ಒಟ್ಟು 1548 ಕಡೆಗಳಲ್ಲಿ , 100 ದಾಸರು , 1077 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂತರೆನಬಹುದು ಸಜ್ಜನರಿವರನಾ ಪ ಇಂಥ ಗುಣಗಳಿಂದ ಯುಕ್ತರಾಗಿಪ್ಪರ ಅ.ಪ. ಸ್ವಾಂತಸ್ಥಾ ನುತ ಸರ್ವಾಂತರಾತ್ಮಕನೆಂದು ಚಿಂತಿಸುತ ಮನದೊಳು ನಿರಂತರದಲಿ ನಿಂತಲ್ಲಿ ನಿಲ್ಲದೆ ದುರಂತ ಮಹಿಮನ ಗುಣವ ಸಂಸ್ತುತಿಸುತನವರತ ಶಾಂತರಾಗಿಹರಾ 1 ಲೇಸು ಹೊಲ್ಲೆಗಳು ಪ್ರದ್ವೇಷ ಗೇಹಗಳು ಸಂ ತೋಷ ಕ್ಲೇಶಗಳಿಗವಕಾಶ ಕೊಡದೆ ದೋಷ ವರ್ಜಿತ ಹೃಷಿಕೇಶ ಮಾಡುವನೆಂದು ಭೇಶನಂದದಲಿ ಪ್ರಕಾಶಿಸುತಲಿಹರಾ 2 ಮೇದಿನಿ ದಿವಿಜರೊಳು ಸಾಧು ಜನರೊಳು ಧರ್ಮಕರ್ಮಗಳೊಳು ಶ್ರೀದನೊಳು ಗೋವುಗಳೊಳಗೆ ದ್ವೇಷಿಪರಿಗೆ ಅ ನ್ನೋದಕಗಳೀಯದೆ ನಿಷೇಧಗಯ್ಯುತಲಿಹರಾ 3 ಎನ್ನ ಪೋಲುವ ಪತಿತರಜ್ಞಾನಿಗಳು ಜಗದೊ ಳಿನ್ನಿಲ್ಲ ಪತಿತ ಪಾವನನೆನಿಸುವ ಜಾಹ್ನವೀ ಜನಕಗಿಂದಧಿಕರ್ಯಾರಿಲ್ಲೆಂದು ಉನ್ನತೋತ್ಯಂಶದಿಂದ ಸನ್ನುತಿಸುತಿಪ್ಪವರ 4 ಸತ್ಯ ಸಂಕಲ್ಪ ಏನಿತ್ತಿದ್ದೆ ಪರಮ ಸಂ ಪತ್ತು ಎನಗೆನುತ ಸದ್ಭಕ್ತಿಯಿಂದಾ ನಿತ್ಯದಲಿ ಕೀರ್ತಿಸುತ ಪುತ್ರಿಮಿತ್ರಾದಿಗಳು ಭೃತ್ಯಾನುಭೃತ್ಯರೆಂದರ್ತಿಯಲಿ ಸ್ಮರಿಸುವರಾ 5 ಜನುಮ ಜನುಮಗಳಲ್ಲಿ ಎನಗೆ ಜನನೀ ಜನಕ ಅನುಜ ತನುಜಾಪ್ತ ಪೋದನ ಭೂಷಣಾ ಅನಿಮಿತ್ತ ಬಂಧು ಒಬ್ಬನೇ ಎನಿಸುತಿಪ್ಪ ಸ ಪರ ಸೌಖ್ಯ ರೂಪನೆಂಬುವರಾ 6 ನಾಗೇಂದ್ರಶಯನ ಭವರೋಗಾಪಹರ್ತ ಪಾ ವಜ್ರ ಅಮೋಘ ಶೌರ್ಯ ತ್ರೈಗುಣ್ಯ ವರ್ಜಿತ ಜಗನ್ನಾಥ ವಿಠಲಗೆ ಕೂಗಿ ಕೈಮುಗಿದು ತಲೆಬಾಗಿ ನಮಿಸುವರಾ 7
--------------
ಜಗನ್ನಾಥದಾಸರು
ಸತಿ ಪ. ನಾರಿಮಣಿಯೆ ನಿನ್ನ ಯಾರು ವರ್ಣಿಸುವರೆ ಸಾರಸಾಕ್ಷಿಯೆ ನಿನ್ನ ಸಾರಿ ಭಜಿಪೆ ಮುನ್ನ 1 ರಂಗನ ಅಂಗನೆ ಮಂಗಳ ರೂಪಳೆ ರಂಗು ಮಾಣಿಕ್ಯದ್ವಜ್ರ ಅಂಗಾಭರಣವಿಟ್ಟು 2 ಶ್ರೇಷ್ಠರೂಪಳೆ ಮನಮುಟ್ಟಿ ಪೂಜಿಪೆ ನಿನ್ನ ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನರಸಿ 3
--------------
ಅಂಬಾಬಾಯಿ
