ಒಟ್ಟು 1059 ಕಡೆಗಳಲ್ಲಿ , 98 ದಾಸರು , 892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕಿಂತು ಬಳಲುವೆಯೊ |ಈ ಕಷ್ಟಗಳಲೀಗ |ಲೋಕ ಮಾತೆಯ ಭಜಿಸಿ |ಸುಖಿಯಾಗು ಮನವೆ |ಸಾಕು ಸುಡು ಸಂಸಾರ |ಬಿಡು ಮನವೆ ಅಹಂಕಾರ |ಇಂದ್ರಿಗಳಿಗುಪಚಾರಗೈದು ಬಂದೆ1ನೋಡುದೇವಿಯಚರಣ|ಮಾಡುದೇವಿಯ ಪೂಜೆ |ಓಡು ದೇವಿಯ ಸ್ಥಳಕೆ |ನೀಡು ದೇವಿಗೆ ಫಲ ಪುಷ್ಪ ನೈವೇದ್ಯ |ಹಾಡು ದೇವಿಯ ಚರಿತೆ ||ಆಡು ದೇವಿಯ ಮುಂದೆ |ಬೇಡು ದೇವಿಯೊಳ್ ಮುಕ್ತಿ |ಕೂಡು ದೇವಿಯ ಭಕ್ತ ಜನರ ತಂಡಾ2ಕೇಳು ದೇವಿಯ ಕಥೆಯ |ಪೇಳು ದೇವಿಯೊಳ್ ಸ್ಥಿತಿಯ |ಗೋಳು ದೇವಿಗೆ ತಿಳಿಸಿ |ಬೀಳು ದೇವಿಯ ಪಾದದ್ವಯಗಳಲ್ಲಿ ||ಬಾಳು ದೇವಿಯ ಕೃಪೆಯೊಳ್ |ತಾಳು ದೇವಿಯ ವ್ರತವ |ನಾಳೆ ದೇವಿಯ ಸೇರಿ | ಆಳುದೇವಿಯು ಕೊಟ್ಟ ಸೌಭಾಗ್ಯಪದವಿ3ದೇವಿ ಪದ ತೀರ್ಥಕುಡಿ|ದೇವಿ ಪ್ರಸಾದಪಡಿ|ದೇವಿ ಚರಣವನು ಹಿಡಿ |ದೇವಿ ಮೂರ್ತಿಗೆ ಪ್ರದಕ್ಷಿಣೆಯ ಮಾಡಿ ||ದೇವಿ ನಿರ್ಮಾಲ್ಯ ಮುಡಿ |ದೇವಿ ಗಂಧ ಮೈಗೆ ಬಡಿ |ದೇವಿ ಸೇವೆಮಾಡು|ದೇವಿ ನೆವೇದ್ಯ ಉಣಲಿಷ್ಟಪಡು ನೀನು4ಮನೆಯು ನಿನ್ನದು ದೇವಿ |ಧನವು ನಿನ್ನದು ದೇವಿ |ತನಯನಿನ್ನವ ದೇವಿ |ತನುಮನವು ನಿನ್ನದೆಂದರ್ಪಿಸಲು ದೇವಿ ||ದಿನ ದಿನವು ದೇವಿ ನಿನ್ನ |ಘನದಿಮನ್ನಿಸುವಳೈ | ಅನುಮಾನ ಬೇಡ |ಗೋವಿಂದದಾಸನ ಒಡತೀ|ಶ್ರೀ ಲಕ್ಷ್ಮೀದೇವಿ5<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಯೋಗಿಗದ್ಯಾತಕೆತಳ್ಳಿಸಂಸಾರಬಳ್ಳಿಯೋಗಿಗದ್ಯಾತಕೆತಳ್ಳಿಯೋಗಿಸುನಿಶ್ಚಲಯೋಗಿ ಸುನಿರ್ಮಲಯೋಗಿಸುಖೋನ್ನತಯೋಗಿ ಚಿದಾನಂದಪನಿದ್ರೆಯಿಂದಲಿ ಮೈಯ ಮರೆತುನಿರ್ಗುಣದೊಳು ಬೆರೆತುಶುದ್ಧಮಂಡಲದಂತೆ ಪೊಳೆದುಸುಖದುಃಖಗಳನುಳಿದುಶುದ್ಧವಿಶುದ್ಧ ಚಿನ್ಮಾತ್ರವೇ ಎಂಬಬದ್ಧಹರನಾಗಿ ಭಾಗ್ಯೋದಯನಾದ1ಆನಂದ ಮೂರ್ಛಿತನಾಗಿಅಹುದಹುದಹುದಾಗಿಧ್ಯಾನಮೌನಗಳವು ಪೋಗಿಧಾರಣೆಯನುನೀಗಿಜ್ಞಾನಂಜೆÕೀಯಂ ಜ್ಞಾತೃವು ತೊರದೆಸ್ವಾನಂದಾಮೃತ ಶರಧಿಯೊಳ್ ಮುಳುಗಿದ2ಏನೇನರಿಯನು ತುರಿಯಎರಡೆಂಬುದ ನರಿಯಮೌನಮೂರುತಿ ಅದನು ಅರಿಯತಾನೆ ತಾನೆ ತಾನಾಗಿರುತಲಿತಾನೆ ಚಿದಾನಂದಗುರುತಾನೆ ಆದ3
--------------
ಚಿದಾನಂದ ಅವಧೂತರು
ರಕ್ಷಿಸೆವರ ಮಹಲಕ್ಷ್ಮೀಅಕ್ಷಯಗುಣಪೂರ್ಣೆ ಪಪಕ್ಷಿವಾಹನನ ವಕ್ಷಸ್ಥಳದಿರಕ್ಷಿತಳಾದೆ ಸುಲಕ್ಷಣದೇವಿ ಅ.ಪನಿಗಮವೇದ್ಯನ ಗುಣಗಳ ಪೊಗಳುತಲಿಮಿಗೆ ಸಂತೋಷದಲಿಅಗಣಿತಾಶ್ಚರ್ಯನ ಕೊಂಡಾಡುತಲಿಬಗೆ ಬಗೆ ರೂಪದಲಿಖಗವರವಾಹನನಗಧರನಿಗೆ ಪ-ನ್ನಗ ವೇಣಿಯು ಬಗೆ ಬಗೆಯಿಂದರ್ಚಿಸಿಹಗಲಿರುಳೆಡೆ ಬಿಡದಲೆ ಹರಿಯನು ಬಹುಬಗೆಯಲಿ ಸೇವಿಪಭಾಗ್ಯದ ನಿಧಿಯೆ 1ಇಂದಿರೆಶ್ರೀ ಭೂದುರ್ಗಾಂಬ್ರಣಿಯೇ ಸು-ಗಂಧ ಸುಂದರಿಯೆಇಂದುಶೇಖರ ಮೋಹಿಪ ಮೋಹಿನಿಯಸುಂದರವನೆ ಕಂಡುಚಂದಿರಮುಖ ಮುದದಿಂದಲಿ ಶ್ರೀಗೋ-ವಿಂದನು ತಾಳಿದ ಮೋಹಿನಿ ರೂಪವನೆಂದು ಮನದಿ ಆನಂದ ಪಡಲು ಸುರವೃಂದವ ಸ್ತುತಿಸೆ ಮುಕುಂದನ ರಮಣಿಯೆ 2ಕಮಲಾನನೆಕಮಲಾಲಯೆಕಮಲಾಕ್ಷಿಕಮಲೋದ್ಭವೆ ಕಮಲೆಕಮಲಾಸನಪಿತನ ಸತಿಯೆ ಭಾರ್ಗವಿಯೆಕಮಲಾಂಬಿಕೆ ಪಿಡಿದಿಹಕಮಲಪುಷ್ಪಮಾಲೆಯು ಹರುಷದಿ ಶ್ರೀ-ಕಮಲನಾಭ ವಿಠ್ಠಲಗರ್ಪಿಸುತಲಿಕಮಲಪತ್ರದಳಾಕ್ಷಗೆ ನಮಿಸಿ ಸ್ವ-ರಮಣನ ಕರುಣಕೆ ಪಾತ್ರಳೆ ಸುಂದರಿ 3
--------------
ನಿಡಗುರುಕಿ ಜೀವೂಬಾಯಿ
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು
ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ..........1ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
--------------
ಪುರಂದರದಾಸರು
ರಾಮಸ್ಮರಣೆಯಿಂದ ಸಕಲ ಪಾಪಹರ ರಾಮ ರಾಮ ಎನ್ನಿರೊವ್ಯೊಮಕೇಶನ ದಿವ್ಯತಾರಕ ಮಂತ್ರವು ಪ.ಶತಕೋಟಿ ರಾಮಾಯಣದ ಬೀಜಾಕ್ಷರ ರಾಮ ರಾಮ ಎನ್ನಿರೊಕ್ಷಿತಿಜೆಯ ಪ್ರಾಣದ್ವಲ್ಲಭ ಶ್ರೀದಶರಥರಾಮ ರಾಮ ಎನ್ನಿರೊ 1ಪಾಮರರೆಲ್ಲರು ಪಂಡಿತರಾದರು ರಾಮ ರಾಮ ಎನ್ನಿರೊಆ ಮೋಕ್ಷ ಕರತಳವಾಹುದು ಕೊಂಡಾಡೆ ರಾಮ ರಾಮ ಎನ್ನಿರೊ 2ಮಖಕೋಟಿಗಧಿಕ ಮಹಾಪುಣ್ಯದಾಯಕ ರಾಮ ರಾಮ ಎನ್ನಿರೊಮುಕ್ತಾಮುಕ್ತಾರ್ಚಿತ ಕರುಣವಾರಿನಿಧಿ ರಾಮ ರಾಮ ಎನ್ನಿರೊ 3ಭಕ್ತವತ್ಸಲ ಭಾಗ್ಯಭೂಷಿತಭವಹರರಾಮ ರಾಮ ಎನ್ನಿರೊನಿಖಿಲ ಭುವನಪತಿ ಬ್ರಹ್ಮಾದಿಸುರವಂದ್ಯ ರಾಮ ರಾಮ ಎನ್ನಿರೊ 4ಅಂಜನೆಜಾತಪೂಜಿತ ಪಾದವಾರಿಜ ರಾಮ ರಾಮ ಎನ್ನಿರೊಕಂಜನೇತ್ರಕಂಜಸಖಅನಂತಪ್ರಭ ರಾಮ ರಾಮ ಎನ್ನಿರೊ5ದಶಶಿರಮರ್ದನ ವಿಭೀಷಣ ವರಪ್ರದ ರಾಮ ರಾಮ ಎನ್ನಿರೊಸುಶರಧಿ ಬಂಧನ ಸುಗ್ರೀವ ಸಂಸೇವ್ಯ ರಾಮ ರಾಮ ಎನ್ನಿರೊ 6ಲಕ್ಷ್ಮಣ ಭರತ ಶತ್ರುಘ್ನಾರಾಧಿತ ರಾಮ ರಾಮ ಎನ್ನಿರೊಋಕ್ಷವರಪ್ರದ ರಘುಕುಲಾಂಬುಧಿಚಂದ್ರ ರಾಮ ರಾಮ ಎನ್ನಿರೊ 7ಜ್ಞಾನಾನಂದ ಬಲಾತ್ಮ ಪರಬ್ರಹ್ಮ ರಾಮ ರಾಮ ಎನ್ನಿರೊಮೌನಿನಿಕರಧ್ಯೇಯಪುಣ್ಯಪುರುಷಗೇಹ ರಾಮ ರಾಮ ಎನ್ನಿರೊ8ಪ್ರಸನ್ನಮೂರುತಿ ಪ್ರಸನ್ನಾನನ ಪರಮಾತ್ಮ ರಾಮ ರಾಮ ಎನ್ನಿರೊಪ್ರಸನ್ನನಿಲಯ ನಿತ್ಯಪ್ರಸನ್ನವೆಂಕಟ ರಾಮ ರಾಮ ರಾಮ ಎನ್ನಿರೊ 9
--------------
ಪ್ರಸನ್ನವೆಂಕಟದಾಸರು
ಲೊಳ್ಳ ಕಳ್ಳೊಟ್ಟೆ ಜಂಬಾಳಗಟ್ಟೆ ಸಂಸಾರ ನೋಡಮ್ಮಲೊಳ್ಳ ಕಳ್ಳೊಟ್ಟೆ ಸರಸನಂಬಲುಗತಿಯದು ಲೊಳ್ಳಟ್ಯಮ್ಮಮ್ಮಪಹೆಂಡಿರು ಮಕ್ಕಳು ತಂದೆ ತಾಯಿಗಳುಭಾಗ್ಯವು ಲೊಳ್ಳಟ್ಯಮ್ಮಮ್ಮಚಂಡ ಯಮದೂತರುಮಂಡೆತಿವಿವಾಗಬಿಡಿಸುವರಾರು ಇಲ್ಲಮ್ಮ1ಶ್ರೇಷ್ಠತೆ ಚೆಲುವಿಕೆ ವಸ್ತ್ರವು ಪ್ರಾಯವುಸಿದ್ಧಿಯು ಲೊಳ್ಳಟ್ಯಮ್ಮಮ್ಮದುಷ್ಟಮದೂತರು ದುಬುದುಬು ಬಡಿವಾಗಬಿಡಿಸುವರಾರು ಇಲ್ಲಮ್ಮ2ವಾರೆ ಮುಂಡಾಸವು ಗೀರು ಗಂಧಗಳುಪೋರತನವು ಲೊಳ್ಳಟ್ಯಮ್ಮಮ್ಮಘೋರ್ಯಮದೂತರು ಘರ್ಜಿಸುತ ಒಯ್ವಾಗಬಿಡಿಸುವರಾರು ಇಲ್ಲಮ್ಮ3ಕನಸಿನ ತೆರವಿದು ಸಂಸಾರವೆಂಬುದುಅನುಮಾನವಿದಕಿಲ್ಲಮ್ಮಮ್ಮಕನಸೆಂದು ನಿಶ್ಚೈಸೆ ಕಾಲನು ಬಾರನುಮನದಲಿ ತಿಳಿದುಕೊ ನೀನಮ್ಮ4ತನ್ನನು ಮರೆತು ಸಂಸಾರ ನೆಚ್ಚಲುತಿರುಗುವ ಜನ್ಮವ ನಮ್ಮಮ್ಮಚೆನ್ನ ಚಿದಾನಂದ ಗುರುವೆಂದು ನಂಬಲುಜನ್ಮವ ಕಳೆವುವು ತಿಳಿಯಮ್ಮ5
--------------
ಚಿದಾನಂದ ಅವಧೂತರು
ಲೋಕಪಾಲಕರು96-1ಪೂರ್ಣ ಸುಗುಣಾಂಬೋಧಿಅನಘಲಕ್ಷ್ಮೀರಮಣಜ್ಞಾನಾದಿನಿಖಿಳಸೌಭಾಗ್ಯದನೆ ಸ್ವಾಮಿಅನವರತಸರ್ವ ದಿಕ್ಪಾಲಕರೊಳಿದ್ದು ನೀಎನ್ನ ರಕ್ಷಿಪ ವಿಭುವೆ ಶರಣು ಮಾಂಪಾಹಿಪಇಂದ್ರಾಗ್ನಿ ಯಮ ನಿಯಯತಿ ವರುಣ ವಾಯುಚಂದ್ರ ನಿಧಿಪತಿ ಈಶಾನಫಣಿಬ್ರಹ್ಮಇಂದಿರಾಪತಿ ಸದಾ ನಿಮ್ಮೊಳು ನಿಂತು ಆನಂದ ಸರ್ವೇಷ್ಟಗಳಈವಸ್ಮರಿಪರಿಗೆ1ವಾಮ ಹಸ್ತದಿ ವಜ್ರಬಲ ಕರವು ಅಭಯದವುಹೇಮವರ್ಣನೆ ಸಹಸ್ರಾಕ್ಷಸುರರಾಜಕಾಮಿತಾರ್ಥವನೀವೆ ಐರಾವತಾರೂಢನಮೋ ಶಚೀಪತಿ ಇಂದ್ರ ಶ್ರೀಶಪ್ರಿಯತರನೆ 2ಹೇಮವರ್ಣಾಂಗನೆ ಸಪ್ತಕರ ಸಪ್ತಾರ್ಚಿನಮೋ ಸ್ವಾಹಾಪತಿ ಅಗ್ನಿ ಮೇಷವಾಹನನೆಕಾಮದನೆ ದುರಿತಹನೆ ಹರಿಣೀಶಪ್ರಿಯಕರನೆನಮೋ ಶ್ರುವಾಶಕ್ತ್ಯಾದಿಧರ ಅಭಯಹಸ್ತ 3ಜ್ಞಾನಸುಖಮಯ ವಿಷ್ಣುಯಜÕನಿಗೆ ಪ್ರಿಯತರನೆಕೃಷ್ಣವರ್ಣನೆ ಲೋಕಕರ್ಮಫಲಪ್ರದನೆದಂಡಧರ ಅಭಯದನೆ ಮಹಿಷವಾಹನ ಯಮನೆಎನ್ನ ಮನ್ನಿಸಿಪೊರೆಇಲಾಪತಿಯೆ ಶರಣು4ಅಸುರರಿಗೆ ಭೀಕರ ಕರಾಲ ವಿರೂಪಾಕ್ಷನೆಅಸಿಧರನೆ ಅಭಯದನೆ ಶರಣು ಮಾಂಪಾಹಿನೃಸಿಂಹಪ್ರಿಯತರನೆ ಕಾಳಿಕಾಪತಿ ಊಧ್ರ್ವಕೇಶ ನಿಋಋತಿನೀಲನರವಾಹ ನಮಸ್ತೆ5ಮೀನ ವಡವಕಮಠಕ್ರೋಡನಿಗೆ ಪ್ರಿಯತರನೆಸ್ವರ್ಣವರ್ಣನೆ ವರುಣ ಪದ್ಮಿನೀರಮಣವನಪತಿಯೆ ಮಕರವಾಹನ ಹವಳಭೂಷಣನೆನಿನಗೆ ನಮೋ ಪಾಶಧರ ಅಭಯದನೆಪಾಹಿ6ನಿಯಮನ ಸುಕರ್ತಾ ಶ್ರೀ ಪುಂಡರೀಕಾಕ್ಷನಿಗೆಪ್ರಿಯತರನೆ ಹರಿಣವಾಹನ ಮೋಹಿನೀಶಶ್ಯಾಮವರ್ಣನೆ ವಾಯು ಜಗತ್ ಪ್ರಾಣರೂಪನೆಕಾಯೆನ್ನ ದಯದಿ ಗದಾಪಾಣಿ ಅಭಯದನೆ 7ಸಾರಾತ್ಮ ಹಯಮುಖ ಧನ್ವಂತರಿ ಪ್ರಿಯತರನೆಸೂರಿಜನ ಚಿಂತ್ಯ ನೀ ಸಿತಕಾಂತಿಕಾಯಪೊರೆಎನ್ನ ಅಭಯದನೆ ರೋಹಿಣೀಪತಿಸೋಮಪುರುಟಭೂಷಣ ಸುಖದ ಕುಮುದಸದ್ಮಸ್ಥ 8ಸೌಭಾಗ್ಯ ಸಾರಾತ್ಮ ಶ್ರೀಯಃಪತಿಗೆ ಪ್ರಿಯತರನೆವಿಪರತ್ನನಿಭ ಯಕ್ಷವೈಶ್ರವಣಪಾಹಿಕುಬೇರ ನಿಧಿಪತಿ ಧನಧಾನ್ಯಾಧಿಪತೇ ನಮೊಸೌಭಾಗ್ಯ ಧನ ಧಾನ್ಯ ಸಮೃದ್ಧಿ ಎನಗೀಯೊ 9ಮನುಜವಾಹ್ಯವು ವರವಿಮಾನದಿ ಕುಳಿತಿಹೆಅನಲಾಕ್ಷಶಂಖಗದಾಧರ ನಮೋಕಿರೀಟಿಎನ್ನ ತಪ್ಪುಗಳನ್ನು ಮನ್ನಿಸಿ ಹರಿಭಕ್ತಿಧನಧಾನ್ಯ ಆರೋಗ್ಯ ಸೌಂದರ್ಯವೀಯೊ 10ನಿರ್ದೋಷಸುಖಮಯ ಜಯೇಶನಿಗೆ ಪ್ರಿಯತರನೆನೀ ದಯದಿ ಸಲಹೆನ್ನ ಈಶಾನಶೂಲಿಸದಾಶಿವನೆ ಭಕ್ತರಿಂ ಅಚ್ಛಿನ್ನ ಸೇವ್ಯನೆಸದಾಅಭಯಎನಗಿತ್ತು ಪೊರೆಯೊ ಗೌರೀಶ11ಆನಂದರೂಪ ಸಂಕರ್ಷಣ ಅನಂತನಿಗೆಅನಂತ ನೀ ಪ್ರಿಯತರನು ಶುಕ್ಲವರ್ಣನಿನ್ನಸತಿವಾರುಣೀಸಮೇತ ಅಭಯದನಾಗಿಎನ್ನಪೊರೆಕೃಷ್ಟಿಧರ ನಮೋ ನೀಲವಾಸ12ಜಗದೀಶ ಭೂರಮಣ ಕೇಶವ ಸುಪ್ರಿಯತಮನೆಜಗದಾದ್ಯ ಬ್ರಹ್ಮ ಸರಸ್ವತೀಸಮೇತಖಡ್ಗಧರ ಅಭಯದನೆ ನಮೋ ರಕ್ತವರ್ಣನೆಮುಗಿದುಕರಶರಣಾದೆಪೊರೆಪಿತಾಮಹನೆ13ಐಶ್ವರ್ಯ ಆಯುಷ್ಯ ನೀತಿ ಜಯ ಅಪಿಪಾಸಪಾವಿತ್ರ್ಯ ಸುಖವಿತ್ತಜ್ಞಾನವಿಜ್ಞಾನಈವೋರು ಇವು ಸರ್ವ ಶ್ರವಣ ಪಠಣವ ಮಾಡೆವಿಶ್ರವ ಕಾಶ್ಯಪ ಲೋಕಪಾಲಕರು ದಯದಿ 14ಇಂದ್ರಾಗ್ನಿ ಯಮ ನಿಋಋತಿ ವರುಣ ಪ್ರವಹಸ್ಥಚಂದ್ರ ವೈಶ್ರವಣ ಈಶಾನ ಅನಂತಸ್ಥಮಂದಜಾಸನಪಿತ ಪ್ರಸನ್ನ ಶ್ರೀನಿವಾಸನುಕುಂದದ ಸೌಭಾಗ್ಯವನುಈವಕರುಣಾಳು15
--------------
ಪ್ರಸನ್ನ ಶ್ರೀನಿವಾಸದಾಸರು
ವನಜಾಲಯ ಮಾಂಪಾಲಯ ಶ್ರೀವನಜಾಲಯ ಮಾಂಪಾಲಯವಾಸುದೇವಸುಪ್ರಿಯಪವಸುಮತಿ ತನಯೆ ವರದಾಭಯಕರೆಕುಸುಮಶರಾಬ್ಜಜಕುಶಲವಮಾತೇ1ಮಣಿಮಯಾಲಂಕೃತೆ ಮಂಜುಳ ಭಾಷೇಅಣಿಮಾಮಹಿಮಾದ್ಯಷ್ಟಭಾಗ್ಯಾನ್ವಿತೇ2ಜಲರುಹ ನಯನೇ ಚಂದ್ರಗೀರಿಶ್ವರೆತುಲಸೀರಾಮದಾಸ ದುರಿತನಿವಾರಣೆ 3
--------------
ತುಳಸೀರಾಮದಾಸರು
ವಿದುರನ ಭಾಗ್ಯವಿದು |ಪದುಮಜಾಂಡ ತಲೆದೂಗುತಲಿದೆ ಕೊ ಪಕುರುರಾಯನು ಖಳನನುಜನು ರವಿಜನು |ಗುರುಗಾಂಗೇಯರು ಎದುರಿರಲು ||ಹರಿಸಿ ರಥವ ನಡು ಬೀದಿಯಲ್ಲಿ ಬಹ |ಹರಿಯ ತಾನು ಕಂಡನು ಹರುಷದಲಿ 1ದಾರಿಯಲಿ ಬಹ ಮುರವೈರಿಯ ಕಾಣುತ |ಹಾರುತ ಚೀರುತ ಕುಣಿಯುತಲಿ ||ವಾರಿಧಾರೆಯನು ನೇತ್ರದಿ ಸುರಿಸುತ |ಬಾರಿಬಾರಿಗೆ ಹಿಗ್ಗುವ ಸುಖದಿ 2ಆಟಕೆ ಲೋಕಗಳೆಲ್ಲಾ ಸೃಜಿಸುವ |ನಾಟಕಧರ ತನ್ನ ಲೀಲೆಯಲಿ ||ನೀಟಾದವರ ಮನೆಗಳ ಜರೆದು |ಕುಟೀರದಲಿ ಬಂದುಹರಿ ಕುಳಿತ3ಅಡಿಗಡಿಗೆ ತನ್ನ ತನುಮನ ಹರಹಿ |ಅಡಗೆಡೆಯುತ ಬಲು ಗದ್ಗದದಿ ||ನುಡಿಗಳ ತೊದಲಿಸಿ ರೋಮವ ಪುಳಕಿಸಿ |ದುಡುದುಡು ಓಡುವ ದಶದಿಶೆಗೆ 4ಕಂಗಳುದಕದಿ ಪದಂಗಳ ತೊಳೆದು |ಗಂಧವ ಪೂಸಿದ ತನುಪೂರಸಿ ||ಮಂಗಳ ಮಹಿಮನ ಚರಣಕೆರಗಿ ಪು-ಷ್ಪಂಗಳಿಂದ ಪೂಜೆಯ ಮಾಡಿದನು 5ನೋಡಿದ ಭಕುತನ ಮನದ ಹವಣಿಕೆಯು |ಪಾಡುವ ಪೊಗಳುವ ಹರುಷದಲಿ ||ನೀಡಿದ ಕರದಲಿ ಬಿಗಿದಪ್ಪಿದ ಕೊಂ -ಡಾಡಿದ ಕರುಣದಿ ಜಗದೊಡೆಯ 6ಕ್ಷೀರವಾರಿಧಿ ಶಯನಗೆ ವಿದುರನು |ಕ್ಷೀರವನುಣ ಬಡಿಸಿದ ನೋಡಾ ||ವಾರಿಜನಾಭನು ಕರಸಂಪುಟದಲಿ |ಆರೋಗಣಿಸಿದ ಘನತೆಯನು 7ಒಂದು ಕುಡಿತೆ ಪಾಲುಹರಿ ತಾ ಸವಿದು |ಮುಂದಕೆ ನಡೆಸಿದ ಧರೆಮೇಲೆ ||ಇಂದಿರೆಯರಸನ ಚರಿತೆ ವಿಚಿತ್ರವು |ಚೆಂದದಿ ಹರಿದುದು ಬೀದಿಯಲಿ 8ಕರುಣಾಕರ ಸಿರಿಹರಿ ತನ್ನ ಭಕುತರ |ಪೊರೆವನುಅನುದಿನ ಆಯತದಿ ||ಸಿರಿಯ ಅರಸು ನಮ್ಮಪುರಂದರ ವಿಠಲನ |ಶರಣರು ಧನ್ಯರು ಮೇಲೆ 9
--------------
ಪುರಂದರದಾಸರು
ವಿಷಯದ ವಿಚಾರ ಬಿಡು ವಿಹಿತಕರ್ಮವಮಾಡು|ವೈರಾಗ್ಯ ಭಾಗ್ಯಬೇಡು ಪ.ವಿಷವೆಂದು ಕಾಮ - ಕ್ರೋಧಗಳೆಲ್ಲವೀಡಾಡು |ಮಸಣಮನವೇ ಮಾಧವನನು ಕೊಂಡಾಡು ಅಪಅನುದಿನದಿ ಹರಿಕಥೆಯಕೇಳಿ ಸಂತೋಷಪಡು |ದಿನದಿನವು ಸಜ್ಜನರ ಕೂಡು ||ಮನಮುಟ್ಟಿ ದುರಾಚಾರ ಮಾಳ್ಪರನು ನೀ ಕಾಡು |ಹಣ - ಹೊನ್ನು ಪರಹೆಣ್ಣು ಹೆಂಟೆಯಂತೆನೋಡು1ವೇದ ಶಾಸ್ತ್ರಾರ್ಥ ತತ್ವದ ವಿಚಾರವಮಾಡು |ಮಾಧವನ ಭಕ್ತಿ ಬೇಡು ||ಪಾದದಲಿ ಪುಣ್ಯತೀರ್ಥದ ಯಾತ್ರೆಮಾಡು ಮಧು - |ಸೂದನನ ಕೀರ್ತಿ ಸಂಕಿರ್ತನೆಯಮಾಡು2ಅಂಬುಗುಳ್ಳಗಳಂತೆ ಎಂದಿಗಿದ್ದರು ದೇಹ |ನಂಬಿ ನೀ ಕೆಡಲುಬೇಡ ||ಕೊಂಬುವರು ಬಂದರಾಕ್ಷಣಕೆ ಬೆಲೆಯಾಗುವುದು |ಅಂಬುಜಾಕ್ಷ ಪುರಂದರವಿಠಲನ ನೆನೆ ಮನವೆ 3
--------------
ಪುರಂದರದಾಸರು
ವೀಣಾಸ್ವರವನು ಕೇಳುತಲಿರುವನ ವಿಶ್ವಾತ್ಮಕನೆಂದೆಂಬೆವೀಣಾಸ್ವರ ಕೇಳಲು ದುರ್ಗುಣವುಡಗಿ ಪೋಗುವುವು ಎಂದೆಂಬೆಪನಾದಬ್ರಹ್ಮವನಾಲಿಸುತಿಹನನು ನರನಲ್ಲವು ನಾನೆಂಬೆನಾದಬ್ರಹ್ಮವನಾಲಿಸುತಿರಲಿಕೆ ನಾನಾಗುಣವು ಲಯವೆಂಬೆ1ಘಂಟಾ ಸ್ವರವನು ಕೇಳುತ ಸುಖವನು ಅನುಭವಿಸುವನ ಗುರುವೆಂಬೆಘಂಟಾಘೋಷದಿಜನನ ಮರಣವು ಮುಳುಗಿಹವು ಎಂದೆಂಬೆ2ಭೇರಿನಾದವ ಕೇಳುತಲಿರುವನ ಭಾಗ್ಯವಂತನು ಎಂಬೆಧೀರ ಚಿದಾನಂದ ಸದ್ಗುರುನಾದದಿ ಲಯವಿಹನು ಎಂದೆಂಬೆ3
--------------
ಚಿದಾನಂದ ಅವಧೂತರು
ವೃಥಾ ಭವದಿ ಮೆರೆದೆರಥಚರಣಧರನ ಸ್ಮøತಿಯನೆ ಮರೆದೆ ಪ.ಸತಿಸುತರೆನ್ನವರತಿಶಯ ಗೃಹಧನಪತಿಯು ನಾನೆಂಬೊ ಮಮತೆವಿಡಿದುರತಿಪತಿಪಿತನಂಘ್ರಿರತಿ ಲೇಶವಿಲ್ಲದೆಸತತ ಯಮಪುರದ ಪಥವನೆ ಪಿಡಿದು 1ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆಪೂತಿ ಮಲಭಾಂಡ ಭರಿತನಾಗಿಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ 2ಮಿತಮನರಹಿತ ದುರ್ಮತಪಂಡಿತನಾಗಿಪ್ರತಿಬೊಮ್ಮರಕ್ಕಸೋನ್ನತನೆನಿಸಿಅತಿಪ್ರಾಜÕಶಾಸ್ತ್ರದೇವತೆ ಪ್ರಸನ್ವೆಂಕಟಪತಿಯನೆ ಬಿಟ್ಟಿನ್ನಿತರವ ಭಜಿಸಿ 3
--------------
ಪ್ರಸನ್ನವೆಂಕಟದಾಸರು
ವೃದ್ಧಾಚಲ ಶ್ರೀ ಈಶ್ವರ77ಮಂಗಳದಾಯಕ ವೃದ್ಧಾಚಲ ಶಿವ ಪಾರ್ವತಿ ರಮಣಪಾಲಯ ಮಾಂ ಪಭೂರ್ಭುವಃ ಸ್ವಹಃಪತಿಶ್ರೀ ಮುಷ್ಣವರಾಹಮಹಾಬಲ ಪ್ರೋಜ್ವಲ ನರಹರಿ ಪ್ರಿಯ ನಮೋ 1ವಿದ್ಯುದಶಿತ ಶಿತ ಲೋಹಿತ ಶ್ಯಾಮೋವದನತ್ರಿಲೋಚನಮೃತ್ಯುಂಜಯನಮೋ2ಬಾಲ ಬದರಧರ ಶೈಲ ಸುತಾಯುತಮೌಲಿ ಜಟಾ ಸ್ಫಟಕಾಮಲ ಕಾಂತಿಮಾನ್ 3ಇಂದಿರ ರಮಣ ಸ್ವತಂತ್ರ ಸರ್ವೋತ್ತಮಬಿಂದುಮಾಧವತವ ಮಂದಿರೇ ಭಾಸತಿ4ಸರ್ಪಾಭರಣ ತ್ರಿಶೂಲಿ ಧೂರ್ಜಟ ಮಮಪಾಪಂ ದ್ರಾವಯ ಕೃಪಯ ಸಂತತ 5ಶಂಭೋ ಶಕ್ರಾದ್ಯಮರ ಜಗದ್ಗುರೋಸುಪ್ರದರ್ಶಯ ಮಮ ಮನಸಿ ಶ್ರೀ ಯಃ ಪತೇಂ 6ಭಾಗ್ಯ ಸಂವೃದ್ಧಿ ದಾ ವೃದ್ಧಾಂಬಾ ಪತೇಯೋಗಕ್ಷೇಮಂ ವಹ ದಯಾಯಾ ಮಮ 7ದರ್ಶನಾರಭ್ಯ ಮದ್ ಹೃದಯೇ ವಿರಾಜಿಸಿಶ್ರೀಶಭಾರತಿಪತಿಸಹ ತ್ಪಂ ಕೃಪಾಳೋ8ವೃತತಿ ಜಾಸನ ಪಿತ ಪ್ರಸನ್ನ ಶ್ರೀನಿವಾಸಭೂತಿದ ಶಿವ ಪ್ರಿಯ ಶಿವತೇ ನಮೋ ನಮೋ 9
--------------
ಪ್ರಸನ್ನ ಶ್ರೀನಿವಾಸದಾಸರು
ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತುಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತುಪಸತಿಸುತರು ಎಂಬ ಹೆಮ್ಮರವೀಗ ಸುಟ್ಟವುಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತುಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವುಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು1ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವುಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವುವಾಸಗಳೆಂದೆಂಬಕುಡಿಕಿಡಿಯಾಗಿ ಉದುರಿದವುಆಸೆ ಎಂಬ ಫಲ ವಹ್ನಿಗಾಹಾರವಾದವು2ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವುಮನೆಯೆಂಬ ಗೂಡುಗಳು ನಿಗಿನಿಗಿಯಾದವುಬಿನುಗುಚಿಂತೆ ಎಂಬ ಹರಿಣ ಮುಗ್ಗರಿಸಿದವುಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು3ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವುತುಚ್ಛವಿಷಯಗಳೆಂಬ ನರಿಗಳೋಡಿದವುದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವುಕಷ್ಟ ತಾಪತ್ರಯದ ಕತ್ತಲು ಹರಿಯಿತು4ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿಯಂತೆ ಧಗಧಗನೆ ಝಗಝಗನೆ ಸುಡುತಲಿಚಿಂತಯಕ ಚಿದಾನಂದ ಉರಿಯು ಅಖಂಡವಾಗಿಶಾಂತರೆಂಬರ ಮುಕ್ತರುಗಳ ಮಾಡಿತ್ತು5
--------------
ಚಿದಾನಂದ ಅವಧೂತರು