ಒಟ್ಟು 29700 ಕಡೆಗಳಲ್ಲಿ , 137 ದಾಸರು , 8961 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಸೇನ ನಾಥ ಹೋ, ತ್ರೈಲೋಕ್ಯ ವಿಖ್ಯಾತ ಹೋ |ಸವ್ಯಸಾಚಿ ಪ್ರೀತ ಹೋಮಧ್ಯಗೇಹಜಾತ ಹೋ ಪತರಣಿಬಿಂಬಕೆ ಜಿಗಿದೆ ಗದೆಯನು ವಗೆದೆಅಸುರಗ ಕರವನು ಮುಗಿದೆ |ಹರಿಗೆ ವಾರ್ತೆಯ ತಂದೆ ಜರಿಜನ ಕೊಂದೆನೀಂ ಬದರಿಯೊಳ್ನಿಂದೆ ಖಳಕುಲ |ತರಿದೆ,ವಜ್ರಶರೀರ, ಧರಣಿಯಭಾರವಿಳುಹಿದುದಾರಮತಿ, ಕಪಿ |ವರನೊಳತಿ ಕೃಪೆ ಮಾಡಿದೆ ದಾನವ |ಬೇಡಿದೆ ಸುಮತಿಯ ನೀಡಿದೆ 1ದಂಡ ಮೇಖಲ ಧಾರ ಕುಜನಕುಠಾರ|ಬ್ರಹ್ಮ ಶರೀರ ಜೈಸಿದೆಮಂಡೋದರಿ ವಲ್ಲಭನ ಚರಿಸಿದೆಯೋವನ|ತಂದೆ ಮಾಧವನ ಉಡುಪಿಲಿಚಂಡವಿಕ್ರಮರಾಮ ಸೇವಕ ಭೀಮ |ಸದಾಚಾರಧಾಮಯತಿ ಮೇ |ಷಾಂಡನ ಮೊರೆ ಕೇಳ್ದೆ ಕೀಚಕನನು ಸೀಳ್ದೆ ದ್ವಿಜಕುಲವಾಳ್ದೆ 2ಲಕುಮಿಗುಂಗುರವ ಕೊಟ್ಟಿ ರಣಕತಿ ಗಟ್ಟಿಶಾಟಿಯನುಟ್ಟಿ ಶರಧಿಯ ತ |ವಕದಿ ಕ್ಷಣದೊಳು ಹಾರಿದೆ ಉಗ್ರವ ತೋರಿದೆಜ್ಞಾನವ ಬೀರಿದೆ ಲಂಕೆಯ |ಸಕಲ ಸೌಖ್ಯವ ಕೆಡಿಸಿ ಪುಷ್ಪವ ಮುಡಿಸಿಐಕ್ಯವ ಬಿಡಿಸಿ, ವಟುವಪು |ಮುಕುತಿಪತಿಪ್ರಾಣೇಶ ವಿಠಲನದಾಸ ಸಲಹೋ ನಿರ್ದೋಷ3
--------------
ಪ್ರಾಣೇಶದಾಸರು
ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು ಪ.ಊರೂರ ನದಿಗಳಲಿಬಾರಿ ಬಾರಿಗೆ ಮುಳುಗಿ |ತೀರದಲಿ ಕುಳಿತು ನೀ ಪಣೆಗೆನಿತ್ಯ ||ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು - |ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು 1ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |ಆರಾರಿಗೋ ಹಣದ ದಾನಕೊಟ್ಟು |ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |ದಾರಿಯಾಯಿತೆ ಹೊರತು ಬೇರೆ ಫಲವುಂಟೇ? 