ಒಟ್ಟು 2786 ಕಡೆಗಳಲ್ಲಿ , 114 ದಾಸರು , 2127 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾನೇನೆಂದೆನೋ | ಗುರುವೆ ಜಗದ್ಗುರು ನಿನ್ನ ನಾನೇನೆಂದೆನೋ ಪ ನಿನ್ನ ನಾನೇನೆಂದೆ ನಿಖಿಲ ಜೀವರ ಒಡೆಯಪನ್ನಗ ನಗಧೀಶ ಪತಿತೋದ್ಧಾರನದೂತ ಅ.ಪ. ವಾರಿಧಿಯನೆ ದಾಟಿ | ನಾರಿ ಚೋರನ ಜರೆದುನಾರಿ ಗೋಸುಗ ಕೌರವರ ಸವರೀ ||ಮಾರಮಣನೆ ಸಾರತಮನೆಂಬ ವೇದಾಂತಸಾರ ಪೇಳ್ವಗೆ ಶರಣೆಂದೆನು ಅಲ್ಲದೇ |ಭಾರಿ ಕೋತಿಯು ಎಂದೆನೆ - ಕುಪ್ಪಸ ತೊಟ್ಟುನಾರಿಯಾದವನೆಂದನೆ - ಕಾವಿಯನುಟ್ಟುಪೋರ ಯತಿಯು ಎಂದೆನೆ - ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ 1 ನೆರಹಿ ಕಪಿಸೈನ್ಯವ ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಸೀ ||ಜರೆಯ ಸುತನ ಸೀಳಿ ಬದರೀಗೆತೆರಳೀದವಗೆ ನಮೊ ಎಂದೆನು ಅಲ್ಲದೇ ||ಗಿರಿಯ ಪೊತ್ತವನೆಂದನೆ - ರಕ್ಕಸಿಯಬೆರೆದನೆಂದವ ನೆಂದೆನೆ - ಕೌಪೀನವಧರಿಸಿದವನು ಎಂದೆನೆ - ಸುಜನರ್ಗೆಪರತತ್ವ ಪೇಳ್ದೆವನೆಂದೆನು ಅಲ್ಲದೇ 2 ಕರ್ತು ಹರಿಯೆ ಎಂದುನಿಚೋಚ್ಛ ತರತಮ ಪೇಳ್ದೆ ಎಂದಲ್ಲದೆ ||ಖೇಚರ ನೀನೆಂದನೆ - ವಿರಾಟನೊಳ್‍ಪಾಚಕ ನೀನೆಂದನೆ - ಭವಾಟವಿಮೋಚಕನೇ ಗುರು ಗೋವಿಂದ ವಿಠ್ಠಲಾರ್ಚಕನೆಂದು ಸ್ತುತಿ ಗೈದನಲ್ಲದೆ 3
--------------
ಗುರುಗೋವಿಂದವಿಠಲರು
ನಿನ್ನ ಪೋಲುವ ಕರುಣಿಗಳನಾರ ಕಾಣೆ ಪ್ರ ಪನ್ನ ತಾ ಪಾಪಹರನೇ ಪ ಎನ್ನಪರಾಧಗಳ ಎಣಿಸದಿರು ಅಜಭವಶ ರಣ್ಯ ಪರಿಪೂರ್ಣೇಂದಿರಾಗಾರ ಅ ಶುದ್ಧಾಖ್ಯ ದ್ವಿಜನು ದಾರಿದ್ರ್ಯದಲಿ ನೆರೆ ನೊಂದು ಸದ್ಧರ್ಮ ತೊರೆದು ಮರೆದು ಶ್ರಾದ್ಧಾದಿ ದುಷ್ಟನ್ನ ಮೆದ್ದು ನಿಂದಿತನಾಗಿ ಬಿದ್ದಿರಲು ಸತಿಯು ಮತಿಯು ತಿದ್ದಿ ಪೇಳಲು ಕೇಳಿ ಶುದ್ಧ ಭಾವದಿ ತವ ಪ ದದ್ವಯಕ್ಕೆರಗಿ ಮರುಗಿ ಪದ್ಮೇಶ ಸಲಹೆನಲು ಸಿದ್ಧಿಸಿ ಮನೋರಥವ ಉದ್ಧಾರವನು ಮಾಡ್ದೆ ನೋಡ್ದೆ 1 ವಿಧಿಯ ಸಂಸ್ತುತಿ ಕೇಳಿ ಮಧ್ವಜಾಕಾರಿ ಮದಡತಮನುದರ ಬಗೆದೇ ಉದಧಿ ಮಥನದಲುದಿಸಿದಮೃತ ದೇವತೆಗಳಿಗೆ ಮುದದಿಂದಲೆರೆದೆ ಪೊರೆದೆ ಹೇಮ ಲೋಚನನ ನೀ ದೌಂಷ್ಟ್ರ ತುದಿಯಿಂದ ಕೊಂದೆÀ ತಂದೆ ಬೆದರದಲೆ ಕರೆದರ್ಭಕನ ನುಡಿಗೆ ಅವನಯ್ಯ ನುದರ ರಕ್ತವನು ಸುರಿದೇ ಮೆರೆದೇ 2 ವೈರೋಚನಿಯ ಭೂಮಿ ದಾನವನು ಬೇಡಿ ಭಾ ಗೀರಥಿಯ ಪಡದಿ ಪದದಿ ಧಾರಿಣಿಯ ದಿವಿಜರಿಗೆ ದಾನವಿತ್ತವನಿಪರ ಗಾರು ಮಾಡಿದೆ ಸವರಿದೇ ನೀರಧಿಯ ಬಂಧಿಸಿ ದಶಾಸ್ಯನ ಬಲವನು ಸಂ ಹಾರ ಮಾಡಿದೆ ರಣದೊಳು ಕಾರಗೃಹದೊಳಗಿಪ್ಪ ಜನನಿ ಜನಕರ ಬಿಡಿಸಿ ತೋರಿಸಿದೆ ವಿಶ್ವರೂಪಾ ಶ್ರೀಪಾ 3 ಆದಿತೇಯರು ಮಾಳ್ಪ ಸಾಧುಕರ್ಮಗಳ ಶುದ್ಧೋದನಾಚರಿಸೆ ತಿಳಿದು ವೇದ ಶಾಸ್ತ್ರಾರ್ಥ ಪುಸಿಯೆಂದರುಪಿ ಜಿನನತಿ ಭೇದಗೈಸಿದೆ ಸಹಿಸಿದೇ ಭೇದಗೊಳಿಸುವ ಕಲಿಯ ಕೊಂದು ಶೀ ಘ್ರದಿ ತಮಸಿಗೈಸಿದೆ ಕಲ್ಕಿ ಭಳಿರೇ ನಿಖಿಳ ಲೋಕವನೆಲ್ಲ ಧರಿಸಿ ಪ್ರಳ ಯೋದಕದಿ ಮಲಗಿ ಮೆರೆದೇ ಪೊರೆದೇ 4 ಹಂಸರೂಪದಲಿ ಕಮಲಾಸನಗೆ ತತ್ವೋಪ ದೇಶಮಾಡಿದೆ ಕರುಣದೀ ವ್ಯಾಸಾವತಾರದಲಿ ದೇವ ಋಷಿ ಪಿತೃಗಳಭಿ ಲಾಷೆ ಪೂರೈಪ ನೆವದೀ ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ ಕಾಶÀ ಮಾಡಿದೆ ಮೋದದಿ ವಾಸವಾನುಜ ಜಗನ್ನಾಥವಿಠಲ ನಿನ್ನವರ ಸಲ ಹೋ ಸಮರ್ಥಾ ಕರ್ತಾ 5
--------------
ಜಗನ್ನಾಥದಾಸರು
ನಿನ್ನ ಬಗೆ ಬಗೆ ರೂಪಗಳ ಉರಗ ಶಯ್ಯ ರಂಗಯ್ಯಾ ಪ ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ ಶತಧೃತಿ ತಲೆವಾಗಿ ಚತುರತೆÉಯಿಂದಲಿ ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು ರಿತ ಪುಂಜದಾನವನ ತರಿದೊಟ್ಟಿ ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ 1 ಕೃತು ಭುಕು ದೇವಾರಿತತಿ ಸಂಗತಿಯಿಂದ ಮತಿ ಏಕರಾಗಿ ಸಂಮತದಿಂದ ನಡೆದು ಪ ರ್ವತವ ಕಿತ್ತಿ ತಂದು ಉ ನ್ನತವಾದ ಕ್ಷೀರೋದ ಪತಿಯೊಳಗಿಟ್ಟು ಅತಿಬಲದಿಂದ ನಗುತ ಮಥಿಸಲು ಮಹಾ ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ2 ಗತಮಂದ ಮಾರೀಚ ಸುತ ಹೇಮನೇತುರಾ ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧÀರ ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ 3 ಚತುರ ಮೊಗನವರನುತಿಸಿ ಪಡೆದು ಪ್ರಾಗ ರ್ವಿತನಾಗಿ ನೀಲಲೋಹಿತನ ಭಕುತಿಯಿಂದ ತತುವೇಶಜನರ ಶಕುತಿ ಕುಂದಿಸಿ ತಾನೆ ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ ಗತಿಯೆಂದು ವಂದಿಸಲೆ ಕಂಭದಿ ಬಂದು ಸುರರು ಪೂಮಳೆ ಚೆಲ್ಲೆ 4 ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ ಕೃತಕಾರ್ಯನಾಗಿರೆ ರಿತಮದದಲಿ ತಾ ನುತಿಸಲಾದಿತಿಯ ಗರ್ಭದಲ್ಲಿ ಜ ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ ತತಿ ವಿಕ್ರಮತೀರಿತವಾದ ದಯಾಸಿಂಧು 5 ಸೂನು ಪೂಜಿತನಾಗಿ ಮುನಿಯಿಂದ ಪಿತನಗೋಸುಗ ಉಗ ಳುತ ರೋಷ ಕಿಡಿಗಳಾದ ಈರೈದು ಬಾಹೋ ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ ರುತ ಸತ್ಯವತಿ ನಂದನಕುವರ ಪರುಶ ಪಾಣಿ ಮೃತ ಜೀವಿಗಳ ಬದುಕಿಸಿದ ಮಹಾಧೀರಾ 6 ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ ಅನುಜ ಸಹಿತ ಪೋಗಿ ಮುನಿಯ ವಾ ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ ಪುರವಸಾರಿ ಪಿತನಾಜ್ಞ ತಿಳಿದು ಮಾ ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ ಹಿತದಿಂದ ಭಕ್ತಗೆ ಪಟ್ಟಗಟ್ಟಿದÀ ನೋಡಿ 7 ಶತ್ರಪತ್ರಾರುಣ ದಳಾಯುತ ನಯನಾದೇವ| ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ | ಭಂಗ ಬಲಾ | ಚರಿತಪೂರ್ಣ ಕಂಸಾರಿ ಯುತ ಷೋಡಶಾಖ್ಯ ಯುವತಿಯರ ತಂದ ಅ| ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ | ಸಾರಥಿ ಎನಿಸಿ ಕಾಳಗದೊಳು | ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ | ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ 8 ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ | ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು | ಅಪ್ರಾಕೃತ ಕಾಯ ಶಿಶುವಾಗಿ || ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ | ಚಿತ ಮಾರ್ಗದ ಬಿಡಿಸಿ ನಿ | ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ 9 ವಿಹಿತ ಧರ್ಮ ಮರೆದು | ಮಮತೆ ಜಾತಿ ಸಂಕರ | ವ್ರತದಲ್ಲಿ ನಾನಾ ದುಷ್ಕøತ ತುಂಬಿರಲು ದೇವತೆಗಳು ಮರುಗಿ ಅ | ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ | ಸಿತ ಖಡ್ಗಧರಿಸಿ ರಾ ಶೌರಿ | ಸುಕೃತ ನೆನೆವವರಿಗೆ ಭವಸಾಗರ ತಾರಿ10 ಶ್ರುತಿ ಶೀರ್ಷ ಶ್ರುತಿ ಉಪ | ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ | ವತ ಮೂಲ ರಹಸ್ಯ | ತತುವಾದಿನಾಮನು | ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ | ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ ಪ್ಪುತ ಕೊಂಡಾಡುವರು ನಿಂದು | ಭಕುತಪೂ ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು11
