ಒಟ್ಟು 6459 ಕಡೆಗಳಲ್ಲಿ , 126 ದಾಸರು , 3912 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಳವಳಿಪುದೆನ್ನ ಮನ ಕಮಲಾಕ್ಷ ಬಾರದಿರೆ ಪ ನಳಿನಸಂಭÀವ ಲಿಖಿತವೇನಿಹುದೊ ಸಖಿಯೆ ಅ.ಪ. ಪೋದ ವಿಪ್ರನು ಬರದಿರಲು ಏನು ಕಾರಣವೊ ಹಾದಿಯಲಿ ವಿಘ್ನ ತಾನೊದಗಿತೊ ಮಾಧವನಿಗೆನ್ನೊಳು ಮಮತೆ ಬಾರದೆ ಹೊಯ್ತೆ ಮೇದಿನಿಯೊಳೇಕೆ ನಾ ಪುಟ್ಟಿ ಬಂದನೆ ಸಖಿಯೆ 1 ನಿನ್ನ ಹೊರತೆನಗಿನ್ನು ಅನ್ಯಗತಿಯಿಲ್ಲೆಂದು ಭಿನ್ನವಿಸಿಕೊಂಡಿದ್ದೇನಾಯಿತೆ ಕರ್ಮ ಬಲವಂತವಾಗಿರಲು ಬನ್ನಪಡಿಸುತಲೆನ್ನ ಬಳಲಿಪುದು ಸರಿಯೆ 2 ವಸುದೇವ ಸುತನಾಗಿ ಶಿಶುತನದ ಕ್ರೀಡೆಯೊಳ್ ಅಸುರರನು ಸಂಹಾರ ಮಾಡಿದವಗೆ ಶಿಶುಪಾಲನಾಕಾಲದ ವಶಮಾಡಲಸದಳವೆ ಕುಸುಮಾಕ್ಷಿ ಕರಿಗಿರೀಶನೆ ಗತಿಯು ಸಖಿಯೆ 3
--------------
ವರಾವಾಣಿರಾಮರಾಯದಾಸರು
ಕಾಕು ದೇಹದ ಮೇಲೆ ಪ ಲೋಕೇಶ ನಿಮ್ಮಯ ಶ್ರೀಪಾದಕಮಲಕ್ಕೆ ಜೋಕೆ ಮಾಡೆನ್ನೆಂದು ಮರೆಹೊಕ್ಕೆ ಸ್ವಾಮಿ ಅ.ಪ ಹೀನ ಬವಣೆಯ ಕಳೆದು ಜ್ಞಾನಪಾಲಿಸೆಂದು ದೈನ್ಯಬಡುವೆನು ನಿನಗೆ ನಾನಾ ಪರಿಯಲಿಂದ ಏನು ಕಾರಣ ನಿನಗೆ ದಯ ಬಾರದೆನ್ನೊಳು ದೀನಜನರ ಬಂಧು ಧ್ಯಾನಿಸುವ ಪ್ರಾಣ 1 ರಿಣದಿ ಮುಕ್ತನ್ನ ಮಾಡೆಂದ್ವಿಧವಿಧ ಬೇಡುವೆ ದಿನ ದಿನ ಮತ್ತಿಷ್ಟು ಘನವಾಗುತಿಹ್ಯದು ಮನಸಿಜಪಿತ ನಿನಗಿನಿತು ಭಾರನೆ ನಾನು ಕನಿಕರಬಡದಿಹಿ ಅನುಗನೋಳ್ವನಜಾಕ್ಷ 2 ಇಂತು ನಿರ್ದಯನಾಗಿ ಚಿಂತೆಯೆಂದೆಂಬುವ ಚಿಂತೆಚಿತೆಯೊಳು ನೂಕಿ ಎನ್ನ ಭ್ರಾಂತಿಪಡಿಸಬೇಡೋ ಅಂತ:ಕರಣದ ದೇವ ಅಂತ:ಕರುಣಿಸಿ ಎನ್ನ ಅಂತರಂಗದೊಳಿಹ್ಯ ಚಿಂತೆಯಳಿ ಶ್ರೀರಾಮ 3
--------------
ರಾಮದಾಸರು
ಕಾಕು ನೀಮೀನ ಮೇಷಂಗಳನೆಣಿಸದೆ ನೂಕು 1ಸಾಕು ಮಂದನಾಗಬೇಡ ನಿನಗೆಬೇಕಾದ ಸುಖವಿದೆ ನಿನ್ನೊಳು ನೋಡಶೋಕ ಮೋಹಗಳನೀಡಾಡ ನಿನ್ನನೀ ಕಂಡು ನಿಜ ಸುಧೆಯೊಳಗೋಲಾಡ2ನಿನ್ನೊಳು ನಿಜ ಸುಖವುಂಟು ನೀನನ್ಯವನಳಿದು ನೋಡಲು ಕೈಗಂಟು ಭಿನ್ನ ಬುದ್ಧಿಯನೆಲ್ಲದಾಂಟುಸನ್ನುತಾನಂದಾಮೃತವನೊಲಿದೀಂಟು 3ಗುರುವಿನ ಕೃಪೆುಲ್ಲದಿಲ್ಲಾ ಮುಕ್ತಿಕರೆದರೆ ಬರುವರೆ ಕಾಮಿನಿಯಲ್ಲಪರಮ ಧೈರ್ಯವ ಮಾಡುವನಲ್ಲ ನಿನ್ನಮರೆಯದೆ ನೋಡು ನಾನೆಂದಿದನೆಲ್ಲಾ 4ಈ ಪಾಳು ಕರ್ಮದಲೇನು ಈಗನಾ ಪೇಳಿದೆ ಕಂಡುದ ಮಾಡು ಮಾಣುಕೋಪವ ಬಿಡು ಸುಖಿ ನೀನು ಸದ್ಯಗೋಪಾಲಾರ್ಯರ ಕಂಡೆ ಇನ್ನೇನೂ 5
--------------
ಗೋಪಾಲಾರ್ಯರು
ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ ಗುರು ಸಂರಕ್ಷ ಧ್ರುವ ಅಳುಕದೆ ಬಳುಕದೆ ತುಳುಕದೆ ನಿಂದು ತಿಳಕೊ ನಿಜಸುಭಿಕ್ಷೆ ಕೊಳಕ ಹುಳಕ ಮೊಳಕನೆಂದು ಮಾಡದಿರುಪೇಕ್ಷ ನಾಳೆ ನಾಡದಿಂದ್ಯಾಗೆಂದು ಕಲ್ಪಿಸಿಕೊಬ್ಯಾಡಪೇಕ್ಷ 1 ಲಜ್ಜೆ ಅಳಿದು ಗುರು ಶರಣವ ಹೊಕ್ಕು ಸರಕ್ಕನೆ ಕೋ ಸುಭಿಕ್ಷೆ ಹೆಜ್ಜೆಜ್ಜಿಗೆ ಸುರಿಮಳೆಗರೆವುತಲದೆ ಗುರುಕರುಣದಕಟಾಕ್ಷ ಫಜ್ಜಿಗೆ ಬಂದುವರಿತ ಮ್ಯಾಲೆ ಕಂಜನಾಭನೆ ಸುಪಕ್ಷ 2 ಬೇಡಿಸಿಕೊಳ್ಳದೆ ನೀಡುತಲಾನೆ ಭಾಸ್ಕರ ಗುರು ಸಮರ್ಥ ನೀಡಿ ನಿಜನಿಧಾನವ ಕೊಟ್ಟು ಮಾಡುತಲಾನೆ ಹಿತಾರ್ಥ ಬಡವರಾಧಾರೆನ್ನೊಡೆಯನೆ ಜಗತ್ರಯಕ್ಕೊಬ್ಬನೆ ಕರ್ತ ಮೂಢ ಮಹಿಪತಿಗನುದಿನ ಬಿಡದೆ ನೀಡುತಾನೆ ಸಕಲಾರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಡುವ ದುರಿತಗಳನು ಬಿಡಿಸೆಂದುಬೇಡಿಕೊಂಬೆನೊ ದೇವ ನಾ ನಿನ್ನ ಪ ಅಡಿದಾಸನೆಂಬೋ ಎನಗೊಂದು ದೃಢ ಬುದ್ಧಿಯು ಇಲ್ಲದೆಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆಕಡೆ ಹಾಯಿಸೊ ಎನ್ನೊಡೆಯ ನೀನಾದಡೆ 1 ಆಸೆಗಳ ಆಧಿಕ್ಯದಿಂದೀ ಪರಿಯ ಯಮಪಾಶಕ್ಕೆ ಒಳಗಾದೆನೋಮೀಸಲೂಳಿಗವ ಮಾಡದೆಯೆ ಪರಿಪರಿಯಕ್ಲೇಶದಿಂದಲಿ ಗಾಸಿಗೊಂಡೆನಯ್ಯ 2 ಪಾಡುವೆನು ನಿನ್ನ ನಾಮ ಸೀತಾರಾಮಆಡುವೆನು ಮನದಣಿವ ತನಕಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನುಬಾಡದಾದಿಕೇಶವ ಭಕ್ತವತ್ಸಲನೆ3
--------------
ಕನಕದಾಸ
ಕಾಣಬಹುದಕೆ ಕನ್ನಡಿಯಾಕೆ ಭಿನ್ನವಿಲ್ಲದೆ ನೋಡಿ ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿಧ್ರುವ ಕುಂಭಿನಿಯೊಳು ಘನಹೊಳೆಯುತ ತುಂಬಿತುಳುಕುತಲ್ಯಾದೆ ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ ಇಂಬು ತಾನೆ ಆಗ್ಯಾದೆ 1 ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯಾ ಚೆನ್ನಾಗಿ ಒಳ ಹೊರಗಿದು ಭಾಸುತಿ ಹ್ಯ ದೆಲ್ಲಾ ಸುಳವು ಬಲ್ಲಾತ ಯೋಗಿ ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ ಹೊಳೆವುತಿಹ್ಯದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ 2 ಇಲ್ಲೆವೆ ಎರಡು ಹಾದಿಯ ಕಟ್ಟಿಗುಲ್ಲುಮಾಡದೆ ನೋಡಿ ಗೋಲ್ಹಾಟ ಮಂಡಲವನು ದಾಟಿ ಅಲ್ಲಿಯೆ ಮಹಿಪತಿ ನೋಡಿ ಅಲ್ಲಿಯೆ ಮನ ತಾಂ ಮನಿಕಟ್ಟಿ ಫÀುಲ್ಲನಾಭನ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಣಲಿಲ್ಲವೆಂದೆನಬೇಡಿ ಪ ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು ಡಾಣವ ತುಡುಕುವ ನೆರೆನೋಡಿ ಅ.ಪ ಸುಲಭನು ನಿಮಗವನೊಲಿವನು ನಿಮ್ಮೆಡೆ ನಿಲುವನು ನಲಿವನು ಕೈನೀಡೀ ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ ನುಲಿವನು ಚಲಿಸಲು ಬಿಡಬೇಡಿ 1 ಅಳುಕುತ ಬಳುಕತ ಬಳಲುತ ಸುಳಿಯುತೆ ಘಳಿಲನೆ ಪೋಪನೆಚ್ಚರವಿರಲಿ ಎಳನಗೆಯಿಂದ ಪಾಲೆರೆಯಿರಿ ಮನ ದೊಳಚ್ಚಳಿಯದ ಮೋದವು ನೆಲೆಸಿರಲಿ 2 ಮನವೆಂಬುವುದೇ ವನರುಹವಮ್ಮಾ ಕನಸುನೆನಸಿನೊಳಾ ವನಜವನರ್ಪಿಸೆ ನೀನೆಂಬುದನೇ ಮರೆಯುವಿರಮ್ಮಾ [ತನುಮನ ಅವನಡಿ ಸೇರುವುದಮ್ಮಾ] 3 ಪಡಸಾಲೆಯೊಳಿವ ನಿಲ್ಲುವನಲ್ಲಾ ಅಡಿಗೆಯ ಕೋಣೆಯ ಬಿಡುವನಲ್ಲ ಒಡೆಯ ಶ್ರೀಮಾಂಗಿರಿಪತಿಯನು ನೋಡದ ಮಡದಿಯಿಲ್ಲವೆಂಬುದು ಸಟೆಯಲ್ಲ 4 ನೀವಿರುವಾಯೆಡೆ ಪಾಲ್ಗಡಲಮ್ಮಾ ನೀವಡಿಯಿಡುವುದೇ ಕಡೆಗೋಲಮ್ಮಾ ದಧಿ ನವನೀತವು ನೀವಿರೆ ಮಾಂಗಿರಿರಂಗನುಂಟಮ್ಮಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಣೆವಾವಿದನು ಕಾಣೆವಾವಿದನಾವ ಶಾಸ್ತ್ರದಲಿ ವಿದುಗಳ ಪ್ರಮಾಣ ವಚನದಲಿ ಮೂರನೆಯ ಪಥದಾಪಜಾಣಿಲಾತ್ಮನ ಸಮಾಧಿಯಲನುಭವಿಸಿ ಸುಖವಕಾಣದೆ ಬರಿದೆ ಮುಕುತರಾವೆಂಬ ಪರಿಯಾ ಅ.ಪತಾನೆ ಚೇತನವಂತೆ ತನಗೆ ಕರ್ಮಗಳಂತೆತಾನೆ ಸುಖಮಯನಂತೆ ತಾಪವನಂತೆತಾನೆ ಬೋಮವದಂತೆ ಹಾನಿವೃದ್ಧಿಗಳಂತೆತಾನೆ ನಿರ್ಲೇಪಸ್ತುತಿನಿಂದೆ ತನಗಂತೊ 1ಬೋಧೆಯು ತಾನಂತೆ ಸಾಧನವು ಬೇಕಂತೆಭೇದವಿಲ್ಲವದಂತೆ ಭೀತಿ ತನಗಂತೆನಾದ ಬಿಂದುಗಳನರಿದಿಪ್ಪಗತಿಯಂತೆಪಾದಾಭಿಮಾನ ಚಿಂತೆಯು ಪೋಗದಂತೆ 2ಕಾಯ ಕರುಣಾಭಿಮಾನಗಳಿಲ್ಲ ತನಗಂತೆಮಾಯೆ ಬಾಧಿಪುದಂತೆ ಮನಸಿನೊಳಗೆಈಯಹಂಕಾರವಿಲ್ಲದ ಬೊಮ್ಮಪದವಂತೆಹೇಯವಿದುಪಾದೇಯವೆನಿಪ ಭ್ರಮೆಯಂತೆ 3ಈಶ ತಾನಂತೆ ತನ್ನಾಶೆಗಳು ಬಿಡವಂತೆಕೋಶ ಸಾಕ್ಷಿಕನಂತೆ ಕೋಪ ತನಗಂತೆಪಾಶವಿಲ್ಲವದಂತೆ ಪಾಡುಪಂಥಗಳಂತೆಈ ಸಕಲ ತಾನಂತೆ ಇನ್ನು ವಿಧಿಯಂತೆ 4ಚೇತನವೆ ತಾನಂತೆ ಚಿತ್ತನಿಲ್ಲದುದಂತೆಪಾತಕಗಳಿಲ್ಲವಂತೆ ಪರಪೀಡೆಯಂತೆಜಾತಿಸೂತಕವೆಂಬ ಜಂಜಡಗಳಿಲ್ಲವಂತೆಮಾತಿನ ರಿಪು ಮತ್ಸರಗಳು ಬಿಡವಂತೆ 5ವಿಶ್ವಾತ್ಮತಾನೆಂಬ ವಿಶ್ವಾಸವುಂಟಂತೆವಿಶ್ವತ್ರೈಜಸರ ನಿಜವರಿಯನಂತೆನಶ್ವರದ ಭೋಗಂಗಳೆಂಬ ನಂಬಿಗೆಯಂತೆವಿಶ್ವಾದಿಗಳ ರೀತಿಯಲ್ಲಿ ಪಗೆಯಂತೆ 6ಅಂಡಪಿಂಡಗಳೈಕ್ಯವೆಂಬ ಬುದ್ಧಿಗಳಂತೆಚಂಡಾಲನಿವನೀತ ಮೇಲೆಂಬುದಂತೆಪಂಡಿತನು ಪ್ರವುಢ ತಾನೆಂಬ ಭಾಷೆಗಳಂತೆಕುಂಡಲಿಯ ಹೆಳವ ಕೇಳ್ದಡೆ ಕುದಿವನಂತೆ7ಚಿನ್ಮಯಾತ್ಮಕನು ತಾನೆಂಬ ಚಿಂತೆಗಳಂತೆತನ್ನವರು ತಾನೆಂಬ ಭ್ರಮೆಪೊಗದಂತೆಸನ್ಮುದ್ರೆಯಂತೆ ಸತ್ಯಾಸತ್ಯವೆರಡಂತೆತನ್ಮಯತೆಯಂತೆ ಲಕ್ಷಣೆಯರಿಯನಂತೆ 8ಗುರುಭಕುತಿಯಂತೆ ವರಕರುಣವಿಲ್ಲವದಂತೆಗುರುಶರಣನಂತವರನುಗೇಳನಂತೆಪರಮಪದ ತಾನಂತೆ ಪಿರಿದು ಸಂಶಯವಂತೆವರ ಮುಕ್ತಿಯಂತೆ ವಾಸನೆಯು ಬಿಡದಂತೆ 9ಈ ಪರಿಯ ಸಂಭಾವನೆಗಳ ಪರಿಹರಿಸಿ ಶ್ರೀಗೋಪಾಲಾರ್ಯ ಜನರಿಗೆ ದಯದಲಿತಾಪಂಗಳನು ಸವರಿ ದಾಟಿಸಯ್ಯಾ ಚಿತ್ಪ್ರತಾಪದಿಂ ನಿಜಪಾದ ಬೋಧೆಯನು ಕೊಟ್ಟು10
--------------
ಗೋಪಾಲಾರ್ಯರು
ಕಾಂತೆ ದ್ರೌಪತಾದೇವಿಗೆಂತು ಮರುಳಾದಿರಿಭ್ರಾಂತಿ ಹಿಡಿತೇನೊ ಏ ಹೀನ ಎಂಥ ನ್ಯಾಯವಯ್ಯಈ ಮಾತಿಗಿನ್ನೆಂತು ನಕುಲರಾಯ ಪ. ಹೆಣ್ಣು ಮಕ್ಕಳು ಹೊಳೆವೋದುತಪ್ತ ಸುಣ್ಣದಂತೆ ತಿಳಿವೋದುಸಣ್ಣವರೆನೀವು ಅಣ್ಣನ ಮಡದಿಗೆ ಕಣ್ಣು ಹಾಕುವರೇನೊ ಏ ಹೀನಾ 1 ಜಾತಿ ಮಾಣಿಕ ಮಾಲೆ ಕೊಡಲು ತಂದು ಕೋತಿ ರಾಜನ ಕೈಲಿಚಾತುರ್ಯದ್ವಸ್ತವು ನೀತಿಲೆ ಹಿಡಕೊಂಡುಆತುರ ಮಾಡಿದಂತೆ ನಿಮ್ಮಂತೆ2 ನಕುಲರಾಯನೆ ಕೇಳೊಸುಂದರಿಯಲ್ಲೆ ಕಕುಲಾತÉ ಭಾಳೊಸುಖಚಂದ್ರವದನಳೆ ಸಕಲರು ಬೆರೆಯಲು ನಕಲಿ ಆಯಿತು ಕಾಣೊನಿನ್ನಾಣೆ 3 ಅದ್ಬುತ ಮಹಿಮಳೊ ಧರ್ಮರಾಯಗೆಮುದದಿಕೊಟ್ಟರು ಕೇಳೊಅದ ತಾಳಲಾರದೆ ಇದು ನಿಮಗೈವರುಸುದತಿಯ ಬೆರೆಯುವರೇನೊ ಏ ಹೀನ4 ಪತಿ ನಗುವನು ಭಾಳೆ ಏ ತಾಳೊ 5
--------------
ಗಲಗಲಿಅವ್ವನವರು
ಕಾತ್ಯಾಯನಿ ವರಸುತನೇ ಸತತ ಶುಭದಾಯಕನೇ ಮಂಗಳವನು ಕೊಡು ನಮಿಸುವೆನೊ ನಾನು ಪ ಸಿದ್ಧಿವಿನಾಯಕ ವಿದ್ಯಾಪ್ರದಾಯಕ ಸದ್ಬುದ್ಧಿಯ ಕೊಡೋ ಹರನ ಮುದ್ದುತನಯನೆ 1 ಮೂಷಕವಾಹನನೇ ದೋಷವಿದೂರನೇ ಶ್ರೀಶ ಹನುಮೇಶ ವಿಠಲೋಪಾಸಕನೇ 2 ಗೌರೀಸುತ ಗಜಾನನಾ ನಮೋ ನಮೋ ಪಾರ್ವತೀ ಪತಿಯ ಪ್ರಾಣಪದಕನೇ ನಮೊ 3 ಏಕದಂತಾನೇಕ ಚರಿತನೇ ನಮೋ ನೀ ಕೃಪಾದಿ ನೋಡೋ ವಕ್ರತುಂಡನೆ ನಮೋ 4 ಬಟ್ಟಮುತ್ತಿನ್ಹಾರ ಪದಕಧಾರನೇ ನಮೋ ಧಿಟ್ಟ ಶ್ರೀ ಹನುಮೇಶವಿಠಲ ಪ್ರಿಯನೇ ನಮೋ 5
--------------
ಹನುಮೇಶವಿಠಲ
ಕಾದನಾ ವತ್ಸವ ಹರಿ ಕಾದನಾ | ಮಾಧವ ಪ ವೇದವೇದ್ಯ ಸಾಧುವಿನುತÀರಾದಿಕಾ ರಮಣ ಕೃಷ್ಣ ಅ.ಪ. ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ || ಕೊಳಲು ಕೈಲಿ ಪಿಡಿದು ಮುರಲಿಗಾನ ಮಾಡುತ್ತಾ 1 ತನ್ನ ಶೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಿಸಿ | ತಿನ್ನು ತಿನ್ನು ಪುಲ್ಲು ಯೆನುತ ಘನ್ನ ಕರುಗಳೊತ್ತುತ್ತ 2 ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು || ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು3 ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು | ಬಂದು ವರುಷ ಕರುಗಳಂತೆ ಆನಂದದಿಂದ ಬೆಳೆದವು 4 ಕನಕ ರಜತ ಸರಪಳಿ ದನಕರುಗಳ ಕೊರಳಲ್ಲಿ | ಇಣಕುವಂತರಳೆಲೆ ಅನೇಕ ನಾದ ಬೆರಳಲಿ ಮಾಡುತ5 ಮರದ ನೆರಳು ವೊಳಗೆ ಕೃಷ್ಣ | ಮೆರೆದು ವತ್ಸಗಳನೇ ನಿಲಿಸಿ | ಕರೆದ ಪಾಲು ಕರದಿ ಪಿಡಿದು ನೆರೆದು ಬಾಯಲುಣಿಸುತ6 ಅಜಗಳ್ಹಾಂಗ ಇದ್ದ ಕರುಗಳು ಗಜಗಳ್ಹಾಂಗ ಆದವು | ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಳುವ | 7
--------------
ವಿಜಯದಾಸ
ಕಾಪಾಡಬೇಕು ಮಹಾಲಿಂಗ ಸುರೋತ್ತುಂಗ ಶ್ರೀಪತಿಚರಣಾರವಿಂದಸದ್ಭಂಗ ಪ. ತಾಪತ್ರಯಾಗ್ನಿಯೊಳ್ಬೆಂದೆ ಬಲು ನೊಂದೆ ಆಪತ್ತುಗಳ ಪರಿಹರಿಸೆನ್ನ ತಂದೆ 1 ಅಜ್ಞಾನವನು ದೂರಮಾಡು ದಯದಿ ನೋಡು ಸುಜ್ಞಾನ ಹರಿಭಕ್ತಿ ಶ್ರದ್ಧೆಯ ನೀಡು 2 ಪಾವಂಜೆ ಕ್ಷೇತ್ರಾಭರಣ ದೀನೋದ್ಧರಣ ದೇವ ಲಕ್ಷ್ಮೀನಾರಾಯಣಪದಶರಣ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಾಪಾಡಬೇಕು ಮಹಾಲಿಂಗ ಸುರೋತ್ತುಂಗ ಶ್ರೀಪತಿಚರಣಾರವಿಂದಸದ್ಭಂಗ ಪ. ತಾಪತ್ರಯಾಗ್ನಿಯೊಳ್ಬೆಂದೆ ಬಲು ನೊಂದೆ ಆಪತ್ತುಗಳ ಪರಿಹರಿಸೆನ್ನ ತಂದೆ 1 ಅಜ್ಞಾನವನು ದೂರಮಾಡು ದಯದಿ ನೋಡು ಸುಜ್ಞಾನ ಹರಿಭಕ್ತಿ ಶ್ರದ್ಧೆಯ ನೀಡು 2 ಪಾವಂಜೆ ಕ್ಷೇತ್ರಾಭರಣ ದೀನೋದ್ಧರಣ ದೇವ ಲಕ್ಷ್ಮೀನಾರಾಯಣಪದಶರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಪಾಡು ಕಾಪಾಡು | ಕಾಪಾಡು ಗುರುವೇ ಪ ಶ್ರೀ ಪತಿಯ ಪರಮಾತ್ಮ | ಅಪದ್ಹರ ಗುರುವೇ ಅ.ಪ. ಕೃಪಣ ವತ್ಸಲ ಗುರುವೆ | ಕೋಪಸಲ್ಲದು ನಿಮಗೆಕಾಪಥವ ನೈದುವನು | ತವಕೃಪೆ ವಿಹೀನಾ ||ಅಪರಾಧ ವೆಣಿಸದಲೆ | ಕೃಪೆಮಾಡಿ ಕೈ ಪಿಡಿದುಸುಪಥದಲ್ಲಿರಿಸುತ್ತ | ಆಪವರ್ಗದನ ತೋರೊ 1 ತಂದೆ ತಾಯಿಯು ನೀವೆ | ಬಂಧು ಬಳಗವು ನೀವೆಎಂದೆಂದಿಗೂ ಎನಗೆ ಗುರುವು ನೀವೆ ||ಕಂದ ಮಾಡಿದ ತಪ್ಪ | ತಂದೆಯೆಣಿಸುವರೇನೊಪೊಂದಿ ಭಜಿಸುವೆ ಕಾಯೊ | ತಂದೆ ಕೃಪ ಸಾಂದ್ರಾ 2 ತಂದೆ ಮುದ್ದು ಮೋಹನ್ನ | ವಂದಿಸುವೆ ನಿಮ್ಮಡಿಗೆಇಂದು ತವ ದರ್ಶನವ | ಸಂಧಿಸಲಿ ಬೇಕೋ ||ಇಂದಿರಾಪತಿ ಗುರು | ಗೋವಿಂದ ವಿಠ್ಠಲನಛಂದಾಗಿ ಭಜಿಸುವ | ತಂದೆ ಕೈ ಪಿಡಿಯೋ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಮಿತಾರ್ಥದಾಯಿ ಸೀತಾರಾಮರಾಜ ರಾಜ ಸ್ವಾಮಿಯೆನ್ನ ಕಾಯೊ ಖಳನಿರ್ನಾಮ ಭಕ್ತಕಲ್ಪಭೂಜ ಪ. ಸಾಕೇತಪುರದಿ ವಾಸಪ್ರಾಕೃತ ಲೀಲಾ ವಿಲಾಸ ಸ್ವೀಕೃತ ರಕ್ಷಾವಿಭೂಷ ಯಾಕೆನ್ನೊಳುಪೇಕ್ಷೆ ಶ್ರೀಶಾ ಬೀಕೃತಿಗಳ ದೂರೀಕರಿಸುವ ಕರು ಣಾಕರ ಭಕ್ತ ಪರಾಕ ಪರಾತ್ಪರ 1 ಪಾತಕಿ ಜನೋದ್ಧಾರೈಕ ಹೇತುವ ತೋರುವೆನೆಂದು ಸೇತು ನಿರ್ಮಿಸಿದ ರಘುನಾಥ ನೀನೆ ದೀನ ಬಂಧು ವಾತಜಾತನಿಗೊಲಿದು ಸಂಪ್ರೀತಿಯೊಳಂಬುಜ ಜಾತನಪದವಿಯನಾತಗೆ ಸಲಿಸಿದ 2 ಪಾಮರ ಪಾವನದಿವ್ಯ ನಾಮದೇವ ಸಾರ್ವಭೌಮ ಸೀಮಾಹಿತಸದ್ಗುಣೈಕ ಧಾಮಾ ಸೀತಾಪೂರ್ಣಕಾಮಾ ತಾಮರಸಾಸನವಂದ್ಯ ಶೇಷಗಿರಿ ಧಾಮ ದಯಾಂಬುಧಿ ದಶರಥ ರಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