2ಕಾಡುದೈವಗಳನ್ನು ಚಿನ್ನ - ಬೆಳ್ಳಿಗಳಿಂದೆ |ಮಾಡಿಕೊಂಡವರ ಪೂಜೆಯನೆ ಮಾಡಿ |ಕಾಡುಕಳ್ಳರು ಬಂದು ಅವುಗಳನು ಕೊಂಡೊಯ್ಯೆ |ಮಾಡಿಕೊಂಡಿರ್ದುದಕೆ ಬಾಯಬಡಕೊಳ್ಳುವೆ 3ಮಗನ ಮದುವೆಯು ಎಂದು ಸಾಲವನು ಮಾಡಿ ನೀ |ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ ||ಹಗರಣವ ಪಡಿಸಿದರೆ ಸಾಲಗಾರರು ಬಂದು |ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ 4ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು ? |ತಟ್ಟನೇ ಶ್ರೀಹರಿಯ ಪದವ ನಂಬಿ ||ದಿಟ್ಟ ಪುರಂದರವಿಠಲನೆ ಎಂದರೆ |ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು 5
--------------
ಪುರಂದರದಾಸರು
ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯಎನ್ನ ದಯದಿ ಪಾಲಿಸಯ್ಯ ಪನಿನ್ನ ಚರಣಾಂಬುಜವ ನಂಬಿದೆನೊ ಶ್ರೀ ಹರಿಯೆಬನ್ನು ಬಿದ್ದೆನು ಭವಬಂಧನವ ಬಿಡಿಸಯ್ಯ ಅ.ಪಅಮರೇಂದ್ರವಂದಿತನೆ ಅನಂತಮಹಿಮನೆಕಮಲಸಖಾನಂತಕರನೆ ||ಕಮಲಾಯತಾಂಬಕನೆ ಕಾಮಿತದಾಯಕನೆವಿಮಲಗುಣ ವಿಭೀಷಣಗೆ ಒಲಿದ ದಯದಿಂದಲೆನ್ನ1ಅಜಮಿಳ ಅಂಬರೀಷ ಅಕ್ರೂರ ವಿದುರಗೆಗಜರಾಜ ಗಿರಿಜೇಶಗೆ ||ನಿಜಭಕ್ತ ಪ್ರಹ್ಲಾದಅಜ ಧ್ರುವ ಅರ್ಜುನಗೆದ್ವಿಜ ಸುತ ರುಕ್ಮಾಂಗದರಿಗೊಲಿದ ದಯದಿಂದಲೆನ್ನ2ಅವರಂತೆ ನಾನಲ್ಲಅವರ ದಾಸರ ದಾಸಸವರಿ ಬಿಸುಟೆನ್ನ ದೋಷ ||ಪವಿತ್ರನ್ನ ಮಾಡಯ್ಯ ಪುಂಡಲೀಕ ವರದನೆಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ 3ಎಂದೆಂದು ನಿನ್ನ ಪಾದವೆನಗೆ ನೆಲೆಯಾಯಿತುಎಂದೆಂದು ನಿನ್ನ ನಾಮಭಜನೆ ||ಎಂದೆಂದು ನೀಯೆನ್ನ ಬಿಡದೆ ಪಾಲಿಸೊ ಸ್ವಾಮಿಅಂದು ಅಂಜನೆಕಂದನಿಗೆ ಒಲಿದ ದಯದಿಂದಲೆನ್ನ 4ಅಂತರಂಗದುಬ್ಬಸವ ಅಯ್ಯೋ ನಿನಗುಸಿರುವೆನುಚಿಂತೆಗಳ ಪರಿಹರಿಸೊ ||ಸಂತತ ಪಾಲಿಸೊಪುರಂದರ ವಿಠಲನೆಚಿಂತಿಪ ಗೌತಮನ ಸತಿಗೆ ಒಲಿದ ದಯದಿಂದಲೆನ್ನ 5
--------------
ಪುರಂದರದಾಸರು
ಇನ್ನೂ ದಯ ಬಾರದೇ-ದಾಸನ ಮೇಲೆ-ಇನ್ನೂ ದಯ ಬಾರದೇ ಪಮುನ್ನ ಮಾಡಿದ ದುಷ್ಕರ್ಮಗಳೆಲ್ಲವಮನ್ನಿಸಿ ಕಳೆವುದು ಇಂದಿರೆಯ ರಮಣಾ ಅ.ಪನಾನಾ ಜನ್ಮಗಳಲಿ ನಾನಾ ಜಾತಿಗಳಲಿನಾನಾ ಯೋನಿಗಳಲಿ ಜನಸಿ ಜನಿಸಿ ದೇವಾ ||ನಾನು ನನ್ನದು ಎಂದು ನರಕದೊಳಗೆ ಬಿದ್ದುನೀನೆ ಗತಿಯೆಂದು ಸ್ಮರಣೆ ಮಾಡಿದ ಮೇಲೆ 1ಕಾಮಾದಿ ಷಡುವರ್ಗ ಗಾಢಾಂಧಕಾರದಿಪಾಮರನಾಗಿ ಇದ್ದಂಥ ಪಾತಕನ ||ರಮಾಮನೋಹರಹರಿನೀನೇ ಗತಿಯೆಂದುನಾಮಾಮೃತವನು ಪಾನ ಮಾಡಿದ ಮೇಲೆ 2ಏನ ಓದಿದರೇನು ಏನ ಕೇಳಿದರೇನುಈ ನಾಮ ಸ್ಮರಣೆಗೆ ಸರಿಬಾರದು ||ಙ್ಞÕನಹೀನನ ಮೇಲೆ ದಯವಿಟ್ಟು ಪಾಲಿಸುದೀನ ದಯಾಕರಪುರಂದರವಿಠಲನೆ3
--------------
ಪುರಂದರದಾಸರು
ಇನ್ನೇನುಗತಿಎನಗೆಲೊ ಹರಿಯೆ |ನಿನ್ನನು ನೆನೆಯದೆ ಮೋಸಹೋದೆನಲ್ಲ ಪಅಂಕದೊಳಾಡುವ ಶಿಶುವಿನ ಮುದ್ದಿನ |ಬಿಂಕದ ನುಡಿಗಳ ಕೇಳುತಲಿ ||ಕಿಂಕಿಣಿಧ್ವನಿಯನು ಕಿವಿಗೊಟ್ಟು ಕೇಳುತ |ಮಂಕು ಹರಿಣನಂತೆ ಆದೆನಲ್ಲ 1ಪರವನಿತೆಯರ ಲಾವಣ್ಯಕೆ ಲೋಚನ |ಚರಿಸುತಲವರ ಕೂಟಕೆ ಬೆರಸಿ ||ಉರಿವ ಕಿಚ್ಚು ತನಗೆ ಹಿತವೆಂದು ಅದರೊಳು |ಎರಗಿದ ಪತಂಗದಂತಾದೆನಲ್ಲ 2ತೊಡೆಯೆಡೆ ಗುಹ್ಯಕಾಂಬೆನೊ ಕಾಣೆನೋ ಎಂದು |ಮಡದಿಯರಂಗಸಂಗವ ಮಾಡುತ ||ಒಡಲ ತೀಟಕೆ ಪೋಗಿ ಬಡಿಗಲ್ಲ ಕೆಡಹಿಕೊಂ-|ಡಡಗಿದ ಮೂಷಕನಂತಾದೆನಲ್ಲ 3ಸಲೆ ನಿಜ ವೃತ್ತಿಯ ಬಿಟ್ಟು ಪರಾನ್ನವ |ನಲಿದುಂಡು ಹೊಟ್ಟೆಯ ಹೊರೆಯುತಲಿ ||ಬಲೆಯ ತುದಿಯ ಮಾಂಸಕೆ ಬಂದೆರಗುತ |ಸಿಲುಕಿದ ವಿೂನಿ ನಂತಾದೆನಲ್ಲ 4ಲಂಪಟನಾಗಿ ನಾರಿಯರ ಮುಖಾಬ್ಜದ |ಸೊಂಪಿನ ಕಂಪನಾಘ್ರಾಣಿಸುತ ||ಸಂಪಿಗೆ ಹೂವಿನ ಮೇಲೆ ಮಲಗಿ ತನ್ನಸೊಂದಳಿದಳಿಯಂತೆ ನಾನಾದೆನಲ್ಲ 5ಇಂತು ಪಂಚೇಂದ್ರಿಯ ತಮತಮ್ಮ ವಿಷಯಕೆಮುಂತಾಗಿ ತಮ್ಮ ತಾವಲೆಯುತಿರೆ ||ಸಂತತ ತವತಮ ವಿಷಯಕೆ ಎಳಸಲುಕಾಂತಾರದರಸನಂತೆ ಆದೆನಲ್ಲ 6ಕಂದರ್ಪಲೀಲೆಯ ಗೆಲಿದುಳ್ಳ ಭಕ್ತಿಯ |ತಂದು ಪಂಚೇಂದ್ರಿಯಗಳಿಗೆನ್ನಯ ||ತಂದೆಪುರಂದರವಿಠಲನ ನೆನೆದರೆ |ಎಂದೆಂದಿಗೂ ಭವಬಂಧನ ಬಾರದಲ್ಲ 7
--------------
ಪುರಂದರದಾಸರು
ಇರಬೇಕು - ಹರಿದಾಸರ ಸಂಗವರಜ್ಞಾನಿಗಳ ದಯ ಸಂಪಾದಿಸಬೇಕು ಪ.ಅತಿಜ್ಞಾನಿಯಾಗಿ ಹರಿಕಥೆಯ ಕೇಳಬೇಕುಯತಿಗಳ ಪಾದಕ್ಕೆ ಎರಗಬೇಕುಸತಿ ಸುತರಿದ್ದು ಮಮತೆಯನು ಬಿಡಬೇಕುಗತಿಯೆಂದು ಬಿಡದೆ ಹರಿಯ ಪೋಪರಸಂಗ 1ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕುಬಿಡದೆ ಹರಿಯ ಪೂಜೆಯ ಮಾಡಬೇಕುಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕುಬಿಡದೆ ಹರಿಭಜನೆಯ ಮಾಡುವರ ಸಂಗ 2ಹರಿ - ಹರ -ವಿರಂಚಿಯರ ಪರಿಯ ತಿಳಿಯಬೇಕುತರತಮದಿ ರುದ್ರ - ಇಂದ್ರಾದಿಗಳಅರಿಯದಿದ್ದರೆ ಗುರುಹಿರಿಯರ ಕೇಳಬೇಕುಪರಮಾನಂದದಲಿ ಓಲಾಡುವರ ಸಂಗ 3ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉ -ತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕುವಿಷ್ಣುವಿನ ದಾಸರ ದಾಸನಾಗಲುಬೇಕುಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ 4ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕುಲೋಕೈಕನಾಥನ ಭಜಿಸಬೇಕುಸಾಕು ಸಂಸಾರವೆಂದುಕಕ್ಕುಲತೆ ಬೀಡಬೇಕುಶ್ರೀಕಾಂತಪುರಂದರವಿಠಲರಾಯನ ಸಂಗ5
