ಒಟ್ಟು 24320 ಕಡೆಗಳಲ್ಲಿ , 137 ದಾಸರು , 9123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಆರತಿ ತಂದು ಬೆಳಗಿರೆ ಇಂದಿರಾವರಗೆ ಮಂದರಧರಗಿಂದು ಪ ಸಿಂಧು ಶಯನಗೆ ಕುಂದರದನೆ ಅ.ಪ ವಾಹನ ವಂದಿತ ದಶ ಕಂಧರಾಂತಗೆ ಕುಂದರದನೆ ವಂದಿಸುವರ ಬಂಧ ಬಿಡಿಶ್ಯಾ ನಂದಗರಿವಗೆ ಮಂದಗಮನೆ 1 ಅಂಗನೆಯರು ಶೃಂಗಾರದಲಿ ಸಂಗೀತ ಪ್ರಿಯಗೆ ಭೃಂಗಾಲಕಿ ಗಂಗಾಪಿತ ಮಂಗಳಾಂಗ ವಿ- ಹರಿಗ ವಾಹನಗೇ ತಿಂಗಳಮುಖಿ 2 ನಾರಿಯಳ ನುದ್ಧಾರ ಮಾಡಿದ ಚಾರು ಚರಣಗೆ ನಾರಿ ಮಣಿಯೆ ಸೇರಿದವರ ಪೊರೆವ ಕಾರ್ಪರ ನಾರಶಿಂಹಗೆ ಭೂರಿಮಹಿಮಗಿಂದು 3
--------------
ಕಾರ್ಪರ ನರಹರಿದಾಸರು
ಇಂದು ಇಂದು ಇಲ್ಲಿ ಚಂದ್ರವದನೆ ಇಂದಿರಾದೇ'ಗಂಡುಗಲಿಯ ವೇಶತಾಳಿ ಗೆಂಡಾಸುರನ ಕೊಂದು ನಗುತಅ.ಪಜಗದೀಶನ ಮಡದಿಯಂತೆ ಮಗಗೆ ನಾಲ್ಕು ಮುಖಗಳಂತೆಮಗನ ಮಗ ಬೈರಾಗಿಯಂತೆ ಅಗಜೆ ಅವಗೆ ಒಲಿದಳಂತೆ 1ಹರಿಯ ಹೃದಯದಲ್ಲಿ ಸದಾ ಅಗಲದೆ ತಾ ಇರುಳಂತೆಆದಿಮಾಯಾ ಶಕ್ತಿಯಾಗಿ ಜಗದ ವ್ಯಾಪಾರ ಮಾಡುವಳಂತೆ 2ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರಸೇವೆಸಾಟಿಇಲ್ಲದೆ ಮೂಡಿ ಪೂರ್ಣ ನೋಟದಿಂದ ಸುಖಿಪಳಂತೆ 3ಛಕ್ರಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿನಿಂತುಚಿತ್ತಚರಿತನಾದ ಹರಿಯ ನಿತ್ಯ ಸೇವೆ ಮಾಡುವಳಂತೆ4ಗಂಡ ಹೆಂಡಿರ ಜಗಳವಂತೆ ಕೊಲ್ಹಾಪುರದಿ ಇರುವಳಂತೆಗಂಡ ವೈಕುಂಠ ಮಂದಿರಬಿಟ್ಟು ವೆಂಕಟಗಿರಿಯಲಿ ಇರುವನಂತೆ5'ೀರಪುರುಷ ವೇಷವಂತೆ ಕ್ರೂರ ದೈತ್ಯನ ಸೀಳಿದಳಂತೆಯಾರಿಗು ಗೊತ್ತಾಗದಂತೆ ರಾತ್ರಿ ಊರೊಳಗೆ ಬರುವಳಂತೆ 6ಭಾರತಹುಣ್ಣಿಮೆ ಜಾತ್ರಿಯಂತೆ ಭಾರಿಜನರು ಕೂಡುವರಂತೆಭಾರಿ ಡೊಳ್ಳು ಹೊಡಿವರಂತೆ ಭೂಪತಿ'ಠ್ಠಲ ನಗುವನಂತೆ 7ಹನುಮಂತದೇವರು
