ಒಟ್ಟು 2020 ಕಡೆಗಳಲ್ಲಿ , 113 ದಾಸರು , 1581 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಾಂತರ್ಗತ ಜ್ಞಾನಾನಂದಾ | ಮಯಶ್ರೀನಿವಾಸನೆ ಗೋವಿಂದಾ ಪ ಗಾನಲೋಲನೆ ನಿನ್ನ | ಧ್ಯಾನ ಪಾಲಿಸಿ ಇನ್ನುಜ್ಞಾನವಂತರ ಸಂಗ | ಸಾನು ಕೂಲಿಸಿ ಕಾಯೋ ಅ.ಪ. ಚಾರು ದರ ಕಂಬು ಕಂಠಾ 1 ಅಕ್ಷಿಗಳರವಿಂದ ವಿಸ್ತಾರಾ | ಲಕ್ಷ್ಮಿವಕ್ಷದಿ ಮೆರೆವ ಗಂಭೀರ |ಲಕ್ಷ್ಮಣಾಗ್ರಜ ಸ | ಲ್ಲಕ್ಷಣ ಪುರುಷ ಲೋಕಾಧ್ಯಕ್ಷ ಪಾಂಡವ | ಪಕ್ಷ ಸಜ್ಜನ ತೋಷಾ |ದ್ರುತ - ಅಕ್ಷರಗಳ ಕ್ಷರ ಪೂಜ್ಯ ಚರಣನೆ | ಅಕ್ಷಯಾಂಬರ ತರಳೆಗಿತ್ತವಅಕ್ಷರಳ ಲೆಕ್ಕಿಸದೆ ಬ್ರಹ್ಮನ ಕುಕ್ಷಿಕಮಲದಿ ಸೃಷ್ಟಿಸಿದ ಮಹಿಮ 2 ಸ್ಮರ ತೇಜ ಗುಣಪೂರ್ಣಾದ್ರುತ - ಗುರು ಗೋವಿಂದ ವಿಠಲನೆ ನಿನ್ನಯ | ಚರಣ ನೀರೇರುಹವ ಕಾಂಬುವ ಪರಮ ಸುಖ ಸಂದೇಹವೆಂದೋ | ಪರಮ ಪಾತಕಿಯಾದ ಎನಗೆ 3
--------------
ಗುರುಗೋವಿಂದವಿಠಲರು
ಪ್ರಾಣೇಶ ಹರಿ ವಿಠಲ | ಪೊರೆಯ ಬೇಕಿವಳಾ ಪ ನಿನಲ್ಲದಿನ್ನಿಲ್ಲ | ಪ್ರಾಣಾಂತರಾತ್ಮಾ ಅ.ಪ. ಸಾರ ಕೂಪದಿಂದ |ಕಾರುಣ್ಯ ಮೂರುತಿಯೆ | ಆರು ಅನ್ಯರ ಕಾಣೆನೀರ ಜಾಸನ ವಂದ್ಯ | ನಿರ್ಮಲಾತ್ಮಕನೇ 1 ಕನ್ಯೆಮಣಿ ಇವಳೀಗೆ | ನಿನ್ನ ನಾಮಾಮೃತದಬೆಣ್ಣೆಯನು ಉಣಿಸುತ್ತ | ಕಾಪಾಡೊ ಇವಳಾಚಿನ್ನುಮಯ ಶ್ರೀ ಹರಿಯೆ | ಸಮ್ಮೋದ ಪಾಲಿಸುತಚೆನ್ನಾಗಿ ಪೊರೆ ಇವಳ | ಅನ್ನಂತ ಮಹಿಮಾ 2 ಸಾಧು ಸತ್ಸಂಗವನು | ನೀ ದಯದಿ ಕೊಟ್ಟವಳಸಾಧನವ ಗೈಸುವುದೊ ಮಾಧವನೆ ದೇವಾ |ಆಧ್ಯಂತ ರಹಿತ ಹರಿ | ವೇದಾಂತ ವೇದ್ಯನೆಕಾದುಕೋ ಬಿಡದಿವಳ | ಮಧ್ವಮುನಿ ವಂದ್ಯಾ 3 ಕಾಮ ಜನಕನೆ ದೇವ | ಕಾಮಿತವ ಕರುಣಿಸುತನೇಮ ನಿಷ್ಠೆಯನಿತ್ತು | ನೀ ಮುದದಿ ದೇವಾ |ಪಾಮರಳ ಉದ್ಧರಿಸೋ | ಶ್ರೀ ಮನೋಹರ ಹರಿಯೆಸಾಮಜಾಸದ್ವಂದ | ಸಾಮ ಸನ್ನುತನೇ 4 ಕೇವಲಾನಂದವೆನೆ | ಶಾಶ್ವತದ ಸುಖಕಾಗಿಬಾಳ್ವ ಅಳವಡಿಸುತ್ತ | ಕಾವುದೋ ಇವಳಾ |ಗೋವಿಂದಂ ಪತಿಯೆ ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಪ್ರಿಯ ಪಾಂಡುರಂಗ ವಿಠಲ | ದಯದೋರೊ ಇವಗೆ ಪ ನಯವಿನಯದಿಂ ಬೇಡ್ವ | ಹರಿದಾಸದೀಕ್ಷಾ ಅ.ಪ. ಸದ್ವಂಶದಲಿ ಬಂದು | ಮಧ್ವಮತದೀಕ್ಷೆಯಲಿವಿದ್ಯೆಯನು ತಾ ಕಲಿತು | ಹರಿದಾಸ್ಯದಿ ಮನವಬುದ್ಧಿ ಮಾಡ್ಡವ ನೀನೆ | ಮಧ್ವಾಂತರಾತ್ಮಕನೆಸದ್ವಿಧ್ಯೆತರತಮವ | ಬುದ್ದಿಗೆಟಕಿಸೊ ದೇವಾ 1 ಪಂಚಬೇಧವನರುಹಿ | ಪಂಚಾತ್ಮ ನಿನಕಾಂಬಸಂಚುಗಳ ತಿಳಿಸುತ್ತ | ಕಾಪಾಡೊ ಇವನಾಅಂಚೆಗಮನನೆ ಪಿತನೆ | ನಿಷ್ಕಿಂಚನಾರಾಧ್ಯಹೆಂಚು ಹಾಟಕದಿ ಸಮ | ಬುದ್ದಿಯನೆ ಈಯೋ2 ಭಕ್ತಿ ವೆಗ್ಗಳವಾಗಿ | ನಿತ್ಯತವ ಪದಮಹಿಮೆಸತ್ಕೀರ್ತಿ ಪಾಡುತಲಿ | ಹರಿಗುರು ಸೇವಾ ಕೃತ್ಯದಲಿ ಸನ್ಮೋದ | ಚಿತ್ತದಲಿ ಆನಂದಬಿತ್ತುತಲಿ ಪೊರೆ ಇವನ | ಚಿತ್ತಜನಪಿತನೆ 3 ಗುಣರೂಪ ಕ್ರಿಯೆಗಳಲಿ | ಅನಗುತನು ವ್ಯಾಪ್ತನೂಎನುವ ಸುಜ್ಞಾನವನು | ಕರುಣಿಸೊ ಹರಿಯೇಕನುಕರಣ ಮನಮೂಲ | ಗುಣಭೋಗದನುಭವನಉಣಿಸಿ ಸಾಧನಗೈಸಿ | ಪೊರೆ ಇದನ ಹರಿಯೇ 4 ನೋವು ಸುಖಗಳ ಸಮತೆ | ಭಾವವನೆ ಕರುಣಿಸುತಶ್ರೀ ವರನೆ ಪೊರೆ ಇದನ | ಸರ್ವಾಂತರಾತ್ಮಾಶ್ರೀ ವಲ್ಲಭನೆ ಗುರು | ಗೋವಿಂದ ವಿಠಲನೆಓದಿಮದ್ಭಿನಪವ | ಪಾಲಿಸೊ ಹರಿಯೇ5
--------------
ಗುರುಗೋವಿಂದವಿಠಲರು
ಪ್ರೀತಿಪಾತ್ರ ಬುಧೇಂದ್ರ ಪ ಸತ್ಯಪ್ರಿಯರ ಕುವರಾ ನಿಜ ಭೃತ್ಯರ ಪಾಲಿಪ ಚತುರಾ ಭಯವ ಕಳೆವುತ್ತ ಪೊರೆದೆ 1 ವಿಷವನುಂಡರಗಿಸಿಕೊಂಡ ಧೀರಾ ವೃಷಕೇತು ಪಿತ ಭಕ್ತ ಶೌಂಡಾ ಉಸಿರೆತ್ತಗೊಡದೆ ಸಾಧಿಸಿದೆ ಮಧ್ವಶಾಸ್ತ್ರ 2 ಚರಣಕ್ಕೆ ಶರಣೆಂಬೆನಯ್ಯ ಎನ್ನ ಕರುಣದಿ ಪಾಲಿಸು ಜೀಯಾ ಪಾದ ಭೃತ್ಯರ ಚರಣ ಕಿಂಕರನ ಕಿಂಕರನೆನಿಸುವದೆನ್ನ 3
--------------
ಹನುಮೇಶವಿಠಲ
ಪ್ರೇಮಸಾಗರ ಸ್ವಾಮಿ ಶ್ರೀಹರಿ ಬಾರೊ ಪ ವಿಷಮಸಂಸಾರದ ವ್ಯಸನವಳುಕಿಸಿ ಅಸಮ ನಿಮ್ಮಯ ನಿಜಧ್ಯಾಸವ ಕರುಣಿಸೊ 1 ಮನಸಿನ ಹರಿದಾಟವನು ನಿಲಿಸಿ ಎನಗನುದಿನ ಸುಸಂಗನೆ ದಯಪಾಲಿಸೊ 2 ಸುಷ್ಮಮಲದಾಯಕ ಮಮ ಕೃಪಾಕರ ಶ್ರೀ ರಾಮ ಅಪರೋಕ್ಷಜ್ಞಾನವ ಕೃಪೆಮಾಡು ಬೇಗನೆ 3
--------------
ರಾಮದಾಸರು
ಫಲಾಹಾರವ ಮಾಡೊ ಪರಮಪುರುಷನೆ ಲಲನೆ ಲಕುಮಿಯ ಕರಕಂಜದಿಂದ ಪ. ಕದಳಿ ಕಾಮಾರೆ ಖರ್ಜುರ ಕಿತ್ತಳೆ ಕಂಚಿ ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು ಮಧುರಮಾವು ಮಾದಳ ತೆಂಗಿನಕಾಯಿ ತುದಿಮೊದಲಾದ ಪರಿಪರಿ ಫಲಗಳು 1 ಉತ್ತತ್ತೆ ಜೇನು ಅಂಜೂರ ಸೇಬು ದಾಳಿಂಬೆ ಮತ್ತಾದ ತುಮರೆ ಪರಗಿ ಕಾರೆ ಕವಳಿ ಕತ್ತರಿಸಿದ ಕಬ್ಬು ಜಂಬುನೇರಳೆಹಣ್ಣು ಒತ್ತಿದ ಬೇಳೆ ನೆನೆಗಡಲೆ ಕರ್ಬುಜೀಹಣ್ಣು 2 ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು ಸಾಲುರಸಾಯನ ಸವಿಯೆಳನೀರು ಮೂಲೋಕದೊಡೆಯ ಹಯವದನ ವೆಂಕಟರೇಯ ಪಾಲಿಸೊ ಲಕುಮಿಯ ಕರಕಂಜದಿಂದ 3
--------------
ವಾದಿರಾಜ
ಫಾಲನಯನ ನುತ ಪಾಲಿಸು ಸತತ ಪಾಲಿಸು ಸುರನರ ಜಾಲಸುಚರಿತ ಪ ಲೀಲಾನಟನ ಫಣಿಶೈಲನಿಳಯ ಭಕ್ತ ಪಾಲವಿಧೃತ ವನಮಾಲ ಶ್ರೀಲೋಲ 1 ಬಾಲತನದಿ ನಿಜ ಲೀಲಾ ಚರಿತಗುಣ ಜಾಲವಿಮೋಹಿತ ಬಾಲಾನುಕೂಲ 2 ಧಾರಾಧರಾಭ ಶರೀರ ತಿರಸ್ಕøತ ಮಾರ ವಿಹಗಸಂಚಾರ ಉದಾರ 3 ಸುಜನ ಪರಿ ನಿಗಮ ವಿಚಾರ ವಿಹಾರ 4 ಕರುಣಾವರಣ ನಿಜಶರಣಾಭರಣ ಭಯ ಹರಣ ಸಕಲ ಸುಖಕರಣ ಶ್ರೀರಮಣ 5 ಶೇಷಶಯನ ಕಲಿದೋಷದಮನ ಮೃದು ಭಾಷ ಮನೋಹರಭೂಷ ಸುವೇಷ 6 ಹರಿದಾಸರನು ಬಲು ಹಿರಿದಾಗಿ ಮೆರೆಸುವ ದ್ವಿರದ ವರದ ಶ್ರೀವರದವಿಠಲ 7
--------------
ವೆಂಕಟವರದಾರ್ಯರು
ಬಂಗ್ಲೆ ನಾರಾಯಣ ಕಾಮತರ ರಚನೆಗಳು ಪಾಲಿಸೈ ತ್ರಿಶೂಲಿಯೆ ಮುದದಿಂ | ಕಲಿಕಾಲ ರುದ್ರನೆ ಪಾಲಿಸೈ ತ್ರಿಶೂಲಿಯೆ ಮುದದಿಂ ಪ ಸಿಂಧು ಎನ್ನಯ ಬಂಧು ಬಿಡಿಸೈಯ |ಅಂದು ಪಾಲ ಮುದ ಚಂದ ನಿಂತ ಧರೀ ಆಪ -ದ್ಧಂಧುವೆ ನೀ ಬೇಗ ಬಂದೀಗಲೆನ್ನನು 1 ಧಾಮ ಮುನಿಜನ ಸ್ತೋಮವಂದ್ಯ ಬಿಲ್ಲ ಪ್ರೇಮಿಯೆ ರಿಪು ಕುಲ ಭೀಮ ವಿರೂಪಾಕ್ಷ ಕಾಮಾರಿ ನಂಬಿದೆ 2 ಪನ್ನಗ ಶೇಷಶಾಯಿ ವೆಂಕಟೇಶವಿಠಲ ಪ್ರಿಯರೀ ದಾಸರ ಕಾಯ್ವೆ ಕೈಲಾಸ ನಿವಾಸನೆ 3
--------------
ಅನ್ಯದಾಸರು
ಬಡತನವೆನ್ನನು ಬಾಧಿಪುದೈ ಹರಿ ನುಡಿಯಲೆನಗೆ ನಾಲಗೆ ಬರದೀಪರಿಪ ಅಡಿಯೊಳು ಕೆಡೆದಿಹೆ ತಡಿಗಾಣದೆಯೆ ಕಡಲಣುಗಿಗೊರೆದು ಕಡೆಹಾಯಿಸೊ ದೊರೆ ಅ.ಪ ಮನುಜರು ಯೆನ್ನನು ಮಾನಿಸದಿರುವರು ಮನೆಯೊಳು ಮಕ್ಕಳು ಮಾತನಾಲಿಸರು ಅನುನಯದಿಂ ಸವಿ ವಚನವನುಸುರಲು ವನಿತೆಯುತಾಂ ಕೇಳದೆ ಕೋಪಿಪಳು 1 ಬಂದ ಭಾಗವತರ ಪೂಜೆಯ ಮಾಡಲು ಒಂದಾದರು ಸವಿ ವಸ್ತುವಿಲ್ಲವೈ ಸಂದಣಿ ಸೇರಲು ಮನಸು ಬಾರದು ಕುಂದಹರಿಸು ಮನಕಂಕೆಯ ತಂದು 2 ದಾನವ ಮಾಡಲು ದೀನತೆ ಬಿಡದು ಕಾನನದಿರುತಿಹ ಕುರುಡನಂತಿಹೆನೆ ಏನು ಮಾಡಲೊ ಯೆನ್ನ ಮನದೊಲುಮೆಯ ಬಲ್ಲ ಸಿರಿನಲ್ಲ 3 ಸಾಲದವರು ಗಂಟಲೊಳು ಕೋಲಿಡುವರೊ ಶ್ರೀಲೊಲನೆ ನಾಂ ಮಾಡುವುದೇನು ಲಾಲಿಸಿ ಹೆಜ್ಜಾಜಿಕೇಶವ ಪಾಲಿಸು ಲೀಲೆಯಿಂ ಬಿನ್ನೈಸಿ ಯನ್ನೊಲಿಸು 4
--------------
ಶಾಮಶರ್ಮರು
ಬಂದ-ಬಂದ _ ಇಂದಿರೇಶ ನಂದನಂದನಾ ನಿಖಿಳ ಜನಕ ಕಂಧರಾಶ್ರಯಾ ಪ ಬಂದ ಬಂದ ಭಜಕ ಬಂಧು ಮಂದರಾದ್ರಿಧರ ಅರ- ವಿಂದನಯನ ಸುಂದರಾಂಗ ಸಿಂಧುಶಯನ ನಳಿನನಾಭ ಅ.ಪ. ನೀಲಮೇಘ ಶ್ಯಾಮಸುಂದರಾತನಿಗೆ ಮೇಲುಸಮರು ಇಲ್ಲವೆನಿಸಿದ ಲೀಲೆಯಿಂದ ಜಗವ ಸೃಜಿಸಿ ಪಾಲಿಸುತ್ತ ಮತ್ತೆ ಅಳಿಸಿ ಆಲದೆಲೆಯಮೇಲೆ ಸಿರಿ ಲೋಲನಾಗಿ ಮೆರೆವ ಕೃಷ್ಣ 1 ಐದು ರೂಪದಿಂದ ಕ್ರೀಡಿಪಾ ಪ್ರಕೃತಿ ಬೋಧ್ಯ ಸಿರಿಗುನಾಥ ನಾಯಕಾ ಆದಿಮಧ್ಯ ಅಂತ್ಯ ಶೂನ್ಯ ಮೋದಪೂರ್ಣ ಜ್ಞಾನಕಾಯ ಮೋದ ಮುನಿಯ ಹೃದಯಸದನ ಗೋಧರಾತಪತ್ರ ಶ್ರೀಪ 2 ಆದಾನಾದಿ ಕರ್ತ ಬ್ರಹ್ಮನೂ ದಿವಿಜ ಸಾಧುಸಂಘ ಸೇವೆ ಗೊಂಬನೂ ವೇದವೇದ್ಯ ವೇದ ವಿನುತ ವೇದ ಭಾಗಗೈದು ಪೊರೆದ ಛೇದ ಭೇದರಹಿತ ಗಾತ್ರ ಸಾಧು ಪ್ರಾಪ್ಯ ಬಾದರಾಯಣ 3 ದಾಸಜನಕೆ ಮುಕ್ತಿನೀಡುವ ಮಹಿ- ದಾಸಕಪಿಲ ಪೂರ್ಣ ಕಾಮನೂ ದೋಷ ದೂರ ನಾಶರಹಿತ ವಾಸುದೇವ ಕ್ಲೇಶವಿದೂರ ಈಶವಿಧಿಗಳನ್ನು ಕುಣಿಪ ಕೇಶವಾದ್ಯನಂತ ರೂಪ4 ಮೊತ್ತಜಗಕೆ ಸತ್ತೆನೀಡುವಾ ನಿಖಿಳ ಸತ್ಯ ಜಗದ ಚೇಷ್ಟೆನಡೆಸುವಾ ಮೊತ್ತಶಬ್ದ ಘೋಷವರ್ಣ ಮತ್ತೆ ಪ್ರಣವ ಮಂತ್ರಗಣದಿ ನಿಖಿಳ ಯಜ್ಞ ಭೋಕ್ತನಾಥ ಅಂಗಭೂತ 5 ಜಿಷ್ಣುಸೂತ ಕೃಷ್ಣೆಕಾಯ್ದವಾ ಸ್ವರತ ವಿಷ್ಣು ಪುರುಷಸೂಕ್ತ ಸುಮೇಯಾ ವಿಶ್ವಕರ್ತ ವಿಶ್ವಭೋಕ್ತ ವಿಶ್ವರೂಪ ವಿಶ್ವಭಿನ್ನ ವಿಶ್ವವ್ಯಾಪ್ತ ಶಶ್ವದೇಕ ತೈಜಸ ಪ್ರಾಜ್ಞತುರ್ಯ 6 ಸತ್ಯಧರ್ಮಗಳನು ಕಾಯುವಾ ದುಷ್ಟ ದೈತ್ಯತತಿಯ ದಮನಗೈಯ್ಯುವಾ ಮತ್ಸ್ಯಕೂರ್ಮ ಕೋಲ ಚರಿತ ಭೃತ್ಯಭಾಗ್ಯ ನಾರಸಿಂಹ ಸತ್ಯಶೀಲ ಬಲಿಯವರದ ಕ್ಷಿತಿಪದಮನ ಕ್ಷಾತ್ರವೈರಿ ಪರಶುಧಾರಿ7 ವಿಶ್ವ ಬಿಂಬನು ರಾ ಜೀವಪೀಠನನ್ನು ಪಡೆದನೂ ರಾವಣಾರಿ ಕೃಷ್ಣ ಬುದ್ಧ ಭಾವಿಕಲ್ಕಿ ನಿತ್ಯಮಹಿಮ ಭಾವಜಾರಿ ಪ್ರೀಯ ಸಖನು 8 ಹಯಗ್ರೀವ ದತ್ತ ಋಷಭನೂ ಅಪ್ರ- ಮೇಯ ಹಂಸ ಶಿಂಶುಮಾರನು ಜಯಮುನೀಂದ್ರ ವಾಯುಹೃಸ್ಥ ಜಯೆಯ ರಮಣ ಕೃಷ್ಣವಿಠಲ ದಯದಿ ಪೊರೆಯಲೆಮ್ಮನೀಗ ಜಯವು ಎನುತ ನಲಿದು ನಲಿದು 9
--------------
ಕೃಷ್ಣವಿಠಲದಾಸರು
ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ಪ ವಿಕಟ ಪೂತನಿಯ ಕೊಂದುಶಕಟಾಸುರನ ಪಾದದಿ ತುಳಿದುಧಿಕಿಟ ಧಿಕಿಟ ಎನ್ನುತಲಿಕುಕಿಲಿರಿದು ಕುಣಿಯುತ ಮನೆಗೆ 1 ಗೋವರ್ಧನ ಪರ್ವತವನೆತ್ತಿಗೋವುಗಳ ಕಾಯ್ದು ತನ್ನಮಾವ ಕಂಸನ ಕೊಂದುಕಾವನ ಜನಕ ಪಾಡುತ ಮನೆಗೆ 2 ಫಾಲನೇತ್ರ ಚಂದ್ರಶೇಖರನಸುಲಭದಿಂದ ಬಾಧೆಯ ಬಿಡಿಸಿಪಾಲಿಸುವ ಕರುಣದಿಂದಬೇಲಾಪುರದ ಚೆನ್ನಕೇಶವ3
--------------
ಕನಕದಾಸ
ಬಂದರ್ನೋಡೀ ಸುಂದರ್ತುಲಶೀರಾಮದಾಸರ್ಬಂದರು ಪ ಅಂದದೆಮ್ಮಾಕಂದರ್ಪಾಲಿಸೆಂದರ್ ತಾವೇ ಚಂದಾದಿಂದಾ ಇಂದ್ರರ್ಪದವಿಗಾಗಿ ಬೇಗಾ 1 ಭಕ್ತಿ ಮುಕ್ತಿ ಯೆರಡಕ್ಕೊಂದೆಯುಕ್ತಿ ತೋರಿ ಮತ್ತೆ ತಾನ್ ಭಕ್ತಿಜ್ಞಾನ ಯೇತನ್ಮಧ್ಯೆ ಹೊಕ್ಕಿ ಶಕ್ತರಾಗಿ ಬೇಗಾ 2 ಆಟಾಪಟಾವೆಂಬಳ ಕಳ್ಳ ಬೂಟಕಂಗಳನ್ನು ಬಿಡಿಸಿ ಸಾಟಿಯಾಗದ ತ್ರಿಕೂಟಮೆಂಬಟರಾರ್ಭಟಾ ತೋರಲ್ ಬೇಗಾ3 ಪಕ್ಷೇಂದ್ರನೇರಿ ಬಂದ ಯಕ್ಷರಕ್ಷನಾಗಿ ನಿಂದಾ ಸಾಕ್ಷಿ ಕೇಳುವಂತಾ ಅಡಿಯರ್ಗಾಕ್ಷಣವೆ ಮೋಕ್ಷ ತೋರಲ್ 4 ಆಶಪಾಶವೆಂಬೊದನ್ನು ನಾಶಮಾಡೊ ಈಶನಾಮಾ ದಾಸನಾದವರ್ಗೆ ಸಾಶಿರಾಂಗಾವಾಗಿ ಬೇಗಾ 5
--------------
ಚನ್ನಪಟ್ಟಣದ ಅಹೋಬಲದಾಸರು
ಬಂದು ನಿಲ್ಲೆಲೊ ಮನಮಂದಿರದೊಳು ಹರಿ ಇಂದುವದನ ಆನಂದದಿಂದ ಪ. ಮುಂದಗಮನೆರ ಅಂದದಿ ಕೂಡ್ಯರ- ವಿಂದ ಮಧ್ಯದಿ ಬಹು ಸುಂದರ ವೆಂಕಟ ಅ.ಪ. ಗಜವ ಪಾಲಿಸಿದಂಥ ಭುಜಗಶಯನ ಹರೆ ತ್ರಿಜಗದೊಳಗೆ ದಿಗ್ವಿಜಯ ಮೂರುತಿ ಗೋ- ವ್ರಜವ ಪಾಲಿಸಿ ಭೂಭುಜರ ಪೊರೆದೆ ಅಂ- ಬುಜನೇತ್ರ ಅಜಪಿತ ಭಜಿಸಲಾಪೆನೆ ನಿನ್ನ ಭುಜಗ ಭೂಷಣವಂದ್ಯ ರಜ ತಮೊ ಸತ್ವದಿ ತ್ರಿಜಗವ ಸೃಷ್ಟಿಪೆ ಕುಜನರ ಶಿಕ್ಷಿಪೆ ರಜ ತಮೊ ದೂರನೆ ಸುಜನರ ಪೊರೆಯುವ ಋಜುಗಣವಂದಿತ 1 ವ್ಯಾಪ್ತಾ ಜಗದಿ ನಿರ್ಲಿಪ್ತ ಗುಣಗಳಿಂದ ಆಪ್ತ ಜೀವಕೆ ಸುಷುಪ್ತಿ ಕಾಲದಿ ನೀ ಗುಪ್ತನಾಗಿ ಪೊರೆವ ಶಕ್ತನಹುದೊ ತ್ರಿ- ಸಪ್ತ ಇಂದ್ರಿಯಗಳ ತೃಪ್ತಿಗೊಳಿಸು ನಿನ್ನೊಳ್ ಸಪ್ತ ಋಷಿಗಳಿಂದ ಗುಪ್ತರ್ಚನೆಗೊಂಬೆ ಸಪ್ತಜಿಹ್ವನೊಳು ವ್ಯಾಪ್ತನಾಗಿ ಸುರರ ತೃಪ್ತಿಪಡಿಸುವ ವ್ಯಾಪ್ತ ಮೂರುತಿಯೆ ಸಪ್ತ ಸಪ್ತ ಭುವನೇಶ ಪ್ರಕಾಶ 2 ವೇದಸುತಗೆ ಇತ್ತು ಆದರದಿ ಸುಧೆ ಮೋದದಿ ಸುರರಿಗುಣಿಸಿ ಭೂದೇವಿಯನು ಕಾಯ್ದೆ ಬಾಧಿಸೆ ಖಳ ಸುತನ ಭೇದಿಸಿ ಕಂಭ ಬಂದೆ ಪಾದದಿ ಗಂಗೆ ಪೆತ್ತು ಬಾಧೆ ಕ್ಷತ್ರಿಯರಿಗಿತ್ತೆ ಆದರದಲಿ ಸುಗ್ರೀವನ ಪೊರೆದೆ ಯಾದವ ವಂಶ ಮಹೋದಧಿ ಚಂದ್ರ ಸಾಧಿಸಿ ತ್ರಿಪುರರ ಛೇಧಿಸಿ ಕಲಿಮುಖ- ರಾದ ದುಷ್ಟರ ಸೀಳಿ ಬಾಧೆಯ ಬಿಡಿಸಿದೆ 3 ಪದ್ಮನಾಭನ ತೋರೊ ಪದ್ಮಸಂಭವ ಜನಕ ಪದ್ಮನಾಭನೆ ಹೃತ್ಪದ್ಮ ಮಧ್ಯದಿ ವಾಸ ಪದ್ಮ ಬಾಂಧವ ತೇಜ ಪದ್ಮ ನಯನಕರ ಪದ್ಮದಿಂದಲಿ ನೀ ಪದ್ಮಾವತಿಯ ಕೂಡ್ದೆ ಪದ್ಮವೈರಿಯ ಕೋಟಿ ಮುದ್ದು ಮುಖದ ತೇಜ ಪದ್ಮ ಉದರ ಷಟ್ಪದ್ಮದಿ ವಾಸ ಪದ್ಮ ಸರೋವರ ತೀರವಾಸ ಹೃ ತ್ಪದ್ಮ ಮಧ್ಯದಿ ಭೂಪದ್ಮಿನಿ ಸಹಿತ 4 ಆಪಾರ ಮಹಿಮನೆ ಗೋಪಾಲಕೃಷ್ಣವಿಠ್ಠಲ ಭೂಪರೈವರ ಕಾಯ್ದೆ ದ್ರೌಪದಿ ಮಾನದೊಡೆಯ ನೀ ಪ್ರೀತಿಯಿಂದ ಪೋಗಿ ತಾಪವ ಬಿಡಿಸಿದೆ ವ್ಯಾಪಕನೊ ಜಗಸ್ಥಾಪಕನೊ ಬಹು ರೂಪಕನೊ ದುಷ್ಟತಾಪಕನೊ ಹರಿ ಪಾಪ ಹರಿಸಿ ಕರ್ಮಲೇಪನ ಮಾಡದೆ ಪರಿ ಪರಿಯಿಂದ ಕಾಪಾಡೊ ಭಕ್ತರ5
--------------
ಅಂಬಾಬಾಯಿ
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ ಜ್ಞಾನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು
ಬಂದು ನೊಂದೆನು ನಾನು | ಮುಂದೆ ರಕ್ಷಿಸು ನೀನು | ಎಂದೆಂದೂ ತಾರದಂತೆ | ತಂದೆ ಸದ್ಗುರು ನಿನ್ನ ಹೊಂದಿದೆನು | ಪರಮಾನಂದವನು ಪಾಲಿಸೀಗ ಬೇಗ ಪ ಎನ್ನವಗುಣದೋಷಗಳ | ಅರಸುವದ್ಯಾಕೆ | ನಿನ್ನ ಪಾದವ ನಂಬಿದೆ || ಚಿನ್ನಕ್ಹತ್ತಿದ ಟೆಂಕ ಭಿನ್ನವಾಗುವದುಂಟೆ | ಇನ್ನು ಬ್ಯಾರೆನ್ನಬಹುದೆ ಇಹುದೆ1 ಉರಿಯ ಮುಟ್ಟಿ ಕಾಷ್ಠವನು | ಮರಳಿ ತರಬಹುದೇ | ಪರಮ ತತ್ತ್ವವ ತಿಳಿಯದೆ || ಹರಿವ ಶರಧಿಗೆ ಜಲವು ಹಲವು ಕೂಡಿದರದರ | ವಿವರದಲಿ ನೋಡಲರಿದೇ ಜರಿದೆ 2 ಚಿತ್ತ ಕಮಲವ ನಿನ್ನ ಪಾದಕರ್ಪಿಸಿದೆನೋ | ಸತ್ಯದಲಿ ಮತ್ತೆ ಪಾತಕವು ಯಾರಿಗೆ | ಕರ್ತೃ ಭವತಾರಕನು ಕೊಟ್ಟ ಕುದುರೆಯ ಮೇಲೆ | ಎಷ್ಟೊಂದು ಹೇರಲಿಂದು ತಂದು 3
--------------
ಭಾವತರಕರು