ಒಟ್ಟು 3122 ಕಡೆಗಳಲ್ಲಿ , 120 ದಾಸರು , 2350 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ಗುರುರಾಜ ಪ ಭಾಸುರ ಪಂಪಾ ತುಂಗಾ ತೀರವಾಸ | ಪಾಲಿಸೊ ತವದಾಸ ಅ.ಪ. ರತಿಪತಿ ಜನಕನ ವರ ಶಯ್ಯಾಂಶದಲಿ | ವಾಯ್ವಾವೇಶದಲಿ ಜನಿಸುತ ಮೋದದಲಿ ವಿತತನು ವಿಷ್ಣುವು ವಿಶ್ವದೊಳೆನುತಲಿ | ಅತಿಶಯ ಭಕ್ತಿಯಲಿ ಪಿತಗೆ ತೋರ್ದ ಪ್ರಹ್ಲಾದನೆ ಹಿತದಲ್ಲಿ | ಅವತರಿಸಿದೆ ಇಲ್ಲಿ 1 ಧರೆಯೊಳಗೆ ಪ್ರಖ್ಯಾತ ಪರಮಾತ್ಮನ ಪದಶರಣ ವ್ಯಾಸಯೋಗಿ | ಯೆನಿಸುತಲಿ ವಿರಾಗಿ ತರತಮ ಪಂಚಕ ಪ್ರಭೇದವ ಸ್ಥಾಪಿಸಲು | ದುರುಳರ ಖಂಡ್ರಿಸಲು ಪರಿಪರಿ ಶಾಸ್ತ್ರವ ಶ್ರೀ ಪಾದರಾಯರಲಿ | ಓದಿದ್ಯೊ ಭಕ್ತಿಯಲಿ 2 ಪುರಂದರ ಕನಕರಿಗೆ ಆದರದಿಂದಲಿ ಬೋಧಿಸಿ ತತ್ವವನು | ಮಾಡಿ ಪುನೀತರನು ವೇದಶಾಸ್ತ್ರ ತರ್ಕಾದಿ ಗ್ರಂಥಗಳಲಿ | ಕೋವಿದರರಸುತಲಿ ನೀ ದಯದಿಂದಲಿ ಸೇರಿಸಿ ಪರಿಷತ್ತು | ಭಾವಿಸಿ ವಿದ್ವತ್ತು 3 ಅರ್ಥಿಕಲ್ಪಿತ ವರ ಕಲ್ಪವೃಕ್ಷವಾಗಿ | ನಿತ್ಯದಿ ಮಹಯೋಗಿ ಪ್ರಥ್ಯರ್ಥಿ ಮದಕರಿ ಪಂಚವಕ್ತ್ರನಾಗಿ | ಪ್ರತ್ಯಕ್ಷದಿ ತಾಗಿ ಹೊರ ಚೆಲ್ಲುತೆ ನೀನು ಸ್ತುತ್ಯ ಕೃಷ್ಣ ಭೂಮೀಂದ್ರನ ಕುಹುಯೋಗ | ಪರಿಹರಿಸಿದೆ ಬೇಗ 4 ವ್ಯಾಸಾಂಬುಧಿಯನು ಕಟ್ಟಿ ಖ್ಯಾತನಾಗಿ | ದಾಸರ ಚನ್ನಾಗಿ ಪೋಷಿಸುತಲಿ ಶ್ರೀ ಶೇಷಗಿರಿಗೆ ಬಂದು | ಶ್ರೀಶನಲ್ಲಿ ನಿಂದು ಪಡುತ ಹನ್ನೆರಡು ವರುಷ ದೇಶ ದೇಶದಲಿ ಆಶುಗಿಯನು ನಿಲಿಸಿ | ಶಿಷ್ಯರಿಗನುಗ್ರಹಿಸಿ 5 ಕಾಶಿ ಗಧಾಧರ ವಾಜಪೇಯಿ ಲಿಂಗ | ಮಿಶ್ರರು ನರಸಿಂಗ ವಾಸುದೇವ ಪುರಿ ಈಶ್ವರ ಪಂಡಿತರ | ವಾದದಿ ಬಿಗಿವರ ಜೈಸಿ ತಂದ ಜಯ ಪತ್ರಗಳನು ಮುದದಿ | ಶ್ರೀನಿಧಿಗರ್ಪಿಸಿದಿ ಶ್ರೀಸತ್ಯಾ ರುಕ್ಮಿಣಿ ವೇಣುಗೋಪಾಲರನು | ಸ್ತುತಿಸಿ ಪಡೆದೆ ನೀನು 6 ನ್ಯಾಯಾಮೃತ ಬಿಚ್ಚಿ ಚಂದ್ರಿಕೆಯನು ತಂದೆ ಆಯದಿ ಬುಧಮನ ತಾಂಡವಾಡುವಂತೆ | ತರ್ಕತಾಂಡವವಿತ್ತೆ ಕಾಯಜಪಿತ ಶ್ರೀಕಾಂತನ ಸೇವಿಸುತ | ಸುಖಿಸುವೆ ನೀ ಸತತ 7
--------------
ಲಕ್ಷ್ಮೀನಾರಯಣರಾಯರು
ನಮೋ ನಮೋ ನಂದಕುಮಾರ ನಿನ- ಗೆದುರ್ಯಾರೊ ಯದುಕುಲ ವೀರ ಭಜಿ- ಸುವ ಭಕ್ತ ಜನರುದ್ಧಾರ ಮಾಡೊ ಪರಮ ದಯಾಳು ನೀ ಸರ್ವ ಸ್ವತಂತ್ರ ನಿನ್ನ ಧ್ವಜ ವಜ್ರಾಂಕುಶ ರೇಖಾ ವೆಂಕಟಾದ್ರೀಶ ನಮೋ ನಮೋ ಪ ಶ್ರೀಶ ಜಗದ್ಭರಿತ ನೀನು ಒಂದು- ಕಾಸಿಗ್ವಿಷಯಗಳಲ್ಲ ನಾನು ನಿನ್ನ ದ(ರ್ಶ)ನ ಹಾರೈಸುವೆನು ಪರಮ ನುಗ್ರ(ಹ)ದಿ ಪಾಲಿಸೋ ನೀನು ಹರೇ ದೋಷರಹಿತ ಎನ್ನ ದೋಷನಾಶನ ಮಾಡಿ ಶೇಷಶಯನ ಶ್ರೀನಿವಾಸ ನೀ ದಯಮಾಡೊ1 ಬಾಯಿ ಬೀಗವನ್ಹಾಕಿ ಚರಿಯೆ ಗಂ- ಡಾರತಿ(?) ಶಿರದ ಮೇಲ್ಹೊರೆಯೆ ನಿನ್ನ ನಾಮವ ಕೊಂಡಾಡಲರಿಯೆ ಪಾದ- ಚಾರ್ಯಾಗಿ ಬರುವುದೀಪರಿಯೆ ತಿಳಿದು ಮಾನ್ಯದೊಕ್ಕಲು ಎಂದು ಬಹುಮಾನದಿಂದಿಟ್ಟು ಮಾಧವ ಕರುಣದಿ 2 ಬಾಡಿಗಿದ್ದರಾಯನ್ಹಿಡಿಯ (?) ನಿನ್ನ ಅನುಮತಿಲ್ಲದೆ ದಾರಿ ನಡೆಯ ಬ್ಯಾಡ ಬಿಡು ಲೋಭಿತನವ ಎ- ನ್ನೊಡೆಯ ಬಿಡದೆ ಕಾಡುತ ಕಾಸು ಕವಡೆ ಕಡ್ಡಿ ಕಣಜಕ್ಕೆ ಈ ಪರಿ ಗಳಿಕೆ ದೇಶದ ಮೇಲೆ ಕಾಣೆನು 3 ಮುಡಿಪು ಬೇಡುವುದ್ಹೇಳೊ ಎಷ್ಟು ನಿನ್ನ ಬಡಿತ ತಡೆಯಲಾರೆ ಪೆಟ್ಟು ಮಡಿ ಮೈಲಿಗೆಂದರೆ ಅತಿಸಿಟ್ಟು ನಾ ಬಿಚ್ಚಾಡುವೆನೊ ಬೀಡ ಬಿಟ್ಟು ಪ ್ರ- ಸಾದ ತೀರ್ಥ ಬೇಕಾದರೆ ಕ್ರಯಕಟ್ಟಿ ಗಂ- ಟ್ಯಾರಿಗೆ ಮಾಡುವಿ ಹೇಳೆನಗೊಂದಿಷ್ಟು 4 ಸತಿಗೆ ಮಾಡುವೆ ಲಕ್ಷ್ಮೀಪತಿಯೆ ನಿನ ಸುತ ಸತ್ಯಲೋಕದಧಿಪತಿಯೆ ಅತಿ ಹಿತ ಭಕ್ತರಿಗೆ ಭಿಕ್ಷೆಗತಿಯೇ ನೀಡಲು ಧನವೊಲ್ಲದೆ ಬೇಡುವರೊ ಸದ್ಗತಿಯ ನಿನ- ಗತಿಯಾಸೆ ಘನತ್ಯಲ್ಲ ಗತಿಪ್ರದಾಯಕ ಕೇಳೊ ಪೃಥುವೀಶ ನಿನ್ನದಲ್ಲವೆ ಸಕಲೈಶ್ವರ್ಯ 5 ಕನಕಗಿರಿದೊರೆಯೆಂಬೊದೆಲ್ಲೊ ಬಂದ ಜನಕೆ ಅನ್ನವ ನೀಡಲೊಲ್ಲ್ಯೊ ಜಗ- ಜನಕ ನಿನ್ನನು ಕಾಣಲಿಲ್ಲೋ ನಾನಿ- ರ್ಧನಿಕನೆಂಬುವುದು ನೀ ಬಲ್ಲ್ಯೊ ಎನ- ಗನುಕೂಲ ಧೈರ್ಯವ ಕೊಟ್ಟು ನಿನ್ನ ದರುಶನ ಸನಕಾದಿಗಳೊಡೆಯ ನಿನ್ನ ಮನಕೆ ಬಂದರೆ ನೀಡೊ6 ಶಂಕರ ಸುರರಿಂದ್ವಂದಿತನೊ ನಾ ಕಿಂಕರ ನರರಿಂದ ನಿಂದಿತನೊ ನೀ ಮಂಕುಜನರ ಪಾಪ ಪರಿಹಾರಕನೊ ಹರೇ ಶಂಖ ಚಕ್ರಾಂಕಿತ ಭೀಮೇಶಕೃಷ್ಣನ ನಾಮ ಶಂಕೆಯಿಲ್ಲದೆ ಕೊಟ್ಟು ವೆಂಕಟ ದಯಮಾಡೊ 7
--------------
ಹರಪನಹಳ್ಳಿಭೀಮವ್ವ