--------------
ಭೂಪತಿ ವಿಠಲರು
ಇದು ಈಗ ಸಮಯ ಸೀತಾರಾಮ ಪ ಇದು ಈಗ ಸಮಯವು ಪದುಮದಳಾಕ್ಷನೆ ಸದಯದಿ ನಿಂದೆನ್ನ ಒದಗಿ ಕಾಯ್ವ ಶ್ರೀರಾಮ ಅ.ಪ. ಖಾಸವು ತುಂಬೆ ಕಂಠದಿ ಶ್ವಾಸವು ನಿಲ್ಲೆ ಘಾಸಿಯಾಗಲು ಘುರುಘುರುಕೆಂದು ಬÉೂೀರಿಡೆ ಸಾಸಿರ ಚೇಳು ಕಡಿದಂತಾಗುವಾಗ 1 ಕಾಲವು ಸಲ್ಲೆ ಪಂಚೇಂದ್ರಿಯಂಗಳು ಸಡಿಲೆ ಈ ದೇಹದಿ ಲಾಲಾ ಮೂತ್ರವು ಮಲ ಜೋಲಿ ಬೀಳುತಲಿರೆ ಕಾಲನ ದೂತರು ಬಂದು ಬಿಡದೆಳೆಯುತಿರುವಾಗ 2 ನಂದನಾದಿಗಳು ನಿಂದು ಗೋಳಿಡುತಿರೆ ಬಂಧು ಬಳಗಗಳು ಒಂದನು ನೋಡಿದೆ ಕುಂದುತ್ತ ಚಿತ್ತದಿ ನಿಂದಿರಲು ತಂದೆ ಧೇನುಪುರಿನಾಥ ಬಂದೆನ್ನ ಕಾಯೊ ಹೋಗುವಾಗ 3
--------------
ಬೇಟೆರಾಯ ದೀಕ್ಷಿತರು
ಇದು ಎಲ್ಲಾ ಇದು ಎಲ್ಲಾ ಏನಾರೆಂಬುದ ಬಲ್ಲ್ಯಾ ಪ ತನುವಿದು ಮೊದಲಿಗೆ ನಿನ್ನದಲ್ಲಾ || ತನು ಸಂಬಂಧದ ಗುರುತು ಬಿಡಲಿಲ್ಲಾ 1 ನಿಜವೆನುತಲಿ ಆಶೆಯ ಕಚ್ಚಿ ಅಜಹರಿಹರರಾದರು ಕೇಳೇ ಹುಚ್ಚಿ 2 ಗುರುಭವತಾರಕನ ನಿಜವಾದ ಭಕ್ತಾ | ಅರಿತು ಆದನು ಜೀವನ್ಮುಕ್ತಾ 3
--------------
ಭಾವತರಕರು
ಇದು ಏನೊ ನಿನ್ನ ಮತೀ ಮತೀ | ಇದರಿಂದಾಗದು ಗತೀ ಗತೀ ಪ ಸತಿ ಸುತರಿಂದಲಿ ಗತಿಯನ್ನು ಪಡೆದ ಕೇಳ ಬಲ್ಲೆಯಾ ಕಥೀ ಕಥೀ1 ಸಂಚಿತ ಪ್ರಾರಬ್ಧ ಕ್ರಿಯಮಾಣಾ | ತೀರಲಿಲ್ಲವೋ ಮಿತೀ ಮಿತೀ | ಪಂಚ ದಶಾಕ್ಷರೀ ಮಂತ್ರವ ಜಪಿಸಲು | ನೀ ಪರಶಿವನೆಂಬುದೋ ಶ್ರುತೀ ಶ್ರುತೀ 2 ಮೂರ್ತಿ ಭವತಾರಕ ದೇವನ | ಪೂಜಿಸಿ ಮಾಡೊ ಸ್ತುತೀ ಸ್ತುತೀ | ಅರಿಯದಿರ್ದರರ್ಚಕರನು ಸೇವಿಸಿ |ಆಗು ನೀ ಭೂಪತೀ ಭೂಪತೀ 3
