ಒಟ್ಟು 966 ಕಡೆಗಳಲ್ಲಿ , 93 ದಾಸರು , 835 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸನೆಂತಾಗುವೆನು ಧರೆಯೊಳಗೆ ನಾನು |ವಾಸುದೇವನಲಿ ಲೇಸ ಭಕುತಿಯ ಕಾಣೆ ಪ.ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು |ಗೋಟಂಚುಧೋತರ ಮುಡಿಯನುಟ್ಟು ||ದಾಟುಗಾಲಿಡುತ ನಾಧರೆಯೊಳಗೆ ಬರಲೆನ್ನ |ಬೂಟಕತನ ನೋಡಿ ಭ್ರಮಿಸದಿರಿ ಜನರೆ 1ಅರ್ಥದಲ್ಲಿಯ ಮನಸು ಆಸಕ್ತವಾಗಿದ್ದು |ವ್ಯರ್ಥವಾಯಿತು ಜನ್ಮ ವಸುಧೆಯೊಳು ||ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ |ಸತ್ಯ - ಶೌಚಗಳರಿಯೆ ಸಜ್ಜನರುಕೇಳಿ2ಇಂದಿರೇಶನ ಪೂಜೆ ಬಂದು ಮಾಡಿದ್ದಿಲ್ಲ |ಸಂಧ್ಯಾನ - ಜಪ - ತಪವೊಂದನರಿಯೆ||ಒಂದು ಸಾಧನ ಕಾಣೆ ಪುರಂದರವಿಠಲನ |ದ್ವಂದ್ವಪಾದವ ನಂಬಿ ಅರಿತು ಭಜಿಸಿದರೆ 3
--------------
ಪುರಂದರದಾಸರು
ದೇವರ ನಾಮ(ಶ್ರೀಶ ಸ್ತೋತ್ರ)38ಶ್ರೀಕರಾರ್ಚಿತ ಶ್ರೀಶ ಶ್ರೀ ಶ್ರೀನಿವಾಸಭಕುತವತ್ಸಲ ನಮೋ ಕಾರುಣ್ಯ ಶರಧೇ ಪಲೌಕೀಕ ವಿಷಯದಲಿ ಕಾಯಮನದಿಂಚರಿಸಿ |ಶ್ರೀಕರನೆ ನಿನ್ನನಾ ಸಂಸ್ಮರಿಸಲಿಲ್ಲಾಲೋಕ ಬಂಧುವೇ ಶರಣು ಶರಣು ಕರುಣಾಂಬುಧಿಯೇನೀಕಾಯಬೇಕೆನ್ನ ತಪ್ಪು ಎಣಿಸದಲೆ 1ನಾರಾಯಣವಾಸುದೇವಸಂಕರುಷಣಪ್ರದ್ಯುಮ್ನ ಅನಿರುದ್ಧ ಆತ್ಮಾಂತರಾತ್ಮಶ್ರೀ ಕೃಷ್ಣ ಕಪಿಲನೆ ಸರ್ವಕರ್ತನು ನೀನೆಸರ್ವ ಪ್ರೇರಕ ಸರ್ವ ಸ್ವಾಮಿ ಮಮ ಸ್ವಾಮಿ 2ವಿಶ್ವವಿಷ್ಣು ವಷಟ್ಕಾರ ಶ್ರೀಭೂರಮಣವಿಶ್ವತೋಮುಖ ಸರ್ವ ವಶಿ ವಿಶ್ವನಾಥವಿಶ್ವಪಾಲಕ ನಮೋ ಶ್ರೀರಾಮ ವಿಧಿತಾತವಿಶ್ವರೂಪನೇ ಶ್ರೀ ಪ್ರಸನ್ನ ಶ್ರೀನಿವಾಸ3
--------------
ಪ್ರಸನ್ನ ಶ್ರೀನಿವಾಸದಾಸರು
ದ್ವಂದ್ವವೆ ವಸಂತದ ಹಬ್ಬದ್ವಂದ್ವವೆ ಇಹಪರದಲ್ಲಿ ಹಬ್ಬ ಪ.ದ್ವಂದ್ವಾಮೃತ ಕ್ಷೇಮಅಭಯವಸಂತದ್ವಂದ್ವ ಜೀವೇಶರ ತಿಳಿದವ ಶಾಂತದ್ವಂದ್ವದ ನಡೆನುಡಿ ಬಲ್ಲವ ಸಂತದ್ವಂದ್ವವರಿಯದನ ಗತಿಯೆ ವಸಂತ 1ದ್ವಂದ್ವ ಶೀತೋಷ್ಣ ಸಮಾನವ ಕಂಡುದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡುದ್ವಂದ್ವವಮಾನವಹಿಡಿದರೆ ಭಂಡುದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು 2ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆಬಾಲಕರೆಲ್ಲ ನೆರೆವುದೊಂದು ‌ಘಳಿಗೆಹೋಳಿಯನಾಡುವ ಸಂಭ್ರಮದೊಳಗೆಕಾಳಗಬೇಡಿರೊ ನಿಮ್ಮ ನಿಮ್ಮೊಳಗೆ3ಅಜೆÕೈಕ್ಯ ಪ್ರತಿಪದ ಹಿಂದಾದರಿಂದಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರಒಗ್ಗೂಡಿ ಗೆಳೆಯರೊಮ್ಮತದಿಂದಲಗ್ಗೆಕಾರರು ಮುಂದೆ ನಡೆವುದೆ ಚಂದ 4ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿರಕ್ತಿರಂಹಸ ಬ್ರಹ್ಮದ್ಹಾದಿಯ ಐದಿವ್ಯಕ್ತವಾಗುವ ವಸ್ತು ಓದಿಕೆ ಓದಿರಿಕ್ತದ ನುಡಿಗಳು ತಮಸಿನ ಹಾದಿ 5ದಿನಪತಿ ಅಡಗಿರೆ ಮಲಗದೆ ಎದ್ದುಮನೆಯವರನು ಎಚ್ಚರಿಸಬ್ಯಾಡಿ ಸದ್ದುನೆನೆವ ವಿಷಯಗೋಡೆ ಏರುತ್ತ ಬಿದ್ದುಮನೆ ಮನೋವಾರ್ತೆಯ ಕುರುಳನೆ ಕದ್ದು 6ಹಾರುವರ ಕೇರಿಯ ಹೊಗಬ್ಯಾಡಿಕೇಳಿಬೇರೂರವರ ಬಿಟ್ಟು ಬಿಡಿ ದೂರದಲ್ಲಿದೂರುವರೊಡನಾಟ ದುರ್ದೆಶೆಫಲವು ವಸ್ತುದೋರುವ ಮನೆಯೇವೆ ಸರಸ ವೆಗ್ಗಳವು 7ಧೂಳಿ ನೀರುರಿಗಾಳಿ ಬಯಲೊಳಗಾಡಿಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿಹಾಳು ತುರುಕರ ಕೇರಿಯೊಳು ನಿಷ್ಫಲವುಜಾಲಗಾರರ ಕೇರಿ ಹೊಕ್ಕರೆ ಫಲವು 8ಹಿಂಚಾದ ಹಿರಿಯರ ಮಾತಲೆ ನಡೆದುವಂಚಕ ಮೂವರ ಸಂಗವ ಕಡಿದುಮಿಂಚುವ ಮಾನ್ಯರ ಪ್ರೀತಿಯ ಪಡೆದುಸಂಚಿತಪ್ರಾರಬ್ಧಾಗಾಮಿಯ ಒಡೆದು9ಮುಚ್ಚಿದ ಕದವೆರಡನು ಮುರಿಹೊಯ್ದುಇಚ್ಛೆ ಮೂರೆಂಬ ನಾಯಿಗಳಜಿಹ್ವೆಕೊಯ್ದುಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣಸಚ್ಚಿದ ಗೋರಸ ಸೂರ್ಯಾಡಿರಣ್ಣ 10ಏಕಾಧಿಪತಿಯಾಜÕ ಅಭಯವು ಬೇಕುನಾಕು ಝಾವಿನ ರಾತ್ರಿ ನಲವಿರಬೇಕುಪೋಕಕಳ್ಳಾರ್ವರ ಮೆಟ್ಟ್ಯಾಳಬೇಕುಭೂಕಾಂತಗೆ ಸೇವೆಯೊಪ್ಪಿಸಬೇಕು 11ರಮಣನೊಲ್ಲದ ಆರ್ವರ ಸಂಗವಿಡಿದುರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದುಅಮಿತ ವೈರಾಗ್ಯಹಗ್ಗದಿ ಕೈಯಕಟ್ಟಿಶ್ರೀರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ 12ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳುಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳುಎಲ್ಲೆಲ್ಲಿನಿರಯಕಮ್ಮರಿ ಮಿಟ್ಟೆಗಳುಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು 13ವ್ಯಾಳ್ಯವರಿತು ತತ್ವಸಂಧಿಯ ಒಲಿದುಸೂಳಿ ಮದೆಂಟರ ಕೈಸೆರೆವಿಡಿದುಕಾಲಾಖ್ಯ ತಳವಾರನಾಳಿಗೆ ಕೊಟ್ಟುಮ್ಯಾಳದ ಗೆಳೆಯರು ಸಂತೋಷಪಟ್ಟು 14ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತಡೊಂಬಿಯಿಲ್ಲದೆ ಬಂದ ಬನ್ನವಬಡುತಕುಂಭಿಣಿಸುರ ಕುಲ ಭೂಮಿಗೆ ಬಂದುದಂಭ ಮಾಡದಲೆ ಕುರುಳ ಒಯ್ಯಿರೆಂದು 15ರಾಗ ಮತ್ಸರಗೂಡಿದರ ಕುರುಳನೊಟ್ಟಿಭೂಗಗನ ಹೊಗುವ ಕಾಮವಕಟ್ಟಿಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿಮ್ಯಾಗ ವಿಜ್ಞಾನಗ್ನಿ ಹಾಕಬೇಕಲ್ಲಿ 16ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದುಲಾಭಕ್ಕೆ ಕುಣಿಯಲು ವೇತ್ರರು ಹೊಯ್ದುಶೋಭನ ರಸ ಬೊಬ್ಬೆಯ ಸಾಧುಹಿಂಡುತ್ರಿಭುವನಪತಿಕಾಮನಯ್ಯನ ದಂಡು17ಸ್ವರ್ಧುನಿಜನಕನ ಗುಣಗಣಕೀರ್ತಿಊಧ್ರ್ವಸ್ವರದಿ ಹಾಡಿ ಹೊಗಳುವಅರ್ಥಿನಿರ್ಧೂಮಜ್ವಾಲೆಯ ಬೆಳಗಲಿ ಸುತ್ತಿದುರ್ದೇಹಿಗಳ ಕಿವಿಧಾರೆಯ ಕಿತ್ತಿ 18ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟುಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟುಕೋವಿದರ ಚಾತುರ್ಯಕೆ ಒಡಂಬಟ್ಟು ಚಿದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು 19ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದುರಂಗು ಮುತ್ತಿನ ಮೂಗುತಿ ಹೆಣ್ಣವಿಡಿದುಶೃಂಗಾರ ಚೇಷ್ಟೆಯ ಮಾಡಿರೊಜಡಿದು20ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿಗೆಳೆಯರು ನೆರೆವುದೊಂದೆ ತಾಣ ನೋಡಿಜಲಜಾಕ್ಷನುದ್ಯಮದಂಗಡಿಯಲ್ಲಿನಲಿವ ಸ್ವಾನಂದದೂಟವ ಬೇಡಿಕೊಳ್ಳಿ 21ತಿರುತಿರುಗಿ ಬಂದು ದಣಿದು ನೀವಿಂದುಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದುಥರ ಥರದ್ಹದಿನಾರು ವರ್ಣಗಳಿಂದತರುಣ ತರಣಿಯಂತೆ ಹೊಳೆವುದು ಚಂದ 22ಆನಂದಮಯವಾಸುದೇವನ ಕಂಡುಆನಂದಪುರದಿ ಭಕ್ತಿಯ ನೆರೆಗೊಂಡುಆನಂದ ತೀರ್ಥಗುರು ಕೃಪೆಯಿಂದಸ್ವಾನಂದದೋಕುಳಿಯಾಡುವ ಚಂದ 23ಈ ವಿಧ ಅಧ್ಯಾತ್ಮ ಹೋಳಿಯ ಭೇದಭಾವುಕ ಜನರಿಗೆ ಪರಮಾಹ್ಲಾದದೇವ ಋಷಿಕುಲದೈವ ಮುಕುಂದಕಾವನು ಕರುಣಾಬ್ಧಿಕೇಳಿಗೋವಿಂದ24ವೇದನ ತಂದ ಹಯಾಸ್ಯನ ಹೋಳಿಭೂಧರಧರಿಸಿದಮರ ಕಾರ್ಯಕೇಳಿಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರಹ್ಲಾದನಿಷ್ಠೆಗೆಹರಿಉದಿಸಿದಕೇಳಿ25ನಾನೆಂಬೊ ದಾನವೇಂದ್ರನ ಮದ ಹೋಳಿಹೀನರಿಗಾಗಿ ಕೊಡಲಿ ಹೊತ್ತಕೇಳಿಜಾನಕಿ ತಂದ ದಶಾಸ್ಯನ ಹೋಳಿಮಾನಿನಿಯರಾಳ್ದ ವಿಡಂಬನಕೇಳಿ26ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿಉನ್ಮತ್ತಕಲಿಯನರಸಿ ಕೊಂದಕೇಳಿಚಿನ್ಮಯಮೂರ್ತಿ ಭೂಭಾರವ ಹೋಳಿಜನ್ಮಿಸಿಬಹುದೆಲ್ಲ ಮೋಹನಕೇಳಿ27ಅನಂತದುರಿತರಾಶಿಗಳನ್ನು ಹೋಳಿಆನಂದ ಸುಖವೀವ ನೆನೆದರೆಕೇಳಿಅನಂತ ಅನವದ್ಯಗುಣ ಪರಿಪೂರ್ಣಅನಂತಾದ್ಭುತಕರ್ಮದೀನ ದಯಾರ್ಣ28ಈಪರಿವಿಜ್ಞಾನವಸಂತದಾಟಚೌಪದಿ ರತ್ನಮಾಲಿಕೆ ಮಾಡಿ ಪಾಠಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣತಾ ಪರಿಪಾಲಿಪ ಪುರುಷವರಿಷ್ಠ 29
--------------
ಪ್ರಸನ್ನವೆಂಕಟದಾಸರು
