ಒಟ್ಟು 2249 ಕಡೆಗಳಲ್ಲಿ , 115 ದಾಸರು , 1615 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡವೋರಂಗ ಹೆಂಗಳ ತಳ್ಳಿ ಹೋಗ ಬೇಡವೋನಾ ಬೇಡಿ ಕೊಂಬೆನುದಮ್ಯಯ್ಯ ಪ ಊರೊಳಗೆಲ್ಲ ನಿನ್ನಯ ದೂರೇ ರಂಗ ಬಾರೋ ನಿನ್ನನು ಕಾಣದಿರಲಾರೆ ಯಾರಿಗೆಂಬೆನು ಗೋಕುಲದೊಳಗಿರ್ದ ನಾರಿಯರೆಲ್ಲರು ಕಿವಿಗೆಡಸಿದರೆನ್ನ 1 ಚಿಕ್ಕವನಾಗಿ ನೀನಿರುತಿರೆ ಹೆಣ್ಣು ಮಕ್ಕಳ ಮೇಲÉ ಕಣ್ಣಿಡುವರೆ ಪೊಕ್ಕು ಪಾಲ್‍ಬೆಣ್ಣೆಯ ಕದ್ದರೆ ಗೋಪರ ಮಕ್ಕಳು ಕಂಡರೆ ಪ್ರಾಣವ ತೆಗೆವರು 2 ಎಲ್ಲ ಜೀವರಿಗೂ ನೀಹಿತನಾಗಿ ಪ್ರೀತಿಯಲ್ಲಿರು ಭಾರಿ ಪುರುಷನಾಗಿ ಹಲ್ಲ ಕಡಿದಿಹರಂತೆ ಗೋಪರು ಮಾನಕೊಳ್ಳಲು ಯತ್ನವ ಮಾಡಿ ಕೊಂಡಿಹರಂತೆ 3 ಕಂಡರೆ ಹಿಡಿದು ಕಟ್ಟುವರಾಗಿ ಪುಂಡ ನಿಲ್ಲಿಸ ಬೇಕೆನುತ್ತೆಲ್ಲಿ ಗೋಪರು ಕಂಡಿ ಕಣೆವೆ ಕಟ್ಟಿಕೊಂಡು ಸಾಧಿಪರಂತೆ 4 ಪಾಲು ಬೆಣ್ಣೆಯ ಕದ್ದು ಮೆಲುವರೆ ಕೃಷ್ಣ ಬಾಲೆಯರನು ಗೋಳು ಹೊಯ್ವರೆ ನಿ ನ್ನಾಲಯದೊಳಗೇನು ಕಡಿಮೆಯಾಗಿದೆ ಲಕ್ಷ್ಮೀಲೋಲನ ದಯದಿಂದ ಸಕಲ ಸಂಪತ್ತಿದೆ 5
--------------
ಕವಿ ಪರಮದೇವದಾಸರು
ಬೇಡುವರೋ ಬೇಡುಣುತಿಹ್ಯರೋ ಬೇಡಿ ಬೇಡದಂತೆ ನಾಡೊಳ್ಹರಿದಾಸರು ಪ ಕೊಟ್ಟರೆ ಶ್ಲಾಘನೆ ಮಾಡರೊ ಕೊಡದಿದ್ದರೆ ಸಿಟ್ಟಿಗೆ ಬಾರರೊ ಕೊಟ್ಟಕೊಡವದರೆಲ್ಲ ಅಷ್ಟೆಯೆಂದೆನ್ನುತ ಸೃಷ್ಟಿಗೀಶನ ಘಟ್ಟ ತಿಳಿದಿಹ್ಯರೂ 1 ಸಂಚಿತದಿಂ ಜನ್ಮ ತಾಳಿಹ್ಯರೂ ವಿ ರಂಚಿಪಿತಗೆ ಭಾರಹೊರಿಸಿಹ್ಯರೊ ಹಂಚಿಕಿಯಿಂದ ನಿರ್ವಂಚಿತರಾಗಿ ಬಂದ ಸಂಚಿತಾದಡಾಗಮ ಗೆಲಿಯುವರೊ 2 ಕಾಮಿತಗಳೆಲ್ಲ ಕಡೆದಿಹ್ಯರು ಈ ಭೂಮಿಸುಖಕೆ ಮನಮೋಹಿಸರೊ ನೇಮದಿಂದ ಮಹ ಕ್ಷೇಮವಾರಿಧಿ ಸ್ವಾಮಿ ಶ್ರೀರಾಮ ಪಾದಕ್ಹೊಂದಿಹ್ಯರೊ 3
--------------
ರಾಮದಾಸರು
ಬೇಡುವೆನು ಶ್ರೀಕೃಷ್ಣ | ಕಾಡುತಿಹ ಭವರೋಗಓಡಿಸುವುದು ತಡೆಯದೇ ಪ ನಾಡಾಡಿ ದೈವಗಳ | ಬೇಡ್ವನಲ್ಲವೊ ಕೃಷ್ಣನೋಡೆನ್ನ ದಯದಿಂದ | ಸಾರ್ವಭೌಮಾ ಅ.ಪ. ಪರ ಕಂಬು ಚಕ್ರಾಂಕಿತನೆನಂಬಿಹೆನೊ ನಿನ್ನ ಪದವ ||ಕುಂಭಿಣಿಯ ಪರಿಪಾಲ | ಅಂಭ್ರಣಿಯ ಸುವಿಲೋಲಇಂಬಿಟ್ಟು ವದಗಿಸುತ | ಸಂಭ್ರಮದಿ ಕಾಯೋ | ಕರುಣೀ 1 ಪ್ರೇರ್ಯ ಪ್ರೇರಕ ನೀನೆ | ಬಾಧ್ಯ ಬಾಧಕ ನೀನೆಸೇವ್ಯ ಸೇವಕನೆ ಹರಿಯೇ ||ವಾಪ್ಯ ವ್ಯಾಪಕ ಸ್ವಾಮಿ | ಪೋಷ್ಯ ಪೋಷಕ ರೂಪಿಕಾರ್ಯ ಕಾರಣ ರೂಪನೇ ||ಭಾವ್ಯನೇ ನಿನ್ನಿಂದ | ಧಾರ್ಯ ಈ ಜಗವೆಲ್ಲವೀರ್ಯ ಔದಾರ್ಯ ಶೌರ್ಯ ||ಪೂಜ್ಯ ಪೂಜಕನೆನಿಪ | ಬಹಿರಂತರಾತ್ಮಕನೆಪ್ರಾಪ್ಯ ಪ್ರಾಪಕ ನಿನ್ನ | ಪ್ರಾಪ್ತಿಯನೆ ತಿಳಿಸೋ | ಸ್ವಾಮಿ 2 ತಾರತಮ್ಯ ಜ್ಞಾನ ಸದ್ | ವೈರಾಗ್ಯ ಹರಿ ಭಕುತಿಬಾರಿ ಬಾರಿಗೆ ಬೇಡುವೇ ||ಸೂರಿ ಸಂಗವ ನೀಯೊ | ದೂರಗೈ ದುಸ್ಸಂಗಮಾರಪಿತ ದಯಾಪಾಂಗನೆ ||ಕಾರುಣಿಕ ನೀನೆಂದು | ಸಾರಿರುವ ತವಪಾದದೂರ ಮಾಡಲಿ ಬೇಡವೊ ||ಆರು ಕಾಯುವರಿಲ್ಲ | ವಾರೀಜ ಜಾಂಡದೊಳುಧೀರ ಗುರು ಗೋವಿಂದ | ವಿಠಲ ಬಹು ಆಪ್ತಾ | ಗೋಪ್ತಾ 3
--------------
ಗುರುಗೋವಿಂದವಿಠಲರು
ಬೇಡೆಲೊ ಜೀವಾ ಜನಿಸಲೆ ಬೇಡೋ ಪ ಬೇಡ ನಿಜಸುಖ ದೊರೆಯದು ನೋಡೋ ಅ.ಪ ಹೆಣ್ಣೋ ಗಂಡೋ ಆಗಿ ಮೆರೆಯುವೆಮಣ್ಣು ಹೊನ್ನಿಗೆ ನೀ ಹಾತೊರೆಯುವೆಉಣ್ಣುತ ಪ್ರಾರಬ್ಧವ ಬಾಯ್ದೆರೆಯುವೆಹಣ್ಣಾಗುವೆ ನೀ ಪರೀಕ್ಷೆ ಮಾಡೊ 1 ಆರು ಹಗೆಗಳು ಗಡ ಮುತ್ತುವವೊಮೂರು ತಾಪಗಳು ಕಡು ಹೊತ್ತುವವೊನೂರೊಂದೊಗಟಗಳಿರದೊತ್ತುವವೊಪಾರಾಗಲು ಬಿಡವೆಂದಿಗು ಕೇಡೋ 2 ಹುಟ್ಟು ಸಾವುಗಳ ಸುಳಿಯಲಿ ಸುತ್ತುವೆಒಟ್ಟು ಮರಳಿ ಸಂಚಿತವನು ಬಿತ್ತುವೆ ಗಟ್ಟಿಸಿ ಗದುಗಿನ ವೀರನಾರಾಯಣನೆಹುಟ್ಟಿಸಬೇಡೆಂದಿಚ್ಛಿಸಿ ಬೇಡೋ 3
--------------
ವೀರನಾರಾಯಣ
ಬೊಮ್ಮ ಕೃಷ್ಣನ ಹಾಡುತ ಪಾಡುತಜನರೆಲ್ಲ ಉತ್ಕøಷ್ಟರಾಗಿಹರಮ್ಮ ಪ. ಪ್ಯಾಟಿಯ ಎದುರಾಗಿ ಕೋಟೆಬಾಗಿಲ ಕೋಟ ಸೂರ್ಯರ ಬೆಳಕಿಲೆ ಕೋಟ ಸೂರ್ಯನ ಬೆಳಕಿಲೆ ಹೊಳೆವಂಥಹಾಟಕಾಂಬರÀನ ಅರಮನೆ 1 ಪನ್ನಗ ಶಯನನ ಅರಮನೆ2 ಭಾಗವತ ಪ್ರಿಯಸಾಗರ ಶಯನನ ಅರಮನೆ ಸಾಗರ ಶಯನನ ಅರಮನೆಯ ಬಾಗಿಲೊಳು ಹೋಗಿ ಬರುವವರು ಕಡೆಯಿಲ್ಲ3 ನಾಗಶಯನನ ಮನೆ ಬಾಗಿಲು ಮುಂದೆಸೋಂಗ್ಹಾಕಿ ನಿಂತ ಕೆಲವರುಸೋಂಗ್ಹಾಕಿ ನಿಂತ ಕೆಲವರು ಸಭೆಯೊಳು ಹೋಗಬೇಕೆಂಬೊ ಭರದಿಂದ 4 ದಾಸರು ಬಗೆಬಗೆ ಸೋಸಿಲೆ ತಳವೂರಿಶ್ರೀಶ ರಾಮೇಶನ ಅರಮನೆ ಮುಂದೆಶ್ರೀಶ ರಾಮೇಶನ ಅರಮನೆ ಮುಂದಿನ್ನು ಕೂಸೆತ್ತಿಕೊಂಡು ನಿಂತ ಕೆಲವರು5
--------------
ಗಲಗಲಿಅವ್ವನವರು
ಬೋಧ ಪ ಶ್ರೀನಿವಾಸನ ನಾಮ ಲೀಲೆಯಸಾನುರಾಗದಿ ವಾಣಿಜಾಣೆಸೂನೂನ ಪಾಪವ ಹಾನಿಯ ಮಾಡುತ 1 ಹತ್ತು ನಾಲ್ಕು ಸುತ್ತದೇಶದಿಚಿತ್ರ ಚರಿತನ ವೃತ್ತಿ ನಿತ್ಯದಿವಿಸ್ತರಿಸಿ ಹೇಳುತ ಚಿತ್ತದಿ ಸುಖಿಸುವಿ 2 ಇಂದಿರೇಶನ ತಂದು ತೋರುವಿಎಂದು ನಿನ್ನನು ಪೊಂದಿ ಬಂದೆನಂದನ ಕಂದನ ಬಂದೀಗ ತೋರಿಸು 3
--------------
ಇಂದಿರೇಶರು
ಬೋಧ ಭಾನು ಬರುತೈದನೆ ನಾದ ವಿನೋದವೆಂಬ ಈಕೋಳಿಯು ಕೂಗುತೈತವರನೀಕ್ಷಿಸೆ ಸತ್ಕರುಣಾ ಕಟಾಕ್ಷದಿಂಏಳಯ್ಯ ಗುರುವರ್ಯ ಏಳಯ್ಯ ಗುರುವರ್ಯ ಯತಿಜನಾಲಂಕಾರಪಏಳು ಭಕ್ತಾಧಾರ ಯಮನಿಯಮ ಸಂಚಾರಏಳು ವಿದ್ವದ್ವರ್ಯ ಪರಮಹಂಸಾಚಾರ್ಯ ಏಳು ಗೋಪಾಲ ಯತಿವರ್ಯಾ ಸ್ವಾಮಿಅ.ಪಆಧಾರ ಮಣಿಪೂರ ಹೃದಯ ಕಮಲಗಳಲ್ಲಿನಾದ ಬಿಂದು ಕಲೆಗಳೆಂಬರುಣನುದುಸಿದಬೋಧೆಯೆಂಬರ್ಕನಾವಿರ್ಭವಿಸಿದನು ಸಹಸ್ರಾರ ಕಮಲದ ತುದಿಯಲಿವೇದವೇದ್ಯಾನಂತಮಹಿಮ ಚಿನ್ಮಯರೂಪನಾದಸೌಖ್ಯಾಕಾರ ಕಲಿ ಕಲ್ಮಷವಿದೂರಆದಿಮಧ್ಯಾಂತರಹಿತಾನಂದ ನಿತ್ಯನಿಜಬೋಧನೊಲಿದುಪ್ಪವಡಿಸಾ ಸ್ವಾಮೀ1ನಿತ್ಯವೆ ನಿಮ್ಮ ಪದವೆಂದಜಾಂಡವನಿದನನಿತ್ಯವೆಂದಖಿಳ ವಿಷಯಗಳಲಿ ವಿರತರಾಗಿಅತ್ಯಂತ ಶಮ ದಮಾದಿಗಳೆಂಬ ಸಾಧನದಿ ಮುಕ್ತಿ ಸುಖವನು ಬಯಸುತಾಪ್ರತ್ಯಕ್ಷರ ಬ್ರಹ್ಮರೈಕ್ಯವರಿಯದೆ ವಿದುಗಳತ್ಯಂತ ತ್ವರೆುಂದ ನಿಮ್ಮ ಮುಖಕಮಲದಿಂತತ್ವಮಸಿ ವಾಕ್ಯದರ್ಥವ ತಿಳಿಯಬೇಕೆಂದು ನೃತ್ಯವನು ಮಾಡುತಿಹರೂ ಸ್ವಾಮಿ 2ದೇಹೇಂದ್ರಿಯಾಂತರಂಗವನೇತಿಗಳಿದು ಸಂದೇಹದಲಿ ಕೂಟಸ್ಥ ನೀನೆಂಬುದರಿಯದೆಮಹಾ ವಿಚಾರಿಸಿ ಭಕ್ತ ಸುಲಭನೆ ದಾಟಿಸೈ ಮೋಹಸಾಗರವನೆನುತಾಪಾಹಿ ನೊಂದೆವು ಸಂಸ್ಕøತಿಯ ಬಂಧದಲಿ ನಮ್ಮಬೇಹುದೈಪಾಲಿಸಲು ಯೋಗನಿದ್ರೆಯ ಬಿಟ್ಟುದಾಹರಿಸು ವೇದಾಂತಗೋಪ್ಯವನೆನುತ ನತಸಮೂಹ ಕಾದಿದೆ ಕೃಪಾಳು ಸ್ವಾಮಿ 3ಕೇಳಿ ಭಕುತರ ದೈನ್ಯ ಸಲ್ಲಾಪಗಳನಿಂತುಲೀಲಾವತಾರ ಗುರುರಾಯನೊಲಿದೆದ್ದವರಲಾಲಿಸುತ ಧನ್ಯರಾದಿರಿ ಸನ್ಮತಿಯೊಳಿಂತು ಮೇಳಾಪವಾುತೆನುತಾಬಾಲರಿರ ನಿಮ್ಮನಂತಃಕರಣದ ಧ್ಯಾನಜಾಲಸುತ್ತಿರಲಾಗಿ ನಿಮ್ಮ ನಿಜವನು ಮರೆದುಕಾಲಕರ್ಮಾಧೀನವಾಗಿ ನೊಂದಿರಸತ್ಯವೀ ಲೋಕವೆಂದರಿಯದೆ ಎನಲು ಗುರುವೇ 4ಜೀವೇಶ್ವರರ ವಾಚ್ಯ ಲಕ್ಷ್ಯಾರ್ಥವನು ನಿಚ್ಚ ಭಾವಿಸುತ ಬ್ರಹ್ಮ ಕೂಟಸ್ಥರೆಂದವರಿಗೆ ಸ್ವಭಾವದಿಂ ಭೇದವಿಲ್ಲೌಪಾಧಿಕವಿದೆಂದು ಸಾವಧಾನದಲಿ ತಿಳಿದೂನಾವೆ ಪರಿಪೂರ್ಣಾತ್ಮರೆಂದು ಬೋಧಾಮೃತವಸೇವಿಸಿದಡನುದಿನಂ ಕೃತಕೃತ್ಯರಹಿರೆನಲ್‍ದೇವ ಕೃತಕೃತ್ಯರಾದೆವು ನಮೋ ಎನುತ ಸ್ವಭಾವ ಪದದಲಿನಿಂದರೂ ಸ್ವಾಮೀ 5
--------------
ಗೋಪಾಲಾರ್ಯರು
ಬೋಧ ಸದ್ಗುರು ಜಿತಮದನ ಪ ಬಾದರಾಯಣ ವೈದೇಹಿ ಚರಣಾಬ್ಜಾ ರಾಧಕ ನಮಿಪೆ ಸನ್ಮೋದವಿತ್ತು ಕಾಯೊ ಅ.ಪ. ಶ್ರೀ ಮಧ್ವ ಮತವಾರಿಧಿ ಸೋಮ | ದ್ವಿ ಜ ಸನ್ನುತ ಗುಣಧಾಮಾ ಕಾಮಿತಜನ ಕಲ್ಪಭೂಜ ವಿಬುಧ ಸು ಪ್ರೇಮ ಸಂಯಮಿಕುಲೋದ್ಧಾಮ ದಯಾಂಬುಧೇ ಗೋಮಿನೀವಲ್ಲಭನ ಪದಯುಗ ತಾಮರರಸಗಳನನುದಿನದಿ ಬಿಡ ದೇ ಮನಾಬ್ಜದಿ ಭಜಿಸುತಿಪ್ಪಮ ಹಾ ಮಹಿಮ ತುತಿಸಿಬಲ್ಲನೆ 1 ದೀನಜನರ ಬಂಧು ನಿನ್ನಾ | ಪಾದ ಕಾನೆರಗುವೆ ಸುಪ್ರಸನ್ನಾ ದಾನ ಮಾನಗಳಿಂದ ಜ್ಞಾನಿಜನರಿಗೆ ಮ ಹಾನಂದ ಬಡಿಸುತ ಸಾನುರಾಗದಿ ನಿತ್ಯಾ ಶ್ರೀ ನಿಕೇತನ ಪರಮ ಕಾರು ಣ್ಯ ನಿವಾಸ ಸ್ಥಾನನೆನಿಪ ಮ ಹಾನು ಭಾವ ಭಗವತ್ಪದಾಂಭೋ ಜಾನುಗರೊಳೆನ್ನೆಣಿಸಿ ಪಾಲಿಸು 2 ಸತ್ಯಪ್ರಿಯರ ಕರಕಮಲ | ಜಾತ ನಿತ್ಯ ನಿರ್ಜಿತ ಘೋರ ಶಮಲಾ ಚಿತ್ತಜಪಿತ ಜಗನ್ನಾಥ ವಿಠಲನ ಚಿತ್ತಾನುವರ್ತಿಗಳಾಗಿ ಸಂಚರಿಸುತಾ ಅತ್ಯಧಿಕ ಸಂತೋಷದಲಿ ಪ್ರತ್ಯರ್ಥಿಗಳಿಗುತ್ತರಿಸಿ ಮಿಗೆ ಪುರು ಷೋತ್ತಮನೆ ಪರನೆಂದು ಡಂಗುರ ವೆತ್ತಿ ಹೊಯ್ಸಿ ಕೃತಾರ್ಥನೆನಿಸಿದ 3
--------------
ಜಗನ್ನಾಥದಾಸರು
ಬೋಧಕರಾರೊ ಲೋಕದೀ ದಾಸಗೆ ಬಾಧಿಪ ದುರಿತಗಳ ದೂರ ಮಾಡಿ ಮಾಧವ ನೀನೆ ದಯವು ಮಾಡಲಿ ಬೇಕೊ ಸಾಧಕ ಸಾಧ್ಯನೊ ನೀನು ಸ್ವಾಮಿ ಪ ಓದಲು ಮೊದಲಿಲ್ಲ ಕೇಳಿ ಶಾಸ್ತ್ರಗಳಿಲ್ಲ ಮೋದಿಸುವ ಮಾತ್ರ ಭಕ್ತರ ಕಡು ಮೋದತೀರ್ಥರ ಮತ ಇವನಿಗೆ ತಿಳುವಂತೆ ಕರವ ಪಿಡಿಯೊ 1 ಆಲಸಬಟ್ಟನು ಇವ ನಿನ್ನ ಪೂಜಿಗೆ ತಕ್ಕ ಕೆಲಸವ ಮಾಡಲು ಮೊದಲರಿಯ ಒಲಿಸಬೇಕೆಂದು ಮನದಿ ಹಂಬಲಿಸು ಚಲಿಸದ ಮನ ಮಾತ್ರಕೆ ಕೊಡಲಿಬೇಕು 2 ಭಾರ ನಿನ್ನದು ಸ್ವಾಮಿ ಆಸರಾಗಲಿ ಬೇಕು ಒಬ್ಬರಿಗೆ ದಾಸ ಮತ್ತೊಬ್ಬ ಎಂದು ನಿನ್ನಯ ಕ್ಲಪ್ತ ವಾಸುದೇವವಿಠಲ ನೀನರಿಯದೇನೊ 3
--------------
ವ್ಯಾಸತತ್ವಜ್ಞದಾಸರು
ಬೋಧದ ಘನಮಳೆಯುಸುರಿದು ಮುಕುತಿಬೆಳೆಯು ಬಂದುದು ಪ ಮಾಯೆಯ ಬಲು ಬಿಸಿಲುತಾಪ ಕಾಯದೊಳಗೆ ಹೆಚ್ಚುತಿರಲು ಹೇಯವೆನಿಸಿ ಜನನಮರಣ ಮುಮುಕ್ಷುತ್ವ ಮೋಡಗವಿದು 1 ಸುವಿಚಾರದ ಮಿಂಚು ಹೊಳೆದು ಶ್ರುತಿಶಿರಗಳ ಗುಡುಗು ಹೊಡೆದು ಶ್ರವಣದ ಸುಳಿಗಾಳಿ ಬೀಸಿ ಭವತಾಪವ ಹರಿಸುತಿರಲು 2 ವೈರಾಗ್ಯದ ರಂಟೆ ಹೊಡೆದು ಶಮೆದಮೆಗಳ ಹರತೆಯಾಗಿ ಪರಮಾರ್ಥದ ಬೀಜ ಬಿದ್ದ ನರಜನ್ಮದ ಹೊಲದ ಮೇಲೆ 3 ದೃಷ್ಟಿಯೊಳಗಿನಾನಂದ ಸೃಷ್ಟಿಯಾಗಿ ತೋರಿ ಚಂದ ಶ್ರೇಷ್ಠನಾದ ಶಂಕರಗುರುವರನ ಸಹಜಕರುಣೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಬ್ಯಾಗ ಬರುವೇನೆಂದು ಸಾಗಿ ಮಧುರೆಗೆ ಹೋದ ಹ್ಯಾಗೆ ಮಾಡುವೊಣುದ್ಧವ ಭಾಗವತಪ್ರಿಯಗಿನ್ನು ಬಾಗಿ ನಮಿಸುತ ನಾವು ಉದ್ಧವ ಪ ಗೋಕುಲವಾಸ ಬಿಟ್ಟ್ಯಾಕೆ ತೆರಳಿದ ಸ್ವಾಮಿ ಈ ಕಾರ್ಯವನು ತಿಳುಹಿಸೊ ಶ್ರೀಕರ ಕಮಲಾರ್ಚಿತ ಚರಣಧ್ವಜವಜ್ರ- ರೇಖಪಾದವ ಚಲಿಸಿದ ಪಾಕಶಾಸನಪ್ರಿಯನು ಪರಮ ನಿರ್ದಯ ಮಾಡಿ ಉದ್ಧವ 1 ಯಂತ್ರಮಾಯದಲಿ ಶ್ರೀಕಾಂತನೊಲಿಸುವುದಕ್ಕೆ ಮಂತ್ರವನು ಮಾಡರಿಯೆವೊ ಅಂತರಂಗದಲಿ ಅನಂತಗುಣ ಸ್ತುತಿಸಲೇ- ಕಾಂತ ಭಕ್ತರಲ್ಲವೊ ನಿಂತು ನಿತ್ಯಾನಂದಮೂರ್ತಿಯ ನೋಡದಲೆ ಉದ್ಧವ 2 ಅತಿಕ್ರೂರನೆನಿಸುವಕ್ರೂರ ಬಂದು ನಮಗ- ಹಿತಮಾಡಿ ಪೋದನಲ್ಲೊ ಮತಿಹೀನರಾಗ್ಹರಿಯ ರಥವ ನಿಲಿಸದಲೆ ಮುಂ- ದೆತನ (ಯತ್ನ ?) ಮರಿಯದೆ ನಿಂತೆವೊ ಪೃಥಿವಿ ಒಳಗಿಂಥ ಗೋಪಿಕಾಸ್ತ್ರೀಯರೆಂದು ಭಾಳಪ- ಉದ್ಧವ 3 ಸಕ್ಕರೆಯಂಥ ಸವಿಮಾತನಾಡುತ ನಮಗೆ ದಕ್ಕಿದಕ್ಕದಲ್ಹೋದನೊ ಮತ್ತೇನು ಪೇಳೋಣ ಮಂದಭಾಗ್ಯರು ಹರಿಯ ದಕ್ಕಿಸಿಕೊಳ್ಳದ್ಹೋದೆವೊ ಸಿಕ್ಕರೆ ಧನವು ಶತಸಾವಿರ ಕೊಪ್ಪರಿಗೆ ಅಷ್ಟ- ಉದ್ಧವ 4 ಮಡದಿಯರು ಕೇಳಿಗೆ ಮಧುರಾಪಟ್ಟಣದಂಥ ಚೆದುರೆಯರು ನಾವಲ್ಲವೊ ಮದನನಾಟಕೆ ಮದಗಜಗಮನೇರಿಗಿನ್ನು ಮುದದಿ ಮರುಳಾಗಿಪ್ಪನೊ ವಿಧಿ ಬರೆದನೇನೆಂದರೀ ನಮ್ಮ ಪಣೆಯಲ್ಲಿ ಉದ್ಧವ 5 ಮಲ್ಲರನೆ ಮಡುಹಿದ್ದ ಮಾವನ್ವೈರಿಯು ನಮ್ಮ ಕೊಲ್ಲಿ ಪೋದಂತಾಯಿತೊ ಸಲ್ಲ ನಡತೆಯ ಸೊಟ್ಟಕುಬ್ಜೆಗೆ ಕಡೆಯು ನಾ- ವಲ್ಲವೆಂದವಗೆ ಪೇಳೊ ನಿಲ್ಲದ್ಹೋಗ್ಹಿಂದಕೆ ಸುಳ್ಳಲ್ಲೊಂದು ಬೆರೆಸದಲೆ ಉದ್ಧವ 6 ಕಲ್ಲಾಗದೀವಿಧಿಯ ಕಾಮನಪಿತನಗಲಿ ಸೊಲ್ಲು ಸೊಲ್ಲಿಗೆ ಬಳಲ್ದೆವೊ ಮಲ್ಲಿಗ್ವೊಣಗಿದ ದಾರದಂತೆ ಗೋವ್ರಜಮೂಲೆ- ಯಲ್ಲಿ ನಾವಿರಲಾರೆವೊ ಎಲ್ಲಿ ಬಂದೊದಗಿತೀ ಬಿಲ್ಲ ್ಹಬ್ಬನಮಗೆ ಭೀ- ಉದ್ಧವ 7
--------------
ಹರಪನಹಳ್ಳಿಭೀಮವ್ವ
ಬ್ರಹ್ಮಣ್ಯ ತೀರ್ಥ ಗುರು ರಾಜಾ | ನಿನ್ನನಮ್ಮಿದೆನೊ ಭಾಸ್ಕರ ಸುತೇಜಾ | ಭಾವಿಬೊಮ್ಮ ಮತವರುಹಿ ಮಹೋಜಾ | ಸಲಹೊಪ್ರಮ್ಮೇಯಂಗಳ ನಿಧಿಯ ಸಹೋಜಾ ಪ ಓದ್ದಾಡುತಿಹೆನೊ ಈ ಭವದೀ | ಸುಖಗದ್ದುಗೆಯನೇರ್ವಂಥ ಹಾದೀ | ತೋರಿಉದ್ಧರಿಸೊ ಬಲು ಕೃಪಾಜಲಧೀ | ಗುರುವೆಶುದ್ಧ ಬುದ್ಧಿಯ ನೀಯೊ ಮುದದೀ 1 ಯಾತ್ರೆಗಳ ಮಾಡ್ದೆನೆಂಬ | ಬಿಂಕದ್ವಾರ್ತೆಯೊಂದಲ್ಲದಲೆ ಇಂಬ | ಕಾಣೆಕ್ಷೇತ್ರ ಮೂರ್ತಿಯ ಕಾಂಬನೆಂಬ | ಆಶೆಪೂರ್ತಿ ಮಾಡೆನ್ನ ಗುರು ಬಿಂಬ 2 ಧನವನಿತೆ ವಿಷಯದಲ್ಲೀ | ಬಹಳ ಮನ ಮಾಡಿ ನೊಂದೆನಲ್ಲೀ | ಹರಿಯಮನ ಮುಟ್ಟೊ ಭಜಿಸು ಎಂಬಲ್ಲೀ | ಇನ್ನುಘನ ಜ್ಞಾನ ಭಕುತಿ ಇಲ್ಲಲ್ಲೀ 3 ಜೀವಗೆಲ್ಲಿಯ ಸ್ವತಂತ್ರಾ | ಹರಿಗುರುತಾವಲ್ಲಿ ಮಾಡುತಿಹ ತಂತ್ರ | ದಿಟವಿದುಜೀವನೇ ಮಾಳ್ಪುನೆಂಬುದೆ ಕುತಂತ್ರ | ತಿಳಿಸೊಭಾವ ಜಾನಯ್ಯನ ಸ್ವತಂತ್ರ 4 ಸಾರ ವ್ರಾತ | ತಿಳಿಸೊಜ್ಞಾನ ನಿಧಿ ಪುರುಷೋತ್ಮ ತಂತ್ರ 5 ಕಾರಕ ಕ್ರಿಯ ದ್ರವ್ಯವೆನಿಪ | ಭ್ರಮವುಮೂರರಿಂದಲಿ ದೂರ ಮಾಳ್ಪ | ಮಾರ್ಗತೋರಿಸಲಹುವುದು ಯತಿ ಭೂಪ | ತವಪದವಾರಿ ಜತೆ ಈ ನೀಚ ಬೀಳ್ಪ 6 ತ್ರ್ಯಕ್ಷಾಂಶ ಭೂತರಾದ | ಸನ್ಯಾಸಿಅಕ್ಷೋಭ್ಯ ಕರಜರಾದ | ಅಜೇಯಇಕ್ಷುಚಾಪನ್ನ ಗೆಲಿದ | ಜಯಾರ್ಯಭಿಕ್ಷುವಿನ ಮಾರ್ಗರಾದ7 ಮೋದ | ಪಡೆವದಾಯ ತೋರಿದಿ ನಿರ್ವಿವಾದ | ಇನ್ನುಗಾಯನದಿ ಮಹಿಮೆ ಅಗಾಧ | ಪೇಳ್ವಆಯತವ ನೀಯೋ ಸುಭೋಧ 8 ಬೃಹತೀ ಸಹಸ್ರ ಮಂತ್ರ | ಜಪಿಪಮಹಯೋಗದಾತ ಮಹಾಂತ | ಬೇಡ್ವೆಬೃಹತಿನಾಮಕನು ಎಂಬಂಥ | ಹರಿಯಮಹ ಮಹಿಮೆ ಕಂಡು ಹಿಗ್ವಂಥ 9 ಸೃಷ್ಟ್ಯಾದಿ ಅಷ್ಟಕಗಳ | ಗೈವಕೃಷ್ಣನ್ನ ಮಹಿಮೆಗಳ | ಕೇಳಿಹೃಷ್ಟರಾಗುವ ಜನಗಳ | ಸಂಗಕೊಟ್ಟುದ್ಧರಿಸೊ ನಮ್ಮಗಳ 10 ಸದನ 11
--------------
ಗುರುಗೋವಿಂದವಿಠಲರು
ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆಬ್ರಹ್ಮ ಪರಾತ್ಪರ ಬ್ರಹ್ಮ ತಾನೇ ಪ ಕಾಲು ಕಣ್ಣು ಕೈ ಬಾಯಿ ಕಿವಿ ಮೂಗು ತಾಳಿಕೊಂಡುಕಾಲವನಿಲ್ಲಿಯೆ ಕಳೆಯಲು ಬಂದ ಗುರುಮೂರ್ತಿಮೂಲಾಧಾರನೆಂದು ತಿಳಿದುಕೊಳ್ಳಿರಾ ಬ್ರಹ್ಮ ತಾನು 1 ಪುತ್ರ ಮಿತ್ರರರು ಕಳತ್ರರಾಗಿ ಬಂಧುವಾಗಿನಿತ್ಯದಾಟವ ಇಲ್ಲಿ ಕಳೆಯಲು ಬಂದ ಬ್ರಹ್ಮ ತಾನೇ2 ಆಪವಿರಲು ಚಂದ್ರನು ಬಂದ ತೆರನಂತೆಉಪಾಧಿಯಿಂದ ಚಿದಾನಂದ ಬಂದ ಬ್ರಹ್ಮತಾನೇಉಪಾಧಿಯಿಂದ ಚಿದಾನಂದ ಬಂದ ಗುರುಮೂರ್ತಿಉಪಾಧಿ ಹರನೆಂದು ತಿಳಿದುಕೊಳ್ಳಿ ಬ್ರಹ್ಮತಾನೆ3
--------------
ಚಿದಾನಂದ ಅವಧೂತರು
ಬ್ರಹ್ಮವೆತ್ತಲು ಪರಬ್ರಹ್ಮವೆತ್ತಲುಬ್ರಹ್ಮ ತಾವೆಯೆಂದು ವಾಚಾಬ್ರಹ್ಮವನೆ ಬಗಳುತಿಹರಿಗೆ ಪ ಆಸೆಯೆಂಬದು ಅಳಿಯಲಿಲ್ಲ ಆಕಾಂಕ್ಷೆತಾ ಕಳೆಯಲಿಲ್ಲಪಾಶವೆಂಬುದು ಬಿಗಿದು ಉರುಲು ಬಿದ್ದಿಹುದುದೋಷವೆಂಬುದು ಅಡಗಲಿಲ್ಲ ದುಷ್ಕøತವೆಂಬುದು ಒಣಗಲಿಲ್ಲಕ್ಲೇಶ ಪಂಚಕದ ವಿಷಯದಿ ಕೆಡೆದಿಹ ಮನುಜರಿಗೆ 1 ಕಾಮವೆಂಬುದು ಕಡಿಯಲಿಲ್ಲ ಕ್ರೋಧವೆಂಬುದು ಅಳಿಯಲಿಲ್ಲತಾಮಸವೆಂಬುದು ಶರೀರ ತುಂಬಿಕೊಂಡಿಹುದುಕಾಮಿತವೆಂಬುದು ಹೋಗಲಿಲ್ಲ ಕಷ್ಟವೆಂಬುದು ನೀಗಲಿಲ್ಲಪಾಮರರಾಗಿ ದಾಹಕೆ ಸಿಕ್ಕುಬಿದ್ದಿಹ ಮನುಜರಿಗೆ2 ಮೋಹವೆಂಬುದು ಹರಿಯಲಿಲ್ಲ ಮೂರ್ಖತೆಯೆಂಬುದು ಕರಗಲಿಲ್ಲಊಹೆ ಎಂಬ ಕುಬುದ್ಧಿಯು ಉಡುಗಲಿಲ್ಲದೇಹ ಶೋಧನೆ ತಿಳಿಯಲಿಲ್ಲ ದೇಹಿ ಚಿದಾನಂದ ಅರಿಯಲಿಲ್ಲಕಾಹುರ ಮದದಲಿ ಮರೆತಿಹ ಮಂಕುವನು ಮನುಜರಿಗೆ 3
--------------
ಚಿದಾನಂದ ಅವಧೂತರು
ಬ್ರಹ್ಮಾಗಿ ತನ್ನ ಕಾಣೆ ಬ್ರಹ್ಮವಲ್ಲವೆ ಪ ಕೀಟ ಭೃಂಗವ ಹೊಂದಿ ಕೀಟ ಭೃಂಗವಾಗಲುಕೀಟವ ನೆನೆಸಲುಂಟೆ ಭೃಂಗದಲ್ಲಾದಕೂಟ ಪ್ರಾಣವೆ ಹೋಗಿ ಘಾಟಿ ಬ್ರಹ್ಮದಲಿರೆಕೂಟ ಪ್ರಾಣವದೆನಲುಂಟೆ ಬ್ರಹ್ಮನಲ್ಲದೆ 1 ಕರ್ಪೂರದುರಿಯ ಸೋಂಕಿ ಕರ್ಪುರ ಉರಿಯಾಗಲುಕರ್ಪೂರವ ನೆನಸಲುಂಟೆ ಉರಿಯಲ್ಲದೆಇಪ್ಪ ಇಂದ್ರಿಯ ಹೋಗಿ ಅಪ್ಪಟ ಆತ್ಮನಾಗೆಇಪ್ಪ ಇಂದ್ರಿಯ ಎನಲುಂಟೆ ಬ್ರಹ್ಮನಲ್ಲದೆ 2 ತೊತ್ತು ಅರಸನಸೇರಿ ತೊತ್ತು ಅರಸನಾಗಲುತೊತ್ತುತನವ ನೆನಸಲುಂಟೆ ಅರಸಲ್ಲದೆಚಿತ್ತವೆಂಬುದು ಹೋಗಿ ಶುದ್ಧ ಆತ್ಮವ ದಾಗೆಚಿತ್ತವೆನಲುಂಟೆ ಬ್ರಹ್ಮವಲ್ಲದೆ3 ಲವಣ ನೀರನು ಕೂಡಿ ಲವಣನೀರಾಗಲುಲವಣ ನೆನಸಲುಂಟೆ ನೀರಲ್ಲದೆಸವನಿಸೆ ಮನವದು ಶಿವನಾಗಿ ವರ್ತಿಸೆಸವನಿಸೆ ಮನ ಎನಲುಂಟೆ ಬ್ರಹ್ಮವಲ್ಲದೆ 4 ಶರೀರ ತನ್ನದು ಎಲ್ಲ ಶರೀರ ಗುರುವಿನದಾಗೆಶರೀರ ತಾನೆ ಎನಲುಂಟೆ ಗುರುವಲ್ಲದೆನರನು ಚಿದಾನಂದ ಗುರುವಾಗಿ ತನ್ನ ಕಾಣೆನರನು ಎನಲುಂಟೆ ಬ್ರಹ್ಮವಲ್ಲದೆ5
--------------
ಚಿದಾನಂದ ಅವಧೂತರು