ಒಟ್ಟು 1951 ಕಡೆಗಳಲ್ಲಿ , 110 ದಾಸರು , 1438 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಮುರಳಿಯ ಧ್ವನಿಯು ಕರೆಯುತಲಿರುವುದು ಪೋಗುವ ಬಾರೆ ಸಖಿ ಪ ಪೋಗುವ ಬಾರೆ ಸಖಿ ಬೇಸರ ನೀಗುವ ಬಾರೆ ಸಖಿ ವಿಧ ವಿಧ ಭೋಗವ ಪಡುವ ಸಖೀ ಅ.ಪ ವರವಂಶದಿ ಜನಿಸಿದ ಭಾಗ್ಯವ ಈ ಮುರಳಿಯು ತಂದಿತು ಕೇಳೆ ಸಖಿ ಪರಮ ಪ್ರೇಯಸಿ ಇವಳಂತರಂಗವ ಮರೆ ಮಾಚುವ ರಸಿಕಾಗ್ರಣಿ ಕೃಷ್ಣನ 1 ಕ್ಷೀರಶರಧಿತನಯಳ ವೈಭವ ಈ ನೀರಸಳಿಗೆ ಇದು ಅಚ್ಚರಿಯು ಕೋರಿ ಚುಂಬಿಸುವ ಕೃಷ್ಣನಧರ ಸುಧೆ ಧಾರೆಯೊ ಸೂರೆಯೊ ಶೌರಿಯ 2 ಹುಲ್ಲೆ ಹುಲಿಯ ಭಯ ತೊರೆದು ಕೇಳುತಿದೆ ಕಲ್ಲು ಕರಗಿ ಮೃದುವಾಗಿರುವಂತೆ ನಲ್ಲೆ ಎನ್ನ ಹೃದಯವು ಕರಗಿತು ನಾ ನಿಲ್ಲಿ ಎನ್ನ ಮನವಲ್ಲಿ ಪ್ರಸನ್ನನ 3
--------------
ವಿದ್ಯಾಪ್ರಸನ್ನತೀರ್ಥರು
ಮುರಳೀ ಮನೋಹರ ವಿಠಲ | ಪೊರೆ ಇವಳಾ ಪ ಗುರು ರಾಘವೇಂದ್ರರ್ಗೆ | ತೋರ್ದ ಶಿರಿಕೃಷ್ಣಾ ಅ.ಪ. ಸಿರಿ | ನರಸಿಂಹ ಮೂರುತಿಯೆಚಂದದಲಿ ಸುಜ್ಞಾನ | ದೊಂದು ಅಂಕುರವಾ |ಸಂದೇಹ ವಿಲ್ಲದಲೆ | ಅಂದು ಸ್ವಪ್ನದಿ ತೋರಿಮಂದಳನ ಉದ್ಧಾರ | ವೆಂದು ಸೂಚಿಸಿದೇ 1 ಭಯ ಕೃತುವು ಭಯನಾಶ | ವಿಯದಧಿಪ ಗೊಲಿದವನೆನಯ ವಿನಯದಿಂ ಬೇಡ್ವ | ಹಯಮೊಗನ ದಾಸ್ಯದಯದಿ ಕೊಟ್ಟವಳೀಗೇ | ಭಾಗ್ಯ ವೈರಾಗ್ಯವನುದಯೆಗೈದು ಹೇಯೊ ಸಾ | ದೇಯಗಳ ತಿಳಿಸೋ 2 ಹರಿಯು ನೀ ನಿತ್ತುದಕೆ | ಉರುತರದ ತೃಪ್ತಿಯನುಅರಿತಿಹಳು ಈ ಗೃಹಿಣಿ | ಪರಿಸರೇಡ್ಯಾ |ದುರಿತ ರಾಶಿಗಳಳಿದು | ಹರುಷವನೆ ಸುಡಿಸುವುದುಶರಣ ಜನ ಮಂದಾರ | ಕರುಣಾಬ್ಧಿ ಹರಿಯೇ 3 ಮಧ್ವಮತ ಪದ್ಧತಿಗ | ಳುದ್ಧರಿಸ ಇವಳಲ್ಲಿಶ್ರದ್ಧೆ ಭಕುತಿಯು ಜ್ಞಾನ | ಮಧ್ವಮತದೀಕ್ಷಾವೃದ್ಧಿಗೈಸಿವಳಲ್ಲಿ | ಶುದ್ಧ ಆನಂದಾತ್ಮಅಧ್ವರೇಡ್ಯನೆ ಅನಿ | ರುದ್ಧ ಮೂರುತಿಯೇ 4 ಮೋದ ಮೋದ ಬಡಿಸಿವಳಾ 5
--------------
ಗುರುಗೋವಿಂದವಿಠಲರು
ಮುಳಬಾಗಲುರಂಗಸ್ವಾ'ುೀ ಯಮ್ಮನುಳುಹಬೇಕು ಭಕ್ತಪ್ರೇ'ುೀ ಪನಳಿತೋಳು ಕಳೆಮುಖ ತಲೆಗೆ ಕಿರೀಟವುನಳಿನಲೋಚನಮೂರ್ತಿ ಕಳೆುಂದ ಬೆಳಗುವೆಅ.ಪಅದ್ವೈತ ಶಾಸ್ತ್ರಾನುಭವರು ನಮ್ಮಅಣ್ಣಯ್ಯಸ್ವಾ'ುಯ ಸುತರೂಸಾಧ್ವೀಗುರ್ರಮಗರ್ಭಾಂಬುಧಿ ಶಶಿಯಾಗಿಸದ್ವಿಲಾಸದೊಳು ಸಂಜನಿಸಿದ ಚಲುವ 1ಕೃತ್ತಿಕಾನಕ್ಷತ್ರ ಪ್ರಥಮಾ ಪಾದತಿಥಿಯು ದ್ವಾದಶಿ 'ಭವನಾಮಾ'ತವಾದ ಧನುರ್ಮಾಸ ಸ್ಥಿರವಾರದುದಯದೊಳ್‍ಪೃಥಿ'ೀಪಥನವಾದ ಪರಮಪುರುಷಮೂರ್ತಿ 2ಸದ್ಗುಣದಾಟಿನೋಟಗಳೂ ಶಾಸ್ತ್ರ'ದ್ಯ ಸಂಯೋಗಪಾಠಗಳೂ ಸದ್‍ವೃದ್ಧಿ ಸ'ಯ ವ್ಯಾಪಾರ ವರ್ಜಿತಮಾಡಿಶುದ್ಧವೈಷ್ಣವ ತುಲಸಿರಾಮರ ಭಜಿಸುವ 3ಹರಸೀ ವಾಗೀಶಕಿರೀಟಾ ಗುರುಪರಂಪರೆ ಕಥೆನುಡಿದಾಟ ಹರುಷದಿ ಮೆಚ್ಚಿಸಿ ಧರಿಸಿ ಕಿರೀಟಾ ನಿರುಪಮ ಪರತತ್ವದೊಳಗೆ 'ಶೇಷಾ 4ಪರಕಾಲಮಠಕಾಗಾ'ುಸಿದೇ ಜನರತರುಣೋಪಾಯಗಳ ಮಾಡಿಸಿದೇತಿರುಮಂತ್ರಸಂಸ್ಕಾರ ಚರಮಾರ್ಥದೊರಕಿಸಿಪರಮಪಾವನರಾಗಿ ಮಾಡುತಲಿರುತಿಹ 5ವರಯತಿಗುರುಗಳ ಭಾಷಾ ಪೂರ್ಣಪರತತ್ವಬೋಧೆ ಗುಣಭೂಷಪರಮಾನುಭವಜ್ಞಾನ ಅರು' ಭಕ್ತರನೆಲ್ಲ ಪರಲೋಕಸಾಧನ ಅರಿವು ತೋರಿಸುವಂಥಾ 6ಚನ್ನಪಟ್ಣಾದಿರಾಮಕೋಟಿ ಅಲ್ಲಿಜನಕೆನೀ ತುಂಬಿದೆ ನಾಟಿಮುನ್ನುಮಾಡಿದ ಪಾಪವೆಲ್ಲವು ಪರಿಹಾರವುನ್ನತಮಾರ್ಗವ ತೋರಿದ ಗುರುದೇವ 7ರಾಮಕೃಷ್ಣೋತ್ಸವಗಳನೂ ಬಹುಪ್ರೇಮದಿನಡೆಸಿದಾದರನೂಆಮಹಾ ಕಾರ್ಯಕಾತುರದುರಂಧರನೂುೀಮ'ಯೊಳು ಪ್ರಖ್ಯಾತನಾಗಿಹನೂ 8ಪುರಪುರಗ್ರಾಮಗಳಲ್ಲಿ ಗುರು ತಿರುನಕ್ಷತ್ರೋತ್ಸವವಲ್ಲಿಪರಮವೈಭವದಿಂದ ಸ್ಥಿರವಾಗಿ ನಡೆಯಲುಹರುಷದಿ ಸೌಲಭ್ಯ ದೊರಿಕಿಸಿ ಇರುವಂಥಾ 9ಪ್ರತಿವರ್ಷ ಧನುರ್ಮಾಸ ಭಜನೇ ಒಳ್ಳೆಶೃತಿಮೃದಂಗವು ತಾಳರಚನೇಸತತವು ಹರಿಕಥೆ ತೀರ್ಥಪ್ರಸಾದವು'ತಕರಗುರುಸೇವಾ ದುರಂಧರಬಿರುದುಳ್ಳ 10ಭರತಪುರೀವಾಸಶ್ರೇಷ್ಟಾ ಗುರುವರತುಲಸಿರಾಮ ಪ್ರತಿಷ್ಠಾಪರಿಪರಿತತ್ಸೇವಾನಿರತ ಸಂತುಷ್ಟಾಗುರುಪಾದಸರಸಿಜ ಭೃಂಗಾವೆ ಸ್ವಷ್ಟಾ 11ಅಪರೋಕ್ಷಜ್ಞಾನ ಸಂಪೂರ್ಣ ಜನ್ಮಸಫಲಮಾರ್ಗದಲ್ಲಿ ಉತ್ತೀರ್ಣಾ ಅಪರಾಧಗಳನು ಮನ್ನಿಸಿ ಶ್ರಿತಜನರನ್ನುಸಫಲಗೊಳಿಸಿ ಜನ್ಮಸಾರ್ಥಕಪಡಿಸುವ 12ಪತಿತಪಾಮರರಿಗೆಯೆಲ್ಲಾಪ್ರತಿಫಲ'ಲ್ಲಾದುಪದೇಶ ಬಲ್ಲಾ'ತಕರವಾಗಿ ತೋರ್ಪುದು ಶಿಷ್ಯಜನಕೆಲ್ಲಾ ಸತತವು ತವಪಾದ ಗತಿಮೋಕ್ಷದಾಯಕ 13ಜ್ಞಾನಭಕ್ತಿಯು ವೈರಾಗ್ಯ ಸುಜ್ಞಾನದಿ ತುಳುಕುವ ಭಾಗ್ಯಮಾನವ ಜನ್ಮದಿ ಅವತರಿಸಿರುತಿಹದೀನರ ಮುಕ್ತಿಗೆ ಕಾರಣವಾಗಿಹ 14ಅಂಗ ದ್ವಾದಶನಾಮಧಾರಾ ಬಹುಶೃಂಗಾರತರ ಮಕುಟಾಂಬರಾರಂಗುಮಂಟಪದಿ ಲಂಘಿಸಿ ರಾಗ ಪಾಡುತ್ತಮಂಗಳಕರ ತುಲಸಿನಳಿನಾಕ್ಷಹಾರುಳ್ಳ 15ಗೃಹಮಣಿ ಸುಬ್ಬಾಂಬನವರೂ ನಿಮ್ಮಮಹದಾಂಶ ಸುಗುಣವಂತೆಯರುಸಹಚರಿಸುತ ಪುರಗ್ರಾಮ ಮಾದರಿಯಾಗಿಸಹಪತ್ನಿಸ'ತ ಭಕ್ತರನು ಪಾಲಿಸತಿರ್ಪಾ 16ದಿನಚರಿಬರುವ ದಾಸರನೂ ಮನದನುವಾರಿತಾನ್ನದಾನವನೂಮನದೊಳು ಭಕ್ತರವೊಡಲ ಪರೀಕ್ಷಿಸಿಘನವಾದ ಮೋಕ್ಷಾರ್ಹವಾದನರ ಕೈಪಿಡಿದ 17ಅಂಕಿತಮಾಡದೆ ುಹೆನೂ ಚಕ್ರಾಂಕಿತ 'ಲ್ಲದ್ಯೋಚಿಪೆನೂ ಕಿಂಕರನಾಗಿ ಬೇಡುವೆ ಪಾದವನೂಅಂಕಿತಕನುವiತಿ ಆಗಹೊಂದುವೆನೂ 18ಸೋಮೆಗೌಡನ ಪುರವಾಸಾ ರಂಗಸ್ವಾ'ುದಾಸರ ದಾಸದಾಸಪ್ರೇಮಭೈರವಗೌಡನೊಳಗೆ ತೋರಿಸಬೇಕು ಸ್ವಾ'ುನಿನ್ನಾಜ್ಞೆಗೇ ಬಾಗಿದಂಕಿತ'ದು19
--------------
ಮಳಿಗೆ ರಂಗಸ್ವಾಮಿದಾಸರು
ಮೂರ್ತಿ ನೀ ಕರುಣಿಸೊ ಪ್ರಭುವೇ ಪ ಎಲ್ಲೆಲ್ಲಿ ನೋಡಲಲ್ಲಿಲ್ಲಿ ನಿಮ್ಮಯ ಕೀರ್ತಿಯನು ಮೊರೆಹೊಕ್ಕ ಸುಜನರ ಪೊರೆವರೆಂಬ ಬಿರುದು ಕೇಳಿ ತ್ವರಿತದಿಂದಲಿ ಬಂದೆನೋ ಭರದೀ ಹಾರೈಸು ಕರುಣಾ ಶರಧೀ 1 ಇಷ್ಟಾರ್ಥಗಳನಿತ್ತು ಸಲಹಿದೆ ತುಪ್ಪರಾಗುತಲವರ ಕಷ್ಟಗಳನೇ ಕಳೆದೆ ಉದ್ಧರಿಸಿದೆ ಅಷ್ಟ ಸೌಭಾಗ್ಯವ ಕೊಟ್ಟು ರಕ್ಷಿಸಿದೇ - ಕೈಬಿಡದೇ 2 ಅಡಿಗಳಿಗೆರಗುತಲಿ ನುಡಿ ನುಡಿಗೆ ತುತಿಸಲಿ ಬಿಡದೆ ನಿನ್ನನು ಕೊಂಡಾಡುತಲಿ ತಡಮಾಡದೆ ಯಡರುಗಳ ಪರಿಹರಿಸಿದೆ ನಿಮ್ಮ ಮಹಿಮೆಗೆ ಸರಿಗಾಣೆ ಭೂಮಂಡಲದೊಳಗೇ ಪ್ರಭವೇ 3
--------------
ರಾಧಾಬಾಯಿ
ಮೂರ್ತಿ ನೆಲಸಲಂತರ್ಧಾನದಿ ಕ್ಷಣದೀ 1ನಾ ಪುಣ್ಯವಂತನೆಂಬೆನೆ ಮೂರ್ತಿಯಗಲುವದೆ ನಾಪಾಯೆಂಬೆನೆಕಾಬೆನೆರೂಪುಮರೆಯಾದರೇನೈ ಪೂರ್ಣವಸ್ತುವೆಂಬೀ ಪಂಥವನು ಪಿಡಿವೆನೆವ್ಯಾಪಾರದಲಿ ಸಿಲುಕಿದೀ ಮನಕೆ ಬಿಡದೆ ಸದ್ರೂಪ ನಂಬಿದ್ದೆನಿದನೆಸಾಪರಾಧಿಗೆ ಮುಖಗೊಡದ ತೆರದಿ ಮರೆಯಾದ ತಾಪ ಬೆಂಬಿಡದು ತಾನೆ ಎನ್ನನೆ 2ಬರಿದೆ ನಾನಪರಾಧಿಯೆಂದು ಪಂಬಲಿಸುವದು ತರವಲ್ಲ ಧನ್ಯ ನಾನೂಕರುಣದಿಂ ಮೂರುತಿಯ ತೋರಿ ಸುಖಗೊಳಿಸಿಯುರೆ ಮರೆಯಾದ ಭಾವ ತಾನೂಸ್ಮರಿಸಿ ಸ್ಮರಿಸಿಯೆ ಮನವು ಕರಗಿ ತನ್ನೊಳುನಿಜದಿ ಬೆರೆಯಲೆಂತೆಂಬುದಿದನೂಮರಳಿ ಜಾನಿಸಿ ಧೈರ್ಯ'ಡಿದರೂ ಮೊದಲುಂಡ ಪರಮಸುಖ ಬಿಡದೆನ್ನನೂ ತಾನೂ 3ಭಾಪುರೆ ಭಾಗ್ಯಶಾಲಿಯು ಧನ್ಯಧನ್ಯನೈ ನಾ ಪುಣ್ಯವಂತನಹುದೂತಾ ಪೂರ್ಣ ಕೃಪೆವಂತ ಶ್ರೀಕೃಷ್ಣಯೋಗೀಂದ್ರ ನೀ ಪೊಡ' ಮೊದಲೊಳಹುದೂತಾಪಬಡುವರು ಭಜಕರೆಂದು ಮಂಗಳಕರದ ರೂಪವನು ಮೊದಲೆ ತಳೆದೂವ್ಯಾಪಕನು ಶ್ರೀ ದಾಸಾರ್ಯನಾಗಿರುವನೀ ಪದ'ಗೆಣೆಯಾವದು ಇಹುದೂ 4ಗುರು ವಾಸುದೇವಾರ್ಯನೆನಿಸಿ ಚಿಕ್ಕನಾಗಪುರ ವರದವೆಂಕಟರಮಣನೆಕರದು ಸುಜ್ಞಾನಸುಧೆಯೆರೆದಜ್ಞರಜ್ಞತೆಯ ಪರಿದ ಕರುಣಾವಂತನೆವರ ಕೃಷ್ಣಯೋಗೀಂದ್ರ ಶ್ರೀರಾಮದಾಸಾರ್ಯ ಶರಣಾಗತೋದ್ಧರಣನೆಮರೆಯೊಕ್ಕೆ ನಾನು ತಿಮ್ಮದಾಸ ಜೀಯ್ಯಪರಾಕು ಕರ'ಡಿಯಬೇಕೆನ್ನನೆ ನೀನೆ5
--------------
ತಿಮ್ಮಪ್ಪದಾಸರು
ಮೇಲ್ ಮೇಲ್ ಮೇಲ್ ಮೇಲ್ ಹರಿನಾಮ ಮೇಲು ಮೂಜಗಸೂತ್ರ ಹರಿನಾಮ ಪ ಕಾಲಕುಜನಕುಲ ಹರಿನಾಮ ಪಾಲಸುಜನಗಣ ಹರಿನಾಮ ಜಾಲಮಾಯ ದರ್ಪಣ್ಹರಿನಾಮ ವಿಶ್ವ ಹರಿನಾಮ ಅ.ಪ ಶರನಿಧಿಮಂದಿರ ಹರಿನಾಮ ಶರಧಿಮಥನ ಮುರಹರಿನಾಮ ಪುರತ್ರಯಸಂಹರ ಹರಿನಾಮ ಸುರಗಣಭೋಜನ ಹರಿನಾಮ ಶರಣರ ಸಿರಿತಾನ್ಹರಿನಾಮ ಪರತರ ಪಾವನ ಹರಿನಾಮ1 ಶಾಪವಿಮೋಚನ ಹರಿನಾಮ ತಾಪತ್ರಯಗಳ್ಹರ ಹರಿನಾಮ ಗೋಪೇರಾನಂದ ಲೀಲ ಹರಿನಾಮ ಕಪಾಲಧರನುತ ಹರಿನಾಮ ಗೌಪ್ಯಕೆ ಗೌಪ್ಯದ ಹರಿನಾಮ 2 ದುರಿತ ದಾರಿದ್ರ್ಯ ದೂರ್ಹರಿನಾಮ ಪರಿಹರ ಜರಾಮರಣ್ಹರಿನಾಮ ನರನ ಸಿರಿಯ ಭಾಗ್ಯ ಹರಿನಾಮ ಸುರತರು ಹರಿನಾಮ ಅರಿವಿನ ಅರಮನೆ ಹರಿನಾಮ ಪರಕ ಪರಮಸಿರಿ ಹರಿನಾಮ 3 ನಿಜಮತಿ ಭಂಡಾರ ಹರಿನಾಮ ಕುಜಮತಿ ಖಂಡನ ಹರಿನಾಮ ಭಜಕರನಿಜಧೇನ್ಹರಿನಾಮ ಭುಜಗಾದ್ರಿ ಪರ್ಯಂಕ ಹರಿನಾಮ ದ್ವಿಜರಿಗಮೃತನಿಧಿ ಹರಿನಾಮ ಅಜನಿಗುತ್ಪತ್ತಿ ಮಂತ್ರ ಹರಿನಾಮ 4 ವೇದಗಳಾಧಾರ ಹರಿನಾಮ ಸಾಧುಸಂತ ಪ್ರೇಮ ಹರಿನಾಮ ಭೇದವಾದÀರಹಿತ್ಹರಿನಾಮ ಸಾಧಿಸಲಸದಲ ಹರಿನಾಮ ಆದಿ ಅನಾದಿವಸ್ತು ಹರಿನಾಮ ಭೋಧ ಸ್ವಾದಸಾರ ಹರಿನಾಮ 5 ಕಾಲ ಹರಿನಾಮ ಕೀಳರ ಎದೆಶೂಲ್ಹರಿನಾಮ ಶೀಲರ ಜಪಮಾಲ್ಹರಿನಾಮ ಲೋಲಗಾನಪ್ರಿಯ ಹರಿನಾಮ ಕೀಲಿ ವೇದಾಂತದ ಹರಿನಾಮ ಫಾಲನೇತ್ರಗೆ ಶಾಂತಿ ಹರಿನಾಮ 6 ಪ್ರಳಯಕೆ ಅಳುಕದ ಹರಿನಾಮ ಪ್ರಳಯ ಪ್ರಳಯಗೆಲುವ್ಹರಿನಾಮ ಮಲಿನದಿ ಸಿಲುಕದ ಹರಿನಾಮ ಚಲಿಸದ ನಿರ್ಮಲ ಹರಿನಾಮ ಬೆಳಗಿನ ಬೆಳಗೀ ಹರಿನಾಮ ಕುಲಮುನಿ ಪಾವನ ಹರಿನಾಮ 7 ವಿಷಮಸಂಸಾರಖಡ್ಗ ಹರಿನಾಮ ವ್ಯಸನಕಾಷ್ಠಕಗ್ನಿ ಹರಿನಾಮ ವಿಷಕೆ ಮಹದಮೃತ ಹರಿನಾಮ ಮಸಣಿಮಾರಿಧ್ವಂಸ ಹರಿನಾಮ ಅಸಮಸುಖದ ಋಣಿ ಹರಿನಾಮ ವಸುದೇಜೀವಜೀವಳ್ಹರಿನಾಮ8 ಧರ್ಮಶಾಸ್ತ್ರದ ಗುಟ್ಟು ಹರಿನಾಮ ಮರ್ಮ ತಿಳಿಸುವ ರಟ್ಟು ಹರಿನಾಮ ಕರ್ಮ ಕಡಿಯುವ ಶಸ್ತ್ರ ಹರಿನಾಮ ನಿರ್ಮಲಾನಂದ ಪದವೀ ಹರಿನಾಮ ನಿರ್ಮಾಣ ನಿಜಜ್ಞಾನ ಹರಿನಾಮ ಬ್ರಹ್ಮಕಿಟ್ಟಿಗುರಿ ಹರಿನಾಮ 9 ಭವಗುಣಮರ್ದನ ಹರಿನಾಮ ಭವನಿಧಿ ಸೇತುವೆ ಹರಿನಾಮ ಭವನ ಭೀತಿಹರ ಹರಿನಾಮ ರವಿಕುಲ ಪಾವನ ಹರಿನಾಮ ಬುವಿತ್ರಯ ಪವಿತ್ರ ಹರಿನಾಮ ಸಾಯುಜ್ಯಪದಸ್ಥಾನೀ ಹರಿನಾಮ 10 ಸತ್ಯಕ್ಕೆ ಬಹು ನಿರ್ಕು ಹರಿನಾಮ ಮಿಥ್ಯಕ್ಕೆ ಅನರ್ಥ ಹರಿನಾಮ ನಿತ್ಯಕ್ಕೆ ಮಹಸುರ್ತು ಹರಿನಾಮ ಚಿತ್ತಕ್ಕೆ ಚಿಜ್ಜ್ಯೋತಿ ಹರಿನಾಮ ಅರ್ತವರಿಗೆ ಗುರ್ತು ಹರಿನಾಮ ಭೃತ್ಯಜನರ ಮತ್ತು ಹರಿನಾಮ 11 ಮಾಯಕ್ಕೆ ಪ್ರತಿಮಾಯ ಹರಿನಾಮ ಮಾಯ ಕತ್ತಲುನಾಶ ಹರಿನಾಮ ಕಾಯಕ್ಕೆ ಶೋಭಾಯ ಹರಿನಾಮ ಭಾವಕ್ಕೆ ಪರಿಶುದ್ಧ ಹರಿನಾಮ ತಾಯಿತಂದೆ ಜೀವಕ್ಹರಿನಾಮ ಅಮೃತ ಹರಿನಾಮ 12 ಪುಣ್ಯ ಶರಧಿಗೆ ಚಂದ್ರ್ಹರಿನಾಮ ಮನ್ನಣೆ ಮೂಲೋಕದ್ಹರಿನಾಮ ಧನ್ಯರಿಗೆ ಧನ್ಯ ಹರಿನಾಮ ಉನ್ನತ ಸಾಮ್ರಾಜ್ಯ ಹರಿನಾಮ ಮುನ್ನ ಕೈವಲ್ಯಪದ ಹರಿನಾಮ ಸನ್ನಿಧಿ ವೈಕುಂಠ ಹರಿನಾಮ 13 ನಿಗಮಕೆ ಸೊಬಗಿನ ಹರಿನಾಮ ಸುಗುಣರೊಳ್ನೆಲೆಗೊಂಡು ಹರಿನಾಮ ಅಗೋಚರ ಆಗಮಕ್ಹರಿನಾಮ ಸೊಗಸುವ ಭಕ್ತರಲ್ಹರಿನಾಮ ಅಗಜೇಶ ಪೊಗಳುವ ಹರಿನಾಮ ಅಗಜೆಯು ಒಪ್ಪಿದ ಹರಿನಾಮ 14 ವಿಮಲ ಗುಣಗಣ ಹರಿನಾಮ ದಮೆ ದಯಾನ್ವಿತ ಹರಿನಾಮ ಶಮೆ ಶಾಂತಿಮಂದಿರ ಹರಿನಾಮ ಸುಮನಸ ಕಲ್ಪದ್ರುಮ ಹರಿನಾಮ ನಮಿತ ಸುರಾದ್ಯರಖಿಲ ಹರಿನಾಮ ಅಮಿತ ವಿಶ್ವರೂಪ ಹರಿನಾಮ 15 ಮೂರು ಕಾಲದರಿವದ್ಹರಿನಾಮ ಮೂರಾರಿಕ್ಕಡಿಗೈವುದ್ಹರಿನಾಮ ಪಾರಪಂಚ ಪರುಷ್ಹರಿನಾಮ ಸಾರಸೌಖ್ಯಾಂಬುಧಿ ಹರಿನಾಮ ದಾರಿ ವೈಕುಂಠಕ್ಕೆ ಹರಿನಾಮ ಸೇರಿ ದಾಸರನಗಲದ್ಹರಿನಾಮ 16 ಭಕ್ತವತ್ಸಲ ಜಯ ಹರಿನಾಮ ಮುಕ್ತಿದಾಯಕ ಜಯ ಹರಿನಾಮ ಹತ್ತಾವತಾರ ಜಯ ಹರಿನಾಮ ಸತ್ಯ ಶೀಲ ಜಯ ಹರಿನಾಮ ನಿತ್ಯ ನಿರುಪಮ ಜಯ ಹರಿನಾಮ ಕರ್ತು ಶ್ರೀರಾಮ ಜಯ ಹರಿನಾಮ 17
--------------
ರಾಮದಾಸರು
ಮೊದಲನೇ ಅಧ್ಯಾಯ ಪಾತಿವ್ರತ್ಯ ಮಹಾತ್ಮೆ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ನಿರ್ದೋಷ ಗುಣಪೂರ್ಣ ವಿಷ್ಣು ಸರ್ವೋತ್ತಮ ಸ್ವತಂತ್ರ ಶ್ರೀದ ಶ್ರೀಪತಿ ಜಗಜ್ಜನ್ಮಾದಿಕರ್ತನು ಸಚ್ಛಾಶ್ರ - ದಿಂದಲೇ ವೇದ್ಯನು ಮೂರು ವಿಧ ಜೀವರಿಗೆ ಯೋಗ್ಯ ಸಾಧನಕೆ ಗತಿಯ ಮಾಡುವ ಅವತಾರ ಲೀಲಾ 1 ಸುಪುಷ್ಪಭವ ಬ್ರಹ್ಮದೇವನೋಳ್ ತತ್ ಶಬ್ದವಾಚ್ಯನು ಶ್ರೀ ಪುರುಷೋತ್ತಮನೆ ಪ್ರಜಾಸೃಷ್ಟಿ ಮಾಡಿಸುವನು ತ್ರಿಪುರಾರಿ ಭಸ್ಮಧರ ರುದ್ರನೋಳ್ ತನ್ನಾಮದಲಿ ಶ್ರೀ ಪುರುಷೋತ್ತಮನೇ ಸಂಹಾರ ಮಾಳ್ಪ ಅಂತರ್ಯಾಮಿ 2 ಉರುಜ್ಞಾನ ಸುಖ ಬಲಾದ್ಯಮಿತ ಗುಣಧಾಮನ ಕರ ಚರಣಾದ್ಯವಯವಕ್ಕೂ ಅವಗೂ ಅವನು ಧರೆಯಲ್ಲಿ ಅವತಾರ ಮಾಡುವ ರೂಪಗಳಿಗೂ ಪರಿಪೂರ್ಣವಾಗಿ ಅಭೇದ ಭೇದಲೇಶವೂ ಇಲ್ಲ 3 ದ್ವಿ ಷೋಡಶ ಶುಭಲಕ್ಷಣ ತನುವುಳ್ಳ ಬ್ರಹ್ಮಗೂ ವಿಷಕಂಠ ರುದ್ರಗೂ ಪರಸ್ಪರ ಭೇದ ಅಂತಸ್ಥ ವಿಷ್ಣುಗೂ ಇವರುಗಳಿಗೂ ಭೇದವು, ಅಂತರ್ಯಾಮಿ ವಿಷ್ಣು ಒಬ್ಬನೇ ದ್ವಿರೂಪದಲ್ಲಿ ಇವರಲ್ಲಿಹ 4 ಹತ್ತಾವತಾರ ಮತ್ಸ್ಯಾದಿರೂಪಗಳು ಮಾತ್ರವಲ್ಲ ಅನಂತರೂಪನು ಅನಂತಗುಣ ಕ್ರಿಯಾವಂತನು ಕ್ಷಿತಿಯಲ್ಲಿ ಬಲಕಾರ್ಯಕ್ಕೆ ಕೆಲವು ಅವತಾರ ಹಿತಕರ ಹಲವು ಜ್ಞಾನಬೋಧಕ್ಕೇವೇ ಕೆಲವು 5 ಧ್ಯಾತ್ಮನು ಜ್ಞಾನಕಾರ್ಯಕ್ಕಾಗಿ ಅವತರಿಸುವನು ಶ್ರೀಮಾನ್ ಹಯಗ್ರೀವ ಸನತ್ಕುಮಾರ ದತ್ತ ಕಪಿಲ ಧೀಮಾನ್ ಪರಾಶರ ವಾಸವೀಸೂನು ಐತರೇಯಾದಿ 6 ದ್ವಾಪರದಲ್ಲೇವೆ ಅಲ್ಲಲ್ಲಿ ಕಲಿವಿಷ ಹರಡಿ ತಪೋಧನರು ಗೌತಮರು ಶಪಿಸೆ ಜ್ಞಾನಕುಂದೆ ಶ್ರೀಪ ವೇದವ್ಯಾಸ ಜ್ಞಾನ ತೇಜಃಪುಂಜ ಬಂದು ತೋರಿ ಆ ಪೀಡಿಸುವ ಅಜ್ಞಾನ ತರಿದು ಸಜ್ಞಾನ ಇತ್ತ 7 ಹಿಂದೆ ಬ್ರಹ್ಮದೇವರಾಜÉ್ಞಯಿಂ ಅತ್ರಿಋಷಿವರ್ಯರು ನಿಂತರು ಋಕ್ಷಗಿರಿಯಲ್ಲಿ ಅಪತ್ಯಾಪೇಕ್ಷೆಯಿಂದ ಅದ್ಭುತ ತಪವಚರಿಸಿ ಜಗದೀಶ್ವರ ಸಮ - ಪುತ್ರ ಕೊಡೆ ಚಿಂತಿಸಿ ಹರಿಯಲ್ಲಿ ಶರಣಾದರು 8 ಹರಿ ತಾನು ತನ್ನ ಅಧಿಷ್ಟಾನರಾದ ಬ್ರಹ್ಮೇಶ್ವರ ಕರಕೊಂಡು ಋಷಿ ಮುಂದೆ ನಿಂತು ಯುಕ್ತಮಾತನ್ನಾಡಿ ಮೂರು ಮಂದಿಗಳು ತಾವು ಪುತ್ರರಾಗುವೆವು ಎಂದ ತರುವಾಯ ತಾನಿತ್ತ ವರವ ಒದಗಿಸಿದನು 9 ಭಾಗವತ ಈ ವಿಷಯ ಒಳಗೊಂಡು ಇಹುದು ಪತಿ ವೇದವ್ಯಾಸ ಸಂಕೃತ ಈ ಭೂರಾದಿ ಜಗತ್ತಿನಲ್ಲಿ ಪ್ರಖ್ಯಾತ ಪುರಾಣಂಗಳೊಳ್ ಶ್ರೀ ಭಗವಾನ್ ದತ್ತಾತ್ರಯನ ಅವತಾರವು ವೇದ್ಯ 10 ಗೀರ್ವಾಣ ಛಂದಸ್ಸು ಅಷ್ಟಿಯಲಿ ಬರೆಯುವದೆಂದು ಶ್ರೀವರನ ಹಿತಾಜÉ್ಞಯಿಂ ಪ್ರಸನ್ನ ಶ್ರೀನಿವಾಸೀಯ ಶ್ರೀವಿಷ್ಣು ಸಹಸ್ರನಾಮ ಭಾಷ್ಯ ಕನ್ನಡದಲ್ಲಿ ಅಳವಡಿಸಿದಂತೆ ಅಷ್ಟೀ ಛಂದಸ್ಸಲಿ ಈ ಗ್ರಂಥವ 11 ಈ ಗ್ರಂಥದಲಿ ಶ್ರೀಭಾಗವತವು ಮಾರ್ಕಂಡೇಯವು ಭಾಗವತರಿಗೆ ಉಪಾಸನಾ ಹೇತು ಪಂಚರಾತ್ರ ಆಗಮವು ಒಳಗೊಂಡ ವಿಷಯಗಳು ಇವೆಯು ಕಾಯ ಶುದ್ಧಿಯಿಂ ಪಠಣೀಯವು 12 ಗುರುಮಂತ್ರ ಉಪದೇಶವಿಲ್ಲದಂತಹ ಸ್ತ್ರೀ ಜನ ಶೂದ್ರರು ಬ್ರಹ್ಮಬಂಧುಗಳು ಈ ಗ್ರಂಥ ಪಠಿಸಲು ಹರಿಭಕ್ತ ಸಾಧು ವೈದಿಕ ಬ್ರಾಹ್ಮಣರ ಅಪ್ಪಣೆ ಕೋರಿ ಅವರ ಅಪ್ಪಣೆಯಿಂದ ಓದಬಹುದು 13 ಪ್ರತಿಷ್ಠಾನಪುರದಲ್ಲಿ ಕೌಶಿಕಾಹ್ವಯ ದ್ವಿಜನು ವ್ಯಾಧಿ ಪೀಡಿತನು ಕುಷ್ಠಿ ನಡಮಾಡಲು ಅಶಕ್ತ ಆತನ ಪತ್ನಿಯು ಸಾಧುಗುಣವತಿ ಬಲುಶ್ರೇಷ್ಠ ಪತಿ ಹೇಳಿದಂತೆ ನಡೆಯುವಳು 14 ಒಂದು ದಿನ ಆ ಬ್ರಾಹ್ಮಣನು ನೋಡಿದ ಬಾಗಿಲಾಚೆ ಬೀದಿಯಲಿ ಹೋಗುತ್ತಿದ್ದ ಸುಂದರಿ ವೇಶ್ಯೆಯೋರ್ವಳಲಿ ಸೋತು ಮನ ಅವಳನ್ನು ತಾನು ಹೊಂದಬೇಕೆನ್ನಲು ಸಾಧ್ವಿಸತಿ ಪತಿಯನ್ನು ಎತ್ತಿದಳು ಸೊಂಟದಲಿ 15 ರಾತ್ರಿ ಕತ್ತಲೆಮಾರ್ಗ ತಿಳಿಯದಲೆ ಪತಿಯನ್ನು ಹೊತ್ತುಕೊಂಡು ಹೋಗುವಾಗ ಪತಿಯ ಕಾಲು ತಾಕಿತು ಹಾದಿಯಲ್ಲಿ ಕಬ್ಬಿಣ ಸಲಾಕದಲ್ಲಿ ಚುಚ್ಚಿಸಿ ಇದ್ದ ಕಟಿ ಸಮೀಪ ಹಾಹಾ 16 ಅನ್ಯಾಯದಿ ಆ ರಾಜ್ಯದರಸ ಆ ಮಹಾಮುನಿಯ ಧನಚೋರನೆಂದು ಶೂಲಕ್ಕೆ ಹಾಕಿಸಿದ್ದ ಆ ಶೂಲ ಕಾಣದೇ ಕೌಶಿಕನ ಕಾಲ್ತಗಲಿ ಬಲು ನೋವಾಗಿ ಮುನಿ ಶಾಪವಿತ್ತರು ಸೂರ್ಯೋದಯಲ್ಲೇ ಸಾಯೆಂದು 17 ಹಾಹಾ ಇದು ಏನು ಮುನಿಗಳಿಗೆ ನೋವಾಯಿತಲ್ಲಾ ಮಹಾತ್ಮರ ಶಾಪ ವೀಣಾಗಲಾರದು ಮಾಂಗಲ್ಯವ ಪತಿ ಅಂತಸ್ಥ ಶ್ರೀಹರಿಯ ಸ್ಮರಿಸಿ ಆ ಪತಿವ್ರತೆ ಹೇಳಿದಳು 18 ಸೂರ್ಯೋದಯವಾಗದಿದ್ದರೆ ಶಾಪವು ಫಲಿಸದು ಸೂರ್ಯೋದಯವಾಗಬೇಡಿ ಎಂದು ಹೇಳಿದಳು ಸಾಧ್ವಿ ಆರ್ಯಧರ್ಮ ಲೋಕಕಾರ್ಯ ಸರ್ವವೂ ಸ್ತಬ್ಧವಾದವು ಎಲೆಲ್ಲೂ ಕತ್ತಲೆಯು ಭಾನು ಉದಯಿಸಲಿಲ್ಲ 19 ಇಂದ್ರಾದಿ ದೇವರ್ಗಗಳು ಬ್ರಹ್ಮನಲಿ ಮೊರೆಯಿಡಲು ಪತಿವ್ರತೆ ಮಹಾತ್ಮನೆ ಮತ್ತೊಬ್ಬ ಪತಿವ್ರತೆಯೇ ಪ್ರತಿ ಮಾಡುವಳು ಅತ್ರಿಋಷಿ ಪತ್ನಿ ಅನಸೂಯಾ ಪತಿವ್ರತಾ ರತ್ನಳಾ ಸಹಾಯ ಕೇಳೆಂದರು ವೇಧ 20 ಶಕ್ರಾದಿ ಸುರರುಗಳು ಅನಸೂಯಾದೇವಿಯಲಿ ಕೋರಿಕೆ ಮಾಡಲು ಆಕೆ ದೇವತೆಗಳ ಸಮೇತ ಧೀರ ಪತಿವ್ರತೆಯಾದ ಕೌಶಿಕಾ ಗೃಹಕೆ ಹೋಗಿ ಪರಿಚಯ ಮಾಡಿಕೊಂಡು ಕೊಂಡಾಡಿದಳಾ ಸಾಧ್ವಿಯ 21 ಮಹಾಭಾಗರು ಇಂದ್ರಾದಿಗಳಿಗೂ ಅನಸೂಯಗೂ ವಿಹಿತೋಪಚಾರ ಪೂಜಾದಿಗಳ ಮಾಡಿ ಆ ಸಾಧ್ವಿ ಮಹಾಭಾಗ್ಯ ಆಗಮನ ಎನ್ನುತ್ತ ಕಾರಣವನು ಬಹು ಹಿತದಲಿ ಕೇಳಿದಳು ತನ್ನ ಸ್ಥಿತಿ ಹೇಳಿ 22 ಸೂರ್ಯ ಉದಿಸುವದಕ್ಕೆ ಪತಿ ಬದುಕಿಸಲ್ಪಡುವನು ಎನ್ನುತೆ ಕೌಶಿಕಾ ಸಾಧ್ವಿಯು ಅನುಮೋದನೆ ಕೊಂಡು ಇನ ಉದಿಸಲಿ ಎಂದ ಅಘ್ರ್ಯ ಕೊಟ್ಟಳು ಮುದದಿ 23 ಸೂರ್ಯ ಮುನಿಶಾಪ ಫಲಿಸಿತು ಬಿದ್ದ ಕೆಳಗೆ ಕೌಶಿಕ ತತ್‍ಕ್ಷಣವೇ ಬದುಕಿ ಎದ್ದ ಪತಿವ್ರತಾ ಶಿರೋಮಣಿ ಅನಸೂಯಾ ದೇವಿ ಪ್ರಭಾವ ಪತಿವ್ರತಾ ಮಹಾತ್ಮೆ ಜ್ವಲಿಸಿತು ಲೋಕದಲ್ಲಿ 24 ಕೌಶಿಕನ್ನ ಬದುಕಿಸಿದ್ದು ಮಾತ್ರವಲ್ಲದೇ ಸರ್ವ ಕುಷ್ಠಾದಿ ರೋಗ ಪರಿಹರಿಸಿ ಯುವವಾಗಿ ಮಾಡಿ ಅಯುಷ್ಯ ಬಹುನೂರು ವರ್ಷಗಳ ಅನುಗ್ರಹಿಸಿ ತುಷ್ಠಿ ಸುಖಜೀವನ ಒದಗಿಸಿದಳ್ ಅನಸೂಯಾ 25 ಅನಸೂಯೆಯ ಪಾತಿವ್ರತ್ಯ ಮಹಾತ್ಮೆಯ ಶ್ಲಾಘಿಸಿ ಏನು ವರ ಕೇಳಿದರೂ ಕೊಡುವವೆಂದು ಸುರಪ ಆನಿಮಿಷರು ಹೇಳಲು ಪತಿವ್ರತಾ ಶಿರೋಮಣಿ ವಿಧಿ ಶಿವ ತನ್ನಲ್ಲವತರಿಸಲೆಂದಳು 26 ತಥಾಸ್ತು ಎಂದ ದೇವತೆಗಳ ವರ ಸತ್ಯಮಾಡೆ ಸುತಪಸ್ವಿ ಅತ್ರಿಗೆ ಹಂಸ ವೃಷಾರೂಡರು ಪ್ರತ್ಯಕ್ಷದಿ ಹೇಳಿದಂತೆಯೂ ಅನಸೂಯ ಅತ್ರಿಗೆ ಪುತ್ರರೆಂದುದಿಸಿದರು ಸೋಮಸ್ತ ಬ್ರಹ್ಮೇಶ ವಿಷ್ಣು 27 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಾಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯನಮೋ ಪ್ರಿಯತಾಂ ಶರಣು 28 ಎರಡನೇ ಅಧ್ಯಾಯ ಶ್ರೀ ದತ್ತಾತ್ರಯ ಪ್ರಾದುರ್ಭಾವ ಸಾರ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಭೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಬ್ರಹ್ಮಾವಿಷ್ಟನು ಸೋಮ ಔಷಧಿಗಳ ರಾಜನಾದ ಉನ್ಮಾದ ಚರ್ಯದಿ ಕೋಪ ಪ್ರಕಟಿಸಿ ಮೆರೆವರು ತಮ್ಮ ಶಿಷ್ಯರೊಡಗೂಡಿ ಶಿವಾವತಾರ ದೂರ್ವಾಸ ಸುಮ್ಮನಸ ಸಜ್ಜನ ಹಿತರು ದುಷ್ಟನಿಗ್ರಹರು 1 ತನ್ನನ್ನ ತಾನೇ ಸುತನಾಗಿ ದತ್ತಮಾಡಿಕೊಂಡನು ವಿಷ್ಣು ಅತ್ರಿ ದಂಪತಿಗೆ ಆದ ಕಾರಣ ಪ್ರಖ್ಯಾತೆ ಉನ್ನಾಮ ದತ್ತಾತ್ರಯ ಕ್ಷೋಣಿ ಯೋಗ್ಯಾಧಿಕಾರಿಗಳಿಂ ಘನಭಕ್ತಿಯಿಂ ಶುಚಿಯಿಂ ಜಪ್ಯ ಸ್ಮರಣೀಯಿಂ ಶ್ರೋತವ್ಯ ಜಯತು 2 ಕಲ್ಯಾಣತಮ ಪೂರ್ಣ ಅಮಲ ಗುಣಗಣ ಸಿಂಧು ಮಾಲೋಲ ಶ್ರೀವಕ್ಷ ಶ್ರೀಶನೇ ಪ್ರಾದುರ್ಭವಿಸಿದನು ಚೆಲುವ ಅನುಪಮ ಸೌಂದರ್ಯಸಾರ ಸರ್ವೋತ್ತಮ ಲೀಲಾನಂದಮಯ ಚಿನ್ಮಾತ್ರಗಾತ್ರ ಭಕ್ತೇಷ್ಟದಾತ 3 ಕಮಲಾಸನಾವಿಷ್ಟ ಸೋಮ ರುದ್ರಾವತಾರ ದೂರ್ವಾಸ ತಮ್ಮ ತಮ್ಮ ಉದ್ಯೋಗಸಾಧನಕೆ ಬೇರೆ ಬೇರೆ ಹೋಗೆ ಸುಮನೋಹರ ರೂಪ ಶ್ರೀಮನೋರಮ ದತ್ತಾತ್ರಯ ಸುಮಹಾ ಯೋಗಿಯಾದ ನಿಸ್ಸಂಗ ಯೋಗೇಶ್ವರೇಶ್ವರ 4 ಅತ್ರೇಯರು ಮೂವರು ಹೀಗೆ ಬೇರೆ ಬೇರೆಯಾಗಿಯೇ ತಮ್ಮ ತಮ್ಮ ರೂಪದಲ್ಲೇ ಇದ್ದರು ಒಂದಾಗಿ ಅಲ್ಲ ಸೋಮ ಶಿವ ದತ್ತರಿಗೆ ಬೇರೆ ಬೇರೆ ಮಂತ್ರವುಂಟು ಸೋಮ ಪಂಚ ಶಿವ ಪಂಚ ದತ್ತ ನವಅಕ್ಷರವು 5 ಪ್ರೋದ್ಯ ದಿವಾಕರ ಪೋಲ್ವ ವರ್ಣವುಳ್ಳ ಶುಭಗಾತ್ರ ಆದಿತ್ಯ ಸಹಸ್ರಾಮಿತ ಮಹೋತ್ಕøಷ್ಟ ತೇಜಃಪುಂಜ ವ್ಯಾಪ್ತ ಸರ್ವತ್ರ ಜ್ಞಾನಾಭಯಕರನು ಬ್ರಹ್ಮಾದಿ ತ್ರಿದಿವ ಸುಬೋಧಕನು ಕಪಿಲನು ದತ್ತಾತ್ರಯ 6 ಇಂಥ ಮಹಾಮಹಿಮನು ಕಪಿಲ ದತ್ತಾತ್ರಯನು ಅಧಿಕಾರಿಗಳಿಗೆ ಅಪರೋಕ್ಷಜ್ಞಾನ ಮೋಕ್ಷದಾತ ಶ್ರೋತೃ, ಮಂತ್ರ, ಧ್ಯಾತೃಗಳಿಗೆ ಕಪಿಲ ದತ್ತಾತ್ರಯ ಭಕ್ತಿ ಮೆಚ್ಚಿ ಸದಾ ಸಂರಕ್ಷಿಸಿ ಇಷ್ಟಾರ್ಥ ಕೊಡುವ 7 ಪದ್ಮ ಭವಾದ್ಯಮರರಿಂ ಧ್ಯಾತ ದತ್ತಾತ್ರಯ ಹರಿ ಮೇದಿನಿ ನರರಂತೆ ಅವತಾರ ಲೀಲೆ ಚರಿಸಿ ಅದ್ಭುತ ಯೋಗಾನುಷ್ಠಾನದಿ ಇರುತಿರೆ ಜನರು ಈತನ ಸೌಂದರ್ಯ ಯೋಗಸಾಮಥ್ರ್ಯ ಹೊಗಳಿದರು 8 ಸಹಸ್ರಾರು ಋಷಿಪುತ್ರ ಬ್ರಹ್ಮಚಾರಿಗಳು ಬಂದು ಅಹರ್ನಿಶಿ ಯೋಗೇಶ್ವರೇಶ್ವರ ದತ್ತನಾಶ್ರಮದಿ ಬಹಳುತ್ಸಾಹದಲಿ ಸುತ್ತು ಮುತ್ತು ಗುಂಪುಗೂಡಿ ಮಹಾಯೋಗಾಭ್ಯಾಸಕ್ಕೆ ಚ್ಯುತಿಯ ಕಲ್ಪಿಸಿದರು 9 ಯೋಗ್ಯರು ಸಜ್ಜನರು ಈ ಭಕ್ತ ಋಷಿಕುವರರು ಯೋಗ್ಯಸಾಧನೆ ಅವರವರ ಆಶ್ರಮದಲ್ಲಿಯೇ - ಗೈಯಲಿ ಬೇಕೆಂದು ಅವರುಗಳು ಹೋಗೋ ಉಪಾಯ ನಿಶ್ಚೈಸಿ ಮುಳುಗಿದ ದತ್ತನು ಸರೋವರದೊಳು 10 ಸುರಮಾನದಿ ಸಾವಿರವರ್ಷ ಭಗವಾನ್ ದತ್ತನು ಸರೋವರದೊಳಿದ್ದನು ಹೊರಜನಕ್ಕೆ ಕಾಣದೆ ಆ ಋಷಿಪುತ್ರರು ತೀರದಲಿ ಇಕೋ ಈಗ ನಾಳೆ ಬರುವನು ಮೇಲೆ ಎಂದು ಕಾಯುತ್ತಿದ್ದರು ದೃಢದಿ 11 ಜಲಧಿ ಉಕ್ಕಿ ಹರಿದು ಕ್ಷೋಣಿಯ ಮುಳುಗಿಸದೆ ಜಲಮಧ್ಯ ತಾನಿದ್ದು ಕಾಯುವ ವಡವಾ ಮುಖಾಗ್ನಿ ಜಲಮಧ್ಯದಿ ಈಗ ಹೊಕ್ಕಿರುವ ದತ್ತಾತ್ರಯನು ಮುಳುಗಿರುವುದು ಆಶ್ಚರ್ಯವಲ್ಲ ಈರ್ವರೂ ಏಕ 12 ಬಲುದೀರ್ಘ ದೇವವರ್ಷಗಳು ಸಾಸಿರವಾದರೇನು ಶೀಲತಮ ವರವಾಯುವು ವರುಣನು ಬುಧಾದಿ ಜಲಾಭಿಮಾನಿಗಳು ಕಿಂಕರರಾಗಿ ಇರುತಿಹರು ಜಲಶಾಯಿ ನಾರಾಯಣ ಅವತಾರ ದತ್ತನಿಗೆ 13 ಒಂದು ದಿನ ಕೆರೆನೀರು ಚಲಿಸಲು ಸಂತೋಷದಿ ಬಂದರೂ ಬಂದರೂ ಎಂದು ಕೂಗೆ ಋಷಿಕುವರರು ಇಂದಿರಾಪತಿ ದತ್ತ ಮೇಲೆದ್ದು ಬಂದ ಬದಿಯಲ್ಲಿ ಇಂದಿರಾಂಗಿ ನಾರೀಮಣಿ ಓರ್ವಳ ಆಲಿಂಗಿಸುತ 14 ಯಾರನ್ನೂ ಲೆಕ್ಕಿಸದೆ ಕಾಮವಿಲಾಸ ಕೇಳಿಯ ಆ ಸ್ತ್ರೀಯೊಡನೆ ಮಾಡುತ್ತಿದ್ದುದು ಕಂಡು ಯುವಕರು ಯೋಗಿ ಹೀಗಾದರೆ ಎನ್ನುತ ತ್ವರಿತ ತೆರಳಿದರು ಜುಗುಪ್ಸೆಯಲ್ಲಿ ತ್ಯಜಿಸಿ 15 ಆ ಪುಣ್ಯವಂತ ಋಷಿಪುತ್ರರು ತಿಳಕೊಳ್ಳಲಿಲ್ಲ ಆ ಸ್ಛುರದ್ರೂಪಿಣಿ ನಾರಿ ಸಾಕ್ಷಾತ್ ಲಕ್ಷ್ಮೀದೇವಿಯೆಂದು ವಿಪುಲ ಮನ ಹರುಷ ತೋರಿಸಿ ದತ್ತಾತ್ರಯನು ಕೈಪಿಡಿದು ಲಕ್ಷ್ಮಿಯ ಕರೆದುಹೋದ ಆಶ್ರಮಕೆ 16 ಯಾವ ತನ್ನಾಶ್ರಮದಿ ಸ್ವಾಧ್ಯಾಯ ಪ್ರವಚನಗಳ್ ದಿವ್ಯ ಯೋಗ ಅಭ್ಯಾಸ ಶಿಷ್ಯರ್ಗೆ ಶೀಕ್ಷಾದಿಗಳ್ ಯಾವಾಗಲೂ ಹಿಂದೆ ನಡೆಸುತ್ತಿದ್ದನೋ ಅಲ್ಲಿ ಈಗ ದೇವಿಯೊಡನೆ ಲೀಲಾವಿಲಾಸಗಳ ತೋರಿಸಿದ 17 ಮಂದ ಧೀಗಳು ಈ ವಿಡಂಬನೆ ಕಂಡು ಮೋದದಲಿ ಶ್ರೀದತ್ತ ಈ ರೀತಿ ಆದನಲ್ಲಾ ಎಂದು ಮಾತನಾಡೆ ಸುಧೀಗಳು ಬೃಹಸ್ಪತ್ಯಾದಿಗಳು ದತ್ತಾತ್ರಯನು ಮೋದಚಿನ್ಮಯ ನಿರ್ದೋಷ ಹರಿ ಶ್ರೀಶನೆ ಎಂದರÀು 18 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯ ನಮೋ ಪ್ರಿಯತಾಂ ಶರಣು 19 -ಇತಿ ಎರಡನೇ ಅದ್ಯಾಯ ಸಂಪೂರ್ಣಂ - ಮೂರನೇ ಅದ್ಯಾಯ ಸಂಪತ್‍ಲಕ್ಷ್ಮೀ ವೃತ್ತಾಂತ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೊಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಸುರಪ ಜಂಭಾಸುರನಿಂದ ಅಪಜಯವ ಕೊಂಡು ಸುರಗುರು ಪ್ರೇರಣೆಯಿಂ ದತ್ತಾತ್ರಯನಲಿ ಹೋಗಿ ಶರಣು ಹೊಕ್ಕು ಸೇವಗೈಯಲು ಆಗ ಅವನನ
--------------
ಪ್ರಸನ್ನ ಶ್ರೀನಿವಾಸದಾಸರು
ಮೋಸಹೋದೆವೈ ಸಖಿ _ ವಾಸುದೇವನ ತಿಳಿಯದೆ ಪ ಮೋಸಹೋದೆವೈ ಸಖಿ _ ಮೂಸಿತು ಮನವಮ್ಮ ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ. ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ ಬೆಟ್ಟವನೆತ್ತುತ ವೃಷ್ಟಿಯ ತಡೆದನೆ ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ ಇಷ್ಟಾದರುನಾವು ತಿಳಿಯದೇ ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ ಪಟ್ಟೆ ಪೀತಾಂಚರ ಕದ್ದವನೆಂದೇವೇ ಇಟ್ಟನು ಕಣ್ಣನು ನಮ್ಮಲೆಂದೇವೇ ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ- ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ- ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ- ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ 1 ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ ಮೆದ್ದನು ಎಂದೇವೇ ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ- ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ ಸ್ವರತ ರಮಾಧವ ಕೃಷ್ಣನು ಎನ್ನದೇ 2 ತಿಂಗಳ ಬೆಳಕಲಿ ರಂಗನು ಬಂದಾನೇ ಅಂಗಜತಾಪವ ಹರಿಸುವೆನೆಂದಾನೆ ಕಂಗಳಿಗ್ಹಬ್ಬವ ನೀಡುತ ಪೊರೆದಾನೇ ಹಿಂಗದೆ ತನುಮನ ಎಲ್ಲವ ಸೆಳೆದಾನೇ ಮಂಗಳಕಾಯನು ನೀಡಲು ನಮಗಾ ಲಿಂಗನ ಸುಖವನು ಬಹುಮುಡಿ ಆದಾನೇ ಅಂಗವ ಮರೆಸುತ ಮಹದಾನಂದ ತ- ರಂಗದಿ ಒಯ್ಯುತ ಚೆಲುವನು ಕೂಡಿದನೇ ಅಂಗನೆ ಬುದ್ಧಿಲಿ ಇವನನು ತಿಳಿಯದೇ ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು ಭಾಗವತgಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ 3
--------------
ಕೃಷ್ಣವಿಠಲದಾಸರು
ಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರವಾಸಿ ಗುರುಪಾದ ಯಚ್ಚರಿಕೆ ಯಚ್ಚರಿಕೆ ಪ ಶ್ರೀ ತ್ರಿವಿಕ್ರಮ ಲೋಕನಾಥನ ತಂದೆ ಶ್ರೀಪಾದಯಚ್ಚರಿಕೆ ಯಚ್ಚರಿಕೆ ಅ.ಪ. ಗುರುಹಯವದನ ಮನಮುಟ್ಟಿ ಸ್ಮರಿಸಿ ಪೂಜಿಪಶ್ರೀ ಗುರುಪಾದ ಯಚ್ಚರಿಕೆ ಯಚ್ಚರಿಕೆ 1 ಶತಷಣ್ಣವತಿ ಸಪ್ತ ಬ್ರಹ್ಮ ಕಲ್ಪಗಳಲ್ಲಿ ಶ್ರೀಹರಿಯೆ ಮಹ ಮಾರೆತವ ಚರಿಸಿದ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 2 ತಪಚರಿನಿಯರ ಡೃವತ್ತೂ ಷಣ್ಣವತಿ ಲಿಷ್ಟನೇ ಕಲ್ಪದ-ಲಿಲಾತವ್ಯ ವಾಯುಸಾಧನ ಮಾಡುವಾನಂದ ಜ್ಞಾನ ಯೋಗ ಸಿದ್ಧಿಸಿ ಕೊಡುವ ಉದಾರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 3 ಪ್ರಧಾನ ವಾಯು ಪದ ಸ್ವೀಕರಿಪ ಹಂಸವಾಹನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ4 ಹಿಂದೆ ವಿರಜಸ್ನಾನದಿ ಅಜ್ಞಾನಾತ್ಮಕ ಲಿಂಗದೋಷನಿಶ್ಶೇಷ ಹೊಂದಿದ ಗುರುವಿರಾಜರ ವಾದದ್ವಯ ಯಚ್ಚರಿಕೆ ಯಚ್ಚರಿಕೆ 5 ನಿರ್ಜೀವ ನಿಷ್ಕ್ರಿಯಾ ದಗ್ಧಪಟದಪ್ಪಂತಿರುವ ದೇಹ ಲಿಂಗವ ನಿಮಿತ್ತ ಮಾತ್ರಕೆ ಹರಿಯಿಭಯಿಂ ಧರಿಸಿರುವ ಲಾತವ್ಯ ಗುರುಪಾದ ಯಚ್ಚರಿಕೆ ಯಚ್ಚರಿಕೆ6 ಮುಕ್ತ ಅಮುಕ್ತಿ ಭೇದ ತೋರ್ಪದಕೆ ಶಿರಿಯಿಂದನದಿ ಶಾಲ್ಮಲ ವಾಸಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 7 ದ್ವಸ್ತ ದುರಾಗಮಿ ಶ್ರೀರಾಜಗುರು ಪಾದಕೆಚ್ಚರಿಕೆ 8 ಅಜ್ಞಾನ ಅಹಂಕಾರ ಭಯ ಮೋಹ ವಿಸ್ಮøತಿ ದುಃಖಾದಿಬಂಧನ ಕಳೆವ ಪ್ರಭುವಾದಕೆಚ್ಚರಿಕೆ 9 ಪತಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 10 ತ್ರಿವಿಧ ಜೀವರ ಚತುರ್ವಿಧಶರೀರದಿಯಿದ್ದವರ ಸಾಧನವಾ ಮಾಡಿಸಿ ಜೀವರ ಸುಖದುಃಖಗಳಿಂತಾ ಬದ್ಧರಾಗದೆ ಪೂರ್ಣ ನಿರ್ಲಿಪ್ತರಾಗಿರುವಶ್ರೀಪಾದ ಯಚ್ಚರಿಕೆ ಯಚ್ಚರಿಕೆ11 ತ್ರಿವಾರ ವಿರಜ ಸ್ನಾನವ ಮಾಡ್ವ ಸೌಭಾಗ್ಯ ಪ್ರಾರಬ್ಧಪೊಂದಿರುವ ಗುರು ವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 12 ಸತ್ವ ಜೀವರ ಮೋಕ್ಷ ಪ್ರಾಪ್ತಿಗೆ ವಿರಜ ನದಿಯಲಿಸ್ನಾನ ಮಾಡಿಸಿ ಜೀವಸತ್ವರ ಮೋಕ್ಷಕ್ಕಿಡುವ ನಿವ್ರ್ಯಾಜ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 13 ಸುಜೀವರ ಅನಾದಿ ಲಿಂಗ ಅಜ್ಞಾನ ಸ್ವರೂಪ ದೇಹ-ಭಂಗಿಸುವ ಶ್ರೀರಮಾತ್ಮಕ ವಿರಜ ನದಿಯಲಿ ಸ್ನಾನ-ಮಾಡಿ ಸ್ವಲಿಂಗ ವಿಶಿಷ್ಟವಾದ ಅಜ್ಞಾನದಿಂ-ವಿರಹಿತರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 14 ಆನಂದವ ವೃಷಭಾವಿ ಆನಂದ ತೀರ್ಥ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 15 ತ್ರಿವಿಧ ಜೀವರಲಿಯಿದ್ದು ತ್ರಿವಿಧಸಾಧನ ಮಾಡಿಸುವ ಭಾವಿ ವಾಯುನಾಮಕ ನತ್ತಾ ಪ್ರದ ಲಾತವ್ಯವಾಯು ವಾದಿರಾಜ ಮಧ್ವ ಮುನಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 16 ಆಯಾಯರ ಜೀವರ ಚಲನವಲನಾದಿ ವ್ಯಾಪಾರ ಮಾಡಿಸುವ ಭಾವಿ ಪ್ರಾಣನಾಮಕ ಭೀಷ್ಟಾಪ್ರದ ವಾದಿರಾಜಗುರುಪಾದಯಚ್ಚರಿಕೆ ಯಚ್ಚರಿಕೆ 17 ಚತುರ್ವಿದ ಶರೀರಗಳಲಿದ್ದು ಸಂರಕ್ಷಿಸುವ ಭಾವಿ ಧರ್ಮನಾಯಕಧಾರಣಪ್ರದ ಶ್ರೀ ಗುರುರಾಜರಶ್ರೀಪಾದ ಯಚ್ಚರಿಕೆ ಯಚ್ಚರಿಕೆ 18 ಪ್ರಭುತ್ವವಾರ್ತೈಸಿಜೀರರ ಅವರವರ ಸ್ವರೂಪಯೋಗ್ಯಗತಿ ಕೊಡುವ ಭಕ್ತಿ ಮುಕ್ತಿ ಪ್ರದ ಭಾವಿ ಭಾರತೀ ರಮಣ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 19 ದೇವೋತ್ತಮ ಲಾತ ವಾಯುಸ್ವನಾಮಕೆ ಭಗವಂತಗೇ ನಿತ್ಯನ್ವ ಭಕ್ತರ ಪಾಪ ಮನ್ನಿಸುವಂತೆ ಪ್ರಾರ್ಥಿಸಿ ತಾವು ಮನ್ನಿಸಿ ಕ್ಷಮಿಸುವಲ್ಲಿ ಕ್ಷಮಾ ಸಮುದ್ರರಾದ ಶ್ರೀಗುರುಪಾದಯಚ್ಚರಿಕೆ ಯಚ್ಚರಿಕೆ 20 ಪುಣ್ಯ ಪ್ರದಾನ ಮಾಡುವಲ್ಲಿ ಜೀವರಿಗೆ ಪರಮ ದಯಾಳು ಆರ್ತರಿಗೆ ದಯತೋರುವ ಕೃಪಾನಿಧಿ ಸಜ್ಜನರ ದೋಷ ವಿಚಾರದಿ ಮಹಾ ಸಹಿಷ್ಣುಗಳಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 21 ಶಿಖಾಮಣಿ ಸಕಲ ತಾತ್ವಿಕ ದೇವತಾ ರಂಜಕ ಆಹ್ಲಾದಕರ ದಾನವ ಭಂಜಕ ಸಂಹಾರ ಕರ್ತರಾದ ಕಾರಣ ಭಾವಿ ಪ್ರಭಂಜನ ವರವಾಜ್ಯರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 22 ಸರ್ವದಾ ಅನ್ಯ ಜೀವರು ಕಾಣದಾ ಅಸಾಧಾರಣ ಗುಣ ಕ್ರಿಯಾ ಸ್ವರೂಪರಾದ ವೇದ ಪ್ರತಿಪಾದ್ಯರಾದುದರಿಂದ ಮಹಂತರೆಂದು ಕರೆಸುವ ಭಾವಿ ವಾಯುವಿನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ23 ಅವರವರ ಸಾಧನಗಳ ಪೂರೈಸಿ ಕೊನೆಗವರ ನಿಜಗತಿ ಪ್ರವರಾದ ಸರ್ವ ಜೀವರಂತರ್ಯಾಮಿ ಸಕಲ ಗುಣ ಸದ್ಧಾಮ ಭಾವಿ ಮರುತ ಗುರುವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 24 ಬರುವ ಜಗತ್ತಿನ ಸರ್ವ ಜೀವರಿಗೆಲ್ಲ ಜೀವನ ಪ್ರಾಣ- ವಾಗಿರುವ ಜೀವೋತ್ತಮ ಶ್ರೀ ಭಾವಿ ಬ್ರಹ್ಮ ಮರುತ ವಾದಿರಾಜರ ಶ್ರೀಪಾದದ್ವಯ ಯಚ್ಚರಿಕೆ ಯಚ್ಚರಿಕೆ 25 ಸಕಲ ಜೀವರ ಸಂಜೀವರಾದ ಯಲ್ಲ ಜೀವರ ಜೀವ ಯಲ್ಲಪ್ರಾಣಿಗಳ ಪ್ರಾಣರಾಗಿ ಪ್ರಾಣೆಂದು ಕರೆಸುವ ಭಾವಿ ಮುಖ್ಯ ಪ್ರಾಣ ವಾದಿರಾಜರ ಗುರುಪಾದಕೆಚ್ಚರಿಕೆ 26 ಸದಾಸರ್ವತ್ರ ಭಗವದ್ರಷ್ಟøಗಳಾದ ಬ್ರಹ್ಮದೇವರ ಭೃತ್ಯಣ ಜೀವ ಪರ್ಯಂತ ವ್ಯಾಪ್ತರಾದ ಆಯಾ ಸ್ಥಳದಿದ್ದು ಆಯಾ ಜೀವರ ತಕ್ಕ ವ್ಯಾಪಾರ ಮಾಡುವ ಭಾವಿ ಪೂರ್ಣಪ್ರಜ್ಞರೆನಿಸಿರುವ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 27 ಸಾಕ್ಷಾತ್ರ್ಪತಿಬಿಂಬರಾದ ಕಾರಣ ಭಾವಿ ಮುಖ್ಯ ಪ್ರತಿಬಿಂಬ-ರೆಂದೆನಿಸಿಕೊಂಡ ಗುರುವಾದಿರಾಜ ವಿಭುಪಾದಕೆಯಚ್ಚರಿಕೆ ಯಚ್ಚರಿಕೆ 28 ನಿತ್ಯ ಸಾಯುಜ್ಯ ಸಹ ಭೋಜನದ ಭೋಗ ಹೊಂದುವ ಭಾವಿ ಮರುತ ಶ್ರೀಲಾತವ್ಯ ವಾಯು ಗುರು ಮಧ್ವ ಮುನಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 29 ಸದನ ಪೂರ್ಣ ಚಂದ್ರವದನರು ಮೋಕ್ಷ ಸಾಮ್ರಾಜ್ಯ ನಿರ್ದುಷ್ಟ ಆನಂದ ಸುಖಸ್ವರೂಪರು ಪರಮ ಪುರುಷಾರ್ಥ ಪಾತ್ರಗಳು ಪುಣ್ಯ ಸ್ವರೂಪ ಪಂಚ ರೂಪಾತ್ಮಕ ಹರಿಯೆ ಪಂಚ ವೃಂದಾವನ ಸ್ವರೂಪದಿಯಿರುವ ರಂಜಪುಣ್ಯ ವೃಂದಾವನದಿ ವಿರಾಜಿಸಿ ಪಂಚ ಪುಣ್ಯ ಧಾರೆಯೆರೆವ ಪಂಚಪ್ರಾಣರಾದ ವಾದಿಗಳ ಪಲ್ಮುರಿವ ವಾದಿರಾಜಮಧ್ವ ಮುನಿಯ ಶ್ರೀ ಭಾವೀ ಭಾರತೀದೇವಿ ತನ್ನ ಮೃದು ಕೋಮಲ ತೊಡೆಯ ಮೇಲೆ ಪತಿಯ ಶ್ರೀಪಾದಪದ್ಮದ್ವಯವಿಟ್ಟು ವತ್ತೂವ ಅಜ್ಞಾನ ತಿಮಿರಕೆ ಮಾರ್ತಾಂಡ ವಾದ ಜ್ಞಾನಾನಂದ ದಾಯಕ ಶ್ರೀಗುರುಪಾದ ಯಚ್ಚರಿಕೆ ಯಚ್ಚರಿಕೆ30 ಜಗಜ್ಜೀವನಗಳಿಗೆ ಮುಖ್ಯ ಕಾರಣ ಪ್ರಾಣ ಆ ಪ್ರಾಣವಿಲ್ಲದಿರೆ ಸ್ವತಃ ಚಲಿಸಲು ಅಸಮರ್ಥ ಸರ್ವ ಜಗತ್ತಿಗೆ ಪ್ರಾಣ ವಿಜ್ಞಾನ ಪ್ರಾಣಾಗ್ನಿ ಶಬ್ದವಾಜ್ಯ ಈ ಭಾವಿಮುಖ್ಯ ಪ್ರಾಣ ಜಗಜ್ಜೀವನಗಳಿಗೆ ತಾನೇ ಮುಖ್ಯ ಪ್ರಾಣರೂಪ ಹೀಗೆಂದು ಬಳಿತ್ಥಾ ಸೂಕ್ತ ಅಗ್ನಿ ಸೂಕ್ತದಲಿ ಉಕ್ತ ಈ ಸೂಕ್ತಿಗಳಿಂದ ಪ್ರತಿಪಾದ್ಯರಾದ ಜಗನ್ನೇತ್ರಜಗಜ್ಜೀವನರಾದ ಪಂಚಪ್ರಾಣ-ರೂಪಾತ್ಮಕ ಶ್ವಾಸನಿಯಾಮಕ ಸೋದೆಪುರವಾಸಿ ಭೂತರಾಜರ ಹೃನ್ಮಂದಿರ ವೇದ್ಯ ವೇದ್ಯನುತ ಅಹಿಪ ಖಗಪ ಉಮೇಶಾದಿ ಸುರರಿಗೆ ಚಿಂತಿಸಲು ಅಳವಲ್ಲದ ಅಗಮ್ಯ ಮಹಿಮ ಶ್ರೀ ಪ್ರಭು-ವಾದಿರಾಜರ ನಿರ್ದೋಷ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 31 ಜಿತಣಮ ಸರ್ವಜ್ಞ ಅಶೇಕ್ಷ ಸಂಪದ್ವಿಶಿಷ್ಟ ಸದ್ಗುಣ ಭರಿತ ಪೂರ್ಣ ತೃಪ್ತ ನಿಶ್ಚಲ ಭಕ್ತ ದೃಢವ್ಯೆರಾಗ್ಯಶಾಲಿಚಿರಂಜೀವಿ ಶ್ರೀ ಗುರುವಾದಿರಾಜರ ಶ್ರೀಪಾದ ಪದ್ಮ ನಖರೇಣುಗಳಿಗೆ ಯಚ್ಚರಿಕೆ ಯಚ್ಚರಿಕೆ 32 ಪರಿ ಪರಿ ಕ್ರೀಡೆ-ರಮಿಸಿ ಆ ಆನಂದ ಶ್ರೀ ಹರಿಗೆ ಅರ್ಪಿಪ ಗುರುವಾದಿರಾಜಶ್ರೀಪಾದಂಗಳ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 33 ನಿತ್ಯ ನಿತ್ಯ ಶ್ರೀವರ ಮಾಲೇಶೆಗೆ ಅರ್ಪಿಪ ಭಾವಿಲಾಳೂರ ಶ್ರೀ ಗುರುರಾಜರ ಪಾದಕೆ ಯಚ್ಚರಿಕೆ ಯಚ್ಚರಿಕೆ34 ತನ್ನ ಶ್ರೀಪಾದ ರಜ ಧೆಣಿಯಲಿ ಧರಿಸಿ ಜೀವಿವರ ಹಯವದನ ಪಾದಕರ್ಪಿಸುವೆನೆಂದು ಪಣತೊಟ್ಟು ಜೀವನ್ಮುಕ್ತರನು ಮಾಡಿ ಪರಿಪಾಲಿಪೆನೆಂದು ಧೀರ ವೃಂದಾವನದಿ ಮೆರೆವ ಶ್ರೀಗುರು-ವಾದಿರಾಜರ ಶ್ರೀಪಾದಕೆ ಯಚ್ಚರಿಕೆ ಯಚ್ಚರಿಕೆ 35 ಶ್ರೀ ತ್ರಿವಿಕ್ರಮನ ರಥೋತ್ಸವಕೆ ಬಂದವರಲಿ ಒಂದೊಂದಂಶ ಸುರರ ಪ್ರವೇಶಿಸಿ ಅವರಲ್ಲಿ ತನ್ನೊಂದಂಶದಿಂದ ಸುರರ ಸಾಧನ ಮಾಡಿ ಸುರನರರ ಕೃತ ಕೃತ್ಯರೆನಿಸಿ ಶಿರಿ ಹಯ-ವದನನ ಕಾಣ್ವ ಜ್ಞಾನ ಭಕುತಿ ವೈರಾಗ್ಯ ನಿಷ್ಠಿಯನಿತ್ತು ಬ್ರಹ್ಮ ನಿಷ್ಯ್ಠೆ ಕರೆನು ಮಾಳ್ವ ಶ್ರೀ ಗುರು ಶ್ರೀಪಾದಕೆಯಚ್ಚರಿಕೆ ಯಚ್ಚರಿಕೆ 36 ಶ್ರೀ ಧವಳ ಗಂಗೆಯ ಸ್ನಾನ ಮಾಡುವ ಜ್ಞಾನವೀವ ಶ್ರೀ ಗುರು-ಪಾದಕೆ ಯಚ್ಚರಿಕೆ ಯಚ್ಚರಿಕೆ 37 ವಾಸುದೇವ ಪರಿ ಸ್ತೋತ್ರ ಮಾಡಿರೈ ಜ್ಞಾನಿ-ಗಳಾದವರೆಲ್ಲ ಶ್ರೀ ಗುರುಪಾದದೆಚ್ಚರಿಕೆಯಲಿ ತಂದೆವರದಗೋಪಾಲವಿಠಲ 38
--------------
ಗುರುತಂದೆವರದಗೋಪಾಲವಿಠಲರು
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆ ಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರ ಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ 2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ 3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ 4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ 5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ 6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು7
--------------
ತುಪಾಕಿ ವೆಂಕಟರಮಣಾಚಾರ್ಯ
ಯತಿಗಳ ಸ್ತುತಿ ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ಪ. ಸದ್ಗುರುವೆ ನಿನ್ನ ಪದ್ಮಪಾದಗಳಿಗೆ ಕರ ಮಣಿ ಅ.ಪ. ವರಕಲ್ಪ ಕಲ್ಪದಲಿ ಹರಿಯ ಮೆಚ್ಚಿಸಿ ಸಿರಿವರನಲಿ ಜನಿಸಿ ವಾಯುವೆಂದೆನಿಸಿ ಸುರರೆಲ್ಲ ಮೊರೆಯಿಡೆ ಹರಿಯವತರಿಸಿ ಹರಿಯ ಸೇವೆಗೆ ನೀ ಮಾರುತಿ ಎನಿಸಿ ಶರಧಿ ಲಂಘಿಸಿ ಉಂಗುರ ಸೀತೆಗೆ ಇತ್ತು ದುರುಳನ ಪುರ ಸುರಮುಖನಿಗರ್ಪಿಸಿದೆ 1 ಚಂದ್ರವಂಶದಲಿ ಬಂದ್ಯೊ ಬಲಶಾಲಿ ನಂದಕಂದನ ಲೀಲೆ ಅಂದ ಪಾಡುತಲಿ ಬಂದಿತು ಕಲಹ ಅಲ್ಲಿ ದ್ವಂದ್ವ ಭಾಗದಲಿ ಅಂದು ಕೌರವರಲಿ ನಿಂದ್ಯೊ ದ್ವೇಷದಲಿ ಇಂದುಮುಖಿಗೆ ಸೌಗಂಧಿಕ ಇತ್ತು ಕುರು ನಂದನ ವಂಶವನಂದು ಛೇದಿಸಿದೆ 2 ದುರುಳರೆಲ್ಲರು ಬಂದು ಕಲಿಯುಗದಿ ನಿಂದು ಹರಿಯು ನರನು ಒಂದು ಅರುಹಲಿಂತೆಂದು ಸುರರೆಲ್ಲ ಬಲುನೊಂದು ಕ್ಷೀರಾಬ್ಧಿಗೆ ಬಂದು ಸಿರಿವರ ಪೊರೆಯೆಂದು ಮೊರೆಯಿಡಲಂದು ಹರಿ ನಿನಗರುಹಲು ಧರೆಯಲ್ಲಿಗೆ ಬಂದು ಸುರ ಭೂ ಶ್ರೇಷ್ಠನುದರದಲಿ ಜನಿಸಿದೆ 3 ಪರಮಾಯಿಗಳ ಮತ ತರಿದು ಕೆಡಹುತ್ತ ಹರಿ ಸರ್ವೋತ್ತಮೆನುತ ಧರೆಯೊಳ್ ಸಾರುತ್ತ ತರತಮ್ಯ ಸತ್ಯವೆನುತ ಪಂಚಭೇದೆನುತ ಸಿರಿರಮಣಗೆ ನರಭೃತ್ಯನೆನ್ನುತ್ತ ಪರಿ ಬೋಧಿüಸಿ ದುರುಳರ ಛೇಡಿಸಿ ಸರಸಿಜಾಕ್ಷಗೆ ಬಲು ಸಮ್ಮತನೆನಿಸಿ 4 ವೈಷ್ಣವಾಗ್ರಣೀ ಲೀಲೆ ಪೇಳಲಳವಲ್ಲ ಜಿಷ್ಣುಸಖನ ಲೀಲೆ ನುಡಿಸೆನಗೆ ಸೊಲ್ಲ ಕಷ್ಟಪಡುತಿಹೆನಲ್ಲ ಕರುಣವೇಕಿಲ್ಲ ಶ್ರೇಷ್ಠನೆ ಗೋಪಾಲಕೃಷ್ಣವಿಠಲ ಇಷ್ಟು ತಿಳಿಸುತ ಅಷ್ಟದಳದಲಿ ಶ್ರೇಷ್ಠದಿ ಪೂಜಿಪ ಗುಟ್ಟು ತೋರೆನಗೆ 5
--------------
ಅಂಬಾಬಾಯಿ
ಯತಿಗಳು ಶ್ರೀಜಯತೀರ್ಥರು ಕರುಣಿಸೊ ಜಯರಾಯಾ ಗುರುವರ್ಯ ಚರಣವೆ ಗತಿಯಯ್ಯ ಹೇ ಜಿಯಾ ಪ ರಘುನಾಥನ ಪುತ್ರ ಪವಿತ್ರ ರಾಘವನ ಪ್ರೀತಪ್ರಾತ್ರ ಚರಿತ್ರ ಮಘವನಾ ನೀ ನಘದೂರ ಶ್ರೀ ರಘುರಾಮನ ಕಿಂಕರನ ಅಮೋಘ ಸೇವಕನೊ 1 ಕುಕರ್ವಿಣಿಯ ತೀರಾ ಘೋರಕುವಾದಿಗಳ ಕು ಲಕುಠಾರ ಗಂಭೀರ ಸಕಲಶಾಸ್ತ್ರಸತ್ಸಾರ ಟೀಕಕರ ಕುಕವಿಶೃಗಾಲಕುಲಕಾಲಭಯಂಕರ 2 ಎರಗೋಳಾದ್ರಿಯೊಳು ಗುಹೆಯೊಳು ನಿರುತ ಪ್ರವಚನಗಳು ನಿತ್ಯದೊಳು ಮರುತಮತಾಂಬುಧಿಚಂದಿರ ಸುಂದರ ವರಸುಜ್ಞಾನಮಣಿಕಿರಣವ ತೋರಿದೆ 3 ಗುರು ಮಧ್ವಮುನಿ ತತ್ತ್ವಗ್ರಂಥದ ಕ್ಷೀರಶರಧಿಗೆ ಮಂಥಾ ವುನ್ನಂಥಾ ಮರುತನನುಗ್ರಹ ಪ್ರಗ್ರಹದಿಂದಲಿ ವರಮಥನದಿ ಇತ್ತೆ ಅಮೋಘವಸ್ತುಗಳೆಲ್ಲಾ4 ಉತ್ತಮ ಗ್ರಂಥವನಧೀ ಮಥನದಿ ಉತ್ತಮ ವಸ್ತುಗಳನಿತ್ತೆಯೊ ತತ್ತ್ವಪ್ರಕಾಶಿಕಾ ಮಹಾಲಕುಮಿಯು ಚಂದಿರನೇ ಪ್ರಮೇಯದೀಪಿಕಾ ಸುಧೆಯೇ ನ್ಯಾಯಸುಧಾಗ್ರಂಥ ಶ್ರೀ ಕೌಸ್ತುಭದಂತಿಹ ನ್ಯಾಯದೀಪಿಕಾ 5 ದುರುಳ ಮಾಯಾಖಂಡ ನಾಯುಧವೂ ಸರ್ವಜೀಯನೆ ಐರಾವತದಂತೆ ಋ ಗ್ಭಾಷ್ಯಟೀಕಾ ನ್ಯಾಯವಿವರಣವು ಉಚ್ಛೈಶ್ರವಸ್ಸು 6 ಕರ್ಮನಿರ್ಣಯ ಟೀಕಾ ವಜ್ರಾಯುಧ ಆ ಮಹಾಪಾರಿಜಾತ ವಿಖ್ಯಾತಾ ಶ್ರೀಮದ್ವಿಷ್ಣು ತತ್ತ್ವ ನಿರ್ಣಯ ಟೀಕೆಯು ಕಲ್ಪವು ಉಪನಿಷತ್ ಭಾಷ್ಯ ಟೀಕೆಯು 7 ಈಶಾವಾಸ್ಯ ಭಾಷ್ಯ ಟೀಕಾ ಸಂತಾನವೆಂಬೋ ಮಹಾವೃಕ್ಷಾ ಪ್ರ ಬಿಸಜ ಮಂದಾರ ಪ್ರಮಾಣ ಪದ್ಧÀ್ದತಿ ಹರಿಚಂದನಕೆ ಸಮನಾದ ವಾದಾವಳಿ 8 ಪಾಕಶಾಸನಾಂಶಾ ಕರುಣಿಸು ಶ್ರೀಕರಪದಪಾಂಸ ಯತೀಶಾ ನಾರ ಪತಿಯೆ ಶ್ರೀಕಾಗಿನೀ ತೀರದಿ ಏಕಾಂತದಿ ನಿಂದೆ ಲೋಕ ವಂದಿತ ದೇವಾ 9 ಮಂದಭಾಗ್ಯಜನರಾ ಪರಮಾ ನಂದದಿಂದಲಿ ನೋಡಿ ದಯಮಾಡಿ ತಂದೆಯಂದದಿ ಕಾಯ್ದಾನಂದವೀವೆ ನಿತ್ಯಾ10 ಪರಮಪಾತಕಿ ನಾನು ಗುರುವೆ ತವ ಪಾ ದ ರಕ್ಷಕವಚವ ತೊಡಿಸೊ ಉಳಿಸೋ ನಿರುತ ಶರಣರ ಕಾಯ್ವ ಶ್ರೀ ವೆಂಕಟೇಶನ ಪ್ರೀಯಾಉರಗಾದ್ರಿವಾಸವಿಠಲನ ದಾಸಾ 11
--------------
ಉರಗಾದ್ರಿವಾಸವಿಠಲದಾಸರು
ಯನಗೆ ನಾನೇ ಸರಿ-ನಿನಗೆನೀನೆ ಹರಿ ಎಣಿಗಾಣೆ ನೀರ್ವರ್ಗೆ ವನಜನಯನ ಪ ಧರೆಯನಾಳುವ ಸಿರಿಯರಸ ನೀನು ಈ ಧರೆಯೊಳು ನಿರ್ಭಾಗ್ಯರೆರೆಯ ನಾನು 1 ಪರಮೇಷ್ಠಿಯನ್ನು ಪಡೆದ ಪರಮ ನೀನು ಬಲು ದುರಿತಂಗಳಪ್ಪಿದ ದುರುಳನು ನಾನು 2 ಪುಣ್ಯವಂತರ ಹೃದಯ ಗಣ್ಯ ನೀನು ಕೃತಪುಣ್ಯ ಹೀನರಿಗಗ್ರಗಣ್ಯ ನಾನು 3 ಪತಿತಪಾವನ ನೀನು ಪತಿತ ನಾನು ಸದ್ಗತಿದಾತ ನೀನು ನಿರ್ಗತಿಕನಾನು 4 ವರವ್ಯಾಘ್ರಗಿರಿಯ ವರದ ವಿಠಲನು ನೀನು ನಿಜ ಶರಣರ ಚರಣ ಧೂಳೀಪಟಲನಾನು 5
--------------
ಸರಗೂರು ವೆಂಕಟವರದಾರ್ಯರು