--------------
ಭಾವತರಕರು
ಇದು ಏನೋ ನಿನ್ನ ಗುಡೀ ಗುಡೀ |ಒಳಗಿನ ಕಸವನು ಹೊಡೀ ಹೊಡೀ ಪ ಹಗಲಿರುಳೊ ನೀ ಬದುಕ ಮಾಡಿ |ಏನು ಗಳಿಸಿದ್ಯೋ ಹುಡೀ ಹುಡೀ ||ಜಗದೊಳು ದೇವನ ತಿಳಿಯಲೊಲ್ಲಿ |ತಿಳಿದೀತೊ ಅಲ್ಲಿಗೆ ನಡೀ ನಡೀ 1 ಹಸಿದು ಬಂದು ನೀ ವಸ್ತಿಯಾಗಿಳಿದರೆ |ಮತ್ತೇನಾರ ಕೊಡೂ ಕೊಡೂ ||ಅಸ್ತಮಯಾದಿತು ಉದಯದಲೆದ್ದು |ತಪ್ಪದೆ ಇಲ್ಲೆಂಬೊ ನುಡೀ ನುಡೀ 2 ನಾಕು ಕಾಯದೊಳು ಎರಡಿಟ್ಟನು ನೀ |ಎರಡನೆ ದೇವರಿಗೊಡೀ ಒಡೀ ||ಲೋಕಪಾಲಕ ಭವತಾರಕನಂಘ್ರಿಯ |ಈ ಕಾಯದಿ ದಯಾ ಪಡೀ ಪಡೀ 3
--------------
ಭಾವತರಕರು
ಇಂದು ಕಂಡೆ ಕಣ್ಣಾರೆ ನನ್ನ ಸ್ವಾಮಿಯ ಬಂದ ಜನ್ಮಸಾಫಲ್ಯವಾಯಿತೀಗ ಧ್ರುವ ಮುಂಬಿಗಾಗ್ಯಾವೆನ್ನೊಳು ಸುಉಲ್ಹಾಸ ಅಂಬುಜಾಕ್ಷನ ಕಂಡೆ ಸುಪ್ರಕಾಶ ತುಂಬಿತುಳುಕುತಲ್ಯದ ಬಲುಹರುಷ ಇಂಬುಸಾಲದು ಬ್ರಹ್ಮಾಂಡ ಆಕಾಶ 1 ಎನ್ನಹೃದಯ ಮಂದಿರದೊಳು ನೋಡಿ ತನ್ನಿಂದ ತಾಂ ಬಂದನು ದಯಮಾಡಿ ಕಣ್ಣುಪಾರಣೆಗೈಸಿದೆನ್ನ ಕೂಡಿ ಇನ್ನು ದಣಿಯದೆನ್ನಮನ ಕೊಂಡಾಡಿ 2 ಘನ ಸುಖದೋರುತದೆ ಎನಗಿಂದು ಭಾನುಕೋಟಿ ಉದಯವಾದನೆಂದು ದೀನ ಮಹಿಪತಿಸ್ವಾ,ಮಿ ಕೃಪಾಸಿಂಧು ಮನೋಹರ ಮಾಡಿದ ತಾನೆ ಬಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಕಂಡೆನಾನು | ಶಂಕರನಾ | ನಿಂದಿಹ ಕೋಟೇಶ್ವರನಾ ಪ ಅವದುಂಬರ ಮುನಿಯಾ | ತಾಪಕೊಲಿದು ತಾವದಗಿದೇ ನಡೆತಂದು 1 ಕೃಷ್ಣ ವೇಣಿಯಾ ಮಧ್ಯಾ ಜಲದೊಳಗ | ವಿಷ್ಣು