--------------
ಪುರಂದರದಾಸರು
ಇರಬೇಕು ಇರದಿರಬೇಕು ಶ್ರೀ - |ಹರಿದಾಸರು ಸಂಸಾರದೊಳು ಪ.ಕುಲಸತಿಯಾದರೆ ಕೂಡಿರಬೇಕು |ಸುಲಭದಿಂದ ಸ್ವರ್ಗ ಸೂರಾಡಬೇಕು ||ಕಲಹ ಗಂಟಿಸತಿ ಕರ್ಕಶೆಯಾದರೆ |ಹಲವು ಪರಿಯಿಂದಲಿ ಹೊರಗಾಗಬೇಕು 1ಮಕ್ಕಳು ತಾವು - ಮತಿವಂತರಾದರೆ |ಅಕ್ಕರೆಯಿಂದಲಿ ಕೂಡಿರಬೇಕು ||ಚಿಕ್ಕತನದಿ ಬುಧ್ಧಿ ತೇರುಂಡರಾದರೆ |ಗಕ್ಕನೆ ಅಲ್ಲಿಂದ ಹೊರಗಾಗಬೇಕು 2ದುಷ್ಟರ ಕಂಡರೆ ದೂರವಿರಬೇಕು |ಶಿಷ್ಟರ ಕಂಡರೆ ಕೈಮುಗಿಯಬೇಕು ||ದಿಟ್ಟ ಶ್ರೀ ಪುರಂದರವಿಠಲರಾಯನ |ಗಟ್ಟಿಯಾಗಿ ಆತನ ನೆರೆನಂಬಬೇಕು 3
--------------
ಪುರಂದರದಾಸರು
ಇರಲೇ ಬಾರದು - ಇಂಥಲ್ಲಿಇರಬಾರದಿಂದ ......... ವರೆ ಭಯಂಕರದುರುಳ ಜನ ಸಹವಾಸದಲ್ಲಿ ದುಷ್ಟಮೃಗವಿದ್ದಡವಿಯಲ್ಲಿ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಉರಗಗಳು ಸೇರಿಕೊಂಡ ಸದನಗಳಲ್ಲಿಕರುಬರಿದ್ದ ಊರಗಳಲಿ ಕಲಹ ಹೆಚ್ಚಿದ ರಾಜ್ಯದಲ್ಲಿಪರಹಿಂಸೆಯ ಮಾಡಲಂಜದ ಪಾಪಿಗಳಿದ್ದಲ್ಲಿ 1ಅವಿವೇಕದ ಪ್ರಭುಸೇವೆಯಲ್ಲಿ ಆತ್ಮಸೌಖ್ಯವಿಲ್ಲದಲ್ಲಿಲವಶೇಶವು ಸದ್ವಿದ್ಯಾ ಮಾತ್ರ ಲಾಭವಿಲ್ಲದಲ್ಲಿನವಯೌವನಭರಿತ ನಾರಿ ತಾನೊಬ್ಬಳಿದ್ದಲ್ಲಿಅವನಿಯೊಳಗರ್ಥಪ್ರಾಪ್ತಿಇಲ್ಲದಂಥಲ್ಲಿ2ಮಾನವಲ್ಲದ ಸಭೆಯಲ್ಲಿ ಮಾತ ಕದಿವ ನ್ಯಾಯದಲ್ಲಿನೂನ್ಯಪೂರ್ಣ ಎನ್ನವವನ ಉಟ್ಟಕಾಲದಲ್ಲಿಶ್ರೀನಾಥ ಶ್ರೀ ಪುರಂದರವಿಠಲ ರೂಪಗಳುಅನಂತಾನಂತವೆಂದು ಅರಿಯದ ಅದ್ವೆಷ್ಣವರಲ್ಲಿ 3
--------------
ಪುರಂದರದಾಸರು
ಇಲ್ಲದಿಲ್ಲಾಗಿ | ಇಲ್ಲದ್ದೆಲ್ಲ ತಾನಾಗಿ |ತೋರುವದಾಶ್ಚರ್ಯ | ಆಶ್ಚರ್ಯ ||ಸಂಶಯಪಾರಮಾಡಯ್ಯ ||ಶಿಷ್ಯನ ಪ್ರಶ್ನವ ತಿಳಿದು | ಸದ್ಗುರು ಹರ್ಷದಿಪೇಳಿದನೊಲಿದು1xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಸತ್ಯ ಸ್ವರೂಪಾಶ್ರಯಿಸಿ ಅಸತ್ಯವು ಸತ್ಯಂತೆನಿಸಿ ||ಸತ್ಯಕಿರಣವಿಡಿದು ಮೃಗಜಲವಸತ್ಯವೆ ಆಗಿಹುದು ||ದಿಟ ರಜ್ಜುವು ಶಿಂಪಿರುತ || ಆಶ್ರಯಿ ದಿಟವೆನಿಸುವದಹಿ ರಜತಾ|| ಆಶ್ರಯದಾರೋಪೆಂದು | ತೋರುವದು ಸರೂಪದಧ್ಯಾತೆಂ(ನೆಂ)ದೂ || ಅಧ್ಯಾರೋಪಾಪವಾದಾ |ಶಂಕರ ತಾನಿವು ಪುಸಿಯಂದೊರೆದಾ5
--------------
ಜಕ್ಕಪ್ಪಯ್ಯನವರು
ಇಲ್ಲಿ ನೋಡಲು ರಾಮ ಅಲ್ಲಿ ನೋಡಲು ರಾಮ |ಎಲ್ಲೆಲ್ಲಿ ನೋಡಲು ರಾಯಚಂದ್ರನು ಪಮೂಲೋಕದಲ್ಲಿ ತ್ರೈಮೂರ್ತಿರೂಪಗಳಲ್ಲಿಎಲ್ಲೆಲ್ಲಿ ನೋಡಲು ಅಲ್ಲಲ್ಲಿ ರಾಮರೂಪ ಅ.ಪರಾವಣನ ಮೂಲಬಲವ ಕಂಡು ಕಪಿಗಳುಆವಾಗಲೆ ಹೊರಟೋಡುತಿರೆಈವಾಗ ನರನಾಗಿ ಇರಬಾರದೆಂದೆನುತದೇವ ರಾಮಚಂದ್ರ ಬಹುರೂಪ ತಾನಾದ 1ಅವನಿಗೆ ಇವ ರಾಮ ಇವನಿಗೆ ಅವ ರಾಮಬುವಿಯೊಳಗೆ ಬೇರೆ ರೂಪವುಂಟೆಅವನಿಯೊಳಿರುತಿಪ್ಪದುರುಳ ಜನರೆಲ್ಲಅವರವರೆ ಹೊಡೆದಾಡಿ ಹತವಾಗಿ ಹೋದರು 2ಹನುಮಂತಾದಿ ಸಾಧುಜನರು ಅಪ್ಪಿಕೊಂಡುಕುಣಿದಾಡಿದರು ಅತಿ ಹರುಷದಲಿಕ್ಷಣದಲಿ ಪುರಂದರವಿಠಲರಾಯನುಕೊನೆಗೆ ರಾಮಚಂದ್ರನೊಬ್ಬನಾಗಿ ನಿಂತ 3
--------------
ಪುರಂದರದಾಸರು
ಇಲ್ಲಿಯೇ ಕುಳಿತಿದ್ದ ಭೂತವು - ಒಂದುಹಲ್ಲಿಯು ನುಂತು ಹದಿನಾಲ್ಕು ಲೋಕವ............. ಪಸೂಳೆಯ ಮನೆಯಲಿ ಇದೆಯೊಂದು ಕೋಳಿ |ಕೋಳಿಯ ನಾಲಗೆ ಏಳು ತಾಳೆಯುದ್ಧ ||ಕೋಳಿ ನುಂಗಿತು ಏಳು ಕಾಳಿಂಗ ನಾಗನ |ಮೇಲೊಂದು ಬೇಡಿತು ಸಿಂಹದ ಮರಿಯ 1ಕಾನನದೊಳಗೊಂದು ಇರುವದು ಕೋಣ |ಕೋಣನ ಕೊರಳಿಗೆ ಮುನ್ನೂರು ಬಾವಿ ||ಕೋಣ ನೀರಿಗೆ ಹೋಗಿಕ್ಷೋಣಿ ಕಪಿಯ ಕೊಂದು |ಟೊಣ್ಣನ ಮನೆಯೊಳಗೌತನವಯ್ಯ...................... 2ವುಕ್ಷದಮೇಲೊಂದು ಸೂಕ್ಷ್ಮದ ಪಕ್ಷಿ |ಪಕ್ಷಿಭಕ್ಷಣವಾದ ಅಮೃತದ ಹೆಣ್ಣು ||ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ |ಶಿಕ್ಷೆಯ ಮಾಡಿದ ಪುರಂದರವಿಠಲ............ 3
--------------
ಪುರಂದರದಾಸರು
ಇಲ್ಲೆ ಕರೆಯ ಬ್ಯಾಡ ಕ್ಷುಲ್ಲಕರ ತಾಸುನಿಲ್ಲಿಸಿ ಹಾಸ್ಯ ಮಾಡಿ ಅಕ್ಕಯ್ಯ ಪ.ನಲ್ಲೆ ದ್ರೌಪತಿ ನಿನ್ನ ನಿಲ್ಲಿಸಿದವಗುಣಎಲ್ಲಮನಕೆತಾರೆ ಅಕ್ಕಯ್ಯ 1ವÀಂಚಕ ಗುಣದವರ ಮುಂಚೆ ನಿಲ್ಲಿಸಬೇಕುಪಾಂಚಾಲಿಬೇಡಿಕೊಂಬೆ ಅಕ್ಕಯ್ಯ 2ಬೂಟಕಗುಣದವರಪಾಟುಬಡಿಸುವಿ ತಾಸÀುಕೋಟಿ ಜನರು ನೋಡ ಅಕ್ಕಯ್ಯ 3ಗರುವಿನ ಗೊಂಬೆಯರ ಹಿರಿಯತನ್ಹಾಂಗಿರಲಿಕರವಮುಗಿಯೋಣವಂತೆ ನಾಳೆಗೆ ಅಕ್ಕಯ್ಯ4ಕೃಷ್ಣನ ಮಡದಿಯರ ಶ್ರೇಷ್ಠತನ ಹಾಂಗಿರಲಿಸಾಷ್ಟಾಂಗಕ್ಕೆರಗೋಣವಂತೆ ನಾಳಿಗೆ ಅಕ್ಕಯ್ಯ 5ನಿಂದಕರನ ತಾಸು ನಿಂದಿಸೋದುಚಿತವಂದಿಸುವೆನು ನಿನಗೆ ಅಕ್ಕಯ್ಯ 6ಸಿರಿರಮಿ ಅರಸನು ಭರದಿ ನಗುವಂತೆಇವರ ಗರವು ಮುರಿಯಬೇಕು ಅಕ್ಕಯ್ಯ 7
--------------
ಗಲಗಲಿಅವ್ವನವರು
ಇಲ್ಲೇ ವೈಕುಂಠ ಕಾಣಿರೊ -ಸಿರಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಲ್ಲಭನಂಘ್ರಿಯ ನೆರೆನಂಬಿದವರಿಗೆ ಪ.ನುಡಿಯೆರಡಾಗದೆ ಕಡುಕೋಪ ಮಾಡದೆ |ಬಡತನ ಬಂದರು ಲೆಕ್ಕಿಸದೆ ||ಬೆಡಗು ಹೆಣ್ಣುಗಳ ಕಡೆಗಣ್ಣೊಳು ನೋಡದೆ |ಧೃಡಚಿತ್ತದಲಿ ಶ್ರೀ ಹರಿಯ ನಂಬಿದವರಿಗೆ 1ಪಕ್ಷಪಾತವಿಲ್ಲದನ್ನದಾನಂಗಳನು - |ಪೇಕ್ಷೆಯ ಮಾಡದೆ ಗುರುಹಿರಿಯರನು |ಮೋಕ್ಷವ ಬಯಸುತ ಅನ್ಯಾಯವಳಿಯುತ |ಲಕ್ಷ್ಮೀನಾರಾಯಣನ ಬಿಡದೆ ಧೇನಿಪರಿಗೆ 2ಪರಹಿತವನು ಮಾಡಿ ಕೆರೆಬಾವಿಗಳ |ಅರವಟಿಗೆಯ ಸಾಲಮರವ ಹಾಕಿ ||ಸಿರಿಪುರದರಸು ಶ್ರೀ ಪುರಂದರವಿಠಲನ |ಸ್ಥಿರಚಿತ್ತದಲಿ ಬಿಡದೆ ಸ್ಮರಿಸುತಲಿ ಹರಿಗೆ 3
