ಒಟ್ಟು 2161 ಕಡೆಗಳಲ್ಲಿ , 110 ದಾಸರು , 1442 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ
ಮರೆಯುವರಾರೆ ಶ್ರೀ ಮುರಳೀಧರನ ಕಂಡು ವರವ ಬೇಡದವರಾರೆ ಪಡೆಯದವರಾರೆ ಪ ಮುರಳೀದನಿಯ ಕೇಳಿ ಪರಿದೋಡದವರಾರೆ ಅವನೆಡೆ [ಪರಮಸುಖ] ಪಡೆಯದವರಾರೆ ಅ.ಪ ಕಂಜನಾಭನು ಬಂದು ಪುಂಚವನದಿ ನಿಂದು ಮಂಜುಳಗಾನವ ಮಾಡುತಿರೆ ಅಂಜುವರೇನೆ ನಿರಂಜನನವ ಪಾಪ ಭಂಜಕನೇ ತಂಗಿ ಹೋಗೋಣ ಬಾರೆ 1 ಮಂಗಳಮೂರ್ತಿ ಮಾತಂಗವರದ ಭವ ಭಂಗನ ಚರಣವ ನೋಡುವ ಬಾರೆ ಮಂಗಳ ಜಯ ಜಯ ಮಂಗಳ ಮಾಂಗಿರಿ ರಂಗಗೆ ಶುಭವೆಂದು ಪಾಡುವ ಬಾರೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮರೆವಾರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ಕರೆದು ಕಾಮಿತಗಳ ಕರವೆ ನಾ ನಿನಗೆಂದು ಪ ದಾರಿಯ ತಪ್ಪಿ ಪೋಗುವ ಧೀರ ಫೋರನ್ನ ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ ಊರಿನವೊಳಗೆ ಅವನ ಆಗಾ ದೂರ ನೋಡುವರೆ ದೋಷಗಳ ವಿಚಾರಮಾಡುವರೆ ಧೀರರು ಆವ ಪರಿಯಲವನ ಪಾರಗಾಣಿಪರಲ್ಲದೆ 1 ಹಸಿದು ಪರರ ಕೇಳದ ದ್ವಿಜವರಿಯನ್ನ ಶಿಶುವಿನ ನೋಡಿ ದಯದಿಂದ ಕರದಿನ್ನು ಹಸಿದ್ಯಾಕೊ ಎಂದು ಪಾಕವ ಮಾಡಿ ಹಸನಾಗಿ ತಂದು ಬಡಿಸುವ ಅವಸರದಿ ನಿಂದು,ಅವನ ದೋಷ ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2 ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ- ಕುಲ ತರಳನನು ನೋಡಿ ಕೃಪೆಯಿಂದ ಸುರನದಿ ಜಲವನೀವೆನೆಂದು ಬ್ಯಾಗನೆ ದಿವ್ಯ ಕಲಶವ ತಂದು ಬಾರೆಲೊ ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ ತೊಳಿಯ ಕೊಡುವೆನೆಂದು ತಡವ ಮಾಡುವರೆ 3 ಸುಶರೀರ ತನುವನು ಮನದಲಿ ಬಯಸಿ ತಾ ಉಸರದ ಮುನಿತನಯನ ಕಂಡು ತಾವಾಗಿ ಕುಶಲವ ಕೇಳಿ, ದೇವತ ವೈದ್ಯ ಅಸಮರೆಂದೇಳಿ, ರಸ ಮಾಡೆಂದೇಳಿ, ಅವಗೆ ದಿವ್ಯ ರಸವನು ಪೇಳಿ, ಪಸಿ ನಿನ್ನಲಿದ್ದಾ ಕಿಸರು ಪೋದರೆ ಕೊಡುವೆವೆಂದು ನಿಲುವರೆ 4 ಅರ್ತಿಯ ಭಕುತನ್ನ ನೋಡೀಗ ನಿನ ದಿವ್ಯ ಕೀರ್ತಿಯ ನೋಡಿಕೊ, ವಾಸುದೇವವಿಠಲನ ಮೂರ್ತಿಯ ಭಜಕ ಭಕ್ತರಾಭೀಷ್ಟ ಪೂರ್ತಿಗೆ ಜನಕ ನಿನ್ನಯ ಗುಣ ಸ್ಫೂರ್ತಿಗೆ ಜನಕ, ನಿನ್ನಯ ಗುಣ ಸ್ಫೂರ್ತಿ ಉಳ್ಳನಕ ಪಾಪದ ಲೇಶ ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5
--------------
ವ್ಯಾಸತತ್ವಜ್ಞದಾಸರು
ಮರೆವಾರೇನೋ ನಿನ್ನ ನೀನು ಗುರುತಾ ನೆಲೆ ಮಾಡದೆ | ಸಿರಿಯರಸನಸಿರಿ ಚರಣವ ಸ್ಮರಿಸದೇ | ನರದೇಹ ಬರಡವ ಮಾಡುವರೆ ಜಾಣಾ ಪ ಹಲವು ಪುಣ್ಯದಿಂದಲ್ಲದೇ ಸುಲಭದಲ್ಲಿ ಜನ್ಮವು | ಇಳೆಯೊಳಗುದಯಿಸಿ ತಿಳಿಯದೆ ಸ್ವಹಿತದ | ಬಳಿಕೆಯ ನೆರೆಭವ ಬಲಿಯೊಳು ಸಿಲುಕಿ | ತೊಳಲುತ ನಿಶಿದಿನ ಬಳಲುವೆ ಜಾಣಾ 1 ಅವಗತಿಯೋ ಎನಗೆ ಮುಂದಾ | ಆವ ಜನಮ ವಿಹುದೋ | ವಿವೇಕದಿಂದ ವಿಚಾರಿಸಿ ಮನದೊಳು | ಭಾವಿಸಿ ಗುರುವಿನ ಪಾವನ ಪಾದಾ | ಭಾವಭಕುತಿಯಲಿ ಸಾವಧನನಾಗದೆ | ಹ್ಯಾವಹೆಮ್ಮೆಲೆ ದಿನಗಳೆದೇ ಜಾಣಾ 2 ಬದಿಯಲ್ಲಿದ್ದಾ ವಸ್ತುವನು | ಸದಗಾನಾದ್ಯೋ ಕಾಣದೆ | ಸಾಧುರ ಕೈಯಲಿ ಹಾದಿಯ ಕೇಳೆಲೋ | ಸಾದರದಲಿ ನಿಜ ಸಾಧನ ಬಲಿದು | ಭೇದಿಸು ಮಹಿಪತಿನಂದನ ಸಾರಿದಾ | ಗಾದಿಯನ್ನದೆ ಗತಿ ಸಾಧಿಸೋ ಜಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರ್ಮವ ತಿಳಿದವಗೆ ಈ ಕಾಯದ ಕರ್ಮದ ಗೊಡವೆಯುಂಟೇ ನಿರ್ಮಲಾತ್ಮಕಗೆ ಸಮರ್ಪಣೆಯೆಂಬ ಸ್ವ ಧರ್ಮ ಮೂಲ ಮಂತ್ರ ಸೋಹಂವೆಂದೆಂಬ ಪ ಜ್ಯೋತಿ ಹಸ್ತದೊಳಿರಲು ಕತ್ತಲೆಗೆ ಬ ದ್ಯೋತವ ಬಯಸುವರೇ ಪಾತಕ ಪುಣ್ಯ ಶುಭಾಶುಭವೆಂಬ ವಿ ಘಾತಿಯಾಗುವ ಅವಧೂತ ಮಂತ್ರವೆಂಬ 1 ಶರೀರಾತ್ಮಗ್ರಹವು ಪೂಜೆಗೆ ಸಹಜ ಪರಿಪರಿ ವಿಷಯ ಭೋಗಾ ನಿದ್ರೆ ಸಮಾಧಿ ಸಂಚಾರ ಪ್ರದಕ್ಷÀಣೆ ನಿರುತ ಆಡುವ ವಾಣಿ ಸ್ತೋತ್ರಗಳೆಂದೆಂಬ 2 ಬರಿದೆ ಕಾಯದ ಸುಖವು ಕರ್ಮಾ ಕರ್ಮ ಪರಿಪೂರ್ಣಾತ್ಮಕಗರ್ಪಿಸಿ ಗುರು ವಿಮಲಾನಂದಭರಿತನಾಗಿಹ ಮಂತ್ರೋ ಚ್ಚರಣೆಯೊಳಿರುವುದು ದೊರಕೊಂಡನೆಂದೆಂಬ 3
--------------
ಭಟಕಳ ಅಪ್ಪಯ್ಯ
ಮಲಗಲೇತಕೆ ಹರಿಯೆ | ಚಲುವ ಚನ್ನಿಗ ದೊರೆಯೆ ಪ ಎಲರುಣೀವರ ಶಯ್ಯ | ಬಳಲಿಕೇಕಯ್ಯಾ ಅ.ಪ. ವೇದ ಕದ್ದನ ಹರನೆ | ಭೂಧಾರಿ ಗಿರಿಧರನೆಭೂದರಿಸಿ ಭೊಮ್ಮನಿಗೆ | ಆದರದಿ ಕೊಟ್ಟವನೇ |ಭಾದಿಸೇ ಭಕ್ತ ಪ್ರ | ಹ್ಲಾದನನ ಕಾಯ್ದವನೆಮೋದದಿಂದಲಿ ಬಲಿಯ | ಪಾದವಾ ಮೆಟ್ಟಿದನೆ 1 ಗಂಡು ಗೊಡಲಿಯ ಪಿಡಿದು | ಭಂಡ ಭೂಭುಜ ತರಿದುಲಂಡ ರಾವಣ ಶಿರ | ಚೆಂಡಾಡಿದ ಧೊರೆಯೇಕಂಡ ಕಂಡವರ ಮನೆ | ಗಂಡಲೆದು ಪಾಲ್ಮೊಸರಉಂಡುಂಡು ಚೆಲ್ಲಾಡಿ | ಭಂಡು ಮಾಡಿದೆ ಕೃಷ್ಣ 2 ಮುಪ್ಪೊರರ ಸತಿಯರನು | ಅಪ್ಪಿ ವ್ರತ ಭಂಗವನುತಪ್ಪದೇ ಮಾಡಿ ಹಯ | ವಪ್ಪಿ ಏರ್ದವನೇಇಪ್ಪರಿಯ ಚರ್ಯ ದಿಂ | ಸೊಪ್ಪಾಗಿ ಮಲಗಿದೆಯೋಗುಪ್ತ ಮಹಿಮನೆ ದೇವ | ಅವ್ವ ಶ್ರೀರಂಗ ಪುರಗ 3 ಕ್ಲೇಶ 4 ಪೂರ್ವ ವಾಹಿನಿ ಎನಿಪ | ಕಾವೇರಿ ತೀರಗನೆಪೂರ್ವದಿವಿಜರ ಹರನೆ | ಸಾರ್ವಭೌಮಾಊರ್ವಿ ಯೊಳ್ಪೆಸರಾದ | ಪಾರ್ವ ಗೌತಮ ವರದಕೋರ್ವೆ ತವ ಚರಣ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮಲಗು ಮಲಗಯ್ಯ ಹನುಮ ಕಲಿಭಂಜನ ಭೀಮ ಜಲಧಿ ಅಲವಬೋಧನಾಮಾ ಜೋ ಜೋ ಪ ತ್ರೇತೆಯಲಿ ರಾಮದೂತನಾಗಿ ನೀ ಬಂದು