ಸಹಿತ ಸಲುವನೀಗ 2 ವರ ಶೂರ್ಪಾಲಯದೀ | ತಾಮೆರೆವಾ | ಗುರುಮಹಿಪತಿ ಸುತ ಜೀವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದು ಕಲಿಗಾಲದ ಮಹಿಮೆಯ ಗುಟ್ಟು ಮುದಿತನ ಬಂದರೆ ಮಾಯದ ಪೆಟ್ಟು ಪ ವಿಧವೆಯಾದರೆ ತಲೆಯ ಮೇಲ್ಮೊಟ್ಟು ವಿಧುರನಾಗೆ ದುರ್ನೀತಿಯ ಕಟ್ಟು ಅ.ಪ ಕುರುಡನಾದರೆ ಅಣಕದ ಬಾಳು ಅರೆಕಿವುಡಗೆ ಬೈಗುಳ ಕೂಳು ನರಳಿದರೆ ಸಾಯಲಿಲ್ಲವೆಂಬ ಗೀಳು ಕೊರಗಿ ಕಣ್ಣೀರನು ಸುರಿಸುವ ಗೋಳು 1 ಇತ್ತಬಾರದಿರು ಎಂಬರು ಕೆಲರು ಅತ್ತಲೆ ಹೋಗು ಹೋಗೆಂಬರು ಕೆಲರು ಎತ್ತಹೋದರೂ ಬಂದುದೇಕೆಂಬರು ತುತ್ತೊಂದಾದರೂ ಸಿಗದೆಂಬುವರು 2 ಹದ್ದುಹದ್ದೆಂಬುವ ಬಿರುನುಡಿಯಿಂದ ಒದ್ದೋಡಿಸುವಳು ಸೊಸೆ ಮನೆಯಿಂದ ಕದ್ದೋಡುವನು ಮಗ ಭಯದಿಂದ ಮದ್ದುಕೊಡಯ್ಯ ಮಾಂಗಿರಿಯ ಗೋವಿಂದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದು ಗುರುಪೂಜಿ ಮಾಡುವ ನಿಂದು ಮನದೊಳು ಹರುಷಪಡುವ ಧ್ರುವ ತಂದೆ ಸದ್ಗುರುಸೇವೆ ಮಾಡುವ ಬಂದ ಜನ್ಮದ ಹಾದಿ ಬಿಡುವ ಪಥ ಬ್ಯಾಗೆ ಹಿಡುವ ಹೊಂದಿ ಸದ್ಗತಿ ಮುಕ್ತಿ ಕೊಡುವ 1 ಬಂದು ಸಾರ್ಥಕ ಮಾಡುವ ಪಾದ ನೋಡುವ ತಂದು ರತಿಪ್ರೇಮ ನೀಡುವ ಒಂದು ನಾಮ ನಿಶ್ಚಯವಿಡುವ 2 ಒಂದು ಮನದಿ ಪೂಜಿಮಾಡುವ ಎಂದು ಬಿಡದೆ ನಾಮವ ಕೊಂಡಾಡುವ ಇಂದು ನಲಿನಲಿದಾಡುವ ಕಂದ ಮಹಿಪತಿಸ್ವಾಮಿ ನೋಡುವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ಇಂದು ದಯದಿ ಸಂದರ್ಶನವಿತ್ತೆಯಾ ಇಂದಿರಾಧವಾ ದೇವಾ ಪ ಸುಂದರಾಂಗ ರಂಗ ಮುಂದೆ ಬಂದುನಿಂದೆ ಬೆಳಕಿನೊಳ್ ನಭದೆ ಅ.ಪ ವಿಭವದಿರ ರಥದಿ ಹಿತದಿ ಶುಭದ ಶ್ರೀಭೂನೀಳಾಸಹಿತ ಆಭಯವ ನೀಯುತಾ ನಾಥಾ 1 ಭಕ್ತ ಬೃಂದ ಗೈವ ಸೇವೆಯಾ ಸಕ್ತಿಯಂ ಪಡೆದು ದೃಢದಿ ನಿತ್ಯಗಾರುಡ ಸೂರ್ಯಮಂಡಲ ಡೊಲೊತ್ಸವದಿ2 ಮುದಗೆರೆರಂಗ ವೊರಿದಗೆನಗೆ ಮಹಿಮೆತೋರುತಾ ನಿರುತ ಪೊರೆವುದು ಜಾಜೀನಾಥ 3
--------------
ಶಾಮಶರ್ಮರು
ಇಂದು ಧರಿಯೊಳು ಬ್ರಹ್ಮಾನಂದವನು ತುಂಬಿ ತುಳುಕತಿಹ್ಯಾನಂದಮಯ ಕಾಯದೊಳು ಕೌತುಕವು ನಾದಬಿಂದು ಕಳಿಯಲಿ ಸ್ತುತಿಸಲೆನ್ನಳವಲ್ಲ ಕ್ಷಿತಿಯೊಳು ಘನಮಹಿಮೆ ಅತಿಹರುಷವನು ದೋರುತಿಹ್ಯ ಸದ್ಗತಿ ಸುಖವು ಗುರುದಾಸರು 1 ಓಂಕಾರ ಮೊದಲಾದ ಶ್ರುತಿವೇದ ಘೋಷಗಳು ಧಿಮಿಧಿಮಿಸುವ ಮಹಾಶಬ್ದಗಳು ವಾದ್ಯಗಳು ಕೇಳುವದು ನೀದೃಶ್ಯೆಲಿ ಗರ್ಜಿಸುವ ಭೃಂಗಿಶಂಖನಾದ ಧ್ವನಿಯಗಳು ಭೋರಿಡುವ ಭೇರಿ ಮೃದಂಗ ವೇಣಿಯಗಳು ಚಿಣಿ ಚಿಣಿ ತಂತ್ರ ಮೊದಲಾದ ಸಂಕಾರಗಳು ಕೇಳಿ ಪಾವನವಾದೆನು 2 ಬೆರೆದು ನೋಡಲು ಅಂತರಾತ್ಮದೊಳು ಪ್ರಭೆಯಗಳು ಥಳಥಳಿಸುವಾ ಮಹಾತೇಜಗಳು ಪುಂಜಗಳು ಹೇಳಲಿನ್ನೇನದ ಹೊಳವಗಳು ಸುಳವಗಳು ನೋಡುವದು ಅನಿಮಿಷದಲಿ ರವಿ ಶಶಿ ತಾರೆಗಳು ಸೂಸುತಿಹ್ಯ ಕಿರಣಗಳು ಭಾಸಿಸುವ ನಾನಾವರ್ಣಗಳು ಛಾಯಗಳು ಬೆರಗಾದೆÀನಿಂದ 3 ವರ್ತಿಸುತ್ತಲಿಹ ಪ್ರವೃತ್ತಿ ನಿವೃತ್ತಿಗಳು ಅಂತರಾತ್ಮದ ವಾಯುಸ್ತುತಿಯಗಳು ಗತಿಯಗಳು ತಿಳಿವದೀ ಪ್ರಣಮ್ಯಲಿ ಸೂಸುತಿಹ ಶ್ವಾಸವುಚ್ಛ್ವಾಸನಿಯ ಭಾಸಿಗಳು ಶೋಭಿಸುವ ಜೀವನದ ಮಂತ್ರ ಸರ ಮಾಲೆಗಳು ಪಾವನವಾದೆನು 4 ಕರದ್ವಯಂ ಮುಗಿದು ವರಗುರುಚರಣಕಮಲಕಿ ನ್ನೆರಗಿ ಪರಮಾನಂದ ಹರುಷದಿ ಶಿರಸದಿ ಶ್ರೀಗುರುಮೂರ್ತಿಯ ನೆನೆವೆನು ಸದ್ಭಾವದಿಂದ ಸದ್ಗುರು