ಒಟ್ಟು 2020 ಕಡೆಗಳಲ್ಲಿ , 113 ದಾಸರು , 1581 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುರುಷಾರ್ಥ ಪ ವರದ ಅಭೀಷ್ಟೆಯ ಕರದು ಎನಗೆ ನೀ ವರದನೆಂಬೊ ನಿನ್ನ ಬಿರುದನ ರಕ್ಷಿಸು ಅ.ಪ ಅಜನ ಜನಕನÀಲ್ಲಿ ಇರುವಿಯೊ ವಿಜನ ದೇಶದಲ್ಲೀ ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ ಸುಜನರ ತಾಪಕೆ ವ್ಯಜನನು ನೀನೂ ಸುಜನಕಲ್ಪತರು ಕುಜನಕುಠಾರಾ 1 ನಂದನಂದನನೂ ಅವನಿನ್ನ ಬಂಧನದೊಳಗಿಹನೂ ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ ನೊಂದೆನು ಬೆಂದೆನು ಬಂದೆನು ನಿನ್ನಲಿ ಕಂದನ ಲಾಲಿಸು ಒಂದಿನ ಬಿಡದೆ 2 ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ ಪರತರಗುರು ನಿನ್ನಾ ಹೊರತು ಗತಿ ಗುರುತತಿಲ್ಲ ಮುನ್ನಾ ಅರಿತು ಅನಂತಾದ್ರಿ ನಿರತನ ತೋರಿಸು ಮೋದ ಪುರನಿರತ ಸದ್ಗುರುವೆ 3
--------------
ಅನಂತಾದ್ರೀಶರು
ಪುರುಷೋತ್ತಮ ತೀರ್ಥರೇ | ಪಾಲಿಸಿ ಎನ್ನಪುರುಷೋತ್ತಮ ತೀರ್ಥರೆ ಪ ಧೃತ - ಸಾರಿ ಬಂದೆನು ನಿಮ್ಮ ನೋಡಲುಭೂರಿ ಕರುಣವ ಮಾಡಿ ಪಾಲಿಸಿ ಅ.ಪ. ಅಲವ ಬೋಧರ ಮತವಾ | ಪೊಂದಿದರಆಲಸಾದೆ ಭಜಿಸುವರ್ಗೇ |ಧೃತ - ಶೀಲ ಮಾರ್ಗವ ತೋರಿ ಸಲಹುತಕೀಳು ಕರ್ಮವ ಕಳೆವ ಮೌನಿಯೆ 1 ದ್ವಿಜ ಮೌಳಿ ರಾಮಾಚಾರ್ಯ | ತವದಯದಿತೇಜೋ ತನಯನ ಪಡೆಯಲು |ಧೃತ - ದ್ವಿಜನ ಗೈದಾವಿಪ್ರಸುತನನುನಿಜ ಸುಪೀಠದಿ ನಿಲಿಸಿ ಮೆರೆದ 2 ಜಯ ಧ್ವಜ ಕರಜಾತಾ | ವಾತಗೆ ಪ್ರೀತಕಣ್ವ ತಟದಿ ವಿಖ್ಯಾತಾ |ಧೃತ - ತೋಯ ಜಾಕ್ಷಾನಾದ ಗುರುಗೋವಿಂದ ವಿಠಲನ ಧ್ಯಾನರತನೆ 3
--------------
ಗುರುಗೋವಿಂದವಿಠಲರು
ಪೂಜಿಪೆ ನಾ ಪರಮಪುರುಷನರಸಿ ಲಕ್ಷ್ಮಿಗೆ ಪ. ತೇಜಮಾದ ಭದ್ರಪೀಠದಿ ರಾಜೀವಾಕ್ಷಿ ಲಕುಮಿಯ ಅ.ಪ. ಧ್ಯಾನಮಾವಾಹನವ ಮಾಡಿ ಸ್ನಾನ ವಸವ ತೊಡಿಗೆ ತೊಡಿಸಿ ಪೂಜಿಸುವೆನು 1 ಕುಸುಮ ಮಾಲೆಯಿಂದ 2 ಕದಳೀ ಖರ್ಜೂರ ದ್ರಾಕ್ಷಿ ಮಧುರ ದಾಳಿಂಬ ನಾರಿಕೇಳ ಕರ ಚರಣ ತೊಳೆದು ಸದಮಲೆಗಾರುತಿ ಬೆಳಗುವೆನು 3 ಸ್ವಸ್ತಿ ಪೇಳುತ ವರಗಳ ಬೇಡಿ ಮುಕ್ತಿದಾತೆ ಮಾಂಗಲ್ಯ ಭಾಗ್ಯವನಿತ್ತು ಪಾಲಿಸೆಂದು ಕರವ ಮುಗಿದ 4 ಅಷ್ಟೈಶ್ವರ್ಯದಿಂದ ಮೆರೆವ ದಿಟ್ಟ ಮೂರುತಿ ಶ್ರೀ ಶ್ರೀನಿವಾಸನ ಕರುಣಿಸೆಂದು 5
--------------
ಸರಸ್ವತಿ ಬಾಯಿ
ಪೂಜಿಸ ಬಲ್ಲೆನೆ ನಾನು ನಿನ್ನಂಘ್ರಿಯ ರಾಜೀವದಳ ನಯನ ಪ ಭಂಜನ ಭವ ರಾಮಚಂದ್ರ ಸೀತಾ ಹೃತ್ಕುಮುದ ಚಂದ್ರ ಅ.ಪ ಪಾರಿಜಾತ ಪುನ್ನಾಗ ಬಕುಳ ಮಂ- ದಾರ ಮಲ್ಲಿಕ ಕೇತಕೀ- ಸಾರಸ ಜಾಜಿ ಚಂಪಕ ತುಳಸಿಯುಕರ- ವೀರವೇ ಮೊದಲಾದ ದಿವ್ಯ ಪುಷ್ಪಗಳಿಂದ 1 ವಿಶ್ವಾದಿ ಸಾಹಸ್ರನಾಮಂಗಳಿಂ ನಿನ್ನ ಶಾಶ್ವದ್ರೂಪವ ತಿಳಿದು ಅಶ್ವಮುಖಾನಂದಮಯ ಪರಮಾತ್ಮ ನಿ- ನ್ನರ್ಚಿಸುವಡೆ ಚಪಲ ಚಿತ್ತಗೆ ಸಾಧ್ಯವೆ 2 ಸೂರ್ಯ ಚಂದ್ರರು ದೀಪ ನೀರೆಲ್ಲ ಅಭಿಷೇಕವೂ ತೋರೂವದಿಗ್ವಸ್ತ್ರ ಪೃಥ್ವಿಗಂಧವು ಸರ್ವ ಸಾರ ಭೋಕ್ತಗೆ ಗುಣಗಳ ತಾಂಬೂಲಾದಿಗಳಿಂದ3 ಕಮಲ ಸದನ ಹಂಸಾಖ್ಯ ಕು- ಡಿದ ನೀರು ಅಭಿಷೇಕವೂ ಮುದದಿ ನಿತ್ಯದಿ ಉಂಬುವುದೆ ನೈವೇದ್ಯವು ಪ್ರತಿ ಪದ ಪ್ರದಕ್ಷಣೆ ಮಲಗುವದೆ ವಂದನೆಯೆಂದು 4 ಒಂದು ಅರಿಯದ ಉಭಯಾಂಧನು ನಾನು ಗೋ- ವಿಂದ ನಿನ್ನಯ ಭಕ್ತಾರಾ ಸಂದೋಹದೊಳಗಿಟ್ಟೆನ್ನರ್ಚನೆ ಕೈಕೊಂಡು ತಂದೆ ಪಾಲಿಸೋ ಗುರುರಾಮ ವಿಠಲ ಸ್ವಾಮಿ 5
--------------
ಗುರುರಾಮವಿಠಲ
ಪೂತ ಚರಿತೆ ಭೂಮಿಜಾತೆ ಸೀತಾದೇವಿಯೇ ಪ ಪಾತಕಗಳ ಕಳೆದು ಯಮ್ಮನು ಪಾಲಿಸು ತಾಯೆ ಅ.ಪ ದೇವ ವೈರಿಯ ಕೈಯಲಿ ಸೇರಿ ಭೂವರ ಜನಕರಾಯಗೊಲಿದೌ ಭೂವಿವರದೊಳಿಡಲು ಮಾಯದಿ 1 ವಸುಧೆ ಸುರನಿಂದೋಲೆ ಕಳುಹಿಸಿ ಬಿಸಜಾಕ್ಷ ಕೃಷ್ಣನೊಲಿಸಿ ಕೈಪಿಡಿದೆ 2 ಶರಧಿರಾಜನ ಮಗಳೆ ಚಂದ್ರಸೋ ಗುರುರಾಮ ವಿಠಲನರ್ಧಾಂಗಿಕರುಣಿಸಮ್ಮ ಕೃಪಾ ಪಾಂಗಿ 3
--------------
ಗುರುರಾಮವಿಠಲ
ಪೋತನ ಪಾಲಿಸೋಪವಮಾನಾ | ಈ ಭೂತಳದೊಳು ನಿನ್ನ ಖ್ಯಾತಿ ಘುನಾ ಪದರಿಗೆ ಬಿದ್ದವನೆಂದು ಗ್ರಹಿಸೋ 1 ತಾಯಿಯು ಇಲ್ಲದ ಬಾಲಕನು | ಇವನ ಕಾಯಲು ನೀ ದಯಾ ಸಾಗರನು 2 ಶ್ವಾಸದೊಡಿಯ ನೀನೆಂತೆಂದು | ಶೃತಿ ಘೋಷಿಸುವದು ಆನತ ಬಂಧು3 ಶಿಶುವಿಗೊಲಿದು ನೀ ಸಲಹಿದರೆ | ದೇವ ಖರೆ 4 ಗ್ರಾಮ ಬಲ್ಲಿಟಗಿ ಕೃತವಾಸ | ಶಿರಿಶಾಮಸುಂದರನ ಪ್ರಿಯದಾಸ 5
--------------
ಶಾಮಸುಂದರ ವಿಠಲ
ಪೋಷಿಸೆನ್ನ ಜೀಯಾ | ಗುರು |ಪ್ರಾಣೇಶ ದಾಸರಾಯಾ |ಶ್ರೀಶನ ಗುಣ ಸಂತೋಷದಿ ಪಾಡುವ |ದಾಸ ಕುಲಾಗ್ರಣಿಯೇ | ಎಣಿಯೆ ಪ ಹರಿಸ್ಮರಣೆಯ ಮರೆದೂ | ಸರ್ವದ |ಪದದನ್ನಕೆ ಬೆರಿದೂ |ದುರುಳ ಜನರ ಸಹವಾಸವನ್ನು ಮಾಡಿ |ಬಂದೆ ದಿನವ ಕಳೆದೇ ಉಳದೇ 1 ಪವನ ಮತದೊಳಿಟ್ಟೂ | ಶ್ರೀ ಹರಿ |ಸ್ತವನವನ್ನೆ ಕೊಟ್ಟೂ |ಕವಿಗಳ ಮುಖದಿಂ ತತ್ವವಿಚಾರದಿ |ಕವಲ ಮತಿಯ ಪಾಲಿಸೀ, ಉದ್ಧರಿಸೀ 2 ಮನ್ನ ಭಿನ್ನಪವನ್ನು ಕೇಳಿ |ಮನ್ನಿಸು ಸುರಧೇನೂ |ಘನ್ನ ಶ್ರೀಶ ಪ್ರಾಣೇಶ ವಿಠಲನ ಧ್ಯಾನ |ವನ್ನು ಮಾಳ್ವ ಶಕ್ತಾ ವಿರಕ್ತಾ 3
--------------
ಶ್ರೀಶಪ್ರಾಣೇಶವಿಠಲರು
ಪೌರಾಣಿಕ ಕಥನ ಸೃಷ್ಟಿಯಲಿ ಕಡು ದುಷ್ಟ ರಾವಣ ಕಟ್ಟಳೆಯ ಕಂಗೆಡಿಸಲು ಅಷ್ಟರೊಳು ಭಯಪಟ್ಟು ದಿವಿಜರು ಒಟ್ಟುಗೂಡುತ ಸ್ತುತಿಸಲು ಥಟ್ಟನೆ ದಯವಿಟ್ಟು ದಶರಥಪಟ್ಟಮಹಿಷಿಯೊಳುದಿಸಲು ದಿಟ್ಟ ಕೌಶಿಕನಿಷ್ಟಿಯನು ಕೈಗೊಟ್ಟು ಸಲಹಿದ ಶ್ರೇಷ್ಠಧನುಜಘರಟ್ಟಗಾರತಿಯ ಬೆಳಗಿದರು1 ಪಾದರಜದಿಂ ಪೊರೆಯುತ ಸಾಧಿಸಿದ ಧನು ಭೇದಿಸುತ ಹಿತಳಾದ ಸೀತೆಯ ಒಲಿಸುತ ಕ್ರೋಧದಿಂದೆದುರಾದ ಪರಶುವನಾ ದಯಾನಿಧಿ ಗೆಲ್ಲುತ ಸಾಧುಮಾರ್ಗವಿನೋದ ಸೀತಾಹ್ಲಾದ ಪಾಪವಿರೋಧ ದಾನವಸೂದನಗಾರತಿಯ ಬೆಳಗಿದರು 2 ಚಿಕ್ಕ ತಾಯಿಯ ಸೊಕ್ಕುನುಡಿಗತಿಸೌಖ್ಯವನು ಹೋಗಾಡುತ ಘಕ್ಕನನುಜನ ನಿಜಸತಿಯತಾ ಸೌಖ್ಯದಿಂದೊಡಗೂಡುತ ವನಕ್ಕೆ ತಾ ಸಂಚರಿಸುತ ಮಿಕ್ಕಿ ಬಂದಾ ರಕ್ಕಸಿಯ ಕುಚದಿಕ್ಕೆಲವ ಖಂಡಿಸಿದ ಪ್ರಭುಗೆ ಮಾಣಿಕ್ಯದಾರತಿಯ ಬೆಳಗಿದರು 3 ಧೂರ್ತ ಖರತ್ರಿಶಿರಾದಿ ದಾನವ ಮೊತ್ತವನು ಸಂಹರಿಸುತ ದೈತ್ಯಮಾಯಾವೃತ್ತಿಮೃಗವನು ಮತ್ತಕಾಶಿನಿ ಬೇಡುತ ಸತ್ತ್ವನಿಧಿ ಬೆನ್ನಟ್ಟಿ ಸೀತೆಯ ದೈತ್ಯಪತಿ ಕೊಂಡೋಡುತ ಮತ್ತೆ ಕಾಣದೆ ಕೋಪದಿಂದರಸುತ್ತ ಬಂದ ಮಹಾತ್ಮ ರಾಮಗೆ ಮುತ್ತಿನಾರತಿಯ ಬೆಳಗಿದರು 4 ತೋಯಜಾಕ್ಷಿಯ ಸುದ್ದಿ ಪೇಳ್ದ ಜಟಾಯುವಿಗೆ ಗತಿ ತೋರುತ ವಾಯುತನುಜಸಹಾಯದಿಂ ಕಪಿರಾಯ ಸಖ್ಯವ ಮಾಡುತ ನ್ಯಾಯಗರ್ಭಿತ ಸಾಯಕದಿ ಮಹಕಾಯ ವಾಲಿಯ ಕೊಲ್ಲುತ ಪ್ರಾಯಶದಿ ಗಿರಿಯೊಡ್ಡಿ ಶರಧಿಗುಪಾಯದಿಂ ಬಂಧಿಸಿದ ಜಾನಕೀಪ್ರಿಯಗಾರತಿಯ ಬೆಳಗಿದರು 5 ಮನವಿವೇಕವ ನೆನೆದು ಬಂದಾ ಧನುಜಪತಿ ಸೋದರನಿಗೆ ಇನಶಶಿಗಳುಳ್ಳನಕ ಲಂಕಾವನಿಯ ಪಾಲಿಸುತ ಮಿಗೆ ರಣದಿ ರಾವಣಕುಂಭಕರ್ಣರ ಹನನಗೈಯುತ ಲೋಕಕೆ ಸೀತೆಯ ವಿನಯ ಗೈದಗೆ ಮೇರುಗಿರಿನಿಭ ಇಂದ್ರಪುಷ್ಪಕಾವೇರಿ ತಾ ಸಾಕೇತಕೆ ಸೇರಿ ಸಾನುಜರಿಂದ ಧರ್ಮದ ಮೇರೆದಪ್ಪದೆ ಸುಜನಕೆ ಸಾರಸಂಪದವಿತ್ತು ಲೋಕೋದ್ಧಾರನಾಗುತ್ತಖಿಳಕೆ ನೀರಜೇಕ್ಷಣ ಕರುಣಪಾರಾವಾರ ಶರಧೀಗಂಭೀರ ಲಕ್ಷುಮೀ ನಾರಾಯಣ ರೂಪ ಜಯ ಜಯ 7
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಭುರಾಯ ಪ್ರಭುರಾಯ ಅಭಿನಂದಿಸುವೆನು | ಶುಭಮತಿ ಪಾಲಿಸು ಪ ಶ್ರೀಶಗುರಪ್ರಾಣೇಶದಾಸರಿಂದ ಪೋಷಿತನಾದ ಭೂಸುರ ಪ್ರೀಯ 1 ಭಾವÀಭಕ್ತಿಲಿ ಸೇವಿಸಿ ಸಂತಸ ಶ್ರೀವರದೇಂದ್ರರ | ನೀಮೊಲಿದ‌ಘನ 2 ಕೋಶಿಗಿ ಗುರು ಉಪದೇಶದಿಂದ ವರ ದೇಶವಿಠಲನ ದಾಸನೆಂದೆನಿಸಿದ 3 ಕಪ್ಪುಗೊರಳನುತ | ಕುಪ್ಪಿಯ ಭೀಮನ ತಪ್ಪು ಕ್ಷಮಿಸೆಂದು | ತಪ್ಪದೆ ಸ್ತವಿಸಿದ 4 ಅನ್ಯನಲ್ಲನಾ ನಿನ್ನಾಪ್ತನು ನಿಜ ವೆನ್ನುತ ಬಿನ್ನಪ ಮನ್ನಿಸಿ ನೋಡೋ 5 ರಾಮಸ್ತವನವನು ನೇಮದಿಗೈಯುವ ಕೋಮಲಾಂಗದ ಹೇಮಮ ಬಂಧು 6 ನಂದಜ ಶಾಮಸುಂದರವಿಠಲನ ಮಂದಜ ಮಧುಪ7
--------------
ಶಾಮಸುಂದರ ವಿಠಲ
ಪ್ರಸನ್ನವಿಠಲ ಪಾಲಿಸಿವನ ಪ ಅಸತ್ಯದಲಿ ಮನವಿಡದೆ ಆಸಕ್ತಿ ನಿನ್ನಲ್ಲಿ ಕೊಟ್ಟು ಅ.ಪ. ದೃಢÀ ನಿನ್ನ ಭಕ್ತರಲಿ ಕೊಡುಭಕ್ತಿ ವಿರಕ್ತಿ ದೃಢ ಜ್ಞಾನ ನಿನ್ನಲ್ಲಿ ಬಿಡದೆ ನಿತ್ಯ ಮಡದಿ ಮಕ್ಕಳ ಕೂಡಿ ನಿನ್ನ ಸೇವೆ ಸಲ್ಲಿಸಲಯ್ಯ ಕಡಲಸುತೆ ಶ್ರೀ ರಮಣ ಬೆಂಬಲನು ನೀನಾಗು 1 ಸಜ್ಜನರ ಪದಧೂಳಿ ಆಗಿರಲಿ ಎಂದೆಂದು ದುರ್ಜನರ ಸಹವಾಸ ಕೊಡಬೇಡವಯ್ಯ ಬೊಜ್ಜೆಯಲಿ ಮೂರ್ಜಗವ ಪೊತ್ತ ಮಹಾತ್ಮ ಇವನ ಹೆಚ್ಚಾಗಿ ಪೊರಿ ಬಿಡದೆ ಅಚ್ಚ ಮಾರ್ಗದಿ ಇಟ್ಟು 2 ನಿನ್ನ ನಾಮಾಮೃತ ಸತತ ಸುಖ ಸವಿಯಲಿ ಸ್ವಾಮಿ ಬನ್ನ ಬಡಿಸಲಿ ಬೇಡ ತರಳನಿವನು ಉನ್ನತೋನ್ನತ ಮಹಿಮ ಜಯೇಶವಿಠಲ ಮನ್ನಿಧಿ ನೀನೆಂದು ಪ್ರಾರ್ಥಿಸುವೆ ಕೈಪಿಡಿದು 3
--------------
ಜಯೇಶವಿಠಲ
ಪ್ರಳಯಜಲದಲಿ ನೀನಾಲದೆಲೆಯ ಮ್ಯಾಲೆ ಹಲವು ಜೀವರು ನಿನ್ನ ಹೃದಯದೊಳಿರಲು ಕೆಲವುದಿನದಿ ಯೋಗನಿದ್ರೆಯೊಳಿರೆ ಒಲವಿಂದ ಸೃಜಿಸುವೆನೆಂದು ನೇಮಿಸುವೆ1 ಪ್ರಕೃತಿಯ ಮೂಲಕಾರಣವನು ಮಾಡಿ ಸಕಲತತ್ವಗಳ ಸಮ್ಮೋಹದಿ ಕೂಡಿ ವಿಕಳಿಸದಂತೆ ತನ್ಮಾತ್ರೆಯ ಕೂಡಿ ಅಖಿಳೇಶ ಮಹತತ್ವಗಳ ನಿರ್ಮಿಸಿದೆ 2 ಮಹತತ್ವದಿಂದಹಂಕಾರವ ಪುಟ್ಟಿಸಿ ಅಹಂಕಾರದಿಂದ ವೈಕಾರಿಕ ಮೊದಲಾದ ತ್ರಿವಿಧತತ್ವಗಳ ನಿರ್ಮಾಣವÀ ಮಾಡ್ದೆ ಮಹಮಹಿಮೆಯ ಮೆರೆದೆ ಜಗವರಿಯೆ 3 ಇಪ್ಪತ್ತುನಾಲ್ಕು ಅಯಿದಾರುತತ್ವಗಳಿಂದ ತÀಪ್ಪದೆ ಬೊಮ್ಮಾಂಡವ ನಿರ್ಮಿಸಿದೆ ಸರ್ಪಶಯನನಾಗಿ ನಾಭಿಕಮಲದಿಂದ ಅಪ್ಪಬ್ರಹ್ಮನ ಪ್ರಸವಿಸಿದೆ ನೀನೆಂದು 4 ಒಂದು ಮೂರುತಿಯಿಂದ ಸೃಷ್ಟಿಯ ಮಾಡಿ ಮತ್ತೊಂದು ಮೂರುತಿಯಿಂದ ಪಾಲನೆ ಮಾಡಿ ಒಂದು ಮೂರುತಿಯಿಂದ ಸಂಹರನೆ ಮಾಡಿ ಒಂದೊಂದು ಮಹಿಮೆಯು ಅನಂತಾದ್ಭುತವು 5 ಒಂದು ರೋಮಕೂಪದಲಿ ಬ್ರಹ್ಮಾಂಡ ಇಂದಿರೆ ಅನಂತಕೋಟಿ ನಾಮಗಳಲ್ಲಿ ಬಂದು ಗೋಕುಲದಲ್ಲಿ ಶಿಶುವಾಗಿ ತೋರಿದೆ ಆ- ಸುರರು 6 ಜನನಮರಣ ಭಯದಿಂದ ದೇವತೆಗಳು ಅನುದಿನ ನಿನ್ನ ಪೂಜೆಯ [ಮಾಡೇವೆನಲು] ಪುನರಾವೃತ್ತಿ ರಹಿತವಾದ ಫಲವೆತ್ತಿ ಮನುಜನಂತೆ ತೋರುವುದೇನುಚಿತವೊ 7 ಒಮ್ಮೆಕಾಣಲು ಸಿರಿರಮ್ಮೆ ಚೆಲುವನ ಒಮ್ಮನದಿಂದ ನೋಡೇನೆಂಬ ಭಯದಿಂದ ರಮ್ಮೆ ಮೊಗವ ತಗ್ಗಿಸಿ ನಾಚಿಸಿದಳೆ 8 ದÀಶದಿಕ್ಕು ನೋಡುತ್ತ ಭಯದಿಂದ ಕಮಲಜ ಶಶಿನಾಳದೊಳಗಿದ್ದ ದಾರಿಯ ಕಾಣದೆ ದಶಶತವರುಷ ನಿಮ್ಮನು ಧ್ಯಾನಿಸುತಿರೆ ವಸುಧೀಶ ನಿಮ್ಮ ನಿಜವ ತೋರಿದಿರಿ 9 ಆಲೋಚನೆಯಿಂದ ಸರ್ವ ವಿಷಯದಿಂದ ಲೀಲೆಯಿಂದ ಪಾಡಿ ಕಮಲಸಂಭವನ ವೋಳು ಮಾಡದಂತೆ ಒಳಿತಾಗಿ ತಲೆವಾಗೆ ಮೂಲ್ಲೋಕವ ಕೃಪೆಯಿಂದ ಪಾಲಿಸಿದೆ 10 ನಂದ ಯಶೋದೆ ವಸುದೇವ ದೇವಕಿಯರು ಸುಕೃತ ಫಲವಾಯಿತೆಂದು ಬಂದ ಬ್ರಾಹ್ಮಣರ ದ್ರವ್ಯದಿ ದಣಿಸಿದರು 11 ಜಾತಕರ್ಮವ ಮಾಡಿ ಮಧುವ ಬಾಯೊಳಗಿಟ್ಟು ಒತ್ತುಮೊರನ ಗೊಟ್ಟಿನಲಿ ಮಲಗಿದ್ದು ಸಾ- ಕ್ಷಾತ್ ಶ್ರೀ ನಾರಾಯಣನ ಅವತಾರವೆಂದು ಮಾತೆಯ ಮೊಲೆವಾಲನುಂಡ ಬೇಗದಲಿ 12 ವಾರುಣಿ ಶ- ಚಿ ರತಿ ಮೊದಲಾದ ಸತಿಯರು ನಾರಾಯಣ ಪರದೇವತೆಯೆಂದು ನಾರಿಯರೆಲ್ಲ ಪಾಡಿದರತಿ ಹರುಷದಲಿ 13 ನಾಮಕರಣ ದಿವಸ ಬ್ರಹ್ಮಾದಿ ಸುರರು ಈ ಮಹಾಶಿಶುವ ನೋಡೇವೆಂಬ ಭರದಿಂದ ಆ ಮಹಾಸ್ತೋಮವೆಲ್ಲ ಕೂಡಿಬರ- ಲೀ ಮಹಾಶಿಶುವ ನೋಡಿದರೆ ಅರ್ಥಿಯಲಿ 14 ವ್ಯಾಸ ಧೌಮ್ಯಾಚಾರ್ಯರೊಲಿದು ಮಂತ್ರಗಳಿಂದ ಸಾಸಿರಕೋಟ್ಯನಂತ ನಾಮಗಳುಳ್ಳ ವಾಸುದೇವ ಕೃಷ್ಣನೆಂಬ ನಾಮಗಳಿಟ್ಟು ಸೂಸಿದರಕ್ಷತೆ ಸುಮೂಹೂರ್ತದಲಿ 15 ಕ್ಷೀರಾಂಬುಧಿಯನ್ನೆ ತೊಟ್ಟಿಲು ಮಾಡಿ ಓರಂತೆ ನಾಲ್ಕುವೇದಗಳ ನೇಣನೆ ಮಾಡಿ ಧೀರಶೇಷನು ಬಂದು ಹಾಸಿಕೆ ಹಾಕಲು ನಾರಿಯರೊಡನೆ ಮಲಗಿದೆಯೊ ಹಯವದನ 16
--------------
ವಾದಿರಾಜ
ಪ್ರಾಣ ನರಹರಿವಿಠಲ | ಪಾಲಿಸೋ ಇವನಾ ಪ ಕಾಣೆನೋ ನಿನ್ಹೊರತು | ಅನ್ಯರನು ಹರಿಯೇ ಅ.ಪ. ಮಧ್ವಮತದೀಕ್ಷೆಯಲಿ | ಶ್ರದ್ಧೆಯುಳ್ಳವನಿವನುಬುದ್ಧಿ ಪೂರ್ವಕ ಶಾಸ್ತ್ರ | ದಧ್ಯಯನದಾಶೇ |ವೃದ್ಧಿಗೈಸುತ ಅದಕೆ | ಅದ್ವಾನ ವೆಸಗುತಲಿಹದ್ದುವಹ ಪೊರೆ ಇವನ | ಮಧ್ವಾಂತರಾತ್ಮ 1 ವೇದಾಂತ ವೇದ್ಯಹರಿ | ಪಾದಭಜನೆಯ ನಿತ್ತುಮೋದಮುನಿ ಸನ್ಮತವ | ಭೋದ ಚಾತುರ್ಯಆದರಿಸಿ ಇವಗಿತ್ತು | ಸಾಧನವಗೈಸೊ ಹರಿಬಾದರಾಯಣ ದೇವ | ಪ್ರಾರ್ಥಿಸುವೆ ನಿನ್ನಾ 2 ಸರ್ವಜ್ಞ ಸರ್ವೇಶ | ಸ್ವಾತಂತ್ರ ಪುರುಷನೆಸರ್ವಾಂತರಾತ್ಮಕನೆ | ನಿರ್ವಿಕಾರಾಖ್ಯಾಅದ್ವೆತತ್ರಯದಲ್ಲಿ | ಸರ್ವ ಸಾದನವಿರುವಸದ್ವಾರ್ತೆ ತಿಳಿಸಿವಗೆ | ಶರ್ವ ಸುರವಂದ್ಯಾ 3 ಧ್ಯಾನೊ ಪಾಸನೆ ತಿಳಿಸಿ | ಮೌನಿಗಳ ಸನ್ಮಾರ್ಗಜ್ಞಾನಿಯೆಂದೆನಿಸಿವನ | ಹೇ ನಾರಸಿಂಹ |ಮಾನಾಭಿ ಮಾನಗಳ | ನಾನಾಸುದ್ವಂದ್ವಗಳಶ್ರೀನಿವಾಸನೆ ತಾಳ್ವ | ಮನಧೈರ್ಯವೀಯೋ 4 ಗುರ್ವಂತರಾತ್ಮಗುರು | ಗೋವಿಂದ ವಿಠಲನೆದರ್ವಿಜೀವಿಯ ಹೃದಯ | ಗಹ್ವರದಿ ನಿನ್ನಾ |ಚೆಲ್ವರೂಪವ ಕಂಡು | ಭವವನುತ್ತರಿಪಂಥಹವಣೆ ಒದಗಿಸೊ ಎಂದು | ಪ್ರಾರ್ಥಿಸುವೆ ದೇವಾ 5
--------------
ಗುರುಗೋವಿಂದವಿಠಲರು
ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು ಯೋನಿಯಲಿ ಬಂದೆ ನೊಂದೆ ಗುರುವೆ ನೀನೆ ಗತಿಯೊ ಪ ಭರತ ಭಾರತಿರಮಣ ಭಾರತ ಪ್ರತಿಪಾದ್ಯ ಭರದಿಂದಲಿ ಎನ್ನಭಾರ ವಹಿಸುವ ಭರಣ ಭಾರದ್ವಾಜಾತ್ಮಜ ಭಾರಭಂಗಾ 1 ಗತಿ ಅಗತಿ ಗಮನಗರ್ಭ ಸ್ವರ್ಗ ನರಕ ಈ ಕ್ಷಿತಿ ಲೋಕಾಂತದಲ್ಲಿ ಬಳಲಿ ಮತಿಯ ಕಾಣದೇ ಮಂತ್ರಿ ರಾಜ ಮಹಾತತುವೇಶ ಬಲವತ್ವ್ಸರೂಪ2 ಪಂಚಾಹುತಿಯಲಿ ಹಾಕದಿರೋ ಜೀವೇಶ ಸಂಚಿತಾವಳಿ ಸರ್ವನಾಶಾ ಪಂಚದ್ವಾರದಲಿ ಶ್ರೀ ಹರಿಯ ಪೂಜಿಪ ಪುಣ್ಯ ಸಂಚಕನೆ ಪುರುಷಾಕಾರನೀಯೋ 3 ಅಪೂಪ ಬಹುರೂಪ ಹರಿಚಾಪ ಪ್ರತಾಪ ಕಪಿಕುಲಾಂಬುಜ ದಿನಪ ಸುರಪ ರಿಪು ವಿಪಿನಕಾಲ ಮಹಾ ಗುಪುತ ವ್ಯಾಪ್ತ ಸುಪ್ತಿ ಸ್ವಪನ ಜಾಗೃತಕಾರ್ಯಫಲದಾ4 ರಾಜಿಸುವ ರಾಗವಿದೂರಾ ವಾಜಿರೂಪ ವಾಶಿಷ್ಟ ವಂದ್ಯಾ ವರದಾ ಮಜ್ಜಗದ್ಗುರು ಮುಖ್ಯ ಪ್ರಾಣಾ 5 ಪೂರ್ವೋತ್ತರಂಗ ಸಂಧಿ ಸಂಧಾನ ವಿಶಿಷ್ಟಾ ಈರ್ವ ಸ್ಥಾನದಲಿ ನೀನೇ ಸರ್ವದಲಿ ಧ್ಯಾನವನು ಇತ್ತು ಪಾಲಿಸು ನಿತ್ಯ ಮೂರ್ತಿ 6 ಮಾನವ ರೂಪಾ ಮಾನಾಭಿಮಾನಿಗಳೊಡಿಯಾ ಆನಂದತೀರ್ಥಪದ ಭಕ್ತ ಅನಾಥಬಂಧು ವೈರಾಗ್ಯ 7 ಸಮಸ್ತ ಪರಮಾಣು ತಿಳಿಸೋ ಸಾಮ ಸೂರ್ಯಸ್ಥಿತನೆ ಸೂತ್ರಾ8 ಇಪ್ಪತ್ತೆರಡು ಸ್ಥಾನದಲಿ ಪ್ರಭುವೆ ಜಗ ದಪ್ಪ ಚತುರದ್ವಾರವಾಸ ಅಪ್ರತಿಮಲ್ಲ ಶ್ರೀ ವಿಜಯವಿಠ್ಠಲನ್ನ ಅಪ್ಪಿಕೊಂಡು ಮೆರೆದ ಧೀರಾ 9
--------------
ವಿಜಯದಾಸ
ಪ್ರಾಣದೇವ ನೀ ಕಾಯೊ ಕರುಣಿ ಸತತ ಪಾಲಿಸು ಸುಖದಾತ ಪ. ಪ್ರಣಾಪಾನವ್ಯಾನೊದಾನತೋಷ ಭಾರತೀಶ ಅ.ಪ. ತ್ರಿವಿಧ ಜೀವರ ಶ್ವಾಸ ನಿಯಾಮಕನೆ ಶ್ರೀ ಹರಿ ಸೇವಕ ನೀನೆ ಭವ ಇಂದ್ರಾದಿಗಳಿಂದಲಿ ವಂದಿತನೆ ಭಾರತಿಗತಿ ಪ್ರಿಯನೆ ತ್ರಿವಿಧ ಶ್ವಾಸ ಜಪ ನಿರ್ಲಿಪ್ತದಿ ಜಪಿಸಿ ಜೀವರ ಗತಿಗೈಸಿ ನವವಿಧ ಭಕ್ತಿಯ ಹರಿಚರಣದಿ ನಿರುತ ಚರಿಸುವ ಮತಿದಾತ 1 ತತ್ವಾಧೀಶರ ಪ್ರೇರಕ ಮಹಪ್ರಾಣ ಜೀವರ ಸುತ್ರಾಣ ವ್ಯಾಪ್ತಜಗದಿ ಶ್ರೀ ಹರಿ ಲಕುಮಿಯ ಸಹಿತ ಬಳಿತ್ಥಾ ಸೂಕ್ತ ಸ್ತುತ ಸತ್ವ ಗುಣದ ಜೀವರ ಸದ್ಗತಿದಾತ ಸುಜ್ಞಾನ ಪ್ರದಾತ 2 ತ್ರೇತೆಯಲ್ಲಿ ಶ್ರೀ ರಾಮದಾಸ್ಯ ಚರಿಸಿ ದಶಶಿರನನು ಮುರಿಸಿ ಮಾತೆ ಕೊಟ್ಟ ಭಿಕ್ಷಾನ್ನ ಉಂಡು ಸುಖಿಸಿ ಬಕ ಹಿಡಿಂಬಕರೊರಸಿ ಪಾತಕಿ ಮಾಯವಾದಿ ಜೈಸಿ ಸದ್ಗ್ರಂಥವ ರಚಿಸಿ ಖ್ಯಾತ ಗೋಪಾಲಕೃಷ್ಣವಿಠ್ಠಲ ಪ್ರಿಯ ನಮೋ ಚಳ್ಳಕೆರೆನಿಲಯ 3
--------------
ಅಂಬಾಬಾಯಿ
ಪ್ರಾಣರಾಯ ನೀನಲ್ಲದೆ ಮತ್ತನ್ಯ |ಪ್ರಾಣರು ಜಗದೊಳುಂಟೇ ||ದೀನರಕ್ಷಕನೆಂಬ ಬಿರುದಿಗೆ | ಪ್ರೇಮಾದಿ (ಪ್ರೇಮದಿ)ನೀನೆ ರಕ್ಷಿಸಬೇಕೈ ಪರಾಕೈ ಪ ಭವ |ಬಂಧನ ಪರಿಹರಿಸೋ ಉದರಿಸೋ 1 ವಂದಿಪ ಶರಣರ ಪೊರೆಯಬೇಕೆನುತಲಿ |ಬಂದು ಬಾಗಿಸೋಪಿಲಿ ||ಛಂದದಿ ವನದೊಳು ನಿಂದಾದಲತ ಗೋ |ವಿಂದರಾಯವಲದೀ ನೀ ನಲಿದೀ 2 ಈಸು ಮಹಿಮೆಯನು ತುತಿಸಲು ಖಗಪಾರ್ವ |ತೀಶರಿಗಸದಳವೈ ||ಶ್ರೀಶ ಪ್ರಾಣೇಶ ವಿಠಲದ ದಾಸಾಗ್ರಣಿ |ಈ ಸಮಯದಿ ಪಾಲಿಸೋ, ಲಾಲಿಸೋ 4
--------------
ಶ್ರೀಶಪ್ರಾಣೇಶವಿಠಲರು