ಒಟ್ಟು 3056 ಕಡೆಗಳಲ್ಲಿ , 117 ದಾಸರು , 2175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಚಿದಾತ್ಮಕ ಸತ್ಯ ರುಕ್ಮಿಣಿಯರು ಜೊತ್ತಿಲಾಡುತ ತಮ್ಮ ಪತಿಯ ಉತ್ತಮಗುಣಗಣ ವರ್ಣಿಸುವದಕನುವೃತ್ತರಾಗುತ ವಾದಿಸಿದರು ಪ. ಅಕ್ಕ ಕೇಳರಿಗಳ ವಶರಾಗಿ ಸೆರೆಯೊಳು ಸಿಕ್ಕಿದವರ ಮಗನಿವನು ಚಿಕ್ಕತನದಿ ಗೋವ ವಕ್ಕಲಿಗರು ಬಾಯೊ- ಳಿಕ್ಕಿದನ್ನವನುಂಡದೇನು 1 ನಿರಪರಾಧಿಯನೀತ ತರಿದನೆಂಬಕೀರ್ತಿ ಬರದಂತೆ ಸೆರೆಯೊಳುದಿಸಿದ ಸುರರೆಲ್ಲ ಗೋಪರಾಗಿರುವುದರಿತು ಸೇವ- ಕರಿಗೊಲಿವುತ್ತಲಿ ಮೆರೆವ 2 ಪಾಂಡುಕುಮಾರನ ಭಂಡಿ ಹೊಡಲು ಪಾಲ ನುಂಡನು ವಿದುರನ ಗೃಹದಿ ಗಂಡರಾಳುವ ಗರತೇರ ನೆರೆದವನ ಹೆಂಡರಾಗಿರುವದಿನ್ನೆಂತು 3 ಭಕ್ತವತ್ಸಲನೆಂಬ ಬಿರುದ ತೋರುವದತಿ ಶಕ್ತಿ ಹರಿಗೆ ಶೋಭಾಕರವು ತೊತ್ತಿನ ಮಗನಿಂದಲಿತ್ತ ಕೌರವನೆಂಬ ತತ್ವ ತೋರಿದನಲ್ಲವೇನೆ 4 ಧರೆಯನಾಳದೆ ತನ್ನ ಪರಿವಾರ ಸಹಿತಾಗಿ ಶರಧಿಯೊಳಗೆ ವಾಸವಾಗಿ ದುರುಳ ಜರಾಸಂಧ ಬರುವ ಭೀತಿಯ ತಾಳಿ ಲ್ಲಿರುವ ಕಾರಣವೇನೆ ಜಾಣೆ 5 ಈರೆಂಟು ಮತ್ತೊಂದು ಭಾರಿ ಸಮರದಲ್ಲಿ ಬಾರುಹದ್ರಥನನ್ನು ಗೆಲಿದ ಧೀರನೀತನು ಭಕ್ತ ಮಾರುತಿಯಲಿ ಜಯ ತೋರಲಂತಿರುವನು ಕಾಣೆ 6 ಜಾರ ಚೋರರಿಗೆಲ್ಲ ಗುರು ನಿಮ್ಮ ಪತಿಯೆಂದು ವೂರನಾರಿಯರೆಲ್ಲ ನುಡಿವ ಕ್ರೂರ ಮಾತನು ಕೇಳಲಾರೆನಕ್ಕಯ್ಯ ಯಿ ನ್ಯಾರಿಗೆಂದುತ್ತರ ಕೊಡುವೆ 7 ಘತಿತ ಪಾವನ ಪದ್ಮಜಾತಜನಕ ಶ್ರೀ ಪತಿ ಸುಜನಾನಂದದಾಯಿ ವಿತತ ವಿಡಂಬನ ತೋರುವ ವೆಂಕಟ ಪತಿ ದೋಷಹರ ಶೇಷಶಾಯಿ 8 ಹಸೆಗೆ ಕರೆವ ಮತ್ತು ಆರತಿಯ ಹಾಡುಗಳು
--------------
ತುಪಾಕಿ ವೆಂಕಟರಮಣಾಚಾರ್ಯ
ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ | ಕೃತ ಕೃತ್ಯನೆಂದೆನಿಸೊ | ಮಾನವ ಜನ್ಮ ಸಾರ್ಥಕೆನಿಸೊ | ಪುರುಷಾರ್ಥವಗಳಿಸೊ ಪ ಮೂರುವತಾರನ ಮತದೊಳು ಜನಿಸಿದರು ಮೂರನು ತ್ಯಜಿಸಿದರು ಮೂರು ಹತ್ತರಿಗೆ ಮುಖವಾಗಿರುತಿಹರು ಇವರಿಗೆ ಸಮರ್ಯಾರೊ 1 ಮಾನವ ಸ್ಮøತಿ ಮೊದಲಾದ ಗ್ರಂಥಗೈದ ದ್ವಿಜರಿಗೆ ಬೋಧಿಸಿದ || ಸಾನುರಾಗದಲಿ ಜ್ಞಾನಾಮೃತವೆರೆದ ದಶದಿಕ್ಕಿಲಿ ಮೆರೆದ | ಏನು ಪೇಳಲಿ | ಇವರ ದಿವ್ಯಪಾದ | ಮೋದ 2 ಶಾಮಸುಂದರನ ಕವನದಿ ಕೊಂಡಾಡಿ ಬಹಿರಂತರ ನೋಡಿ || ಸೋಮಪುರದಿ ದ್ವಿಜ ಸ್ತೋಮದಿಂದ ಕೂಡಿ ಇರುವರು ಮನೆ ಮಾಡಿ ಈ ಮಹಾತ್ಮರನು ನರನೆಂದವ ಖೋಡಿ ಸಂದೇಹ ಬ್ಯಾಡಿ3
--------------
ಶಾಮಸುಂದರ ವಿಠಲ
ನಿತ್ಯ ಶುಭ ಮಂಗಲಂ ಮಂಗಲಂ ಮಾರುತಿಯ ಪೆಗಲೇರಿ ಬರುವನಿಗೆ ಪ. ಮಂಗಲಂ ಮಾರೀಚ ವೈರಿಹರಿಗೆ ಮಂಗಲಂ ಸೀರಜಾ ಮುಖಪದ್ಮ ಭೃಂಗನಿಗೆ ಮಂಗಲಂ ವೀರ ರಾಘವ ದೇವಗೆ ಅ.ಪ. ರಾವಣಾದಿಗಳಿಂದ ಲಾಹವದಿ ಬಹು ನೊಂದ ದೇವತೆಗಳನು ಬೇಗ ಕಾವೆನೆಂದು ತಾ ಒಲಿದು ಕೌಸಲ್ಯದೇವಿ ಗರ್ಭದಿ ಬಂದು ಸಾವಧಾನದಿ ಸಕಲ ಸಜ್ಜನರ ಸಲಹಿದಗೆ 1 ಮಂದಮತಿಗಳೊಳಧಿಕ ತುಂಡಿಲನು ಮಾತ್ಸರ್ಯ ದಿಂದ ಮಾಡಿರುವ ಪ್ರತಿ ಬಂಧಕವನು ಇಂದಿಲ್ಲಿ ಬರಲು ಸಮಂಧಗೈಸದೆ ದಾಸ ನೆಂದೆನ್ನ ಮೇಲೆ ದಯದಿಂದಲೊಲಿದವಗೆ 2 ಇಂಗಿತಾಭೀಷ್ಟದ ಕುರಂಗ ಮರ್ದನ ರಾಮ ಶೃಂಗರಿಸಿ ಸರ್ವಪರಿವಾರ ಸಹಿತಾ ಮಂಗಲಾರತಿ ಕೊಂಡು ಮಂಗಳವ ಬೆಳೆಸುವ ಭು ಜಂಗ ರಾಜೇಂದ್ರ ಗಿರಿಶೃಂಗನಾಥನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿತ್ಯ ಶುಭ ಮಂಗಳಂ ಪ. ಸರಸೀರುಹಾಕ್ಷಾಯ ದುರುಳಮದಶಿಕ್ಷಾಯ ಸುರಮೌನಿ ಪಕ್ಷಾಯಾಧೋಕ್ಷಜಾಯ ಶರಣನ ರಕ್ಷಾಯ ಕರುಣಾಕಟಾಕ್ಷಾಯ ಧರಣಿಜಾರಮಣಾಯ ರಾಮಭದ್ರಾಯ 1 ಕ್ರತು ಪಾಲಕಗೆ ಶಶಿವದನೆ ಜಾನಕಿಯ ಕೈಪಿಡಿದವಂಗೆ ಶಶಿಮೌಳಿಚಾಪಮಂ ಮುರಿದ ಅಸಮಬಲನಿಗೆ ದಶಕಂಠಕಾಲಂಗೆ ರಾಘವೇಂದ್ರನಿಗೇ 2 ಕಾಕುತ್ಸ್ಥಕುಲಮಂಡನಗೆ ಕಮಲಾಪ್ತ ಕುಲದೀಪಂಗೆ ಸಾಕೇತನಗರಾಧಿಪಗೆ ಲೋಕೇಶನಿಗೆ ಪಾಕಶಾಸನಮುಖ್ಯ ನಾಕಪೂಜಿತಚರಣ ವೈಕುಂಠನಾಯಕ ಶ್ರೀ ಶೇಷಗಿರಿವರಗೆ 3
--------------
ನಂಜನಗೂಡು ತಿರುಮಲಾಂಬಾ
ನಿತ್ಯ ಸುಖಕರ ನೀರಜಾಕ್ಷರ ಭೃತ್ಯರಾಗುವ ಬನ್ನಿರಿ ಎತ್ತುವನು ಸಂಶಯವಿಡದೆ ಕೃತಕೃತ್ಯರಾಗುವವೆನ್ನಿರಿ ಪ. ಮೋದಮಯನ ಪ್ರಸಾದವನು ಕೊಂಡಾದರದಿ ಸೇವಿಪುದು ಪಾದಪದ್ಮಾಮೋದಯುತಾ ತುಳಸೀದಳಗಳನು ಮುಡಿವುದು ತೇದ ಗಂಧವ ಮಾಧವನಿಗಿರಿಸಾದನಂತರ ಕೊಳುವುದು ಭಾಗವತ ಕೇಳುತ 1 ಭೀಕರಿಪ ಮಹ ದುರಿತಗಣ ನಿರಾಕರಿಸುವನು ನಿಮಿಷದಿ ಕುಯುಕ್ತಿ ಶಕ್ತಿಯ ದೂಕುವನು ದುಷ್ಕೂಪದಿ ವಾಕುಗಳ ತಪ್ಪುಗಳನೆಣಿಸದೆ ಸಾಕುವನು ಸಂತಸದಲಿ ಒಡಗೂಡಿ ನಲಿವನು 2 ಶ್ರೀಶನನು ಭಜಿಸುವದಕೇನಾಯಾಸವಿರುವುದು ಹೇಳಿರಿ ವಾಸವಾಗಿಹ ಸಕಲ ಹೃದಯಾಕಾಶ ಪದ್ಮದಿ ಕೇಳಿರಿ ವಾಸುದೇವನ ವರ್ಣನಾಂಶವ ಲೇಶವಾದರು ತಾಳಿರಿ ಶೇಷ ಗಿರೀಶನ ದಾಸಕೂಟ ಸಮಾಶ್ರಯಣ ಸಂಗ್ರಹಿಸಿ ಬಾಳಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿಂದೆ ಮಾಡುವಿ ಯಾತಕೋ | ಮಂದಮಾನವ ಶ್ರೀಗೋವಿಂದ ದಾಸಾರ್ಯರನ್ನ ಎಂದೆಂದಿಗೀಮಾತು | ಇಂದಿರೇಶನ ಭಕುತ ವೃಂದ ಮೆಚ್ಚುವದಿಲ್ಲವೋ ಮೂಢ ಪ ಬಾಲತನದಾರಭ್ಯ ಶೀಲ ಸದ್ಭಕುತಿಯಲಿ ತಾಳ ತಂಬೂರಿ ಪಿಡೆದು | ಶ್ರೀಲೋಲ ಹರಿನಾಮ ಹೇಳುತಲಿ ಸತತ | ಗೋಪಾಳ ವೃತ್ತಿಯ ಮಾಡಿ ಕಾಲವನು ಕಳೆದವರು 1 ಕುಸುಮಶರನಟ್ಟುಳಿಗೆ ವಶವಾಗದಿರಿ ಎಂದು ಉಸುರುತಲಿ ಶಿಷ್ಯಗಣಕೆ | ಅಸುರಾರಿ ಮಹಿಮೆಯನು ರಸವತ್ ಕವಿತೆಯಲಿಂದ ನಿಶಿ ಹಗಲು ವರ್ಣಿಸಿದ ಅಸಿಫ್ಯಾಳು ನಿಲಯರನು 2 ಕ್ಲೇಶ ಸುಖ ಸಮ ತಿಳಿದು ಲೇಸಾಗಿ ಗುರುಸೇವೆಗೈದು ವಾಸಸ್ಥಾನಕೆ ತೆರಳಿದೀ ಸುಗುಣರನು ವ್ಯರ್ಥ ನಿಂದೆ ಮಾಡುವಿ ಯಾಕೋ 3
--------------
ಶಾಮಸುಂದರ ವಿಠಲ
ನಿದ್ರೆಮಾಡಿದ ರಂಗ ನಿದ್ರೆಮಾಡಿದ ಭದ್ರಹಾಸಿಗೆ ಮೇಲೆ ಸಮುದ್ರರಾಜನ ಮಗಳ ಸಹಿತ ಪ. ವೇದಕದ್ದ ಅಸುರನಿಗಾಗಿ ಆ ಮತ್ಸ್ಯರೂಪವ ಧರಿಸಿ ಸಾಧಿಸಿ ಅಸುರನ ಕೊಂದ ವಾರಿಜಾಕ್ಷ ಬಳಲಿ ಬಂದು 1 ತರಳ ಹಿರಣ್ಯಕಶ್ಯಪನ ಕರುಳ ಬಗೆದು ಕೊರಳೊಳಿಟ್ಟು ನರಮೃಗ ರೂಪವ ತಾಳಿ ನರಸಿಂಹ ಬಳಲಿ ಬಂದು 2 ಬಲಿಯ ದಾನವನ್ನೆ ಬೇಡಿ ನೆಲನ ಮೂರಡಿ ಮಾಡಿ ಒಲಿದು ಬಾಗಿಲನ್ನೆ ಕಾಯ್ದ ವಾಮನನಾದ ಬಳಲಿ ಬಂದು 3 ತÀಂದೆಯ ಮಾತನ್ನೆ ಕೇಳಿ ತಾಯಿ ಶಿರವನ್ನೆ ಅಳಿದು ಏಳುಮೂರು ಬಾರಿ ನೀನು ಭೂಮಿಯ ಪ್ರದಕ್ಷಣೆಮಾಡಿ 4 ಸೀತೆಗಾಗಿ ಪಡೆಯ ಸವರಿ ಸೇತುಬಂಧನವ ಮಾಡಿ ದೂತರಾವಣನ್ನ ಕೊಂದು ಸೀತಾರಾಮ ಬಳಲಿ ಬಂದು 5 ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆಲ್ಲ ಕಾಯ್ದು ಗೋಪಸ್ತ್ರೀಯರ ಸೀರೆ ಸೆಳೆದು ಗೋಪಾಲಕೃಷ್ಣ ಬಳಲಿ ಬಂದು 6 ಬತ್ತಲೆ ಕುದುರೆಯನೇರಿ ಮತ್ತೆ ತೇಜಿಯನ್ನೆ ನಡೆಸಿ ಹತ್ತಾವತಾರವ ತಾಳಿ ಮತ್ತೆ ಕಲ್ಕಿರೂಪನಾÀಗಿ 7 ಧರೆಯೊಳತ್ಯಧಿಕವಾದ ಶ್ರೀರಂಗಪಟ್ಟಣದಿ ನೆಲೆಸಿ ಕರುಣದಿಂದ ಭಕ್ತರನ್ನು ಸಲಹಬೇಕು ಹಯವದನನೆ 8
--------------
ವಾದಿರಾಜ
ನಿನಗಿಂತ ಅಧಿಕರು ನಿನ್ನಯ ಭಕುತರು ಇದಕೆ ಅನುಮಾನಗೊಳಬೇಡ ಅಂಬುಧಿಶಯನ ಪ ಪದಿನಾಲ್ಕು ಲೋಕಗಳು ಪೊತ್ತೆನೆಂದೆನಬೇಡ ಅದುಸಹಿತ ನಿನ್ನನು ಹೃದಯದೊಳಗೆ ಹುದುಗಿಕೊಂಡಿಪ್ಪರೋ ಪದುಮನಾಭನೆ ಕೇಳೊ ಇದರಿಂದ ಸರಿಮಿಗಿಲು ಆರೊ ಜನದೊಳಗೆ 1 ವನಜಾಂಡಗಳೆಲ್ಲ ಪೊತ್ತೆನೆಂದೆನಬೇಡ ಕೊನೆಯ ನಾಲಿಗೆಯಲ್ಲಿ ನಿನ್ನ ನಿಲಿಸಿ ಭಾರ ಇಲ್ಲದಂತಿಪ್ಪರೊ ಘಣಿಶಯನ ಅಧಿಕಸಮರಾರೊ ಜಗದೊಳಗೆ 2 ಅಣುಮಹತ್ತು ಆದೆನೆಂದೆನೆಬೇಡವೊ ಗಣನೆ ಇಲ್ಲದೆ ನಿನ್ನ ಕರದಿ ಮುಚ್ಚಿ ಘಣಿ ಆಹಾರಗಾಮಿ ನಾ ವಿಜಯವಿಠ್ಠಲ ನಿನಗೆ ಮಣಿದು ಲೆಕ್ಕಿಸರೋ ನಿನ್ನನು ಮೆಚ್ಚಿದಾಳುಗಳು3
--------------
ವಿಜಯದಾಸ
ನಿನಗಿನಿತು ಮಮಕಾರವಿರಲೆನಗೆ ಭಯವೇನು ಚಿನುಮಯನೆ ಧನ್ಯ ನಾನು ಪಜನಕ ನೀನೆನಗಾದೆ ತನುಜ ನಾ ನಿನಗಾದೆ ಘನಮಹಿಮ ಕಾಮಧೇನು ನೀನು ಅ.ಪಜನ್ಮಕೋಟಿಗಳಲ್ಲಿ ಪುಣ್ಯಕರ್ಮಗಳನ್ನು ಮುನ್ನ ಮಾಡಿಸಿದೆ ನೀನುಮುನ್ನಿನಾ ದೇಹಗಳು ಭಿನ್ನವಾಗಲು ಕರ್ಮವಿನ್ನುಳಿವ ಬಗೆಯದೇನುಚಿನ್ಮಯನೆ ತನುಕರಣ ಭಿನ್ನವಾದರು ಸಾಕ್ಷಿ ನಿನ್ನೊಳಿಂಬಿಟ್ಟೆಯವನುಸನ್ನುತನೆ ಬಾಲಕನಿಗುಣ್ಣ ಕಲಿಸುವ ತೆರದಿ ನಿನ್ನನಿತ್ತುದೇನೆಂಬೆನು ನಾನು 1ದುಷ್ಟಸಂಗವ ಬಿಡಿಸಿ ದುರ್ಬುದ್ದಿಯನು ಕೆಡಿಸಿ ಶಿಷ್ಟರೊಳು ತಂದು ನಿಲಿಸಿಕಷ್ಟಸಾಧನಗಳನು ಮುಟ್ಟಲೀಸದೆ ಸುಲಭ ನಿಷ್ಠೆಯಲಿ ಚಿತ್ತವಿರಿಸಿಹುಟ್ಟುಹೊಂದುಗಳನ್ನು ಕೊಟ್ಟು ಮೋಹಿಸುತಿರುವ ಪುಟ್ಟ ಫಲಗಳ ತೇಲಿಸಿಮುಟ್ಟಿ ನಿನ್ನಯ ಪದವನಿಟ್ಟು ಹೃದಯಾಂಬುಜದಲಿಷ್ಟಮೋಕ್ಷವ ತೋರಿಸಿ ನಿಲಿಸಿ 2ವಿದ್ಯವಿಸ್ತರವಾದರದ್ದುವದು ಗರ್ವದಲಿ ಬುದ್ಧಿ ನಿಲ್ಲದು ನಿನ್ನಲಿಇದ್ದು ವೃದ್ಧರ ಪಥದಿ ಹೊದ್ದಿ ಶುದ್ಧತ್ವವನು ಶ್ರದ್ಧೆ ಸೇರದು ನಿನ್ನಲಿಉದ್ದುರುಟುತನದಿಂದ ಬಿದ್ದು ವಾದದ ಮಡುಹವದ್ದು ಸುಕೃತವ ಕಾಲಲಿಇದ್ದ ನಿಜಸ್ಥಿತಿುವಗೆ ಸಿದ್ಧವಾಗದುಯೆಂದು ನಿರ್ಧರಿಸಿ ನೀನೆ ದಯದಿ ಇಲ್ಲಿ 3ಅನಿಮಿತ್ತ ಬಂಧು ನೀನೆಂಬುದನು ಫಲುಗುಣನು ಮನದೊಳೆಣಿಸಿದುದಿಲ್ಲವೆಅಣುಮಾತ್ರದುಪಕಾರ ಜನರಿಂದ ನಿನಗುಂಟೆ ಮನಕೆ ದೂರ ನೀನಲ್ಲವೆವನಜಭವ ದಿಕ್ಪಾಲ ಮನುಗಳೈಶ್ವರ್ಯಗಳು ನಿನಗೆ ಗಣನೆಗೆ ಬರುವವೆಇನಿತು ಬ್ರಹ್ಮಾಂಡಗಳ ನೆನದು ನಿರ್ಮಿಸಿ ಬಳಿಕ ಕ್ಷಣದೊಳಳಿಸುವದಿಲ್ಲವೆ ನಿಜವೆ 4ನಿನ್ನ ಭಜಿಸುವ ಭಾವವಿನ್ನುಂಟೆ ಜಡಮತಿಗೆ ಅನ್ಯವಿಷಯದಿ ಮೋಹಿಸೆತನ್ನ ಮರೆದತಿದುಃಖದುನ್ನ ತದ ಸಂಸಾರ ವೆನ್ನದೆನ್ನುತ ದುಃಖಿಸೆನಿನ್ನ ನೆನಯದೆ ಬಹಳ ಜನ್ಮವೇಗದ ನದಿಯಲುನ್ನಿಸುವ ಕರ್ಮ ಹೊದಿಸೆಭಿನ್ನ ಬುದ್ಧಿಯಲೊಂದಿ ತನ್ನ ತಾನರಿಯದಿರೆ ನಿನ್ನಿಂದ ಮುಕ್ತನೆನಿಸೆ ನಿಲಿಸೆ 5ಚಲಿಸದಂದದಿ ಮನವ ನಿಲಿಸಿ ನಿನ್ನೊಳು ಬಾಹ್ಯವಳಿವ ಬಗೆುಲ್ಲವಲ್ಲನಳಿನನಾಭನೆ ನೀನು ಸುಲಭನೇ ಯೋಗಿಗಳು ಬಳಲುವರು ಕಾಣರಲ್ಲನಿಲುವೆ ಮನದಲಿ ನೀನೆ ಸಲಹೆಂದು ಭಜಿಸಿದರೆ ಗೆಲರೆ ಸಂಸೃತಿಯನೆಲ್ಲತಿಳುಹಿ ಸುಲಭದ ದಾರಿಯೊಳಗೆನ್ನ ನೀನಿರಲು ಬಳಲುವಿಕೆುಲ್ಲವಲ್ಲಾ ಲಲ್ಲಾ 6ಬಿನುಗು ಭೋಗವನುಂಡು ಜುಣುಗಿ ಮತ್ತದರಲ್ಲಿ ಮನವೆರಗಿ ಮುಳುಗುತಿಹುದುತನುವಿನಭಿಮಾನದಲಿ ನೆನಹು ತಗ್ಗದು ಮತ್ತೆ ಕನಲಿ ಮುರಿದೇಳುತಿಹುದುಅನುವರಿಯದಂಧತಮದಲಿ ತಾನು ನೆರೆಹೊಕ್ಕು ಘನದುಃಖಬಡುತಲಿಹುದುಇನಿತವಸ್ಥೆಯಲಿರುವ ಮನಕೆ ಸಿಕ್ಕಿರಲೆನ್ನ ದಿನಕರನೆ ಕೈವಿಡಿವುದು ಸೆಳೆದು 7ಧ್ಯಾನ ಧಾರಣೆುಂದ ನಿನ್ನ ಮೂರ್ತಿಯ ನಿತ್ಯ ಮಾನಸದಿ ನಿಲಿಸಬೇಕುಧ್ಯಾನಾಂಗ ನಿಯಮಗಳನಭ್ಯಾಸವಂ ಮಾಡಿ ತಾನು ತಾನಾಗಬೇಕುಏನೊಂದ ಕಂಡರೂ ನಾಮರೂಪವ ಬಿಟ್ಟು ನೀನೆಂದು ನಿಲ್ಲಬೇಕುಏನೆಂಬೆನಿವನೆಲ್ಲ ನೀನೆ ಸಾಧಿಸಿಕೊಟ್ಟು ದೀನನನು ಸಲಹಬೇಕು ಸಾಕು 8ಪರಮ ಕರುಣಾನಿಧಿಯೆ ಪರಿಪೂರ್ಣ ಪರಮೇಶ ಪರಮಸಂವಿದ್ರೂಪನೇಶರಣಜನಸುರಧೇನು ದುರಿತಭೂಧರಕುಲಿಶ ಕರಿವರನ ರಕ್ಷಿಸಿದನೇಮರೆಯೊಕ್ಕೆ ನಿನ್ನಡಿಯ ಮರವೆಯನು ಪರಿಹರಿಸು ಅರಿವಿನೊಳು ಪೊಗಿಸು ನೀನೆತಿರುಪತಿಯ ನೆಲೆವಾಸ ವರದ ವೆಂಕಟರಮಣ ಅರವಿಂದದಳನೇತ್ರನೆ ಅಜನೆ 9ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರ ಕಾಯ ನಮಃ
--------------
ತಿಮ್ಮಪ್ಪದಾಸರು
ನಿನಗೆ ನಾ ಬ್ಯಾಡಾದನೆ ಘನಕೃಷ್ಣ ಮಾನಿನಿಯ ಕಿಂತ ಕೊನೆಯೆ ಪ ಎನ್ನ ಕಣ್ಣಿಗೆ ತೋರದೆ ಬೆನ್ನಲ್ಲಿ ಮಾನಿನಿಗೆ ನೀ ತೋರಿದ್ಯಾ ಮನ್ನಿಸುವ ನಿತ್ಯದಲಿ ಮುನ್ನ ನಿನಗೆ ನಾ ದ್ವೇಷಿಯಲ್ಲವೋ 1 ಒಳಗೆ ನೀನಿರುವಿ ಎಂದೂ ತಿಳಿದು ಬಲು ತೊಳಲಿ ಶರಣು ಬಂದರೆ ಪೊಳೆಯದಲೆ ಮನಸಿನೊಳಗೆ ಕೊಳಲು ಕರೆ ಬಾಲೇಗೆ ನೀ ತೋರಿದ್ಯಾ 2 ಸುಳ್ಳು ಇದು ಎಂದ್ಹೇಳಲು ಸಲ್ಲದೆಲೊ ಕಳ್ಳ ನೀನೆಂದು ಬಂದೆ ಪುಲ್ಲನಾಭನೆ ತೋರೆಲೊ ಮಲ್ಲನೆ ಗಲ್ಲ ಪಿಡಿದು ಮುದ್ದಿಪೆ 3 ನೀರದಸಮ ಕಾಂತಿಯ ನಾರಿಮಣಿ ಬೀರಿದಳೊ ಶ್ರೀಕೃಷ್ಣನೆ ಕರುಣಸಾಗರನೆಂಬೊದು ಮರೆತು ನೀ ದೂರ್ಹೋಗಿ ನಿಲ್ವರೇನೊ 4 ಮೂರು ವಯಸೆಂದ್ಹೇಳರೊ ಚಾರುತರಾಭರಣ ಇಟ್ಟಿಹನೆಂಬುರೊ ಈ ರೀತಿ ಅಬಲೆಯರು ನಿರುತದಲಿ ಧರೆಯೊಳಗೆ ಪೇಳ್ವುದರಿಯಾ5 ಎಂದಿಗಾದರು ನಿನ್ನನು ಪೊಂದದೆಲೆ ಇಂದಿರಾಧವ ಬಿಡುವನೆ ತಂದೆ ಶ್ರೀ ಮಧ್ವರಾಯ ಛಂದದಲಿ ಮುಂದೆ ತಂದೆಳೆವ ನಿನ್ನ 6 ನೀ ಬಿಟ್ಟರೇ ಕೆಡುವೆನೆ ಶ್ರೀ ಭೀಮನೊಬ್ಬ ಬಲ ಸಾಕೆಲೊ ಅಪಾರ ದೈವ ನಿನ್ನ ಕೊಬ್ಬುತ ತಬ್ಬಿ ನಾ ನಿನ್ನೊಲಿಸುವೆ7 ಮಾನದಿಂದಲಿ ತೋರೆಲೊ ನಿನಗಿದು ಘನತೆಯಲ್ಲವೊ ಜೀಯನೆ ಮುನ್ನ ಮಾಡ್ದುಪಕೃತಿ ಮರೆತೆಯಾ8 ಇನಿತು ವಂಚಿಸಿ ಪೋದರೆ ನಾ ನಿನ್ನ ಹೀನ ಗುಣದವನೆನ್ನುವೆ ಮನ್ನಿಸಿ ಸಲಹೋ ಬ್ಯಾಗ ಶ್ರೀ ನರಹರಿಯೆ ನಾ ಭಿನ್ನೈಸುವೆ9
--------------
ಪ್ರದ್ಯುಮ್ನತೀರ್ಥರು
ನಿನಗೆ ನಿನ್ನ ನಾಮ ಗುಣಗಳಿಂದರ್ಚನೆ ಗೈವೆನು ಸ್ವಾಮಿ ಪ ಎನಗೊಂದು ಪದಾರ್ಥವು ದೊರೆಯದು ಮನ್ಮನದಿ ನೀನೆ ನಿಂತು ಮಾಡಿಸನುದಿನಾ ಅ.ಪ ಧೇನುಸುವೆನು ವಾಙ್ಮಯನೆನ್ನುತ ಜೀವ ದೇವ ನಿನ್ನಾ ನಾನಾ ದಿವ್ಯ ಸ್ವರೂಪನೆನ್ನುತಾವಾಹನೆಯನುಗೈವೆ ಗಾನಲೋಲ ಗಂಗಾಜನಕನು ಎಂದಾನು ಪಾದ್ಯವನು ಸಮರ್ಪಣೆ ಮಾಳ್ಪೆನು 1 ಶರಣರಿಗಭಯವ ಕೊಡುವನೆಂದು ಅಘ್ರ್ಯಗಳ ಸಮರ್ಪಿಸುವೆನು ಪರಮ ಪವಿತ್ರನು ನೀನೆನ್ನುತಲಾಚಮನ ಮಾಡಿಸುವೆನು ಸಮರ್ಪಣೆಗೈವೆನು 2 ಹನುಮತ್ಪ್ರಿಯನಿಗೆ ದಿವ್ಯ ಚಂದನಾಕ್ಷತೆಗಳ ಧರಿಸುವೆನೂ ಮುದದಲಿ 3 ಭಕ್ತವತ್ಸಲನು ನೀನೆನ್ನುತ ಧೂಪವನೀವೆನು ಸ್ವಾಮಿ ಭವ ಭಯಹರ ನೀನೆಂದೂ ನಿತ್ಯತೃಪ್ತಗೆ ಮಹಾ ನೈವೇದ್ಯ ತಾಂಬೂಲವನೀವೆ ನೀರಾಜನವರ್ಪಿಸುವೆನು 4 ಸೇವೆಯ ಕೊಡೊ 5
--------------
ಗುರುರಾಮವಿಠಲ
ನಿನಗೆ ನೀನೇ ಕೃಷ್ಣ ದಯಮಾಡಿ ಸಲಹೋಎನಗೊಂದು ಸಾಧನ ಲೇಶ ಕಾಣಬರದೋ ಪ ಸ್ನಾನವ ಮಾಡಿ ನಿನ್ನ ಸಮತಿಸುವೆನೆಂದರೆಸ್ನಾನ ಮಾಡದೆ ಕಪ್ಪೆ ಸರ್ವಕಾಲದಲೀಧ್ಯಾನವ ಮಾಡಿ ನಿನ್ನ ಸಮತಿಸುವೆನೆಂದರೆಧ್ಯಾನವ ಬಕ ಸರ್ವಕಾಲದಲೀ 1 ಉರಗ ಸರ್ವ ಕಾಲದಲೀ 2 ಸನ್ಯಾಸವೇ ನಿನ್ನ ಸಾಧನವೆಂದರೆಸನ್ಯಾಸವಿರದೇ ಆ ರಾವಣಗೇಕನ್ಯಾದಾನವೆ ನಿನ್ನಾ ಸಾಧನವೆಂದರೆಕನ್ಯಾದಾನ ಮಾಡಾನೆ ಕಂಸಗೆ ಜರಾಸಂಧ3 ದುರುಳ ದುರ್ಯೋಧನಗೆ 4 ಬಂಧುತ್ವವೇ ನಿನ್ನ ಸಾಧನವೆಂದರೆಬಂಧುತ್ವವಿರದೇ ಆ ಶಿಶುಪಾಲಗೆಒಂದೂ ಸಾಧನ ಕಾಣೇ ಉಚಿತಾವೇ ಶ್ರೀಕೃಷ್ಣಎಂದೆಂದಿಗೂ ನಿನ್ನ ದಾಸನೆನಿಸೊ 5
--------------
ವ್ಯಾಸರಾಯರು
ನಿನಗೇನೊ ಭಕುತರ ಚಿಂತೀ ಘನಮಹಿಮ ಮಹÀದಾದಿ ಸುರವಂದ್ಯ ತಿಮ್ಮಾ ಪ ಪರಮೇಷ್ಟಿ ನಿನಪುತ್ರ ಕಿರಿಯ ಮಗನು ಜಗತ್ಪ್ರಾಣದೇವಾ ಹಿರಿಯ ಸೊಸೆಯು ವಾಣಿ ಕಿರಿಯು ಭಾರತೀ ದೇವಿ ಸುರರು ಪರಿವಾರ 1 ಸಕಲಲೋಕಕೆ ಅರಸು ಲಕುಮಿಕಾಂತನು ಎಂದು ನಿಖಿಳವೇದ ಸ್ಮøತಿಯು ಸಾರುತಿಹದೋ ಅಖಿಳವ್ಯಾಪಕನಾಗಿ ಸಕಲಸುರನರರಿಂದ ಭಕುತಿಪೂರ್ವಕÀ ಓಲಗವಕೈಕೊಂಬ ಸಮಯದಲಿ 2 ಸುರನಾಥ ನೀನಲ್ಲದಿತರ ದೇವತೆಯುಂಟೆ ಸರವೋತ್ತಮಾನೆಂಬನಾವನವನೋ ಸರಸಗುಣನಿಧಿಯೆ ಶ್ರೀ ಗುರುಜಗನ್ನಾಥವಿಠಲ ವರಭಾಗ್ಯ ಮಬ್ಬಿನಲಿ ಇರುವೊ ಸಮಯದಲಿ 3
--------------
ಗುರುಜಗನ್ನಾಥದಾಸರು
ನಿನ್ನ ಉನ್ನತ ಮಹಿಮೆಯನ್ನು ಬಣ್ಣಿಪ ಶಕ್ತಿ ಎನಗೆಂತು ಕರುಣಾರ್ಣವ ಪ ಅನ್ಯಕುಲದಲಿ ಜನಿಸಿ ಅನ್ಯ ಆಹಾರಗಳುಂಡು ಕುನ್ನಿಯಂತೆ ಕಳೆವೆ ದಿನವ ಅಭವ ಅ.ಪ ಶೋಧಿಸಿಶಾಸ್ತ್ರಪದ ಛೇದಿಸಿ ಬಣ್ಣಿಸಲೆ ಓದು ನಾ ಕಲಿತಿಲ್ಲವೋ ವೇದಪೂರ್ವಕಮಾಗಿ ಸಾಧನದಿ ಬಣ್ಣಿಸಲೆ ವೇದ ಎನಗೊಳುಪಿಲ್ಲವೋ ಸಾಧುವರ್ತನದ ಮಹಾದಾದಿಯಿಂ ಬಣ್ಣಿಸಲೆ ಸಾಧುಪಥ ಗುರ್ತಿಲ್ಲವೋ ಆದಿಮೂರುತಿ ನಿನ್ನ ಪಾದಪೊಗಳಲು ಒಂದು ಹಾದಿಗೊತ್ತೆನಗಿಲ್ಲವೋ 1 ದೃಢಮಾಗಿ ನಿನ್ನ ಸಮದೃಢ ಮಹಿಮೆ ಬಣ್ಣಿಸಲೆ ದೃಢಭಕ್ತಿಯೆನಗಿಲ್ಲವೋ ಎಡಬಿಡದೆ ಬಣ್ಣಿಸಲೆ ಪೊಡವಿಯೋಳ್ನಿನ್ನವರ ಒಡನಾಟ ಎನಗಿಲ್ಲವೋ ಕಡು ಗೂಢವಾಗಿ ನಿನ್ನಡಿಗಳನು ಬಣ್ಣಿಸಲೆ ಜಡಮತಿ ನಾ ಬಣ್ಣಿಪೆನೆ ಕಡೆಯಿಲ್ಲದ ತವಮಹಿಮೆ ಮೃಡ ಅಜರಿಗಸದಳವೋ ತಿಳಿವೋ 2 ಸುಗುಣಗುಣಾಂತ ನಿನ್ನ ಸುಗುಣಗಳ ಬಣ್ಣಿಸಲು ಸುಗುಣಗುಣ ಎನಗಿಲ್ಲವೋ ನಿಗಮಾತೀತನೆ ನಿನ್ನ ಗುಟ್ಟು ಬಣ್ಣಿಸಲೆ ನಿಗಮವ ನಾನರಿತಿಲ್ಲವೋ ಅಗಣಿತಮಹಿಮ ನಿನ್ನ ಹಗರಣದ ಮಹಿಮೆಯ ಬಗೆಬಲ್ಲವ ನಾನಲ್ಲವೋ ಪೊಗಳುವೆನು ಮಿಗಿಲೆನ್ನುತ ಸತತ3
--------------
ರಾಮದಾಸರು
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