ಸ್ಮರಿಸಿ ಸೇವಿಸಿ ವೆಂಕಟರಾಯದಾಸರ ಪ
ವಾಸರ ಅ.ಪ
ನೆನೆದ ಮಾತ್ರಕೆ ನಮ್ಮ ಪರಮ ಗುರುಗಳ
ಅನುದಿನ ಪುಷ್ಟಿ ಕರೆವ ವರಗಳ 1
ಧ್ಯಾನಮಾಡಲು ಸುಜ್ಞಾನ ಪಾಲಿಸಿ
ತಾನೆ ಒಲಿವನು ಕರುಣಿ ಇದನೆ ಲಾಲಿಸಿ 2
ಕುಂಭಕೋಣದಿ ವಾಸವನ್ನೆ ಮಾಡುತ
ಡಂಭ ವೇಷವ ತ್ಯಜಿಸಿ ಹರಿಯ ಪಾಡುತ 3
ಕ್ಷೇತ್ರ ಕ್ಷೇತ್ರವ ಚರಿಸಿ ಬರುತ ಅಲ್ಲಿಹ
ಅನುದಿನ 4
ಸುಲಭ ಶ್ರೀಗುರು ವಿಜಯರಾಮಚಂದಿರವಿ
ಠಲ ಒಲಿವನು ಭವಾಟವಿಯ ತರಿವನು 5