ನಮೋ ನಮೋ ನಾರಾಯಣ ಸನ್ನುತ ಸುಗುಣ ಗುಣಾರ್ಣವ ಸುಮನಪತಿ ಶ್ರೀ ಭೂದುರ್ಗಾರಮಣ ಮಾಂಪಾಹಿ ಪ ಲೋಕೇಶ ವಿಧಾತಜನಕ ರ ತ್ನಾಕರಮಥನ ಜಗದಾಘಪಹ ಶ್ರೀಕಂಠ ಪಿತಾಮಹ ಮದನನೇಕ ಸುಲಾವಣ್ಯ ಆಕಾಶ ತರಂಗಿಣಿ ಪಿತ ಕರುಣಾಕರ ಕೌಮೋದಕಿಧರ ಧರಣಿ ಕುವರಾಂತಕ ಕರುಣದಿ ಚಿತ್ತೈಸು ನೀ ಹಸಿಗೆ ಶೋಭಾನೆ 1 ಅರದೂರಾಬ್ಜ ಭವಾಂಡೋದರ ಶರಣಾಗತ ಸವಿ ಪಂಜರ ಅಂ ಬರ ಭೂ ಪಾತಾಳದಿ ವ್ಯಾಪ್ತಾ ಜರಮೃತ್ಯು ವಿದೂರ ಕರಿವರ ಪ್ರಭಂಜನ ಪೀತಾಂ ಬರಧರ ಖಳಕುಲವನ ವೈಶ್ವಾ ನರ ನಾರದನುತ ಮಹಿಮನೆ ಚಿತ್ತೈಸು [ಹಸೆಗೆ] 2 ಸತ್ವರಜಸ್ತಮ ಜೀವರ ತತ್ ಸಾಧನವರಿತವರಗತಿ ಗ ಳಿತ್ತು ಪೊರೆವ ವಿಬುಧವರದ ವರಸತ್ಯವತಿ ಸೂನು ಉತ್ತಮ ಪುರುಷನೆ ಚೇತನ ಜಡದ ತ್ಯಂತವಿಭಿನ್ನ ವಿಜಯ ಸಖ ಸತ್ಯಸುಕಾಮ ಕಮಲನಯನನೆÉ ಚಿತ್ತೈಸೊ [ಹಸೆಗೆ]3 ವಾಸವತನುಸಂಭವ ಸಾರಥಿ ವೀಶುದ್ಭುಜ ವಿಧೃತ ಸುದರ್ಶನ ದಶಾರ್ಹ ದಿವಕರನಿಭ ಸಂಕಾಶÀ ಸುಭದ್ರಾತ್ಮಾ ವಾಸುಕಿ ಪರ್ಯಂಕಶಯನ ಹರಿ ವ್ಯಾಸಕಪಿಲ ದತ್ತಾತ್ರಯ ಮಹಿದಾಸ ವೃಷಭರೂಪ ರಮೆಯರಸ ಚಿತ್ತೈಸು [ಹಸೆಗೆ]4 ಪಾಂಡವ ಸಖ ಪತಿತ ಸುಪಾವನ ಚಂಡಾಂಶು ನಿಶಾಕರ ಪಾವಕ ಮಂಡಲದೊಳಗತಿ ಬೆಳಗುವ ಕೋದಂಡ ಧೃತ ಕರಾಬ್ಜ ಕುಂಡಲ ಮಂಡಿತ ಗಂಡಸ್ಥಳ ಖಂಡಮಹಿಮ ಖೇಚರ ಪುರಹರ ಗಂಡುಗಲಿ ಜಗನ್ನಾಥ ವಿಠಲ ಚಿತ್ತೈಸೋ [ಹಸೆಗೆ]5
--------------
ಜಗನ್ನಾಥದಾಸರು
ನಮೋ ನಮೋ ನಾರಾಯಣನೇ ಓಂ ನಮೋ ಚನ್ನಕೇಶವನೆ ಪ ಅಚ್ಯುತ ಪಾದದಿ ಸೇರಿಸೊ ಅನಂತ ಅ.ಪ ನಮೋ ನಮೋ ವೆಂಕಟರಮಣನೆ ಸಂಕಟಹರಿಸೋ ಶ್ರೀವರನೆ 1 ನಮೋ ನಮೋ ವರದರಾಜನೆ ವರವ ನೀಡೋ ಪುರುಷೋತ್ತಮನೆ 2 ನಮೋ ನಮೋ ಶ್ರೀರಂಗನಾಥನೆ ಸುರಕ್ಷೆಯ ಕೊಡೊ ಭಕ್ತವತ್ಸಲನೆ 3 ನಮೋ ನಮೋ ಸಂಪತ್ಕುಮಾರನೆ ಸಂಪತ್ತನು ಹರಿಸೋ ಶ್ರೀಹರಿಯೆ 4 ನಮೋ ನಮೋ ಮುದಿಗೆರೆ ರಂಗನೆ ಮುದದಿ ಕಾಪಾಡೋ ಮಾಧವನೆ 5 ನಮೋ ನಮೋ ಯದುಗಿರಿ ಚಲುವನೆ ಸದಯದಿ ಸಲಹೋ ದಾಮೋದರನೆ 6 ನಮೋ ನಮೋ ಜಾಜಿಪುರೀಶನೆ ನೀ ಜೋಪಾನಮಾಡೆನ್ನ ಪರಮಪಾವನನೆ 7
--------------
ನಾರಾಯಣಶರ್ಮರು
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ನರರಿಗೆಲ್ಲಿಯ ಭವಬಂಧ ಜ್ಞಾನಿಗಳಾದನರರಿಗೆಲ್ಲಿಯ ಭವಬಂಧತರಣಿಬಿಂಬವ ತಮಮುಸುಕಲು ಬಲ್ಲುದೆಹರಹರ ಪಾಹಿ ಶಂಕರ ರಾಮೇಶ್ವರನೆಂಬ ಪ ಸರಸಿಜಾಪ್ತನ ಕರಗಳೊಳು ಬಲುಪರಮಾಣುಗಳು ವರ್ತಿಸುವೊಲುಪರಿಪೂರ್ಣಬ್ರಹ್ಮವೊಂದರೊಳು ಬ್ರಹ್ಮಾಂಡಗಳಿರುವವನಂತ ಕೋಟಿಗಳೆಂದು ತಿಳಿದಂಥಾ1 ಬಿಂದಿಗೆ ಬಿಲುಬಿಲೆ(?) ಗಳನಂದುನಬಂದಂತೆ ಸೃಜಿಸಿ ಮತ್ತದನುಪೊಂದಿಸುವಂತೆ ವಿಶ್ವವನು ಪುಟ್ಟಿಸಿ ಲೀಲಾಸ್ಪಂದದಿಂದಡಗಿಪನೀಶನೆಂದರಿದಂಥಾ2 ವಿರುಪ ಕಾಂಚನಮೋರಂತೆ ನಾನಾಪರಿಯ ಆಭರಣವಾದಂತೆಪರಮಾತ್ಮನೋರ್ವನನೇಕನಾಮಂಗಳಧರಿಸಿಹ ಸರ್ವವು ಬ್ರಹ್ಮವೆಂದರಿದಂಥಾ3 ಇರುವುದೀಲೋಕದೊಳೆರಡು ತಮ್ಮ ಸಂಗಡಬರುವುದು ಪರಲೋಕಕೆರಡುಇರುವುದನೇ ಇಟ್ಟು ಬರುವುದು ಬಯಸುತಪರಹಿತಚರಿತದಿ ನಿರುತ ವರ್ತಿಸುವಂಥ4 ಸಾಸಿರದಳ ಕಮಲದೊಳ್ ಇಹಭಾಸುರ ಪ್ರಣವ ಪೀಠದೊಳುಈ ಸಕಲಕೆ ಸಾಕ್ಷಿಕನಾದ ಕೆಳದಿ ಪು-ರೇಶ ರಾಮೇಶನ ನಿರತ ಧ್ಯಾನಿಸುವಂಥಾ5
--------------
ಕೆಳದಿ ವೆಂಕಣ್ಣ ಕವಿ
ನರಸಿಂಗಪುರ ವಾಸ | ಕಯಾಧು ಶಿಶುಪೋಷಕರುಣಾಮಯ ಸುವಪುಷ | ಪರಿಪಾಲಿಸು ಮೇಶ ಪ ಶರಧಿಜೆ ಲಕುಮೀಶ ಮೃತ್ಯುಂಜಯಗೆ ಬಿಂಬಶರಣ ಜನಾಬ್ದಿ ಭೇಶ | ಸರಸಿಜ ಭವಾದೀಶ ಅ.ಪ. ಕೃಷ್ಣಾತೀರ ವಾಸ | ಕೃಷ್ಣೆಯ ಮಾನ ಪೋಷಜಿಷ್ಣು ಸಾಹಸ ಭಾಸ | ವೃಷ್ಣಿ ಕುಲಕೆ ಭೂಷ 1 ಕೋಳ ನೃಹರಿ ಕಾಯಿ 2 ಶುಭ ಕಾಯ ಹೇಮ ಕಶಿಪು ಕಾಯನೇಮದೊಳಗೆ ಶೀಳ್ದ | ಕಾಮಿತ ಫಲಪ್ರದ 3 ಕಾಡುವ ರಕ್ಕಸನ | ಒಡಲ ಶೀಳಲು ಬಾಹುಷೋಡಶ ಧರಿಸಿದ | ಗಾಢ ಕಾರಣವೇನೊ 4 ದರ್ಶದಿನದೊಳಾ | ದರ್ಶ ದಾಸರ ದಿನ ದರ್ಶನ ನೀನಿತ್ತು | ಸ್ಪರ್ಶ ಪೂಜೆಯ ಕೊಂಡೆ5 ಜ್ವಾಲಾ ನೃಕೇಸರಿ | ಹಾಲಾಹಲವು ಭವಜಾಲ ದೊಳ್ಹಾಕದಿರು | ಕೇಳುವೆ ವರ ನಿನ್ನ 6 ಗೋವರ್ಧನೋದ್ದರ | ಗೋವ್ಗಳ ಪಾಲ ಗುರುಗೋವಿಂದ ವಿಠಲನೆ | ಭಾವದೊಳಗೆ ತೋರೊ 7
--------------
ಗುರುಗೋವಿಂದವಿಠಲರು
ನರಹರಿ ದೀನದಯಾಳೊ ನರಹರಿ ಪ ನರಹರಿ ಕಾಯೊ ನೀಯೆನ್ನ | ಮಹಾ ದುರಿತಂಗಳ ಮರಿಯೊ ಮುನ್ನ | ಆಹ ಪರಮ ಭಕುತಿಲಿ ನಿನ್ನ ಚರಣಾರಾಧನೆ ಮಾಳ್ಪೆ ವರಭಯ ಹಸ್ತವೆನ್ನ ಸಿರದಲಿಡುತಲಿ ಅ.ಪ. ಹಿಂದೆ ಪ್ರಹ್ಲಾದದೇವನಂದು | ಪಿತನ ಬಂಧನದೊಳು ಸಿಲ್ಕಿ ಬಹುನೊಂದು | ತಾನು ಸಂಧ್ಯಾಕಾಲದೊಳಾಗ ನಿಂದು ನಿನ್ನ ಒಂದೇ ಮನದಿ ಸ್ತುತಿಸೆ ದಯಸಿಂಧು | ಆಹ ಮಂದಮತಿಯ ಹಿರಣ್ಯಕನುದರವ ಬಗೆದು ಛಂದದಿ ಕರುಳ ಮಾಲೆಯ ಧರಿಸಿದ ಧೀರ 1 ಕಂದು ಕೊರಳನಂತರ್ಗತದೇವ | ಸಕಲ ವೃಂದಾರಕ ವೃಂದವ ಕಾವ | ಭಕುತ ಸಂದಣಿಗೆ ಬೇಡಿದನೀವ | ಭವ ಬಂಧನವೆಂಬ ವಿಪಿನಕೆ ದಾವ | ಆಹ ಎಂದಿಗೆ ನಿನ್ನಯ ಸಂದರುಶನವೀವೆ ಮಂದಮತಿಯಾದೆನ್ನ ಮುಂದಕೆ ಕರೆಯೊ 2 ನೊಂದೆ ಸಂಸಾರದೊಳು ಮಾಲೋಲ | ಕರುಣ ದಿಂದ ನೋಡೆನ್ನ ದೀನಜನಪಾಲ | ದಿವ್ಯ ಸುಂದರ ಮೂರುತಿಯೆ ಗೋಪಾಲ | ಪವನ ವಂದಿತ ಶ್ರೀ ರಂಗೇಶವಿಠಲ | ಆಹ ಬಂದೆನ್ನ ಹೃದಯಮಂದಿರದಿ ನೆಲೆಯಾಗಿ ನೀ ನಿಂದು ಸಲಹೋ ಎನ್ನ ಕುಂದುಗಳೆಣಿಸದೆ 3
--------------
ರಂಗೇಶವಿಠಲದಾಸರು
ನರಹರಿಯ ಹೊರತಿನ್ನಾರಿಗಿಲ್ಲವೋ ಸ್ವತಂತ್ರದಾವುದು ಇಲ್ಲವೊ ನರರಿಗೆ ಸ್ವತಂತ್ರ ಪ ಗಳಿಸಿದ ಧನವು ನಳಿನಾಕ್ಷೀಯರಿಗೀವ ಸೆಳೆದು ವಯ್ಯುವಾಗುಳೀವರಿಲ್ಲವೋ 1 ನಾನು ನನ್ನದೆಂಬುವ ಈ ದೇಹವು ಹಾನಿಯಾಗುವಾಗದನ್ನುಳಿಸುವ ಸ್ವತಂತ್ರ 2 ಜೀವವು ಕಾಯವ ತ್ಯಜಿಸಿ ಪೋಗುವಾ ಗಾವಾಪ್ತರಿಗವನ್ನುಳಿಸಿಕೊಳ್ಲುವ ಸ್ವತಂತ್ರ 3 ಮಾಡಿದ ಧರ್ಮಾಕರ್ಮವೆಜೀವನ ಕೂಡ ಮಂತ್ರ ಸಂಗಡ ಬಾಹುದು 4 ದೋಷ ರಹಿತ ಹನುಮೇಶವಿಠಲನೇ ಈಶನೆಂದು ನಿಜ ದಾಸನಾಗೋ ಸ್ವತಂತ್ರ 5
--------------
ಹನುಮೇಶವಿಠಲ
ನರಿತಿಹರಾರಿಹರು || ಪರತರಪಾವನನು ಪ ಭಗವದ್ರೂಪನು| ತ್ರಿಗುಣಾತ್ಮಕನು| ಜಗದಾಧಾರಕನು || ಜಗನ್ನಿವಾಸನು| ಜಗದಾನಂದನು| ಜಗದೀಶನು ನೀನು 1 ಜಗನಿಯಾಮಕ | ಜಗದುದ್ಧಾರಕ | ತ್ರಿಜಗವಿರಾಜಿತನು|| ಅಗಣಿತಮಹಿಮನು| ನಿಗಮಗೋಚರ | ತ್ರಿಜಗದ್ವಂದಿತನು2 ಭಕ್ತಾನಂದನು| ಭಕ್ತಾಧೀನನು| ಭಕ್ತಪರಾಯಣನು 3 ಶರಣಾಗತಪರಿ | ಪಾಲಕ | ನೀನು| ಕರುಣಾಸಾಗರನು|| ಪರಬ್ರಹ್ಮನು | ಪರಂಜ್ಯೋತಿಯು | ಪರಮಾತ್ಮನು ನೀನು4 ನಿನ್ನಯ ನಾಮೋ| ಚ್ಚರಿಸಿದ ಪಾಮರ | ಪಾವನನಾಗುವನು|| ನಾಮಾಮೃತವನು | ಸೇವಿಸೆ ಬ್ರಹ್ಮಾ| ನಂದವ ಪೊಂದುವನು5
--------------
ವೆಂಕಟ್‍ರಾವ್
ನರ್ತನಶಾಲೆ ಇದೇನಯ್ಯ ವರ್ತುಳವಾದ ಭೂಮಂಡಲವೆಲ್ಲಾ ಪ ಕರ್ತನೀನೇ ಚಕ್ರವರ್ತಿಯಾಗಿರುವೆ ವರ್ತನೆ ಗಡಿಬಿಡಿ ಮಾಡದಿರಯ್ಯ ಅ.ಪ ಕುಂಟರು ಕುರುಡರು ನರ್ತನೆಗೈವರು ನೆಂಟರು ಭಂಟರು ನರ್ತಿಸುತಿರುವರು ಗಂಟನುಂಗುವರೂ ನರ್ತಿಸುತಿಹರೋ1 ವರ್ತಕ ಲಾಭಕೆ ನರ್ತಿಸುತಿಹನು ಆರ್ತ ದರ್ಶನಕಾಗಿ ನರ್ತಿಸುತಿಹನು ನರ್ತನೆ ಮಾಂಗಿರಿಪತಿ ಕೃಪೆಗೈಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಲಿದೈತಾರೆಂಬೆ ಹೇ ಜಗದಂಬೆ ನಾಂ ಬೇಡಿಕೊಂಬೆ ಪ. ಒಲಿದೈತರೆ ನೀ ನಲವೇರುತ ನಾ ನಲಿದಾರಾಧಿಪೆ ಎನ್ನೊಲಿದಂಬೇ ಅ.ಪ. ಸಿಂಧುನಂದನೆ ಅರವಿಂದನಯನೆ ಇಂದುಸೋದರಿ ಸಿಂಧುರಗಮನೆ ಸುಗುಣಾಭರಣೆ ವಂದಿಪೆ ಶರದಿಂದುವದನೆ ಸುರ ವಂದಿತಚರಣೆ 1 ಅಂದಿಗೆ ಕಾಲುಂಗುರ ಘಲಿರೆನೆ ಇಂದಿರೆ ತವಪದದ್ವಂದ್ವವ ತೋರಿ ವಂದಿಸುವೆನ್ನೀಮಂದಿರ ಮಧ್ಯದಿ ಎಂದೆಂದಿಗು ನೆಲೆಸಿರು ನಂದಿನೀ ಜನನೀ 2 ಕ್ಷೀರಾಂಬುಧಿ ತನಯೆ ಸೌಭಾಗ್ಯದ ನಿಧಿಯೆ ಕ್ಷೀರಾಬ್ಧಿಶಯನನ ಜಾಯೆ ಸಾರಸನಿಲಯೆ ವಂದಿಪೆ ತಾಯೆ ಬಾರೆಂದು ಕೈಪಿಡಿದೆಮ್ಮನು ಕಾಯಿ 3 ಸರಸಿಜಾಸನೆ ಸ್ಮರಮುಖ ಜನನಿಯೆ ಸುರನರಪೂಜಿತೆ ನಾರದ ಗೇಯೆ ಸಾರಗುಣಭರಿತೆ ಸರಸಿಜಪಾಣಿಯೆ ಶ್ರೀರಮಣೀ ಪರಿಪಾಲಿಸು ಜನನಿ 4 ಸೆರಗೊಡ್ಡಿ ಬೇಡುವೆ ಶ್ರೀನಾರೀ ನಿನ್ನೆಡೆ ಸಾರೀ ಪರತರ ಸುಖ ಸಂಪದವನು ಕೋರೀ ಪೊರೆ ಮೈದೋರಿ 5 ಪರಿಪರಿ ವಿಧದಾ ಸಿರಿಸಂಪತ್ತಿಯೋಳ್ ಗುರುದೈವಂಗಳ ಸೇವಾವೃತ್ತಿಯೋಳಿರೆ ಕರುಣಿಸು ದೃಢತರ ಭಕ್ತಿಯನೆಮಗೀಗಳ್ ವರಶೇಷಗಿರೀಶನ ಮಡದಿಯೆ ಮುದದೋಳ್ 6
--------------
ನಂಜನಗೂಡು ತಿರುಮಲಾಂಬಾ
ನಲ್ಲೆಯರು ನಮೋ ಎಂಬೆವು ಸುರರಎಲ್ಲರ ಬಲಗೊಂಬೆವು ಪ. ಚಲ್ವೆ ಕಂಗಳೆಯರಿಗೆ ಹೊಲ್ಲವು ಎನುತಿರೆಹೊಲ್ಲ ತನವೆಲ್ಲ ಹೊರಗ್ಹಾಕಿ ಬಾಹೊಅ.ಪ. ಅಗಣಿತ ಮಹಿಮ ಹೌದೆಂದುಅಗಣಿತ ಮಹಿಮಎನುತಿರೆಮಗನ ಮುಂದಾಗಿ ಬಲಗೊಂಬೆ1 ಸಾಗರಶಯನಗೆ ಆಗುವ ಹಾಸಿಗೆ ಬ್ಯಾಗನೆ ವರವ ಕೊಡುವೋನುಬ್ಯಾಗನೆ ವರವ ಕೊಡುವ ನಾಗೇಂದ್ರನಮೋ ಎಂಬÉ ನಮ್ಮ ಗೆಲಿಸೆಂದು 2 ನಂದಿವಾಹನ ಶಿವನ ಮುಂದಾಗಿ ಬಲಗೊಂಬೆ ಇಂದಿಗೆ ಪಂಥಗೆಲಿಸೆಂದುಇಂದಿಗೆ ಪಂಥಗೆಲಿಸೆಂದು ಬ್ರಹ್ಮನ ಕಂದನ ಮೊದಲೆ ಬಲಗೊಂಬೆ 3 ಸೌಪರ್ಣವಾರುಣಿ ಅಪರ್ಣ ದೇವಿಯರು ಸೌಕರ್ಯದಿಂದ ನಮ್ಮ ಪಂಥಸೌಕರ್ಯದಿಂದ ನಮ್ಮ ಪಂಥಗೆಲಿಸೆಂದುಕರವ ಮುಗಿವೆವು ಕ್ಷಣಕ್ಕೊಮ್ಮೆ 4 ಇಂದು ರಾಮೇಶನನುಗಾಲ ನೆನೆಯುತ ಮುಂದಕ್ಕೆ ಹೆಜ್ಜೆನಿಡುವೋಣ5
--------------
ಗಲಗಲಿಅವ್ವನವರು
ನವಖಂಡದ ಸ್ವಾಮಿ ಒಂದು ನಮ್ಮಗೆಲಿಸಲಿಶುಕಬುದ್ಧಿ ಬಾಲೆಯರ ಕುಂದುಗೈಸಲಿ ಪ. ಚನ್ನನಚಾರಿವಾಸ ಮನ್ನಾರಿ ಕೃಷ್ಣನ ಸಹಮುನ್ನ ಪ್ರಯಾಗಿ ಮಾಧವನ ಬಲಗೊಂಬೆವು1 ಇಳಾ ವರ್ತಾ ಭದ್ರಶಾಮ ಈತನ ಬಲಗೊಂಬೆವುನಾವು ಈತನ ಬಲಗೊಂಬೆವು ಅವರು ನಮ್ಮ ಪಂಥ ಗೆಲಿಸೆಂಬೆವು2 ಹರಿ ವರುಷ ಕಿಂಪುರುಷ ಭರತ ಖಂಡದಲ್ಲಿದ್ದಭರತ ಖಂಡದಲ್ಲಿದ್ದ ನರಹರಿಯ ಬಲಗೊಂಬೆ ಪಂಥಗೆಲಿಸುವ ಶುದ್ಧ 3 ಕೇತು ಮೂಲ ಖಂಡದ ಹರಿಯ ಪ್ರೀತಿಲೆ ಬಲಗೊಂಬೆವುಮಾತು ಸೋಲಿಸಿ ಅವರ ನಮ್ಮ ಮಾತುUಲಿಸೆಂಬೆವು 4 ರಮ್ಯಕ್ಕೆ ಹಿರಣ್ಮಯ ಈ ಕುರುಖಂಡವೆಂಬೊಕುರುಖಂಡದಲಿ ರಮಿಸಿ ಅಲ್ಲಿರುವ ರಾಮೇಶನ ಬಲಗೊಂಬೆವು5
--------------
ಗಲಗಲಿಅವ್ವನವರು
ನವವಿಧ ಭಕುತಿ ಶ್ರವಣದಿಂದಲಿ ಪಾಪಹರಣವಾಗುವುದೆಂದು ಕವಿಗಳೆಲ್ಲರು ಕೂಗಿ ಒದರುತಿಹರು ಕಿವಿಗಳಿಗಾನಂದದಾಭರಣದಂತಿಹುದು ಶ್ರೀ- ಹರಿಯ ದಿವ್ಯನಾಮಾಮೃತದರಸವು ಮಾಧವನ ಮೂರ್ತಿಯನು ನೋಡದಿಹ ಕಂಗಳು ನವಿಲು ಕಣ್ಣುಗಳೆಂದು ಪೇಳುತಿಹರು ಕಮಲನಾಭ ವಿಠ್ಠಲನ ಮಹಿಮೆ ಪೊಗಳೆ ಫಣಿರಾಜನಿಗೆ ವಶವಲ್ಲ ದೇವಾ 1 ಕೀರ್ತನವು ಮಾಡಲು ಪಾತಕವು ಪರಿಹರವು ಮಾತುಳಾಂತಕನ ಮಹಿಮೆ ಘನವು ಶ್ರೀಶನನು ಮನದಣಿಯ ಸ್ತೋತ್ರವನು ಮಾಡಲು ನಾಶಗೈವನು ದುರಿತರಾಶಿಗಳನು ಮಾಡಿದಪರಾಧಗಳ ಮಾಧವನು ಮನ್ನಿಸುವ ಶ್ರೀಧರನ ಸ್ತುತಿಸಿ ಕೊಂಡಾಡುತಿಹರ ಕರುಣಾಕರ ಕಮಲನಾಭವಿಠ್ಠಲ ದುರಿತದೂರನು ಕಾಯ್ವ ಶರಣಜನರ 2 ಸ್ಮರಣೆಯನು ಮಾಡುತಿಹ ಮನುಜರಿಗೆ ಇಹಪರದಿ ಪರಮ ಮಂಗಳನೀವ ಪರಮಾತ್ಮನು ದುರಿತ ದೂರನ ಪಾದಸ್ಮರಣೆ ಮಾಡುವರಿಗೆ ಪರಿಪರಿಯ ಸೌಖ್ಯಗಳ ಕೊಡುವ ದೇವ ಮಧುವೈರಿಯನು ಸ್ಮರಿಸೆ ಮುದದಿ ಸಂಪದವೀವ ಮೂರ್ತಿ ಶ್ರೀಮಾಧವ ಕನಕಗರ್ಭನ ಪಿತನು ಕರುಣಾನಿಧಿಯು ಕಮಲನಾಭ ವಿಠ್ಠಲ ಕಾಯ್ವ ಸುಜನರ3 ಶಿಲೆಯಾದ ಅಹಲ್ಯೆಯ ಪರಿಪಾಲಿಸಿದ ಪಾದ ಧರಣಿ ಈರಡಿಗೈದ ದಿವ್ಯಪಾದ ಫಣಿ ಹೆಡೆಯ ತುಳಿದ ಪಾದ ವರ ಋಷಿಗಳೆಲ್ಲ ವಂದಿಸುವ ಪಾದ ಇಂದಿರಾದೇವಿ ಬಹುಚಂದದಿಂದೊತ್ತುತ ಕಂದರ್ಪನಯ್ಯನಿಗೆ ಪಾದಸೇವ ಚಂದದಿಂದಲಿ ಮಾಡಿ ಮಾಧವನಿಗೆ ನಂದಗೋಪಿಯ ಕಂದ ಸಲಹುಎನಲು ಸುಂದರ ಶ್ರೀ ಕಮಲನಾಭ ವಿಠ್ಠಲನು ಒಲಿವ 4 ಅರ್ಚಿಸುತ ಮೆಚ್ಚಿಸುತ ಸಚ್ಚಿದಾನಂದನನು ಸ್ವಚ್ಛ ಭಕುತಿಲಿ ಸ್ತೋತ್ರ ಮಾಡುತಿಹರ ಅಷ್ಟ ಐಶ್ವರ್ಯಪ್ರದನು ನಿತ್ಯಮುಕ್ತಳ ಕೂಡಿ ಭಕ್ತರ ಹೃದಯದಲಿ ಪೊಳೆವ ದೇವ ಸತ್ಯ ಸಂಕಲ್ಪನಿಗೆ ಕಸ್ತೂರಿ ತಿಲಕವು ಮತ್ತೆ ಪಾವಡಿ ಥಳಥಳನೆ ಹೊಳೆಯೆ ಸುತ್ತ ಬ್ರಹ್ಮಾದಿಗಳ ಸ್ತುತಿಗೆ ದೇವ ಚಿತ್ತವಿಟ್ಟು ಕೇಳ್ವ ಮಾಧವನು ಮುದದಿ ಕರ್ತೃ ಕಮಲನಾಭ ವಿಠ್ಠಲನು ಕಾಯ್ವ 5 ವಂದನೆಯನು ಮಾಡೆ ಮುಕುಂದನು ಒಲಿವನು ಮುದದಿ ಕಂದರ್ಪನಯ್ಯ ಕಮಲಾಕ್ಷ ಹರಿಯೂ ಸುಂದರಾಂಗ ಶ್ರೀಹರಿಗೆ ಗಂಧ ಪೂಸಿದಳಾಗ ಇಂದೀವರಾಕ್ಷಿ ನಸುನಗುತ ಬೇಗ ಇಂದ್ರಾದಿ ಸುರರೆಲ್ಲ ಕೊಂಡಾಡೆ ಮಾಧವನ ವಂದಿಸುತ ಸಿರಬಾಗಿ ಚಂದದಿಂದ ಮಂದಾರ ಪಾರಿಜಾತಗಳ ತಂದು ತಂದೆ ಕಮಲನಾಭ ವಿಠ್ಠಲನ ಮುಡಿಗೆ ಸಂಭ್ರಮದಿ ಮಳೆಗರೆಯೆ ಚಂದದಿಂದ 6 ದಾಸ್ಯವನು ಕೈಕೊಂಬ ದಾಸ್ಯಜನರನು ಪೊರೆವ ಮೀಸಲಾಗಿಹನು ಹರಿದಾಸ ಜನಕೆ ಪೋಷಿಸೆಂದೆನುವವರ ದೋಷಗಳನೀಡಾಡಿ ದೋಷರಹಿತನು ಪೊರೆವ ಸರ್ವಜನರ ಪೂಸಿ ಪರಿಮಳ ದ್ರವ್ಯ ಶ್ರೀಸಹಿತ ಮೆರೆವ ವಾಸುಕೀಶಯನ ಸಜ್ಜನರ ಪೊರೆವ ಮುರಳೀಧರ ಮಾಧವನು ಕರುಣದಿಂದ ಶರಣ ಜನರನು ಪೊರೆವ ಮರೆಯದೀಗ ಕಮಲನಾಭವಿಠ್ಠಲನು ಕಾಯ್ವದೇವ 7 ಸಖ್ಯ ಸ್ನೇಹಗಳಿಂದ ಮುತ್ತಿನ್ಹಾರಗಳನು ಕೃಷ್ಣನ ಕೊರಳಿಗ್ಹಾಕುತಲಿಬೇಗ ಅರ್ಥಿಯಿಂದಲಿ ರತ್ನ ಮುತ್ತಿನ ಚಂಡುಗಳ ವಿಚಿತ್ರದಿಂದಾಡುತಿರೆ ನೋಡಿ ಸುರರು ಮುತ್ತಿನಕ್ಷತೆಗಳನು ಮಾಧವನ ಸಿರಿಮುಡಿಗೆ ಅರ್ಥಿಯಿಂದ ಸುರಿಸುತಿರೆ ಹರುಷದಿಂದ ಅಪ್ರಮೇಯನು ಶ್ರೀಶ ಶ್ರೀನಿವಾಸ ಸರ್ಪಶಯನನು ಕಮಲನಾಭ ವಿಠ್ಠಲ ನಿತ್ಯ ತೃಪ್ತನು ಪೊಳೆವ ಭಕ್ತರ ಹೃದಯದಲಿ 8 ನಿತ್ಯ ತೃಪ್ತಗೆ ಮಾಡಿ ಅರ್ಥಿಯಲಿ ಅಪ್ರಮೇಯನನು ಸ್ತುತಿಸಿ ಮುತ್ತು ಮಾಣಿಕ್ಯ ಬಿಗಿದ ತಟ್ಟೆಯಲಿ ತಾಂಬೂಲ ಅಚ್ಚುತಾನಂತನಿಗೆ ಅರ್ಪಿಸುತಲಿ ಭಕ್ತಿಯಲಿ ವಂದನೆಯ ಭಕ್ತವತ್ಸಲನಿಗೆ ನಿತ್ಯ ಮುಕ್ತಳು ಮಾಡಿ ಹರುಷದಿಂದ ಸತ್ಯ ಸಂಕಲ್ಪ ಶ್ರೀ ಮಾಧವನಿಗೆ ಮುತ್ತಿನಾರತಿ ಬೆಳಗಿ ಅರ್ಥಿಯಿಂದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ಕೊಂಡಾಡಿ9
--------------
ನಿಡಗುರುಕಿ ಜೀವೂಬಾಯಿ