ಒಟ್ಟು 32405 ಕಡೆಗಳಲ್ಲಿ , 137 ದಾಸರು , 8458 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಗಲುಬಹುದು ನಗಲುಬಹುದುನಗು ನಗು ರಂಗಯ್ಯಜಗದ ಮಾತು ಅ‌ಘದ ಧಾತುಬಗೆಯನರಿತು ಮುಗಳುನಗೆಯ ಪ.ಒರೆದು ಒರೆದು ಭಾರತದರ್ಥಅರಿದುಅರಿದುವರಭಾಗವತಪರಿಯ ಪರಿಯ ಪುರಾಣಶ್ರ್ರುತಿಯಪಾರಾಯಣ ಮಾಡಿ ಕುರುಡಬಧಿರನರರ ತೆರದಿಅರಹುಮರಹುಬೆರೆತು ಬೆರೆತು ತರತಮಿಲ್ಲದೆಹರಿಹರಜರು ಬೇರೆಬೇರಿಲ್ಲೆಂಬಪರಮಪಾತಕರಿರವ ನೋಡಿ 1ಮಕ್ಕಳ ಮಡದೇರಕ್ಕರ ಬಡಿಸಿರೊಕ್ಕದ ಮದದಿ ಸೊಕ್ಕಿ ಸಜ್ಜನರಲೆಕ್ಕಿಸದವಗೆ ರಕ್ಕಸರಂತೆನಿಕ್ಕರ ನುಡಿದು ಕಕ್ಕಸದಿಂದಪುಕ್ಕಟೆ ಪುಣ್ಯದ ಲೆಕ್ಕವ ಕಳೆದುಘಕ್ಕನೆ ಜವನೋರಿಕ್ಕಿದ ಬಲೆಗೆಸಿಕ್ಕಿ ಬಳಲುತ ನರ್ಕವನುಂಬಮೂರ್ಖರ ತಾಮಸಮುಖ್ಯರ ನೋಡಿ 2ಸುಂದೋಪಸುಂದ ಜಲಂಧರ ಕೀಚಕಕಂದರದಶಕ ಸೈಂಧವ ಜಟಾದ್ಯರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿಗುಂದಿ ಲಯವಾದರೆಂದುಕೇಳಿಇಂದುಮುಖಿಯರ ಚಂದಕೆ ಹುಚ್ಚಿಟ್ಟುಕಂದರ್ಪವಿಶಿಖವೃಂದ ವಶಾಗಿ ನೂರೊಂದುಕುಲ ಯಮಮಂದಿರ ಹೊಂದಿಪಮಂದರಮದೋನ್ಮತ್ತಾಂಧರ ನೋಡಿ3ಸುರರ ಸಂಪದ ಪರಮಪದಕೆಕಾರಣವಾಗಿರೆ ಸುರೇತರರೆಲ್ಲಇರುಳೆ ಹಗಲೆ ಸೈರಿಸಲಾರದೆಒರಗಿಹೋದ ವಿವರಕೇಳಿದುರುಳಕೌರವರ್ವರ ಪಾಂಡವರಸಿರಿತಮ್ಮದೆಂದ್ಹುರಿದು ಹೋಗಿರೆಪರರ ದ್ರವ್ಯಕ್ಕೆ ಮರುಗಿ ಬಯಸಿನರರು ಕೆಡುವ ಪರಿಯ ನೋಡಿ 4ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವಮತ ಮಹಿಮೆಯನತಿಕ್ರಮಿಸಿ ಕುತ್ಸಿತವೆನಿಸುವ ಪಥದಲಿಪತಿತರಾಗಿ ಸದ್ಗತಿಯ ಕಾಣದಚತುರ ಪರಿಯ ಅಮಿತ ಭಕ್ಷಕರಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟಪತಿಯೆ ನೀ ಮಂದಸ್ಮಿತದಲಿ 5
--------------
ಪ್ರಸನ್ನವೆಂಕಟದಾಸರು
