ಒಟ್ಟು 1104 ಕಡೆಗಳಲ್ಲಿ , 105 ದಾಸರು , 911 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರಿಯನು ತೋರುತಿಹೆನು ಅದನೀಗನಾರಿ ಎಂದೆಂಬರಯ್ಯಪಸೀರೆ ಕುಪ್ಪಸವನುಟ್ಟುಸಿಂಗರದಿ ತೋರ ಕಂಕಣವನಿಟ್ಟು ಅಯ್ಯಮೂರಳೆಯಕಟ್ಟಾಣಿಕಟ್ಟಿಯೇಮೋರೆ ಮುರಕಿಸುತಿಹುದು ಅಯ್ಯ1ಚಳ್ಳತುಂಬುಗಳಿಂದಚವುರಿ ಬೆಳ್ಳಿಯ ಬಳೆಗಳಿಂದ ಅಯ್ಯಮುಳ್ಳು ಗಜ್ಜೆಗಳ ಧರಿಸಿ ಮನೆಯೊಳಗೆಹಲ್ಲು ಕಡಿಯುತಲಿಹುದು ಅಯ್ಯ2ಓಲೆ ಮಾಡಿಸು ಎಂಬುದುವರಹಕೆ ಬಾಳುವೆ ನೋಡಿರಿ ಎಂಬುದಯ್ಯಹೇಳುವುದು ಕಿವಿಯೊಳಗೆ ಲೋಭಕಾಲು ಕೈ ತಿರುಹುವುದು ಅಯ್ಯ3ಕರೆಕರೆಯ ಮಾಡುತಿಹುದು ತಾಯಿಯಹೊರಡಿಸು ಮನೆಯಿಂದಲೆಂಬುದಯ್ಯಹರನ ಚಿಂತೆಗೆ ಹಾನಿಯು ಇದರಿಂದನರಕ ಬಹಳವ ತಿರುಗುವೆ ಅಯ್ಯ4ನಾರಿಯೆನಿಸಿಹುದೆ ಮೃತ್ಯುಇದನೀಗ ದೂರ ಮಾಡಿದನಾದರೆ ಅಯ್ಯಸೇರುವುದು ಸರ್ವಮುಕ್ತಿಚಿದಾನಂದನಿರೆ ತಾನೆಯಹುದು ಅಯ್ಯ5
--------------
ಚಿದಾನಂದ ಅವಧೂತರು
ಮೀಸಲ ಗುಣದೆಯರನೆಲ್ಲ ಮೋಸಗೈಸಿ ಕೊಳಲನೂದಿರಾಸಕ್ರೀಡೆ ಮಾಡಿದಾಭಾಸಬಹಳಯ್ಯಾ ಪ.ನೀನೆ ಎಂದವರೆದೊಡ್ಡ ಕಾನನದಿ ಬಿಟ್ಟು ಒಬ್ಬಮಾನಿನಿಯಜರಿದುನಡೆದಿ ಇನ್ನೇನು ಉಚಿತವಯ್ಯ ಕೃಷ್ಣ1ಎಳೆಯಬಳ್ಳಿ ಗಿಳಿಪಕ್ಷಿನಳಿನನಾಭನ ಕಂಡಿರೇನನಳಿನಮುಖಿಯರೆಲ್ಲ ತಿರುಗಿ ಬಳಲಿ ನಿಂತಾರೊ ಕೃಷ್ಣ2ಸೂಸು ಮಲ್ಲಿಗೆ ಸಂಪಿಗೆ ಜಾಜಿ ಹಾಸಿಕೆಯ ಮಾಡಿ ಅವಳಸೋಸುಪೂರೈಸುವ ಬಗಿಯು ಶ್ರೀಶ ರಮಸಿದಿಯೋ ಕೃಷ್ಣ3ಚಂದ್ರವದನೆಗೆ ಅಂಗದಲ್ಲಿ ಗಂಧ ಕಸ್ತೂರಿ ಕುಂಕುಮವಿಟ್ಟುಮಂದಾರಮಲ್ಲಿಗೆಯ ಮುಡಿಸಿ ಆನಂದ ಬಡಿಸಿದಿಯೊ ಕೃಷ್ಣ4ಇಂದಿರೇಶನ ಕಾಣದಲೆ ನೊಂದವರ ಮ್ಯಾಲೆ ಪರಿಮಳತಂದು ಹಾಕಿದ ವಾಯು ಪಾಪಿ ಎಂದು ಬಯ್ಯುತ ಕೃಷ್ಣ 5ತಂದು ಕನ್ನಡಿ ನಿಲ್ಲಿಸಿ ಒಳಗೆ ಚಂದ್ರನ್ಹೊಗಿಸಿಮ್ಯಾಲೆಕಲ್ಲುತಂದು ಹಾಕಿ ಅವನ ನಾವು ಕೊಂದರೆ ಪಾಪಿಲ್ಲ ಎನುತ6ಬೆಂದವರ ಮ್ಯಾಲೆ ಪರಿಮಳ ಚಂದ್ರನುಡಿಸಿದ ಕಂದನಿವನುಹಿಂದಿನ ವೈರವೇ ಸವತಿ ಇಂದಿನವನೆಂದು ಭವಿತ 7ಮಲ್ಲಿಗೆ ಸಂಪಿಗೆ ಜಾಜಿ ಚಲ್ವ ತುಳಸಿ ಯಮುನಾದೇವಿಫುಲ್ಲನಾಭನ ಕಂಡಿರೇನ ನಲ್ಲೆಯರು ಹಲಬುತ ಕೃಷ್ಣ 8ನೋಡುನೋಡುಕೆಳದಿ ಇಲ್ಲೆ ಜೋಡು ಹೆಜ್ಜಿ ತೋರುತಾವಮಾಡಿ ಕಪಟದಿ ರಂಗನ ಒಬ್ಬಳು ಓಡಿಸಿ ಒಯ್ದಾಳೆ ಎನುv 9ನಗಧರಒಬ್ಬ ಬಾಲೆಯಳ ಜಿಗಿದು ಎತ್ತಿದ ಹೆಜ್ಜೆ ನೋಡಿಸಿಗಲಿ ಅವಳು ರಂಗನ ಬೆರೆದ ಬಗಿಯ ತೋರೆನುತ ಕೃಷ್ಣ 10ಹಿಂಡುನಾರಿಯರೆಲ್ಲ ಕೂಡಿಕೊಂಡು ಅವಳ ಮಂಡೆಕುಕ್ಕಿಪುಂಡರಿಕಾಕ್ಷನ ತೋರೆದಿಂಡೆಮನುಜಳೆ ಎನುತ11ಇಷ್ಟು ನಾರಿಯರೊಳು ರಾಧೆ ಶ್ರೇಷ್ಠಳೆಂದು ಗರುವಿಸ್ಯಾಳುಅಷ್ಟರೊಳಗೆ ಅವಳ ನೀನು ಬಿಟ್ಟು ಪೋಗಿದ್ಯೊ ಕೃಷ್ಣ 12ಗಲ್ಲಕುಕ್ಕಿ ಅಂಜಿ ಅವಳು ಎಲ್ಲ ನಾರಿಯರಿಗೆ ಎರಗಿಫುಲ್ಲನಾಭಮಾಡಿದಪಾಟನಎಲ್ಲಿ ಉಸಿರಲೆ ಎನುತ13ವಿಧಿಗೆ ದಯವಿಲ್ಲ ನಮ್ಮ ಚದುರ ರಂಗನ ಅಗಲಿಸಿತುಮದನಬಾಣ ನೆಟ್ಟಿತೆಂದು ಸುದತೆಯರು ಹಲಬುತ ಕೃಷ್ಣ14ಶ್ರೀಶ ರಾಮೇಶನ ಯಾವ ದೇಶದಲ್ಲಿ ಹುಡುಕಲೆಂದುಕ್ಲೇಶಬಡಲು ಕೆಲದೆಯರೆಲ್ಲ ಸರ್ವೇಶ ಬಂದೆಂದ ಪಾರ್ಥ15
--------------
ಗಲಗಲಿಅವ್ವನವರು
ಮುತ್ತು ಬಂದಿದೆ ಕೇರಿಗೆ ಜನರುಕೇಳಿ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಮುತ್ತು ಬಂದಿದೆ ಪ.ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಅಪಥಳಥಳಿಸುವ ಮುತ್ತುಕಮಲ ನೇತ್ರದ ಮುತ್ತುಕಲುಷ ಪರ್ವತಕ್ಕಿದು ಕಲಶವಾಗಿಪ್ಪ ಮುತ್ತುಹಲಧರಾನುಜವೆಂಬ ಪವಿತ್ರ ನಾಮದ ಮುತ್ತುಒಲಿದು ಭಜಿಪರಭವತರಿದು ಕಾಯುವ ಮುತ್ತು1ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತುಭಂಜಿಸದ ಇತರ ಭಯವ ತೋರುವ ಮುತ್ತುಸಂಜೀವರಾಯ ಹೃದಯದೊಳಗಿಹ ಮುತ್ತು------------------------ 2ಜಾÕನವೆಂಬೊ ದಾರದಲ್ಲಿ ಪೋಣಿಸಿ ನೋಡುವ ಮುತ್ತುಜಾÕನಿಗಳ ಮನದಲ್ಲಿ ಮೆರೆವ ಮುತ್ತುಆನಂದ ತೀರ್ಥರ ಮನದಲ್ಲೊಪ್ಪುವ ಮುತ್ತುಶ್ರೀನಿಧಿ ಪುರಂದರವಿಠಲನೆಂಬೋ ಆಣಿಯ ಮುತ್ತು * 3
--------------
ಪುರಂದರದಾಸರು
ಮುದಕಿಯ ಕಂಡರೆ ಸೇರದೆನಗೆ ಮುದಕಿಯ ಕಂಡರೆ ಸೇರದೋಸದಮಲಪರತತ್ವದ ಗುರಿಯ ತೋರದಂತೆ ಮಾಡಿದಪಒಬ್ಬನನೊಯ್ದಿಬ್ಬರ ಮಾಡಿ ಓಡಿಶ್ಯಾಡುವ ಮುದಕಿಹಚ್ಚಿಕೊಂಡು ಜಗವೆನಲ್ಲ ಹರಿದು ಆಡುವ ಪಾಡುವ ಮುದುಕಿ1ನಿಲ್ಲದೆ ಸ್ವರ್ಗಕೆ ನರಕಕೆ ಮನಜರನೆಲ್ಲರ ತಿರುಗಿಪ ಮುದುಕಿಎಳ್ಳಷ್ಟೂ ಎಚ್ಚರ ಹುಟ್ಟಿಸದ ಎಡವಟ್ಟಾದ ಮುದುಕಿ2ಇಂದ್ರಜಾಲವ ಖರೆಯಂದದಲಿ ಎಸಗಿಕೊಂಡಿಹ ಮುದುಕಿಬಂಧಿಸಿಯಿಹಳು ಊನವಿಲ್ಲದಲೆ ಬಾಜಿಗಾರ ಮುದುಕಿ3ಏನೇನಿಲ್ಲವು ತನಗದು ರೂಪವು ಎಲ್ಲವು ಆದ ಮುದುಕಿತಾನಾರೆಂದು ತನ್ನನ್ನು ತಿಳಿಯೆ ತನ್ನೊಳಗಡಗಿಹ ಮುದಕಿ4ಮುನ್ನ ಅನಾದಿಯು ಎನಿಸಿಕೊಂಡರು ಮೂಲಮಾಯೆ ತಾ ಮುದುಕಿತನ್ಮಾತ್ರಾದ ಚಿದಾನಂದ ಬ್ರಹ್ಮದಿ ತೋರುತ ಅಡಗುವ ಮುದಕಿ5
--------------
ಚಿದಾನಂದ ಅವಧೂತರು
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ.ಯಾಕೆ ಪಂಥ ಲೋಕೈಕನಾಥ ದಿ-ವಾಕರಕೋಟಿಪ್ರಭಾಕರ ತೇಜನೇ ಅ.ಪ.ಪೂರ್ವಾರ್ಜಿತ ಕರ್ಮದಿಂದಲಿಇರ್ವೆನು ನರಜನ್ಮ ಧರಿಸುತಗರ್ವದಿಂದ ಗಜರಾಜನಂತೆ ಮತಿಮರ್ವೆಯಾಯ್ತು ನಿನ್ನೋರ್ವನ ನಂಬದೆಗರ್ವಮದೋನ್ಮತ್ತದಿ ನಡೆದೆನುಉರ್ವಿಯೊಳೀ ತೆರದಿ ಇದ್ದೆನಾದರೂಸರ್ವಥಾ ಈಗ ನಿಗರ್ವಿಯಾದೆಯಹಪರ್ವತವಾಸ ಸುಪರ್ವಾಣ ವಂದಿತ 1ಯಾರಿಗಳವಲ್ಲಮಾಯಾಕಾರ ಮಮತೆ ಸಲ್ಲ ಸಂತತಸಾರಸಾಕ್ಷ ಸಂಸಾರಾರ್ಣವದಿಂದಪಾರಗೈದು ಕರುಣಾರಸ ಸುರಿವುದುಭಾರವಾಯ್ತೆ ನಿನಗೆನತಮಮಕಾರ ಹೋಯ್ತೆ ಕಡೆಗೆ ಏನಿದುಭಾರಿ ಭಾರಿಶ್ರುತಿಸಾರುವುದೈ ದಯವಾರಿಧಿನೀನಿರಲ್ಯಾರಿಗುಸುರುವುದು2ಬಾಲತ್ವದ ಬಲೆಗೆ ದ್ರವ್ಯದಶೀಲವಿತ್ತೆ ಎನಗೆ ಆದರೂಪಾಲಿಸುವರೆ ನಿನಗಾಲಸ್ಯವೆ ಕರು-ಣಾಳು ಶ್ರೀಲಕ್ಷ್ಮೀಲೋಲ ಮಮ ಮನಕೆಸಾಲದೆರಡು ಮೂರು ನಿನ್ನಯಮೂಲ ಸಹಿತ ತೋರು ಮುನಿಕುಲಪಾಲ ಶ್ರೀಲಕ್ಷ್ಮೀನಾರಾಯಣಗುಣಶೀಲ ಕಾರ್ಕಳ ನಗರಾಲಯವಾಸನೇ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯಾರಲಿ ದೂರುವೆನೋ ಗಿರಿಯ ರಾಯಾಯಾರೆನ್ನ ಸಲಹುವರೋ ಪಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
--------------
ಪುರಂದರದಾಸರು
ಯೋಗಕ್ಕೆ ಸ್ಥಿತಿ ನಾಲ್ಕೇ ಒಡವೆಯೋಗಕ್ಕೆ ಈ ನಾಲ್ಕು ಇಲ್ಲದಿದ್ದರೆ ಅದು ಅಡವಿಪಸುಸುಖ ಬುದ್ಧಿಯ ತಾಳ್ದು ಎಲ್ಲ ವ್ಯವಹಾರ ತಾಳ್ದುಹಸಿವೆ ಎಂಬುದುನೀಗಿಮೌನಕ್ಕೆ ಮನಸಾಗಿಅಸನವಿಕ್ಕಿದರುಂಡು ಸಾತ್ವಿಕವ ಕೈಗೊಂಡುಉಸುರೆ ಪ್ರಥಮ ಸ್ಥಿತಿ ಇದುವೆ ಪಶುಸಿದ್ಧಿ1ಕರ್ಮಂಗಳನ ಸುಟ್ಟುವಿಧಿನಿಷೇಧಗಳ ಬಿಟ್ಟುನಿರ್ಮಳತ್ವವ ತಾಳಿ ಪಾಪ ಪುಣ್ಯವ ದೂಡಿದುರ್ಮತಿ ಸನ್ಮತಿಗಳಿಲ್ಲ ದೋಷ ಭೂಷಣವಿಲ್ಲಧರ್ಮವೆರಡನೆಯ ಸ್ಥಿತಿ ಇದುವೆ ಶಿಶುಸ್ಥಿತಿ2ಅಂತರವೆ ಸಹ್ಯವಾಗಿ ಬ್ರಾಂತ್ಯ ಅಸಹ್ಯವಾಗಿನಿಂತು ಕಣ್ಣು ಮುಚ್ಚಿ ಕುಳಿತು ಮೈಯ ಮರೆಯುತಸಂತತಾನಂದದ ಬೆಳಗ ತೋರುತಿರೆ ನಿತ್ಯಬೆಳಗುಇಂತಿದು ಮೂರನೆಯ ಸ್ಥಿತಿ ಇದುವೆ ತೂಕಡಿಸುವ ಸ್ಥಿತಿ3ಧ್ಯಾನವೆಂಬುದನೀಗಿಧಾರಣೆಯದು ಹೋಗಿಹೀನ ಮೈಲಿಗೆ ತೊಳೆದು ಆತ್ಮ ಜ್ಯೋತಿಯು ಹೊಳೆದುತಾನೆ ಮಲಗಿಹನು ರಾತ್ರೆ ದಿವಗಳ ಕಾಣಇದುವೆ ನಾಲ್ಕನೆಯ ಸ್ಥಿತಿ ಇದುವೆ ನಿದ್ರಾಸ್ಥಿತಿಯು4ಒಂದರಿಂದ ಒಂದರಂತೆ ಇವನು ಸಾಧಿಸಬೇಕುಒಂದಲ್ಲದಿರೆ ನಿರ್ವಿಕಲ್ಪಸಮಾಧಿತಾನಿಲ್ಲಸಂದುಗೊಂದಿನ ಹಾದಿಯಲ್ಲವಿಹಂಗಪಥಬಂಧ ಹರನು ಚಿದಾನಂದನೆ ತಾನಂಹನು5
--------------
ಚಿದಾನಂದ ಅವಧೂತರು
ಯೋಗಿಬಿಟ್ಟರೆ ಬಿಡದು ನಾದವುಯೋಗಿಬಿಟ್ಟರೆ ಬಿಡದು ನಾದವುಕೂಗುತಿಹುದು ಸರ್ವಕಾಲದಿಜಾಗಟೆ ಕೊಳಲು, ತಮ್ಮಟೆಚಂಗು ಕೊಂಬು ತಾಳರವಗಳಿಂದಪಮಲಗೆ ಕುಳಿತರೆ ಕೂಗುತಿಹುದುನಿಲಲು ನಡೆಯೆ ಕೂಗುತಿಹುದುಒಲಿದು ಮಾತುಗಳಿರಲಿಕೆಬಲಿದು ಧುಂಧುಂ ಎಂದು ಭೇರಿಯ ಶಬ್ದರವಗಳಿಂದನಿಲದೆ ಮುರಿದು ಮದವಸುಲಭ ಸುಖವ ಸುರಿಸುತ1ಕಣ್ಣು ಮುಚ್ಚಲು ಕೂಗುತಿಹುದುಕಣ್ಣು ತೆರೆಯೆ ಕೂಗುತಿಹುದುಉಣ್ಣುತಲಿ ತಾನು ಇರಲಿಕೆಘಣ್ಣ ಘಣ್ಣ ಘಣ್ಣಲು ಎಂದು ಘಂಟೆ ಶಬ್ದದ ರವಗಳಿಂದಮಣ್ಣಗೂಡಿಸಿಶೋಕಮೋಹವಪುಣ್ಯರವವ ಬೀರುತ2ಸುಮ್ಮನಿರಲು ಕೂಗುತಿಹುದು ಸುಳಿದಾಡೆ ಕೂಗುತಿಹುದುಬಮ್ಮನೊಮ್ಮೆ ಮರೆತು ಇರಲಿಕೆಘಮ್ಮ ಘಮ್ಮ ಘಮ್ಮ ಎಂದು ಶಂಖ ಶಬ್ದದ ರವಗಳಿಂದಹಮ್ಮುವಾಸನ ಕ್ಷಯವಮಾಡಿನಿರ್ಮಲತ್ವವ ತೋರುತ3ಅರುಣಕಾಲದಿ ಅಸ್ತಕಾಲದಿ ಅವಸ್ಥಾತ್ರಯ ಕಾಲದಿಅರಗಳಿಗೆ ಕ್ಷಣ ಮೂಹೂರ್ತದಿಸರಿಗರಿ ಗಮಪ ಎಂದು ಸ್ವರಮಂಡಲರವಗಳಿಂದತರಿದು ಜನನ ಮರಣವನ್ನುತೇಜಬಿಂದು ಸುರಿವುತ4ಇಂತುನಿತ್ಯಕಾಲದಿ ಬಿಡದೆಸಂತತದಲಿ ಹಾಡಿಪಾಡಿನಿಂತು ಚಾಕರಿಯನೆ ಮಾಡುತಚಿಂತಕರನುತಾ ಚಿದಾನಂದನಾಗಿ ತೋರ್ಪ ಯೋಗಿಯನ್ನುಅಂತ್ಯವಿಲ್ಲದಾನಂದಪಡಿಸಿ ಆಶೀರ್ವಾದವ ಪಡೆಯುತ5