--------------
ವಿಜಯದಾಸ
ನಿನ್ನ ಬಿಟ್ಟಿರಲಾರೆ ನೀರಜಾಕ ್ಷ ಪ ಘನ್ನ ಮಹಿಮನೆ ನಿನ್ನ ಸನ್ನಿಧಾನವನೀಯೊ ಅ.ಪ. ಸರ್ವಧರ್ಮಗಳಿಗೆ ನೀನಿಲ್ಲದಿನ್ನಿಲ್ಲ ಉರ್ವಿಕರಿಗೆ ನೀನೆ ಉರ್ವೀಶನೆ ನಿರ್ವಿಕಾರ ಮಹಾತ್ಮ ನಿಖಿಲಾಂತರಾತ್ಮಕನೆ ಪಾದ ಸೇವೆಯೆನಗೀಯೊ 1 ತಡವ್ಯಾಕೆ ಬರಲಿನ್ನು ಪೊಡವೀಶ ಯನ್ನೊಡನೆ ತಡೆಯಲಾರೆನು ನಿನ್ನ ವಿರಹವನ್ನು ನುಡಿಯಬೇಡವೋ ಎನ್ನ ನೀ ಪೋಗು ಎಂದೆನುತ ಕಡು ದಯಾನಿಧಿ ನಿನ್ನ ನಾ ಬಿಡೆನೊ 2 ಆನಂದ ಪರಿಪೂರ್ಣ ಶ್ರೀನಾಥ ನಿನಗೇಕೆ ಕಾನನಾ ವಾಸವು ಕಮಲನಯನ ಜ್ಞಾನದಾಯಕ ನಿನ್ನ ಚರಣ ಶರಣನೊ ನಾನು ದೀನರಕ್ಷಕ ಸ್ವಾಮಿ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ನಿನ್ನ ಮರೆದೆನೊ ರಂಗ ನಿನ್ನ ಮರೆದೆ ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಪ ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ ನಾಟುವುದು ಅವರ ಕಡೆ ಅನುರಾಗದಿ ನೀಟಾದ ಭೋಜನವ ಬಯಸುವೆನು ಯಮರಾಯ ಭಂಗ ಕೇಳಿ ಎಚ್ಚರಿಯದಲೆ1 ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ ಹೊತ್ತು ಹೊತ್ತಿಗೆ ಅವರ ಕೊಂಡಾಡುತ ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ2 ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ ಬಿಡದೆ ಮಾಡಿದ ಪುಣ್ಯಪಾಪಗಳೆದು ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು3 ಅನ್ನವಿತ್ತವನ ಪಾಪಗಳು ನಿರಂತರದಿ ಅನ್ನದಾಶ್ರಯ ಮಾಡಿಕೊಂಡಿಪ್ಪವು ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ ಧನ್ಯನಾದೆನು ನಾನು ಪರರ ಪಾಪವ ಭುಜಿಸಿ 4 ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ ಉಬ್ಬುವೆನು ಊರು ಕೇರಿ ಹಿಡಿಸದಂತೆ ಸುಬ್ಬನ ಸೂರೆಯಂತೆ ಪರರ ಅನ್ನವನುಂಡು ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ 5 ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ ಕಡೆಗೆ ಪೋಗುವುದೊಂದು ನಿಲುವುದೊಂದು ತಡೆಯದಲೆ ಸಂತಾನ ಪಡೆವುದೊಂದೀತೆರ ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ6 ಆವಾವ ಬಗೆರುಚಿ ಜಿಹ್ವಗೆ ತೋರುತಿದೆ ಆವಾವ ಬಗೆ ನರಕ ಬೇರೆಯುಂಟು ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ ಈ ಜೀವ ಹಿತವಾಗುವಂತೆ ಮಾರ್ಗವ ತೋರು 7
--------------
ವಿಜಯದಾಸ
ನಿನ್ನ ಮೂರುತಿಯ ತೋರಸೋ | ರಂಗಯ್ಯಾ ಪ ನಿನ್ನ ಮೂರುತಿಯ ತೋರಿಸೆನ್ನ ಕಂಗಳಿಗೆ ದಯ | ವನ್ನು ಬೀರಿ ಭವಭಯ ಬನ್ನವನು ಬಿಡಸೋ ರಂಗಯ್ಯಾ ಅ.ಪ. ಅರುಣನಖಾಂಗುಲಿ ಹೊಳೆವಾ | ಕೋಮಲ ಪಾದಾ| ಎರಡು ಜಂಘೆ ಜಾನುರವಾ |ಕಟಿ ಜಗದು | ದರನಾಭಿ ಸಿರಿವತ್ಸವಾ | ಕಂಬುಗ್ರೀವದ | ಕರಚತುಷ್ಟಯ ಮೆರೆವಾ | ಕರುನಗೆದಂತಾ | ಧರಮಿರುಪಕದಪುಶೃತಿ | ಅರಗಂಗಳನಾಸಾ | ಪೆರೆ ನೋಸಳಲಳಕದಾ ರಂಗಯ್ಯಾ 1 ಕೌಸ್ತುಭ ಕೇಯೂ | ರನ್ನು ತೋಳಬಂದಿ ಸ್ಪುರದಾ | ಕಡಗ ಮುದ್ರಾಂ | ಅಂದುಗೆ ಗೆಜ್ಜೆ | ನೀಲ ಪರಿ ಮಂದ ಮತಿಯೆನ್ನದೆ ಕರುಣಿಸಿ ರಂಗಯ್ಯಾ2 ನಿನ್ನ ಕಳೆಗಳ ತೋರಿಸಿ | ಹಮ್ಮಮತೆಯಾ | ಮನ್ನೀನವಗುಣ ಬಿಡಸೆ | ಸಂತರ ಕೈಯಾ | ಅನುದಿನ ಒಪ್ಪಿಸಿ | ಸನ್ನುತ ಮಹಿಪತಿ | ಚಿನ್ನನೊಡೆಯನೇ ಬಹ | ಜನ್ಮ ಜನ್ಮಾಂತರದಲಿ ತನ್ನವನೆಂದೆನಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ವಲಿಸುವ ಭಾಗ್ಯ ನಿನ್ನ ಭಕ್ತರಿಗೆ ನೀ ಕೊಟ್ಟು ಸನ್ನುತ ಚರಿತರಿಗೀವೆಯಲ್ಲದೆ ನಿನ್ನ ಮಹಿಮೆಯ ತೋರುವ ಅನ್ಯರಿಗೆ ಈ ಭಾಗ್ಯವುಂಟೆ ನಿನ್ನ ವಲಿಸಲು ಸಂಪನ್ನ ಶ್ರೀ ಶ್ರೀನಿವಾಸ 1 ಸೂರ್ಯ ತೇಜಕೆ ಪ್ರತಿ ಕೋಟಿಸೂರ್ಯ ತೇಜ ಧರಿಸಿ ಆರ್ಯ ರಾಮರಾಯರಾ ಕರಗತದಿ ಮೆರೆದೊ ಜಗತ್ಸಿರಿಯೆ ಆ ಆರ್ಯರಾ ಮಡದಿ ಸೀತಾಬಾಯಿ ಎಂಬುವರಾ ಆ ಈರ್ವರಾ ಸೇವೆಯಲಿ ಮೆರೆದ ಸುರತರುವೆ ಶ್ರೀ ಶ್ರೀನಿವಾಸ 2 ನಿನ್ನ ಸೇವಾಕಾರ್ಯ ಆವಾವುದೆಂದ್ಯೋಚಿಸದೆ ನಿನ್ನ ಸೇವಾಕಾರ್ಯದಲಿ ನಿರುತ ತಪವನೆಗೈಯೆ ಮಾನವ ವೇಷಧಾರಿಣಿಯರಾಗಿ ಪುಟ್ಟಿಹರೂ ಜಗದಿ ಬಕುಳಾವತಿಯ ತೆರದಿ ನಿನ ಸೇವ ನಿರತದಿ ಶ್ರೀ ಶ್ರೀನಿವಾಸ 3 ಸಾರ ಗುರುಮುಖದಿಂದ ತಿಳಿದು ನಿ ಲಕುಮಿ ಆವಾಹಿಸಿದ ಬಿಲ್ವರÀಸವ ನಿನಗರ್ಪಿಸಿ ಅಕಳಂಕ ಮಹಿಮರು ಸೇವಿಸಿ ಸೌಳ ವರುಷ ತಪವಗೈದಿಹರೊ ಗುರುವಾಜ್ಞೆಯಲಿ ನಿನ್ನ ಸೇವಿಸೆ ಶ್ರೀ ಶ್ರೀನಿವಾಸ 4 ನಿನ್ನ ಸೇವಕರಾದ ಆ ಮಾನುನಿಯರನುದ್ಧರಿಶೆ ನಿನ್ನ ಇಂಥ ಆಟಗಳ ಗೋಪಿಗೆ ಕೃಷ್ಣ ತೋರಿದಂದದಲಿ ಸನ್ನುತಾಂಗನೆ ತೋರಿ ಭಕ್ತರಭೀಷ್ಟವನು ಉನ್ನತದಿ ಸಲಿಸೆ ಜಗದಿ ಘನ್ನ ಸಂಪನ್ನ ಲೀಲೆನೋಡಲು ಶ್ರೀ ಶ್ರೀನಿವಾಸ 5 ಗಂಗಾಜನಕನೆ ನಿನ್ನುಂಗುಟದಿಂ ಬಂದ ಗಂಗೆಯ ಕೇಸರಿತೀರ್ಥದಾ ಸೊಬಗೇನೆಂದು ಬಣ್ಣಿಪೆನೊ ಶ್ರೀ ರಂಗನಾಥಾ ಸರ್ವರಿಗೆ ದಾತಾ ರಂಗನಾಥನೇ ನಿನ್ನ ಪಂಚಾಮೃತದ ಅಭಿಷೇಕ ಕಂಗಳಿಗ್ಹಬ್ಬವೊ ಜಗದ ಜಂಗುಳಿ ಭಕ್ತರಿಗೆನುತೆ ಶ್ರೀ ಶ್ರೀನಿವಾಸಾ 6 ತನ್ನ ತೊಡೆಯೊಳಗಿಟ್ಟು ಉನ್ನತದ ಆಭರಣ ಗೋಪಿ ಇಡುವ ತೆರದಿ ಇನ್ನು ನಿನಗಲಂಕಾರ ಮಾಡುವದೇನ ಬಣ್ಣಿಪೆನೋ ಸನ್ನುತ ಚರಿತರವರೈಸೇ ನಿನ್ನ ನೇವೇದ್ಯ ಘನ್ನ ಮಂಗಳಾರುತಿ ಬೆಳಗಿ ನಿನ್ನ ಸ್ತುತಿ ಮಾಡುತ್ತ ನಿನ್ನ ತೀರ್ಥವನ್ಹಂಚುವರೊ ಭಕ್ತರಿಗೆಲ್ಲ ಶ್ರೀ ಶ್ರೀನಿವಾಸ 7 ಏನು ಸುಕೃತವ ಮಾಡಿ ಈ ಮಾನುನೀಯರು ಪುಟ್ಟಿಹರೊ ಗಾನಲೋಲನೆ ನಿನ್ನ ಲೀಲೆ ಜಗಕೆ ಬೇರೆ ತೋರೆ ಮನಸಾರೆ ಸಾನುರಾಗದಿ ಬಂದು ನಿನ್ನ ಭಕ್ತರಾ ಮಂದಿರಕೆ ದೀನನಾಥನೆ ನಿನ್ನ ಸಹಿತದಲಿ ಮಾನುನಿಯು ದಾನವಾಂತಕ ನಿನ್ನ ಮಹಿಮೆ ತೋರುವರೊ ಏನೆಂದು ಬಣ್ಣಿಸಲಿ ಎನ್ನಳವೇ ಶ್ರೀ ಶ್ರೀನಿವಾಸ 8 ಒಬ್ಬೊಬ್ಬ ಭಕ್ತರಲಿ ಒಂದೊಂದು ಮಹಿಮೆಯನು ಅಬ್ಬರದಿ ತೋರುವರೊ ನಿನ್ನ ಮಹಿಮೆಯ ದೇವ ಮತ್ತೊಬ್ಬರಾ ಮನೆಯಲ್ಲಿ ಪ್ರಸಾದದಾ ಮಹಿಮೆಯನು ಮತ್ತೊಬ್ಬರಾ ಮನೆಯಲಿ ತೀರ್ಥದಾ ಮಹಿಮೆ ತೋರಿ ಅಬ್ಬರದಿ ಮೆರೆಸುವರೋ ಶ್ರೀ ಶ್ರೀನಿವಾಸ 9 ಗಾನ ಪ್ರಿಯನೆ ನಿನ್ನ ಕಲ್ಯಾಣದುತ್ಸವವು ಏನೇನು ಮಾಡುವ ಕಾರ್ಯ ನಿನ್ನದೇ ಎಂದು ಆನಂದದಿಂದ ಮಾಡುವರೊ ಹರಿಯೆ ದೋರೆಯೆ ದೀನನಾಥ ಎನ್ನ ಹೃದಯದಲಿ ನೀನಿಂತು ನುಡಿದಂತೆ ನುಡಿದಿರುವೆ ಅನಾಥ ಬಂಧು ಶ್ರೀ ಶ್ರೀನಿವಾಸಾ ಶ್ರೀಶಾ 10
--------------
ಸರಸ್ವತಿ ಬಾಯಿ
ನಿನ್ನ ವಶದಲಿ ಇದ್ದು ಇದ್ದು ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ಪ ಚಿತ್ರವಾದ ಕರಿಯ ಶೃಂಗರಿಸಿ ಮೇಲೆ ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ 1 ಕಾಲಕಾಲಕೆ ಸುಧಿಯ ಸವಿದು ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ ತಾಳವೃಕ್ಷವನೇರಿ ತಲೆಕೆಳಗಾಗಿ ತಾ ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ 2 ವೇಣಿ ಮಾಧವರಾಯಾ ನಿನ್ನ ಚರಣಾಂಬುಜ ಕಾಣುವ ಪ್ರಕಾಶ ಉದಾಸಸಿ ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ ಹೀನನಂತೆಯಾದೆ ವಿಜಯವಿಠ್ಠಲರೇಯಾ 3
--------------
ವಿಜಯದಾಸ
ನಿನ್ನ ಸೇವೆಯನೊಂದನಿತ್ತು ಸಲಹೋಎನ್ನ ಮನ ನಿನ್ನಲ್ಲಿ ನಿಲುವಂತೆ ಮಾಡಿ ಪ ಅನ್ನವನು ಬೇಡಿಕೊಂಬುವದೆಂತು ವಿಪುಳ ವಿಷವನ್ನು ಕುಡಿದಿಹ ನೀಲಕಂಠನೊಡನೆಸನ್ನುತಾಂಬರವ ಬೇಡುವುದೆಂತು ಕರಿಚರ್ಮ-ವನ್ನು ಪೊದೆದಿಹ ದಿಗಂಬರನೊಡನೆ ಶಂಭೋ 1 ಮಿರುಗುವಾಭರಣಗಳ ಬೇಡಿಕೊಂಬುದೆಂತುಉರಗಕುಂಡಲಹಾರ ವಲಯನೊಡನೆಪರಮ ಭಾಗ್ಯವ ಬೇಡಿಕೊಂಡೆ ನಾನೆಂತು ವಿಧಿಶಿರದಿ ಭಿಕ್ಷವ ಬೇಡಿ ತಿರಿದುಂಡನೊಡನೆ 2 ಕರಿತುರಗ ಮುಖ್ಯವಾಹನವ ಬೇಡುವುದೆಂತುನಿರುತ ಬಸವನ ಮೇಲೆ ಚರಿಪನೊಡನೆಕರುಣದಿಂದೆನಗೆ ಕೊಡಲೇನುಂಟೊ ಕೆಳದಿಪುರ-ದೆರೆಯ ರಾಮೇಶ ಶ್ರೀಕರ ಪಾರ್ವತೀಶ 3
--------------
ಕೆಳದಿ ವೆಂಕಣ್ಣ ಕವಿ
ನಿನ್ನ ಸೊಬಗಿದೇನೊ ಶ್ರೀಹರಿ ವಿಭವ ಚನ್ನಕೇಶವಾ ಪ ಸತಿ ಸಿರಿದೇವಿಯು ಅತಿ ಚಂಚಲೆಯು ಸುತಮದನ ತಾನನಂಗನೂ ಸುತೆ ಬಾಗೀರಥಿ ವಕ್ರಮಾರ್ಗಳೋ ಅತಿಶಯ ಮೈದುನ ಕ್ಷಯರೋಗಿ 1 ಇರುವ ಮಂದಿರವು ಸಾಗರ ಮಧ್ಯವು ಉರಗನ ಮೇಲೆ ಪವಡಿಸಿಹೆ ಗರುಡನೇರಿ ಗಗನದಿ ತಿರುಗಾಡುವೆ ನೆರೆ ತುಲಸಿಯ ಮಾಲೆಯ ಹಾಕಿರುವೆ 2 ದಾನಕೊಟ್ಟವನ ಭೂಮಿಗೆ ತುಳಿದೆ ಧ್ಯಾನ ಗೈದವನ ಶಿರವರಿದೆ ಮಾನಿನಿ ಕೊಟ್ಟ ಸವಿಫಲಭಂಜಿಸಿ ಕೂರ್ಮ ವರಹನು ನೀನಾದೆ 3 ಹೀಗಿದ್ದರೂ ಸತ್ಸತಿಸುತ ಬಾಂಧವ ಭೋಗ ಭವನ ಭಾಗ್ಯಗಳಿತ್ತು ರಾಗದಿ ರಕ್ಷಿಪೆ ಶರಣರ ನಿರುತವು ಭಾಗವತಪ್ರಿಯ ಜಾಜಿಕೇಶವಾ 4
--------------
ಶಾಮಶರ್ಮರು
ನಿನ್ನಚರಣಾರವಿಂದವ ಪ ಪರಮ ಪುರುಷನಿನ್ನ ಚರಣ ಪಂಕಜವನ್ನು ನಿರುತ ನಂಬಿದೆ ಎನ್ನದುರಿತ ಪರ್ವತವನ್ನು ಸುರಪ ವಜ್ರದಿ ಗಿರಿಗಳನು ಖಂಡಿಸಿದವೋಲ್ ತರಿದು ರಕ್ಷಿಸೋ ಮುರಹರನೆ ಸ್ಮರಣೆಯಿತ್ತು 1 ಮಕ್ಕಳಾಟಿಕೆಯಿಂದ ಕೆಲವು ದಿವಸಸಂದು ಕಾಲ ಬರಲುಸ್ತ್ರೀಯರಿಗೆ ಕ ಣ್ಣಿಕ್ಕಿ ಮುದದಿ ದಿನಗಳೆದು ಮರೆತೆನೀಗಳು ಸೀತಾ ರಮಣ ಸ್ಮರಣೆಯಿತ್ತು 2 ವಿಧಿ ಬರೆದ ಲಿಖಿತವೆಲ್ಲ ಸಂತು ದರ್ಜನರೊಡನಾಟದೊಳಗೆ ಕಾಲ ವಿಂತು ಸವೆದು ಜರೆ ಮುಸುಕಿತೆನೆಗೆ ಲಕ್ಷ್ಮೀ ಕಾಂತ ನಿನ್ನಯ ನಾಮ ಸ್ಮರಣೆಯಂತ್ಯದೊಳಗಿತ್ತು 3
--------------
ಕವಿ ಪರಮದೇವದಾಸರು
ನಿನ್ನವ ನಾನೆಂದು ಸಿರಿನಲ್ಲಾ ರಕ್ಷಿಸೋ | ಎನ್ನವಗುಣಗಳ ಎಣಿಸದೆ ದಯದಿಂದ ಪ ನಿನ್ನ ಮೂರುತಿಯ ಬೆಳಗವದೋರಿಸಿ | ನಿನ್ನ ಪಾದಾಂಬುಜ ಪರಿಮಳ ಸುಳಿಸಿ | ನಿನ್ನ ನಾಮಾಮೃತ ಸವಿಸವಿ ಉಣಿಸಿ1 ನಿನ್ನ ಪೂಜಿಸಿಕೊಂಡು ಕರಗಳಿಂದ | ಚೆನ್ನಾಗಿ ಪ್ರದಕ್ಷಿಣೆಯಾ ಪಾದಗಳಿಂದ | ಕಾಯ ನಮನದಿಂದ - ಎನ್ನ ಮನವಿಟ್ಟು ನಿನ್ನ ನೆನುವಿನಿಂದಾ2 ಅನುದಿನ ಕೊಟ್ಟು ನಿನ್ನ ದಾಸರ ಸಂಗ | ಕೊನೆದೇಳದಿರಲೆನ್ನಾ ವಿಶ್ರಾಮದಂಗ | ನೀನಾಗಿರು ತುಂಬಿಯೆನ್ನಾ ಬಾಹ್ಯಾಂತರಂಗ | ಘನಗುರು ಮಹಿಪತಿ ಪ್ರಭುಶ್ರೀರಂಗ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ನಿಮ್ಮ ನುಡಿಗಳ ಕೇಳಲೆನಗೆ ಹೊತ್ತೆಲ್ಲಿಯದುನಮ್ಮ ಗೃಹಕೃತ್ಯಗಳು ಬಹಳವಾಗಿಹವೊ ಪನಮ್ಮಯ್ಯನೊಂದು ಗ್ರಾಮವನೇಕಸ್ವಾಮ್ಯದಲಿತಮ್ಮ ದಂಪತಿಗಳುಪಭೋಗಕೆಂದುತಮ್ಮಲ್ಲಿ ತಾವೆ ಸಂವಾದಿಸಿದರವರಲ್ಲಿಹಮ್ಮು ಕಡೆಯಾದ ಹದಿಮೂವರುದಿಸಿದರೂ 1 ಕ್ಲೇಶ ಬಡಿಸುವರು 2ಸ್ತ್ರೀ ಕಾಮನೆ ರಾಗ ಪ್ರತಿಕೂಲದಿಂ ದ್ವೇಷ ಬೇಕೆಂಬದನೆಕಾದುನುಳಿಯೆ ಕ್ರೋಧಾಆಕ್ರಮಿಸಿ ಸಕಲವನು ಬಚ್ಚಿಡುವನವ ಲೋಭಸಾಕು ಗುರುಹಿರಿಯರೆಂಬವರರಿಯೆ ಮೋಹಾ 3ನಿತ್ಯವಲ್ಲದ ಸಿರಿಯ ನಂಬಿ ಬೆರೆತಿಹಮದನುಉತ್ತಮರ ಕೂಡೆ ಸೆಣೆಸುವನು ಮತ್ಸರನುಮತ್ತೆ ಈಷ್ರ್ಯನು ದುಃಖನನ್ಯರಿಗೆ ಬಗೆಯುತಿಹವ್ಯರ್ಥದಿಂ ಬಸವಳಿಯುತಿಹನಸೂಯಕನು 4ದಂಭವನೆಂಬವನಲ್ಲಿ ಪುರುಷಾರ್ಥವಿಸಿಕಿಲ್ಲಹಂಬಲಿಸುತಿಹ ದರ್ಪಕೊಬ್ಬಿ ಬರಿದೆಉಂಬರೊಬ್ಬರಿಗಿಲ್ಲ ಸಕಲವೂ ನನಗೆಂದುದೊಂಬಿಯಲಿ ನಾ ಸಿಕ್ಕಿ ಬಳಲುತಿಹೆನಾಗಿ 5ವೃತ್ತಿಯೆರಡದರಲ್ಲಿ ಫಲವೆರಡು ಜನ್ಮಕ್ಕೆಬಿತ್ತಿ ಬೆಳೆವರೆ ಚೌಳು ಜಲವ ಕಾಣೆಒತ್ತರಿಸಿ ಬರುತಿರುವ ಜ್ಞಾತಿಗಳ ಬೆಂಕಿಯಲಿಹೊತ್ತು ಹೊತ್ತಿಗೆ ಬರಿದೆ ದಹಿಸುತಿಹೆನಾಗೀ 6ಬರಿಯ ಭ್ರಾಂತಿನ ಬಲೆಯ ಬೀಸಿ ನೋಡುತ್ತಿರುವತಿರುಪತಿಯ ವೆಂಕಟನ ಚರಣಗಳನುಕರಗಳಲಿ ಬಿಗಿಯಪ್ಪಿ ಶಿರವೆರಗಿ ಗುರುಮುಖದಿಅರುಪಿದುದ ನಿಲಿಸೆಂದು ಬೇಡಿಕೊಳುತಿಹೆನು 7ಕಂ||ತನುವಿನೊಳಭಿಮಾನವಿರಲೀಘನತರ ಸಂಸಾರ ದುಃಖ ತೊಲಗದು ಸತ್ಯತನು ನಿತ್ಯತೆದೋರ್ದಕಾರಣಮನದೊಡನಿಂತೆಂದು ಜೀವನನು ವಾದಿಸಿದಂ
--------------
ತಿಮ್ಮಪ್ಪದಾಸರು
ನಿರುತದಿ ನೆನೆ ನರಹರಿಯ ನರಹರಿಯ ಶಿರಿಧೊರೇಯ ಪ ಪೋತ ಧ್ರುವನು ತಾ ತಾತನ ತೊಡಿಯಲಿ ಪ್ರೀತಿಲಿ ಕುಳಿತಿರೆ ಮಾತೆ ದೂಡಲತಿ ಸೋತು ಮನದಿ ಹರಿ ಸ್ತೋತ್ರವ ಗೈಯ್ಯಲಾತಗೆ ಪದ ನೀಡಿದಾ 1 ಕಡಿಗ್ಯಾದ ದ್ರೌಪದಿ ಮುಡಿಯ ಪಿಡಿದು ಖಳ ಬಿಡÉಳೆದೊಯ್ಯೊ ಕಡುದುರುಳ ಸಭೆಗೆ ಸಿಡಿದೆಳೆಯೆ ಶೀರೆಯನು ಒಡನೆ ಹರಿಯೆನಲುಡುವಾಸವಕ್ಷೈಸಿತು 2 ದುರುಳ ಹಿರಣ್ಯಕಶು- ಪಿರದೆ ಪೀಡಿಸಲು ಪರಿಪರಿಯಿಂದಲಿ ಹರಿಗೆ ಮೊರೆಯಿಡಲು ಕರುಳು ಬಗೆದ ನರಸಿಂಹವಿಠಲನು 3
--------------
ನರಸಿಂಹವಿಠಲರು