ಒಟ್ಟು 1531 ಕಡೆಗಳಲ್ಲಿ , 106 ದಾಸರು , 1191 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೂರ್ಪಾಲಯ ಕ್ಷೇತ್ರದ ನರಹರಿ ಸ್ತೋತ್ರ (ಕೃಷ್ಣಾತೀರ) ನರಹರೀ ಪಾಹಿ | ಮರನೂರ ನರಹರೀ ಪ ಪರಿ ಭವಣೆಯ | ಪರಿಹರಿಸುತ ಮುನ್ನವರ ವೈರಾಗ್ಯವನಿತ್ತು | ಕರುಣೀಸೊ ಸಂಪನ್ನ ಅ.ಪ. ಸತಿ | ಕೃಷ್ಣೆಗಕ್ಷಯ ವಸನಸೃಷ್ಟಿಗಿತ್ತವ ಹರಿ | ಕೃಷ್ಣನೆ ಸಲಹೆನ್ನ 1 ಬುದ್ಧ | ಆಘಹರ ಕಲ್ಕಿಯೆ 2 ಜನಿತ ಸುಖ ಜಲ ಕಣ್ಣ | ಬಿಂದುಯುಗಳವು ಬೀಳೆ ಪಾವನ್ನ | ವೃಕ್ಷಯುಗಳೋದಯವಾಯ್ತು ಮುನ್ನ | ಆಹಅಗಣಿತ ಮಹಿಮ | ಅಶ್ವತ್ಥ ಸನ್ನಿಹಿತನೆನಿಗಮ ವೇದ್ಯನೆ ಸರ್ವ | ಜಗದೀಶ ಸಲಹೆನ್ನ 3 ಶೂಲಿಯಿಂದೊಡಗೂಡಿ ರಾಮ | ಚಂದ್ರಪಾಲಿಸುತಿಹ ಸಾರ್ವಭೌಮ | ಸುಜನಾಳಿ ಪಾಪಾರಣ್ಯ ಧೂಮ | ಕೇತುಓಲೈಪ ಜನರಘ ಭಸ್ಮ | ಆಹಲೀಲೆಯಿಂದಲಿ ಗೈವ | ಆಲಯವಿದು ಶೂರಪಾಲೀಯ ಕ್ಷೇತ್ರದಿ | ಶ್ರೀಲೋಲ ನರಹರಿ 4 ನಡು ನದಿಯೋಳು ಕೋಟೇಶ | ಮತ್ತೆಪಡುವಲಯದೋಳು ಕಂಕೇಶ | ಇನ್ನುಬಡಗ ನರಹರಿ ಬಳಿ ಬೈಲೇಶ | ಆಹರೊಡಗೂಡಿ ನೆಲಸೀಹ | ಕಡು ಮುದ್ದು ರೂಪದಿದೃಢ ಭಕ್ತನೆನಿಸೀಹ | ಮೃಡನಿಂದ ಪೂಜಿತ 5 ಅಜಪಿತ ಪದಜಳು ಎನಿಪ | ಮತ್ತೆಅಜಾಂಡ ಕಟಹದಿಂ ಬರ್ಪ | ಇನ್ನುಅಜಸುತ ಶಿರದಲಿ ಧರಿಪ | ಸಗರಜರ ಪಾಪವನ್ನು ಹರಿಪ | ಆಹಮಝಬಾಪು ಗಂಗೆಯ | ನಿಜ ಪಾಪ ಕಳೆಯಲುಅಜಸುತ ನಾಜ್ಞೆಯಿಂ | ಬಿಜಯಿಸಿದಳು ಇಲ್ಲಿ 6 ಪರರಘಗಳ ಹೊತ್ತು ಗಂಗೆ | ಬಂದುಹರ ಪೇಳಿದಂಥ ದ್ವಿಜಂಗೆ | ಶೂರ್ಪವರ ವಾಯು ನ್ವಿತ್ತಳವಂಗೆ | ಪಾಪಹೊರದೂಡಿದಳು ಮಂಗಳಾಂಗೆ | ಆಹಗುರುಕನ್ಯಾಗತನಾಗೆ | ಸರಿದ್ವರ ಕೃಷ್ಣೇಲಿಬೆರೆಯುತ ಸುರ ನದಿ | ಹರಿಪಳು ಜನರಘ 7 ಮಧ್ವಾರ್ಯ ಸಂತತಿ ಜಾತ | ಗುರುವಿದ್ಯಾಧೀಶರು ಇಲ್ಲಿ ಖ್ಯಾತ | ದ್ವಾದಶಬ್ದ ಪರಿಯಂತನುಷ್ಠಾತ | ಪ್ರಾಣಮುದ್ದು ಪ್ರತಿಮೆ ಪ್ರತಿಷ್ಠೀತ | ಆಹಶುದ್ಧ ದ್ವಾದಶಿ ದಿನ | ಸದ್ವೈಷ್ಣ್ವ ಲಕ್ಷರ್ಗೆವಿಧ್ಯುಕ್ತ ಭೋಜನ | ಶ್ರದ್ಧೆಯಿಂದಲಿ ಗೈದರ್ 8 ಪರ ತತ್ವವೆನಿಸಿ | ಸ್ತುತಿಸ್ಕಂದೋಕ್ತ ಮಹಿಮೆಯ ಸ್ಮರಿಸಿ | ಆಹಇಂದುಪ ಗುರು ಗೋ | ವಿಂದ ವಿಠಲನಹೊಂದಿ ಭಜಿಪರ್ಗ | ಬಂಧನವೆಲ್ಲಿಹದೋ 9
--------------
ಗುರುಗೋವಿಂದವಿಠಲರು
ಶೂಲವನು ಪರಿಹರಿಸೊ ತ್ರಿಶೂಲಧಾರಿ ಪ ಬಹುವಿಧದಿಂದ ಬಾಧೆಬಡುತಿಹ ಅಂಗನೆಯಳ ಶಿರ ಅ.ಪ. ಎರಡು ವಾಶ್ಯ ವತ್ಸರದಿ ಬಹುಕ್ಲೇಶಪಡುತಿರುವಳೋ 1 ಏಸೇಸು ದಿನವಾದರೂ ಪರರಿಗೊಶವಾಗದಯ್ಯ ನಿನ್ಹೊರತು 2 ಇದು ಮಾತ್ರ ಪರಿಹರಿಸೊ ನಿನ್ನುಪಕಾರ ಮರಿಯೆತಂದೆವರದಗೋಪಾಲವಿಠಲನ ಮರಿಯೇ 3
--------------
ತಂದೆವರದಗೋಪಾಲವಿಠಲರು
ಶೇಷದೇವರು ಸ್ಮರಿಸುವೆ ಹರ ವಟತರುಣ ಮೂಲದಿ ಮೃಗಚರ್ಮತಳದಿ ಕೂತು ಹರಿಯ ಭಜಿಪೆನೆ ಪ ನಾಲ್ಕು ರೂಪಗಳನ್ನು ಸ್ವೀಕರಿಸುತ ದಕ್ಷಆ ಕಥಾರಂಭದಿ ಕೂತು ಕೇಳಿದನೇ 1 ಶುಕ ಕೂಸು ದ್ರೋಣನು ದೂ-ರ್ವಾಸ ಮುನಿಪ ಜೈಗೀಷವತಾರಾ 2 ಈಸು ಕರುಣಕೆನ್ನ ಏಸು ಜನ್ಮದ ಪುಣ್ಯಶೇಷ ಒದಗೆ ಇಂದಿರೇಶನ ಶಯ್ಯಾ 3
--------------
ಇಂದಿರೇಶರು
ಶೇಷಶಯನ ಶ್ರೀಕೃಷ್ಣನಿಗಾರತಿ ಸತಿ ಲಕುಮಿಯು ಮಾಡಿದಳು ಪ ಸಾಸಿರನಾಮನ ಭೂಸುರಪಾಲನ ಸೋಸಿನಿಂದ ಸ್ಮರಿಸುತ ಮನದಿ ಅ.ಪ ಅಂಬುಧಿಯುದುಕದಿ ಆಲದ ಎಲೆ ಮೇಲೆ ಅಂಗುಟವನು ಬಾಯೊಳಗಿಟ್ಟು ತುಂಬಿಗುರುಳ ಮುಖಕಮಲದ ಚಲುವಗೆ ಸಂಭ್ರಮದಲಿ ಮುತ್ತಿನಾರತಿಯ 1 ಮಂದರಧರ ಗೋವಿಂದಗೆಮ್ಮಯ ಕುಂದುಗಳೆಣಿಸದೆ ಸಲಹೆನ್ನುತಾ ವಂದಿಸಿ ಪ್ರಾರ್ಥನೆ ಮಾಡುತ ಬೇಗದಿ ಇಂದಿರೇಶ ಸಲಹೆಂದೆನುತ 2 ಗೋವರ್ಧನವನು ಎತ್ತಿ ಸುಜನರನು ಗೋಗೋಪಾಲರ ಪೊರೆದವಗೆ ಗೋಪತಿ ಕಮಲನಾಭ ವಿಠ್ಠಲನಿಗೆ ಗೋಪಿಯರೊಡನಾಡುವ ಹರಿಗೆ 3
--------------
ನಿಡಗುರುಕಿ ಜೀವೂಬಾಯಿ
ಶೋಧಿಸದೆ ನಿಜ ಬೋಧಿಪೆನೆಂಬ ಈ ಹಾದಿಯೆಲ್ಲಿ ಕಲಿತಿರೆಲೊ ಎಲೋ ಆಧರವರಿಯದ ವಾದಿಮೂರ್ಖರಿಗೆ ಬೋಧ ಸಿದ್ಧಿಪುದೇನೆಲೋ ಎಲೋ ಪ ಋತುಯಿಲ್ಲದವಳಲ್ಲಿ ರತಿಕಲಹ ಬೆಳೆಸಲು ಸುತರ ಪಡೆವಳೇನೆಲೋ ಎಲೋ ಅತಿಮಂದಮತಿಗಳಿಗಹಿತವ ಬೋಧಿಸೆ ಸು ಗತಿಗೆ ಬಾಹರೇನೆಲೋ ಎಲೋ ಕತ್ತೆಗೆ ಮುತ್ತಿನ ಕಂಟಲಿ ಹೇರಲು ಅರ್ತೀತೆ ಬೆಲೆಯನು ಎಲೋ ಎಲೋ ಕೃತ್ರಿಮರಿಗಾತ್ಮದ ಸ್ಮøತಿಯ ಬೋಧಿಸೆ ದು ರ್ಗತಿಯು ತಪ್ಪೀತೇನೆಲೋ ಎಲೋ 1 ಕೋಣನ ಮುಂದೆ ವೇಣುಬಾರಿಸಲು ಅನಂದತಾಳೀತೇನೆಲೋ ಎಲೋ ಶ್ವಾನನ ಮುಂದೆ ಸುಗಾನ ಮಾಡಲದು ಧ್ಯಾನಕ್ಕೆ ತಂದೀತೇನೆಲೋ ಎಲೋ ಹೀನಸಂಸಾರಿಗೆ ದಾನಿಗಾಂಭೀರ್ಯದ ಖೂನ ತಿಳಿದೀತೇನೆಲೋ ಎಲೋ ಜ್ಞಾನಬೋಧಾಮೃತ ಅಜ್ಞಾನಿಗೆ ಉಸುರಲು ಹೀನಭವ ಬಿಟ್ಟೇತೇನೆಲೋ ಎಲೋ 2 ಆಸೆಗಾರಗೆ ಮಹ ಶಾಶ್ವತ ಪೇಳಲು ಲೇಸಾಗಿ ತೋರೀತೇನಲೋ ಎಲೋ ದಾಸರ ದೂಷಿಪ ನಾಶಮತಿಗೆ ಯಮ ಪಾಶವು ತೊಲಗೀತೇನೆಲೋ ಎಲೋ ಈಶನೊಲಿಮಿಲ್ಲದೆ ನಿಜಬೋಧಲಂಬಿಸಿ ಮುಕ್ತಿ ಅಸನ ಸಿಕ್ಕೀತೇನೆಲೋ ಎಲೋ ಹೇಸಿಜನರಿಗೆಲ್ಲ ಶ್ರೀಶ ಶ್ರೀರಾಮನ ದಾಸತ್ವ ದೊರಕಿತೇನೆಲೋ ಎಲೋ 3
--------------
ರಾಮದಾಸರು
ಶೋಭನಂ ಶ್ರೀ ಶೋಭನಂ ಶ್ರೀಭೂವಲ್ಲಭ ವೆಂಕಟನಾಯಕ ಪಇಲ್ಲದ ಮಾಯೆಯ ನಿರ್ಮಿಸಲು ಉಳ್ಳವ ನೀನದರೊಳಗಿರಲುನಿಲ್ಲದೆ ನಲಿಯುತ ಹಬ್ಬುತ ಹಸರಲು ಯೆಲ್ಲವು ನೀನಾಗಿರುತಿರಲು 1ಯುಕ್ತಿಗಸಾಧ್ಯನು ನೀನಾಗಿ ಭಕ್ತರ ಪಾಲಿಸಬೇಕಾಗಿಶಕ್ತಿಗೊಡೆಯ ರಾಮಕೃಷ್ಣ ನೀನಾಗಿ ಭಕ್ತರ ಪಾಲಿಸಬೇಕಾಗಿ 2ಕರುಣಾರ್ಣವನ ಕಟಾಕ್ಷದಲಿ ಪರಿಪರಿ ಕಾಮವ ಪಡೆಯುತಲಿತಿರುಪತಿ ವೆಂಕಟರಮಣನ ಮನದಲಿ ಸ್ಮರಿಸುತಲಿರೆ ಸಂಪತ್ತಿನಲಿ 3 ಓಂ ಯೋಗಿನೇ ನಮಃ
--------------
ತಿಮ್ಮಪ್ಪದಾಸರು
ಶೌರಿ ನೀನು ಪಾದ್ಯ ಶುಕ ಬಿಂಬ ಪ ನಿತ್ಯ ವಸ್ತುವು ನೀನು ನಿತ್ಯರಲಿ ನೀ ನಿತ್ಯ ನಿತ್ಯಸುಖ ಪರಿಪೂರ್ಣ ಸತ್ಯ ಕೃತ್ಯ ಭೃತ್ಯಪಾಲಕರಲ್ಲಿ ಸಮರಿಲ್ಲ ನಿನಗಿನ್ನು ಭಕ್ತವತ್ಸಲ ಎನ್ನ ಯುಕ್ತಿಯಲಿ ಕೈಪಿಡಿಯೊ 1 ಕರ ಪೊಂದಿ ದುಮ್ಮನವ ಬೆಳೆಸಿದೆನೊ ಅವಶನಾಗಿ ನಿರ್ಮಮರದೇವ | ತ್ವದಾಸ್ಯ ಪಾಲಿಸು ಎನಗೆ ಕರ್ಮನಾಮಕ ನೀನೆ ಸದ್ಧರ್ಮಕಾರಕನೆ 2 ಎನ್ನಲ್ಲಿ ನಿನ್ನ ಕ್ರಿಯ ಅನುಭವದಿ ತಿಳಿಸೆನಗೆ ಅನ್ಯುಪಾಯವು ಇಲ್ಲ ಅಭಯಪದಕೆ ಪೂರ್ಣಪ್ರಜ್ಞರ ಗುರುವೆ ಜಯೇಶವಿಠಲ ಎನ್ನ ಮನ ಒಡಲಲ್ಲಿ ನಿನ್ನ ಮೂರ್ತಿಯ ತೋರೊ 3
--------------
ಜಯೇಶವಿಠಲ
ಶೌರಿ ಬಾರೋ ಭಕ್ತರ ದೊರೆ ಬಾರೋ ಬಾಬಾ ಮನೆಗೆ ಪ ಚಾರುತರ ನವರತುನದ ಶೃಂ- ಗಾರ ರಥದೊಳು ಕುಳಿತು ಬೇಗನೇ ಭೇರಿ ವಾದ್ಯಗಳೆಲ್ಲ ಮೊಳಗಲು ನಾರಿ ರುಕ್ಮಿಣಿ ಭಾಮೆ ಸಹಿತಅ.ಪ ಸುರರು ಅಸರರು ಕೂಡಿ ಶರಧಿಯ ಮಥಿಸಲು ಭರದಿ ಪುಟ್ಟಲು ಸುಧೆಯು ಪರಮ ಹರುಷದಿಂದ ದೊರಕಿತಮೃತವೆಂದು ಅಸುರರೆಲ್ಲರು ಬರಲು ಬೆರಗಾಗಿ ಸುರರೆಲ್ಲ ಉಪಾಯವನರಿಯದೆ ಗಗನ ನೋಡುತಿರಲು ತ್ವರದಿ ಶ್ರೀಹರಿ ಅವರ ನೋಡುತ ಪರಿಪರಿಯ ಆಭರಣ ಪೀತಾಂ- ಬರಗಳಿಂದಲಂಕರಿಸಿ ಸುಂದರ ತರುಣಿ ರೂಪವ ಭರದಿತಾಳಿದೆ 1 ಹರಿಯ ಸ್ತ್ರೀರೂಪವ ಪರಶಿವ ಸ್ಮರಿಸುತ ಮರಳಿ ನೋಡಲಪೇಕ್ಷಿಸೆ ಪರಿ ಪ್ರಾರ್ಥಿಸೆ ಪರಮಾತ್ಮ ನುಡಿದನು ಇದುತರವಲ್ಲೆನುತ ಉರಗ ಭೂಷಣನ ಪ್ರಾರ್ಥನೆ ಸಲಿಸುವೆನೆಂದು ತರುಣಿಯಾದನು ಹರಿಯು ಪರಮಸೂಕ್ಷ್ಮದ ವಸನ ವಡ್ಡ್ಯಾ- ಣಗಳಲಂಕರಿಸುತ್ತ ವನದೊಳು ಚರಿಸುತಿರೆ ಹರ ಬೆರಗಾಗಿ ಹಿಂದೋ- ಡುತಲಿ ಬರೆ ಮರೆಯಾದ ದೇವನೆ 2 ಹಿಂದೆ ದೈತ್ಯನು ಬಹುಚಂದದಿ ತಪಗೈದು ಕಂದುಗೊರಳನ ಮೆಚ್ಚಿಸೇ ಬಂದನಾಗಲೇ ಶಂಭು ಇಂದುವರ ಬೇಡೆನಲು ವಂದಿಸಿ ಬೇಡಿದ ವರವ ತಾನು ಅಂದು ವರಗಳ ಕೊಟ್ಟು ಹಿಂದಿರುಗಲು ಶಿವನು ಹಿಂದೆ ಬೆನ್ನಟ್ಟಿದ ರಕ್ಕಸನೂ ಹಿಂದÀುರಗದಲೆ ಓಡುತಲೆ ಶ್ರೀ ತಂದೆ ಕಮಲನಾಭ ವಿಠ್ಠಲ ನೆಂದು ಮೊರೆಯಿಡೆ ಕೇಳಿ ತ್ವರದಲಿಬಂದು ರಕ್ಷಿಸಿ ಕಾಯ್ದ ಶ್ರೀಹರಿ 3
--------------
ನಿಡಗುರುಕಿ ಜೀವೂಬಾಯಿ
ಶ್ಯಾಮಸುಂದರಿ ಭೂಮಿನಂದಿನಿ ರಾಮಸುಂದರಿ ಸೀತೆಯೆ ಪ ಪ್ರೇಮದಿಂದ ದಿವ್ಯ ಪೀಠಕೆ ಭಾಮಿನಿಯೆ ಬಾ ಪ್ರಿಯೆ ಅ.ಪ. ದೇವ ಸುಂದರಿಯರು ಸೇರಿ ದೇವಿ ನಿನ್ನ ಕರೆವರು ದೇವ ವೃಂದವು ನಿನ್ನ ಸ್ಮರಿಸಿ ಭಾವಿಸುತ್ತಲಿರುವರು 1 ಮಂದಗಮನೆ ಸುಂದರಾಂಗಿ ಮಂದಹಾಸ ಶೋಭಿತೆ ಚಂದ್ರಬಿಂಬ ಸದೃಶವದನೆ ಚಂದ್ರವಂಶ ನಂದಿನಿ 2 ಭ್ರಮರ ವೇಣಿ ಸುಮ ಸುಮಾಲಿ ಕಾಯುತೆ ವಿಮಲ ವಾಣಿ ರಮಣಿ ತರುಣಿ, ಸುಮನ ಕೀರವಾಣಿಯೆ 3 ಮಾನಿನಿ ಶಿರೋಮಣಿಯೆ ಧೇನುನಗರ ವಲ್ಲಭೆ ಜಾನಕಿಯೆ ಸನ್ನುತೆಯೆ ಮೌನಿ ಬೃಂದವಂದಿತೆ4
--------------
ಬೇಟೆರಾಯ ದೀಕ್ಷಿತರು
ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ (ಅಪ್ಪಾವರು) 140 ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ | ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ || ಇಭರಾಜ ವರದನಿಗು ದ್ರುಪದಾತ್ಮಜಾಪತಿಗು | ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ ಶ್ರೀರಾಮನರಹರಿ ಶ್ರೀಕರನಾರಾಯಣ | ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ || ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ | ಅರವಿಂದದಲಿ ನಾನು ಶರಣು ಶರಣಾದೆ 1 ಪಂಚಮುಖ ಹನುಮಂತ ನರಸಿಂಹ ಗರುಡ ವರಾಹ ಹಯವದನ || ಈ ಅಂಜನಾಸುತನನ್ನು ತತ್ ಅಂತಸ್ಥ | ಪಂಚರೂಪ ಶ್ರೀಶನ್ನ ಪೂಜಿಪಮಹಂತ 2 ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು ಅಪ್ಪಮಕ್ಕಳಂತೆ ಕಾಯ್ದಿರಿ ಜನರ || ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ 3 ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು ತಾಳಿಗೋರೂಪ ಪಾದಜ ಧಾನ್ಯ ಉಂಡು || ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು | ಜಲಜನಾಭನ ಗಾಯಕನೆಂದು ಆಶಿಸಿದಿರಿ 4 ಬೊಮ್ಮನ ಪಿತ `ಶ್ರೀ ಪ್ರಸನ್ನ ಶ್ರೀನಿವಾಸನಲಿ' ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ || ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು ಪ್ರೇಮಾನುಗ್ರಹದಯದಿ ಪಾಲಿಪುದು ಶರಣು 5 ಪ || ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಗುರು ಜಗನ್ನಾಥಾರ್ಯ ಕರುಣಿಸಯ್ಯ ಮೊರೆಹೊಕ್ಕೆ ತ್ವತ್ವದಕೆÉ ಮರಿಯದಲೆ ಪಿಡಿ ಕೈಯ್ಯ ಪ ಪ್ರಹ್ಲಾದನನುಗ್ರವು ಎಲ್ಲ ಕಾಲದಲಿ ನಿ ನ್ನಲ್ಲಿ ಸಂಪೂರ್ಣವಾಗಿರುವದೆಂಬ ಸೊಲ್ಲು ಲಾಲಿಸಿ ನಿನ್ನ ಪಲ್ಲಾವಾಂಘ್ರಿಗೆ ನಮಿಪೆ ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ 1 ಜನಕಾಗ್ರಜಾತಾರ್ಯ | ನರನಿಸಿ ಜನಿಸುತ ಮಂತ್ರಮುನಿ ನಿಲಯ ಮುನಿವರ್ಯ ಶ್ರೀ ರಾಯರ ಗುಣಸ್ತವನ ವಿರಚಿಸುತ ಪ್ರಣತರಿಗೆ ಪಠಿಸುತ್ತ ಮನದಿಚ್ಛೆ ಪಡೆವುದರೆ ಅನುಕೂಲಿಸಿದ ಜ್ಞಾನಿ 2 ಶ್ರೀಶಾಮಸುಂದರನ ದಾಸವರ್ಯರ ಉಪ ದೇಶವನು ಕೊಂಡು ಉಪಾಸನೆಯನು ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥ ಭೂಸುರಾಗ್ರಣಿಯಾದ ಪ್ರತಿವಾಸರದಿ ಗೈದಂಥ ಭೂಸುರಾಗ್ರಣಿಯಾದ ಕೋಸಿಗೆ ವಾಸ 3
--------------
ಶಾಮಸುಂದರ ವಿಠಲ
ಶ್ರೀ ಗುರುರಾಯ ನಿಮ್ಮ ಕರುಣ ಭಯಕೃದ್ಭಯ ನಾಶನ ಧ್ರುವ ಕಂದ ಪ್ರಹ್ಲಾದಗಾಗಿ ಸಂದು ವಿಗ್ರಹದೊಳು ಬಂದು ರಕ್ಷಿಸಿದೆ ಪ್ರಾಣ ಚೆಂದವಾಗಿ ನೀ 1 ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿ ಕಾಯಿದೆ ಅಪಾರ ಮಹಿಮೆ 2 ಕರಿಯ ಮೊರೆಯ ಕೇಳಿ ಕರಿಯ ಬಿಡಿಸಿದೆಂದು ಮೊರೆಯ ಹೊಕ್ಕೆ ನಾ ನಿಮಗೆ ಹರಿ ಹರಿಯೆಂದು 3 ಸ್ಮರಿಸಿದಾಕ್ಷಣ ಬಂದು ಕರುಣದಿಂದ ನೆರೆದೆ ಪರಿ ಪರಿಯಿಂದ ಹೊರೆದೆ ವರಮುನಿಗಳ 4 ಶರಣು ಹೊಕ್ಕಿಹೆ ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸೊ ಎನ್ನ ಪರಮಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಗುರುವರದೇಂದ್ರರ ಸ್ತೋತ್ರಗಳು ಅಂದಣೇರಿದ ವರದೇಂದ್ರ ಮುನಿಪರ ನಿಂದು ಪಾಡುವರಫವೃಂದ ತರಿವರ ಪ ಅಂದದಿ ಭೂಸುರ ಸಂದಣಿ ಮಧ್ಯದಿ ಚಂದದಿ ಬಹು ಕರ್ಮಂದಿಗಳರಸ ಅ.ಪ ಶ್ರೀ ಮಧ್ವಮತಾಂಬುಧಿ ಸೋಮ ನಿಷ್ಕಾಮ ತಾಮಸಮತಕÀಂಜಸ್ತೋಮ ನಿಧೂಮ ಆ ಮಹಾಭಕ್ತ ಕುಮುದ ಪ್ರೇಮ ಸತ್ಕಾಮ ಕಾಮಿತ ಕಲ್ಪದ್ರುಮಗುರುಸಾರ್ವಭೌಮ ರಾಮ ಪದಾಂಬುಜ ಪ್ರೇಮದಿ ಭಜಿಸುವ ಭೂಮಿಸುರರ ಹೃತ್ತಾಮಸಹಾರಾ 1 ಉದಿತಾಕರ್À ಸಂಕಾಶ ವಿಧಿಕುಲಾಧೀಶ ಮುದದಿ ಭಜಿಸುವ ಭಕ್ತಹೃದಯನಿವಾಸ ಸದಮಲಭಕ್ತಙÁ್ಞನ ಉದಜವಿಕಾಸ ವಿಧಿಕುಲದ್ವೇಷಿ ಕುಮುದ ತತಿನಾಶ ವಿಧವಿಧದಲಿ ಹರಿಪದ ಭಜಿಸುವ ಮತಿ ವದಗಿ ಪಾಲಿಸು ಹೃದಜನಸದಯಾ 2 ಕರುಣಾನಿಧಿಯೆ ನಿನ್ನ ಚರಣ ಸೇವಕರ ಜರಮರಣಾದಿ ದೋಷತ್ವರಿತ ಪರಿಹಾರ ಶರಧಿ ವಿಹಾರ ನಿರುತದಿ ಹರಿಯನಾಮ ಸ್ಮರಿಸುವಧೀರ ವರದೇಶ ವಿಠಲನ ಕರುಣದಿ ಧರೆಯೊಳು ಮೆರೆಯುವ ಯತಿಕುಲವರಿಯ ಸುಚರಿಯಾ 3
--------------
ವರದೇಶವಿಠಲ
ಶ್ರೀ ಗೋಪಾಲದಾಸರು ನಿನ್ನ ದಯದಿಂದಲೇ ಎನ್ನ ಜೀವನವು ಘನ್ನ ಗೋಪಾಲ ವಿಠ್ಠಲ ದಾಸರಾಯ ಪ ತುಂಗೆ ಕೃಷ್ಣೆ ಮಧ್ಯರಂಗ ಕ್ಷೇತ್ರದಿ ಮುದದಿ ತುಂಗ ವಿಜಯಾರ್ಯರ ಪದಂಗಳಿಗೆ ಎರಗಿ ಗಂಗೆಪಿತ ಮಾತಂಗ ವರದನಾಮನ ಅಂತ ರಂಗದಿ ನೋಡಿ ಗುಣಗಳನು ಪಾಡಿದೆಯೊ 1 ಅನುಜರಿಗು ಅಚಲ ಮಾತೆಗು ಶರಣು ಸುಜನರಿಗು ಮೌನಿ ಪಂಡಿತರಿಗೂ ಎನ್ನಂಥ ಪಾಮರಗು ಜ್ಞಾನ ಸುತತ್ವ ಸನ್ಮಾರ್ಗ ಬೋಧಿಸಿ ಜಗ ನ್ನಾಥನ ಮನಸಿನ ಅನುಭವಕೆ ತಂದೆ 2 ಬೇಸರದಿ ನಾ ಸೀತಾಪತಿಪಲ್ಲಿಯಲಿ ಮಲಗೆ ಏಸು ಕರುಣವೊ ದಾಸರಾಜ ನೀ ಬಂದು ವ್ಯಾಸಮುನಿಮಠ ಗುರುಪೂಜೆಗೆ ಕರೆದೊಯ್ದು ದಶಪ್ರಮತಿ ಭಾಷ್ಯಪಠನಾರ್ಚನೆಯ ತೋರಿಸಿದೆ 3 ಗೋ ಎನಲು ಗರುಡವಾಹನ ಪೀಡೆ ಪರಿಹರಿಪ ಪಾ ಎನಲು ಪರಮಪೂರುಷ ಪಾಲಿಸುವ ಲ ಎನಲು ಲಕ್ಷ್ಮೀಶ ನಿಖಿಳೇಷ್ಟಗಳನೀವ ಅನವರತ ಗೋಪಾಲದಾಸರಿಗೆ ಶರಣು 4 ಆನಂದಮುನಿಹೃಸ್ಥ ವನಜಸಂಭವಪಿತ ಪ್ರ ಸನ್ನ ಶ್ರೀನಿವಾಸ ಜಗನ್ನಾಥ ನಿನ್ನ ಪಾದ ಸಂಸ್ಮರಿಸುವ ಸುಜನರನು ಅನವರತ ಪಾಲಿಸುವ ಸಂದೇಹವಿಲ್ಲ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ಪ ಈ ಜಗದೊಳು ನಿಮಗೆಣೆಗಾಣೆ ಸತತ ನಿ - ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ ಅ.ಪ. ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ ಚರಿಸುತ ಧರೆಯೊಳು ಮೆರೆವ ಮಹಾತ್ಮರ ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ ದುರಿತರಾಶಿಗಳಿರಗೊಡದೆ ನೆರೆ ಪರಮಮುಕ್ತಿಯ ದಾರಿ ತೋರುತ ಸಿರಿಸಹಿತ ಹರಿ ತೋರುವಂದದಿ ಕರುಣ ಮಾಳ್ಪ ಸುಗಣಮಹೋದಧಿ 1 ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ ಭುವನೈಕ ವೇದವದ್ಯನ ಶ್ರವಣಭಕುತಿಯಿಂದ ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ ಭುವನ ಪಾವನ ಮಾಡಲೋಸುಗ ಅವನಿ ತಳದಿ ವಿಹರಿಸುತಿಹ ಗುರು 2 ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ - ದ್ಗುಹಾಧೀಶನನು ಬಿಡದೆ ಅನುದಿನ ಸ್ಮರಿಸುತ ಸಹನದಿ ಶಮದಮಯತು ನಿಯಮಗಳನ್ನು ವಹಿಸಿ ಶ್ರೀದವಿಠಲನಂಘ್ರಿಯ ಮಹಿಮೆ ತೋರುತ ಪೂಜಿಸುತ ಬಲು ಮಹಿತಪೂರ್ಣಾನಂದತೀರ್ಥರ ವಿಹಿತ ಶಾಸ್ತ್ರಗಳರಿತು ಬೋಧಿಪ 3
--------------
ಶ್ರೀದವಿಠಲರು