--------------
ಚಿದಾನಂದ ಅವಧೂತರು
ಯೋಗಿಯ ನೋಡಿರೋ ಸದ್ಗುರು ಯೋಗಿಯ ನೋಡಿರೋಯೋಗಿಚಿದಾನಂದಾವಧೂತ ಗುರುದೊರೆಯ ಸದ್ಗುಣ ಚರಿತನಪಆಶಾಪಾಶಗಳೆಂಬುವನೆಲ್ಲವಜರಿದುವಾಸನೆತರಿದುದೋಷದುರ್ಗ ಜನನಾದಿಗಳನು ಬಳಿದು ಸಂಶಯ ತುಳಿದುಕ್ಲೇಶಪಂಚಕ ಕಾಮಕ್ರೋಧವ ಕಡಿದು ಮುಂದಕೆ ನಡೆದುಭಾಸುರತೇಜದಿ ತೋರುವ ಪ್ರಭೆಯನುಕೂಡುವ ತಲೆಯೊಲಿದಾಡುವ1ಬಲಿದಾಧಾರವ ಕುಂಭಕದಿಂದಲಿ ಬಲಿಸಿ ವಾಯುವ ನಿಲಿಸಿನೆಲೆಯನೆ ಹತ್ತಿ ಆ ನೆಲೆಯನೆ ನಿಲುಕುತ ಮತ್ತಾನೆಲೆಯ ಹೊಲಬಲಿ ತೋರುವಭಾಸ್ಕರಕೋಟಿಯ ಮೀರಿಕಳೆಗಳ ತೋರಿ ಥಳಥಳ ಥಳಿಸಿಯೆ ಮೆರೆವಾ ಆತ್ಮನ ನೋಡುವ ಸಂತಸಪಡುವ2ಆರು ಚಕ್ರಗಳಲಿ ತೋರುವ ದಳಗಳನರಿದು ಅದರೊಳು ಬೆರೆತುಭೋರಿಡುತಿಹ ದಶನಾದದ ಬೊಬ್ಬೆಯಕೇಳಿಹರುಷವ ತಾಳಿ ಚಾತುರದಿ ಮೆರೆಯುತಲಿಹ ಜ್ಯೋತಿಯಸಾರಸೇವಿಪ ಶೂರಧಿರ ಚಿದಾನಂದಾವಧೂತಾತ್ಮ ಗುರುವಾ ಎನ್ನನು ಪೊರೆವಾ3
--------------
ಚಿದಾನಂದ ಅವಧೂತರು
ಯೋಗಿಯ ಭಾವವು ಆರಿಗು ತಿಳಿಯದುಯೋಗಿಯೆಂದೆನಿಪುದು ಸುಖವೋ ದುಃಖವೋಪನಾದವ ಸಾಧಿಸಿ ನಾದವ ಭೇದಿಸಿನಾದಾನಂದದಲಿ ಮುಳುಗಿರ್ದುನಾದಾಮೃತವನು ಸವಿಸವಿದುಂಬುವನಾದ ಮೂರುತಿಯವ ನರನೋ ಹರನೋ1ಅಂತರ್ಲಕ್ಷ್ಯ ಬಹಿರ್ಲಕ್ಷ್ಯವನೊಂದನು ತರಿಸಿದೆ ಸಮನಿಸುತಿರ್ದುಸಂತತ ಪೂರ್ಣಾನಂದದಿ ಮುಳುಗಿ ನಿ-ರಂತರ ಸುಖಿಪುದು ಉರಿಯೋ ಸಿರಿಯೋ2ಬಯಲಾಟವ ನೋಡಿ ಬಯಲೆಲ್ಲವ ಮಾಡಿಬಯಲ ಬಗೆಗೆ ತಾ ಓಲಾಡಿಬಯಲಿಗೆ ಬಯಲು ಬಯಲಾಗಿರುತಿಹಬಯಲಾನಂದವು ಭಯವೋ ಜಯವೋ3ಮೂರವಸ್ಥೆಯ ಮೂವರಿಗೊಪ್ಪಿಸಿಬೇರೆ ಸಾಕ್ಷ್ಯಗೆ ತಾನಿರುತಿದ್ದುತೋರುವುದೆಲ್ಲ ತನ್ನತನವೆಂದರಿತುಶೂರನಾಗಿರುವುದು ಗೆಲುವೋ ಒಲವೋ4ಗುರುಕೀಲನೆ ನೋಡಿ ಗುರುವೆಲ್ಲವ ಮಾಡಿಗುರುಲೀಲೆ ಯಂತಿರುತಿದ್ದುಗುರುಚಿದಾನಂದ ಮೂರುತಿಯ ಕೂಡಿರುತಿಹಗುರುತರ ತಾನದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು
ರಂಗ ಒಲಿದ ದಾಸರಾಯರ - ಪಾದಯುಗ್ಮಕಂಗಳಿಂದ ನೋಡಿದಾವರÀ - ಪಾಪಂಗಳೆಲ್ಲಹಿಂಗಿಪೋಪವಲ್ಲೊ ಸತ್ವರ - ಏನು ಪೇಳಲೀವರಾ ಪತುಂಗಮಹಿಮೆ ತೋರಿ ಜನಕೆಮಂಗಳಾವ ಕೊಡುವರಿಂಥಾ ಅ.ಪಬ್ಯಾಗವಾಟನಾಮ ಗ್ರಾಮದಿ - ನಾರಸಿಂಹಭಾಗವತಆದಿ ಶಾಸ್ತ್ರಭೋಗಿಶಯನ ಕರುಣದಿಂದಆಗ ಈಗ ಎನದೆ ಸದಾನುರಾಗ ತೋರುವಂಥ 1ಮುದದಿ ದಾಸ್ಯಭಾವದಿಂದಲಿ - ಜಗದಿ ಜನರಹೃದಯಭಾವಪೂರ್ತಿಯಿಂದಲಿ- ಪ್ರೀತಿಗೈದುಪದುಮನಾಭನ ಪ್ರೀತಿಯಿಂದಲಿ - ಗುಣಗಳನ್ನುಭುಧರಮ್ಯಾಳಸಂಗದಿಂದಮುದದಿ ಮನವ ಧರಿಸಿನಿತ್ಯಪದುಮನಾಭನ ಭಜನಿಗೈಯುತ - ತತ್ವಸಾರವದನದಿಂದುಚ್ಭಾರ ಗೈಯುತ - ತೀರ್ಥಯಾತ್ರೆಮುದದಿಕಾಯಧರಿಸಿ ಹರಿಯ ಭಜನೆಗೈದು ಸುಖಿಸಿದಂಥ2ಖ್ಯಾತ ಶುಕ್ಲ ಬಾದ್ರಪದದಿ ನವಮಿ ಜಗ -ನ್ನಾಥ ವಿಠಲಪಾದಪದುಮದಿ ಮನವೆ ಮೊದಲುಭೂತಕಾಶಮಾರ್ಗ ಸಂಗದಿ - ಹೃದಯ ಮಂಡಲಧಾತನಿಂದ ಕೂಡಿ ವಿ -ಧಾತನಾಂಡ ಭೇಧಿಸಿ ಗುರುಜಗ -ನ್ನಾಥ ವಿಠಲಪಾದಪೊಂದಿದಾ - ಈತನಂಥಆತುರಾದಿ ಕೊಡುವ ನಂದನ - ಏನು ಮಹಿಮೆವಾತದೇವನ ನಿಜಾವೇಶದಿಂದ ಯುಕ್ತರಾದ 3
--------------
ಗುರುಜಗನ್ನಾಥದಾಸರು
ರಂಗಕೇಳಯ್ಯ ಬೆಳಂದಿಗಳ ಬೆಳಗುವ ವಸ್ತ್ರಕಂಗಳಿಗೆ ಸೂರ್ಯ ಹೊಳೆವಂತೆಶ್ರೀರಂಗ ಕೊಳ್ಳಯ್ಯ ಉಡುಗೊರೆ ಪ.ಏಸೋ ಮಾಣಿಕದ್ವಸ್ತ ಹಸಿರುಪಟ್ಟಾವಳಿವಸುದೇವಗೀಗ ರಥ ತೇಜಿ ಕೊಟ್ಟ 1ಲೆಕ್ಕವಿಲ್ಲದೆ ರತ್ನ ಸಂಖ್ಯವಿಲ್ಲದೆ ವಸ್ತ್ರದೇವಕಿಗೆ ಕೊಟ್ಟಪಟ್ಟಾವಳಿ2ಹಲವು ಮಾಣಿಕದ ವಸ್ತ ಬೆಲೆಯಿಲ್ಲದಷ್ಟು ವಸ್ತ್ರಬಲರಾಮಗೆ ಕೊಟ್ಟ ರಥಗಳ 3ಮುತ್ತು ಮಾಣಿಕದೊಸ್ತ ಮತ್ತೆಪಟ್ಟಾವಳಿಸೀರೆಮಿತ್ರೆ ರೇವತಿಗೆ ದೊರೆ ಕೊಟ್ಟ 4ಸಂಭ್ರಮದಿಭಾನುಮಾನುಸಾಂಬಪ್ರದ್ಯುಮ್ನಗೆಮೇಲೆಂಬೊ ವಸ್ತ್ರಗಳುಪಟ್ಟಾವಳಿಕೊಟ್ಟ5ಸರಸಿಜಾಸನ ಶಿವನ ಅರಸೆಯರಿಗೆ ಮೊದಲಾಗಿಸರಸದೊಸ್ತಗಳು ರಥಕೊಟ್ಟ 6ಇಂದ್ರ ಚಂದ್ರನ ಮಡದಿಯರಿಗೆಬಂದ ಋಷಿಗಳಿಗೆಲ್ಲಚಂದ-ದೆÉೂಸ್ತ್ರಗಳ ದೊರೆ ಕೊಟ್ಟ 7ಪಂಡಿತರು ರಾಯರಿಗೆ ದುಂಡು ಮುತ್ತಿನ ವಸ್ತತಂಡ ತಂಡದಲಿಜವಳಿಯ ದೊರೆ ಕೊಟ್ಟ 8ದಾಸರುದಾಸಿಯರಿಗೆ ಸೋಸಿನ ವಸ್ತ್ರಗಳು ಸೀರೆಕುಪ್ಪಸ ಜರತಾರಿಗಳ ದೊರೆ ಕೊಟ್ಟ 9ಗುಜ್ಜಿಯರ ಮಕ್ಕಳಿಗೆ ಗೆಜ್ಜೆ ಸರಪಳಿ ಅಂಗಿಸಜ್ಜು ತೋರುವ ಅರ¼ಲೆ ಕೊಟ್ಟ 10ಗೊಲ್ಲನಾರಿಯರ ಕುಬ್ಜಿಗೆಲ್ಲ ರಾಮೇಶ ಕೊಟ್ಟಚಲುವ ನಮ್ಮ ಮ್ಯಾಲೆ ಹರುಷಾಗೊ 11
--------------
ಗಲಗಲಿಅವ್ವನವರು
ರಂಗನ ತಂಗಿಯರ ಮಾನಭಂಗ ಮಾಡಿಹರುಷದಿಂದ ತಂಗಿಯರುಕೋಲಹಾಕುತಾರೆ ಬಾರೆ ದ್ರೌಪತಿಪ.ದೊರೆಯರ ಮಗಳೆಂದುಬಹಳೆ ಗರವಿಲಿಂದ ಆಣಿನಿಟ್ಟುಒಳಗೆ ಹೋಗಿಸೇರಿದ್ಯಾಕ ಬಾರೆ ದ್ರೌಪತಿ 1ಒಳ್ಳೆಯವರ ಮಗಳು ನೀನುಭಾಳಮಾತನಾಡಿಗೈಯ್ಯಾಳಿ ತನವತೋರಿಕೊಂಡಿ ಬಾರೆ ದ್ರೌಪತಿ 2ಗುಡ್ಡದಷ್ಟು ರಾಗ ಮಾಡಿಅಡ್ಡಾದಿಡ್ಡಿ ಮಾತನಾಡಿಧಡ್ಡ ತನವ ತೋರಿಕೊಂಡೆಬಾರೆ ದ್ರೌಪತಿ 3ಸರ್ಪನ ಎದುರಿಗೆ ಕಪ್ಪೆದರ್ಪತೋರುವದು ಉಂಟೇನಅರಿಪುರೆಲ್ಲ ನಿನ್ನ ಬುದ್ಧಿಬಾರೆ ದ್ರೌಪತಿ 4ಬರಿಯ ಮಾತಿನ ಜಾಣೆನಿಮ್ಮನ ಕರೆಯ ಬರಲಿಲ್ಲವೆಂದುಕುರಿಯಂತೆ ಕೂಗಿದೆಲ್ಲಬಾರೆ ದ್ರೌಪತಿ 5ನರಿಯ ಸಿಂಹನ ಮರಿಗೆನೀನು ಸರಿ ಗಟ್ಟಿದಂತೆಅದರ ಪರಿಯತಿಳಕೊಳ್ಳಬಾರೆ ದ್ರೌಪತಿ 6ಅಕ್ಕ ರುಕ್ಮಿಣಿಗೆಭಾಳಸೊಕ್ಕಿಲಿಂದ ಆಣಿನಿಟ್ಟೆಬೆಕ್ಕಿನಾಂಗ ಸೇರಿದ್ಯಾಕಬಾರೆ ದ್ರೌಪತಿ 7ನಳಿನಾಕ್ಷಿ ರಾಮೇಶ ನರಸಿಯರಿಗೆತಿಳಿಯದೆ ಆಣಿಯನಿಟ್ಟುಮಾನವಎಂತು ಕಳೆದು ಕೊಂಡೆಬಾರೆ ದ್ರೌಪತಿ 8
--------------
ಗಲಗಲಿಅವ್ವನವರು
ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತಪ.ಪಕ್ಷಿರಾಜನು ಬಂದು ಬಾಗಿಲೊಳಗೆನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ 1ಸನಕ - ಸನಂದನ - ಸನತ್ಸುಜಾತರು ಬಂದುವಿನಯದಿ ಕೈಮುಗಿದು ಓಲೈಪರು ||ಘನಶುಕ - ಶೌನಕ - ವ್ಯಾಸ ವಾಲ್ಮೀಕರುನೆನೆದು ಕೊಂಡಾಡುವರೊ ಹರಿಯೇ 2ಸುರರು ಕಿನ್ನರರು ಕಿಂಪುರುಷರು ಉರಗರುಪರಿಪರಿಯಲಿ ನಿನ್ನ ಸ್ಮರಿಸುವರು ||ಅರುಣನು ಬಂದುದಯಾಚಲದಲ್ಲಿ ನಿಂದಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ 3ಪದುಮನಾಭನೆ ನಿನ್ನ ನಾಮಾಮೃತವನುಪದುಮಾಕ್ಷಿಯರು ತಮ್ಮ ಮನೆಯೊಳಗೆ ||ಉದಯದೊಳೆದ್ದು ಸವಿದಾಡುತ ಪಾಡುತದಧಿಯ ಕಡೆವರೇಳು ಮಧುಸೂದನ ಕೃಷ್ಣ 4ಮುರುಮಢನನೆ ನಿನ್ನ ಚರಣದ ಸೇವೆಯಕರುಣಿಸಬೇಕೆಂದು ತರುಣಿಯರು ||ಪರಿಪರಿಯಿಂದಲಿ ಸ್ಮರಿಸಿ ಹಾರೈಪರುಪುರಂದರವಿಠಲ ನೀನೇಳೊ ಹರಿಯೇ 5
--------------
ಪುರಂದರದಾಸರು
ಲಾಲಿಪಂಪಾಂಬಿಕೆಲಾಲಿಭ್ರಮರಾಂಬಿಕೆಲಾಲಿಬಗಳಾಂಬಿಕೆಲಾಲಿಲಾಲಿಎಂದು ಪಾಡಿರಿ ಸಾಧು ಸಜ್ಜನರೆಲ್ಲದೇವಿ ತಾನೇ ಎಂದುಲಾಲಿಪಅದ್ವಯಾಗಮ ದ್ಯುತಿಗೋಚರ ಅನಾದಿಅಚಲಾನಂದವೇಲಾಲಿಶುದ್ಧ ಸಮ್ಯಕ್ ಜ್ಯೋತಿರ್ಮಯ ಸ್ವರೂಪಸುಚರಿತ್ರ ನಿಶ್ಚಲಲಾಲಿಚಿದ್ಬಯಲಿನೊಳು ಹೃದಯ ತೊಟ್ಟಿಲೊಳುಭಾವಹಾಸಿಗೆಯಲ್ಲಿ ಪವಡಿಸಿಹೆಲಾಲಿಸಿದ್ಧರಿ ಮಲಗಿನ್ನು ಜೋಗುಳ ಪಾಡುವೆಶ್ರೀ ಮಹಾಲಕ್ಷ್ಮಿಯೇಲಾಲಿ1ನಿತ್ಯನಿರ್ಗುಣ ನಿಷ್ಕಲಂಕ ನಿರ್ವಿಕಲ್ಪನಿಜನಿತ್ಯ ನಿರ್ಮಳೆಲಾಲಿಸತ್ಯ ವಸ್ತುವೆ ಸನಾಥ ವಿಶೋತ್ಪತ್ತಿಸರ್ವಪರಬ್ರಹ್ಮರೂಪಲಾಲಿಪ್ರತ್ಯಗಾತ್ಮಳೆ ಪೂರ್ಣಪರಮ ಪರತರವಂದ್ಯೆಪಾವನ ಚಾರಿತ್ರೆಲಾಲಿಕರ್ತೃನೀ ಅನಂತ ಬ್ರಹ್ಮಾಂಡಾದಿಗಳಿಗೆಕರುಣಾ ಸಮುದ್ರವೇಲಾಲಿ2ಪೃಥ್ವಿಅಪ್ಪುತೇಜವಾಯುರಾಕಾಶಕ್ಕೆಪೃಥಕಾಗಿ ಹೊಳೆದಿಹಳೆಲಾಲಿಸತ್ವರಜತಮಸು ಮೂರರೊಳಗೆ ನೀಸಾಕ್ಷಿರೂಪದಲಿರುವೆಲಾಲಿವೇದ ವೇದಾಂಗಗಳ ವಾಗ್ರೂಪಿನಲ್ಲಿನೆಲೆಸಿ ರಂಜಿಪಳೆಲಾಲಿತತ್ವವಿಂಶತಿ ಪಂಚಶರೀರಗಳೊಳಗೆ ನೀತೊಳ ತೊಳಗಿ ಬೆಳಗುತಿಹೆಲಾಲಿ3ಜಾಗೃತ ಸ್ವಪ್ನ ಸುಷುಪ್ತಿ ಮೂರವಸ್ಥೆಜನಿತದಿ ಕಾಣಿಸಿಲಾಲಿಪ್ರಾಜÕತೈಜಸವಿಶ್ವಮೂರು ಮೂರುತಿಯಾಗಿಪರಿಣಮಿಸಿ ತೋರುವೆಲಾಲಿಶೀಘ್ರದಲಿ ಸದ್ಭಾವ ಸಚ್ಛಿಷ್ಯರಾದರ್ಗೆಸ್ವಾನಂದ ಸುಖವೀವೆಲಾಲಿರೌದ್ರದಲಿ ಭುಗುಭುಗು ಭುಗಿಲೆಂಬ ಕಳೆಗಳುಅತ್ಯುಗ್ರದಿ ಝಂಗಿಸುವೆಲಾಲಿ4ವಿದ್ಯಾವಿದ್ಯವ ತೋರಿ ದೃಶ್ಯಾದೃಶ್ಯಕೆ ಮೀರಿಅದೃಶ್ಯರೂಪ ಶ್ರೀ ಲಕ್ಷ್ಮೀಲಾಲಿಸಿದ್ಧಿಗಳೆಂಬುವ ಛೇದಿಪ ಹರಿಹರಸರಸಿಜೋದ್ಭವ ಮಾತೆಲಾಲಿಸಿದ್ಧ ಪರ್ವತವಾಸ ಸಾಹಸ್ರದಳ ಮಧ್ಯೆಶ್ರೀ ಬಗಳಾಮುಖಿಲಾಲಿಸದ್ಗುರು ಚಿದಾನಂದಅವಧೂತಬಗಳಾಂಬ ಸಗುಣನಿರ್ಗುಣಮೂರ್ತಿಲಾಲಿ5
--------------
ಚಿದಾನಂದ ಅವಧೂತರು