ಒಟ್ಟು 3720 ಕಡೆಗಳಲ್ಲಿ , 121 ದಾಸರು , 2734 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಸುಚರಿತ್ರ ಪರಮ ಪವಿತ್ರಾ ಜೋ ಜೋ ಶತಪತ್ರನೇತ್ರ ಸುಗಾತ್ರಾ ಪ ಜೋ ಜೋ ವಟಪತ್ರಶಯನ ವಿಚಿತ್ರ ಜೋ ಜೋ ಸುಂದರಚಿತ್ರ ಸೀತಾಕಳತ್ರ ಅ.ಪ ಕುಶಿಕಾಧ್ವರಪಾಲಬಾಲ ಸುರನುತಿಪಾತ್ರಾ ಸನ್ನುತ ಸ್ವರರೂಪ ಚಿತ್ರ ನಿಶಿಚರಹರ ನಿತ್ಯಸುಖದಾತ ಮಿತ್ರಾ [ತ್ರಿಶಿರಾದ್ಯಸುರ ಸಂಹಾರಕನೇತ್ರ] 1 ಕರುಣಾಕಾರ ದಿವ್ಯ ಶಶಿಬಿಂಬವದನಾ ಶರಣಜನಾನತ ಮರಕತವದನಾ ಧರಣಿಜಲೋಲ ಭಾಸ್ಕರವಂಶಮದನಾ ನಿತ್ಯ ಮಾಂಗಿರಿಸದನಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜೋಕೆ ಮಾಡೆನ್ನ ನಮ್ಮಯ್ಯ ರಂಗ ಜೋಕೆ ಮಾಡೆನ್ನ ಪ ಲೋಕನಾಥನೆ ಜೋಕೆ ಮಾಡೆನ್ನ ಕಾಕುಬವಣೆಯ ಸಾಕುಮಾಡಿ ಏಕಚಿತ್ತದಿ ನಿಮ್ಮ ಭಜನೆ ಜೋಕಿನೊಳು ಇರಿಸು ದೇವ ಅ.ಪ ನಿಗಮಗೋಚರನೆ ಜಗದಯ್ಯ ವಿಜಯ್ಯ ಖಗಪತ್ವಾಹನನೆ ಅಗಧರನೆ ಈರೇಳು ಜಗವ ರಕ್ಷಿಪನೆ ರಘುಕುಲಾರ್ಯನೆ ಮಗನಬಗೆ ಕೇಳು ಕರುಣದಿಂದಲಿ ನಿಗಮಾತೀತನೆ ಮುಗಿವೆ ಕರಮಂ ಹಗಲು ಇರಲು ಸುಗುಣಿ ಸಂತರ ಸಂಗಸುಖ ಎನಗಗಲಿಸದೆ ಹರಿ 1 ಮೆರೆವವೇದವ ವರಸ್ಮøತಿಶಾಸ್ತ್ರವ ಕರುಣಿಸೈ ದೇವ ಪರಿಹರಿಸು ಎನ್ನ ಮರವೆ ಮಾಯವ ವರಭಕ್ತ ಜೀವ ಮರವೆ ಮಾಯದಿ ಸಿರಿಯವರ ತವಪರಮ ಚರಿತವ ಅರಿವು ನಿಲ್ಲಿಸಿ ಕರುಣದಿಂ ತವ ಚರಣಕುರುಹನು ಕರುಣಿಸಭವ 2 ದೃಢದಿ ಬೇಡುವೆನು ತಡಿಯೆನೀಭವ ಎಡರುತೊಡರನು ಗಡನೆ ಬಿಡಿಸೆನ್ನ ಕಡೆಗೆ ಮಾಡೆನ್ನ ನಿಮ್ಮಡಿಗೆ ಬಾಗುವೆನು ನುಡಿಸು ಎನ್ನ ಮೆಲ್ನುಡಿಯೊಳನುದಿನ ಬಿಡದೆ ತವ ಕೊಡು ಗೂಢಮಂತ್ರವ ಬಿಡದೆ ಕೊಡು ನಿನ್ನಡಿಯ ದಾಸರ ಸಡಗರದ್ಯನ್ನೊಡೆಯ ಶ್ರೀರಾಮ 3
--------------
ರಾಮದಾಸರು
ಜೋಜೋ ಜೋಜೋ ಜೋ ವೆಂಕಟೇಶ ಜೋಜೋ ಜೋಜೋ ಜೋ ಶ್ರೀನಿವಾಸ ಜೋಜೋ ಜೋಜೋ ಭಕ್ತರಘನಾಶ ಜೋಜೋ ಜೋಜೋ ಜೋ ಸ್ವಪ್ರಕಾಶ ಜೋಜೋ ಪ ನಂಬಿದೆ ತಂದೆ ಮುದ್ದು ಮೋಹನ್ನ ವಿಠ್ಠಲ ಸುಂದರ ಶ್ರೀ ಉರಗಾದ್ರಿವಾಸ ವಿಠ್ಠಲ ಸಿರಿ ಉರಗಾದ್ರಿವಾಸ ವಿಠ್ಠಲ ಇಂದಿರಾಪತಿ ತಂದೆ ವೆಂಕಟೇಶ ವಿಠ್ಠಲ 1 ಆನಂದಮಯ ಅಂತರಾತ್ಮವಿಠಲ ನವನೀತ ಧರ ತಾಂಡವ ಕೃಷ್ಣ ವಿಠ್ಠಲ ಜಯವೆಂದು ಪಾಡುವೆ ಜಯಾಪತಿ ವಿಠ್ಠಲ ಸರಿಯುಂಟೆ ನಿನಗಿನ್ನು ಶಾಂತೀಶ ವಿಠ್ಠಲ2 ಗಂಗಾಜನಕ ಶ್ರೀ ಗಜವರದ ವಿಠ್ಠಲ ಸಂಗರಹಿತ ಶೇಷಶಯನ ವಿಠ್ಠಲ ಹಯವನೇರುತ ಪೊರೆದೆ ಶ್ರೀಹರಿ ವಿಠ್ಠಲ ದಾನವೈರಿಯೆ ಧ್ರುವವರದ ವಿಠ್ಠಲ 3 ಗರುಡಗಮನ ಗುರುವಾಸುದೇವ ವಿಠ್ಠಲ ವರವ ಪಾಲಿಸು ವರದ ಲಕ್ಷ್ಮೀಶ ವಿಠ್ಠಲ ಪದ್ಮನಾಭನೆ ಕಾಯೊ ಪ್ರದ್ಯುಮ್ನ ವಿಠ್ಠಲ ವರಲಕ್ಷ್ಮೀರಮಣ ವರದ ವೆಂಕಟೇಶ ವಿಠ್ಠಲ4 ಸಜ್ಜನಪಾಲ ಶ್ರೀ ಸುಜ್ಞಾನ ವಿಠ್ಠಲ ಶಾಮಲಾಂಗನೆÀ ಕೃಷ್ಣ ಶ್ರೀನಾಥ ವಿಠ್ಠಲ ಭಾರತೀಶ ಪ್ರಿಯ ವಿಠ್ಠಲ ಪರಿಸರನೊಡೆಯ ಶ್ರೀವರಹ ವಿಠ್ಠಲ 5 ಜ್ಞಾನದಾಯಕ ಆನಂದಮಯ ವಿಠ್ಠಲ ಸಜ್ಜನ ಪರಿಪಾಲ ಶ್ರೀ ಪ್ರಾಜ್ಞ ವಿಠ್ಠಲ ಜಗವ ಮೋಹಿಪ ದೇವ ಜಗದ್ಭರಿತ ವಿಠ್ಠಲ ವಿಶ್ವ ವ್ಯಾಪಕ ವಿಜ್ಞಾನಮಯ ವಿಠ್ಠಲ6 ವಿಷ್ಣುಮೂರುತಿ ಕೃಷ್ಣದ್ವೈಪಾಯನ ವಿಠ್ಠಲ ಅಕ್ಷರೇಡ್ಯನೆ ಕಾಯೋ ಲಕ್ಷ್ಮೀಶ ವಿಠ್ಠಲ ಕಂಟಕ ಹರಿಸು ಶ್ರೀವೆಂಕಟೇಶ ವಿಠ್ಠಲ ಸಾರಿದೆ ಸಲಹೆನ್ನ ಶ್ರೀರಮಣ ವಿಠ್ಠಲ7 ದುರುಳರ ಮಡುಹಿದ ವರದ ವಿಠ್ಠಲ ಅಂಬುಧಿ ಶಯನಪನ್ನಂಗ ಶಯನ ವಿಠ್ಠಲ ದಾರಿ ತೋರಿಸೊ ದಾಮೋದರ ವಿಠ್ಠಲ ಕರುಣಿಸಿ ಪೊರೆ ಎನ್ನ ಕಮಲನಾಭ ವಿಠ್ಠಲ8 ಕಂಜದಳಾಕ್ಷ ಕಮಲನಾಥ ವಿಠ್ಠಲ ಮುರಮರ್ದನನೆ ಕಾಯೋ ಮುರಳೀಧರ ವಿಠ್ಠಲ ದಯದಿಂದ ಪಾಲಿಸು ದಯಾನಿಧೆ ವಿಠ್ಠಲ ಅಚ್ಚುತ ಹರಿ ಕೃಷ್ಣಕ್ಷೇತ್ರಜ್ಞವಿಠ್ಠಲ9 ಜ್ಞಾನಿಗಳರಸನೆ ಆನಂದ ವಿಠ್ಠಲ ಮೂಜಗದೊಡೆಯ ಭಾರ್ಗವೀಶ ವಿಠ್ಠಲ ಸರ್ವಕರ್ತೃ ಪುರುಷೋತ್ತಮ ವಿಠ್ಠಲ ಮಧುವೈರಿ ಪೊರೆಮಧುರನಾಥ ವಿಠ್ಠಲ10 ರಾಕ್ಷಸವೈರಿ ರಮಾಧವ ವಿಠ್ಠಲ ಕರುಣಿಗಳರಸನೆ ಕಾರುಣ್ಯ ವಿಠ್ಠಲ ಎದುರ್ಯಾರೋ ನಿನಗಿನ್ನು ಯದುಪತಿ ವಿಠ್ಠಲ ಉದ್ಧರಿಸೆನ್ನ ಉದ್ಧವವರದ ವಿಠ್ಠಲ11 ನಾಗಶಯನ ಕೃಷ್ಣಯೋಗೀಶ ವಿಠ್ಠಲ ಕುಂಭಿಣಿಪತಿ ಶ್ರೀಶ ಸಿಂಧುಶಯನ ವಿಠ್ಠಲ ಸುಜ್ಞಾನವೀವ ಪ್ರಾಜ್ಞಾನಿಧಿ ವಿಠ್ಠಲ ಸಂಕಟಹರಿಸು ಸಂಕರ್ಷಣ ವಿಠ್ಠಲ12 ಗೋಪಿಕಾಲೋಲ ಗೋಪೀನಾಥ ವಿಠ್ಠಲ ಪಾದ್ಯ ವೈಕುಂಠಪತಿ ವಿಠ್ಠಲ ಮಾತರಿಶೃಪ್ರಿಯ ಶ್ರೀಕಾಂತ ವಿಠ್ಠಲ ಧನ್ಯನಾದೆನೋ ದೇವ ಧನ್ವಂತ್ರಿ ವಿಠ್ಠಲ13 ಶ್ರೀಧರ ಪೊರೆ ವೇದವತೀಶ ವಿಠ್ಠಲ ಸಾಧುಗಳರಸನೆ ಭಕ್ತವತ್ಸಲ ಮೇದಿನಿಯೊಳು ನಿನ್ನ ಪೋಲುವರಿಲ್ಲ ಆದರದಿಂ ಕೇಳೊ ನೀ ಎನ್ನ ಸೊಲ್ಲ14 ರನ್ನ ಮಂಟಪದೊಳು ಚಿನ್ನದ ತೊಟ್ಟಿಲು ಕನ್ನೇರುತೂಗಿ ಪಾಡುವರೊ ಗೋವಿಂದ ಕರುಣಸಾಗರ ಕೃಷ್ಣ ಮಲಗಿ ನಿದ್ರೆಯ ಮಾಡೊ ಕಮಲನಾಭ ವಿಠ್ಠಲ ಪರಮದಯಾಳು 15
--------------
ನಿಡಗುರುಕಿ ಜೀವೂಬಾಯಿ
ಜ್ಜನನಿ ಪೊರೆಯೆ ರುದ್ರಾಣಿ ಪ. ಅಘಸಂಹಾರಿಣಿ | ಮೃಗಪತಿವಾಹಿನಿ || ಅಗಣಿತಗುಣಮಣಿ | ಭಗವತಿ ಶ್ರೀ ಜಗ ಅ.ಪ. ಸಿರಿ ಕಾತ್ಯಾಯಿನಿ | ಗೌರಿ ಭವಾನಿ || ಪರಮಪಾವನೆ | ಪರಮೇಶ್ವರಿ ಜಗ 1 ಶುಂಭಧ್ವಂಸಿ | ನಿಶುಂಭನಿಷೂದಿನಿ || ಅಂಬುಜಮುಖಿ ಮೂ | ಕಾಂಬಿಕೆ ಶ್ರೀ ಜಗ 2 ಗಾನವಿನೋದಿನಿ | ದಾನವ ಮಥಿನಿ || ದೀನಜನಾವಳಿ | ಪಾಲಿನಿ ಶ್ರೀ ಜಗ 3 ಜಟಾಮುಕುಟಸುರ|ತಟನೀಧರಸತಿ || ನಿಟಿಲಾಂಬಕಿ ಶ್ರೀ | ಕಟಿಲೇಶ್ವರಿ ಜಗ 4
--------------
ವೆಂಕಟ್‍ರಾವ್
ಜ್ಞಾನಪ್ರದ ನರಸಿಂಹ ವಿಠಲ ನೀ ಸಲಹೊ ಪ ಧೇನು ವತ್ಸದ ಧ್ವನಿಗೆ ತಾನೇವೆ ಬರುವಂತೆ ಅ.ಪ. ಕರ್ಮ ಪೂರ್ವಾರ್ಜಿತವ ನಿರ್ಮಲವ ಗೊಳಿಸುತ್ತಭರ್ಮ ಗರ್ಭನ ಜನಕ ಪೇರ್ಮೆಯಲಿ ಇವನಧರ್ಮ ಮಾರ್ಗದಿ ನಡೆಸು ಸುಜ್ಞಾನ ಮತಿಯಿತ್ತುಕರ್ಮನಾಮಕ ಹರಿಯೆ ಶರಣಜನ ಧೊರೆಯೆ 1 ಹರಿಯು ಸರ್ವೋತ್ತಮನು ಶಿರಿಯು ಆತನರಾಣಿಗುರು ವಾಯು ಸುರರೆಲ್ಲ ಹರಿಭೃತ್ಯರೆಂಬವರಮತಿಯನಿತ್ತವಗೆ ಸಂಸ್ಕøತಿಯ ಕ್ಲೇಶಗಳಪರಿಹರಿಸಿ ಪಾಲಿಪುದು ಪರಮ ಕರುಣಿಕಾ 2 ಪತಿ ಇರುವೆ ಮೂಕ ಪುರುಷರ ನೀನು ವಾಕ್ಪತಿಯ ಮಾಳ್ಪೆನಾಕೇಳ್ಪುದರಿದೇನೊ ಪಂಚ ಮುಖ ಭವವಂದ್ಯತೋಕನಿವ ಶರಣಗಿಹ ವ್ಯಾಕುಲವ ಕಳೆಯೋ 3 ಮಗುವಿನೊಚನವ ಕೇಳಿ ಜಿಗಿವೆ ಕಂಬದಲಿಂದನಗೆ ಮೊಗನೆ ತರಳೆಯಾ ಹಗರಣವ ಕಳೆದೇಖಗವರಧ್ವಜ ನಿನ್ನ ಬಗೆಬಗೆಯ ಲೀಲೆಗಳಮಿಗಿಲಾಗಿ ತೋರಿವಗೆ ನಗಧರನೆ ಹರಿಯೇ 4 ನಿತ್ಯತವ ಸ್ಮøತಿಯಿತ್ತು ಭೃತ್ಯನತಿ ಕಷ್ಟಗಳಕಿತ್ತೊಗೆದು ಮಧ್ವಮತ ತತ್ವ ತಿಳಿಸುತ್ತಾಗುಪ್ತ ಮಹಿಮನೆ ಗುರುಗೋವಿಂದ ವಿಠ್ಠಲನೆಭಕ್ತನುದ್ಧರಿಸೆಂದು ಪ್ರಾರ್ಥಿಸುವೆ ನಿನ್ನಾ 5
--------------
ಗುರುಗೋವಿಂದವಿಠಲರು
ಜ್ಞಾನಾಮೃತ ಭುಜಿಸು ಜೀವ ಮಾನವಜನುಮದ ಗುರಿಯಿದು ಪ ಶುದ್ಧಮನದ ಪಾತ್ರೆಯಲ್ಲಿ ಸದ್ಗುರುವಿನ ಬೋಧದನ್ನ ಶುದ್ಧ ಚೈತನ್ಯಾತ್ಮ ನೀನೆ ಬದ್ಧಜೀವನಲ್ಲವೆಂಬ 1 ಶಿವರೂಪನು ಸಚ್ಚಿದಾತ್ಮ ಭವಬಂಧನವೆನ್ನೊಳಿಲ್ಲ ಆವಿನಾಶಿಯೆ ನಾನು ಎಂಬ ಸುವಿಚಾರದ ಬಾಯಿಯಿಂದ 2 ಸದ್ ರೂಪದ ಆರೋಗ್ಯ ಚಿದ್ ರೂಪದ ಪರಮ ಭಾಗ್ಯ ಆನಂದದ ನಿಧಿಯಾಗುವಿ ಬೋಧ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಡಂಕವ ಸಾರಿದನೋ ಯಮ ತನ್ನ ನಗರದಿ ಘಂಟೆಯ ನುಡಿಸಿದನು ಪ ಡಂಕಸಾರಿದ ತನ್ನ ತುಂಟದೂತರಿಗ್ವೊ ಯ್ಕುಂಠನ ದಾಸರ ತಂಟೆಯು ಬೇಡೆಂದು ಅ.ಪ ಕಾಲಕಾಲದಿ ಹರಿಯಕಥೆ ಕೀರ್ತ ನಾಲಿಸುವರ ನೆರೆಯು ತಾಳದಮ್ಮಡಿ ಸಮ್ಮೇಳದೊಡನೆ ಆ ನೀಲಶ್ಯಾಮನ ಭಜಿಪರಾಳಿನಾಳನುಕಂಡು ಕಾಲನಾಲುಗಳೆಂದ್ಹೇಳದೆ ಬನ್ನಿರೆಂದು 1 ಮಂದಿರಂಗಳದಿ ವೃಂದಾವನ ದಂದ ಕಂಡಾಕ್ಷಣದಿ ಸಿಂಧುಶಯನ ಬಂಧುಭಕ್ತರ ಮಂದಿರವಿದೆಂದು ಹಿಂದಕ್ಕೆ ನೋಡದೆ ಸಂದ್ಹಿಡಿದೋಡಿ ಪುರ ಬಂದು ಸೇರಿರೆಂದು 2 ಪರರಂಗನೆಯರ ಸ್ಮರಿಸುವ ಪರಮ ನೀಚರನ್ನು ನರಹರಿ ಸ್ಮರಣೆಯ ಅರಿಯದ ಆಧಮರ ಕರುಣಿಸದೆ ತುಸುಮುರಿದು ಮುಸುಕಿಕಟ್ಟಿ ದರದರನೆಳೆತಂದು ಉರಿಯೊಳ್ಪೊಯಿರೆಂದು 3 ಪರದ್ರವ್ಯವಪಹರಿಸಿ ಲಂಚದಿಂದ ಸರುವ ತನ್ನದೆನಿಸಿ ನಿರುತ ಮಡದಿಮಕ್ಕಳೊರೆವ ದುರಾತ್ಮನರ ಗುರುತಳನೆಳತಂದು ಕರಿಗಿದಸೀಸಬಾಯೊಳ್ ವೆರಸಿ ಜನಕಕೊಂಡದುರುಳಿಸಿಬಿಡಿರೆಂದು 4 ವೇಣು ಕರದಿ ಪಿಡಿದು ಬಾಣಾರಿ ಧ್ಯಾನದೊಳಗೆ ಬರೆದು ಜಾನಕೀಶನ ಲೀಲೆ ಗಾನದಿಂ ಪಾಡುತ ಆನಂದಿಪ ಮಹಜ್ಞಾನಿಗಳನು ಕಂಡು ಕಾಣದಂತೆ ಸಿಕ್ಕ ಜಾಣ್ಣುಡಿದೋಡಿರೆಂದು 5 ಇಂದಿರೇಶನದಿನದಿ ಅನ್ನವನು ತಿಂದ ಮೂಢರ ಭರದಿ ತಂದು ಒದೆದು ಮಹಗಂಧಮದು ರ್ಗಂಧನಾರುವ ಮಲತಿಂದು ಬದುಕಿರೆಲೊ ಎಂದು ಮನೆಹೊರಗಿನ ಮಂದಿರದಿಡಿರೆಂದು 6 ವಿಮಲ ತುಳಸೀಮಣಿಯ ಧರಿಸಿ ಅಮಿತ ಮಹಿಮನ ಚರಿಯ ವಿಮಲಮನಸರಾಗಿ ಕ್ರಮದಿ ಬರುವ ಶ್ರೀ ರಾಮದಾಸರ ಪಾದಕಮಲಗಳನು ಕಂಡು ಯಮದೂತರೆನ್ನದೆ ನಮಿಸಿ ಬನ್ನಿರೆಂದು 7
--------------
ರಾಮದಾಸರು
ತಗಲಿ ತಗಲದೆ ಈ ಜಗದೊಳು ಜೀವಿಸೊ ಕಮಲ ಪತ್ರದಲ್ಲಿಹ ಜಲದ ಕಣಗಳಂತೆ ಪ ತಗಲುತ ನಿರತ ಸುಖವನೀವ ಕರ್ಮಕ್ಕೆ ತಗಲದೆ ಭವದಲಿ ಬಿಗಿವ ವಿಷಯಗಳಿಗೆ ಅ.ಪ ಪರಿಪರಿ ಕ್ಷಣಿಕ ಸುಖದ ಮೋಹದೊಳತಿ ದುರಿತಗಳಿಗೆಳೆವ ದುರುಳರ ಅಗಲೆಲೋ ಹರಿದಾಸರ ಸಹವಾಸಕ್ಕೆ ತಗಲುತ್ತ ಹರಿಗುಣ ಪೊಗಳುವ ಪರಮ ಸುಖವ ಬಯಸೊ 1 ಸತಿ ಸುತರೆಲ್ಲ ಶ್ರೀಪತಿಯ ಸೇವೆಯೊಳತಿ ಹಿತ ತೋರಲು ಅವರೊಳಾಮತಿಯನು ತಗಲಿಸೊ ಕ್ಷಿತಿಯೊಳವರು ನಿನ್ನ ಭೋಗವಸ್ತುಗಳೆಂದು ಮಿತಿ ಮೀರಿರುವ ಮಮತೆಗೆ ತಗಲದಿರೊ 2 ದುರ್ಮಾರ್ಗದೊಳು ದುಷ್ಟಕರ್ಮಗಳನೆ ಮಾಡಿ ಹೆಮ್ಮೆಯಿಂದಲಿ ಪಾಪ ಫಲಗಳ ಬಯಸದೆ ಧರ್ಮದಿ ಸುಖಗಳನನುಭವಿಸುವುದಕೆ ಸಮ್ಮತಿ ಈ ಯುವ ನಮ್ಮ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ತತ್ವದರ್ಶನದಲ್ಲಿ ಮಂತ್ರಮಹಿಮೆ ಸ್ವಾಮಿಗರ್ಪಿಸೋ ಮಾನವಾ ಪ ಕಾಮಿತಾರ್ಥವ ಬೇಡದೆ ಶತ ಸಾಮಜಾಪತಿ ನೆನೆವ ಮಂತ್ರ ಅ.ಪ ದಿವಿಜರನಿಶ ಪಠಿಪ ಮಂತ್ರ ಜವನ ಭಟರ ಸದೆದ ಮಂತ್ರ 1 ಲಲನೆಪಾಂಚಾಲಿ ಹೇಳಿದ ಮಂತ್ರ ಬಲಿಗೆ ವರವನಿತ್ತ ಮಂತ್ರ 2 ಸಾರಸಭವನುಲಿದ ಮಂತ್ರ ಘೋರದುರಿತನಾಶಕ ಮಂತ್ರ ಸಂ ಸಾರಜಲಧಿ ದಾಟಿಪ ಮಂತ್ರ 3 ಉಸುರಲಳವೆ ಪರಮ ಮಂತ್ರ 4 ನರನ ಪಾಲಿಪೊಂದು ಮಂತ್ರ 5 ಸಿರಿಗೋವಿಂದನೆಂಬ ಮಂತ್ರ ಮಂಗಳಕರ ರಂಗಮಂತ್ರ ಗಂಗಾಜನಕನೇಂಬೀ ಮಂತ್ರ ಶೃಂಗಾರಾಬ್ಧಿ ಸೋಮಮಂತ್ರ ಮಾಂಗಿರೀಶನೆಂಬ ಮಂತ್ರ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತತ್ವಮತವೇ ಮತವು ಸಾತ್ತಿ ್ವಕರಿಗೆ ಪ ನಿತ್ಯ ನಿರ್ಮಲರಾದ ಮುಕ್ತಿಜೀವರಿಗೇ ಅ.ಪ ಶ್ರೀವನಿತೆ ಮತಿಗೆ ವಾರಿಜಸಂಭವಾ ಆವಂಗಜರಿಪು ಮನಕೆ ಅಹಂಕಾರದಲಿ ಯೀವಿಧ ದಶೇಂದ್ರಿಯಕೆ ಸೂರ್ಯಾದಿಗಳು ಎಂಬೋ 1 ಪಂಚಭೇದವನು ತರತಮಗಳನು ತಿಳಿಯುತಂ ವಂಚನಾದಿಗಳಿಂದ ರಹಿತರಾಗಿ ಪಂಚ ಸಂಸ್ಕಾರದಿಂ ಪರಿಶುದ್ಧರಾಗುತೆ ಪ್ರ- ಪಂಚವನು ದಾಟಿರುವ ಪರಮ ಭಕ್ತರಿಗೆ 2 ವನ್ನು ಒಂದೇ ಬಗೆಯ ಗೈದು ಮುದದಿ ಪನ್ನಗಾದ್ರಿನಿವಾಸ ಗುರುರಾಮ ವಿಠಲನ ಅ- ಹರ್ನಿಶಿಯು ಬಿಡದೆ ಪೂಜಿಸುವ ಸುಜನರಿಗೆ 3
--------------
ಗುರುರಾಮವಿಠಲ
ತತ್ವಸುವಾಲಿಗಳು ಓಂಕಾರ ಪ್ರತಿಪಾದ್ಯ ಶ್ರೀಕಾಂತನೇ ನಿನ್ನ ಭವ ಭಂಗವ ಗೈಸಿ ಶುಭಾಂಗನೆ ಕಾಯಯ್ಯ ಶ್ರೀರಂಗ 1 ಕಾಲತÀ್ರಯಕೃತ ವಿಕಾರವಿಲ್ಲದೆ ನೀನೆ ಮೂಲರೂಪನೆ ಬಹು ರೂಪ-ಬಹುರೂಪ ಸ್ವಗತಭೇದ ವಿವರ್ಜಿಕನೆ ಸಲಹಯ್ಯ 2 ಆವಕಾಲಕು ನೀನೆ ಚತುರ ರೂಪದೊಳಿದ್ದು ಜೀವ ನಿಯಾಮನು ನೀನಾಗಿ-ನೀನಾಗಿ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ3 ಶುಭ ವಿಷಯಂಗಳಾ ಮಾಡಿ ಉಣಿಸುವೆ 4 ವಿಶ್ವದಲಿ ವ್ಯಾಪಿಸಿಹೆ ವಿಶ್ವನಂಬೋರು ನಿನ್ನ ನಾಶರಹಿತನೆಂದೂ ನರನೆಂದೂ-ನರನೆಂದೂ ನಿನ್ನ ವೈಶ್ವಾನರನು ಎಂದು ಪೇಳ್ವಾರೊ 5 ಹರಿ ನಿನ್ನ ವಿಶ್ವನೆಂದು ಉಪಾಸನೆಯನು ಮಾಡಿ ಹೇರಂಬ ನಿನ್ನ ಒಲಿಸಿದಾ-ಒಲಿಸಿದಾ ಗಜವಕ್ತ್ರನಾಗಿ ನಿನ್ನ ಸ್ತುತಿಪಾನೋ 6 ದೇಹದೊಳು ಸ್ವಪನದಲಿ ನೀ ನೀಡಿ-ನೀ ನೀಡಿ ಜೀವರುಪಭೋಗಿಸುವ ಸಾರವನು ರಕ್ಷೀಪೆ 7 ತೈಜಸನೆ ವಾಸನಾಮಯವೆಲ್ಲ ತೋರೀಪೆ8 ತತ್ವಗಳ ವ್ಯಾಪಾರವೇ ವ್ಯಾಪಾರ9 ಸುಪ್ತಕಾಲದಿ ಜೀವ ಸ್ವರೂಪಕೆ ತಕ್ಕ ಕ್ಲುಪ್ತ ಅಜ್ಞಾನ ಮೊದಲಾದ-ಮೊದಲಾದ ಕಾಲವನನುಸರಿಸಿ ಜೀವನಿಗೆ ತನ್ನ ತಿಳಿಯಗೊಡದೆ 10 ಪ್ರಾಜ್ಞಮೂರುತಿ ನೀನೆ ಹೃದಯಸ್ಥಾನದೊಳಿದ್ದು ಅಜ್ಞಾನಿ ಜೀವನ ಕಾಲಾವ-ಕಾಲಾವ ನನುಸರಿಸಿ ಜೀವ ಸ್ವರೂಪಾನಂದವÀನು ನೀನೀವೆ11 ಸ್ವಪನ ಜಾಗ್ರತ ಜ್ಞಾನವಿನಿತಿಲ್ಲವೆಂದು ಕೂಡುವ ಜೀವ ಆನಂದ ಹಿಂದೆಂದೂ ಕಾಣನೊ12 ಘನ ಬಹಿ ಪ್ರಾಜ್ಞ ತೈಜಸಾಂತ ಪ್ರಾಜ್ಞ ಘನ ಪ್ರಾಜ್ಞ ಮೂರುತಿ-ಮೂರುತಿ ಗಳುಪಾಸನೆ ಮಾಳ್ವ ಬುಧರೇನು ಧನ್ಯರೊ 13 ನಾಗಿ ನೀ ಕೊಡುತಿರುವೆ ಮುಕ್ತರಿಗೆ ಆನಂದ 14 ಮುಕ್ತರಿಗೆ ದೃಷ್ಟನೋ ಅದೃಷ್ಟನೋ ಅ- ಗುರುಪ್ರಾಣನನುಗ್ರಹದಿ ಲಭ್ಯನಹುದಯ್ಯಾ ಹೇ ಜೀಯ 15 ಕಣ್ಮನ ಹೃದಯ ತ್ರಿಧಾಮಗಳಲ್ಲಿ ಇದ್ದು ಉಣಿಸೂವೇ ಜೀವರಿಗೆ ಫಲಭೋಗ-ಫಲಭೋಗವು ವಿಶ್ವತೈಜಸ ಪ್ರಾಜ್ಞ ಸ್ಥಿತಿಯೊಳು 16 ಸರ್ವರೂಪವು ಪೂರ್ಣ ಸರ್ವಗುಣ ಸಂಪೂರ್ಣ ಸರ್ವೋತ್ಪಾದಕ ಸುಖರೂಪಿ-ಸುಖರೂಪಿ ಸರ್ವಲೋಕ ಜೀವರೊಳಿದ್ದು ನಿರ್ಲಿಪ್ತಾ 17 ವರ್ಣತ್ರಯಯುತ ಓಂಕಾರದೊಳಾದ್ಯವರ್ಣ ವಿಶ್ವ ನೀನೆ-ವಿಶ್ವನು ನೀನೆ ಉಕಾರವೇ ತೈಜಸನು ಮಕಾರ ವಾಚ್ಯನೇ ಶ್ರೀಪ್ರಾಜ್ಞ 18 ನಾದದೊಳು ನೀ ವಾಚ್ಯ ತುರ್ಯರೆಂಬೋರು ನಿನ್ನ ಸದನವಾಗಿಹುದೈ ಶಿರಸ್ಥಾನ-ಶಿರಸ್ಥಾನ ನಾಶಿಕಾಗ್ರದಿ ಊಧ್ರ್ವ ದ್ವಾದಶಾಂಗುಲದಲ್ಲಿ ನೆಲೆಸಿರ್ಪೆ 19 ತೈಜಸನೊಡಗೂಡಿ ವಾಸನಾ-ವಾಸನಾಮಯ ಕಳೆವ ಅಜ್ಞಾನಿ ಜೀವನನ್ನಾಡಿಸುವೆ ಶ್ರೀಪ್ರಾಜ್ಞ 20 ಸರ್ವಶಕ್ತನು ನೀನೆ ಸರ್ವಕತರ್Àನು ನೀನೆ ಸವೋತ್ತಮನು ನೀನೆ ಸರ್ವಜ್ಞ-ಸರ್ವಜ್ಞ ಪೂರ್ಣಪ್ರಜ್ಞಾಂತರ್ಯಾಮಿ ಸಲಹಯೈ21 ಪಲವಿಲ್ಲ ವಾಸುದೇವನೆ ನಿನ್ನ ದಯ ಬೇಕೊ 22 ನೀ ಸುಮ್ಮನಿರದೆ ಎನ್ನನೂ-ಎನ್ನನು ಪ್ರೇರಿಸುವೆ ಲೇಸುಮನ ನಿನ್ನಲ್ಲಿ ನೆಲೆಸಲೋ 23 ಕಂಡಕಂಡಲ್ಲಿ ನಾ ಉಂಡುಂಡು ಓಡಾಡಿ ಧಾಂಡಿಗನಾಗಿ ಬೆಳೆದೆನೊ-ಬೆಳೆದೆನೊ ಪುಂಡರೀಕಾಕ್ಷ ನಿನ್ನ ಮರೆತೆನೋ24 ಅವಾವ ಕಾಲದೊಳು ನೀನಿದ್ದು ಉಣಿಸುವೆ ಜೀವಕೃತ ಕರ್ಮಫಲಗಳ-ಫಲಗಳ ಶ್ರೀ ವೇಂಕಟೇಶ ನೀನಿತ್ತು ಸಲಹೂವೇ 25 ವಂದನೆಯು ಒಂದೆ ಮನದಿಂದೆ-ಮನದಲಿ ನಿನ್ನ ಪಾದಾರವಿಂದವ ತೋರಯ್ಯ26 ಬಂಧುಗಳು ಹಿತರೆನ್ನೆ ಬಂಧಕರಾಗಿಹರು ಬಂಧನಕೆ ನಾ ಇನ್ನು ಸಿಲುಕಿದೆ 27 ಘನವಾಗಿ ತನು ಬೆಳೆಸಿ ಹಿತದಿಂದ-ಹಿತದಿಂದ ಮುಂದೆ ಪರಗತಿಯ ಕಾಣುವುದೆಂತೊ ಗೋವಿಂದ28 ವಿತ್ತಾಪಹಾರಕರು ಹೃತ್ತಾಪಕಳೆವರೆ ಉತ್ತಮಗತಿಯ ತೋರಿಸು29 ಹರಿಕಥಾಪುರಾಣಶ್ರವಣ ನಿತ್ಯದೀ ಮಾಡೀ ಪರಿಯಿಂದ ನಿಜತತ್ವವರಿಯಾದೆ-ಅರಿಯಾದೆ ಬರಿದೇ ವಿಪರೀತ ಜ್ಞಾನಕೆ ವಶನಾದೆ30 ಮದ್ಯ ತುಂಬಿದ ಭಾಂಡ ಗದ್ಗುಗೆಯ ಮೇಲಿಟ್ಟು ಶ್ರಧ್ದೆಯಿಂದಲಿ ಅದನ ಪೂಜಿಸೆ-ಪೂಜಿಸೆ ಪೂತÀ ದುರ್ಗಂಧ ಫಲವದು ಬಿಟ್ಟೀತೆ 31 ಮಂದಹಾಸದಿ ಜನರ ಸಂದೋಹದಲಿ ಕುಳಿತು ನಿಂದೆ ಮಾತುಗಳಾಡಿ ಮದತುಂಬೀ-ಮದತುಂಬಿಬಿದಾ ದುರ್ಮ ದಾಂಧರಿಗೆ ಗತಿಯು ಮುಂದೆ ಇನ್ನೆಂತೊ32 ಕಂಡಕಂಡವರಲ್ಲಿ ಕೊಂಡೆ ಮಾತುಗಳಾಡಿ ಪುಂಡರೀಕಾಕ್ಷ ನಿನ್ನ ಸ್ಮರಿಸಾದೆ-ಸ್ಮರಿಸದಲೆ ಪರದಿ ಯಮದಂಡಕ್ಕೆ ಗುರಿಯಾದೆ33 ಹಿಂದೆ ಮಾಡಿದ ಪುಣ್ಯದಿಂದ ಇಂದಿನ ಭಾಗ್ಯ ವೆಂದು ತಿಳಿದು ಮುಂದೆ ನಡೆಯಾದೆ-ನಡೆಯಾದೆ ತಿಳಿಗೇಡಿ ಬುದ್ಧಿಯಿಂದ ಕುಂದುಪೊಂದುವೆ 34 ಬಾಯಿಮಾತಲ್ಲ ಶ್ರೀ ತೋಯಜಾಕ್ಷನ ಭಕ್ತ- ರಾಯತನ ತಿಳಿವುದು ಶ್ರಮಸಾಧ್ಯ-ಶ್ರಮಸಾಧ್ಯ ವನು ಸದುಪಾಯದಿಂದ ತಿಳಿದು ನಲಿದಾಡೊ 35 ನಿಂದಕರ ನುಡಿಯಿಂದ ಹಿಂದೆ ಮಾಡಿದ ಪಾಪ ಒಂದೊಂದು ಪರಿಯಲ್ಲಿ ಪರಿಹಾರ-ಪರಿಹಾರವಾಗಿ ನಿಂದಕರು ಬಂಧನಕೆ ಬೀಳ್ವಾರೋ 36 ಸ್ಮøತಿಯುಕ್ತಿಯನೆ ಬಿಟ್ಟು ಯುಕ್ತಿಮಾತುಗಳಿಂದ ಹೊತ್ತು ಕಳೆಯುತ ಉನ್ಮತ್ತನೆನಿಸಿ-ಉನ್ಮತ್ತನೆನಿಸಿದವ ಇ- ನ್ನೆತ್ತÀ್ತ ಭವಶರಧಿಯ ದಾಟÀುವ 37 ಅರೆಘಳಿಗೆ ಕಳೆದುದಿಹ ನರಜನ್ಮ-ನರಜನ್ಮ ಬಂದುದು ನರಕಯಾತನೆಗಲ್ಲದಿನ್ನಿಲ್ಲ 38 ಪರಿಯಂತ ಉದರಭರಣಕಾಗಿ ಉದಧಿಶಯನ ನಾ ನಿನ್ನ ಭಜಿಸಾದೆ-ಭಜಿಸಾದೆ ಮದದಿಂದ ಬುಧಜನರ ನಿಂದೆಯ ಮಾಡೀದೆ39 ಇನ್ನಲ್ಲ ಪರಗತಿಯ ಸಾಧನ-ಸಾಧನವು ತನ್ನೊಳು ತÀನ್ನಿರವರಿತು ಸುಮ್ಮನಿರುವುದು ಅದು ನಿಧಾನ40 ಭಿನ್ನಧರ್ಮಂಗಳ ಗ್ರಹಿಸಾದೆ-ಗ್ರಹಿಸಾದೆ ನೀನೆಣಿಸಿದೆ ತನ್ನಗುಣಧರ್ಮದಂತನ್ಯರಿಹನೇನೊ 41 ಕಾಯವೇ ತಾನೆಂದು ಮಾಯಕೆ ಒಳಗಾಗಿ ಕಾಯಯಾತನೆಗೊಂಡು ನೋಯುವಾ 42 ವಚನ ವಚನವು ಸರ್ವ ಉಚಿತ ದೇಹದ ಕಾರ್ಯ ನಿಚಯದೊಳು ಹರಿ ಪ್ರಚುರನಾಗಿ-ಪ್ರಚುರನಾಗಿ ಕಾಯಕುಪಚಯವಿತ್ತು ಸಲಹೂವ 43 ದೇಹ ಕಾಯದ ಕಾರ್ಯಪ್ರಕ್ರಿಯವ ತಿಳಿಯಾದೆ ಮಾಯೆಗೊಳಗಾಗದಿರು ಹೇ ಮಾನವಾ-ಮಾನವನೆ ತಿ- ಳಿಯೊ ಮಾಯಾರಮಣನ ಬಿಂಬಕ್ರಿಯವಾ44 ಅನ್ಯರೊಳು ನೀ ಹೋರಾಡಬಲ್ಲೆಯ-ಬಲ್ಲೆಯಾ ನಿನ್ನ ವೈರಿಗಳ ಜಯಿಸಲರಿಯದ ಖೂಳ ರಣಹೇಡಿ 45 ಕೊಳೆತು ನಾರುವ ದೇಹದೊಳಗಿರುವ ಹುಳುಕುಗಳ ಕೊಳೆಯ ಕಳೆಯದ ಮನುಜ ನೀನೆಂತೊ-ನೀನೆಂತೊ ಕೊಳೆತÀ ಸಗಣಿಯೊಳಗಿಹ ಹುಳುವೆ ನಿನ್ನ ಗತಿಯೆಂತೊ46 ಆದದ್ದು ಆಯಿತು ಯತ್ನ ತಪ್ಪಿತು ಎಂದು ಹೆದ್ದಾರಿ ಹಿಡಿದು ಪರಮಾರ್ಥ-ಪರಮಾರ್ಥವ ಬುದ್ಧಿ ತಿದ್ದಿಕೊಳ್ಳಲು ಮುಂದೆ ಅನುವಾಗೊ47 ತತ್ತ ್ವದೇವತೆಗಳು ತತ್ತತ್ವಕಾರ್ಯಜಿ- ವೋತ್ತಮನಾಜ್ಞೆಯಿಂ ತಾವ್ ಗೈವರೊ-ತಾವ್‍ಗÉೈ ಯುತ್ತಲಿರೆ ನಾನೆತ್ತ ಮೃತ್ತಿಕಾಪ್ರತಿಮೆಯೋ48 ಒಂದೊಂದು ರೀತಿಯಿಂ ಚೆಂದಾಗಿ ಯೋಚಿಸು ಮಂದಮತಿಯು ನೀನು ಹಿಂದೆಂತೂ-ಹಿಂದೇನು ವಂದನೆಯೊಂದಲ್ಲದಿನ್ನಿಲ್ಲ49 ಡಾಂಭಿಕತನ ಬಿಟ್ಟು ಡಿಂಬದೊಳು ಸರ್ವದಾ ಅಂಬುಜನಾಭನೇ ಇಂಬಾಗಿ-ಇಂಬಾಗಿ ಸರ್ವತ್ರ ತುಂಬಿಕೊಂಡಿಹನೆಂದು ನಲಿದಾಡೋ 50 ತುಷ್ಟಿಯಾಗಿರು ನೀನು ಕೊಟ್ಟಷ್ಟು ಲಾಭಕ್ಕೆ ದುಷ್ಟವಿಷಯಗಳಿಗೆ ಎರಗಾದೆ-ಎರಗಾದೆ ಇರಲು ಸಂ- ತುಷ್ಟ ನಾಗುವನಯ್ಯ ಶ್ರೀಕೃಷ್ಣ51 ಕಾಯ ನಿನ್ನದು ಅಲ್ಲ ಮನವು ಅಧೀನವಲ್ಲ ಹೇಯವಿಲ್ಲದೆ ಮಾಯಕೊಳಗಾಗಿ ಮರುಳಾಗದಲೆ-ಮರುಳಾಗದಲೆ ಮಾಯಾರಮಣನ್ನ ನೆನೆಯೊ ನಿರ್ಭಯದಿಂದ 52 ಹಲವು ಶಾಸ್ತ್ರವ ನೋಡಿ ತಲೆಹರಟೆಯ ಬಿಟ್ಟು ಅಲವಬೋಧರ ತತ್ತ ್ವಸುಧೆಯನ್ನು- ಸುಧೆಯನ್ನು ಸವಿದು ನಿ-
--------------
ಉರಗಾದ್ರಿವಾಸವಿಠಲದಾಸರು
ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆ |ನಂದ ಕೊಡು ಈ ಭಕ್ತಗೆ ||ಪೊಂದಿಕೊಂಡಿಹ ನಿನ್ನನೆಂದು ನಾ ಪ್ರಾರ್ಥಿಸುವೆ ಮಂದರೋದ್ಧರ ಮುಕುಂದಾ | ನಂದಾ ಪ ವೈರಿ ನಿನ್ನವರಡಿಗೆ ನಡಿಯೆ ಪದವನುಕೂಲವಾಗಿರಲೀ ಬರಲಿ1 ಇವನ ಕವನಾ ಕೇಳಿ ಹರುಷಯುತರಾಗಿ ಸತ್ಕವಿಗಳೂ ತಲಿದೂಗಲಿ |ಪವನ ಮತದಲಿ ಪೇಳಿದಂತೆ ಅದನನುಸರಿಸಿ ಕವಿತೆಯು ಬಂದೊದಗಲಿ ||ನವರಾಗಗಳಿಂದೊಪ್ಪಿ ಲಘು ದೀರ್ಘ ಮೊದಲು ಮರ್ಮವ ತಿಳಿದು ಪೇಳುತಿರಲಿ |ಭುವನದೊಳಗುಳ್ಳ ಸುಜ್ಜನರು ಶೋಧಿಸಿ ಆಶುಕವಿಯೆಂದು ಕರೆಯುತಿರಲಿ | ಮೆರೆಯಲಿ || ಚಿರಕಾಲ ಬಾಳಿ ಬಹು ಕೀರ್ತಿಯುತನಾಗಿ ಈ ಧರಿಯೊಳಗೆ ಸುಖಿಸುತಿರಲಿಪರಮ ಭಕುತಿಯು ಪೆಚ್ಚಿ ಸೋತ್ತುಮರ ಪದಗಳಿಗೆ ಎರಗಿ ಕರುಣವ ಪಡೆಯಲಿ ||ಮರೆಯದಲೆ ಇಹಪರದಿ ಸುಖಗಳನು ಕೊಟ್ಟು ಶ್ರೀ ಹರಿಯೆ ಪೊರೆಯಂದಾಡಲಿ |ಮರುತಾಂತರ್ಯಾಮಿ ಗುರು ಪ್ರಾಣೇಶ ವಿಠಲನೆ ಶರಣ ಜನ ಕಾಮಧೇನೂ ನೀನು 3
--------------
ಗುರುಪ್ರಾಣೇಶವಿಠಲರು
ತಂದೇ ಕಮಲಾಪತಿಯೇ ಕಂದನ ಬಂಧನವಳಿದ ಹರಿಯೇ ಪ ನಂದನ ಕಂದ ಗೋವಿಂದ ಮುರಾರೇ ಅ.ಪ ಜವನ ಬಾಧೆಗೆ ಪಕ್ಕಾದೆ ನಿನ್ನ ಚರಣವೆ ಗತಿಯೆಂದು ಬಂದೆ 1 ಶರಣರು ಕರೆಯಲು ಬರುವೆ ರಂಗ ತ್ವರಿತದಿ ಪಾಪವ ಕಳೆವೆ ಪರಮದಯಾಕರ ಮಣಿವೆ ಎನ್ನ ಮೊರೆಯ ಲಾಲಿಸದಿರೆ ತರವೆ 2 ಮಂಗಳದಾಯಕ ನೀನೆ | ತ್ರಿಲೋಕಂಗಳ ಸಲಹುವ ನೀನೇ ಮಾಂಗಿರಿರಂಗನು ನೀನೇ | ನಿನ್ನ ದಾಸರ ದಾಸನು ನಾನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತನು ಸದನದಿ ಪೀಠವಯ್ಯ | ಭಾನು ಕುಲೋದ್ಧೀಪಕ ಪ ಅನಿಲನೆ ಜೀವನಾ ಮಹಾ | ಮಂಚನವು ರಮಾ ಶಯ್ಯಕೆ ಬಾ ಅ.ಪ. ಸುನಾಮ ಮೂರ್ತಿ ಕರವ ಪಾದ 1 ಮಧು ವಿರೋಧಿ ವೇದಾಂತ | ವೇದ್ಯ ಸುಧಾ ಕಲಶ ಪಾಣಿವಿಧಿ ಭವಾದಿ ವಂದ್ಯ ಚರಣ | ಅದುಭುತ ಚರ್ಯ ಹರಿಯೆಪದದಿ ಸುರನದಿಯ ಪಡೆದವ | ನದಿಸುತ ಗೊಲಿದ ಮಹಿಮಯದುಕುಲೋತ್ತಮ ಶ್ರೀ ಕೃಷ್ಣನೇ ಹದುಳದಲಿ ಪೊರೆ ಬಾ 2 ತರಳ ದ್ರೌಪದಿಗೊಲಿದವನೆ | ಶೌರೀ ವರ ಅಹಲ್ಯಾ ವರದಗುರು ಮಡದಿ ತಾರಾವರದ | ಶರಣರ್ಗೆ ಸುರಧೇನು ||ಪರಮ ಪಾತಕಿಯಾದವರ | ಪೊರೆದ ಮಹಾದಯವಂತ ಪರಿಸರಾಂತರ್ಗತನೆ ಪೊರೆಯೊ | ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ತನ್ನ ಕಷ್ಟದಿ ತನಗೆ ದೊರಕುವುದು ಹಾಗ ಉನ್ನಂತ ಭಾಗ್ಯಗಳು ಹರಿಯ ವಿನಿಯೋಗ ಪ ಕಟ್ಟಿಗೆಯ ಹೊರೆ ತಂದು ಪಟ್ಟಣದೊಳಿಳುಹಿದರು ಉಟ್ಟ ಬಹಿರ್ವಾಸವನು ಬಿಗಿದಿಟ್ಟರು ಮೊಟ್ಟೆಯನು ಕೊಂಡೊಯ್ದು ಇಟ್ಟದನು ಮಾರಿದರು ಹೊಟ್ಟೆ ತುಂಬಿಸಿ ಕಡೆಗೆ ಕಟ್ಟುವನು ಹಾಗ 1 ಪದಪದ್ಯಗಳ ಹೇಳಿ ಕುಣಿದಾಡಲು ಹದಿನಾರನೆಯ ವಿಧಿಯ ಸದನದೊಳು ಸವಿದುಣಲು ಕದನ ಕರ್ಕಶನಾಗಿ ಕಡಿದು ಬರೆ ಹಾಗ 2 ಸೂಜಿ ನೂಲನು ಕೊಂಡು ಬಾಜಾರದೊಳು ಕುಳಿತು ಸೋಜಿಗದ ಹೊಲಿಗೆಯನು ಮಾಡಿಕೊಡಲು ಕಾಜು ಬಳೆಗಳ ಹೊತ್ತು ದಣಿದು ಮಾರಿದರವಗೆ ರೋಜು ಉಳಿವುದು ಅಸ್ತಮಯಕೆ ಒಂದ್ಹಾಗ 3 ಭಾಗ್ಯವುಳ್ಳವನನ್ನು ಬಾಧಿಸಲು ಅವ ತನಗೆ ಕಾಗೆ ಕರಿದೆನಿಸಿ ತಾ ಕಸ್ತೂರಿ ಹೋಲುವುದೆ ಮೊಗೆಮೊಗೆ ಮಲ್ಲಿಗೆಯು ಪರಿಮಳಿಪುದೆ 4 ಹರಿಯ ಸೇವೆ ಮಾಡೆ ಇಹಪರದ ಸೌಖ್ಯಗಳು ಹರನ ಸೇವೆಯ ಮಾಡೆ ಪರಮ ಪದವು ಸಿರಿಯರಸ ವರಾಹತಿಮ್ಮಪ್ಪ ನಿನ್ನಡಿಯ ಕರುಣರಸ ಹೊರತಾಗಿ ಸಿರಿಯು ಸೇರುವಳೆ 5
--------------
ವರಹತಿಮ್ಮಪ್ಪ