ಮನೆಯ ಮಾಡಿಯಿರಲು ತಿಂದು ಅಸ್ತಿಮಾಂಸವನ್ನು ಅಂದ ಗೆಡಿಸಿತು ಹಿಂದೆ ಹಮ್ಮಿನೊಳಗೆ ತಂದು ತಿಂದುದನ್ನು ನೆನೆದು ನೆನೆದು ಮಂದನಾಗಿ ಮುಂದೆ ಗತಿಯು ಕುಂದಿಹೋಯಿತು 3 ಕಣ್ಣು ಕಾಣ ಬೆನ್ನದುಡುಗಿ ಬಣ್ಣಗೆಟ್ಟು ದಂತಬಿದ್ದು ಉಣ್ಣಲಿಕ್ಕು ಆಗದಾಗಿ ಕಿವಿಯು ಕೇಳದಾಯಿತು ತಿಣ್ಣ ಯಮನ ದೂತಬಂದು ಎನ್ನ ಕೊರಳ ಎಳೆಯುವಾಗ ಅಣ್ಣ ತಮ್ಮದಿರರು ಬೆನ್ನ ಬರುವರಿಲ್ಲವೋ 4 ಮುಪ್ಪು ಹರಯ ಬಾಲಕತ್ವ ಒಪ್ಪದಿಂದ ಮರಳಿಮರಳಿ ಬಪ್ಪ ಭವದ ಶರಧಿಗೊಂದು ತೆಪ್ಪವಿದ್ದಿತು ಅಲ್ಪಹೊತ್ತು ಆದರೇನು ಚಿಪ್ಪಳಿಯ ಗೋಪಿವರನ ಸ್ವಲ್ಪಮಾತ್ರ ಭಜಿಸೆ ಜನ್ಮ ತಪ್ಪಲಾಯಿತು 5
--------------
ಕವಿ ಪರಮದೇವದಾಸರು
ಸಾಕು ಸಾಕು ವಿಮಲಾಂಗ ಕಾಕುಮನುಜರ ಸಂಗ ಪ ಬೇಕು ನಿಮ್ಮಯ ಚರಣದಾಸಜನರ ಸಂಗ ಲೋಕೇಶ ಕರುಣಿಸಿ ನೂಕು ಕುಜನಸಂಗ 1 ವಾಕರಿಸುತ್ವಮನ ಲೋಕರ ಗೆಳೆತನ ಶೋಕಾಬ್ದಿ ಕಡೆತನ ಲೌಕಿಕ ಬಲು ಹೀನ 2 ತಡೆಯದೆ ಈ ಕೇಡು ದೃಢದಿ ಬೇಡುವೆ ನಾ ಜಡಜಾಕ್ಷ ಶ್ರೀರಾಮ ಬಿಡಿಸು ಜನನ ಮರಣ 3
--------------
ರಾಮದಾಸರು
ಸಾಕು ಸಾಕು ಸವಿದಟ್ಟಿತು ನನಗೀಗ ಸಾಕಾಯ್ತೀ ಸಂಸಾರದ ಸುಖವು ಪ ಸಂಜೀವನದ ಅಮೃತವ ನಾಕಂಡಮೇಲೆ ಗಂಜಿಗಾಸೆ ಮಾಡುವೆನೆ ರಂಜಿತ ಚಿದಾನಂದವನು ಕಂಡಮೇಲೆ ಗುಂಜಿನ ಮೈಸುಖವೆ ಪೇಳೋ 1 ಹಾಲ ಸಮುದ್ರವ ಕಂಡಮೇಲೆ ಪಶು ಜಾಲವ ಬಯಸುವೆನೆ ಪೇಳೋ ಲಾಲಿಸಿ ಚಿದಾನಂದವ ಕಂಡಮೇಲೆ ಜಾಳು ವಿಷಯದ ಚಿಂತೆಯೇ ಪೇಳೋ 2 ಪರುಷದ ಪರ್ವತವ ನಾಕಂಡಮೇಲೆ ಸಿರಿ ಬೇಕೆಂಬಂಧ ಚಿಂತೆಯೇ ಪೇಳೋ ಪರಮಾತ್ಮ ಸಿದ್ಧಸಿದ್ಧವ ಕಂಡೆ ಗುರು ಚಿದಂಬರನ ನಿನ್ನೇತರ ಚಿಂತೆ ಪೇಳೋ 3
--------------
ಕವಿ ಪರಮದೇವದಾಸರು
ಸಾಕು ಸಾಕು ಸ್ವಾಮಿ ಸಂಸಾರವು ಪ ಸಾಕಿದರೊಳು ಲೇಶ ಸೌಖ್ಯವು ಕಾಣೆನು ಬೇಕು ನಿನ್ನ ಪಾದಭಜನೆ ನಿರಂತರ ಅ.ಪ ಚತುರಶೀತಿ ಲಕ್ಷಯೋನಿಗಳಲಿ ಪು- ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1 ಮಾಂಸರಕ್ತ ಪೂರಿತ ಕೂಪದಿ ನವ- ಮಾಸ ಮಾತೃಗರ್ಭಯಾತನೆಯಿನ್ನು 2 ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು ಗೋಲಿ ಗಜ್ಜುಗಗಳಾಡಿದ ಆಟವು 3 ಗರ್ವದಿಂದ ಮೈಮರೆತು ತಿರುಗುವುದು 4 ಸೇರಿ ಇರುವ ಕೌಮಾರಾವಸ್ಥೆಯು 5 ಕಿವಿಗಳು ಕೇಳದು ಕಣ್ಕಾಣದು ಬಾಂ- ಧವರಧೀನದಲಿ ಬಾಳುವ ಕಷ್ಟವು 6 ಮರಣವಾದ ಮೇಲೆ ನರಕವು ಸ್ವರ್ಗವು ಧರಣಿಯಲಿ ಪುಟ್ಟುವುದೋ ತಿಳಿಯದು 7 ಎಂತಾದರು ನಿನ್ನವರೊಳಿಡು ಸದಾ ಪಂಥವೆ ದೀನರ ಮೇಲೆ ದಯಾನಿಧೆ 8 ಭಾಗ್ಯವಲ್ಲಿ ಹನುಮಂತನೊಡೆಯ ಶರ- ಣಾಗವÀತ್ಸಲ ಗುರುರಾಮವಿಠಲ9
--------------
ಗುರುರಾಮವಿಠಲ
ಸಾಕು ಸಾಕೊ ನಿನ ಸಂಗ ಶ್ರೀಕಾಂತ ನೃಹರಿ ಯಾಕಿಂತು ನಿರ್ದಯವೊ ಭಕ್ತರೊಳು ನಿನಗೆ ಪ. ಕರಿಗಿರಿ ಶಿಖರದಲಿ ನೆಲಸಿರುವ ನೃಹರಿಯೆ ಗುರುಗಳು ಸಹಿತದಲಿ ನಿನ್ನ ಗಿರಿ ಏರಿ ಪರಮ ಸಂತೋಷದಲಿ ದರುಶನಕೆ ನಾ ಬರಲು ಸಿರಿಸಹಿತ ಪವಡಿಸಿ ಕದವ ಹಾಕಿಸಿದೆ 1 ಬಂದ ವರ ಭಕ್ತರಿಗೆ ಸಂದರುಶನವ ಕೊಡದೆ ಮಂದಿರದ ಬಾಗಿಲ್ಹಾಕಿಸಿದೆಯಲ್ಲೊ ದೇವ ಇಂದೆನ್ನ ಮನಕೆ ಪರಿತಾಪವನೆ ಕೊಟ್ಟೆ ಚಂದವೇ ನಿನಗಿನ್ನು ಮಂದರೋದ್ಧರನೆ2 ನಿನ್ನ ದರುಶನ ಕೊಡದ ಘನ್ನ ಪಾಪವನೆ ನಾ ಮುನ್ನೇನ ಮಾಡಿದೆನೊ ಪನ್ನಗಶಯನ ಎನ್ನ ಕೊರಗಿಸುವುದು ಇನ್ನು ನಿನಗೆ ಹಿತವೆ ಮನ್ನಿಸಿ ಸಲಹಬೇಕಿನ್ನು ಶ್ರೀ ಹರಿಯೆ 3 ಕದವೇಕೆ ಹಾಕಿಸಿದ್ಯೊ ಪದುಮನಾಭನೆ ದೇವ ಒದಗಿ ಬಹ ಭೃತ್ಯರನು ಒದೆದು ನೂಕಿ ಯದುವೀರ ನಿನಗಿನ್ನು ಎಷ್ಟು ನಿದ್ರೆಯೊ ಕಾಣೆ ಕದನವಾಡುವೆ ನಿನ್ನೊಳು ಪ್ರಹ್ಲಾದವರದ 4 ವರಭಕ್ತರು ಕಾದಿರಲು ದರುಶನ ಕೊಡದೆ ನೀ ಸಿರಿಸಹಿತ ಪವಡಿಸಿದೆ ಘನವೆ ನಿನಗಿನ್ನು ಸುರವಂದ್ಯ ಗೋಪಾಲಕೃಷ್ಣವಿಠ್ಠಲ ಹೃದಯ ಅರಮನೆಯೊಳು ನೆಲಸಿ ಸಲಹಯ್ಯ ಸತತ 5
--------------
ಅಂಬಾಬಾಯಿ
ಸಾಕು ಸ್ವಾಮಿ ಲೋಕವಾಸವು ಪ ಬೇಕು ನಿಮ್ಮ ಚರಣಸೇವೆ ಲೋಕದಿಂದ ಪಾರು ಮಾಡೆನ್ನ ಅ.ಪ ಕಷ್ಟದಿಂದಿನ್ನು ಜೀವಿಸಲು ನಾ ನೆಷ್ಟು ಪಾಪವ ಮಾಡುವೆನೊ ಇಷ್ಟೆ ಸಾಕಯ್ಯ ಕಷ್ಟನಿವಾರ ಸೃಷ್ಟಿಯಿಂದೆನ್ನ ಪಾರುಮಾಡೊ 1 ಹಲವು ಭ್ರಾಂತಿಗಳಲಿ ನಾನು ತೊಳಲಿಬಳಲಿ ಚಲನೆಗೆಡುತ ದುರಿತ ಸಾಕೈ ಇಳೆಯಿಂದೆನ್ನನು ಗೆಲಿಸು ದೇವ 2 ಸಕಲವಿಧದಿ ದು:ಖರೂಪ ಕಾಕುಸಂಸಾರ ಬಲು ತಾಪ ಭಕುತಜನಪ್ರಿಯ ಮುಕ್ತಿಸೋಮ ಮುಕುತಿ ಕರುಣಿಸು ನಿರುತ ಶ್ರೀರಾಮ 3
--------------
ರಾಮದಾಸರು
ಸಾಕುಮಾಡಿಸಭವ ಕಾಕುಜನರ ಸಂಗವ ಬೇಕು ನಿಮ್ಮ ಚರಣಧ್ಯಾನ ಲೋಕದವರ ಗೊಡವಿನ್ನೊಲ್ಲೆ ಪ ಖ್ಯಾತಿವಂತರೆಂದು ಬರಿದೆ ಮಾತಿನಿಂದ ಪೇಳುತಿನಿತು ನೀತಿಮಾರ್ಗವರಿಯಧಮ ಜಾತೀಹೀನರ ಜತೆ ಜನ್ಮಕೆ 1 ಕೆಟ್ಟಗುಣದ ರಾಶಿ ಮೊಟ್ಟೆ ಹೊಟ್ಟೆಯೊಳಗೆ ಇಟ್ಟುಕೊಂಡು ಶ್ರೇಷ್ಠರಂತೆ ನಟಿಸಿ ಪರರಿಗರಿಷ್ಟವರಿಪದುಷ್ಟರ ಗೋಷ್ಠಿ 2 ನಿತ್ತು ಕಾಯೋ ಕರುಣದೆನ್ನ ಮುಕ್ತಿದಾತೆನ್ನಯ್ಯ ರಾಮ 3
--------------
ರಾಮದಾಸರು
ಸಾಕೇತಪುರ ವಾಸಿ ಕಪಟವೇಷ | ಶ್ರೀಕಮಲನಾಭನ ನಖದಲಿ ಕಾಶೀ ಪ ವಿಶ್ವತೋಮುಖ ಬ್ರಹ್ಮ ವಿಶ್ವತೋಚಕ್ಷು | ವಿಶ್ವ ವಿಶ್ವಬಾಹು ವಿಶ್ವರೂಪ ರೂಪ || ವಿಶ್ವ ಬ್ರಹ್ಮಾಂಡ ಆಧಾರ ಕಾರಣ | ವಿಶ್ವೇಶ್ವರ ಪ್ರಾಣ ಮಂತ್ರ ರಾಮ ರಾಮ 1 ಪರಿಯಂತ ರೋಮಕೂಪ | ಅಗಣಿತ ಕಮಲಜ | ಹಸ್ತಿ ಚರ್ಮಾಂಬರರು ಇದ್ದು ನೆಲೆಗಾಣರು | ನಾಸ್ತಿ ವಿಷ್ಣು ಪರದೈವ ಇಹಪರದಲಿ2 ಕಷ್ಟವಿಲ್ಲದೆ ಮಕ್ಕಳಾಟಕೆ ತ್ವರದಿಂದ | ಸೃಷ್ಟಿಸುವ ಕಣ್ಣು ಎವೆ ಹಾಕುವ || ಅಷ್ಟರೊಳನೇಕ ಬ್ರಹ್ಮಾಂಡ ನಾಟಕ | ವಿಷ್ಣು ಕರ್ಮಾಣಿ ಪಶ್ಯತೆ ಪಶ್ಯತೆ 3 ನಿತ್ಯ ತೃಪ್ತಿ ನಿರಾಹಾರಿ ನಿತ್ಯಾನಂದ | ಮೃತ್ಯು ಹಾ ಕಾಲಪ್ರಮಾಣ ಪರುಷಾ || ಶರಧಿ | ಸತ್ಯ ಸಂಕಲ್ಪ ನಿಷ್ಠನಾಹಂತೆ 4 ಅಜನಯ್ಯ ಅದ್ಭುತ ಮಹಿಮ ಪುರುಷೋತ್ತಮ | ಭುಜಧರನಯ್ಯಯಾ | ಅಮಿತಕಾಯಾ | ವಿಜಯಸಾರಥಿ ವಿಚಕ್ಷಣ ದೀಪ್ತ ಮೂರುತಿ | ಭುಜಗಂಗಿರಿ ವಿಜಯವಿಠ್ಠಲ ವೆಂಕಟೇಶಾ 5
--------------
ವಿಜಯದಾಸ
ಸಾಕೇತಾಧಿಪ ಸತ್ವಸ್ವರೂಪ ಶ್ರೀಕರರೂಪ ಜಿತಕೋಪ ಪ ಕರಧೃತಚಾಪ ಖಂಡಿತತಾಪ ಪರಂತಪ ಪಾಹಿ ಕವಿಜನಾಲಾಪ 1 ಅರಿಜನ ಭೀಕರ ಕರಿವರ ಶ್ರೀಧರ ವರದಾಭಯಕರ ಪರಮಕೃಪಾಕರ 2 ಇನಕುಲಮಂಡನ ಭಕ್ತಾರ್ತಿಭಂಜನ ವನರುಹಲೋಚನ ಭವಬಂಧಮೋಚನ 3 ಕ್ಷಿತಿನಾಥ ರಾಘವ ಸತತ ಸುವೈಭವ ನುತಶೇಷಗಿರೀಧವ ವಿಜಿತಮನೋಭವ 4
--------------
ನಂಜನಗೂಡು ತಿರುಮಲಾಂಬಾ
ಸಾಕೊ ರಂಗ ಅರಸುತನ ಯಾಕೊ ಯಾಕೊಗೋಕುಲದ ಗೊಲ್ಲರು ನುಗಿಸಿ ಗಲ್ಲವ ಹಿಂಡಿಕಾಕು ಮಾಡಿದ್ದು ನಿನಗೆ ಬೇಕೊ ಬೇಕೊ ಪ. ರುದ್ರ ಬ್ರಹ್ಮ ಹತ್ಯಾಕಾರ ಕ್ಷುದ್ರ ಬಲೀಂದ್ರನು ಕದ್ದೊಯ್ದ ಸುವರ್ಣ ಮುಕುಟವಕದ್ದೊಯ್ದ ಸುವರ್ಣ ಮುಕುಟವ ಬಲರಾಮ ಮಧ್ಯಪಾನಿ ಎಂದು ನುಡಿದನು ನುಡಿದನು 1 ಮಗನ ಮಗನು ಬಲು ಕೊಂಡೆಗಾರನಾದ ಮಗಳ ಮಗ ನಿನ್ನ ಹಣಿಗಚ್ಚಿದ ಮಗಳ ಮಗ ನಿನ್ನ ಹಣಿಗಚ್ಚಿದ್ದು ಕಂಡುನಗತಾರೊ ನಿನ್ನ ಸರಿಯವರು ಸರಿಯವರು2 ಶುಕ ಪಿತೃದ್ರೋಹಿ ಪ್ರಲ್ಹಾದ ಭ್ರಾತೃದ್ರೋಹಿ ವಿಭೀಷಣಭ್ರಾತೃದ್ರೋಹಿ ವಿಭೀಷಣ ಇವರು ಮುಖ್ಯಪಾತ್ರರೊ ನಿನ್ನ ಕರುಣಕೆ ಕರುಣಕೆ3 ಸ್ವಾಮಿದ್ರೋಹಿ ಅಕ್ರೂರ ಗುರು ದ್ರೋಹಿ ಪ್ರಲ್ಹಾದ ಬ್ರಾಹ್ಮಣರ ದ್ರೋಹಿಗಳು ಯಾದವರು ಬ್ರಾಹ್ಮಣರ ದ್ರೋಹಿಗಳು ಯಾದವರು ನಿನ್ನ ಮುಖ್ಯಪ್ರೇಮಕ್ಕೆ ವಿಷಯರೊ ವಿಷಯರೊ4 ದುರುಳ ಶಿಶುಪಾಲನ ಸಭೆಯೊಳು ಬೈದದ್ದುಸರಿಬಂತೆ ರಾಮೇಶನ ಮನಸಿಗೆ ಮನಸಿಗೆ 5
--------------
ಗಲಗಲಿಅವ್ವನವರು
ಸಾಗರ ಸ್ಥಿತನಿಲಯ ಭೋಗೀಶ ಕೃತಶಯ್ಯ ವಾಗೀಶಸಂಸೇವ್ಯ ಭಜಕಭಾವ್ಯ ಅನಘ ಕರುಣಾಪಾಂಗ ಮಂಗಳಾಂಗ ಆದಿನಾರಾಯಣಾ ಆನಂದ ಪರಿಪೂರ್ಣ ಆಪನ್ನಿವಾರಣಾ ಅಪ್ರಮೇಯ ಸುರವಿರೋಧಿಕೃತಾಂತ ಸುರರಾಜವÀಂದಿತ ಧರಣೀ ಸುರಾರ್ಚಿತ ದಿವ್ಯಚರಿತ ಮುರಾರಿ ವಿನುತಾದ್ಭುತ ಪ್ರಭಾವ ಸ್ಮರತಾತ ಸ್ಥಿತಿಕರ್ತ ನಿತ್ಯವಿಭವ ವರಶೇಷಗಿರಿವಾಸ ಶ್ರೀನಿವಾಸ
--------------
ನಂಜನಗೂಡು ತಿರುಮಲಾಂಬಾ
ಸಾಗರಕನ್ನಿಕೆಯ ಪ್ರಾಣಮನೋಹರ ಪ ಕಿಂಕರೋದ್ಧಾರಣ ಜಿಂಕೆಸಂಹರಣ ಲಂಕಾಪುರನಾಶನ ಶಂಖ ಚಕ್ರಧಾರಣ ಶಂಕರಾದಿವಂದನ ಪಂಕಜನಯನ 1 ತಾಪತ್ರನಿರ್ಮೂಲ ಪಾಪಮೋಚನ ಶೀಲ ಗೋಪೇರಾನಂದ ಲೀಲ ಗೋಪಾಲಬಾಲ ಪಾಪಿಜನಕುಲಕಾಲ ಆಪತ್ತಿನಲ್ಲನುಕೂಲ ದ್ರೌಪದಿಯ ಪರಿಪಾಲ ಶ್ರೀಪತಿಯ ವಿಠಲ 2 ದೀನಜನಮಂದಾರ ಧ್ಯಾನಿಪರ ಪ್ರಿಯಕರ ಜ್ಞಾನಿಗಳ ಆಧಾರ ವನಮಾಲಧರ ಬಾಣಾರಿ ಧುರಧೀರ ಭಾನುಕೋಟಿ ಪ್ರಭಾಕರ ಜಾನಕೀರಮಣ ಶ್ರೀರಾಮಪ್ರಭು ಸುಂದರ 3
--------------
ರಾಮದಾಸರು
ಸಾಗಿ ಬಾರಯ್ಯ ನೀ | ಬಾಗಿ ನಮಿಸುವೇಯೋಗಿಗಳರಸನೇ ಶ್ರೀನಿವಾಸ ಪ ಭೋಗಿಶಯನನೆ ನಿನ್ನ ಭಾಗವತರು ಬಂದುಜಾಗು ಮಾಡದೆ ನಿನ್ನ ಬಾಗಿಲೊಳು ನಿಂತಿಹರೋ ಅ.ಪ. ಇಂದಿರೇ ರಮಣಗೋವಿಂದ ನೀನೇ ಗತಿಯೆಂದು ಭಜಿಸುತಿರಲುಆನÀಂದದಿಂದತÀಂದೆಯ ಬಾಧೆಗೆ ತಂದು ತೋರಲು ಸ್ತಂಭ ತಂದೆ ತಾಡನೆಯ ಮಾಡಲುಬಂದೆಯಾ ಪರಿಪರಿ ವಿಧ ಭಯದಿಂದವೋಡಲು ಬಂದು ಅಸುರನ್ನಆರ್ಭಟಿಸಿ ಕೆಡಹುತಛಂದದಲಿ ಬಗೆಯುತಸುರನ್ನ ಕೊರಳೊಳು ಮಾಲೆ ಅಂದು ಧರಿಸಿದ ಅಧಿಕ ಸಂಪನ್ನಪ್ರಳಯಾಗ್ನಿಯಂತಿರೆ ನಿನ್ನ ಸ್ತುತಿಸಲು ಅರಿಗೊಸೆದಿನ್ನು ಅನುತಿರಲುನಿನ್ನಯಮುಂದೆ ಭಜಿಸುತ ಕಂಡು ಬರಲಾನಂದದಿಂದಲಿ ಚಂದದಿ ಸಲಹಿದಾನಂದದಲಿ ಮಂದರೋದ್ಧರ ಎನ್ನ ಸಲಹೋ 1 ಮೃಗ ಬೇಡಲು ಬಾಣ ಎಸೆಯಲು ಅದು ಲಕ್ಷ್ಮಣಾಯೆಂದು ಕೂಗಲುಮತ್ತಾತ ಪೋಗಲು ಇತ್ತ ರಾವಣನು ಕರೆದೊಯ್ಯೆ ಸತಿಯಳ ವಾತಸುತ ತಾನೆನಿಸೇ ನೀ ಮುನ್ನಾ ಅವ ಪೋಗೆ ಉಂಗುರ ಖ್ಯಾತಿಯಿಂದಲಿನೀಡಲದಕಿನ್ನು ತನುಮನದ-ಲತಿ ಭೋಗದಿ ಶಿಖೆಯ ಶಿರೋಮಣಿಯನ್ನೆ ಕೊಡಲನುಗ್ರಹದಲಿಛಾತಿಯಿಂದಲಿ ಅವಗೆ ವಿಧಾತ ಪದವಿಯ ಪಾಲಿಸಿದೆ ಜಗನ್ನಾಥಇಂದ್ರಾದ್ಯಮರ ವಂದಿತ ವೀತಭಯ ಜಗನ್ನಾಥ ಸಲಹೋ2 ಮಂಗಳಾಂಗನೆ ನಿನ್ನ ಸುಖವ ಕೊಟ್ಟು ಅಂಗನೆಯರಬಾಧೆಬಿಡಿಸೊ ಇಂದುಅಂಗನೇಯರು ಬಂದು ಭಂಗಪಡಿಸಲದಕೆ ಪೋಗುತಾ ಮಾರನ್ನಬಾಧೆಯ ಕಳೆಯುತಾಪರಿಪರಿಯ ಸುಖಗಳ ಸಂಗಡಿಲ್ಲದೇ ನೀಡಿಯೊ ಮಲ್ಲಮರ್ದನನೇ ಎನುತಿರೆಬೇಗದಿಂದಲಿ ಓಡಿಪೋದೆಲ್ಲೊ ಭಕ್ತರನು ಸಲಹುವೆನೆಂಬೋಬಿರುದು ನಿನಗೆ ಉಂಟಲ್ಲಾಅನುತಿರಲು ನಿನ್ನಯ ಎನ್ನ ಮನ ಉತ್ತಂಗಸುತಸತ್ಸಂಗ-ವೀವುದು ವಿಹಿತ ದೇವನೇತುರಂಗನಾಥನೇ ರಂಗವಿಠಲನೆ ದೇವ ದೇವರ ದೇವ ಸಲಹೋ3
--------------
ಶ್ರೀಪಾದರಾಜರು
ಸಾಗಿ ಬಾರೈಯ ನೀನು, ಗೋವಿಂದ ವೆಂಕಟ ಪ ಸಾಗಿಬಾರೈಯ ಭವರೋಗದ ವೈದ್ಯನೆ ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು ಭಾಗೀರಥಿಪಿತ ಭಾಗವತರ ಸಂ ಯೋಗರಂಗ ಉರಗಗಿರಿ ವೆಂಕಟ ಅ.ಪ. ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ ರಥಾಂಗಪಾಣಿಯೆ ದಶರಥ ನೃಪಬಾಲ ಪಾರ್ಥಗೆ ಒಲಿದವನ ರಥವ ನಡಿಸಿ ಅತಿ- ರಥ ಮಹರಥರ ವಿರಥರ ಮಾಡಿ ಗೆಲಿಸಿದೆ ಪ್ರಥಮ ದೈವವೆ ಮನ್ಮಥಪಿತ ದೈತ್ಯರ- ಮಥನ ಭಕ್ತರ ಮನೋರಥನೆ ತಾರಾ- ಪಥವರ್ಣನೆ ತವ ಕಥಾಶ್ರವಣದಲಿ ಸು- ಪಥವನು ತೋರಿಸು ಪ್ರಥಮಾಂಗದೊಡೆಯ 1 ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ- ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ- ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ- ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ- ಯಿಲ್ಲವೊ ನೋಡಲು ಸಲ್ಲುವುದೋ ಬಿರು- ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು ವಿಶ್ವ 2 ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ- ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ- ತ್ತುಮ್ಮಾನೇಕ ಗುಣಮಹಿಮ ವಿಭೂಷಿತ ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ ಸಮುಖನಾಗುತ ಸುಮ್ಮನೆ ಬಾ ಬಾ ಸಿರಿ ವಿಜಯವಿಠ್ಠಲ ಅನು- ಪಮ್ಮಚರಿತ ಪರಬೊಮ್ಮ ತಿರುಮಲೇಶ 3
--------------
ವಿಜಯದಾಸ
ಸಾಗಿ ಬಾರೋ ಲೇಸಾಗಿ ಬಾರೋ ಘನತ್ಯಾಗಿ ಬಾರೋ ಬಾಗಿ ನಮಿಪೆ ಜಗನ್ನಾಥಾರ್ಯ ರಥವೇರಿ ಪ ಜಂಭಾರಿ ಕುಜದಂತೆ ಹಂಬಲವನ್ನು ತುಂಬಿಕೊಂಡಿರುವಂಥ | ಗುರುಕರು ಣಾಂಬುಧಿ ಸ್ತಂಭದಿ ಪೊರೆಮಟ್ಟು ಸಂಭ್ರಮದಿ 1 ಭಾಗವತರು ಮುಂಭಾಗದಲಿ | ಕುಣಿಯುತಲಿ ರಾಗಾಲಾಪಗಳಿಂದ ಹರಿನಾಮ ಪಾಡುತಲಿ ಪಥ ಕಾಯುವರು 2 ಪೊಡವಿ ಸುರರ ಕೂಡಿ ಎಡಬಲದಿ ಸಡಗರದಿ ಬಿಡದೆ ವೇದಂಗಳ ಪಠಿಸುತ ಭಕ್ತಿಯಲಿ ಒಡೆಯ ನಿನ್ನಾಗಮನ ನೋಡುವರು | ಗತಿ ಬೇಡುವರು 3 ಪಾಡಿ ಪೊಗಳುವರ ಕಾಯುವ | ಮೂಢರನು ಓಡಿಸುವಲ್ಲಿ ನಿನಗೀಡ್ಯಾರೋ ರೂಢಿಯೊಳು ನೋಡಿ ದಯದಿಂದ ನೀ ನೋಡಿ ಗುರುರಾಯ 4 ಭೂಮಿ ವಿಬುಧರಿಗೆ ನೀ ಮಾಡಿದುಪಕಾರ ನಾ ಮರೆಯಲಾರೆನು ಎಂದೆಂದು | ಗುರುರಾಯ ನಾ ಮರೆಯ ಲಾರೆನು ಎಂದೆಂದು ಜಗದೊಳಗೆ ಶಾಮಸುಂದರನ ಪ್ರಿಯದಾಸ | ರಥವೇರಿ 5
--------------
ಶಾಮಸುಂದರ ವಿಠಲ