ಒಟ್ಟು 2736 ಕಡೆಗಳಲ್ಲಿ , 100 ದಾಸರು , 1962 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ವನಜ | ಸೂಸಿ ಭಜಿಸಿರೋ |ವ್ಯಾಸ ತೀರ್ಥ ಶಿಷ್ಯರೆಂದು | ಭಾಸಿಸಿದ್ದರೋ ಪ ಪುರಂದರ ಗಡದಿ | ವಾಸರಿದ್ದರಾಪರಮ ಲೋಭಿ ನವ ಕೋಟಿ | ದ್ರವ್ಯವಿದ್ದರಾ 1 ಬಂದ ಕಾರ್ಯ ಮರೆತನೆಂದು | ಹರಿಯು ಚಿಂತಿಸೀಇಂದಿರೇಶ ದ್ವಿಜನಾಗಿ | ಹುಡುಗನಾವೆರಸೀ ||ಬಂದು ಮಗನ ಮುಂಜಿಗಾಗಿ | ಧನವನು ಬಯಸೀ ||ನಂದ ಕಂದ ತಿರುಗುತ್ತಿದ್ದ | ಅಂಗಲಾಚಿಸೀ 2 ಭಿಕ್ಷುಕನ್ನ ಬಿಡದಂತೆ | ಅಂಗಡಿಯಲ್ಲಿಶಿಕ್ಷಿಸೀದ ಆಳುಗಳ | ಲೋಭಿ ತಾನಲ್ಲಿ ||ತ್ರ್ಯಕ್ಷಸೇವ್ಯ ತಿಂಗಳಾರು | ತಿರುಗಿದನಲ್ಲೀಲಕ್ಷಿಸಾದೆ ಮೆರೆಯುತಿದ್ದ | ಕಾಣದಂತಲ್ಲಿ3 ಕಟ್ಟಕಡೆಗೆ ಸವೆದ ನಾಣ್ಯ | ಚೀಲ ವೆಸೆಯುತ್ತಕಟ್ಟು ಮಾಡ್ದ ದುಡ್ಡೊಂದನ್ನು | ಕೊಳ್ಳೆಂದೆನುತ್ತ ||ಅಟ್ಟುಗಳಿಗೆ ಬೇಸರಿಸಿ | ಮುಂದೆ ಹೋಗುತ್ತ |ಥಟ್ಟನ್ಹೋದ ಹಿತ್ತಲಿನ | ಕದವ ಸಾರುತ್ತ 4 ಅಲ್ಲಿನಿಂತ ಲೋಭಿ ಸತಿಯ | ಬಳಿಗೆ ಪೋಗುತ್ತಬಲ್ಲ ಹರಿಯ ಧನವ ಬೇಡ್ದ | ಮುಂಜಿಗೆನ್ನುತ್ತ ||ನಲ್ಲ ಬೈವನೆಂದು ಬೆದರಿ | ಇಲ್ಲವೆನ್ನುತ್ತಚೆಲ್ವ ಸತಿಯು ಪೇಳೆ ಅವಳ | ಮೂಗ್ತಿ ನೋಡುತ್ತ 5 ತವರು ಮನೆಯ ದ್ರವ್ಯದಾನ | ಮಾಡು ನೀನೆಂದಅವಳು ತನ್ನ ಮೂಗುತಿಯ | ಕೊಟ್ಟುದೆ ಛಂದ ||ಇವನು ಅದನ ಸಾಹುಕಾರ್ನ | ಮುಂದಾಕಿ ಅಂದಜವದಿ ನಾನೂರ್ಪಾಕಿ ಹಣ | ತನಗೆ ಬೇಕೆಂದ 6 ನಾಯಕನು ಕೈಲಿ ತೆಗೆದು ನೋಡುತ್ತಲಿರೇಶ್ರೀಯರಸ ಪೋದತಾನು | ಕಣ್ಣಿಗೆ ಮರೇ ||ಕಾಯುತ್ತಿದ್ದ ಆಳು ಹಿಡುಕಿ | ಸಿಗದೆತಾಬರೇನಾಯಕನದ ಭದ್ರಮಾಡಿ | ಸತಿಬಳಿಗೆ ಬರೇ 7 ಬರಿಯ ನಾಸಿಕವ ನೋಡಿ | ಮೂಗ್ತಿ ಎಲ್ಲೆನಲುಸರಿಯ ಪಡಿಸಲಿಕ್ಕೆ ಕೊಟ್ಟು | ಇರುವೆ ನೆನ್ನಲುತ್ವರದಿ ತೋರದಿರೆ ನಿನ್ನ | ಅರೆವೆ ನೆನ್ನಲು |ಬರುವೆ ಬೇಗ ಎಂದು ಪೋಗಿ | ಗರದ ಬಟ್ಟಲು 8 ಕರದಿ ಪಿಡಿದು ತುಳಸಿ ಮುಂದೆ | ಮೊರೆಯ ನಿಡುತಿರೇಗರದ ಬಟ್ಟಲೊಳು ಬಿದ್ದ | ಶಬ್ದವು ಬರೇ ||ಹರುಷದಿ ದಿಗ್ಗನೆ ಎದ್ದು | ಪತಿಗೆ ತಾತೋರೇಗರ ಹೊಡೆದಂತವನಾಗಿ | ಮೋರೆಯ ತೋರೇ 9 ಹೆಂಡತಿಯ ಕೇಳಿ ತಿಳಿದ | ಆದ ಪರಿಯಾಮಂಡೆ ಬಾಗಿ ತಾನು ಆದ | ಹೊಸ ಪರಿಯಾ ||ಕೊಂಡಾಡಿದ ಪತ್ನಿ ಚರ್ಯ | ಹರಿಯ ಭಕ್ತಿಯಬಂಡುಣಿ ಹರಿಪಾದಾಬ್ಜದಿ | ತೊರೆದ ಮನೆಯ 10 ಪಾದ ನಮಿಸೀಬಾರಿ ಬಾರಿ ಹರಿಯ ತತ್ವ | ಕೇಳಿ ಸುಖಿಸೀ 11 ಪುರಂದರ ಸಾರ ಭಾಷೆ | ಪ್ರಾಕೃತ ವೆನಿಸೀ 12 ಮೂರ್ತಿ ಸುಂದರತೊಂಡನಾದ ಮೇಲೆ ತನ್ನ | ಹೃದಯ ಮಂದಿರ ||ಪಿಂಡ ಅಂಡದೊಳಗೆ ಕಂಡು | ಹಿಗ್ಗಿದ ವಿವರ |ಕಂಡವನೆ ಪೇಳ ಬಲ್ಲ | ಅದರ ವಿಸ್ತಾರ 13 ಪೊಂದಿ ಅಪರೋಕ್ಷವನ್ನು | ಸುಜನರುದ್ಧಾರಛಂದದಿಂದ ಮಾಡಿದಂಥ | ದಾಸವರ್ಯರ ||ಅಂದ ಚರಿತೆ ಕೇಳಿ ತೋಷ | ಪೊಂದಿದವರನಂದ ಕಂದ ಪಾಲಿಸುವ | ಬಿಡದೆ ಅವರಾ 14 ಗೋವ ಕಾವ ಗೊಲ್ಲರೊಡೆಯ | ಗೋಪಿಯ ಬಾಲತಾವಕ ಭಕ್ತರ ಪೊರೆವ | ಪಾಂಡವ ಪಾಲಆವ ದಾಸರ ಪೊರೆದಂತೆ ಮೈದುನ ಪಾಲದೇವ ದೇವ ಪೊರೆವ ಗುರು | ಗೋವಿಂದ ವಿಠಲ 15
--------------
ಗುರುಗೋವಿಂದವಿಠಲರು
ಪಾದಗಳಂ ನಂಬಿದೆನಾಂ ಶ್ರೀಧರಾಚ್ಯುತಗೋವಿಂದ ಪ ಮಧ್ಯೆದೊಳಾದರದಿ ಕುಣಿಯುತಿರುವಅ.ಪ ಅಳೆದು ಮೂರಡಿಯಿಂದ ಜಗವ ಬಲಿಯ ಪಾತಾಳಕ್ಕೆ ತುಳಿದು ಲಲನೆಗಂಗೆಯ ಪೆತ್ತು ಮಂಗಳಗಳನು ಭಕ್ತರಿಗೀವ ಶುಭದಾ 1 ಧನುವ ಮೆಟ್ಟಿಮುರಿದು ಮೊಳಲಸದಾನಂದದೊಳಿರುವ 2 ಗರಡುದೇವ ನಿತ್ಯಪೊತ್ತ ಸಿರಿಯು ಸದಾ ಒತ್ತುತಿರುವ ಪರಮಪಾವನ ಹೆಜಾ ಜಿಯ ವರದನೆನುತ ನಾರದನೆನೆವ 3
--------------
ಶಾಮಶರ್ಮರು
ಪಾದಪದ್ಮದೀಕ್ಷಣದ ಸುಖಕಂ||ಅಗಲಲು ಬಾರದೆ ಮನ ದೃಗ್ಯುಗಳವು ಹರಿಪಾದಪದ್ಮದಿ ನೆಲಸೆ ಭಕ್ತರ್‍ತೆಗೆಯದೆ ತಿರುಪತಿ ವೆಂಕಟನಗನಾಥನ ಬೇಡಿಕೊಳ್ಳುತಿಹರೀ ಪರಿುಂಈ ಪಾದಪದ್ಮದೀಕ್ಷಣದ ಸುಖವೇ ಸಾಕುಗೋಪಾಂಗನೆಯರ ಮನಕಮೃತರೂಪಾಗಿರುವ ಪಪದ್ಮವರಳಿದ ಪರಿಯ ಮೃದುವಾಗಿ ತೋರಿಸುವಪದ್ಮಜೆಗೆ ನಿತ್ಯವಾಶ್ರಯವೆನಿಸುವಪದ್ಮಭವ ನೆರೆತೊಳೆದು ಪೂಜಿಸಿದುದೀ ಲೋಕಪದ್ಮಕಾಶ್ರಯವಾಗಿ ತದ್ರೂಪವಾಗಿರುವ 1ಲೋಕಪಾವನ ಗಂಗೆಯನು ಪಡೆದುದೀ ಪಾದಜೋಕೆಯೊಳಗಹಿ ಶಿರದಿ ನೆರೆ ನರ್ತಿಸಿದುದುಬೇಕೆಂದು ಯೋಗಿಗಳ ಹೃದಯಕಮಲದಿ ನೆಲಸಿನೂಕಿ ಭಕ್ತರ ಭವವ ರವಿಯಂತೆ ಹೊಳೆಯುತಿಹ 2ಗೋಪಾಲ ಗೋವುಗಳ ಬಳಿವಿಡಿದು ಸಂಚರಿಸಿಗೋಪಿಯರ ಮನೆಯ ಪಾಲ್ಬೆಣ್ಣೆ ಬಯಸಿಗೋಪ್ಯದಲಿ ನಡೆದವರ ಮನಕಗೋಚರವೆನಿಸಿಗೋಪರೊಡೆಯನ ಮನೆಗೆ ಬಂದು ನೆಲಸುತಲಿರುವ 3ಬಲಿಯ ದಾನವ ಬೇಡಿ ಶಿಲೆಯ ಸತಿಯನು ಮಾಡಿನೆಲನೊತ್ತಿ ಕೌರವನ ಮಕುಟ ಸೋಕಿಥಳಥಳನೆ ಬೆಳಗಿ ತತ್ಸಭೆಯ, ವಿದುರನ ಮನೆಗೆನಲವಿಂದ ನಡೆದವನ ಸಲಹಿದತಿ ಕೋಮಲದ 4ಸುರರು ವಂದಿಸಲವರ ಶಿರದ ಪುಷ್ಪದ ರಾಶಿಸುರಿದು ತಾರಾ ಮಧ್ಯ ಚಂದ್ರನಂತೆನೆರೆಮೆರೆವ ಗುರು ವಾಸುದೇವ ಪಾದ 5ಓಂ ಜಗನ್ನಾಥಾಯ ನಮಃ
--------------
ತಿಮ್ಮಪ್ಪದಾಸರು
ಪಾರುಗಾಣವುದೆಂದಿಗೊ ರಂಗಯ್ಯ ಪ ಘೋರಾಹಂಕಾರವ ಬಿಟ್ಟು ನಿನ್ನಯಪಾದ ಸೇರುವುದಿನ್ನೆಂದಿಗೊ ಅ.ಪ ಬಿಟ್ಟುಬಿಡುವುದೆಂದಿಗೆ 1 ವಾಸುದೇವನೆ ನಿಮ್ಮ ಪಾದಾರವಿಂದದೊಳು ವಾಸವಾಗುವದೆಂದಿಗೊ 2 ಸಮವ ಮಾಡುವುದೆಂದಿಗೊ 3 ತಟ್ಟನೆ ಸೇರಿಸಯ್ಯ 4 ಭಕ್ತಿನಾಮವನು ಕೊಡಿಸಯ್ಯ 5
--------------
ಯದುಗಿರಿಯಮ್ಮ
ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ ಪ ಅಂದು ಗಜನು ತಾನು ಬಂದು ತಾ ಬಂಧು ಬಳಗವ ಕೂಡಿ ಸೊಂಡಿ- ಲಿಂದ ನೀರನು ಕಲಕಲಾಕ್ಷಣ ಒಂದು ಮಕರ್ಹಲ್ಲಿಂದ ಪಿಡಿಯೆ ಮು- ಕುಂದ ನೀನೆ ಗತಿಯೆಂದರಾಕ್ಷಣ ಬಂದು ಒದಗಿದ್ಯೊ ಸಿಂಧುಶಯನನೆ 1 ದುರುಳಾಸುರನು ತನ್ನ ಕರುಳ ತನ ಕರುಳನಿಟ್ಟುರಿಯಲ್ಲಿ ಗರಳ ಹಾಕಿ ಬಾಧಿಸಲು ಖಳನು ಕಾರಣ ಕಂಬದಲಿ ಬಂದೆಳೆದು ಅವನುರ ಕರುಳ ಮಾಲೆಯ ಕರಾಳವದನವ ತೆರೆದು ತನ್ನಯ ಕೊರಳಲ್ಲಿರಿಸಿದ ಕೋಮಲಾಂಗನೆ 2 ಪಿತನ ತೊಡೆಯಲಿದ್ದ ಸುತನ ಕಂಡು ಸುತನ ಸುರುಚಿಯು ತಾನಾಗ ಹಿತದಂತ್ವಾಕ್ಯಗಳನು ನುಡಿಯಲು ಅತಿಬ್ಯಾಗದಲಜಸುತನ ನುಡಿ ಕೇ ಳುತಲಿ ತಪವನು ಚರಿಸಲಾಕ್ಷಣ ಪತಿತಪಾವನ ಪರಮ ಕರುಣದಿ ಸುತ ಧ್ರುವಗೆ ಸುಖವಿಟ್ಟ ಶ್ರೀಹರಿ3 ಬಾಡಿ ಬಳುಕುವ ದ್ವಿಜನ ನೋಡಿ ತಾ ನೋಡಿ ತಂದವಲಕ್ಕಿ ಬೇಡಿ ಆಡಿ ಭಕ್ತನ ಕೂಡ ನಯನುಡಿ ಮಾಡಿ ಕರುಣವ ತನ್ನ ದಯ ಸೂ- ರ್ಯಾಡಿ ಸಖಗೀಡಿಲ್ಲದರ್ಥವ ನೀಡಿದ್ಯೊ ಬಹು ರೂಢಿಗಧಿಕನೆ 4 ಕಡುಚÉಲ್ವೆಕರೆಯಲುಟ್ಟುಡುಗೆ ಉಟ್ಟ ಉಡುಗೆ ಸೆಳೆಯಲು ಕೃಪ್ಣೆ(ಯಿ)ದ್ದೆಡೆಗೆ ನಡೆದಸುರ ಪಿಡಿದೆಳೆಯೆ ಸೀರೆಯ ಕಡೆಯ ಕಾಣದೆ ಖಳನು ಧರೆಯೊಳು ಯುಡುಗೆಗಕ್ಷಯ ನುಡಿದ ಕೃಷ್ಣನೆ 5 ಸಿಂಧುಶಯನಾರವಿಂದನಯನಾರ- ವಿಂದ ನಯನ ಅಸುರರಿಗತಿ ಭಯಂಕರನಾ- ಗೆಂದಿಗಾದರು ನಿನ್ನ ನಾಮಸುಧೆ ಯಿಂದ ಸುಖ ಸುರಿವಂತೆ ಮಾಡು ಮು- ಕುಂದ ಭೀಮೇಶಕೃಷ್ಣ ನಿನ್ನ ಪ- ದಾಂಬುಜವ ತೋರಾನಂದದಿಂದಲಿ 6
--------------
ಹರಪನಹಳ್ಳಿಭೀಮವ್ವ
ಪಾರ್ವತಿ ದೇವಿ ಉಮಾ - ನಿನಗೆ ಸರಿಯಾರೇಕಮ್ಮಗೋಲ್ವೈರಿಯ ಪ್ರೇಮ ಪಾತ್ರಳಾದ ಪ ಆಡೂವ ನುಡಿಗಳ - ಜೋಡಿಸಿ ಹರಿಯಲಿಮಾಡೀಸು ಸತ್ಸಾಧನಾ ||ಬೇಡಿಕೊಂಬೆನು ದೇವಿ - ರೂಢಿಗೊಡೆಯನ ತಡಮಾಡದೆ ತುತಿಪಂಥ - ಜೋಡಿಸು ಮನಾ 1 ಸುರಪಾದಿ ದೇವತೆ ಕರಗಳ ಜೋಡಿಸಿಶರಣೆಂದು ಪೇಳುವರೇ ||ಹರ್ಯಕ್ಷ ಯಕ್ಷನ ಈಕ್ಷಿಸಿ ಬರುತಿರೆಹರಿ ಪೇಳೆ ಸುರಪಗೆ ಬೋಧಿಸಿದೆ 2 ಸತಿ - ವ್ಯತ್ಯಸ್ತ ಮನವನುಸತ್ಯಾತ್ಮನಲಿ ನಿಲಿಸೇ ||ಅರ್ಥೀಲಿ ಹರಿಯ - ಅತ್ಯರ್ಥ ಪ್ರಸಾದಕ್ಕೆಪಾತ್ರನೆಂದೆನಿಸಿ - ಪಾಲಿಸೇ 3 ಪ್ರಾಣಂಗೆ ಪ್ರಾಣನ - ಗಾನ ಮಾಡಲು ಗುಣಶ್ರೇಣಿಗಳ ಜೋಡಿಸೇ ||ಗಾನ ವಿನೋದಿ - ಪ್ರ - ದಾನ ಪುರೂಷನಮಾಣದೆನಗೆ ತೋರಿಸೇ 4 ಹಿಮಗಿರಿಸುತೆತವ - ವಿಮಲಪದಾಬ್ಜಕೆನಮಿಸುವೆ ನೀ ಪಾಲಿಸೇ ||ಅಮಿತಾರ್ಕ ನಿಭ ಗುರು ಗೋವಿಂದ ವಿಠಲನಕಮನೀಯ ಪದ ಕಾಣಿಸೇ 5
--------------
ಗುರುಗೋವಿಂದವಿಠಲರು
ಪಾರ್ವತೀ - ಶರ್ವನ ಜಾಯೆ - ಪಾರ್ವತೀ ಪ ದಿವಿಜ ಧ್ವಂಸ | ಶರ್ವಾದಿ ದಿವಿಜೇಡ್ಯಸಾರ್ವಭೌಮನ ಸ್ಮøತಿ | ಸಾರ್ವಕಾಲದಲೀಯೆ ಅ.ಪ. ಪತಿ ಮಾರ ಜನನಿ ತಾಯೇ 1 ಸುರಪ ಗಣಪರ ಮಾತೆ ಶರ್ವೇ | ನಿನ್ನವರ್ಣಿಸಿ ಪೊಗಳಲೆನ್ನಳವೇ | ನೀನೆಕರುಣದಿ ಪೇಳಿಸೆ ಬರೆವೇ | ಎನ್ನಉರುತರ ಅಜ್ಞಾನವ ಬಲ್ಲೆ | ಆಹಕರಣಗಳೊಳು ನಿಂತು | ನಿರುತ ಪ್ರೇರಕಳಾಗಿಹರಿಗುಣ ದ್ಯೋತಕ | ಸ್ಮರಣೆ ಸುಖವ ನೀಯೆ 2 ಮೃಡನಂತರಂಗಳೆ ತಾಯೇ | ಎನ್ನಕಡು ಕರುಣದಿಂದಲಿ ಕಾಯೇ | ಇನ್ನುಧೃಡ ಹರಿ ಭಕುತಿಯ ನೀಯೆ | ಅನ್ಯಬೇಡೆನು ನಾ ಪಾರ್ವತೀಯೇ | ಆಹಮೃಡವಂದ್ಯ ಗುರು ಗೋ | ವಿಂದ ವಿಠ್ಠಲನನಡು ಹೃದಯದಿ ನೋಳ್ಪ | ಧೃಡಮತಿಯನು ಕೊಡೆ 3
--------------
ಗುರುಗೋವಿಂದವಿಠಲರು
ಪಾಲಯ ದನುಜಾರೆ ನೃಹರೆ ಪ ಮಾಧವ ಮಧುರಾಪುರ ಪರಿಪಾಲಕ ಶೌರೀ 1 ನಂದ ಕಿಶೋರ ಗೋಪಾಲ ಮುಕುಂದ ಬೃಂದಾವನಾ ಸಾನಂದ ಗೋವಿಂದ 2 ಸನಕಸನಂದನ ವಿನಮಿತ ಚರಣಾ ವನಜನಯನ ಗೋಪೀಜನ ಕರುಣಾ 3 ಮಂಗಳಭಾಸಾ ಮುನಿಗಣತೋಷಾ ಮಾಂಗಿರಿವಾಸಾ ಮಣಿಗಣಭೂಷಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಯಾ ಉರಗಾರಿ ಗಮನಾ | ಶ್ರೀ ಲಕ್ಷುಮಿ ರಮಣಾ | ಭಂಜನ ಸಾಗರ | ಕೀಲನ ಫಣಿಶಯನಾ | ಭಾಲಲೋಚನ ವಂದಿತ ಚರಣಾ | ತ್ರಿಲೋಕ ಜೀವನಾ | ವಾಲಿ ಮರ್ದನ ಶರಣಾಗತ ಜನ | ಕಮಲ ನಯನಾ 1 ವಾರಜಾನನ ವಾರಿಜ ಭ್ರಮರಾ | ಕರಿಭಯ ನಿವಾರಾ | ನೀಲ - ಶರೀರಾ | ಕೇಶವ ಕೇಯೂರ ಕೌಸ್ತುಭಧಾರ | ನೀರಜಾಸನನುತ ಯದುವೀರಾ | ಶ್ರೀರಂಗ ಗದಾಧರಾ | ಸುಜನ | ಹೃದ್ವನಜ ವಿಹಾರ ಧರಣೀಧರಾ 2 ಮಂದರೋದ್ದರ ಪತಿತ ಪಾವನ | ಕುಂದ ಕುಟುಲಮರದನಾ | ಸ್ಯಂದ ಜನಕ ಸಖಸ್ಮರಪಿತಹರಿ | ಗೋವಿಂದ ಧುರಿತ ಹರಣಾ | ನಂದಕಿಶೋರ ಶ್ರೀ ನಾರಾಯಣಾ | ಸುಂದರ ವದನಾ | ಮಂದರಕುಲರಿಸಹೋದರ ಮಹಿಪತಿ | ನಂದನ ಪ್ರಭು ಕೃಷ್ಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸಯ್ಯ ಪವನ ಕುವರನೇ | ಪಾವನ್ನ ಮೂರ್ತಿಶೀಲರೂಪಿ ಶೈಲ ಸದನನೇ ಪ ಬಾಲ ಗೋಪಾಲ ಗುಣವ | ತೈಲಧಾರೆಯಂತೆ ಮನದಿಕಾಲಕಾಲ ಸ್ಮರಿಪ ಸುಖ | ಕೈಲಾಸವಾಸ ಕೊಟ್ಟು ಕಾಯೊಅ.ಪ. ಪಂಪಾಪುರ ನಿವಾಸ ಈಶನೇ ಜೈಗೀಷ ಔರ್ವಪೊಂಪೆ ಎಂಬ ಗಿರಿಜೆ ರಮಣನೇ ||ಲಂಪಟಾವ ಬಿಡಿಸಿ ಜ್ಞಾನ | ಸಂಪದಾವನಿತ್ತು ಸಲಹೋನೋಂಪಿ ಗೈವೆ ನಿನ್ನ ಪದದಿ | ಇಂಪನೀಯೊ ಹರಿಯ ಪದದಿ 1 ಕೃಪಣ ಕಲುಷ ಭವ ಸಮುದ್ರದಿಂದಮತ್ತೆ ಪುಟ್ಟಿ ಭಯವು ಕಾಣೆ | ಚಿತ್ತದಲ್ಲಿ ಹರಿಯು ಇರಲು 2 ತೈಜಸ ತಾಮಸಾ | ತ್ರಯವು ಅಹಂಸಾಕಾರಿ ಶುಕನೆ ದುರ್ವಾಸಾ |ಲೌಕಿಕಗಳೆಲ್ಲವು ವೈ | ದೀಕ ವೆನಿಸೊ ತತ್ಪುರೂಷಕಾಕು ಸಂಗ ಕೆಡಿಸೊ ಹರ ವಿ | ಶೋಕ ಹರಿಯ ತೋರಿ ಬೇಗ3 ನಿಕರ ವಾಯು ನಂದನಾ ||ವಾಸ ವಾದ್ಯಮರನುತ ಸ | ದಾಶಿವನೆ ಬ್ರಹ್ಮ ತನಯಮೀಸಲೆನಿಸೊ ಮನವ ಹರಿಯ | ಆಶೆಯಲ್ಲಿ ನಿರುತ ಎನಗೆ 4 ಮಂಗಳಾಂಗ ಗಂಗೆ ಧಾರಕಾ | ಊಧ್ವ5ಟನೆಅಂಗಜಹ ಮೃಕಂಡ ಪಾಲಕಾ ||ರಂಗ ಗುರು ಗೋವಿಂದ ವಿಠಲ | ಸಂಗಿ ಶಿವ£5Éೀಡ್ವೆ ಭಕ್ತಿಸಂಗವಿತ್ತು 5ಗೆ ವಿಷಯ | ಸಂಗ ಬಿಡಿಸಿ ಕಾಯೊ ರುದ್ರ 5
--------------
ಗುರುಗೋವಿಂದವಿಠಲರು
ಪಾಲಿಸಯ್ಯಾ ಫಣಿಗಿರಿವಾಸಜೀಯಾ ಪ. ಪಾಲಿಸೈ ಪಾಲಾಬ್ಧಿಶಾಯಿ ಸುಳೀನೀರದನಿಭಶರೀರ ಶ್ರೀ ಕಾಲ ಕಾಮಿತಫಲಪ್ರದಾಯಕ ಅ.ಪ. ಮುನ್ನ ಮಾಡಿದ ಕರ್ಮದಿಂದಲಿ ಬನ್ನಪಟ್ಟೆನು ಶ್ರೀಹರಿ ಇನ್ನು ನಿನ್ನಯ ಚರಣಯುಗವನು ನಿರ್ಣಯದಿ ನಂಬಿದ ಪರಿ ಉನ್ನತೋನ್ನತವಪ್ಪ ತೆರದಲಿ ಮನ್ನಿಪುದು ನೀ ಕೃಪೆದೋರಿ ಬನ್ನ ಪಡುವುದು ಸಾಕು ಸಂತತ ನಿನ್ನನೆ ನೆರೆನಂಬಿದೆನು ಹರಿ 1 ವಾತಪಿತ್ತಕಫಾದಿ ರೋಗದ ವ್ರಾತದಿಂದ ಬಲು ನೊಂದೆನು ಧಾತುಬಲವತಿ ತಗ್ಗಿ ಉಷ್ಣೋಪೇತದಿಂದಲಿ ಬೆಂದೆನು ಚಾತುರ್ಥಿಕ ಜ್ವರಾತಿಶಯದಲಿ ಶೀತಸ್ಥಾನದಿ ನಿಂದೆನು ಈ ತೆರದ ಕಷ್ಟಗಳು ಬಾರದ ರೀತಿಯಲಿ ಪರಿಹರಿಸು ಸಂತತ 2 ನಿನ್ನನೆ ಮರೆಹೋಗುವ ತೆರದಲಿ ನಿನ್ನ ಸ್ಮರಣೆಯ ಮಾಡುವ ನಿನ್ನ ಭಕ್ತರ ಮೇಳದಲಿ ಸಂಪನ್ನನಾಗುತ ಕೂಡುವ ನಿನ್ನ ಮೂರ್ತಿಯ ನೊಡುವದು ಮತ್ತೆನ್ನ ಕಾಮಿತ ಬೇಡುವ ನಿನ್ನನೇ ಧ್ಯಾನಿಸುವ ಮತಿಸಂಪನ್ನವನು ನೀನಿತ್ತು ಕರುಣದಿ3 ಮಾರುತಿಯ ಚರಣಾರವಿಂದದದಿ ಸೇರಿ ನಿನ್ನನು ಧರೆಯಲಿ ಭೂರಿ ಮಹಿಮೆಯ ವರ್ಣಿಸುವ ಸಾಕಾರ ಮತಿಯನು ಎನ್ನಲಿ ಪ್ರೇರಿಸುತ ಕರುಣಾರಸಾಮೃತ ಬೀರಿ ಭೀತಿಯ ಪರಿಹರಿಸುತ್ತಲಿ4 ಕೊಂಚ ಧನವನು ಕೊಟ್ಟು ಎನಗೆ ಪ್ರಪಂಚವಹ ಗೃಹ ಗೈದಿಸಿ ಮುಂಚೆಮಾಡಿದ ಪಾಪವನು ನಿರ್ಲಚದಿಂದಲೆ ಛೇದಿಸಿ ಮಿಂಚಿಯೆನ್ನೊಳು ಮೋದಿಸಿ ಪಂಚಬಾಣನ ಪಿತನೆ ಮಂಗಳ ವಾಂಛಿತವನೆನಗಿತ್ತು ವಿಭವದಿ5 ಕಷ್ಟದಲಿ ನಿನ್ನ ಧ್ಯಾನ ಬಾರದು ತುಷ್ಟಿಯಲಿ ನಾ ಧ್ಯಾನಿಪೆ ಇಷ್ಟವೇ ನೀನಿತ್ತೆಯಾದರೆ ಕಷ್ಟಗಳ ನಾ ದೂಷಿಪೆ ಶ್ರೇಷ್ಠ ಕಾರ್ಕಳ ಪುರದಿ ಭಕ್ತರ ಒಟ್ಟುಗೂಡುತ ತೋಷಿಪೆ ಭ್ರಷ್ಟಲೋಭದ ಬಂಧುಗಳು ಎನ್ನೊಳಿಷ್ಟವಾಗುವ ತೆರದಿ ದ್ರವ್ಯವ6 ಕಾಲಭೈರವ ಪೇಳಿದಂದದಿ ನಾಲಿಗೆಯೊಳು ತಪ್ಪು ನೋಡದೆ ಪಾಲಿಸುತ ಇಷ್ಟಾರ್ಥವನು ಕೈ ಮೇಳವಿಸು ತಪ್ಪು ನೋಡದೆ ನೀಲಗಿರಿ ಸಮನಾಗಿ ಕಾರ್ಕಳದಾಲಯವ ನೀ ಮಾಡಿದೆ ಪಡುತಿರುಪತಿ ಪುರೇಶನೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಪರಮಾತ್ಮನೆ ಪಾವನ ಗುಣ- ಶೀಲ ಸದ್ಗುಣಧಾಮನೆ ಪ ಶ್ರೀಲಕುಮಿಯ ಪ್ರಿಯ ಶ್ರೀಶಸರ್ವೋತ್ತಮ ವಾಸವವಂದಿತ ವಾಸುದೇವನೆ ಹರಿ ಅ.ಪ ಕೇಶವ ನಾರಾಯಣ ಮಾಧವ ಗೋವಿಂದ ವಿಷ್ಣುವೆ ನಮಿಪೆ ಮಧುಸೂದನ ತ್ರಿವಿಕ್ರಮ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭನೆ ಪೊರೆ ದಾರಿ ಕಾಣೆ ದಾಮೋದರ ಸಂ_ ವಾಸುದೇವ ಪ್ರದ್ಯುಮ್ನನನಿ- ರುದ್ಧ ಪುರುಷೋತ್ತಮ ಅಧೋಕ್ಷಜ ನಾರಾಸಿಂಹ ಅಚ್ಚುತ ಜನಾರ್ದನ ಉ- ಪೇಂದ್ರ ಹರಿ ಶ್ರೀ ಕೃಷ್ಣ ಶೌರಿ1 ವಾರಿ ವಿಹಾರದಲಿ ಬೆನ್ನಿಲಿ ಗಿರಿ ಭಾರವನ್ನೆ ತಾಳಿ ಕೋರೆ ತೋರುತ ಕರುಳ್ಹಾರವ ಮಾಡಿದ ಮೂರಡಿ ಭೂಮಿಯ ಬೇಡಿ ಭೂಪಾಲನ ಕಾಡಿ ಕೆಡಹುತ ಕೂಡಿ ಕಪಿಗಳ ಬೇಡಿ ಪಾಲ್ಮೊಸರ್ಬೆಣ್ಣೆ ಬುದ್ಧನೀ- ನಾಗಿ ಖಡ್ಗವಧರಿಸಿ ಕುದುರೆಯ- ನೇರಿ ಮೆರೆಯುವ ಶ್ರೀ ರಮಾಪತೆ 2 ಶಾಂತೀಶ ಅನಿರುದ್ಧನೆ ಶರಣೆಂಬೆ ನಿನ್ನ ಕೃತಿಪತಿ ಪ್ರದ್ಯುಮ್ನನೆ ಜಗದೀಶ ಜಯಾಪತಿ ಜಯ ಸಂಕರ್ಷಣ ದೇವ ನಮಿಪೆ ಮಾಯಾಪತಿ ವಾಸುದೇವನೆ ನಿನ್ನ ಪಂಕಜ ತೋರು ಲಕ್ಷ್ಮೀ- ರಮಣ ನಾರಾಯಣ ನಮೋ ಗರಡು ಗಮನನೆ ಕಮಲನಾಭ ವಿ-ಠ್ಠಲನೆ ಶ್ರೀಹರಿ ಪರಮ ಕರುಣಿಯೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸೆ ಎನ್ನ ನಾಮಗಿರಿಯಮ್ಮ ಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ ಪ ಕರುಣದಿ ನೋಡೆ ನಾಮಗಿರಿಯಮ್ಮ ಇಂದಿರೆ ಎನ್ನ ಸುಖಿಯನ್ನೆ ಮಾಡೆ ವಾರಿಜಮುಖಿ ನರಪಾಲಾಧಮರ ದುರ್ಮುಖವ ನೋಡಿಸದಂತೆ 1 ಸುಖಚಿದಾಕಾರೆ ಎನ್ನ ಮನೆಗೆ ದಯವಿಟ್ಟು ಬಾರೆ ನಾರೆಯರಲ್ಲಿ ಸರಿ ನಿನಗಾರೆ ಪಂಕಜನೇತ್ರೆ ಕಿಂಕರನೆಂದು ಆತಂಕ ಬಿಡಿಸೆ ತಾಯೆ 2 ಚರಣಾರವಿಂದ ಸೇವಕನಲಿ ಕೃಪೆಯಿಟ್ಟು ಮಂದಹಾಸದೆ ಬಂದು ಸುಖಬುದ್ಧಿಯಿಂದ ಇಂದಿರಾದೇವಿ ಚಂದ್ರವದನೆ ಎನ್ನ ಮಂದಿರದೊಳಗಿದ್ದು 3 ಶ್ರಿತ ಸುರಧೇನು ದೇವಿ ನೀನೆಂದು ಇಂದಿರೆ ಇಷ್ಟುಪೇಕ್ಷೆ ನಿಂಗೇನು ಕಷ್ಟಗಳೆಲ್ಲ ನಷ್ಟವಾಗುವ ಪರಿ ದೃಷ್ಟಿ ಎನ್ನೊಳಗಿಟ್ಟು 4 ನರಹರಿ ಜಾಯೆ ನಾಮಗಿರಿಯಮ್ಮ ಬಂದು ನೀ ಕಾಯೇ ಪೇಳುವುದೇನು ಸರ್ವಜ್ಞ ತಾಯೇ ವಾರಿಜಮುಖಿ ನಿಜ ವರ್ಣಾಶ್ರಮಧರ್ಮ ಚ್ಯುತಿ ಎಂದೂ ಬರದಂತೆ 5
--------------
ವಿದ್ಯಾರತ್ನಾಕರತೀರ್ಥರು
ಪಾಲಿಸೆನ್ನ ಚನ್ನ ಕೇಶವಾ ನಿನ್ನ ಬಾಲನೆಂದೆಣೆಸೋ ಮಾಧವಾ ಪ ಲೋಲ ಲೋಚನ ತಂದೆ ಶೀಲ ನಂಬಿದೆ ಬಂದೆ ಅ.ಪ. ದೂರ್ವಾಪುರ ನೆಲೆವಾಸಿಯೇ ತಂದೆ ಸರ್ವಾಭೀಷ್ಟ ಫಲದಾತನೇ ಪರ್ವಾ ಸಪ್ತದಿ ನಿನ್ನ ಭಜಿಸೇ ಸ್ಮರಿಸುವೆನು 1 ನಂದನಂದನ ಗೋವಿಂದನೇ ತಂದೆ ಬಂಧವ ನೀಗುವ ಶಕ್ತಿಯ ಮಂದರಧರದಯ ತೋರೆಂದು ನೆನೆಯುವೆ 2 ಭಕ್ತರ ಪೊರೆ ನೀ ದಾತನೇ ತಂದೆ ಮುಕ್ತಿ ಸ್ವಾತಂತ್ರ್ಯವ ನೀಡೆಲೋ ಶಕ್ತಿ ಸ್ವರಾಜ್ಯಕ್ಕೆ ಮಾತೃ ಸೇವೆಗೆ 3
--------------
ಕರ್ಕಿ ಕೇಶವದಾಸ
ಪಾಲಿಸೆನ್ನ ಪಾವ9ತೀಶನೆ | ಮಹಾನುಭಾವ | ನೀಲಕಂಠ ರುಂಡಮಾಲನೆ ಪ ಪಾಲಿಸೆನ್ನ ಭವದೊಳಿಂದು | ಬಾಲಚಂದ್ರಧರನೆ ಬಂದು | ಕಾಲಕಾಲ ದುರಿತಜಾಲ | ಮೂಲನಾಶಗೈದುವೊಲಿದು ಅ.ಪ. ಅಂತರಾತ್ಮನಖಿಲ ಪೋಷಣ | ಕಪಾಲಧರ ದು-| ರಂತ ಮಹಿಮ ತ್ರಿಗುಣ ಕಾರಣ || ಸಂತಸುಜನ ಚಿಂತಿತಾಥ9 | ಭವಾಬ್ಧಿ ಪೋತ | ಅಂತಕಾಂತನಖಿಲ ಭುವನ | ಕ್ರಾಂತಾನಂತ ಮಹಿಮ ದೇವ 1 ಭುಜಗಾಭರಣ ಅಜಸುರಾಚಿ9ತ | ತ್ರಿಶೂಲಧಾರ| ಸುಜನ ಬಂಧು ಮುಕ್ತಿದಾಯಕ || ತ್ರಿಜಗದೀಶ ತ್ರಿಪುರನಾಶ | ರಜತಶೈಲವಾಸ ಭಕ್ತ | ನಿಜಮನೋರಥಾಬ್ಧಿ ಚಂದ್ರ | ಭಜಿಸುವೆ ಚರಣಾರವಿಂದ 2 ಆದಿಮಧ್ಯಾಂತರಾತ್ಮನೆ | ಜಗನ್ನಿವಾಸ | ವೇದವೇದ್ಯ ಸುಜನಸೇವ್ಯನೆ || ಆದಿಮಾಯೆಯಾದಿಮೂಲ | ಆದಿಪುರುಷ ಶ್ರೀನಿವಾಸ | ಸಾದರದೊಳೆನ್ನ ಕಾಯ್ದು | ಮೋದದಿಂದ ಸಲಹೊ ದೇವ 3
--------------
ಸದಾನಂದರು