ಭೀತಿಯಿಲ್ಲದೆ ಲಂಕೆಯ ದಹಿಸಿದೆಯೊ ಅಂದು ಸೀತೆಯಿತ್ತಂಥ ಚೂಡಾಮಣಿಯನು ತಂದು ಪ್ರೀತಿಪಡಿಸಿದೆ ರಾಮನ ನೀ ದಯಾಸಿಂಧು 1 ದ್ವಾಪರಾಂತದಲಿ ಭೀಮನಾಗಿ ನೀ ಬಂದೆ ಪಾಪಿ ಕೀಚಕ ದುಶ್ಶಾಸನಾದ್ಯರ ಕೊಂದೆ ಸಿರಿ ಕೃಷ್ಣನ ಪಾದಕೆರಗಿ ನಿಂದೆ ಭಾಪು ಭಾಪುರೆಂದೆನಿಸಿಕೊಂಡೆ ಅವನಿಂದೆ 2 ನಾನೆ ದೇವರೆಂಬ ಮತವನು ಹೆಮ್ಮೆಯಿಂದ ದಾನವರೀ ಕಲಿಯುಗದಲಿ ಪೊಗಳೆ ಮುದದಿಂದ ನೀನವತರಿಸಿ ಮಧ್ವಮುನಿ ಪೆಸರಿನಿಂದ ಹೀನ ಮತವ ಮುರಿದೆಯೊ ವಾಗ್ಭಾಣಗಳಿಂದ 3 ಏಕಾದ್ಯಶ ಕರ್ಮಗಳ ಶ್ರೀ ಹರಿಗರ್ಪಿಸಿ ಆತನನು ನೀ ಬಹು ಸಂತೋಷವನುಪಡಿಸಿ ಜಾತರಹಿತನಾಗೆನುತ ಆಶಿಷವ ವಹಿಸಿ ವಾತಸುತ ಕುಳಿತಿಹೆ ಯಂತ್ರೋದ್ಧಾರನೆನಿಸಿ 4 ಕಂಗಳನು ಮುಚ್ಚಿ ಜಪಮಾಲೆಯನು ತಿರುಗಿಸುತ ರಂಗೇಶವಿಠಲನ ತಾನದೊಳು ಸ್ಮರಿಸುತ ಹಿಂಗೇಕೆ ಕುಳಿತಿಹೆ ಮಲಗೇಳಯ್ಯ ದಾತ ತುಂಗ ವಿಕ್ರಮ ನೀನು ತ್ರಿಭುವನದಿ ಪ್ರಖ್ಯಾತ 5
--------------
ರಂಗೇಶವಿಠಲದಾಸರು
ಮಲ್ಲಮರ್ಧನ ರಾಣಿ - ಮಹ ಲಕ್ಷುಮೀ ಪ ಖುಲ್ಲ ಜನರೆದೆದಲ್ಲಣೆಯೆ | ಕೊಲ್ಲಾಪುರ ನಿಲಯೆ ಅ.ಪ. ಪ್ರಕೃತಿ ಚೇತಾತ್ಮೆ ಜಡ | ಪ್ರಕೃತಿ ದ್ರವ್ಯದ ಕಾರ್ಯವಿಕೃತಿ ಗೊಳಿಸುತ ಮೊದಲು | ವೈಕೃತವು ತದನಂತರಾ |ವ್ಯಕುತಿ ಗೈಯುತ ಲಿಂಗ | ಪ್ರಕೃತಿ ಕಾರ್ಯವ ಮಾಡಿಸುಕೃತ ತ್ರಿವಿಧರ ಸಹಜ | ಪ್ರಕೃತಿ ಶಬ್ದನಿಗೀವೇ 1 ಪರಿಭವ ಕಾರ್ಯನೀ ಮಾಳ್ಪೆ ಪ್ರಜ್ಞಾಂತ | ಪ್ರೇಮ ರೂಪದಲೀಈ ಮಹತ್ತುಪಕಾರ | ಸಾಮಸನ್ನುತ ಹರಿಯನೇಮದಿಂದಲಿ ಗೈವ | ಭಾಮೆಗಾ ನಮಿಪೇ 2 ಹರಿಕಾರ್ಯ ಸತ್ಸಾಧ್ಯೆ | ವಿರಜೆ ರೂಪದಿ ಹರಿಯೆ ||ವರ ಮಂದಿರಾವರಣ | ನೆರೆ ವಿರಚಿಸೀ |ಸರುವ ಸಜ್ಜೀವ ತವ | ಸರಿತದೋಲ್ ಅವಭೃತವವಿರಚಿಸಲು ಜಡ ಪ್ರಕೃತಿ | ಹರಿಸುವೆಯೆ ದಯದೀ 3 ಶ್ರೀ ಸಿತ ದ್ವೀಪಾದಿ | ಆ ಸುರೂಪವ ತಾಳಿವಾಸುದೇವನ ಸೇವೆ | ಆಶೆಯಲಿ ಗೈವೇ |ಈಸು ತವ ಮಹಿಮೆಯನು | ತೋಷದಲಿ ಸ್ತುತಿಪರಭಿಲಾಷೆ ಸಲಿಸುತ ತೋರ್ಪೆ | ವಾಸುದೇವನ ರೂಪ 4 ಸತಿ ಪತಿ ತೋರೇ 5