ಸತಿಯಿಲ್ಲಸುತರಿಲ್ಲ ಬಂದು ಬಾಂಧವರಿಲ್ಲ ನುತ ಕೇಶವನಲ್ಲದೆ ಸದ್ಗತಿ ಎನಗಿಲ್ಲ ಪ ಹೆರರನಾಶ್ರಯಿಸಿ ಬದುಕಬೇಕಲ್ಲ ನರರನನುಸರಿಸಿ ಬಡವಾದೆನಲ್ಲ ಇರುವ ನಾಲ್ಕು ದಿನದ ಬರಿದೆ ಸುಖಕ್ಕಾಗಿ ನರನಿಗೆ ನೀಚನಿಗೆ ಈ ಸ್ಥಿತಿ ಒದಗಿತಲ್ಲ 1 ಹರಿನಿನ್ನ ಭಜಿಸದೆ ಬಲು ಬಾಧೆಯಾಗಿದೆ ಪರಿಪರಿಯ ನೋವನ್ನು ನೀಗುವವರಾರಿಲ್ಲ ಸಿರಿಸಂಪತ್ತಿರುವರೆಗೆ ಸತಿಸುತರೆಲ್ಲ ಕರೆದರೂ ಬರರಲ್ಲ ಬಾಂಧವರು ಸ್ನೇಹಿತರು 2 ಸುಖದಲಿರುವಾಗ ಮನ್ನಿಪರೋ ಎಲ್ಲ ಅಖಿಲಗೋತ್ರಜರು ನೆರೆಹೊರೆಯವರು ಸಖರು ಯಾರಿಲ್ಲ ಸಾವು ಬಂದೆಳೆವಾಗ ಅಖಂಡ ಒಡೆಯ ಜಾಜಿಪುರೀಶ ಕಾಯಬೇಕಯ್ಯ 3
--------------
ನಾರಾಯಣಶರ್ಮರು
ಸಂತೋಷವೆಂತು ನಾ ವರ್ಣಿಪೆನು ಎನ್ನಂತರಂಗವ ಸಂತೋಷವೆಂತು ನಾ ವರ್ಣಿಪೆನು ಪ ಕಂತೆ ಜೀವನವÀ ತೊರೆದು ಸಂತತ ನಿನ್ನ ಭಜಿಸುವ ಅ.ಪ ಲೇಸು ಜೀವನದ ಆಸೆಗೆ ಬೆರಗಿ ಮೋಸದಿ ದಿನ ದಿನನೂರಾರು ಮಿತ್ರ ಬಾಂಧವ ಜ ಸಾಸಿರ ದುಷ್ಕøತಿಗಳನು ರಚಿಸಿ ಕರವ ನೀಡಿದೆ 1 ನರು ಯಾರೆನ್ನವುದಕೆ ಕಾರಣರಾದರೋ ನಾನರಿಯೆ ನೀರಜಾಕ್ಷನೆ ನಿನ್ನಯ ಸಾರಸೇವೆಯನು ಮಾಡಿದ 2 ಅನ್ನವನರ್ಜಿಸುವ ಬಗೆ ಹೊರತು ಇನ್ನೊಂದನರಿಯದೆ ಸಣ್ಣತನದಲಿ ದಿನ ಕಳೆಯುತಿರೆ ಮಾನ್ಯ ಯೋಗವನರುಹಿ ಪ್ರಸನ್ನ ಶ್ರೀಹರಿಯ ನುತಿಸುವ 3
--------------
ವಿದ್ಯಾಪ್ರಸನ್ನತೀರ್ಥರು
ಸತ್ಯಧರ್ಮ ಸದ್ಗುರುವರ ರಕ್ಷಿಸು ಪ ಭೃತ್ಯ ನೀನಾಗೆಂದು ಕೃತ್ಯ ವಿಪರ್ಯಯ ವೆತ್ತಣಿಸದೆ ಕೃತಕೃತ್ಯನ ಮಾಡಿಂದು ಅ.ಪ ಸತ್ಯವರರ ವರ ಕುವರನೆ ನೀನತ್ಯುತ್ತಮ ಸುಖ ಚಿನ್ನ ಯತ್ಯಾಶ್ರಮ ಸದ್ಧರ್ಮಾಚರಣದಿ ನಿತ್ಯಾರ್ಜಿತ ರಾಮ ಭೃತ್ಯಜನಕೆ ಸದ್ಬುದ್ಧಿ ಬೋಧಿಸಿ ಕೃತಕೃತ್ಯರ ಮಾಡುತಲಿ ಸುನಾಮ ಯಥಾರ್ಥಪಡಿಸಿ ಕ್ಷಿತಿಗುತ್ತಮನೆಸಿದ 1 ಭದ್ರಾತೀರನೆ ಇತ್ತು ಸುಭದ್ರಗಳ್ ನಿದ್ರಾರಹಿತರಿಗೆ ಆದ್ರಾಂತಃಕರುಣನೆ ಸೌಹಾರ್ದದಿ ಭದ್ರಾರಮಣನಲಿ ಛಿದ್ರರಹಿತ ಶಿಲೆ ಮಧ್ಯದಿ ಪಡೆದು ಸುಭದ್ರಾಪತಿ ಸಖ ಮುದ್ರಾಧರನೆ 2 ಶ್ರೀ ನರಹರಿ ಪದ ನೀನನುದಿನದಲಿ ಧ್ಯಾನಮಾಡುತ ಬಾಹ್ಯ ಜ್ಞಾನವಿಲ್ಲದೆ ಅನುಮಾನ ವಿಪರ್ಯಯ ಹೀನಗೈಸಿ ಸಾಕ್ಷಿ ಮಾನದಿಂದ ಕೊಟ್ಯಾರ್ಭುದ ರವಿಪ್ರಭೆ ಕಾಣುತ ಪ್ರತಿಮುಖವೋಲ್ ಏನು ಇದಕೆ ಅನುಮಾನವಿಲ್ಲ ಹಂ ಮನಿಯವನೆನ್ನುವೆ ನೀ ಸರಿಲಿಂಗರೂಪಧರ3
--------------
ಪ್ರದ್ಯುಮ್ನತೀರ್ಥರು
ಸತ್ಯಬೋಧರಾಯಾ ಪಾಲಿಸು (ನಿನ್ನ) ಭೃತ್ಯರ ನನ ಜೀಯಾ ಸ್ತುತ್ಯ ಸುಕಾಯ ಪ ದೂರ ನೋಡದಲೆನ್ನ ಗುರುವರ ಪಾರಗೈಪುದು ಮುನ್ನ ಶ್ರೀ ರಮಾರಮಣನಾರಾಧಕರೊಳು ಧೀರ ನಿನಗೆ ಸರಿಯಾರಿಹರಯ್ಯ 1 ಮತ್ತನಾಗಿಹೆ ನಾನು ಭವದಲಿ ಸತ್ತು ಹುಟ್ಟುತಲಿಹೆನು ಚಿತ್ತಕೆ ತರದಲೆನ್ನವಗುಣಗಳ ಮತ್ತೆ ಕೈಪಿಡಿಯುತಲೆತ್ತುವುದು 2 ಶರಣು ಶರಣು ದೊರೆಯೆ ಕರುಣದಿ ಪೊರೆದನ್ಯರನರಿಯೇ ಸಿರಿ ಮಧುಕರನಾಗಿರುತಿಹ 3
--------------
ಹನುಮೇಶವಿಠಲ
ಸತ್ಯಾದ ನಡಿ ಹಿಡಿರೋ ಮನಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಧ್ರುವ ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ 1 ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ 2 ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ ಘಾಸಿ ಮಾಡಲಬ್ಯಾಡಿ 3 ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ4 ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ 5 ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ 6 ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ 7 ಅನ್ನಬೇಡಿದವ ಗಿಲ್ಲೆನ ಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ 8 ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ 9 ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ ಕಾರಣನೆಲ್ಲೂ ಭಾಮೆ ಇಚ್ಛೆಯಿಂದಲಿ ಬಂದನಿಲ್ಲೆ 1 ಮಚ್ಛಲೋಚನೆ ನಗುತ ಅಚ್ಚಮುತ್ತಿನ ದ್ವಾರ್ಯ ಮುಚ್ಚುಕದವ ತೆಗೆಯದೆ ಭಾಮೆ ಅಚ್ಚುತನ ಕೂಡ ವಿನಯದಿ 2 ಮದಗಜಗಮನೆ ಕೇಳೆ ಗಜವರದನು ನಾನೆ ಕದವ ತೆಗೆಯೆ ಕಮಲಾಕ್ಷಿ ಭಾಮೆ ಮುದದಿ ನೋಡೆನ್ನ ನಿರೀಕ್ಷೆ 3 ಗಜವರದನೆ ಗಜವ ವಧೆ ಮಾಡಿದವನು ನಿನ್ನ ನೆಲೆಯ ಬಲ್ಲವರು ನಾವಲ್ಲ ಕೃಷ್ಣ ಕದವ ತೆಗೆಯೋರ್ಯಾರಿಲ್ಲ4 ಉದಕÀದೊಳು ಮುಣುಗಿ ಬ್ಯಾಗ ಮದಕದಿಂದ್ಹಯನ ಕೊಂದು ತವಕದಿ ವೇದವ ತಂದೆ ನಾನು ಭಾಮೆ ಮತ್ಸ್ಯ ನಾನೆ 5 ಹೊಳೆವೊ ಮತ್ಸ್ಯನಾದರೆ ಶರಧಿ ಹುಡುಕುತ ಹೋಗೊ ನಿನಗಾವಾಸಸ್ಥಾನಯಿದಲ್ಲ ಕೃಷ್ಣ ಜಲವೆನ್ನ ಮನೆಯೊಳಗಿಲ್ಲ 6 ಅಂಬುಧಿ ಮಥಿಸಿ ಅಮೃತ ತಂದು ಸುರರಿಗಿಟ್ಟು ಮಂದರವ ಬೆನ್ನಲಿ ತಾಳಿದೆನೆ ಭಾಮೆ ಸುಂದರ ಕೂರ್ಮನು ನಾನೆ 7 ಸುರರಸುರರ ಯುದ್ಧ ಬಿಟ್ಟು ಮೋಹಿನ್ಯಾಗಲ್ಲಿ ನಡೆ ನಾ ಸ್ತ್ರೀರೂಪ ನೋಡೋಳಲ್ಲ ಕೃಷ್ಣ ಛಲದಿಂದ್ವಂಚಿಸು ಹೋಗವರನೆಲ್ಲ 8 ಮಣ್ಣು ಕೆದರುತಲ್ಹೋಗ್ಹಿ- ರಣ್ಯಾಕ್ಷನ್ನ ಸೀಳಿ ಮನ್ನಿಸ್ಯವನಿಯ ತಂದೆ ನಾನೆ ಭಾಮೆ ವರಾಹ ನಾ ಬಂದೀನೆ 9 ವರಾಹ ನೀನಾದರೆ ಗರಿಗಂಹರವ ಸೇರೊ ಮನೆಗೆ ಬರುವೋದುಚಿತಲ್ಲ ಕೃಷ್ಣ ಮೆಲುವ ಬೇರೆನ್ನ ಮನೆಯೊಳಿಲ್ಲ 10 ತರಳ ಕರೆಯಲು ಕಂಬ ಒಡೆದಸುರನ ಒಡಲ ಕಡು ಕೋಪವನ್ನು ತಾಳಿದನೆ ಭಾಮೆ ವರಲಕ್ಷ್ಮೀನರಸಿಂಹ ನಾನೆ 11 ಕರುಳಾಧಾರಕ ಕೇಳೊ ಕರಾಳವದನಕ್ಕಂಜುವೆನು ಕಡುಕೋಪ ಎನ್ನೊಳು ತರವಲ್ಲ ಕೃಷ್ಣ ತರಳರಂಜುವರು ಲಕ್ಷ್ಮೀನಲ್ಲ 12 ಅಂಜೋದ್ಯಾತಕೆ ಚಿಕ್ಕ ಕÀಂದ ವಟುವು ಚೆಲ್ವ ಸುಂದರ ವಾಮನನು ನೋಡೆ ಭಾಮೆ ಬಂದೆನ್ನ ಗುಣವ ಕೊಂಡಾಡೆ 13 ಕಪಟ ರೂಪದಿ ದಾನ ತ್ರಿಪಾದ ಭೂಮಿ ಬೇಡಿದ ವಿಪರೀತ ಮಾಯವ ಕಂಡವಳಲ್ಲ ಕೃಷ್ಣ ಅಪರ್ಮಿತ ಗುಣ ಬಲಿ ಬಲ್ಲ 14 ಸರಸಿಜಮುಖಿ ಕೇಳೆ ನಿರುತ ಜಪತಪಾಚರಿಸಿ ಪರಶುರಾಮನು ನಾ ಬಂದೆನೆ ಭಾಮೆ ಶರಥ ಮಾಡದಿರೆನ್ನೊಳು ನೀನೆ 15 ನಿರುತ ನಿಷ್ಠೆಯ ಬಲ್ಲೆ ಗುರುತು ಮಾತೆಯ ಕೊಂದೆ ಸರಸವಾಡುವೋಳು ನಾನಲ್ಲ ಕೃಷ್ಣ ಶರಥÀ ಕ್ಷತ್ರಿಯರಲ್ಲಿದು ಹೋಗೆಲ್ಲ 16 ಎರಡೈದು ಶಿರಗಳ ಕಡಿದು ಜಾನಕಿದೇವಿ ಒಡಗೊಂಡಯೋಧ್ಯವನಾಳಿದೆನೆ ಭಾಮೆ ಪೊಡವಿಗೊಡೆಯ ರಾಮ ನಾನೆ 17 ಅಡವಿ ಅರಣ್ಯ ತಿರುಗಿ ಮಡದಿಗಪನಿಂದ್ಯವ ಕಟ್ಟಿ ಅಡವಿಗಟ್ಟ್ಯಂತಃಕರಣವಿಲ್ಲ ಕೃಷ್ಣ ಬಿಡು ನಿನ್ನ ಸುಳ್ಳು ವಚನವಿದೆಲ್ಲ 18 ಯದುವಂಶದೊಳು ಜನಿಸಿ ವಧೆಮಾಡಿ ದೈತ್ಯರ ನಿರ್ಭಯದಿಂದ ಬೆಳೆದೆನೆ ಭಾಮೆ ಮಧು ಮುರಾಂತಕÀ ಕೃಷ್ಣ ನಾನೆ 19 ಕಲಹ ಮಾಡುತ ಕಾಲ- ಯಮನಿಂದಲೋಡಿ ಬಂದು ನಿರ್ಭಯದಿಂದ ಬೆಳೆಯಲು ನಿಂದೆಲ್ಲ ಕೃಷ್ಣ ಮಲಗಿದ ಮುಚುಕುಂದ ಬಲ್ಲ 20 ನಿಗಮ ನಿಂದ್ಯವ ಮಾಡಿ ಬಗೆಯಿಂದ ತ್ರಿಪುರರ ಚೆದುರೆಯರನು ಒಲಿಸಿದೆನೆ ಭಾಮೆ ಸುಗುಣ ಶರೀರ ಬೌದ್ಧ ನಾನೆ 21 ತ್ರಿಪುರ ಸತಿಯರನೆಲ್ಲ ವಶಮಾಡಿದಂಥ ಶೂರ ವಸನರಹಿತಾಗಿ ತಿರುಗೋದÀಲ್ಲ ಕೃಷ್ಣ ಶಶಿಮುಖಿಯರು ನಗುವರೆಲ್ಲ 22 ಚೆಲುವ ತುರುಗನೇರಿ ಹೊಳೆವೋ ಕತ್ತಿಯ ಶೂರ ಖಳರ ಮರ್ದನ ಮಾಡುವೆನೆ ಭಾಮೆ ಥಳಥಳಿಸುವ ಕಲ್ಕ್ಯ ನಾನೆ23 ಕಲಿಯ ಸಂಹಾರ ಕೇಳೊ ನಿನ್ನ ಕತ್ತಿಗಂಜುವರ್ಯಾರೊ ಕಟಿಪಿಟ್ಯೆನ್ನೊಳು ತರವಲ್ಲ ಕೃಷ್ಣ ಕಲಿಗಳೆನ್ನರಮನೆಯೊಳಿಲ್ಲ 24 ಜಾಂಬವಂತನ್ನ ಗೆದ್ದು ತಂದೆ <
--------------
ಹರಪನಹಳ್ಳಿಭೀಮವ್ವ
ಸದಮಲ ಸುಂದರ ಪೀಠಕೆ ಪ ಇಂದು ಸುಂದರಮುಖಿ ಮಂದಗಮನೆ ಸಖಿ ಚಂದ್ರ ಬಿಂಬಾಧರೆ ಸುಂದರಿ ವೈಯಾರಿ ಮಂದಾರ ಮಾಲೆಯೆ 1 ನೀರಜನೇತ್ರೆಯೆ ಚಾರುದಸುಗಾತ್ರಿಯೆ ಮಾರಹರನ ಸಖ ಮೋಹನ ಮಿತ್ರೆಯೆ ಕೀರವಾಣಿಯೆ 2 ಸುರವರ ಪೂಜಿತೆ ನರವರ ವಂದಿತೆ ಶರಣಾಗತ ಪರಿಪಾಲಿನಿ ಭಾಮಿನಿ ರಾಮ ವಲ್ಲಭೆ 3 ದಿವ್ಯ ಮಂಗಳರೂಪೆ ಭವ್ಯ ಕಲಾಲಾಪೆ ಸರ್ವ ಸುಗುಣಮಣಿ ಹಾರಿಣಿ ರಮಣಿ ಭೂಮಿ ನಂದಿನಿ 4 ಮಾನಿನಿ ಕಾಮಿನಿ ಜ್ಞಾನ ಸಂವರ್ಧಿನಿ ಜಾನಕಿ ಜನನಿ ಮಾನವೇಶ್ವರಿ5
--------------
ಬೇಟೆರಾಯ ದೀಕ್ಷಿತರು
ಸಂಪ್ರದಾಯದ ಹಾಡು ವೆಂಕಟೇಶನ ಉರುಟಣೆಯ ಹಾಡು ಭಾರ್ಗವಿ ರಮಣಾ | ಜಗದಾಭಿ ರಮಣಾ ಪ ಲೋಕನಾಯಕ ಸ್ವಾಮಿ | ವೈಕುಂಠಾದಿಂದ ಬಂದೂಏಕಾಂತವಾನಾಡಿದಾ | ಲಕ್ಷೀಯರೊಡನೆ 1 ಧರೆಗೆ ವೈಕುಂಠಾದ | ಚರ್ಯವ ತೋರುವೆನೆಂದುಶಿರಿ ಮಹಾಲಕ್ಷೀಯೊಡನೆ | ಸಂಧಿಸಿದಾನೂ 2 ಸ್ವಾಮಿ ಕಾಸಾರದಲೀ | ಧಾಮಾವ ರಚಿಸೂವೆಆ ಮಹಾ ವೈಕುಂಠಾವ | ಅಗಲೀ ಬಂದೂ 3 ವತ್ಸರ ಕಾಲದಲೊಂದು | ಉತ್ಸವ ಮಾಡುವೆನೆಂದುಇಚ್ಛೆ ಮಾಡಿದನೂ ವೆಂಕಟ ಇಂದಿರೆಗೂಡಿ 4 ನವರಾತ್ರಿ ದಿವಸದಲೀ | ವಿವಾಹ ಲಗ್ನವ ರಚಿಸೀಅವನಿಯೊಳು ಡಂಗುರವನ್ನು ಹೊಯಿಸೀದ ಸ್ವಾಮೀ 5 ಕಾಶಿ ಕರ್ನಾಟಕದ | ದೇಶಾ ದೇಶದ ಜನರುಶ್ರೀಶಾನುತ್ಸವಕೇ ಜನರು ಒದಗೀದರಾಗಾ 6 ಹದಿನಾಲ್ಕು ಲೋಕಾದ | ಪದುಮಜಾದಿಗಳೆಲ್ಲಾ ಮದುವೆಯಾ ದಿಬ್ಬಣದಾ | ಜನರು ಬಂದರಾಗಾ 7 ಗರುಡಾ ಕಂಬದ ಸುತ್ತಾ | ಪರಿಪರಿ ವೈಭವದಿಂದಗಿರಿಯಾ ವೆಂಕಟಗೇ | ಕಂಕಣ ಕಟ್ಟಿದರಾಗಾ 8 ಆಗಮಾ ಪುರಾಣ | ರಾಗ ಮದ್ದಳೆ ತಾಳಭಾಗವತರೂ ಸುತ್ತ ಮಾಡುತಿರಲೂ 9 ತಾಳ ತಮ್ಮಟೆ ಕಾಳೆ | ಭೋರೆಂಬೋ ವಾದ್ಯಗಳೂವರ ನಾರಿಯರು ಸುತ್ತಾಗ್ಹಾಡುತಿರಲೂ 10 ಚಿನ್ನದ ಕರಿಮಣಿ | ರನ್ನ ಮಂಗಳಸೂತ್ರಹಿರಿಯಾ ವೆಂಕಟನೂ ಲಕ್ಷ್ಮೀಗೆ ಕಟ್ಟಿದ ನಗುತಾ 11 ಮುತ್ತಿನಾ ಕರಿಮಣಿ | ರತ್ನ ಮಂಗಳಸೂತ್ರಾಸ್ವಾಮಿ ವೆಂಕಟ ಲಕ್ಷ್ಮೀಗೆ ಕಟ್ಟಿದ ನಗುತಾ 12 ಅಂತರಾ ಮಾರ್ಗದೊಳೂ | ನಿಂತು ದೇವತೆಗಾಳು ಸಂತೋಷದಿಂದಲಿ ಜಯ ಜಯವೆಂದು ಪಾಡಿದರಾಗ 13 ಅಂಗಾನೆ ಶ್ರೀ ಭೂಮಿ | ರಂಗಾಮಂಟಪದೊಳಗೆಬಂಗಾರ ಗಿರಿಯಾ ವೆಂಕಟ ಒಪ್ಪಿದ ಸ್ವಾಮೀ 14 ಅತಿರಸಾ ಮನೋಹರ | ಮಿತಿಯಿಲ್ಲದ ಪದಾರ್ಥಗಳೂಸತಿಯರೆಲ್ಲರು ಭೂಮಕೆ ತಂದು ಬಡಿಸಿದರಾಗ 15 ಬೆರದ ನಾರಿಯರೆಲ್ಲ | ಹರಿಭೂಮಾ ನಂತರದೀಭರದಿ ಉರುಟಣಿಗೆ ಅಣಿ ಮಾಡಿದರಾಗಾ 16 ಮಿತ್ರೆ ಲಕ್ಷ್ಮೀಗೆ ತಕ್ಕ | ಹಿರಿಯರು ಪೇಳಲುಛಂದದಿಂದಲಿ ಅರಿಷಿನ ಕಲಸಿ ನಿಂತಳಾಗ 17 ಪನ್ನಗ ನಗವಾ | ಸೇರಿದ ಮಹರಾಯದುಡ್ಡು ದುಡ್ಡಿಗೆ ಬಡ್ಡಿಯನ್ನು ದುಡಿವಾ ಲೋಭಿ 18 ವಂಚಿಸಿ ಜನರನ್ನು | ಲಂಚಾ ಲಾವಣಿ ತೆಗೆದುಹಿಂಚಾಸಿ ವರ ಕೊಡುವಾ ಹಿತದಾ ದೇವಾ 19 ಬಡವಾ ಬಲ್ಲಿದರೆಂದು | ಬಿಡದಾಲೆ ಅವರಿಂದಮುಡುಪು ಹಾಕಿಸಿಕೊಂಡು (ಮುಂದಕೆ) ಬಿಡುವೋ ದೇವಾ 20 ಅನ್ನವೆಲ್ಲವ ಮಾರಿ | ಹೊನ್ನು ಕಟ್ಟುವೆಯಲ್ಲೊಅನ್ನದಾನವ ಮಾಡಲೊಲ್ಲಿ ಅನ್ಯಾಕಾರಿ 21 ಹೊನ್ನು ಸಾಲವ ತೆಗೆದು | ಎನ್ನಾ ಕಟ್ಟಿಕೊಂಡುಮನೆ ಮನೆಗೆ ಭಿಕ್ಷವ ಬೇಡುವ ಮಾನವಂತಾ 22 ಹೊನ್ನು ಸಾಲದು ಎಂದು | ಎನ್ನ ಸಾಕುವೆ ಹೇಗೋನಿನ್ನಾ ಕೃಪಣತನಕೆ ನಾನು ಎಣೆಗಾಣೆನೋ 23 ಇಪ್ಪತ್ತು ದುಡ್ಡೀಗೆ | ಸೇರು ತೀರ್ಥವ ಮಾರಿದುಡ್ಡು ಕಟ್ಟಿ ಜಾಳಿಗೆ ಗಳಿಸುವ ಜಾಣ ನೀನೂ 24 ಅಟ್ಟಾ ಮಡಿಕೆಯಲ್ಲಾ | ಕುಟ್ಟಿ ನಾಮವ ಮಾಡಿಗಟ್ಟಿಯಾಗಿ ಗಂಟು ಗಳಿಸುವ ಘನವಂತಾ 25 ದೇಶದೊಳು ನಿಮ್ಮಂಥಾ | ಆಸೆ ಉಳ್ಳವರಿಲ್ಲಕಾಸು ಕಟ್ಟಿ ಕವಡೆ ಗಂಟು ದುಡಿವ ಲೋಭಿ 26 ಮಡದಿ ನಾನಿರಲಿಕ್ಕೆ | ಕಡಿಮೆ ಏನಾಗೋದುಬಡತನ ನಿನಗೆ ಯಾತಕೆ ಬಂತೂ ಸ್ವಾಮೀ 27 ನಾರೀಯಾ ನುಡಿ ಕೇಳಿ | ವಾರೆ ನೋಟದಿ ನೋಡಿಮೋರೆ ತಗ್ಗಿಸಿ ವೆಂಕಟ ಮುನಿದು ನಿಂತಾ 28 ಕಡುಕೋಪಾ ಮಾಡುವರೆ | ಹುಡುಗನಂತಾಡುವರೆಕೊಡಲೀಯ ಪಿಡಿವಾರೆ ನಾನು ನುಡಿದಾ ನುಡಿಗೇ 29 ಕಣ್ಣಾನೆ ಬಿಡಬ್ಯಾಡ | ಬೆನ್ನ ತೋರಲಿ ಬ್ಯಾಡಾಇನ್ನು ಮುಖವಾ | ತಗ್ಗಿಸಬ್ಯಾಡ ಇತ್ತ ನೋಡೂ 30 ಎನ್ನರಸಾ ಹೊನ್ನರಸಾ | ಚೆನ್ನಿಗ ವೆಂಕಟರಾಯಾನಿನ್ನ ಪೋಲುವರ್ಯಾರೊ | ಜಗದೊಳು ನೀಲಗಾತ್ರಾ 31 ಎನ್ನರಸಾ ಚೆನ್ನರಸಾ | ಚೆನ್ನಿಗ ವೆಂಕಟರಮಣಾನಿನ್ನ ಮುದ್ದು ಮುಖವ ತೋರೊ ಅರಿಷಿಣ ಹಚ್ಚೇನು 31 ಎನ್ನುತ ಅರಿಷಿಣ | ಹಚ್ಚಿ ಕುಂಕುಮವಿಟ್ಟುರನ್ನ ಹಾರವ ಹಾಕಿ ತಾನು ಕುಳಿತಾಳಾಗ 33 ಮಂದರಧರ ತಾನೂ | ಛಂದದರಿಶಿನ ಪಿಡಿದೂಇಂದಿರಾದೇವಿಯನ್ನು ಮಾತನಾಡಿಸಿದಾ 34 ಎನ್ನರಸಿ ಹೊನ್ನರಸಿ | ಚೆನ್ನಿಗ ಮಾಯಾದೇವಿನಿನ್ನ ಮುದ್ದು ಮೊಗವಾನೆ ತೋರು ಅರಿಷಿನ ಹಚ್ಚೇನು 35 ಭಿಡೆಯಾ ನೋಡದೆ ಇಂಥಾ | ನುಡಿಗಳಾಡಿದ ಮ್ಯಾಲೆನಡುಗಿ ಮೋರೆಯ ತಗ್ಗಿಸಲಿಹುದೆ ನಾಚಿಕೆ ಯಾಕೆ 36 ಭಾಗ್ಯಾದ ಮೊಬ್ಬಿಲಿ | ಬಾಗಿ ನೀ ನಡೆಯಾದೇಅಗ್ಗಳಿಕೆ ಮಾತುಗಳನ್ನು ಆಡಿದೆಯಲ್ಲೇ 37 ಮಿಂಚಿನಂದದಿ ಬಹಳಾ | ಚಂಚಲ ಬುದ್ಧ್ಯವಳೇವಂಚಿಸೂವಳೆ ಜಗವಾ ವಾರಿಜಾಕ್ಷೀ 38 ಬಂಗಾರಾ ಮುಡುಪಿಗೆ | ಎನ್ನ ಕಂಗೊಳಿಸೀಗಾ ಹಿಂಗಾದೆ ಮಂಕು ಮಾನವರ ಮಾಡುವುದರಿದೇ 39 ಕಂಚುಕ ವೆಂಕಟ ಬಿಗಿದಾ ನಗುತಾ 40 ತಾಂಬೂಲವನೆ ಮೆದ್ದು | ಮಡದಿಯಾ ಮುಖ ಸೂಸೆಇಂಬೀಲ್ಹಚ್ಚೆ ಬರೆದರಾಗ ಅತಿ ಸಂಭ್ರಮದೀ 41 ತಿರುಮಲೇಶನು ತನ್ನ | ಮಡದೀಯನು ಎತ್ತಿಭರದಿಂದಾ ತನ್ನರಮನೆಗಾಗಿ ತೆರಳಿದಾನು 42 ದ್ವಾರದಾದಡಿಯಲ್ಲಿ | ನಾರೇರೆಲ್ಲರು ನಿಂತುವಾರಿಜಾಕ್ಷಿ ಪತಿಯ ಹೆಸರಾ ಹೇಳೆಂದರು 43 ಕಿರುನಗೆಯಿಂದ ಲಕ್ಷ್ಮೀ | ಗಿರಿಯಾ ವೆಂಕಟನೆನಲೂಹರಿಯೆ ನಿನ್ನ ರಮಣಿ ಹೆಸರಾ ಹೇಳೆಂದರೂ 44 ಜಾತಿ ನಾಚಿಕೆ ತೊರೆದು | ಶ್ರೀ ತರುಣಿ ಎನುತಾಲೆಪ್ರೀತಿಯಿಂದಲಿ ಸಿಂಹಾಸನದಿ ಕುಳಿತರಾಗಾ 45 ಮತ್ತೆ ನಾರಿಯರೆಲ್ಲಾ | ಮುತ್ತಿನಾರತಿ ಪಿಡಿದೂಸತ್ಯಾಭಾಮೆಗೆ ಜಯ ಜಯವೆಂದರಾಗ 46 ವಿಭುವಿನ ಗುಣವನ್ನು ವಿಸ್ತರ ಪೇಳಿದ ಜನಕೆಸಮಯದಂಥ ಭಾಗ್ಯವನಿತ್ತು ಸಲಹುವ ಸ್ವಾಮಿ 47 ಮಂಗಳ ವೆಂಕಟರಾಯಾ | ಮಂಗಳ ಮಾಧವರಾಯಾಮಂಗಳ ಮಾನಸಗೇಯಾ | ಮಂಗಳ ಮಾಧವರಾಯಾ 48 ಧರೆಯೊಳಧಿಕನಾದ | ದೊರೆ ವ್ಯಾಸವಿಠಲಾನುಪರಮ ಭಕ್ತಿ ಸುಜ್ಞಾನವನು ಪಾಲಿಸೂವಾ 49
--------------
ವ್ಯಾಸವಿಠ್ಠಲರು
ಸಮಜೊ ಭಾಯಿ ಸಕುನಾ ಚಾರೊ ಖುದಾಕಾ ತೆಲಗು ಕನ್ನಡ ತುರಕಾರೆ ವಂದೇ ಸುಖ ಧ್ರುವ ನಜರೋಮೆ ನಜರೋಮೆ ತನ್ನೊಳಗದೆ ಅತಿಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆ ಸದ್ಗುರು ವಚನ ಶೋಧುನಿ ಪಾಹಾ ಸಪ್ರೇಮ ಸಪ್ರೇಮ ಚುಡುವಯ್ಯ ಉನ್ನದಿ ಪೂರ್ಣ ಘನ ಮಹಿಮೆ 1 ಫ್ಯಾರೆ ವಳಖೂನಿ ಸಾರಾಸಾರಾ ನಿವಡೂನಿ ನಿವಡೂನಿ ನಜರ ಹುಜರ ದೇಖೋ ಯಾರಾ ಹೈಗನೀ ಹೈಗನಿ ಜನ್ಮಕ ಬಂದು ಮಾಡುವದೆ ಸಾಧನೀ ಸಾಧನೀ ಮಂಚಿ ಉನ್ನದಿ ನಕಳೆ ಸದ್ಗುರು ಪಾವುನಿ 2 ಚೆಪ್ಪೆವೈಯ್ಯ ಎಂದರ ಹೇಳುವ ಗುರು ನೀಠಾ ಗುರುನೀಠಾ ಆನಂದ ಆಹೆ ತುಜ ಮಹಿಪತಿ ಸುಖ ಮೋಠಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರಸಿಜಾಯತನೇತ್ರ ಸರಿಯಾರೆ ಧರೆಯೊಳಗೆ ಮೇರುಗಿರಿಯನೆಪೊತ್ತ ಧೀರನಿವನೆ ಅಪರಾಧವ ಪರಿಹರಿಸಿ ಕಾಪಿಡೆಂದೊರಲುವರ ಕೈಪಿಡಿದು ಕಾಪಾಡುವಾಪ್ತ ಬಂಧು
--------------
ನಂಜನಗೂಡು ತಿರುಮಲಾಂಬಾ
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು
ಸರಸಿಜಾಸನ ಮೊದಲು ಸ್ತಂಭ ಪರ್ಯಂತವು ಚರಚರಾತ್ಮಕ ಜಗವು ಎಲ್ಲವು ಪ ಪರತರನಾದ ಯಾವಾತನಾಧೀನವೋ ಆ ಹರಿಯೇ ಬಲವು ನಿನಗೆ ಎನಗೆ ಮತ್ತೆಲ್ಲರಿಗೆ ಅ.ಪ. ಕಾಲ ಉರುಕ್ರತು ಭಾಸುರತೇಜ ಓಜಸು ಸತ್ವನೊ ಬಲು ಶಕ್ತನೊ ಸರ್ವಜಗತ್ಸøಷ್ಟಿ ಸ್ಥಿತಿ ಲಯಕಾರನೊ ಆ ಸರ್ವೇಶÀನ ಬಿಟ್ಟು ಬಲವಾವುದಿನ್ನಯ್ಯಾ 1 ಆರು ವರ್ಗಗಳೆಂಬ ವೈರಿಗಳ್ ಕಳ್ಳರಂತೆ ಸೇರಿಕೊಂಡಿಹರು ಶರೀರದೊಳು ಗಾರು ಮಾಡುವರವರಗಲ್ಲದೆ ಧರೆಯಲ್ಲಿ ಭೂರಿ ಜಯಿಸಿದೆನೆಂಬ ಗರ್ವ ಸಲ್ಲುವುದೇನೊ 2 ನಿನ್ನ ಆಸುರೀಭಾವ ಇನ್ನಾದರೂ ಬಿಟ್ಟು ಘನ್ನಮಹಿಮ ಕರಿಗಿರೀಶನೊಳ್ ಮನವ | ಚೆನ್ನಾಗಿ ಕಲಿಸಿ ನೀ ಸಮಚಿತ್ತನಾದೊಡೆ ಇನ್ನು ನಿನಗೆ ವೈರಿಗಳು ಯಾರು ಇಹರಯ್ಯಾ 3
--------------
ವರಾವಾಣಿರಾಮರಾಯದಾಸರು
ಸರಿ ಯಾರೊ ನಿನಗೆ ಪರಮ ಕರುಣಾನಿಧೆ ಪ ಸರಿ ಯಾರೊ ನಿನಗೆ ಗರುಡವಾಹನ ನಿನ್ನ ಸ್ಮರಿಸುತಿರುವರನು ಕರುಣದಿ ಪೊರೆಯುವೆ ಅ.ಪ. ಕರಿರಾಜ ಕೂಗಲು ಭರದಿಂದ ಪೋದೆಯೊ ಸರಸಿಜ ಭವನುತ ಸುರಗಣ ಸೇವಿತ 1 ಕಂದನ ಮಾತನು ಛಂದದಿಂ ಕೇಳುತ ಬಂದು ಸಂತೈಸಿದ ಇಂದಿರ ರಮಣನೆ 2 ದುಷ್ಟರ ಸದೆಯುತ ಶಿಷ್ಟರ ರಕ್ಷಿಸುವ ದಿಟ್ಟ ರಂಗೇಶವಿಠಲರಾಯನೆ 3
--------------
ರಂಗೇಶವಿಠಲದಾಸರು