ಪಾದಮಂಪಿಡಿದು ಸದ್ಬ್ರಹ್ಮರಸದೊಳು ಮುಳುಗಿ ಸದ್ಭಕ್ತಿಯಲಿ ಸದ್ಗತಿ ಸಾಧನವು ಸಾಧಿಸಿಹ್ಯ ಮಹಿಪತಿಯು ] ಶ್ರೀ ಗುರುಕೃಪೆಯಲಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಂದ ಕಂದ ಮುಕ್ಕುಂದನಾ| ಬಂದು ವದಗಿಹ ಬಹಳ ಪುಣ್ಯದಿ ಛಂದವಾಯಿತು ಚಲುವನಂಘ್ರಿಯ ಪ ಬಲಿಗೆ ಭೂಮಿಯ ಬೇಡಿ ಹೆಜ್ಜೆಯಾ| ಅಳತೆಯರಡಲಿ ಅಡಗಿಸಿ| ನಳಿನ ಜಾಂಡಕ ಸಖವ ಸೋಂಕಿಸಿ| ಸುರನದಿ ಪಡೆದ ನಂಘ್ರಿಯಾ 1 ಶಿಲೆಯು ಆಗಿರೆ ಶಾಪದಲಿ ಸೋಂ| ಕಲು ನಿಜಾಂಗದ ಕಾಣಿಸಿ| ನಲಿದು ಕಾಳೀಂದಿಯೊಳುರುಗನಾ| ತಲೆಯಳಾಟದಿ ತುಳಿದ ನಂಘ್ರಿಯಾ 2 ಮುನಿಜನ ಹೃದಯ ಮನೆಯ ದೀಪವು| ಯನಿಪ ಶ್ರೀದೇವಿ ಯರಸನಾ| ಮನದಿಗುರುವರ ಮಹಿಪತಿ ಪ್ರಭು| ನೆನೆವವರೊಳಗೆ ನೆಲೆಸಿಹನ ಪದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನಮ್ಮ ಮನಿಲ್ಯಾನಂದೋಬ್ರಹ್ಮಾ ತಂದೆ ಸದ್ಗುರು ದಯ ಏನೆಂದ್ಹೇಳಲಿ ಸಂಭ್ರಮ ಧ್ರುವ ಹರುಷ ತುಂಬೇದ ಬಹಳ ತೆರವಿಲ್ಲೆಳ್ಳಷ್ಟು ಸ್ಥಳ ಸಿರಿಯನಾಳ್ವ ದಯಾಳ ಹರಿ ಬಂದಾನೆ ಕೃಪಾಳ 1 ಸೂಸುತಲಿ ಸಂತೋಷ ಪಸರಿಸ್ಯದ ಉಲ್ಹಾಸ ಭಾಸುತಾನೆ ಸರ್ವೇಶ ಭಾಸ್ಕರ ಕೋಟಿ ಪ್ರಕಾಶ 2 ಪ್ರಾಣಕಾಗೇದ ಪ್ರಸ್ತ ಮನಕಾಗೇದ ತಾಂ ಸ್ವಸ್ತ ಸಅನುಭವದ ಸುವಸ್ತ ಖೂನಾಗಿ ಬಂದು ಸಾಭ್ಯಸ್ತ 3 ಹೇಳಲಿಕ್ಕಳವಲ್ಲ ಹೊಳವ ಸುಖದ ಸೊಲ್ಲ ತಿಳಿದ ಮಹಿಮೆ ಬಲ್ಲ ಸುಳವು ಸೂಕ್ಷ್ಮವೆಲ್ಲ 4 ಕರ್ತುತಾಂ ದಯಮಾಡಿ ಅರ್ತು ಬಂದೊಡಮೂಡಿಆರ್ಥಿಯಿಂದೆವೆ ನೋಡಿ ಬೆರ್ತು ಮಹಿಪತಿಕೂಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು