ಒಟ್ಟು 36191 ಕಡೆಗಳಲ್ಲಿ , 138 ದಾಸರು , 9678 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಮಮತೆ ಕೊಟ್ಟು ದಣಿಸುವಿ ರಂಗನಿನ್ನ ಹಂಬಲಿಸದೆ ಅನ್ಯ ವಿಷಯಗಳಿ-ತನುವು ತನ್ನದು ಅಲ್ಲ ತನು ಸಂಬಂಧಿಗಳೆಂಬೋಇಂದ್ರಿಯಂಗಳು ವಿಷಯದಿಂದ ತೆಗೆಯಲು ಗೋ-ಅರಿತು ಅರಿತು ಎನಗರೆಲವವಾದರುಎಂದಿಗೆ ನಿನ್ನ ಚಿತ್ತಕೆ ಬರುವುದೊ ಸ್ವಾಮಿ
--------------
ಗೋಪಾಲದಾಸರು
ಏಕೆ ವೃಂದಾವನವು ಸಾಕು ಗೋಕುಲವಾಸ |ಏಕೆ ಬಂದೆಯೊ ಉದ್ಧವಾ? ಪಸಾಕು ಸ್ನೇಹದ ಮಾತನೇಕ ಮಹಿಮನು ತಾನು |ಆ ಕುಬುಜೆಯನು ಕೂಡಿದ-ಉದ್ಧವಾ ಅ.ಪಬಿಲ್ಲು ಬಿಳಿಯಯ್ಯನ ಬೇಟ ನಗೆನುಡಿ ನೋಟ |ಇಲ್ಲದಂತಾಯಿತಲ್ಲ ||ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನವ |ವಲ್ಲಭನ ಒಯ್ದನಲ್ಲ ||ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದು |ಘಲ್ಲನಾಭನ ತಂದು ತೋರೈ-ಉದ್ಧವಾ 1ಅನುದಿನೊಳಾದರಿಸಿ ಅಧರಾಮೃತವನಿತ್ತು |ಇನಿದಾದ ಮಾತುಗಳಲಿ ||ಮನದ ಮರ್ಮವ ತಿಳಿದ ಮನಸಿಜಪಿತನ ಸಖವು |ಮನಸಿಜನ ಕೇಳಿಯಲ್ಲಿ ||ಕನಸಿನಲಿ ಕಂಡ ತೆರನಾಯಿತಾತನ ಕಾಂಬು |ವನಕ ಬದುಕುವ ಭರವಸೆ ಹೇಳು-ಉದ್ಧವಾ 2ಕರುಣನಿಧಿಯೆಂಬುವರು ಕಪಟನಾಟಕದರಸು |ಸರಸ ವಿರಸವ ಮಾಡಿದ ||ಸ್ಮರಿಸಿದವರನು ಕಾಯ್ವ ಬಿರುದುಳ್ಳ ಸಿರಿರಮಣ |ಮರೆದು ಮಧುರೆಯ ಸೇರಿದ ||ಪರಮಭಕ್ತರ ಪ್ರಿಯ ಪುರಂದರವಿಠಲನ |ನೆರೆಗೂಡಿಸೈ ಕೋವಿದ-ಉದ್ಧವಾ 3
--------------
ಪುರಂದರದಾಸರು
ಏಕೆಕಕುಲಾತಿಪಡುವೆ - ಎಲೆ ಮನವೆಪಲೋಕವನೆ ಸಲಹುವ ಶ್ರೀನಿವಾಸನು ನಮ್ಮ |ಸಾಕಲಾರದೆ ಬಿಡುವನೇ - ಮನವೆ ಅಪಆನೆಗಳಿಗೆಯ್ದಾರು ಮಣವಿನಾಹಾರವನು ಅಲ್ಲಿ ತಂದಿತ್ತವರದಾರೊ |ಜೇನುನೊಣ ಮೊದಲಾದ ಕ್ರಿಮಿ - ಕೀಟಗಳಿಗೆಲ್ಲ |ತಾನುಣಿಸದಲೆ ಬಿಡುವನೇ - ಮರುಳೆ 1ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನುಅಲ್ಲಿ ತಂದಿತ್ತವರದಾರೊ |ಎಲ್ಲವನು ತೊರೆದು ಅರಣ್ಯ ಸೇರಿದ್ರ್ದವರ |ಅಲ್ಲಿ ನಡಸದೆ ಬಿಡುವನೇ - ಮರುಳೆ 2ಅಡವಿಯೊಳಗೇ ಪುಟ್ಟುವಾ ಮೃಗಕುಲಕ್ಕೆಲ್ಲಒಡೆಯನಾರುಂಟು ಪೇಳೊ |ಗಿಡದಿಂದ ಗಿಡಕೆಹಾರುವ ಪಕ್ಷಿಗಳಿಗಲ್ಲಿ |ಪಡಿಯ ನಡೆಸದೆ ಬಿಡುವನೇ - ಮರುಳೆ 3ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆಮಂಡೆ ದಡ್ಡಾಯಿತಲ್ಲ |ಭಂಡ ಮನವೇ ನೀನು ಕಂಡವರಿಗೆರಗದಿರುಕೊಂಡಾಡಿ ಹರಿಯ ಭಜಿಸೋ - ಮರುಳೆ 4ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನ್ನುಬೆಂಬಿಡದೆ ಸಲುಹುತಿಹನು |ನಂಬು ಶ್ರೀ ಪುರಂದರವಿಠಲನ ಪಾದವನುನಂಬಿದರೆ ಸಲಹದಲೆ ಬಿಡುವನೇ - ಮರುಳೆ 5
--------------
ಪುರಂದರದಾಸರು
ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆಕಾಕಮಾಡದೆ ಕಾಯೊ ಸಂಗದೊಳು ಬಳಲಿದೆನು ಪಕಂದರ್ಪಬಾಧೆಯಿಂ ಮಾನಿನಿಯ ವಶನಾಗಿಮಂದಮತಿಯಿಂದ ನಾ ಮರುಳಾದೆನೋ ||ಸಂದಿತೈ ಯೌವನವು ಬುದ್ದಿ ಬಂದಿತು ಈಗಸಂದೇಹಪಡದೆ ನೀ ಕರುಣಿಸೈ ಎನ್ನ 1ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗಹಿಂಡುಮಕ್ಕಳು ಎನ್ನ ತಿನ್ನುತಿಹರು ||ಮುಂಡಮೋಚಿದೆ ನಾನು ಇನ್ನಾರು ಗತಿಯೆನಗೆಪುಂಡರೀಕಾಕ್ಷನೀ ಪಾಲಿಸೈ ಎನ್ನ2ಅಟ್ಟಮೇಲೊಲೆಯುರಿಯುವಂತೆಹರಿಎನಗೀಗಕೆಟ್ಟ ಮೇಲರಿವು ತಾ ಬಂದಿತಯ್ಯ ||ನೆಟ್ಟನೇಪುರಂದರವಿಠಲನೆ ಕೈ ಬಿಡದೆದಿಟ್ಟಿಯಲಿ ನೋಡಿ ಪರಿಪಾಲಿಸೈ ಎನ್ನ 3
--------------
ಪುರಂದರದಾಸರು
ಏತರ ಚೆಲುವು-ರಂಗಯ್ಯ ಪಹಡೆದ ತಾಯಿ ತನಗುಳ್ಳೊಡೆ-ರಂಗ |ಬುದ್ದಿ ಪೇಳುವ ಪಿತನುಳ್ಳೊಡೆ-ರಂಗ |ಸಿರಿಯುಳ್ಳೊಡೆ ತಾನು ಬಲಿಯ ಮನೆಗೆ ಪೋಗಿ |ಮದನಜನಕನಿಚ್ಚಚೆಲುವನೆಂತೆಂಬೆನೆ |
--------------
ಪುರಂದರದಾಸರು
ಏನಯ್ಯ ನಿನ್ನ ಸಂಗದಪರಿ - |ಮಾನಿನಿಯ ಮರುಳು ಮಾಡಿ ನೋಡಿದವಗೆ ಪಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |ಕರವ ಗಲ್ಲದೊಳಿಟ್ಟು ಕಡುಸುಯ್ವಳು ||ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |ಬರವ ಕಾಣದೆ ಕಂದಿ ಕುಂದಿ ಬಡವಾದಳೈ 1ಕಂಬನಿಯ ತುಂಬುವಳು ಕರೆವಳು ಪೆಸಗೊರ್ಂಡು |ಹಂಬಲಿಸುವಳು ಕಂಡ ಕಾಂತೆಯರೊಳು ||ಬೆಂಬಿಡದೆ ಜಡೆ ಮುಡಿಯೆ ತೊಡಿಗೆ ಬೀಸಾಡುವಳು |ಬಿಂಬವರಿತು ಪೊಗುಳುವಳು ನಿನ್ನ ಗುಣಗಣವ 2ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |ಘನತಾಪದಿಂದ ಗೋಚರವಾಗಿದೆ ||`ಅನುತಾಪದಿಂದ ಸಲೆ ಬಳಲಿದ ಮಾನಿನಿಯ |ವನಜಾಕ್ಷಪುರಂದರ ವಿಠಲ ಬಂದು ಸಂತಯಿಸೊ3
--------------
ಪುರಂದರದಾಸರು
ಏನಾದರೂ ಒಂದಾಗಲಿ - ನಮ್ಮ -ಮನೆತುಂಬ ದೇವರು ಮರತುಂಡು ಕಲ್ಲು ಪಅತ್ತೆಯ ಕಣ್ಣೊಂದು ಹರಿಯಲಿ |ಮತ್ತೆ ಮಾವನ ಕಾಲು ಮುರಿಯಲಿ ||ಹಿತ್ತಲಗೋಡೆಯು ಬಿರಿಯಲಿ - ಕಾ -ಳ್ಗತ್ತಲೆಯಾದರೂ ಕವಿಯಲಿ ಹರಿಯೆ 1ಮನೆಯಗಂಡ ಮಾಯವಾಗಲಿ |ಉಣಬಂದ ಮೈದುನ ಒರಗಲಿ -ಸಿರಿ -ಮನೆಯು ಹಾಳು ಹಾಳಾಗಲಿ - ನಾ -ದಿನಿ ಅತ್ತಿಗೆಯರು ಸಾಯಲಿ ಹರಿಯೆ........... 2ಕಂದನ ಕಣ್ಣೊಂದು ಮುಚ್ಚಲಿ | ಆಚಂದ್ರಂಗೆ ಹಾವು ಕಚ್ಚಲಿ ||ದ್ವಂದ್ವಾರ್ಥವನು ಬಿಚ್ಚಲಿ ಪು -ರಂದರವಿಠಲ ಮೆಚ್ಚಲಿ ಹರಿಯೆ............ 3
--------------
ಪುರಂದರದಾಸರು
ಏನಾಯಿತೀ ಜನಕೆ ಮೌನವದು ಕವಿದಂತೆ |ಮಾನುಷ್ಯರಾಗಿ ಮರೆತರು ಹರಿಯನು ಪ.ನಾಲಗೆಗೆ ಮುರಿಯಿತೆ ನೆಗ್ಗಿಲ ಕೊನೆಮುಳ್ಳು |ಬಾಲತನದಲಿ ಭೂತ ಹೊಡೆಯಿತೆ - ಕೆಳಗು - |ಮೇಲಿನ ತುಟಿ ಎರಡು ಒಂದಾಯಿತೇ -ಅವರ - |ಕಾಲಮೃತ್ಯು ಬಂದು ಕಂಗೆಡಿಸಿತೆ ? 1ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೆ |ಕಟಗರಿಸಿ ನಾಲಗೆ ಕಡಿದು ಹೋಯಿತೆ ? ||ಹಟ ಹಿಡಿದ ಹೊಲೆಮನಸುಹರಿ ಎನ್ನಲಾರದೆ |ಕುಟಿಲ ಚಂಚಲ ಬುಧ್ಧಿ ಕಂಗೆಡಿಸಿತೆ ? 2ಹರಿಯೆಂದರವರ ಶಿರ ಹರಿದು ಬೀಳುವುದೆ |ಪರಬ್ರಹ್ಮ ಪಣೆಯಲ್ಲಿ ಬರೆದಿಲ್ಲವೆ ||ಸಿರಿದೇವಿಗೊಲಿದ ಶ್ರೀ ಪುರಂದರವಿಠಲನ |ಸ್ಮರಿಸಿದರೆ ಸಿಡಿಲೆರಗಿ ಸುಟ್ಟು ಕೊಲ್ಲುವುದೆ ? 3
--------------
ಪುರಂದರದಾಸರು
ಏನಾಯಿತು ರಂಗನೆ ನೋಡಿರಮ್ಮ-ನಿ-|ಧಾನಿಸಿ ಎನಗೊಂದು ಪೇಳಿರಮ್ಮ ಪಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ-ತಾನು |ಎಷ್ಟಾದರೂ ಮೊಲೆಯುಣ್ಣನಮ್ಮ ||ಸೊಟ್ಟಾದ ಮುಖ ಮೇಲಕ್ಕೆತ್ತನಮ್ಮ-ಹೀಗೆ |ಎಷ್ಟು ಹೇಳಲಿ ಬಾಯ ಮುಚ್ಚನಮ್ಮ 1ಕಾಯಇದ್ದಂತಿದ್ದು ಹೆಚ್ಚಿತಮ್ಮ-ಹೆತ್ತ |ತಾಯಿಯ ಬಲವಿಲ್ಲದಾಯಿತಮ್ಮ ||ನೋಯೆ ನೋಟಕೆಅಬ್ಧಿಬತ್ತಿತಮ್ಮ-ಅವನ |ಬಾಯಿಯೊಳಗೆವಿಶ್ವತೋರಿತಮ್ಮ2ಅತ್ಯಂತ ಮಾತುಗಳನಾಡಿದನಮ್ಮ-ಮುಂದೆ |ಸತ್ಯವು ಕುದುರೆಯನೇರುವನಮ್ಮ ||ನಿತ್ಯನಿರ್ದೋಷಪುರಂದರವಿಠಲ ತನ್ನ-|ಭಕ್ತರ ಸಲಹುವದೇವನಮ್ಮ 3
--------------
ಪುರಂದರದಾಸರು
ಏನಿದ್ದೀತೇನಿದ್ದೀತೋ ಈ ನಾಮದಲ್ಲೇನಿದ್ದೀತೇನಿದ್ದೀತೋ ಪಏನಿದ್ದೀತೇನಿದ್ದೀತೇನ ಪೇಳಲಿ ನಾಜಾನಕೀಶನ ನಾಮ ಹಾನಿಮಾಡದೆ ಕಾಯ್ವುದೇ ಅ.ಪಜ್ಞಾನ ಕೊಡುವುದಲ್ಲೋ ಅಜ್ಞಾನ ಖೂನಕ್ಕುಳಿಸದಿರೆಲೋಸಾನುರಾಗದಿ ನಿಜಜ್ಞಾನ ಬೋಧಿಸಿ ಮಹಹೀನ ಬವಣೆಕಳೆದಾನಂದ ಕೊಡುವುದು 1ನರಕಕ್ಹೋಗುವನನ್ನು ಭರದಿಕರುಣಿಸಿ ಪದವನ್ನುಕರುಣದಿತ್ತು ಹರಿಶರಣರೊಳಾಡಿಸಿಪರಮಪರತರವೆನಿಪ ಸ್ಥಿರಸುಖ ಪಾಲಿಸಿತು2ಜರಮರಣಳಿಯುವುದು ಅದರೊಳ್ಕರುಣವೆ ತುಂಬಿಹ್ಯದುದುರಿತದಿ ಸಿಲ್ಕೆಲ್ಲಿ ಕರೆದರು ಅಲ್ಲಿಗೆತ್ವರಿತದೊದಗಿ ಬಂದು ನಿರುತದಿಂ ಸಲಹುವುದು 3ಭವಬಾಧೆ ಕಳೆಯುವುದುಜವನ ಭಯವೆ ತಪ್ಪಿಸುತಿಹ್ಯದುದಿವರಾತ್ರಿ ಎನ್ನದೆ ನಯದಿ ಭಜಿಪರೊಳುದಯದಿ ನಿಂತು ತಾನೆ ಜಯವ ನೀಡುವುದು 4ಅಂತ್ಯಪಾರಿಲ್ಲ ಕಾಣೋ ಶ್ರೀರಾಮನಾಮದ್ದೆಂಥ ಶಕ್ತಿಯೇನೋಚಿಂತಿಪ ಭಕ್ತರ ಅಂತರಂಗವನರಿತುಸಂತಸ ನೀಡಿ ಮುಕ್ತಿಸಂಪದ ಕೊಡುವುದು 5
--------------
ರಾಮದಾಸರು
ಏನು ಇರದ ಎರಡು ದಿನದ ಸಂಸಾರಜ್ಞಾನದಲಿ ದಾನಧರ್ಮವ ಮಾಡಿರಯ್ಯ ಪ.ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯುಣಿಸಬೇಕುಹಸನಾದ ಭೂಮಿಯನು ಧಾರೆಯರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇಬೇಕು 1ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುಟಿಲ ನಡಿಸಲು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮಲಿರಬೇಡಬಾಳ್ವೆ ಸ್ಥಿರವೆಂದು ನೀನಂಬಿ ಕೆಡಬೇಡ 2ದೊರೆ ತನವು ಬಂದಾಗ ಕೆಟ್ಟ ನುಡಿಯಲು ಬೇಡಸಿರಿ ಬಂದ ಕಾಲಕ್ಕೆ ಮರೆಯಬೇಡಸಿರಿವಂತನಾದರೆ ಪುರಂದರವಿಠಲನಚರಣ ಕಮಲವ ಸೇರಿ ಸುಖಿಯಾಗು ಮನುಜ 3
--------------
ಪುರಂದರದಾಸರು
ಏನು ಕೌತಕ ಕೃಷ್ಣ ತಾನೆ ಕನಸಿನೊಳು |ಮಾನವರ ತೆರನಂತೆ ಮುರುಳಾಡಿಸಿದನೆನ್ನ ಪಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ |ಮುಂದೆ ಅದರಂದವನು ಎಲ್ಲ ತಾಪೇಳ್ದ ||ಒಂದು ದೋಸೆಯ ತನಗೆ ತಂದುಕೊಡು ಎಂದೆನಲು |ತಿಂದ ಮೀಸಲಕೊಡೆನು ಎಂದು ಹೇಳಿದೆನು 1ಮೋಸಹೋದೆನು ನಾನು ದೋಸೆಯನು ಹರಿಗೆ-ಆ-ಪೋಶನವನಿಕ್ಕದೇ ಪೋಷಿಸಿದೆನು ||ಮಿಸಲಾದರು ಅಹುದು ದೋಷವಿಲ್ಲೆಂದೆನುತ |ಆಸುರದ ಮಾತುಗಳ ವಾಸಿತೋರಿಸಿದನು 2ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು |ಹೊಳೆಯೊಳಗೆ ಈಸಾಡಿ ನಲಿವುದನು ನೋಡಿ ||ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ |ತೊಳಕೊಂಡು ಒಳಯಿಂಕೆ ಬಂದುದನು ಕಂಡೆ 3ಈ ರೀತಿ ಸಿರಿಸಹಿತ ವಾರಿಜಾಕ್ಷನು ಕೃಷ್ಣ |ತೋರಿದನು ಸ್ವಪ್ನ ಕಣ್ಣಾರೆ ನೋಡಿದೆನು ||ಹಾರಿಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ |ಏರಿ ಬಂದುದು ಶುಭದ ವಾರಿಧಿಯು ಮುಂದೆ.................... 4ಈ ಮಹಾಮೂರ್ತಿಯನು ಜಾವಪರ್ಯಂತರದಿ |ಕಾಮಿಸಿಯೆ ನೋಡಿದೆನು ಸೌಮ್ಯನಸ್ಯದಲಿ ||ಆ ಮಹಾ ಹರಿಯು ಪರಧಾಮವನು ಕೈಕೊಂಡು |ಭೂಮಿಪತಿಯಾಗಿರ್ದ ಪುರಂದರವಿಠಲ........................... 5
--------------
ಪುರಂದರದಾಸರು
ಏನು ಗತಿಯೊ ಮುಂದೆನಗೆ ಗೋವಿಂದಶ್ರೀನಿವಾಸ ರಕ್ಷಿಸದಿರೆ ದಯದಿಂದ ಪ.ನಿಶಿದಿನ ಹಸಿವುತೃಷೆಸುಡುವ ಕುಮರಿಯುಮಸಿವರ್ಣ ಮಾಡಿ ಕೇರಿಡಿವ ಮೂರುರಿಯು 1ನಾಚಿಕಿಲ್ಲದ ವಿಷಯಾಸೆಯಸಹ್ಯನೀಚ ದುರುಕ್ತಿಯಸ್ತ್ತ್ರದ ಘನಗಾಯ 2ಮಾಯದ ಕಡಲೊಳು ಕಟ್ಟಿಹ ಕೊರಳುಆಯಾಸ ಬಡುತ ಬಡುತ ಬಿದ್ದಿತುರುಳು 3ಎಳ್ಳನಿತು ಜ್ಞಾನ ಅಹಂಕಾರ ಬಹಳಘಲ್ಲನೆ ತಗಲುವ ಜ್ಞಾನದಶೂಲ4ಮರಹುಮದಗಳೆಂಬ ಮುಸುಕಿದ ಮೆಳೆಯುಪರದಾರ ಪರನಿಂದೆಯಗ್ನಿಯ ಮಳೆಯು 5ಬೇಡಿದ ಬಯಕೆ ಸಾಧ್ಯಾಗದ ನೋವುಮೂಢತನದಿ ದಿನ ನೂಕುವ ಸಾವು 6ಇನ್ನಾರೆ ಸಜ್ಜನ ಸಂಗಕೌಷಧಮುನ್ನ ಕೊಡಿಸೊ ಪ್ರಸನ್ವೆಂಕಟ ಮುಕುಂದ 7
--------------
ಪ್ರಸನ್ನವೆಂಕಟದಾಸರು
ಏನು ಗತಿಯೊ ರಂಗ ನಾ ನಿನ್ನವನಾಗಿಜ್ಞಾನದಂತಿರಲಿಲ್ಲವೊ ಪ.ಉಂಡುಂಡುತುಡುಗಕೋಣನಪರಿಸೊಕ್ಕಿದೆಕಂಡಲ್ಲಿ ಕುಳಿತೆ ನೊಣನ ತೆರದಿಭಂಡು ಭೂತದ ಮಾತನಾಡಿ ಭಂಡನಾದೆಪುಂಡರೀಕಾಕ್ಷನನ್ನಂಥ ಪಾತಕಿಗೆ1ಬಲು ಶಾಸ್ತ್ರಶ್ರವಣೆಂಬುವ ಮಳೆಗರೆದರೇನುಕಲುಗುಂಡಿನಂತೆ ಕೆಟ್ಟೆದೆ ತೊಯ್ಯದುಹಲವು ಅಧ್ಯಾತ್ಮವನುಸುರೇನು ಚಿತ್ತದಕಳವಳಿ ನಿಲಿಸಲಾರದ ಪಾಮರಗೆ 2ಭವಸುಖ ಉಂಬಾಗ ನೋವು ಬೇವಾದಾಗತವಕದಿ ನುಡಿವಾಗ ಕನಸಿನಾಗಅವಿರಳಅಚ್ಯುತನಿನ್ನಂಘ್ರಿ ನೆನೆದೀಶಅವಸರಕೊದಗೆಂದೆ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ಪಸ್ಥಾಣುವಮೂರ್ತಿಪಾದಸೇವೆತಾನೆನಿರತಮಾಡುತಿಹಳೊ ಅ.ಪಭೂತಗಣದ ಯೂಥವಿರಲುಸೂತಗಣನಾಥಾದ್ಯರಿರಲುಭೂತಪತಿಯಚರಣತೊಳೆದುತೀರ್ಥಕೊಡುತ ಬರುವಳ್ ಸಭೆಗೆ 1ನಾರದರು ದಿಕ್ಪಾಲರಿರಲುವಾರಿಜಾಸನ ವಿಷ್ಣುವಿರಲುಮಾರಹರನಿಗಾರತಿ ಎತ್ತಿತಾನೆ ಸಭೆಗೆ ತೋರಿಸುವಳು 2ವಸುಗಳ್ ಸಪ್ತ ಋಷಿಗಳಿರಲುಅಸುರ ಶಿಕ್ಷರು ನುತಿಸುತಿರಲುಪಶುಪತಿಯ ಲೇಪಿಸಿದ ಭಸ್ಮಗೋವಿಂದಾದ್ಯರಿಗೆ ಪ್ರಸಾದ ಕೊಡುವಳ್ 3
--------------
ಗೋವಿಂದದಾಸ