ನಗೆಯು ಬರುತಿದೆ - ಎನಗೆನಗೆಯು ಬರುತಿದೆ ಪ.ಜಗದೊಳಿದ್ದ ಮನುಜರೆಲ್ಲಹಗರಣಮಾಡುವುದ ನೋಡಿಅಪಪರಸತಿಯರ ಒಲುಮೆಗೊಲಿದುಹರುಷದಿಂದಅವರ ಬೆರೆದುಹರಿವ ನೀರಿನೊಳಗೆ ಮುಳುಗಿಬೆರೆಳನೆಣಿಸುವರ ಕಂಡು 1ಪತಿಯ ಸೇವೆ ಬಿಟ್ಟು,ಪರಸತಿಯ ಕೂಡೆ ಸರಸವಾಡಿಸತತ ಮೈಯ ತೊಳೆದು ಹಲವುವ್ರತವ ಮಾಡುವರ ಕಂಡು 2ಹೀನಗುಣವ ಮನದೊಳಿಟ್ಟುತಾನು ವಿಷದ ಪುಂಜನಾಗಿಮಾನಿ ಪುರಂದರವಿಠಲನಧ್ಯಾನ ಮಾಡುವವರ ಕಂಡು 3
--------------
ಪುರಂದರದಾಸರು
ನಡುಮನೆಯೊಳಗೊಂದು ನಾಲ್ಕು ತೆಂಗಿನಮರ -ಹೇ ಗಿಣಿ - ಹೇ ಗಿಣಿಯೇ |ಕಡೆಮೊದಲಿಲ್ಲದೆ ಅದುಕಾತು ಹಣ್ಣಾಯ್ತ - ಹೇಗಿಣಿಪ.ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ - ಹೇ ಗಿಣಿತಲೆಯೆಲ್ಲದವ ಬಂದು ಹೊತ್ತು ಕೊಂಡುಹೋದ - ಹೇ ಗಿಣಿ 1ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ - ಹೇ ಗಿಣಿಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ - ಹೇ ಗಿಣಿ 2ಬಲೆಯ ಹಾಕಿದರು ಬಲೆಯದಾಟುವದಯ್ಯ - ಹೇ ಗಿಣಿಚೆಲುವ ಪುರಂದರವಿಠಲನೇ ಬಲ್ಲ - ಹೇ ಗಿಣಿ 3
--------------
ಪುರಂದರದಾಸರು
ನಡೆದು ಬಾರಯ್ಯ ನೀನು ವೆಂಕಟರಾಯನಡೆದು ಬಾರಯ್ಯ ಭವಕಡಲಿಗೆಕುಂಭಸಂಭವವಿಜಯದಶಮಿ ಆಶ್ವೀಜಮಾಸ ಶುದ್ಧದಲ್ಲಿದಕ್ಷಿಣ ದಿಕ್ಕಿನಲ್ಲಿ ರಾಕ್ಷಸ ಸಮೂಹ ಒಂ-ಅಂಬುಜಾಕ್ಷನೆ ಬಾರೊ ಅಂಬುಜವದನನೆಮನಕೆ ಬಾರಯ್ಯ ಸುಧಾಮನಸಖಹರಿಯೆ ಸೋ-ಪರಿಪರಿಯಿಂದಲಿಕರವಮುಗಿದು ಸ್ತುತಿಸಿ
--------------
ಗೋಪಾಲದಾಸರು
ನಡೆಯೊ ನಿಮ್ಮಮ್ಮನೆಡೆಗೆ ಹೋಗುವ ನಿನ್ನತುಡುಗಬುದ್ಧಿಯನೆಲ್ಲ ಬಿಡಿಸುವೆ ಕಳ್ಳ ನಡೆ ಗಡಪ.ಏನೆಲೆ ಠÀಕ್ಕ ನಯನವೆ ಇಕ್ಕೆನಿನ್ನ ಮೈ ಹುದುಗಿಸಿದೆ ಬಾಯಿ ಜೊಲ್ಸುರಿಸಿದೆ 1ಕಂಬವಾಶ್ರೈಸಿದೆ ನಂಬೆ ವಂಚಿಸಿದೆದಂಭಪರಳಿದೆ ಕುಂಭಿಣಿಜಳ ಕೂಡ್ದೆ 2ಕೆನೆ ಮೊಸರು ಕದ್ದೆ ವಿನೀತೆರೊಂಚಿಸಿದೆಕೊನೆಗೋಡಿ ಹೋಗ್ವೆ ಪ್ರಸನ್ನವೆಂಕಟ ಕೃಷ್ಣ 3
--------------
ಪ್ರಸನ್ನವೆಂಕಟದಾಸರು
ನಡೆರಂಗ ನಡೆ ಕೃಷ್ಣ ನಡೆ ಮನೆಗೆಧೃಡ ಭಕ್ತರ ಕೂಡಿ ದ್ವಾರಕೆಗೆ ಪ.ಬಂದ ಜನರಿಗೆಲ್ಲ ಗಂಧ ಕುಂಕುಮವನಿಟ್ಟುತಂದು ತಾಂಬೂಲ ಕೊಡುತಲೆತಾಂಬೂಲ ಕೊಡುತಲೆ ರುಕ್ಮಿಣಿಕುಂದವ ಮಾಡಿ ಬಗೆಯದೆ 1ಮಿತ್ರೆ ದ್ರೌಪತಿದೇವಿ ಮತ್ತೆ ಪಾದಕ್ಕೆರಗಿಅತ್ಯಂತ ನಾವು ನುಡಿದೆವಅತ್ಯಂತ ನಾವು ನುಡಿದ ಅಪರಾಧವಚಿತ್ತದೊಳಿಡದೆ ಕರುಣಿಸು 2ಅರಗಿಳಿ ಮಾತಿನಹರದಿಸುಭದ್ರಾ ತಾನುಎರಗಿದಳುಭಾವೆಚರಣಕ್ಕೆಎರಗಿದಳುಭಾವೆಚರಣಕ್ಕೆ ರುಕ್ಮಿಣಿಯಪರಮಆಶೀರ್ವಾದ ಇರಲೆಂದು3ಅತ್ತಿಗೆಯರೆಂದು ಅರ್ಥಿಲಾಡಿದ ಮಾತುಮತ್ತೊಂದು ನೀವು ತಿಳಿಯದೆಮತ್ತೊಂದು ನೀವು ತಿಳಿಯದೆ ರಂಗನಮಿತ್ರೆಯರೆ ನಿಮ್ಮ ದಯವಿರಲಿ 4ಬಂದು ಪಾಂಡವರೆಲ್ಲ ಇಂದಿರೇಶಗೆ ಎರಗಿಚಂದಾಗಿ ತಾವು ಕೈ ಮುಗಿದುಚಂದಾಗಿ ತಾವು ಕೈ ಮುಗಿದು ನುಡಿದರುಕುಂದುಗಳೆಣಿಸದೆ ಸಲುಹೆಂದು 5ಭಾವಮೈದುನತನದಿ ನಾವೊಂದು ವಿನಯದಿಯಾವ ತಪ್ಪುಗಳ ಎಣಿಸದೆಯಾವ ತಪ್ಪುಗಳ ಎಣಿಸದೆ ಶ್ರೀ ಕೃಷ್ಣದೇವ ನೀ ಮಾಡೊ ದಯವನೆ 6ತಂದೆ ರಾಮೇಶಗೆ ನಾವಂದ ಮಾತುಗಳೆಲ್ಲಕುಂದವ ಮಾಡಿ ಬಗೆಯದೆಕುಂದವ ಮಾಡಿ ಬಗೆಯದೆ ನಮ್ಮನೆಗೆಬಂದು ಬಂದೊಮ್ಮೆ ಸಲುಹಯ್ಯ 7
--------------
ಗಲಗಲಿಅವ್ವನವರು
ನನಗೆ ಮನಕೆ ಬಡಿದಾಟೆಳೆದಾಟ ಶ್ರೀಸನಕಾದಿವಂದ್ಯ ಬಿಡಿಸಿ ಕಾಯೊದಾತಪ.ಸಲಿಲಸ್ನಾನವ ಮಾಡಿ ಊಧ್ರ್ವ ತಿಲಕವನಿಟ್ಟುನಳಿನಾಕ್ಷ ನಿನ್ನಂಘ್ರಿ ಜಪಿಸೆಂದರೆಛಲದಿಂದ ವಿಹಿತವಲ್ಲದ ದಾರಿಗೊಯ್ದೆನ್ನತೊಳಲಿಸಿ ನೆಲೆಗಾಣಿಸದೆ ಛಲವಿಡಿದಿದೆ 1ಬೇಡಿಕೊಂಡರೆ ಕೇಳದಾಡಿಕೊಂಡರೆ ಕೇಳದೀಡಾಡಿ `ಬಿಸುಟೆನ್ನ ದಣಿಸುತಿದೆನೋಡುನಾನಾಕ್ರೋಶ ಮಾಡಿದರಂಜದುಬಾಡಿ ಬಳಲಿದೆನೆನ್ನ ಕರುಣಿಲ್ಲವಿದಕೆ 2ಮನಪಶುಕಟ್ಟಲು ಜ್ಞಾನಧಂಗಡವಿಲ್ಲಘನವೈರಾಗ್ಯದ ಕಟ್ಟು ದೃಢವಿಲ್ಲವುಮಿನುಗುವ ಭಕುತ್ಯೆಂಬ ಎಳೆಹುಲ್ಲಿನಾಸಿಲ್ಲನೀನೆ ವಶಮಾಡಿಕೊ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ನನ್ನಯ್ಯ ನೀನೊಬ್ಬನೆ ಮಾರುತಿವರದ ಪ.ಉನ್ಮತ್ತತಂದೆ ಕೊಲ್ಲಲು ಒಯ್ಯಲು ತಾಯಿಚಿನ್ನನ್ನುಳಿಸಿಕೊಂಡಳೆ ಬನ್ನವನುಣ್ಣುತನಿನ್ನಿಚ್ಛೆಯೆನ್ನಲು ವಹ್ನಿವಿಷಾನ್ನವ ತಣ್ಣಸವೆನ್ನಿಪೆ ತನ್ನವರಿನ್ನ್ಯಾಕೊ ನರಹರಿಯೆ 1ಉತ್ತಾನಪಾದಿ ಮುನಿದು ಅಡವಿಯ ದಾರಿಹತ್ತಿ ನಿರಾಲಂಬದಿ ಉತ್ತಮ ಮಂತ್ರನಾರದಿತ್ತರೆ ಭಕ್ತಿಂದ ಅತ್ತಿತ್ತಾಗದ ಚಿತ್ತಕೆ ಒಲಿದೆಹೆತ್ತವರೊತ್ತಾದರೆವಾಸುದೇವ2ಅಗ್ರಜಾವಜÕ ಮಾಡಲು ವಿಭೀಷಣಶೀಘ್ರ ಪಾದಾಬ್ಜಕೆರಗಲು ವ್ಯಗ್ರಪ್ಲವಗಗ್ರರು ಉಗ್ರದಿ ನಿಗ್ರಹಿಸೆ ಆಗ್ರಹಿಸಿದೆ ಭಕ್ತಾಗ್ರಣಿ ಹನುಮ ಮತಾಗ್ರದಿ ಪ್ರಸನ್ವೆಂಕಟ 3
--------------
ಪ್ರಸನ್ನವೆಂಕಟದಾಸರು
ನಂಬದಿರು ಈ ದೇಹ ನಿತ್ಯವಲ್ಲ |ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೇ ಪ.ಎಲು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ |ಮಲಮೂತ್ರ ಒಳಗೆ ಕ್ರಿಮಿರಾಶಿಯಿಹವು ||ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು |ಹುಲುದೇಹವನು ನೆಚ್ಚಿ ಕೆಡಬೇಡ ಮನವೆ 1ಸತಿಸುತರು ಹಿತರೆಂದು ಮತಿಮರೆತು ಮಮತೆಯಲಿ |ಅತಿಕಾಂಕ್ಷಿಯಿಂದ ದುರ್ವಿಷಯ ಬಲಿದು ||ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ |ಗತಿಶೂನ್ಯನಾಗಿ ಕೆಡಬೇಡ ಮನವೆ 2ಪರರ ನಿಂದಿಸದೆ ಪರವಧಗಳನು ಬಯಸದೆ |ಗುರು - ವಿಪ್ರಸೇವೆಯನುಮಾಡು ಬಿಡದೆ ||ಹರಿಸ್ತುತಿಯ ನೀ ಕೇಳು ಹರಿಕೀರ್ತನೆಯ ಪಾಡು |ಪರಮಪುರಂದರವಿಠಲನೊಲಿದು ಪಾಲಿಸುವ3
--------------
ಪುರಂದರದಾಸರು
ನಂಬಬೇಡ ನಾರಿಯರನುಹಂಬಲಿಸಿ ಹಾರಯಿಸಬೇಡಅಂಬುಜಾಕ್ಷಿಯರೊಲುಮೆ ಬಯಲುಡಂಬಕವೆಂದು ತಿಳಿಯಿರೊ ಪ.ನೋಟವೆಲ್ಲ ಪುಸಿಯು - ಸತಿಯರಾಟವೆಲ್ಲ ಸಂಚು - ಸನ್ನೆಕೂಟವೆಲ್ಲ ಗನ್ನ - ಘಾತುಕನೋಟವೆಲ್ಲ ವಂಚನೆವಾತಬದ್ಧ ಹೆಂಗಳಲ್ಲಿಕೋಟಲೆಗೊಂಡು ತಿರುಗಬೇಡಮಾಟಗಾತಿಯರೊಲುಮೆ ಬಯಲುಬೂಟಕವೆಂದು ತಿಳಿಯಿರೊ 1ಸೋತನೆಂದು ವಿಟಗೆ ದೈನ್ಯಮಾತನಾಡಿ ಮರುಳಗೊಳಸಿಕಾತರವ ಹುಟ್ಟಿಸಿ ಆವನಮಾತೆ - ಪಿತರ ತೊಲಗಿಸಿಪ್ರೀತಿ ಬಡಿಸಿ ಹಣವ ಸೆಳೆದುರೀತಿಗೆಡಿಸಿ ಕಡೆಯಲವನಕೋತಿಯಂತೆ ಮಾಡಿ ಬಿಡುವಚಾತಿಕಾರ್ತಿ ಹೆಂಗಳೆಯರ 2ಧರೆಯ ಜನರ ಮೋಹಕೆಳಸಿಭರದಿ ನೆಟ್ಟು ಕೆಡಲುಬೇಡಎರೆಳೆಂಗಳ ಹೆಂಗಳೊಲುಮೆಗುರುಳೆ ನೀರ ಮೇಲಿನಮರೆಯಬೇಡ ಗುರುಮಂತ್ರವಸ್ಥಿರವಿಲ್ಲದ ಜನ್ಮದಲ್ಲಿಕರುಣನಿಧಿ ಪುರಂದರವಿಠಲನಚರಣಸ್ಮರಣೆ ಮಾಡಿರೊ3
--------------
ಪುರಂದರದಾಸರು
ನಂಬಿ ಚೊಕ್ಕಟಿಂಬು ಪಡೆಯಿರೈ ಪ.ಇಂಬುಪಡೆದು ಹರಿಯಚರಣಅಂಬುಜಬಂಡುಂಡು ಮಿಕ್ಕಹಂಬಲವ ಉಳಿದುಭೂರಿಸಂಭ್ರ್ರಮಿಸುವವರಕೇಳಿಅ.ಪ.ಹರಿವ ಮನವಕಟ್ಟಿವಿೂರಿಬರುವ ದುರಿತಕಂಜದೆ ಸುತ್ತಿರುವ ಮಾಯಾಪಾಶ ಹರಿವ ಹರುವನಾಲಿಸಿಗುರುವಿನಾಜ್ಞಾದಂತೆ ಪುಣ್ಯದುರುಹು ಬಲ್ಲ ಪ್ರೇಕ್ಷಕಲ್ಪತರುವ ಪಿಡಿದು ನಷ್ಟ ಕಳೇವರವು ತನ್ನದಲ್ಲವೆಂದು 1ಆವಾಗೆ ಸಚ್ಛಾಸ್ತ್ರ ಶ್ರವಣಭಾವಗುಟ್ಟುಕೇಳಿಭಕುತಿಠಾವುಗಂಡು ಹಸಿವು ತೃಷೆಯಕಾವಘಸಣೆಯಸಾವಿಗ್ಹೊಂದದಂತೆ ಸಾಧುಸೇವ್ಯಗರುಡಗಮನನಂಘ್ರಿಸೇವೆಗಧ್ಯಕ್ಷಿತರಾಗಿ ನೀವೀಗ ವೈರಾಗ್ಯ ಬಲಿದು 2ಕ್ಷುದ್ರಭೋಗಬಯಸದೆ ದಾರಿದ್ರ ಭೀತನಾಗದೆ ಸಮುದ್ರಭವನನೆಂದು ಶ್ರೀಮುದ್ರಾಭರಣದಭದ್ರ ಭಾಗವತನು ಆಭದ್ರ ಬುದ್ಧಿಯಲ್ಲಿ ಕೂಡಿಚಿದ್ರೂಪ ಪ್ರಸನ್ನವೆಂಕಟಾದ್ರಿ ಭೋಗಶಯನನೆಂದು 3
--------------
ಪ್ರಸನ್ನವೆಂಕಟದಾಸರು
ನಂಬಿ ನೀ ಕೆಡದಿರು ಇಹಲೋಕಸುಖವೆಂಬ ಕಂಬಳಿಯೊಳಬುತ್ತಿ ನಿಂಬೆಲೆಯಾಗಿನೂಟ ಪರಲೋಕ ಸುಖಸಾರವೆಂಬೋದೆ ನಿಜ ಭಕುತಿನ್ಯಾಯವಿಲ್ಲದೆ ನಿನ್ನಕಾಯಪೋಷಣೆಂಬೋದುದಣಿಸಿ ತನ್ನ ದೇಹ ಧನವ ಕೂಡಿಸುವುದುಹರಿಯರ್ಪಣವಿಲ್ಲದವಕರ್ಮಮಾಡಲುಪರಪೀಡಕನಾಗಿ ಇದ್ದವನ ಜನ್ಮಆಸೆ ಅರ್ಥದಲ್ಲಿಟ್ಟು ಹರಿಯ ಸೇವಿಸುವಂಥಹಲವು ಸಾಧನಗಳ ಮಾಡುತಲಿದ್ದರೇನುಎಷ್ಟು ಸಾಧನಗಳು ಕೂಡಿದ್ದರೇನಿನ್ನುಗುಣತ್ರಯಕನುಸಾರ ಮಾಡಿದ ಕರ್ಮಗ-ಗುರುಉಪದೇಶವೆಂಬುದೆ ಮಹಾದುರ್ಲಭ
--------------
ಗೋಪಾಲದಾಸರು
ನಂಬಿದೆ ನಾಗರಾಜ ಹರಿಯ ಪಾ-ದಾಂಭೋಜಭಕ್ತಿಭಾಜ ಪ.ಶಂಭುಶಕ್ರಾದ್ಯರು ಹಂಬಲಿಪರು ನಿನ್ನತುಂಬಿದ ಜೀವಕದಂಬಾಭಿಮಾನಿಯೆ ಅ.ಪ.ಸಾವಿರ ಜಿಹ್ವೆಯೊಳು ಹರಿಯ ಸ್ತುತಿಗೈವೆನಿರತಕೃಪಾಳುಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟುದೇವೇಶನಾದರು ಯಾವನು ಬಣ್ಣಿಪಶ್ರೀವಧೂವರನ ಕಮಲಪದ ರಾ-ಜೀವ ಸೌಂದರ್ಯವನು ತನ್ನಯಸಾವಿರಾಕ್ಷಿಗಳಿಂದ ಕಾಣುತಕೇವಲಾನಂದಾಬ್ಧಿ ಮಗ್ನನೆ 1ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆಧರಿಸಿದೆ ಸುಪ್ರಚಂಡವರರಘುರಾಮನಾವರಜ ಲಕ್ಷ್ಮಣನಾದೆಹರಿಕೃಷ್ಣರಾಯನ ಪಿರಿಯನಾಗಿ ಅವ-ತರಿಸಿ ಭೂಭಾರವನುರೆ ಸಂ-ಹರಿಸಿ ವೇದ ಪುರಾಣ ತತ್ತ್ವವಶರಣಜನರಿಗೆ ಬೋಧಿಸುವ ಮಹಾಕರುಣಿ ಕಮಲಾಕಾಂತನ ಭಕ್ತನೆ 2ಲಕ್ಷ್ಮೀನಾರಾಯಣನ ನಿದ್ರಾಸ್ಪದರಕ್ಷಿಸು ಕೃಪೆಯಿಂದೆನ್ನಸಾಕ್ಷಾದಚಲರೂಪ ನಿನ್ನೊಳು ನೆಲಸಿದಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸಮೋಕ್ಷ ಮಾರ್ಗಪ್ರದರ್ಶಿ ಸತತ ಮು-ಮುಕ್ಷು ಜನಮನಹರ್ಷ ನಿರ್ಜರ-ಪಕ್ಷ ಸುಫಲಪ್ರದ ಸದಾ ನಿರ-ಪೇಕ್ಷ ಗುರುವರ ರಾಕ್ಷಸಾಂತಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಂಬಿದೆ ನಿನ್ನ ಗಣೇಶ ಜಗ-ದಂಬಿಕಾತನಯ ವಿಶ್ವಂಭರದಾಸ ಪ.ಲಂಬೋದರ ವಿಘ್ನೇಶ ಶರ-ಣೆಂಬುದು ಸುರನಿಕುರುಂಬ ಮಹೇಶ ಅ.ಪ.ತರುಣಾದಿತ್ಯಪ್ರಕಾಶ ನಿನ್ನಶರಣಾಗತನಾದೆ ಮೋಹನ ವೇಷಸುರುಚಿರಮಣಿಗಣಭೂಷ ಜಗದ್ಗುರುವೆ ಗುಹಾಗ್ರಜ ಪೊರೆಯೋನಿರ್ದೋಷ1ಸಂತಜನರ ಮನೋವಾಸ ಮೋಹಭ್ರಾಂತಿಯಜ್ಞಾನಧ್ವಾಂತವಿನಾಶಶಾಂತಹೃದಯ ಸುಗುಣೋಲ್ಲಾಸ ಏಕದಂತ ದಯಾಸಾಗರ ದೀನಪೋಷ 2ಲಕ್ಷ್ಮೀನಾರಾಯಣನೆ ವ್ಯಾಸಗುರುಶಿಕ್ಷಿತ ಸುಜ್ಞಾನ ತೇಜೋವಿಲಾಸಅಕ್ಷರಬ್ರಹ್ಮೋಪದೇಶವಿತ್ತುರಕ್ಷಿಸು ದನುಜಾರಣ್ಯಹುತಾಶ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-ರಂಭಸೂತ್ರಳೆ ಇಂಬುದೋರಿನ್ನು ಪ.ಅಂಬುಜಾಂಬಕಿ ಶುಂಭಮರ್ದಿನಿಕಂಬುಗ್ರೀವೆಹೇರಂಬಜನನಿಶೋ-ಣಾಂಬರಾವೃತೆ ಶಂಭುಪ್ರಿಯೆ ದಯಾ-ಲಂಬೆ ಸುರನಿಕುರುಂಬಸನ್ನುತೆ ಅ.ಪ.ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-ಗಾರೆ ರಿಪುಸಂಹಾರೆ ತುಂಬುರುನಾರದಾದಿಮುನೀಂದ್ರ ನುತಚರ-ಣಾರವಿಂದೆ ಮಯೂರಗಾಮಿನಿಸೂರಿಜನ ಸುಮನೋರಥಪ್ರದೆ 1ಮೂಲರೂಪೆ ದಯಾಲವಾಲೆವಿಶಾಲಸುಗುಣಯುತೆ ಮುನಿಜನ-ಲೋಲತರುಣಮರಾಳೆ ಸಚ್ಚರಿತೆ ನವಮಣಿಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-ಬಾಲೆ ನೀಲತಮಾಲವರ್ಣೆ ಕ-ರಾಳಸುರಗಿ ಕಪಾಲಧರೆ ಸುಜ-ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ 2ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-ವಾಕರಾಭೆಪರಾಕುಶರಣಜನೈಕಹಿತದಾತೆ ಸುರನರ-ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-ವಾಕುಕಾಯದಿಂದ ಗೈದಾನೇಕ ದುರಿತವ ದೂರಗೈದು ರ-ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-ಲ್ಲಾಸೆ ಯೋಗೀಶಾಶಯಸ್ಥಿತೆವಾಸವಾರ್ಚಿತೆ ಶ್ರೀಸರಸ್ವತಿದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ 4ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-ವಾಮಭಾಗಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯಶ್ರೀಮಹಾಲಕ್ಷ್ಮಿ ನಾರಾಯಣಿರಾಮನಾಮಾಸಕ್ತೆ ಕವಿಜನ-ಸ್ತೋಮಕೃತ ಪರಿಣಾಮೆ ಭೌಮೆ ಪುಲೋಮಜಾರ್ಚಿತೆಸೋಮಶೇಖರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