--------------
ಗುರುಗೋವಿಂದವಿಠಲರು
ಮಹದೇವ ಮದ್ರೋಗ ಮೂಲವಳಿಯೊ ಪ ಮಹದಾದಿಗಳ ದೈವ ಹರಿಯಲ್ಲಿ ರತಿ ನಿಲಿಸಿ ಅ.ಪ. ಸರ್ವಸಿದ್ಧನೆ ವಿಷಯ ಪರ್ವತಕೆ ಮಹಕುಲಿಶ ಕಮಲ ಭೃಂಗ ಮರ್ವೆಂಬ ಮಾರಿಯನು ಅವಳ ನೇತ್ರದಿ ಸುಟ್ಟು ಸರ್ವಾತ್ಮ ಹರಿಧ್ಯಾನಮಗ್ನ ಮನ ನೀಡೆನಗೆ 1 ತಾಳಲಾರೆನೊ ಸ್ವಾಮಿ ಕಾಳ ವಿಷಯದ ದೋಷ ಫಾಲಾಕ್ಷ ಬಿಡಿಸೈಯ್ಯ ಭೋಗದಾಸೆ ಶೀಲ ಮನದಲಿ ಹರಿಯ ಲೀಲೆ ಲಾವಣ್ಯಗಳ ಮೇಲಾಗಿ ನೋಡುವ ಮಹಕರುಣ ಮಾಡೆನ್ನ 2 ಭಾರತೀಶನ ಪಾದಕಮಲ ಮಧುಪನೆ ನಿನ್ನ ಕಾರುಣ್ಯವಾದವನೆ ಶೌರಿವಶನೊ ಮಾರಾರಿ ಮದ್ಭಾರ ವಹಿಸಿ ಪಾಲಿಸು ಎನ್ನ ಧೀರ ತವ ಚರಣಾಬ್ಜ ವಾರಿಜಕೆ ಮೊರೆ ಹೊಕ್ಕೆ 3 ಎನ್ನ ಹೀನತೆ ನೋಡಿ ಘನ್ನ ಭಯಗೊಂಡಿಹೆನೊ ಧನ್ಯರ ಮಾಳ್ಪ ದಯ ನಿನ್ನದಯ್ಯಾ ಪುಣ್ಯತಮ ಮೂರುತಿಯ ಪ್ರತಿಬಿಂಬ ಹರಿಸಖನೆ ಧನ್ಯನಾ ಮಾಡೆನ್ನ ವಿಷಯ ಜಯ ದಯಮಾಡಿ 4 ಅಮಿತ ಮಂಗಳದಾಯಿ ವಿಭವ ವಾಮದೇವ ಮಮತಾದಿ ಅಭಿಮಾನ ದೋಷವರ್ಜಿತ ಮಹಾ ಸಾಮ್ರಾಜ್ಯ ಯೋಗಕ್ಕೆ ಅಧಿನಾಥ ಕರುಣಿಪÀುವುದು 5 ಶಂಭು ಶಂಕರ ತವ ಪದಾಂಬುಜದಿ ಶಿರವಿಟ್ಟು ಹಂಬಲಿಪೆನಿಷ್ಟಪದ ಪಾಲಿಸೆಂದು ತುಂಬಿತ್ವಕ್ಕರಸನ ಹೃದಂಬುಜದೊಳರಳಿಸಿ ಮೂರ್ತಿ ದರುಶನ ನೀಡೊ 6
--------------
ಜಯೇಶವಿಠಲ
ಮಹಿಮೆ ನೋಡಿರೈ ರಾಯರ ಮಹಿಮೆ ಪಾಡಿರೈ ಪ ಜಲಜನಾಭನೊಲುಮೆ ಪಡೆದು ಇಳೆಯೊಳು ಪ್ರಖ್ಯಾತರಾದ ಅ.ಪ ರಾಘವೇಂದ್ರ ಯತಿಗಳೆಂದು ಬಾಗಿ ನಮಿಸುವವರ ಮನದ ರಾಗ ದ್ವೇಷಾದಿಗಳ ಕಳೆದು ನೀಗಿಸುವರೊ ಭವದ ಬಂಧ 1 ತಾಳ ತಂಬೂರಿಪಿಡಿದು ಭೋಗಶಯನನನ್ನು ಭಜಿಸಿ ಕೂಗಿ ಪಾಡುತಿರಲು ನಲಿದು ಬೇಗ ಪಾಲಿಸುತಲಿ ನಲಿವ2 ದೇಶದೇಶದವರು ಬಹಳ ಕ್ಲೇಶಪಡುತ ಬರಲು ಅವರ ಕ್ಲೇಶಗಳನು ಕಳೆದು ಪರಮ ಉ- ಲ್ಲಾಸ ನೀಡಿ ಪೊರೆಯುವಂಥ 3 ಸೀತಾಪತಿಯ ಪೂಜಿಸುತಲಿ ಖ್ಯಾತರಾದ ಯತಿಗಳನ್ನು ಪ್ರೀತಿಯಿಂದ ಸೇವಿಸುವರ ಪಾತಕಗಳ ಕಳೆದು ಪೊರೆವ 4 ಗಳದಿ ಹೊಳೆವ ತುಳಸಿ ಮಾಲೆ ಹೊಳೆವ ನಗೆಯ ಮುಖದ ಭಾವ ಕಮಲನಾಭ ವಿಠ್ಠಲನೊಲಿಸಿ ಹಲವು ವಿಧದಿ ಪೂಜಿಸುವರು5
--------------
ನಿಡಗುರುಕಿ ಜೀವೂಬಾಯಿ
ಮಹಿಷಿ ಎನಿಸಿಹಳೇ ಪ ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ `ಭದ್ರೆ` ಎಂದೆನುತ ಅವನಿಯಲೀ 1 ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ2 ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ3 ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ 4 ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ 5
--------------
ಗುರುಗೋವಿಂದವಿಠಲರು
ಮಾಡಿದ್ಯಾ ಇಂದಿಗೆ ಹೀಂಗ | ಆಗದ್ಹಾಂಗ || ಕೂಡಿ ದುರ್ಜನರೆಲ್ಲ ನಗುವ ಪರಿಯಲಿ ಪ ಏನು ಕಂಡು ಒಲಿದೀ ನೀ ಅವಗೆ | ಖಳನ ಘಾತಕಮನದವಗೆ | ತಾನು ದಾರೆಂದು ವಿಚಾರಿಸದಧಮಗೆ |ಸಾನುಕೂಲಾಗಿ ಸರ್ವ ಬಗೆಯಲಿ 1 ಸಾಧು ಸಂತರು ಎಂಬುದನರಿಯಾ | ಭೇದವಾದ ಕುಬುದ್ಧಿಯಮರೆಯಾ || ಕಾದಾಡಿ ಕರ್ಮದ ಹಾದೀ ಹಿಡಿಯದ | ವಾದಕಂಜದ ಜನ ಸಾಧಕನಿಗೆ 2 ಹಿಂದಿನ ಗುಣಗಳ ಬಿಟ್ಟ್ಯಾಕೋ | ಮಂದಿಗೆ ಪದವಿಯ ಕೊಟ್ಟ್ಯಾಕೋ ತಂದೆ ಸದ್ಗುರು | ಭವತಾರಕನಂಘ್ರಿಯ | ಹೊಂದಿದವರಿಗಭಿಮಾನವಿಲ್ಲದಂತೆ 3
--------------
ಭಾವತರಕರು
ಮಾಡು ನೀ ಹರಿಯ ಭಜನಿ ಪ ಹರಿಯ ಭಜನಿ ಮಾಡು ಹಲವು ಯೋಚನೆಯ ಬಿಡು ಶರಣರೊಳಗೆ ಕೂಡು ಸಿರಿಧರನ ನೋಡು 1 ಹರಿಜನರನ್ನೇ ನೋಡಿ ಅವರ ಪಾದವು ಪಿಡಿ ಶರೀರ ಸಾಧ್ಯನಿಕೆ ಮಾಡಿ ಶರಣ ತತ್ವವುಪಡಿ 2 ಸಿಂಧುಶಯನ ಹರಿ ಎಂದು ಸ್ತುತಿಸೂತೇರಿ ದಂದಗಳನೆ ಮರಿ ದೇವರೆಯೆಂದು ಇರಿ 3 ಸುರಮುನಿ ವಂದ್ಯನಾ ಸುಗುಣ ವಿಲಾಸ ನಾ ಅನುದಿನ ಭಜಿಸಿ 4 ದೇಹ-----ವೆಂದೂ ದಿನಮಾನ ತಿಳಿದಂದೂ ಮಹ ಹೊನ್ನ ವಿಠ್ಠಲ ಎಂದೂ ----- 5
--------------
ಹೆನ್ನೆರಂಗದಾಸರು
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ. ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ 1 ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ 2 ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ 3 ಆನಂದ ಜ್ಞಾನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಪಾವಕ ಪದವೊ 4 ತ್ರಿಜಗದಧಿಕ ಪಾವನನೊ ಪಂ-| ಕಜ ನೇತ್ರೆಯ ನಾಯಕನೊ || ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ 5
--------------
ವಿಜಯದಾಸ
ಮಾತು ಸವಿಯೋ ಅವರ ಮಾತು ಸವಿಯೋ ಮಾತಿಲಾತ್ಮಾನುಭವದ ಸ್ಥಿತಿಯಗೂಡಿಸುವರ ಧ್ರುವ ನಿತ್ಯಾನಿತ್ಯದಿತ್ಯರ್ಥದ ತತ್ವಾರ್ಥಸಾರಾಯ ಬೀರಿ ಸತ್ಯ ಸನಾತನದ ಸುಪಥವಗೂಡಿಸುವರ 1 ಚಿತ್ತ ಶುದ್ದವನೆ ಮಾಡಿ ಮತ್ತವಾದ ಪರಬ್ರಹ್ಮಯ ಎತ್ತ ನೋಡಿದರತ್ತ ಪ್ರತ್ಯಕ್ಷ ತೋರಿಸುವರ 2 ಸ್ವಾನುಭವಾಮೃತವನು ಙÁ್ಞನಾಂಜನದುಲುಣಿಸಿ ತಾನೆ ತಾನಾದ ದೀನ ಮಹಿಪತಿ ಸ್ವಾಮಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು