ಒಟ್ಟು 1057 ಕಡೆಗಳಲ್ಲಿ , 88 ದಾಸರು , 888 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯತು ಹನುಮಂತ ಪವಿತ ಸಿಖ ಸಹಜಾತಜಯತು ಕಪಿರಾಜ ಯುವರಾಜ ಯತಿರಾಜ ಜಯತು ಪ.ಸುರರಿಗುತ್ತಮ ಜಗದಾಭರಣ ಶಿರೋಮಣಿ ಜಯತುಪರಮಅದ್ಭುತಚರಿತ ಸುವಟು ಜಯತುಧರಜೆಶೋಧಕ ನಿಶಾಚರಪುರದಹಕ ಜಯತುಜಯತು ವೈರಾಗಿ ಮಹಭೋಗಿ ಶುಭಯೋಗಿ ಜಯತು 1ಸುರರಿಪುಮಥÀನ ರಾಮಕಾರ್ಯಧುರಂಧರ ಜಯತುಚಿರಪ್ಲವಗ ಭವರೋಗಭೇಷಜ ಜಯತುಕರಿರಕರ್ಣ ದಶಮುಖಾಂಗ ಗಿರಿವರಕುಲಿಶ ಜಯತುಜಯತು ಅಕ್ಷಹರ್ತಾ ಕ್ರತುಕರ್ತಸುಖತೀರ್ಥಜಯತು2ತ್ರಿಕೋಟಿ ಪವನಾಖ್ಯರೂಪ ಪ್ರಕಟಾಪ್ರಕಟ ಜಯತುಅಕಳಂಕಾಮಿತರೂಪ ಮುಖ್ಯೇಶ ಜಯತುಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತುಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು 3
--------------
ಪ್ರಸನ್ನವೆಂಕಟದಾಸರು
ಜಯ ಶ್ರೀಧರಾರಮಣ ಜಯ ಕೌಸ್ತುಭಾಭರಣ ಪಜಯ ದುರಿತನಿಧಿತರಣಜಯ ಪದ್ಮಚರಣಾ ಜಯಜಯಾ ಅ.ಪಜಯಪುಂಡರೀಕಾಕ್ಷಜಯ ತ್ರಿಭುವನಾಧ್ಯಕ್ಷಜಯ ಪಾಂಡುಸುತ ಪಕ್ಷ ಜಯ ಜಗದ್ರಕ್ಷಾ ಜಯಜಯಾ 1ಜಯ ಲೋಕಭಯನಾಶ ಜಯ ದಳಿತಭವಪಾಶಜಯ ವೇಂಕಟಾದ್ರೀಶ ಜಯಸುಪ್ರಕಾಶ ಜಯಜಯಾ 2ಜಯ ತುಲಸೀದಳದಾಮಜಯ ಶೇಷಗಿರಿಧಾಮಜಯದೈತ್ಯರಿಪುಭೀಮ ಜಯಕೃಷ್ಣರಾಮಾ ಜಯಜಯಾ 3ಜಯ ಕೋಟಿರವಿಭಾಸ ಜಯ ಸಾತ್ವಿಕೋಲ್ಲಾಸಜಯ ಜಯ ಭವದ್ದಾಸ ಜಯ ಶ್ರೀನಿವಾಸಾ ಜಯ ಜಯಾ4
--------------
ತುಳಸೀರಾಮದಾಸರು
ಜಯಮಂಗಳಂನಿತ್ಯ ಶುಭಮಂಗಳಂ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಯತುಂಗಲಕ್ಷ್ಮೀಪತಿ ನರಸಿಂಹಗೆಪ.ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆಮಂದರೋದ್ಧಾರ ಮಧುಸೂದನನಿಗೆ ||ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀ -ಇಂದಿರಾ ರಮಣ ಸರ್ವೋತ್ತಮನಿಗೆ 1ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆಸರಸಿಜೋದ್ಭವ - ಭವವಂದ್ಯ ಹರಿಗೆ ||ಗಿರಿಯರಸು ಕಾವೇರಿಪುರದ ರಂಗಯ್ಯಗೆಗಿರಿರಾಜಪತಿವಂದ್ಯ ಸುರರ ನಿಧಿಗೆ 2ಅಂಬರೀಷನ ಶಾಪ ಅಪಹರಿಸಿದವನಿಗೆತುಂಬುರ ನಾರದ ಮುನಿವಂದ್ಯಗೆ ||ಕಂಬುಕಂಧರಪುರಂದರ ವಿಠಲರಾಯಗೆಅಂಬುಜನಾಭಗೆ ಅಜನಪಿತಗೆ 3
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂ ||ಪ.ಶ್ರೀ ವತ್ಸಲಾಂಛನಗೆ ಕ್ಷೀರಾಬ್ಧಿ ವಾಸಗೆ |ಗೋವರ್ಧನೋದ್ಧಾರ ಗೋವಿಂದಗೆ ||ಮಾವ ಕಂಸನ ಕೊಂದುಮಕರಕುಂಡಲ ಧರಿಸಿ |ಜೀವಾತ್ಮನಾದ ಚಿನ್ಮಯರೂಪಗೆ 1ಅಂಬುಧಿಯ ಶಯನಗೆ ಅಖಿಲ ಭೂತೇಶಗೆ |ತುಂಬುರ - ನಾರದ ಮುನಿವಂದ್ಯಗೆ ||ಎಂಭತ್ತನಾಲ್ಕು ಲಕ್ಷ ಯೋನಿಗಳ ರಾಶಿಯನು |ಗೊಂಬೆಯನು ಮಾಡಿ ಕುಣಿಸುವ ದೇವಗೆ 2ಕಂದರ್ಪನಯ್ಯನಿಗೆ ಕೋಟಿ ಲಾವಣ್ಯನಿಗೆಸುಂದರ ಮೂರುತಿಹರಿ ಸರ್ವೋತ್ತಮನಿಗೆ ||ಕಂದ ಪ್ರಹ್ಲಾದನ ಕಾಯ್ದ ದೇವನಿಗೆಅರ |............................................. 3ಪನ್ನಂಗಶಯನಗೆಪಾವನ್ನ ಚರಿತೆಗೆ |ಸನ್ನುತರಾದ ಸಜ್ಜನ ಪಾಲಿಗೆ ||ಎನ್ನೊಡೆಯ ಸಿರಿದೇವಿಯರಸು ಮುದ್ದುರಂಗಗೆ |ತನ್ನ ನಂಬಿದವರನು ಸಲಹುವವಗೆ 4ಕರಿರಾಜವರದಗೆ ಕರುಣಾಸಮುದ್ರಗೆ |ಗರುಡ ಗಮನನಿಗೆ ವೈಭವಹಾರಗೆ ||ವರಪುರಂದರವಿಠಲ ಕಂಬುಕಂದರನಿಗೆ |ಅರವಿಂದನಾಭನಿಗೆ ಅಜನ ಪಿತಗೆ 5
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂಪ.ಮಂಗಳ ಮಧು ಕೈಟಭಾಸುರ ಮರ್ದನಗೆಮಂಗಳಮದನ ಕೋಟಿ ಲಾವಣ್ಯಗೆ ||ಮಂಗಳ ಜಗದಂತರಂಗ ಕೃಪಾಂಗಗೆಮಂಗಳ ಯದುಕುಲೋತ್ತಮ ಸಾರ್ವಭೌಮಗೆ 1ಶ್ರೀವತ್ಸಲಾಂಛನಗೆ ಸಿರಿದೇವಿಯರಸಗೆಗೋವರ್ಧನೋದ್ಧಾರ ಗೋವಿಂದಗೆ ||ಮಾವ ಕಂಸನ ಕೊಂದಮಕರ ಕುಂಡಲಧರಭಾವಜನಯ್ಯ ಚಿನ್ಮಯ ಮೂರ್ತಿಗೆ 2ಅಂಬುಜನಾಭಗೆ ಅಖಿಳಲೋಕೇಶಗೆಶಂಭು -ಅಜ - ಸುರ - ಮುನಿವಂದ್ಯ ಹರಿಗೆ ||ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಬೊಂಬೆಯ ಮಾಡಿ ಕುಣಿಸುವ ದೇವಗೆ 3ಸಕಲಗುಣ ಪೂರ್ಣಗೆ ಸರ್ವಸ್ವಾತಂತ್ರ್ಯಗೆಅಕಳಂಕ ಆದಿನಿರ್ದೋಷ ಹರಿಗೆ ||ಭಕುತ ವತ್ಸಲನಿಗೆ ಭವರೋಗ ವೈದ್ಯಗೆನಿಖಿಳಜೀವದಯಾಪರಿಪೂರ್ಣಗೆ4ಪನ್ನಗಶಯನಗೆ ಪಾವನ ಮೂರ್ತಿಗೆಸನ್ನುತಾನಂತ ಸದ್ಗುಣ ಭರಿತಗೆ ||ಎನ್ನೊಡೆಯ ಪುರಂದರವಿಠಲ ರಾಯಗೆತನ್ನ ನಂಬಿದವರ ಸಲಹುವ ಮೂರ್ತಿಗೆ 5
--------------
ಪುರಂದರದಾಸರು
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀಚಪ್ಪರ ಶ್ರೀನಿವಾಸ ಪ.ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆದರ್ಪಕತಾತನೆ ತಾ ಸಜ್ಜನಪ್ರೀತ ಅ.ಪ.ಮಾಧವನಿನ್ನಯ ಮಹಿಮೆ ತಿಳಿಯದಪ-ರಾಧವ ಮಾಡಿದೆ ದಾರಿದ್ರ್ಯದಬಾಧೆಯಿಂದ ತವಪಾದದರುಶನದಗಾದಿಯ ಕಾಣದಾದೆ ನಾ ದ್ರೋಹಿಯಾದೆ 1ತ್ರಾಣವಿರುವಾಗಕಾಣಿಕೆಹಾಕಿದೆದೀನದಾರಿದ್ರ್ಯದ ಹೊತ್ತಿನಲಿಮೇಣದರಿಂದಲಿ ತೆಗೆದು ತೆಗೆದು ಪಂಚಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ 2ಮಂದವಾರದಿಕ್ಕೊಂದೂಟವ ಸತ್ತ್ವದಿಂದಿರುವಾಗ ನಾ ನೇಮಗೈದೆಮಂದಭಾಗ್ಯ ಜ್ವರದಿಂದ ಪೀಡಿತನಾದ-ರಿಂದೆರಡೂಟವನೂ ಮಾಡಿದೆ ನಾನು 3ಶನಿವಾರಕ್ಕೊಂದಾಣೆಕಾಣಿಕೆಹಾಕುತ್ತಮಿನುಗುವ ಡಬ್ಬಿಯ ನಾ ಮಾಡಿದೆಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದಹಣವೆಲ್ಲಗುಣನುಂಗಿತು ಪಾದಕೆ ಗೊತ್ತು4ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣಗುಡ್ಡೆಯ ಮೇಲಿರುವ ಮಹಾನುಭಾವ 5ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯುಮಂಡೆಯೊಳುರಿವುದು ಖಂಡಿತದಿಪುಂಡರೀಕಾಕ್ಷನೆ ಕರುಣಾಮೃತರಸಕುಂಡದೊಳ್ ಮೀಯಿಸಯ್ಯ ವೆಂಕಟರಾಯ 6ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆಕೆಡುಕು ಮಾಡುವುದೇನುಜಡಜನಾಭಕಡಲಶಯನ ಲಕ್ಷ್ಮೀನಾರಾಯಣ ನ-ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತಾರಕತಾರಕತಾರಕತಾರಕವೆಂಬತವನಿಧಿಯನು ತಪಿಸುತಲಿದೆ ನೋಡಾಪಮುಗಿಲಾಕಾರದಿ ಮೋಹರಿಸುತಲಿಹ ಮಿಂಚುಗಳನೆಭುಗಿಲು ಭುಗಿಲು ಎನಿಸುವ ಕಳೆಗಳಬುದು ಬದಗಳ ನೋಡ1ಥಳಕು ಥಳಕು ಥಳಥಳನೆಂದೆಂಬ ಥರಗಳನದ ನೋಡಬೆಳಕುಗಳಹ ಬಲು ಬೆಳಗನೆ ಬೆಳಗುವ ಭೇದಗಳನೆ ನೊಡ2ತೋರುತಡುಗುವ ತೋರು ಕಿಡಿಗಳ ಕೋಟಿಗಳನೆ ನೋಡಮೀರಿಯೆ ಮಿಣಿ ಮಿಣಿ ಮಿಣಿಕಿಪ ವಿಸರದ ಮಿಶ್ರಿಗಳನೆ ನೋಡ3ಝಣಝಣರೆಂಬ ಝಾಗಟೆ ಮೊಳಗಿನ ಝೇಂಕಾರವ ನೋಡಎಣಿಸಲು ಬಾರದ ಎಡೆದೆರಪಿಲ್ಲದ ಏಕಾರವ ನೋಡ4ಸಾಗರ ಸುಖವನು ಸವಿಸವಿದುಣ್ಣುವ ಸಾಕಾರವೇ ನೋಡಯೋಗಿಎನಿಪ ಚಿದಾನಂದನೊಲಿದ ಯೋಗಿಗೆ ಇದು ನೋಡ5
--------------
ಚಿದಾನಂದ ಅವಧೂತರು
ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲಚಾರುಯೋಗಿಯು ನೋಡಿಲಿದು ಚಲನೆ ಮನುಜರಿಗೆ ಸಲ್ಲದುಪಆರು ಚಕ್ರದ ಆರುನೆಲೆ ಮೂರು ಅವಸ್ಥೆಗಳ ಮೂರುಗಾಲಿಕುಂಡಲಿಎಂಬುದುಕೀಲುಚದುರಿನ ದಳಪಟ್ಟಿ ಮೇಲು1ಸಹಸ್ರಾರವೇ ಕೊನೆಯ ಸ್ಥಾನ ಸ್ವಾಮಿಯ ಸಿಂಹಾಸನಸೋಹಂ ಎಂದೆನಿಸುವ ಶಿಖರ ಸೊಗಸಿಂದಲಿಹುದು ಸುಪ್ರಕಾರ2ಸ್ಥಾನ ಸ್ಥಾನಕೆ ಒಂದು ಬೊಂಬೆ ಸಡಗರ ಏನೆಂಬೆಅನುರಾಗವೇ ಎಂಬ ಫಲವು ಆಶ್ಚರ್ಯ ತೇರಿನ ನಿಲುವು3ಹೇಷೆ ಎಂಬುವೆ ಕೋಟಿ ಚಂದ್ರ ಹೊಡೆವ ನಾದವೆ ವಾದ್ಯಸಾಂದ್ರಬಲುಹು ಆನಂದ ಸಲ್ಲಲಿ ಭಾಪು ಎನಲಿ ಸುಖದಲಿ4ಇಡಾಪಿಂಗಳ ಮಿಣಿಗಳಿಂದ ಎಳೆವುದು ಗುರುದಯದಿಂದಮೂಡಲಿಂದ ಪಶ್ಚಿಮಕ್ಕೆಗುರುಚಿದಾನಂದನ ಸ್ಥಾನಕ್ಕೆ5
--------------
ಚಿದಾನಂದ ಅವಧೂತರು
ದಾರೊ ನೀ ಚಿನ್ನ ದಾರೊಕಾರು ರಾತ್ರಿಯೊಳೆಮ್ಮಾಗಾರಕೆ ಬಂದೆ ಪ.ಇಕ್ಕಿದ ಕದಗಳಿಕ್ಕ್ಯಾವೊ ನಿದ್ರೆಉಕ್ಕೇರಿ ಕಣ್ಣು ಮುಚ್ಚ್ಯಾವೊ ನಮ್ಮತಕ್ಕೈಸಿ ಕೊಂಬುವೆ ನೀ ಕಳ್ಳ ಚಿಕ್ಕಮಕ್ಕಳಾಟವಿದಲ್ಲೊ ಚೆಲುವ 1ಆಗ ಗೋಪಾಲನಂತಿದ್ದೆ ನೀಬೇಗಚಟುಲರೂಪನಾದೆ ಮತ್ತೀಗೆಮ್ಮ ನಲ್ಲರಂತೈದೆ ಕೋಟಿಪೂಗಣೇರ ಹೋಲುತೈದೆ ನೀ ಹೌದೆ 2ಸಪ್ಪಳಿಲ್ಲದೆ ಕೂಡು ಕಾಣೊಕೇಳಿಬಪ್ಪರಿನ್ನಾರಾರು ಕಾಣೊ ಪ್ರಾಣಕಪ್ಪವ ನಿನಗಿತ್ತೆ ಇನ್ನು ಕಾಯೊಶ್ರೀಪ್ರಸನ್ವೆಂಕಟ ಜಾಣ ಪ್ರವೀಣ 3
--------------
ಪ್ರಸನ್ನವೆಂಕಟದಾಸರು
ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ ಪ.ಸಾಮಜಾರ್ಚಾರಿ ಶಿಕ್ಷ ಸ್ವಾಮಿಸಾಮಗಾನಪ್ರಿಯ ಸತ್ಪಕ್ಷಶ್ರೀ ಮಾವಧೂ ಮನೋರಮ ತ್ರಿಧಾಮ ಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ 1ರಾಕೇಂದುರವಿಕೋಟಿತೇಜ ಸ್ವಾಮಿನಾಕಪಾರ್ಚಿತ ಪದಾಂಬೋಜವ್ಯಾಕೀರ್ಣಾನೇಕಾಜಾಂಡಾಂಕಿತಾವ್ಯಾಕೃತಶ್ರೀಕಾರ ಸಾಕಾರ ಲೋಕೇಶ ಪೂಜ್ಯ 2ಅನಂತಗುಣ ಪರಿಪೂರ್ಣ ಸ್ವಾಮಿಆನತಜನ ಬುಧಭರ್ಣಧೇನುಗಿರಿನಾಥÀ ದಾನಿ ಪ್ರಸನ್ವೆಂಕಟಜ್ಞಾನಾನಂದ ನಿತ್ಯತೇ ನಮೋ ಕರುಣಿ 3
--------------
ಪ್ರಸನ್ನವೆಂಕಟದಾಸರು
ದೇವಿಯ ನೋಡಿರೊಪರದೇವಿಯ ನೋಡಿರೋಭಾವಿಸೆಅನುದಿನಹೃದಯದಿ ಬೆಳಗುವ ಕಳೆಯ ಚಿತ್ಪ್ರಭೆಯ ಪ್ರಭೆಯಪಎಲ್ಲರ ಕೈಯಲಿ ಪೂಜೆಯಕೊಂಬ ಗುಣಿಯ ರತ್ನದ ಗಣಿಯಒಲ್ಲೆನೆಂದರು ವರಗಳ ಕೊಡುವ ದಯಾಮಯಿಯ ಭಕ್ತ ಪ್ರಿಯೆಯಬೆಲ್ಲದಂದದಿ ಮಾತುಗಳಾಡುವ ಸುಧೆಯ ಸುಖ ಶಾರದೆಯಬಲ್ಲಿದಶತ್ರುಗಳಾಗಿಹ ರವರನು ಬಡಿವ ಕಡಿದುಡಿವ1ಬ್ರಹ್ಮ ವಿಷ್ಣುರುದ್ರಾದಿಗಳವರ ತಾಯಿ ಮಹಾಮಾಯಿಬೊಮ್ಮನು ಬರೆದಿಹ ಪ್ರಾರಬ್ಧವೆಲ್ಲವ ಸೆಳೆವ ಎಲ್ಲವ ಕಳೆವಚಿಮ್ಮಿ ಹಾಕುವಳು ಕಂಟಕಂಗಳ ಬಿಡಿಸಿಅಭಯಕೊಡಿಸಿತಮ್ಮವರೆಂದೇ ಭಕ್ತರ ಬದಿಯಲಿ ಇಹಳ ಮಹಾಮಹಿಮಳ2ಚಿತ್ಕಲಾತ್ಮ ಚಿದಾನಂದನೆಂಬ ವಿಭುವಾಮಹಾ ಪ್ರಭುವಹತ್ತಿರ ನಿಂತು ಬೆಳಗುತಲಿಹಳು ಕೋಟಿ ಸೂರ್ಯರ ಸಾಟಿಮತ್ತೇ ಮೀರಿಯೆ ಬ್ರಹ್ಮರಂದ್ರಕೆ ಸಾಗಿ ತಾ ವಾಸವಾಗಿನಿತ್ಯದಿ ಜ್ಯೋತಿರ್ಮಯವಾಗಿ ತೋರುವ ಸಖಿಯ ಬಗಳಾಮುಖಿಯ3
--------------
ಚಿದಾನಂದ ಅವಧೂತರು
ಧರೆಯದಾನವ ಬೇಡಿ ನೆಲವ ಮೂರಡಿ ಮಾಡಿಪರಶುವಿಡಿದು ಕ್ಷತ್ರಿಯರ ಸವರಿಚಿತ್ತಜಕೋಟಿಲಾವಣ್ಯ ಮುಪ್ಪುರದೊಳುಉತ್ತಮ ಸ್ತ್ರೀಯರ ವ್ರತವಳಿದೆಮತ್ತೆ ಕಲ್ಕಿಯಾದೆ ಮಲೆತರ ಮಡುಹಿದೆಉತ್ತಮ ಶ್ರೀರಾಮನೆಂದು ಸ್ತುತಿಸಿದೆನಲ್ಲದೆ.ಬತ್ತಲೆನಿಂತªನೆಂದೆನೆ ತೇಜಿಯನೇರಿಒತ್ತಿಬಾಹವನೆಂದೆನೆ ಬಾರಿಬಾರಿಗೆಸತ್ತುಹುಟ್ಟುವನೆಂದೆನೆಪುರಂದರವಿಠಲಹತ್ತವತಾರದ ಹರಿಯೆಂದೆನಲ್ಲದೆ
--------------
ಪುರಂದರದಾಸರು
ಧೂಪಾರತಿಯ ನೋಡುವ ಬನ್ನಿ ನಮ್ಮಗೋಪಾಲಕೃಷ್ಣನ ಪೂಜೆಯ ಸಮಯದಿ ಪ.ಅಗುರುಚಂದನ ಧೂಪ ಗುಗ್ಗುಳ ಸಾಮ್ರಾಣಿಮಘಮಘಿಸುವ ಧೂಪದಾರತಿಯು ||ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮಜಗನ್ನಾಥ ಕೃಷ್ಣನ ದೇವರ ಪೂಜೆಯ 1ಮದ್ದಳೆ ಜಾಂಗಟಿ ತಾಳ ತಮ್ಮಟೆಭೇರಿತದ್ಧಿಮಿ ಧಿಮಿಕೆಂಬ ನಾದಗಳು ||ಹೊದ್ದಿದಧವಳ ಶಂಖದ ಘೋಷಣಂಗಳಪದ್ಮನಾಭನ ದಿವ್ಯ ದೇವರ ಪೂಜೆಯ 2ಢಣ ಢಣ ಢಣರೆಂಬ ತಾಳ ದಂಡಿಗೆವೇಣುಢಣಕು ಧಿಮಿಕು ಎಂಬ ಮದ್ದಳೆಯು ||ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳಘನರಾಗದಿಂದಲಿ ಹಾಡುತ ಪಾಡುತ 3ಮುತ್ತು ಛತ್ರ ಚಾಮರ ಪತಾಕ ಧ್ವಜರತ್ನ ಕೆಚ್ಚಿದ ಪದಕ ಹಾರಗಳು ||ಮತ್ತೆ ಕೋಟಿಸೂರ್ಯ ಪ್ರಭೆಯ ಧಿಕ್ಕರಿಸುವಸತ್ಯಭಾಮೆ ರುಕ್ಮಿಣಿಯರರಸನ 4ಹರ ಬ್ರಹ್ಮಸುರಪತಿ ದೇವತೆ ಮೊದಲಾದಪರಮ ಪಾವನಮೂರ್ತಿ ಪುರುಷೋತ್ತಮನ ||ಪರದೈವತವೆಂದು ಬಿರುದು ಪೊಗಳಿಸಿಕೊಂಬಪುರಂದರವಿಠಲನ ಪೂಜೆಯ ಕಾಲದ 5
--------------
ಪುರಂದರದಾಸರು
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-ರಂಭಸೂತ್ರಳೆ ಇಂಬುದೋರಿನ್ನು ಪ.ಅಂಬುಜಾಂಬಕಿ ಶುಂಭಮರ್ದಿನಿಕಂಬುಗ್ರೀವೆಹೇರಂಬಜನನಿಶೋ-ಣಾಂಬರಾವೃತೆ ಶಂಭುಪ್ರಿಯೆ ದಯಾ-ಲಂಬೆ ಸುರನಿಕುರುಂಬಸನ್ನುತೆ ಅ.ಪ.ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-ಗಾರೆ ರಿಪುಸಂಹಾರೆ ತುಂಬುರುನಾರದಾದಿಮುನೀಂದ್ರ ನುತಚರ-ಣಾರವಿಂದೆ ಮಯೂರಗಾಮಿನಿಸೂರಿಜನ ಸುಮನೋರಥಪ್ರದೆ 1ಮೂಲರೂಪೆ ದಯಾಲವಾಲೆವಿಶಾಲಸುಗುಣಯುತೆ ಮುನಿಜನ-ಲೋಲತರುಣಮರಾಳೆ ಸಚ್ಚರಿತೆ ನವಮಣಿಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-ಬಾಲೆ ನೀಲತಮಾಲವರ್ಣೆ ಕ-ರಾಳಸುರಗಿ ಕಪಾಲಧರೆ ಸುಜ-ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ 2ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-ವಾಕರಾಭೆಪರಾಕುಶರಣಜನೈಕಹಿತದಾತೆ ಸುರನರ-ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-ವಾಕುಕಾಯದಿಂದ ಗೈದಾನೇಕ ದುರಿತವ ದೂರಗೈದು ರ-ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-ಲ್ಲಾಸೆ ಯೋಗೀಶಾಶಯಸ್ಥಿತೆವಾಸವಾರ್ಚಿತೆ ಶ್ರೀಸರಸ್ವತಿದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ 4ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-ವಾಮಭಾಗಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯಶ್ರೀಮಹಾಲಕ್ಷ್ಮಿ ನಾರಾಯಣಿರಾಮನಾಮಾಸಕ್ತೆ ಕವಿಜನ-ಸ್ತೋಮಕೃತ ಪರಿಣಾಮೆ ಭೌಮೆ ಪುಲೋಮಜಾರ್ಚಿತೆಸೋಮಶೇಖರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಂಬಿರೈ ಕರುಣಾಂಬುಧಿ ಕೋಮಲಕಂಬುಕಂಧರಹರಿಯಪ.ಯೋಗಿಮನಮುದ ರಾಗ ಮೂರುತಿಯ ದೊರೆಯಪಾಲಿತ ಕೌಂತೇಯಭಾಗವತತನಕಾಗಿ ತಾ ದಯವಗೈದ ಭರದಿಂದ ತೋರ್ವಯೋಗ ಮಾಯಾಧೀಶ ಸತ್ಸಕಲಾಗಮಾರ್ಚಿತಭೋಗಿಶಯನಸ-ರಾಗಕಪ್ಪನಿಯೋಗಿಸುವರೆ ಮಹಾಗಿರಿಯಿಂದಲಿ ಸಾಗಿ ಬಂದನ 1ಮಂದವಾರದಿ ಮಿಂದು ಮಡಿಗಳನು ಉಟ್ಟು ಕಾಣಿಕೆಯನಿಟ್ಟುಮಂದರಾಧರ ನೀನೆ ಗತಿಯೆಂದು ಬಂದು ಕೈಮುಗಿದುನಿಂದುವಂದಿಸುತ ಬಲ ಬಂದು ಚರಣದ್ವಂದ್ವಸೇವೆಯ ಕುಂದದರ್ಚಿಸಿದಂದುಗವ ಬಿಡಿಸೆಂದು ಪೇಳ್ದರೆ ಮಂದಹಾಸಾನಂದವೀವನು 2ಕಾಸುವೀಸದ ಬಡ್ಡಿ ಭಾಷೆಯನು ಬಿಡನು ನಮ್ಮೊಡೆಯನುದೇಶದೇಶದಿ ಕಷ್ಟ ತರಿಸುವನು ತಾನು ಭಕ್ತರ ಕಾಯುವನುಘಾಸಿಯಾಗದೆ ಧನಿಯ ಹಣವನುಸೂಸಿ ಕರುಣಾರಾಸ ರಾಜ್ಯದವಾಸವಾಗಿಹ ಒಕ್ಕಲಿಗರೆಂಬೀ ಸುಮನದಿಂ ಕೇಶವನ ಪದವ 3ಕಷ್ಟವಿಲ್ಲದೆ ಇಷ್ಟ ದೊರಕುವದು ನೆನೆದುಸುಖದಿಂ ಬಾಳುವದುದೃಷ್ಟಿಯಿಂದಲಿನೋಡುನಮ್ಮ ದೊರೆಯ ಹರಿಯಪರಿಯ ನೀನರಿಯಾಸಿಟ್ಟುಮಾಡುವ ಸ್ವಾಮಿನಿನ್ನೊಳಗಿಟ್ಟುಕೊಂಡರೆ ಕೆಟ್ಟು ಹೋಗುವಿಒಟ್ಟುಗೂಡಿಸಿ ತಟ್ಟನೆಲ್ಲ ಮುಂದಿಟ್ಟುಯಿರೆ ಕೈಗೊಟ್ಟು ಕಾಯುವ 4ಮಾನನಿಧಿ ಭಕ್ತರನು ಮನ್ನಿಸುವ ನಲಿವ ಕರುಣವ ಗೈವಭಾನುಕೋಟಿಪ್ರಕಾಶದಿಂದಿರುವ ಮೆರೆವ ಮಹಾನುಭಾವಏನನೆಂಬೆನು ಆದಿ ಶ್ರೀಲಕ್ಷ್ಮೀನಾರಾಯಣ ತಾನೆ ಕಾರ್ಕಳಸ್ಥಾನ ರಾಜಧಾನಿಯಲಿ ಮೆರೆವನನವರತದಿ ಶ್ರೀನಿವಾಸನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