ನನ್ನಯ್ಯ ನೀನೊಬ್ಬನೆ ಮಾರುತಿವರದ ಪ.ಉನ್ಮತ್ತತಂದೆ ಕೊಲ್ಲಲು ಒಯ್ಯಲು ತಾಯಿಚಿನ್ನನ್ನುಳಿಸಿಕೊಂಡಳೆ ಬನ್ನವನುಣ್ಣುತನಿನ್ನಿಚ್ಛೆಯೆನ್ನಲು ವಹ್ನಿವಿಷಾನ್ನವ ತಣ್ಣಸವೆನ್ನಿಪೆ ತನ್ನವರಿನ್ನ್ಯಾಕೊ ನರಹರಿಯೆ 1ಉತ್ತಾನಪಾದಿ ಮುನಿದು ಅಡವಿಯ ದಾರಿಹತ್ತಿ ನಿರಾಲಂಬದಿ ಉತ್ತಮ ಮಂತ್ರನಾರದಿತ್ತರೆ ಭಕ್ತಿಂದ ಅತ್ತಿತ್ತಾಗದ ಚಿತ್ತಕೆ ಒಲಿದೆಹೆತ್ತವರೊತ್ತಾದರೆವಾಸುದೇವ2ಅಗ್ರಜಾವಜÕ ಮಾಡಲು ವಿಭೀಷಣಶೀಘ್ರ ಪಾದಾಬ್ಜಕೆರಗಲು ವ್ಯಗ್ರಪ್ಲವಗಗ್ರರು ಉಗ್ರದಿ ನಿಗ್ರಹಿಸೆ ಆಗ್ರಹಿಸಿದೆ ಭಕ್ತಾಗ್ರಣಿ ಹನುಮ ಮತಾಗ್ರದಿ ಪ್ರಸನ್ವೆಂಕಟ 3
--------------
ಪ್ರಸನ್ನವೆಂಕಟದಾಸರು
ನಂಬಿದೆ ನಾಗರಾಜ ಹರಿಯ ಪಾ-ದಾಂಭೋಜಭಕ್ತಿಭಾಜ ಪ.ಶಂಭುಶಕ್ರಾದ್ಯರು ಹಂಬಲಿಪರು ನಿನ್ನತುಂಬಿದ ಜೀವಕದಂಬಾಭಿಮಾನಿಯೆ ಅ.ಪ.ಸಾವಿರ ಜಿಹ್ವೆಯೊಳು ಹರಿಯ ಸ್ತುತಿಗೈವೆನಿರತಕೃಪಾಳುಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟುದೇವೇಶನಾದರು ಯಾವನು ಬಣ್ಣಿಪಶ್ರೀವಧೂವರನ ಕಮಲಪದ ರಾ-ಜೀವ ಸೌಂದರ್ಯವನು ತನ್ನಯಸಾವಿರಾಕ್ಷಿಗಳಿಂದ ಕಾಣುತಕೇವಲಾನಂದಾಬ್ಧಿ ಮಗ್ನನೆ 1ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆಧರಿಸಿದೆ ಸುಪ್ರಚಂಡವರರಘುರಾಮನಾವರಜ ಲಕ್ಷ್ಮಣನಾದೆಹರಿಕೃಷ್ಣರಾಯನ ಪಿರಿಯನಾಗಿ ಅವ-ತರಿಸಿ ಭೂಭಾರವನುರೆ ಸಂ-ಹರಿಸಿ ವೇದ ಪುರಾಣ ತತ್ತ್ವವಶರಣಜನರಿಗೆ ಬೋಧಿಸುವ ಮಹಾಕರುಣಿ ಕಮಲಾಕಾಂತನ ಭಕ್ತನೆ 2ಲಕ್ಷ್ಮೀನಾರಾಯಣನ ನಿದ್ರಾಸ್ಪದರಕ್ಷಿಸು ಕೃಪೆಯಿಂದೆನ್ನಸಾಕ್ಷಾದಚಲರೂಪ ನಿನ್ನೊಳು ನೆಲಸಿದಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸಮೋಕ್ಷ ಮಾರ್ಗಪ್ರದರ್ಶಿ ಸತತ ಮು-ಮುಕ್ಷು ಜನಮನಹರ್ಷ ನಿರ್ಜರ-ಪಕ್ಷ ಸುಫಲಪ್ರದ ಸದಾ ನಿರ-ಪೇಕ್ಷ ಗುರುವರ ರಾಕ್ಷಸಾಂತಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||ವಾಸವಾಗಿರೆ ವನದಿಮೃಗತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ 1ಖಳಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ 2ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ 3ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||ಪರಮಾತ್ಮನಿಗೆ ದೂತನಹುದುಶುಭವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ 4ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ 5ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ 6ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜಪಿತನಿಗೆ ಬಿನ್ನೈಸೊ ತಮ್ಮ 7ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ 8ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ 9
--------------
ಪ್ರಾಣೇಶದಾಸರು
ನರಜನ್ಮ ಬಂದುದಕೆ ಇಪ್ಪತ್ತು ಆರುಕಳೆ|ವರದೊಳಿಹ ಹರಿರೂಪ ಚಿಂತಿಸುವದೂ ಪಎರಡನಂತದ ಮ್ಯಾಲೆ ಒಂಬತ್ತಧಿಕ ನೂರು |ಸ್ವರುಪದೊಳಗಿಹವು ಆಮ್ಯಾಲೆ ಇಚ್ಛಾ ||ವರಣದಲಿ ಒಂದು ಲಿಂಗದಲಿ ಆರೊಂದಧಿಕ |ಅರುವತ್ತು ರೂಪಗಳು ಉಂಟು ಕೇಳೀ 1ಎಪ್ಪತ್ತರೊಂಬತ್ತಧಿಕ ನೂರು ಅವ್ಯಕ್ತ- |ಕಿಪ್ಪವು ಅವಿದ್ಯದೊಳು ಯೇಳು ಅಧಿಕಾ ||ಇಪ್ಪತ್ತುಕರ್ಮಕಾಮಾವರಣದಲಿ ಮೂರು |ಇಪ್ಪತ್ತು ಮೂರು ಅರುವತ್ತು ಎಂಟೂ 2ಮಾರಮಣ ಜೀವ ಪರಮಾಚ್ಚಾದಿಕೆರಡರೊಳು |ಬ್ಯಾರೆ ಬ್ಯಾರಿಪ್ಪ ಒಂಬತ್ತು ರೂಪಾ ||ನಾರಾಯಣಾದಿ ಐದರೊಳಗೊಂದೊಂದೇವೆ |ತೋರುತಿಹವಜಪಿತನ ವಿಮಲ ಮೂರ್ತೀ 3ಎರಡು ಲಕ್ಷೆರಡು ಸಾವಿರದ ನಾನೂರು ಈ- |ರೆರಡಧಿಕ ತೊಂಬತ್ತು ಅನಿರುದ್ಧದೀ ||ಮೆರವ ಶ್ರೀವಾಸುದೇವನಾರಾಯಣ ಕವಚದಿ |ಇರುವ ಒಂದೊಂದು ಆನಂದಮಯದೀ 4ಇನ್ನುವಿಜ್ಞಾನಮನವಾಙುï ಶ್ರೋತೃ ಚಕ್ಷು ಪ್ರಾ- |ಣನ್ನಮಯ ಹೀಗೆ ಯೇಳೊಂದರೊಳಗೇ ||ವನ್ನಜಾಕ್ಷನರೂಪಒಂದೊಂದೆ ಇಹವೆಂದು |ಚೆನ್ನಾಗಿ ಭಕ್ತಿಪೂರ್ವಕ ತಿಳಿವದೂ5ಸ್ಥೂಲವಾದಂಗದಲಿ ಮೂವತ್ತೆರಡು ಕೋಟಿ |ಯೇಳೂ ಲಕ್ಷದ ಮೇಲೆ ರಮ್ಯವಾಗೀ ||ಶ್ರೀಲೋಲ ತೊಂಬತ್ತು ಮೂರು ಸಾವಿರದ ಹದಿ- |ನೇಳಧಿಕ ಎಂಟು ಶತರೂಪದಲಿಹಾ 6ಈರನಂತ ಮೂವತ್ತೆರಡು ಕೋಟಿ ನವಲಕ್ಷ |ಆರಧಿಕ ತೊಂಬತ್ತು ಸಾವಿರೆಂಟೂ ||ನೂರು ಐವತ್ತೆಂಟು ರೂಪಗಳು ಸ್ತಂಭಾದಿ |ವಾರಿಜಭವಾಂತ ದೇಹಗಳೊಳೀಹವೂ 7ಮೋದತೀರ್ಥರ ಮತವ ಪೊಂದಿದವರೀರೂಪ|ಸಾದರದಿ ಚಿಂತಿಸುವದೇ ಮೋಕ್ಷಕೇ ||ಸಾಧನವಿದು ಸಾತ್ವಿಕರಿಗಲ್ಲದಲೆ ಅನ್ಯ- |ವಾದಿಗಳಿಗುಪದೇಶ ಮಾಡಸಲ್ಲಾ8ಪ್ರಾಣೇಶ ವಿಠ್ಠಲನ ಸುಮೂರ್ತಿ ಈ ಪರಿಯಿಂದ |ಧ್ಯಾನಕ್ಕೆ ತಂದು ಹಿಗ್ಗದಲೆ ಬರಿದೇ ||ಏನು ಓದಿದರು ಕೇಳಿದರು ತಪ ಮಾಡಿದರು |ಆನಿ ತಿಂದಕಪಿತ್ಥದಂತೆರಿವದೂ 9
--------------
ಪ್ರಾಣೇಶದಾಸರು
ನಾಮ ಭಜೇ ಹರಿನಾಮ ಭಜೇಹರಿನಾಮ ಭಜೇಹರಿನಾಮ ಭಜೇಪಕಾಮಿತದಾಯಕ ಕಾಮಧೇನು ಭಕ್ತಪ್ರೇಮಮಂದಿರನ ನಾಮ ಭಜೇ ಅ.ಪವಂದಿತ ಅಜಹರಮಂದರಗಿರಿಧರಸುಂದರಮೂರುತಿಪಾದ ಭಜೇಸಿಂಧುಶಯನ ಗೋಪೀಕಂದ ಮುಕ್ಕುಂದಗೋವಿಂದನ ಆನಂದ ನಾಮ ಭಜೇ 1ಪಂಕಜಪಾಣಿಪಾದ ಕಿಂಕರಪಾಲಕಳಂಕಮಹಿಮನಾಪಾದ ಭಜೇಕೊಂಕಿನ ದೈತ್ಯರ ಬಿಂಕಮುರಿದ ಮಹಶಂಖಪಾಣಿಯ ನಾಮ ಭಜೇ 2ಶೇಷಶಯನ ಜಗದೀಶ ಪರಮಪ್ರಕಾಶ ನಿರಂಜನಪಾದ ಭಜೇವಾಸುದೇವಭವನಾಶ ಜಾನಕಿಪ್ರಾಣೇಶನ ವಿಮಲನಾಮ ಭಜೇ 3ನೀಲಮೇಘಶ್ಯಾಮಶೂಲಪಾಣಿಸಖಬಾಲಗೋಪಾಲನ ಶ್ರೀಪಾದ ಭಜೇಪಾಲ ಮೂಲೋಕನ ಮೇಲು ಮೇಲೆನ್ನುತಕಾಲಕಾಲದಿಸುನಾಮಭಜೇ4ಜಯ ಜಯಅಚ್ಯುತಜಯ ಜಯ ಸಚ್ಚಿತ್ತಜಯ ಜಯಾನಂತನಪಾದಭಜೇಜಯ ಜಯ ಸ್ಮರಪಿತ ಜಯ ಜಯ ಮುಕ್ತೀನಾಥಜಯವೆಂದು ಶ್ರೀರಾಮ ನಾಮ ಭಜೇ 5
--------------
ರಾಮದಾಸರು
ನಾರಾಯಣ ಎನ್ನಿರೊ - ಶ್ರೀ ನರಹರಿ |ನಾರಾಯಣ ಎನ್ನಿರೊ ಪ.ನಾರಾಯಣನೆಂದು ಅಜಮಿಳಕೈವಲ್ಯ |ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪಚೋರರ ಭಯ ಎಲ್ಲವೊ - ಇದಕೆ ನೋಡೈ - |ದಾರರಂಜಿಕೆ ಇಲ್ಲವೊ ||ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||ಘೋರ ಪಾತಕವೆಲ್ಲ ಹಾರಬಿಡುವುದಿದು 1ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |ಬೇಸತ್ತು ತಿರುಗಲೇಕೆ |ವಾಸುದೇವನ ನಾಮ ವರ್ಣಿಸಿದವರಿಗೆ |ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |ಮೌನ ಮಂತ್ರಗಳೇತಕೆ ||ದೀನರಕ್ಷಕ ಬೆಟ್ಟದೊಡೆಯನಾದವನ |ಧ್ಯಾನಕೆ ಸಮವುಂಟೆ ಪುರಂದರವಿಠಲನ 3
--------------
ಪುರಂದರದಾಸರು
ನಾರಾಯಣ ನಿನ್ನ ನಾಮದ ಸ್ಮರಣೆಯ |ಸಾರಮೃತವೆನ್ನ ನಾಲಗೆಗೆ ಬರಲಿ ಪಕೂಡುವಾಗಲು ನಿಂತಾಡುವಾಗಲು ಮತ್ತೆ |ಹಾಡುವಾಗಲು ಹರಿದಾಡುವಾಗ ||ಖೋಡಿವಿನೋದದಿ ನೋಡದೆ ನಾ ಬಲು |ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ 1ಊರಿಗೆ ಹೋಗಲಿ ಊರೊಳಗಿರಲಿ-|ಕಾರಾಣಾರ್ಥಗಳೆಲ್ಲ ಕಾದಿರಲಿ ||ವಾರಿಜನಾಭನರಸಾರಥಿಸನ್ನುತ|ಸಾರಿಸಾರಿಗೆ ನಾ ಬೇಸರಿಸದ ಹಾಗೆ 2ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ |ರಸ-ಕಸವಿರಲಿ ಹರುಷವಿರಲಿ ||ವಸುದೇವಾತ್ಮಜ ಶಿಶುಪಾಲಕ್ಷಯ ||ಅಸುರಾಂತಕ ನಿನ್ನ ಹೆಸರು ಮರೆಯದಂತೆ 3ಕಷ್ಟದಲ್ಲಿರಲಿ ಉತ್ಕøಷ್ಟದಲ್ಲಿರಲಿ-|ಎಷ್ಟಾದರು ಮತಿಗೆಟ್ಟಿರಲಿ ||ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ |ಅಷ್ಟಾಕ್ಷರ ಮಹಾಮಂತ್ರದ ನಾಮದ 4ಕನಸಿನೊಳಾಗಲಿ ಕಳವಳಿಕಾಗಲಿ |ಮನಸುಗೊಟ್ಟಿರಲಿ ಮುನಿದಿರಲಿ ||ಜನಕಜಾಪತಿ ನಿನ್ನ ಚರಣಕಮಲವನು |ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ 5ಜ್ವರ ಬಂದಾಗಲು ಚಳಿ ಬಂದಾಗಲು |ಮರಳಿ ಮರಳಿ ಮತ್ತೆ ನಡೆವಾಗಲು ||ಹರಿನಾರಾಯಣದುರಿತನಿವಾರಣ |ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ 6ಸಂತತಹರಿನಿನ್ನ ಸಾಸಿರನಾಮವ |ಅಂತರಂಗದಾ ಒಳಗಿರಿಸಿ ||ಎಂತೋ ಪುರಂದರವಿಠಲರಾಯನೆ |ಅಂತ್ಯಕಾಲದಲಿ ಚಿಂತಿಸುವಂತೆ 7
--------------
ಪುರಂದರದಾಸರು
ನಾಲಗೆ ನಾಲಗೆ ನಾಲಗೆ -ಸಿರಿ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಲೋಲನ ನೆನೆ ಕಾಣೊ ನಾಲಗೆ ಪ.ವಾಸುದೇವನ ನಾಮ ನಾಲಗೆ - ನೀಲೇಸಾಗಿ ನೆನೆ ಕಾಣೊ ನಾಲಗೆ ||ಆಸೆಯೊಳಗೆ ಬಿದ್ದು ಮೋಸ ಹೋಗಲು ಬೇಡ |ಕೇಶವನ ನಾಮವ ನೆನೆ ಕಾಣೊ ಮರುಳೆ 1ಮಾತನಾಡುವಲ್ಲಿ ನಾಲಗೆ - ನೀ ಅ - |ನೀತಿ ನುಡಿಯದಿರು ನಾಲಗೆ ||ಆತನ ನಾಮವ ಗೀತದಿ ಪಾಡುತ |ಸೀತಾಪತಿ ರಘುನಾಥನ ನೆನೆ ಕಾಣೊ 2ಅಚ್ಯುತನಾಮವ ನಾಲಗೆ ನೀ - |ಬಿಚ್ಚಿಟ್ಟ ನೆನೆ ಕಾಣೊ ನಾಲಗೆ ||ನೆಚ್ಚಿ ಕೆಡಲಿ ಬೇಡನಿಚ್ಚ ಶರೀರವ |ಅಚ್ಯುತನಾಮವ ನೆನೆ ಕಾಣೊ ಮರುಳೆ 3ನನ್ನದು ತನ್ನದು ನಾಲಗೆ - ನೀ- |ನೆನ್ನದಲಿರು ಕಾಣೊ ನಾಲಗೆ |ಇನ್ನು ಮೂರು ದಿನದೀ ಸಂಸಾರದಿ |ಪನ್ನಗಶಯನನ ನೆನೆ ಕಾಣೊ ಮರುಳೆ 4ಅನುದಿನ ಹರಿನಾಮ ನಾಲಗೆ - ನೀ|ನೆನೆಯುತಿರು ಕಾಣೊ ನಾಲಗೆ ||ಘನಮಹಿಮ ನಮ್ಮ ಪುರಂದರವಿಠಲನ |ಕ್ಷಣ ಕ್ಷಣಕೊಮ್ಮೆ ನೆನೆ ಕಾಣೊ ಮರುಳೆ 5
--------------
ಪುರಂದರದಾಸರು
ನಿಗಮವಿನುತ ಜಗವ ಭರಿತಬಗೆದು ಸಲಹೈ ವೆಂಕಟೇಶ ಪಶ್ರೀನಿವಾಸ ದೀನಪೋಷಧ್ಯಾನದಾಯಕ ವೆಂಕಟೇಶಮಾನದಿಂಪೊರೆಜ್ಞಾನಪಾಲಿಸಿನೀನೆಗತ್ಯನಗೆ ವೆಂಕಟೇಶ 1ಕಮಲನಾಭ ಕಮಲವದನಕಮಲಜಪಿತ ವೆಂಕಟೇಶಕಮಲಪಾಣಿ ಕಮಲನೇತ್ರಅಮಿತಮಹಿಮ ವೆಂಕಟೇಶ 2ಹೇಸಿಭವನ ವಾಸನ್ಹಿಂಗಿಸುವಾಸುದೇವವೆಂಕಟೇಶತಂದೆ ನಿಮ್ಮ ಹೊಂದಿ ಭಜಿಪಾನಂದ ಕರುಣಿಸು ವೆಂಕಟೇಶ 3ಕುಂದುನಿಂದೆ ದಂದುಗಂಗಳಬಂಧ ತಪ್ಪಿಸು ವೆಂಕಟೇಶತಂದೆ ನಿಮ್ಮ ಹೊಂದಿ ಭಜಿಪಾನಂದ ಕರುಣಿಸು ವೆಂಕಟೇಶ 4ಸತ್ಯ ಸನ್ಮಾಗ್ರ್ಯಕ್ತನೆನಿಸೆನ್ನಮೃತ್ಯು ಸಂಹರ ವೆಂಕಟೇಶನಿತ್ಯನಿಮ್ಮಡಿಭಕ್ತನೆನಿಸೆನ್ನಕರ್ತುಶ್ರೀರಾಮ ವೆಂಕಟೇಶ5
--------------
ರಾಮದಾಸರು
ನಿನಗೆ ತಿಳಿದಂತೆ ಮಾಡುವದಯ್ಯ ಬೇಡೆನಲು |ಯನಗೆ ಸ್ವಾತಂತ್ರ್ಯವುಂಟೇ ||ಮನಸಿಜಪಿತ ನಿನ್ನ ಮೀರಿ, ಸಿರಿ, ವಿಧಿ,ಶರ್ವ|ತೃಣ ಮುರಿಯೆ ಶಕ್ತರಲ್ಲಾ ಹರಿಯೇ ಪಅಪಮಾನ ಮಾಡಿಸೊ ಕೋಪವನೆ ಹೆಚ್ಚಿಸೊಕೃಪಣತನದಲ್ಲಿರಿಸೊ |ಅಪಹಾಸಗೈದಿಸೋ ಡಾಂಭಿಕದವನೆನಿಸೋಉಪವಾಸದಲ್ಲೇ ಇರಿಸೊ |ಕೃಪೆಯುಳ್ಳ ನರನೆನಿಸೋ ಮಾನವೆಗ್ಗಳ ಕೊಡಿಸೊಚಪಲ ಬುದ್ಧಿಯನೆ ಕಲಿಸೊ |ಅಪರಾಧವನೆ ಹೊರಿಸೊ ಬಲು ಭಯವ ತೋರಿಸೋತ್ರಿಪುರಾಂತಕರ್ಚಿತ ಪದ ಹರಿಯೇ 1ಬೈಸು ಬೈದಾಡಿಸೊ ಬಾಂಧವರನಗಲಿಸೊಹೇಸಿಕೆಯು ಲಜ್ಜೆ ತೋರಿಸೊ |ಗ್ರಾಸವನೇ ಉಣಿಸೋ ನರರಾಲಯವ ಕಾಯಿಸೋಕ್ಲೇಶನಿತ್ಯದಲಿ ಬಡಿಸೊ |ಆಶೆಯನು ಜರಿಸು ಕೈಕಾಲುಗಳ ಕುಂಠಿಸೊದೋಷಕ್ಕೆ ಮನವಂಜಿಸೋ |ವಾಸುದೇವನೆ ನಿನ್ನ ವ್ರತವ ಮಾಡಿಸುವಂದುದೇಶ ಬಹುಕಡೆಗೆ ತಿರುಗಿಸೊ ಹರಿಯೇ2ಕವನಗಳ ಪೇಳಿಸೊಕರ್ಮಬಾಹಿರನೆನಿಸೊಭುವನದೊಳು ಭಂಡನೆನಿಸೊ |ಕವಿಸು ಅಜ್ಞಾನವನು ಸನ್ಮತಿಯ ಪ್ರೇರಿಸೊಕಿವಿ ಮಾತ್ರ ದೃಢದಲಿರಿಸೋ |ಜವನ ಸದನದ ಪೊಗಿಸೋ ಬಂಧಾನದೊಳಗಿರಿಸೊತವ ದಾಸರೊಳು ಕೂಡಿಸೊ |ದಿವಿಜರೊಲ್ಲಭ ನ್ಯಾಯವನ್ಯಾಯವನೆಮಾಡುಭವಪಂಕದೊಳು ಮುಳುಗಿಸೋ ಹರಿಯೇ 3ಹೆತ್ತವರ ಸೇವೆ ಮಾಡಿಸೊ ನೀಚರ ಬಳಿಯತೊತ್ತು ಕೆಲಸವ ಮಾಡಿಸೋ |ಚಿತ್ತ ಚಂಚಲಗೊಳಿಸೊ ವೈರಾಗ್ಯ ಪುಟ್ಟಿಸೊಉತ್ತಮರ ನೆರೆಯಲಿರಿಸೊ |ಮುತ್ತಿನಾಭರಣಿಡಿಸೊ ತಿರುಕೆಯನೆ ಬೇಡಿಸೊವಿತ್ತಸಂಗ್ರಹ ಮಾಡಿಸೊ |ಮುತ್ತೆಗೊಲಿದಿಹನೆ ವಿಷ ಕುಡಿಸೊ ಅಮೃತವುಣಿಸೊಮತ್ತೊಬ್ಬರಾರು ಗತಿಯೋ ಹರಿಯೇ 4ಸಾಲಗೊಯ್ಯನಮಾಡುಕಂಡ ಕುಲದಲಿ ತಿನಿಸುಕೀಳು ಮನುಜರ ಪೊಂದಿಸೋ |ನಾಲಿಗೆಗೆಡಕನೆನಿಸೊ ಸತ್ಯ ವಚನಿಯು ಎನಿಸೊಸ್ಥೂಲ ಪುಣ್ಯವ ಮಾಡಿಸೋ |ಕೇಳಿಸೋ ಸಚ್ಛಾಸ್ತ್ರ, ನೀತಿಯರಿಯನು ಎನಿಸೋಆಲಯದಿ ಸುಖದಲಿರಿಸೋ |ಮೂಲೋಶ ಪತಿಯೆಹರಿಕುದುರೆಯೇರಿಸೊ ಮತ್ತೆಕಾಲು ನಡಿಗೆಯಲೆ ನಡೆಸೊ ಹರಿಯೇ 5ಅರಸು ಪದವಿಯ ಕೊಡಿಸೊಕಾಷ್ಠಭಾರವ ಹೊರಿಸೊಪರದೂಷಣೆಯ ಮಾಡಿಸೊ |ಮರ್ಯಾದೆಗಳು ತಿಳಿಸು ಅತಿಮೂಢನೆಂದೆನಿಸೊನಿರುತ ರೋಗದಲಿ ಇರಿಸೋ |ಕರೆಕರೆಯ ಹಿಂಗಿಸೊ ದಿವ್ಯ ವಸನವನುಡಿಸೊಸುರಗಂಗಿ ತಡಿಯೊಳಿರಿಸೊ |ಪರಮಾತ್ಮನೆ ವಂಧ್ಯನೆನಿಸೊ ಸುತರನ್ನೆ ಕೂಡೊಮರಿಸೋ ದುರ್ವಿಷಯಗಳನೂ ಹರಿಯೆ6ಮಾಕಾಂತ ಪ್ರಾಣೇಶ ವಿಠಲ ನೀನಿತ್ತುದಕೆಶೋಕಿಸಲು ಸಲ್ಲದಯ್ಯ |ಆ ಕುಂಭೀಪಾಕ ಮೊದಲಾದ ನರಕದೊಳೆನ್ನಹಾಕಿದರೂ ಒಳಿತೆ ಜೀಯಾ |ಈ ಕಲಿಯುಗದಿಪಂಚಭೇದತಿಳಿಯದ ದೈತ್ಯರಾಕುಲದೊಳಿರಿಸಬೇಡ |ಶ್ರೀ ಕಾಳೀಕಾಂತನರ್ಚನೆ ಸರ್ವ ಕಾಲದಲಿಬೇಕುಬಿನ್ನಪಲಾಲಿಸೋ ಹರಿಯೇ 7
--------------
ಪ್ರಾಣೇಶದಾಸರು
ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯಎನ್ನ ಗುಣದೋಷಗಳ ಎಣಿಸಬೇಡಯ್ಯ ಪಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತುಮೇಲೆ ಯೌವನಮದದಿ ಮುಂದರಿಯದೆ ||ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನುಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು 1ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲಕೇಶವನೆ ಕ್ಲೇಶವನು ನಾಶ ಮಾಡಯ್ಯ 2ಈ ತೆರದಿ ಕಾಲವನು ಕಳೆದೆ ನಾನಿಂದಿರೇಶಭೀತಿ ಮೋಹದಿ ಙ್ಞÕನರಹಿತನಾದೆ ||ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆದಾತಶ್ರೀಪುರಂದರವಿಠಲ ದಯಮಾಡೈ3
--------------
ಪುರಂದರದಾಸರು
ನಿನ್ನ ನೋಡಿ ಧನ್ಯನಾದೆನೊ - ಹೇ ಶ್ರೀನಿವಾಸ ಪನಿನ್ನ ನೋಡಿ ಧನ್ಯನಾದೆ ಎನ್ನ ಮನದಿ ನಿಂತು ಸುಪ್ರ-ಸನ್ನ ದಯಮಾಡಿ ನೀನು ಮುನ್ನಿನಂತೆ ಸಲಹ ಬೇಕೋ ಅ.ಪಲಕ್ಷ್ಮಿರಮಣ ಪಕ್ಷಿವಾಹನ ಲಕ್ಷ್ಮಿ ನಿನ್ನ ವಕ್ಷದಲ್ಲಿರಕ್ಷಣ ಶಿಕ್ಷಣ ದಕ್ಷ ಪಾಂಡವ ಪಕ್ಷ ಕಮಲಾಕ್ಷ ರಕ್ಷಿಸು 1ದೇಶದೇಶಗಳನು ತಿರುಗಿ ಆಶಾಬದ್ಧನಾದೆ ಸ್ವಾಮಿದಾಸನೆನಿಸಿ ಎನ್ನ ಜಗದೀಶ ಕಾಯೋ ವಾಸುದೇವ 2ಕಂತುಜನಕಕೊಟ್ಟು ಎನಗೆ ಅಂತರಂಗದ ಸೇವೆಯನ್ನುಅಂತರವಿಲ್ಲದೆ ಪಾಲಿಸಯ್ಯಹೊಂತಕಾರಿಪುರಂದರವಿಠಲ
--------------
ಪುರಂದರದಾಸರು