--------------
ಪುರಂದರದಾಸರು
ಇವ ಬಲು ಕಳ್ಳ ನಮ್ಮಮಾಧವಬಲು ಸುಳ್ಳನವನವÀ ಗುಣಗಳ ಹಿಡಿಸಿದನ್ಹಳ್ಳ ಪ.ನಿತ್ಯತೃಪ್ತನೆಂಬೊ ಸ್ತುತ್ಯಾರ್ಥ ನಿನ್ನ ಬಿಟ್ಟುಎತ್ತ ಹೋದವಯ್ಯ ನಮಗ್ಹೇಳೊ ಯದುಪತಿಎತ್ತ ಹೋದವಯ್ಯ ನಮಗ್ಹೇಳೊ ಯದುಪತಿತುತ್ತನ್ನ ನಿನಗೆ ಫನವೇನೊ ಯದುಪತಿ 1ಮುನ್ನಶಬರಿ ಎಂಜಲಪನ್ನಿಪಾವನ್ನೊ ನಿನಗೆಅನಸ್ತಾವೆಂಬೊ ಶೃತಿಗಳು ಯದುಪತಿಅನಸ್ತಾವೆಂಬೊ ಶೃತಿಗಳು ಹೊಗಳುತ ನಿನ್ನಲ್ಲೆಹ್ಯಾಂಗ ಇರಬೇಕೊ ಯದುಪತಿ 2ಪಟ್ಟದ ರಾಣಿ ಲಕುಮಿ ಎಷ್ಟು ಗುಣವಂತಳಲ್ಲೊಅಷ್ಟು ಭಾವದಲೆ ಚಲುವಳೊ ಯದುಪತಿಅಷ್ಟು ಭಾವದಲೆ ಚಲುವಳೊಕುಬ್ಜಿಯಂಥಸೊಟ್ಟ ಹೆಣ್ಣಿಗ್ಯಾಕೆ ಮನಸೋತೆÀ್ಯೂ ಯದುಪತಿ 3ಎಷ್ಟು ಸೃಷ್ಟಿಯ ಮಾಡಿಪುಟ್ಟ ಲವಕುಶರ ಪಡೆದಿಸೃಷ್ಟಿ ಮಾಡಿದ್ದು ಮರೆತೆನೊ ಯದುಪತಿಸೃಷ್ಟಿ ಮಾಡಿದ್ದು ಮರೆತೆನೊ ನಾಭಿಯಲ್ಲಿಪುಟ್ಟಿದ ಬೊಮ್ಮನಗುತಾನೊ ಯದುಪತಿ 4ರುದ್ರನ ಭಜನೆ ಮಾಡಿ ಪ್ರದ್ಯುಮ್ನನ ಪಡೆದಿವಿದ್ವಜ್ಜನರೆಲ್ಲ ನಗುತಾರೊ ಯದುಪತಿವಿದ್ವಜ್ಜನರೆಲ್ಲ ನಗುತಾರೊ ಶ್ರೀಧ ಶ್ರೀಧವಿದ್ಯವನೆÀಲ್ಲ ಮರೆತೇನೋ ಯದುಪತಿ 5ಸ್ವರಮಣನೀನೆಂಬೊ ಸ್ವರ ಗೈವ ಶೃತಿಗಳುಹರಿದಾವೇನೊ ಜಲದೊಳುಹರಿದಾವೇನೊ ಜಲದೊಳು ಗೊಲ್ಲತಿಯರ ಬೆರೆದಕಾರಣವ ನಮಗೆ ಹೇಳೊ ಯದುಪತಿ 6ಧೀರ ಗಂಭೀರನೆಂದು ಸಾರುವ ಶೃತಿಗಳುಹಾರಿದವೇನೊ ಮುಗಿಲಿಗೆಹಾರಿದವೇನೊ ಮುಗಿಲಿಗೆ ರಮಿಯರಸುಪೋರತನವೆಂದು ನಗತಾರೊ ಯದುಪತಿ 7
--------------
ಗಲಗಲಿಅವ್ವನವರು
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು