ಒಟ್ಟು 2071 ಕಡೆಗಳಲ್ಲಿ , 111 ದಾಸರು , 1592 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂತವ್ವಾ ತಂಗಿ ಬಂತವ್ವಾ ಈ ಗೊಂದು ಮಾತು ನೆನಪು ಬಂತವ್ವಾ ಪ ಅಂತರಂಗದೊಳು ಕಂತುಜನಕ ತನ್ನ ಚಿಂತಿಪರ್ಹಂತೆಲಿ ನಿಂತಿಹ್ಯನಂತೆ ಅ.ಪ ಮರುಳು ಬುದ್ಧಿಯನು ನೀಗವ್ವ ಬರೆ ತಿರುತಿರುಗಿ ಮರುಗಬೇಡವ್ವ ಕರಿರಾಜ ದ್ವರದನು ತರುಣಿಯ ಪೊರೆದನು ಸರಸದಿ ಪಾಂಡವರ ನೆರಳಾಗಿ ನಿಂತನು 1 ಹಂಚಿಕೆ ಪೇಳುವೆ ನಿನಗವ್ವ ನಿನ್ನ ವಾಂಛಲ್ಯ ಗುಣವೊಂದು ಕಳೆಯವ್ವ ಕಿಂಚಿತ್ತು ಮನದೊಳು ವಂಚನಿಲ್ಲದೆ ವಿ ರಂಚಿಪಿತನ ನಂಬಿ ಭಜಿಸವ್ವ 2 ಸುಳ್ಳೆ ಕಳವಳಿಸುವುದ್ಯಾಕವ್ವ ತಿಳಿ ನಳಿನಾಕ್ಷನ ಘನ ಮಹಿಮ್ಯವ್ವ ಹೊಲಸು ದೇಹದಾಸೆ ನೀಗಿದ ಭಕ್ತಗೆ ಸುಲಭನು ಶ್ರೀರಾಮ ಕೇಳವ್ವ 3
--------------
ರಾಮದಾಸರು
ಬಂದ ದುರಿತಗಳೆಲ್ಲ ಪರಿಹರಿಸಿ ಪೊರೆವದು ಪ ಎಷ್ಟು ಪರಿಯಲಿ ನಿನ್ನ ಎಷ್ಟು ನಾ ಮೊರೆ ಇಡಲು ಕಷ್ಟವನು ಕಳೆವ ಭರ ಕಾಣಲಿಲ್ಲ ದೃಷ್ಟಿಲಿ ನೋಡದೆ ಹೋಗಿ ದಣಿಸುವ 1 ಸಾರ್ಥಕವು ಏನು ಎನ್ನ ಸಲಹದಿರಲು ಕೀರ್ತಿವಂತನು ಎನಿಸಿಕೊಂಡು ಕಾಯದಿರೆ ಅಪಕೀರ್ತಿ ಬಾರದೆ ನಿನಗೆ ಅಧಿಕ ಜನರೊಳಗೆ 2 ಧಾರುಣಿಯೊಳಧಿಕರಿನ್ನಾರು ನಿನಗಿನ್ನು ತೋರು ಮಾರಜನಕನಾದ ಮಹಾಮಹಿಮನೆ ಧೀರ 'ಹೊನ್ನಯ್ಯ ವಿಠ್ಠಲ’ ದೀನ ರಕ್ಷಕನೆಂದು ಸಾರುತದೆ ನಿಮ್ಮ ಕೀರ್ತಿ ಸಕಲ ಲೋಕದಲಿ 3
--------------
ಹೆನ್ನೆರಂಗದಾಸರು
ಬಂದ ಬಂದಾ ಕದರೂರಿಂದ ನಿಂದಾ ಪ. ಬಂದ ಕದರೂರಿಂದ ಕರಿಗಿರಿ ಎಂದು ಕರೆಸುವ ಪುಣ್ಯಕ್ಷೇತ್ರಕೆ ತಂದೆ ಮುದ್ದುಮೋಹನ್ನ ಗುರುಗಳು ತಂದು ಸ್ಥಾಪಿಸೆ ತಂದೆ ಹನುಮನು ಅ.ಪ. ವ್ಯಾಸತೀರ್ಥರು ಸ್ಥಾಪಿಸಿದ ಶ್ರೀ ದಾಸಕೂಟದಿ ಉದಿಸಿದಂಥಾ ವಾಸುದೇವನ ಭಕ್ತವಂಶದಿ ಲೇಸುಮತಿಯಿಂ ಜನಿಸಿ ಭಕ್ತರ ಆಸೆಗಳ ಪೂರೈಸುತಲಿ ಬಹು ತೋಷದಂಕಿತಗಳಿತ್ತು ನಾಶರಹಿತನ ಭಕ್ತರೆನಿಸಿದ ದಾಸವರ್ಯರ ಮಂದಿರಕೆ ತಾ 1 ಶಾಲಿವಾಹನ ಶಕವು ಸಾವಿರ ಮೇಲೆ ಶತ ಎಂಟರವತ್ತೊಂದು ಕಾಲ ಫಾಲ್ಗುಣ ಕೃಷ್ಣ ಪಂಚಮಿ ಓಲೈಸುವ ಪ್ರಮಾಥಿ ವತ್ಸರ ಶೀಲ ಗುರುವಾಸರದಿ ಬುಧರ ಮೇಳದಲಿ ವೇದೋಕ್ತದಿಂದಲಿ ಶೀಲ ಶ್ರೀ ಕೃಷ್ಣದಾಸತೀರ್ಥರು ಲೀಲೆಯಿಂದ ಪ್ರತಿಷ್ಟಿಸಲು ತಾ 2 ರಾಮದೂತ ಶ್ರೀ ಹನುಮ ಬಂದನು ಭೀಮ ಬಲ ವಿಕ್ರಮನು ಬಂದನು ಶ್ರೀ ಮದಾನಂದತೀರ್ಥ ಬಂದನು ಪ್ರೇಮಭಕ್ತರ ಪೊರೆವ ಬಂದನು ಸ್ವಾಮಿಗೋಪಾಲಕೃಷ್ಣ ವಿಠಲನ ಪ್ರೇಮಭಕ್ತನು ದಾಸ ಭವನಕೆ 3
--------------
ಅಂಬಾಬಾಯಿ
ಬಂದ ಶಿರಿ ರಾಘವೇಂದ್ರಮೂರುತಿ ಮನ ಮಂದಿರದೊಳಗೆ ಸರಸದಿ ಪ ಬಂದನು ಭಕುತನ ಬಂಧನ ಬಿಡಿಸ್ಯಾ - ನಂದನೀಡುತ ಮುದದಿಂದಲಿ ಭರದಿಂದಅ.ಪ ಮುದದಲಿ ಶೋಭಿಪ ವದÀನದೊಳೊಪ್ಪುವ ರದನದಿ ಶೋಭಿತನು ಉದಿಸಿದ ಎನ್ನಯ ಹೃದಯಾಂಬರದೊಳು ಸದಯ ಮೂರುತಿ ಧರನು ಆಗಾಡಿದ ಮೃದು ನುಡಿಯಾ ಅತಿ ಭಿಡಿಯಾ ಪದಸಕಿತ - ಸುಖನೀಡುತ ಇದು ಮೊದಲಾ ಗಿಹ - ಅದ್ಭುತ ಮಹಿಮೆಯ ಪದÀದಲಿ ತೋರುತ ಸದಮಲ ಮನದೊಳು 1 ಕುಣಿದಾಡುತ ಗುಣಗಳ ಗಣಿಸುವ ಭಕ್ತರ ದಣಿಸೆನೊ ಭವದೊಳಗೆ ಗಣಿಸುವೆ ದಾಸರ ಗಣದೊಳಗವನಿಗೆ ಉಣಿಸುವೆ ಪರಸುಖ ಕೊನಿಗೆ ಬೇಡಿದ ಇಷ್ಟವ ಕೊಡುವೆ ದುರಿತವ ತಡಿವೆ ಪೊರೆಯುತಾ ಬೆರೆಯುತಾ ಮಣಿಸುತಾ ತಿಳಿಸುತಾ ಕ್ಷಣ ಕ್ಷಣದಲಿ ವೀಕ್ಷಣದಿಂದಲಿ ಶÀ್ರಮ ತೃಣ ಸಮವೋ ಧಣಿ ನಾ ನಿನಗೆಂದು 2 ಧಿಟಜ್ಞಾನ - ಭಕುತಿಯ ಥಟನೆ ಕೊಡುವೊ ಉತ್ಕಟ ಮಹಿಮನೋ ನಾನು ಪಟುತರ ಎನಪದ ಚಟುಲ ನಳಿನಯುಗ ಷಟ್ಪದ ಸಮ ನೀನೋ ನಾನಾಡಿದ ನುಡಿ ಖರೆಯಾ - ಮರೆಯಾ ಕೊಂಡಾಡೆಲೋ ನೀಡೆಲೋ ಘಟಿಸುವೆ ಸಮಯಕೆ - ಧಿಟ ಗುರುಜಗನ್ನಾಥ ವಿಠಲನ ಹೃತ್ಯಂ - ಪುಟದಿ ತೋರುವೆನೆಂದು 3
--------------
ಗುರುಜಗನ್ನಾಥದಾಸರು
ಬಂದ ಶ್ರೀ ಹರಿ ಬಂದ ಪ ಬಂದ ಬಂದ ಮುಚುಕುಂದ ಪರದ ಅರ- ವಿಂದನಯನ ಗೋವಿಂದ ಪರಾತ್ವರ ಕಂದನೆನ್ನ ಮನ ಮಂದಿರಕೀಗಲೆ ನಂದವ ನೀಡುತ ಇಂದಿರೆಸಹಿತದಿ ಅ.ಪ. ಪೊತ್ತವ ಬಂದ ಅಜಿತನುಬಂದ ಚಾರುವರಾಹನು ಭೂಸಹಬಂದ ಪೋರನ ಸಲಹಿದ ಘೋರನು ಬಂದ ಭಾರ್ಗವ ಬಂದ ಕೌರವವಂಶಕುಠಾರನು ಬಂದ ಕಲ್ಕಿಯು ಬಂದ 1 ಉಸುರಲು ಹಯಮುಖಬಂದ ದತ್ತನುಬಂದ ನೀಡಲು ಯಜ್ಞನುಬಂದ ಸಾಧುಹರಿನಾರಾಯಣ ಬಂದ ಶಿಂಶುಮಾರನು ಬಂದ ಧನ್ವಂತ್ರಿಯು ಬಂದ 2 ಶ್ರೀ ವಿಷ್ಣುವು ಬಂದ ಉಲ್ಲಾಸದಿ ಬಂದ ಸಂತೋಷನು ಬಂದ ತೈಜಸ ಕರುಣದಿ ಬಂದ ಮುಕ್ತೇಶನು ಬಂದ ಪರಾದ್ಯನಂತನು ಬಂದ 3 ಜಗನೂಕೂವ ಬಂದ ಪುರುಹೂತ ವಿನುತ ಸಕಲಾರ್ತಿಹರ ತಾ ಬಂದ ವೈರಾಜ್ಯನು ಬಂದ ಶೃತಿ- ನೀಕ ಸುವಂದಿತನಿರುಪಮ ಬಂದ ವಾಕುಮನಕೆ ಸಾಕಲ್ಯಸಿಗದ ಪುಣ್ಯ- ವಿವರ್ಜಿತ ಭಗಲೋಕೈಕ ವಂದ್ಯ ನಿಜಭಕ್ತಗಣ ಜಯಪರಾಕುನುಡಿಯುತಿರೆ ಮೆಲ್ಲ ಮೆಲ್ಲಗೆ4 ಸರ್ವಸಾಕ್ಷಿಗಭೀರ ಪರಾಕು ಸ್ವತಂತ್ರನೆ ಪರಾಕು ಸರ್ವರಪಾಲಿಪ ಸರ್ವರ ರಕ್ಷಿಪ ಸರ್ವಚರಾಚರಭಿನ್ನ ಪರಾಕು ಪ್ರತಿಪಾದ್ಯಪರಾರು ಸರ್ವಕಾಲದಲಿ ಸರ್ವದೇಶದೊಳು ಸರ್ವದೆಶೆಯೊಳು ಸಮನೆ ಪರಾಕು ಪರಾಕು 5 ನಿತ್ಯಾನಿತ್ಯಜಗಜ್ಜನಕ ಸರ್ವೋತ್ತಮ ಸತ್ಯಸಂಕಲ್ಪ ಪರಾಕು ನಿಖಿಳಪ್ರದಾಯಕ ಪರಾಕು ಭೃತ್ಯಾನುಗ್ರಹ ಕಾರಕಶೀಲ ಸದಾಪ್ತತಮ ವಿಶ್ವಾತ್ಮನೆಪರಾಕು ನಿತೈಶ್ಪರ್ಯ ಕೀತ್ರ್ಯಾತ್ಮಕ ಸರ್ವಾತತ ಬಲವಿಖ್ಯಾತಪರಾಕು ನೀತ ಜ್ಞಾನಾನಂದ ಪರಿಪೂರ್ಣನಿತ್ಯತೃಪ್ತ ಮಹಾಂತ ಪರಾಕು ಪರಾಕು 6 ಪರಾಕು ರೂಪಾತ್ಮ ಪರಾಕು ಪುರುಷ ಸೂಕ್ತ ಸುಗೇಯ ಪ್ರಖ್ಯಾತ ಮಹಾಮಹಿಮ ಪರಾಕು ನಾಮಕ ಪರಾಕು ಸುನಾಮ ಓಂಕಾರಾಧಿಪ ಪರಾಕು ವಿಭೂತಿ ಪರಾಕು 7 ಪ್ರೇಮ ಚೊಕ್ಕ ಸೃಷ್ಟಿಗೈವನಿತ್ಯಸುನೇಮ ಕರುಣಾಮಣಿ ಶ್ರೀಕಾಮ ಅಕ್ಕರೆಯಲಿ ಜಗಕಾವ ನಿಸ್ಸೀಮ ಮುಕ್ಕಣ್ಣ ವಿಧಿಸಿರಿ ಸಾರ್ವಭೌಮ ವಿನುತ ಗುಣಲಲಾಮ ಸುನಾಮ ಮೇಘಶ್ಯಾಮ 8 ಸುಂದರ ಬಂದ ಸೃಷ್ಠಿಸ್ಥಿತಿಲಯಗೈವ ಮು- ವೃಂದಕಳೆದು ನಿಜ- ಸುಧಾರ್ಣವ ಬೃಹತೀನಾಮಗ ಮಂದಸ್ಮಿತ ವದನವ ತೊರುವ ಈತನು ಸ್ಯಂದನವೇರಿಹ ಜಯಮುನಿಹೃದಯಗ ಮಧ್ವರಮಾವರ ಶ್ರೀಕೃಷ್ಣವಿಠಲನು ಭವ ಪರಿವಾರದ ಕೂಡಿಯೆ ಬಂದಾ 9
--------------
ಕೃಷ್ಣವಿಠಲದಾಸರು
ಬಂದನು ರಘುವೀರ ರಣಧೀರ ಪ ತಡೆ ಭರತನೆ ಮುಂದಡಿಯಿಡಬೇಡ ದುಡುಕಿ ಬೀಳದಿರು ಬಡಜನ ಮುಖಕೆ 1 ಸೀತಾನಾಥನ ದೂತನಾದೆನ್ನ ಮಾತನು ಕೇಳು ಆತುರಪಡದೆ 2 ಭ್ರಾತನ ನೋಡಲು ಕಾತರನಾಗಿ ವಾತವೇಗದೊಳು ಆತನು ಬರುತಿಹ 3 ಅದೊ ನೋಡದೊ ನೋಡದರ ದೆಶೆಯಲಿ ವಿದುಶತಕಿಲ್ಲದಗದಿರದದ್ಯುತಿಯ 4 ಅದೊ ಪುಷ್ಪಕವು ಅದರ ಪ್ರಭೆ ನೋಡು ಅದರಿರವ ನೋಡು ಒದಗಿ ಬರುತಿದೆ 5 ಧಾಮ ಮಧ್ಯೆ ನಿ ಸ್ಸೀಮ ನಿಮ್ಮಣ್ಣ ರಾಮನ ನೋಡು 6 ವಾಮದಿ ಸೀತಾಭಾಮೆ ಕುಳ್ಳಿಹಳು ಪ್ರೇಮದಿ ಲಕ್ಷ್ಮಣ ಚಾಮರ ಬೀಸುವ 7 ಬಲದಿ ಸುಗ್ರೀವ ನೆಲೆಸಿಹ ನೋಡು ಕೆಲದಿ ವಿಭೀಷಣ ನಲಿಯುತ ನಿಂತಿಹ8 ಅಂಗದ ತನ್ನಯ ಜಂಘೆಲಿ ದೇವನ ಮಂಗಳ ಚರಣವ ಹಿಂಗದೆ ಸೇವಿಪ 9 ವೃದ್ಧ ಜಾಂಬವ ಗದ್ದುಗೆ ಮುಂದಿಹ ಯುದ್ಧ ಪ್ರವೀಣರು ಸಿದ್ಧರಾಗಿಹರು 10 ಉಳಿದ ಕಪಿ ದನುಜ ದಳಗಳು ಹಿಂದೆ ಕಲಕಲ ಮಾಡುತ ಉಲಿಯುತಲಿಹವು 11 ಅರರೆ ವಿಮಾನವು ತಿರುಗಿತು ನೋಡು ಧರಣಿಗೆರಗುತಿದೆ ಭರದೊಳು ನೋಡು 12 ಭಳಿರೇ ರಾಮನು ಇಳಿದನು ನೋಡು ಕಳವಳವೆಲ್ಲವ ಕಳೆಯುತ ನೋಡು 13 ಬಂದನು ಅದಕೊ ಬಂದೇ ಬಂದನು ಇಂದುಮುಖಿಯ ತಾ ಹಿಂದಿಟ್ಟುಕೊಂಡು14 ಮುಂದೆ ಬರುವ ಕಪಿಯನು ಉಳಿದು ಸುಂದರ ಮುಖವು ಕುಂದಿದೆ ನೋಡು 15 ನಡೆದು ಬರುತಿಹ ಮಡದಿಯೊಡಗೂಡಿ ತಡಮಾಡದಿರು ಪೊಡಮಡು ಪೋಗು 16 ಇಂತು ನುಡಿದು ಧೀಮಂತನಾದ ಹನು- ಮಂತ ಚಿಗಿದು ಖಗನಂತೆ ಬಂದಿಳಿದ17 ವಾತಸುತನ ಸವಿಮಾತಲಿ ಭರತನು ಪ್ರೀತಿಲಿ ತಿರುಗಿದನಾತುರದಿಂದ 18 ನೋಡುತ ರಾಮನ ಓಡುತ ಬಂದೀ ಡಾಡಿದ ತನುವ ಬಾಡಿದ ಮುಖದಿ 19 ಅನುಜನ ನೋಡಿ ದನುಜಾರಿಯಾಗ ಮನ ಮರುಗಿದ ಬಲು ಕನಿಕರದಿಂದ 20 ರಂಗೇಶವಿಠಲ ಕಂಗಳ ಜಲದೊಳು ಮಂಗಳಯುತನಾಲಿಂಗನಗೈದ 21
--------------
ರಂಗೇಶವಿಠಲದಾಸರು
ಬಂದನೇನೆ ಸುಂದರ ಶ್ರೀರಾಮ ಚಂದಿರ ಪ ಸಿರಿವತ್ಸಧಾರನು ಶ್ರೀತಜನೋದ್ಧಾರನು ಮಾರ ಸುಂದರನು ಮಾ ಮನೋಹರನು 1 ಕೋಮಲ ಗಾತ್ರನು ಕಮಲಕಳತ್ರನು ಕಮಲಾಪ್ತ ತೇಜನು ವಿಮಲ ಸತ್ಪಾತ್ರನು 2 ಸಾಸಿರನಾಮನು ಭಾಸುರವದನನು ಈಶ ವಂದಿತನು ಶೇಷವಿಠ್ಠಲನು 3
--------------
ಬಾಗೇಪಲ್ಲಿ ಶೇಷದಾಸರು
ಬಂದನೊ ಸುಜನರ ಸಂದಣಿಯೊಳಗತಿಸುಂದರ ರಥವೇರಿ ಗುರುವರ ಬಂದನೊ ಪ ಬಂದಿ ಜನರು ಮುದದಿಂದ ಬಹುಪರಾಕೆಂದು ನುಡಿಯಲಾನಂದ ಬೀರುತ ಬಂದನೊ ಅ.ಪ. ಕ್ಷಿತಿ ಸುರಪತಿ ಶುಭಮತಿ ಬಲ್ಮತದವರೊಯತಿ ಪರರತಿಶಯ ದಶಮತಿ ಸಂ-ಸ್ಕøತ ಭಾಷಣದವರೊ ಭಯಹರಣನೆಂಬೊ ವಾ-ರುತಿಯ ಕೀರುತಿಯ ಪೂರುತಿಯ ಕೇ-ಳುತ ಮಹಿಮಾಂಗಣಕಥಿಸುತ ಗ್ರಂಥಿಸುತ ತುತಿಶುತನುತಿಸಿ ಯತಿ ಶಿರೋಮಣಿಗೆರತುನ ಖಚಿತವಾದಾರುತಿಯ ಬೆಳಗಿರೆ 1 ಸುರತರು ಶುಭ ಧೊರೆಯೋ ವಾಗ್ಝರಿಯೋಸರಸಾರ್ತಿ ಜನಗಳ ನೆರೆಸುತಾದರಿಸುತಾಬಲು ಸುಖ ಸುರಿಸುತಾ ದರಿದ್ರವ ತರಿದುಪೊರೆದೂ ಕರೆದವರಿಗೆ ಕೈ-ಶರೆಯಾಗುವೆನೆಂಧರುಷದಿ ಗುರುವರ ಬಂದನೊ 2 ವಾಲಗ ಘೊರ್ಮಿಡೆ ಭಟರುಗಳ ಹೆಗಲ ಮ್ಯಾಲೆಝಗ ಝಗಿಸುವ ಛಡಿಗಳೊ ಕುಣಿಕುಣಿದಾಡುವವರಹಿ ವೇಣಿಗಳೋ ವಾಣಿಗಳು ಶ್ರೀಣಿಗಳು ಶೋಭಿಸೆಸುಜನರು ಕೈ ಮುಗಿವರು ನಗುವರುಸಂಭ್ರಮದಿಂದ ಬಿಗಿವರು ದೃಗಾರೋಢನದಿಜಿಗಿದು ಅಘದೂರೊಗೆದ ಜನರೊಳುವೆಗ್ಗಳದಲಿಂದಿರೇಶನ ಭಕುತಾಗ್ರಣಿ ಬಂದನೊ 3 ಇಲ್ಲಿ ವರ್ಣಿತವಾದ ಯತಿಗಳು ಯಾರೆಂದು ತಿಳಿಯದು.
--------------
ಇಂದಿರೇಶರು
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ
ಬದುಕು ಬದುಕು ನಂಜುಂಡಾ ಮ ಪರಿಯಂತ ಪ ಜನನಿಯ ಮಾತನು ಮೀರದೆ ಪರ ವನಿತೆಯರಿಗೆ ಮನಸೋಲದೆ ಬಿನುಗು ದೈವಂಗಳಿಗೆರಗದೆ ದು ರ್ಜನರ ಸಂಗಗಳ ನೀ ಮಾಡದೆ ನಂಜಾ 1 ತಪ್ಪುದಾರಿಯಲಿ ನೀ ಪೋಗದೆ ಆರು ಒಪ್ಪದ ಕರ್ಮವ ಮಾಡದೇ ತಪ್ಪು ಕಥೆಗಳನು ಕೇಳದೆ ಬಲು ಸಪ್ಪೆ ವಾಕ್ಯಂಗಳನಾಡದೆ ನಂಜಾ 2 ಹರಿಗೆರಗುತ ಹರಿಶರಣರ್ಗೆ ನಮಿಸುತ ಹರಿಯ ಕಥೆಗಳನ್ನು ಕೇಳುತಾ ಹರಿಯೆ ಸರ್ವೋತ್ತಮನೆಂದು ನೀನಿರುಕಂಡ್ಯ ಸಿರಿ ವೈಕುಂಠಕೇಶವ ರಕ್ಷಿಪ ನಂಜಾ 3
--------------
ಬೇಲೂರು ವೈಕುಂಠದಾಸರು
ಬಂಧಕವಾಗದ ಹಾಂಗೆ | ಕರ್ಮಛಂದಾಗಿ ಮಾಡಿಸೊ ಹರಿಯೆ ಪ ದಾತ | ನೀನೆನ್ನ ಸಲಹೊ ಸತ್ರಾಣ1 ಸತಿಸುತ ಧನಧಾನ್ಯ ಅಯ್ಯ | ಎನ್ನ | ಮತಿ ಭ್ರಮಣೆ ಮಾಡಿದ ಪರಿಯಪ್ರತಿಕ್ರಿಯೆ ನೀನೆಲ್ಲ ತಿಳಿಯ | ಎನ್ನ | ಹಿತದಿಂದ ಪಾಲಿಸೋ ಜೀಯಾ 2 ಸರ್ವ ಕರ್ಮವು ಕ್ರೀಯಗಳಲಿ | ಅಲ್ಲಿ ಸರ್ವಸ್ವಾಮ್ಯವು ನಿನ್ನದಿರಲಿಸರ್ವದ ನಾಮ ನಾಲಿಗೆಲಿ | ನಿಂತು | ಸರ್ವತ್ರ ಎನ್ನ ಪಾಲಿಸಲಿ 3 ಕಾರಕ ಕ್ರಿಯ ದ್ರವ್ಯವೆಂಬ | ಭ್ರಮೆ | ಮೂರುಗಳನು ಕಳೆಯೆಂಬಸಾರ ಪ್ರಾರ್ಥನೆ ಇದೆಯೆಂಬ | ಎನ್ನ | ದೂರ ವ5À್ಪುದು ಮಾಣು ಬಿಂಬ 4 ತನು ಕರಣ ವಿಷಯಾದಿಗಳು | ಜಡ | ಮನದಿಂದಾಗುವ 5iರ್Àುಗಳುಅಣು ಜೀವಕ್ಕಾರೋಪಗಳು | ಮಾಡಿ | ಜನನ ಮರಣದ ಭವಣೆಗಳು 5 ಇತ್ತೆ ನೀ ಸ್ವಾತಂತ್ರ ಎನಗೆ | ಎಂಬ | ಶಾಸ್ತ್ರದ ಸೊಲ್ಲಿನ ಬಗೆಸುತ್ತು ಹುಟ್ಟುವ ಪರಿಯಾಗೆ | ಕಾಯೊ | ಭಕ್ತವತ್ಸಲ ದಯಾವಾಗೆ6 ಕರ್ಮ | ಮರ್ಮವ ತಿಳಿಸಲೋ ಧೊರೆಯೆ |ನಿರ್ಮಲಾತ್ಮನೆ ಮೊರೆಯಿಡುವೆ | ಎನ್ನ | ಕರ್ಮವ ಸುಡುವುದು ಹರಿಯೆ7 ಕರ್ಮ | ಗುರು | ಪ್ರಾಣಾಂತರ್ಗತಗೀವ ಮರ್ಮಜ್ಞಾನಾನು ಸಂಧಾನ ಪರ್ಮ | ಇತ್ತು ನೀನಾಗಿ ಪಾಲಿಸೊ ಧರ್ಮ 8 ಭಾವ ಕ್ರಿಯ ದ್ರವ್ಯಾದ್ವೈತ | ಮೂರು | ಭಾವಗಳಿಂದನುಷ್ಠಾತಶ್ರೀವರ ಎನಿಸೆನ್ನ ತಾತ | ಗುರು | ಗೋವಿಂದ ವಿಠಲ ಸುಪ್ರೀತ 9
--------------
ಗುರುಗೋವಿಂದವಿಠಲರು
ಬಯಸದಿರೈಹಿಕ ಸುಖಗಳನುದಿನ ನಿ ಪ ರ್ಭಯದಿ ಭಜಿಸು ಹರಿಯ ವಯನಗಮ್ಯ ವಾಂಛಿತ ಫಲಗಳ ಸ ದ್ದಯದಿ ಕೊಡುವುದರಿಯ ಅ.ಪ. ಮೃಗ ಪಶು ವಾರಿ ಖೇಚರ ಶ ರೀರಗಳಲಿ ಬಂದೆ ಮಾರಿ ಮಸಣಿ ಬಿಕಾರಿ ಭವಾನಿಗ ಳಾರಾಧಿಸಿ ನೊಂದೆ ನಾರಾಯಣ ಪದಾರವಿಂದ ಯುಗ ಳಾರಾಧನೆ ಒಂದೇ ಶರಧಿ ತೋರುವುದೋ ಮುಂದೆ 1 ಅನಿರುದ್ಧನು ನಿಜ ಮನಕೆ ಸಹಿತ ತಾ ಧನ ಧಾನ್ಯದೊಳಿಪ್ಪ ಸುಖಗಳ ತೋರ್ಪಾ ಗುಣವಂತರೊಳು ಜಯಪತಿ ಸಂಕರ್ಷಣ ಕರ್ಮವ ಮಾಳ್ಪಾ ಧರ್ಮ ಕರ್ಮಗಳ ಕೊನೆಗೀತನು ಒಪ್ಪ 2 ವಾಸುದೇವ ವಿಜಯಪ್ರದನಾಗೀ ನರ ರಾ ಶರೀರಗಳೊಳು ಕ್ಲೇಶ ಸುಪುಣ್ಯಗಳ ತಾ ಸಮನಿಸುವನು ಸಂದೇಹಿಸದಿರು ಆಶಾಪಾಶಗಳನು ತಾ ಸಡಲಿಸುವನು ಶೀಘ್ರದಿಂದ3 ನಾರಾಯಣ ಕರುಣಾಸಮುದ್ರ ಕೇಳು ತನ್ನಾರಾಧಕರಿಗೆ ದೂರಗೈದು ದುರಿತಾ ಕೈವಲ್ಯ ಪ್ರದಾಯಕ ತೋರುವ ಸರ್ವಜಿತ ಹಾರೈಸದಿರು ಅಲ್ಪಾಹಿಕ ಸುಖಗಳ ನರಕದ್ವಾರಗಳವು ನಿರುತ ಸೂರಿಗಳನು ಸಂಸೇವಿಸು ಮುಕ್ತಿಗೆ ದ್ವಾರವಹುದು ಸತತಾ4 ಪಂಚರೂಪಿ ಪರಮಾತ್ಮನು ತಾ ಷ ಟ್ಟಂಚ ರೂಪದಿ ಪೊರೆವಾ ಪಾತಕ ತರಿವ ಸಂಚಿತಾಗಾಮಿಗಳಪರಾಧವ ಮುಂಚಿನವಂಗೀವಾ ಮಿಂಚಿನಂದದಿ ಪೊಳೆವಾ 5
--------------
ಜಗನ್ನಾಥದಾಸರು
ಬರಬಾರದಾಗಿತ್ತು ಬಂದೆನಯ್ಯಾ ಪ ಕರೆತರಲು ಬಂದುದಕೆ ಫಲವೇನೊ ದೇವಾಅ.ಪ ತರಳತನದಲ್ಲಿ ಎನ್ನ ಕರಣಗಳು ಮಾಡಿದ ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ ದುರುಳ ಸಂಗದೊಳಿದ್ದು ಹರುಷದಿಂದಲಿ ಎನ್ನ ಆಯುವನು ಕಳೆದೆ1 ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ ಗತಿಯೇನು ಮುಂದು ಹಿತವು ಯಾವುದು ಎಂದು ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2 ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ ತನ್ನ ಪರಿವಾರವನೆ ತಾ ಪೊರೆಯುತಿಹವೋ ಎನ್ನ ಸತಿಸುತರುಗಳ ಉದರಪೋಷಣೆಗಾಗಿ ಹೀನಸೇವೆಯಿಂದ ಉಪಜೀವಿಸಲು ಬಹುದೆ 3 ತನುಬಲವು ಇದ್ದಾಗ ಕೋಣನಂದದಿ ತಿರುಗಿ ಜ್ಞಾನ ಕರ್ಮಗಳನ್ನು ಆಚರಿಸದೇವೆ ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4 ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ- ರಕುಟಿಲಾಂತಃತರಣ ದೊರೆತು ಎನ್ನ ಸಕಲಾಪರಾಧಗಳ ಕ್ಷಮಿಸುವರ ಸಂಗ ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5
--------------
ಉರಗಾದ್ರಿವಾಸವಿಠಲದಾಸರು
ಬಲಗೊಳ್ಳಿರೊ ಭಾವ ಭಕ್ತಿಯಿಂದ ನೆಲೆಯಗೊಂಡು ಮೂಲವಿಡಿದು ನಿಜಮೂಲ ಮೂರ್ತಿಯ ಬಲಗೊಳ್ಳಿ 1 ಏರಿ ನೋಡಿ ಅರುಚಕ್ರದಾಟಿ ತೋರುತಿಹ್ಯ ಪೂರ್ಣಾನಂದ ಶ್ರೀ ಗುರುಮೂರ್ತಿಯ ಬಲಗೊಳ್ಳಿ 2 ಸೆರಗವಿಡಿದು ನೋಡಿ ಕರಗಿಮನ ಅರವಿನೊಳು ಬೆರೆದು ಕೂಡಿ ಹರಿ ಪರಬ್ರಹ್ಮನ ಬಲಗೊಳ್ಳಿ 3 ಆಸಿಯನೆ ಜರೆದು ನಿರಾಸಿಯಲ್ಲಿ ಧ್ಯಾಸವಿಡಿದು ಲೇಸಾಗಿ ಕೂಡಿರೊ ವಾಸುದೇವನ ಬಲಗೊಳ್ಳಿ 4 ಮೂರು ಗುಣಕೆ ಮೀರಿ ತೋರಿತಿಹ್ಯ ನಿರ್ಗುಣನ ನೆರೆದು ಕೂಡಿ ನಿಜ ನಿರುಪಮನ ಬಲಗೊಳ್ಳಿ 5 ಸಹಸ್ರದಳಮಂಟಪದೊಳು ಸೋಹ್ಯವರಿತು ಸಾಯಸದಿಂದ ಶ್ರೀಹರಿಯ ಬಲಗೊಳ್ಳಿ 6 ತಾನೆ ತಾನಾಗಿಹ್ಯ ತನುವಿನೊಳು ಆನಂದೋಬ್ರಹ್ಮ- ಙÁ್ಞನದಿಂದ ನೋಡಿ ಙÁ್ಞನಸಾಗರನ ಬಲಗೊಳ್ಳಿ 7 ಮನವಿಡಿದು ಮಾಡಿರೊ ಧ್ಯಾನ ಮೌನ ಅನುದಿನ ಅನುಕೂಲಾಗುವ ಅನಂತ ಗುಣನ ಬಲಗೊಳ್ಳಿ 8 ಕಣ್ದೆರೆದು ನೋಡಿ ತನ್ನೊಳಗೆ ತಾನೆ ತಿಳಿದು ತನುಮನರ್ಪಿಸಿ ಗುರುಮೂರ್ತಿಯ ಬ¯ಗೊಳ್ಳಿ 9 ಗುರು ಕರುಣದೊಲವಿಂದ ಪಡೆದು ಪೂರ್ಣ ಹರಿಯು ಸುಖ ಸೂರ್ಯಾಡಿ ಪರಮ ಅನಂದ ಸುಪಥ 10 ಅರ್ತುಕೂಡಿದ ನೋಡಿ ಅರ್ತಿಯಿಂದ ಮಹಿಪತಿಯ ಬೆರ್ತುಕೂಡಿದ ಮನ ಕರ್ತುಗುರುವಿನ ಬಲಗೊಳ್ಳಿ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲು ದೊಡ್ಡಸ್ವಾಮಿ ಮೂಲೋಕದೊಡಿಯ ನಮ್ಮ ಧ್ರುವ ಅನಂತಕೋಟಿ ಬ್ರಹ್ಮಾಂಡ ಅನುದಿನನಾಳುತ ಪ್ರಚಂಡ ತಾನೆ ಆಗ್ಯಾನೆ ಅಖಂಡ ಘನಗುರು ಮಾರ್ತಾಂಡ 1 ವಿಭೀಷಣಗೆ ಸ್ಥಿರಕೊಟ್ಟ ದುಷ್ಟರ ಜನರ ಕುಟ್ಟಿ ನಿಷ್ಠುರ ನಿಜಶ್ರೇಷ್ಠ 2 ಶಿಷ್ಟರಜನರಿಗಭಯವ ನಿಜನೋಡಿ ಮುಟ್ಟಿ ಮುದ್ರಿಸಿ ದಯಮಾಡಿ ಪೃಷ್ಠದಲಿ ನೋಡಿ 3 ಗ್ರಾಸವು ತಂದಿಪ್ಪ ಚಿತ್ಪ್ರಕಾಶದ ಸ್ವರೂಪ ಭಕ್ತರ ಪಾಲಿಪ 4 ನಾಮದೊಲವಿಲೆ ತನುನಿಜಭಾಗ್ಯ ಸ್ವಾಮಿಸೇವೆಗೆ ಮಾಡಿದ ಯೋಗ್ಯ ಪ್ರೇಮದಂತಾಭೋಗ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು