ಒಟ್ಟು 6252 ಕಡೆಗಳಲ್ಲಿ , 125 ದಾಸರು , 4339 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲನಯನನ ಕರತಾರೆ ಕರುಣ ಸಾಗರನ ಕರಿರಾಜ ವರದನ ಪ -------ಪನ ಕಂಬುಕಂಧರನ ಲೋಕನಾಯಕ ಶ್ರೀಯದು ವೀರನಾ ರಾಕೇಂದು ಮುಖಿ ವರ ಲಕ್ಷ್ಮೀನಾಯಕನ ನೀರಜ ನಾಭನಾ 1 ಸುಜನ ವಿಲಾಸನಾ ಕಂದ ಪ್ರಹ್ಲಾದನಾ ಕಾಯ್ದದೇವನಾ ಸುಂದರ ವದನ ಗೋವಿಂದ ಮುಕುಂದನಾ ಮಾಧವ ಕೃಷ್ಣನಾ 2 ಯದುಕುಲಾಬ್ಧಿಚಂದ್ರ ವೇದಗೋಚರನಾ ಮಧÀು ಸೂದನ ರೂಪ ಮಹಿಮ ಪ್ರಕಾಶನಾ ಬುದ್ಧ ಜನರ ಸಿರಿಯ ನಾ ಪೂರ್ಣಾನಂದನ ಚದುರೆ ನೀ ಬೇಗ ಹೋಗಿ ಚಲುವ ಸಂಪನ್ನನಾ 3 ಆನಂದ ನಿಲಯನಾದ ಅಖಿಲವೈಭವನಾ ಜ್ಞಾನಿಗಳ ಪೊರೆವ ಘನ ಗಂಭೀರನಾ ಧೇನು ಪಾಲಕ ದೇವಾದಿ ದೇವನ ಗಾನಲೋಲನಾದ ವೇಣು ಗೋಪಾಲನ 4 ಗರುಡವಾಹನನಾ-----ಜನ ಕಾಯ್ದವನಾ ಸ್ಥಿರ ಹೆನ್ನ ತೀರದಿ ವಾಸವಾಗಿಹನ ದೊರೆ 'ಹೆನ್ನ ವಿಠ್ಠಲನ’ ----ದೇವನಾ ಪೊರೆವನು ನಮ್ಮ ನಿಂದು ಪರಮಹರುಷದಿಂದಾ5
--------------
ಹೆನ್ನೆರಂಗದಾಸರು
ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ ಮಾಧವ ಪ ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ 1 ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ 2 ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ ಚರಣಸೇವೆ ನೀಡಿ ಪೊರೆಯೈ ಉರಗಶಯನ 3 ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ ಹೀನ ಬವಣೆ ತಪ್ಪಿಸಿನ್ನು ದಾನವಾಂತಕ 4 ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ ಬಿನಗುಕೃತಿ ಗೆಲಿಸು ದಯದಿ ದೀನಮಂದಾರ 5 ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ ಮನಕೆ ತಂದು ರಕ್ಷಿಸಿನ್ನು ಜನಕಜಾವರ 6 ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ 7 ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ 8 ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ 9 ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ 10 ಸುಜನ ಸಹ ವಾಸದಿರಿಸನುಮೇಷ ಎನ್ನ ವಾಸುದೇವನೆ 11 ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ ಧ್ಯಾನಾನಂದ ಕರುಣಿಸಯ್ಯ ಜನಾರ್ದನ12 ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು ಘೋರ ಭವದ ತಾಪಹರ ನಾರಾಯಣ 13 ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ ದೋಷ ಮನ್ನಿಸಯ್ಯ ಎನ್ನ ಈಶಕೇಶವ 14 ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ ಸಂಚಿತಾಗಮ ರಹಿತ ವಿರಂಚಿತಾತನೆ 15 ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ ಮೂರು ಲೋಕ ಸಾರ್ವಭೌಮ ನಾರಸಿಂಹ 16 ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು ಸದಮಲಾಂಗ ಸರ್ವಾಧಾರ ಮಧುಸೂದನ 17 ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ 18 ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ ದುರ್ಜನಾಗಿ ದಯಾರ್ಣವ ನಿರ್ಜರೇಶನೆ 19 ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ 20 ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ 21
--------------
ರಾಮದಾಸರು
ಕಮಲಮುಖಿಯೆ ಕಮಲಾಲಯೆ ಕಮಲೆಕಮಾಲಾಕ್ಷಿಯೆ ಕೋಮಲೆ ಪ. ಕಮಲನಾಭನ ಪಾದಕಮಲಯುಗಳ ಮಧುಪೆಕಮಲಜ ಜನನಿಯೆ ಕಮಲಮಿತ್ರೆ ಸುಪ್ರಭೆ ಅ.ಪ. ಅರುಣನ ಪೋಲುವ ಚರಣವು ಬಾಲಚಂದಿರನ ಸೋಲಿಪ ನಖವುಬೆರಳಲ್ಲಿ ಪಿಲ್ಲಿ ಕಾಲುಂಗುರ ಮೆಂಟಿಕೆ ಕಿರುಗೆಜ್ಜ್ಯಂದಿಗೆ ಪೆಂಡೆಯುಕರಿಯ ದಂತದಂತೆ ಜಾನುದರ್ಪಣ ಜಂಘೆ ಉಟ್ಟ ದಟ್ಟಿಯು ನೆರಿಗೆಯುಹರಿನಡು ಕಿಂಕಿಣಿ ಭರದಿ ಒಡ್ಯಾಣವು ಉದರ ತ್ರಿವಳಿರೇಖೆ ವರ ಕಂಚುಕಧಾರಿ1 ಉರೆ ವೈಜಯಂತೀ ಮಂದಾರಮೆರೆವ ಚುಬುಕ ಬಿಂಬಾಧರ ಕೂರ್ಮಕದಪು ಕಿರಿದಂತ ರತುನದ ಕರಡಿಗೆ ವದನೆ 2 ಸುರಭಿ ಚಂಪಕನಾಸಿಕ ಮೂಗುತಿ ಶಾಂತ ಪರಮ ಕರುಣ ನೋಟದಹರಿಣನಯನೆ ಪುಬ್ಬುಸ್ಮರನ ಚಾಪದಂತೆ ಕರ್ಣಾಭರಣಲಂಕಾರ ಸಿರಿಕುಂಕುಮ ಕಸ್ತೂರಿ ತಿಲಕದ ಮೇಲೆ ಅರಳೆಲೆ ಬೈತಲೆಯ ಸರ ಕುರುಳುಸುಳಿಯು ಪರಿಪರಿ ರತ್ನ ಖಚಿತದ ವರ ಮಕುಟವು ಕೋಟಿ ತರಣಿಯಂತೊಪ್ಪುವ 3 ತೆತ್ತೀಸಕೋಟಿ ದೇವತೆಗಳು ವಾಣಿ ಭಾರತಿ ಪಾರ್ವತಿ ಮೊದಲಾದಉತ್ತಮಸ್ತ್ರೀಯರು ಛತ್ರಚಾಮರನೆತ್ತಿ ಬೀಸುವಲಂಕಾರಸುತ್ತಗಂಧರ್ವರು ತುಂಬುರ ನಾರದರು ಸ್ವರವೆತ್ತಿ ಪಾಡುವ ಝೇಂಕಾರತತ್ತರಿತರಿಘಟ್ಟ ಝಣುತ ಝಣುತ ಎಂದು ಎತ್ತ ನೋಡಿದರತ್ತ ತಥೈ ಎಂಬೊ ಶಬ್ದ 4 ಅಜ ಫಾಲಾಕ್ಷ ಸುರವಿನುತೆಮೋಕ್ಷದಾಯಕಿ ಲೋಕರಕ್ಷಕಿ ರಮಾದೇವಿ ಇಕ್ಷುಧನ್ವನ ಜನನಿಅಕ್ಷಯಫಲದ ಗೋಪಾಲವಿಠಲನ ಪ್ರತ್ಯಕ್ಷ ತೋರಿಸೆನ್ನಪೇಕ್ಷೆ ಪೂರೈಸೆ ತಾಯೆ 5
--------------
ಗೋಪಾಲದಾಸರು
ಕಮಲಾ ರಮಣ ಹರಿ ವಿಠಲ | ಕಾಪಾಡೊ ಇವಳಾ ಪ ವಿಮಲ ಮತಿ ಕರುಣಿಸುತ ಮಮತೆಯನೆ ಕಳೆದೂ ಅ.ಪ. ಗುರುರೂಪಿ ತೈಜಸನೆ | ಪರಮನುಗ್ರಹ ಪೊಂದಿಗುರುವಿನಿಂದ ಶಿಷ್ಯನ | ಪಡೆಯುತಲಿ ಮತ್ತೇಪರ್ವತವ ಅಡಿಯಲ್ಲಿ | ಪರಮ ಗುರು ತದ್ಗುರುವವರ ಅಂಕಿತಗಳ ಕಂಡು | ಮರಮಾಶ್ಚರ್ಯ ಪೊಂದೀ1 ಹರ ವಿರಿಂಚಾದಿಗಳು | ಹರಿಯ ಸೇವಕರೆಂಬವರಮತಿಯ ಪೊಂದುತ್ತ | ಚರಾಚರಗಳಲ್ಲಿಹರಿಯಧಿಷ್ಠಿತನೆಂಬ | ವರ ಜ್ಞಾನದಿಂದಲ್ಲಿಹರುಷದಿಂ ಸೇವಿಸುವ | ಸಾಧನವ ಗೈಸೋ 2 ಹರಿ ಗುರೂ ಸದ್ಭಕ್ತಿ | ಹಿರಿಯರ ಸತ್ಸೇವೆಕರುಣಿಸುತಲೀ ಕಾಯೋ | ಕಮಲಾಕ್ಷ ಹರಿಯೇಕರುಣ ನಿಧಿ ನೀನೆಂದು | ಒರಲುತಿದೆ ವೇದಗಳುಪರಿಪಾಲಿಸಿವಳ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಕಮಲಾಕ್ಷಿ ತಾಯೆ ಕಾಮಿತ ದಾಯೆ ಕೋಮಲಕಾಯೆ ನಮಿಪೆ ನಾಂ ಪೊರೆಯೆ ಪ ಕಮಲ ಸುಪಾಣಿ ಭಾನುಮತಿ ವಿಮಲೆ ಕಮಲೆ ಶೀಲೆ 1 ಕರುಣ ಕಟಾಕ್ಷದಿ ನಿರುಕಿಸೆ ನೀನು ನೀರೇರುಹ ಭವನೆ ಅಹನೆ ಕಾಣೆ 2 ಭ್ರಕುಟಿ ವಿಲಾಸದಿ ಸಕಲರ ಕಾಯ್ವ ಶ್ರೀಕಾಂತನ ರಮಣಿ ಸುಮಣಿ ತ್ರಾಣಿ 3
--------------
ಲಕ್ಷ್ಮೀನಾರಯಣರಾಯರು
ಕಮಲಾಲಯ ಕೈಹಿಡಿದೆನ್ನ ಪಾಲಿಸುಮುನ್ನ ಕರುಣ ಕಟಾಕ್ಷದಿ ಎನ್ನಕಮಲಾಲಯ ಪ ಸ್ವಾಮಿ ಭೃತ್ಯನ್ಯಾಯ ಅರಿಯದೆ ನಾ ನಿನ್ನಪರವÀು ಪಾಮರನೆಂದು ನುಡಿದೆನು ಪರಮ ಪಾಮರನೆಂದು ನುಡಿದ ಅಪರಾಧವ ಸ್ವಾಮಿ ಚಿತ್ತದಲೆ ಹಿಡಿಬ್ಯಾಡ 1 ಗುಣನಿಧಿ ನೀ ಎಂದು ಗುಣಕೆ ಕೀರ್ತನೆ ಗೈದೆಎಣಿಸದಿರೆನ್ನ ಅಪರಾಧಎಣಿಸದಿರೆನ್ನ ಅಪರಾಧ ಎನುತಲೆ ಮಣಿದು ಸಾಷ್ಟಾಂಗ ಕ್ಕೆರಗಿದಳು2 ನಿನ್ನವರ ಅಪರಾಧ ಇನ್ನೇನು ನೋಡದೆಮನ್ನಿಸ ಬೇಕೊ ಕಮಲಾಕ್ಷಮನ್ನಿಸ ಬೇಕೊ ಕಮಲಾಕ್ಷ ಎನುತಲಿ ಕನಿದ್ರೌಪತಿ ನುಡಿದಳು3 ಬಡನಡ ಬಳಕುತ ಕುಚಗಳಲ್ಲಾ ಡುತ ಮುಡಿದಿದ್ದ ಪುಷ್ಪ ಉದುರುತಮುಡಿದಿದ್ದ ಪುಷ್ಪ ಉದುರುತ ಸುಭದ್ರೆಅಣ್ಣನ ಅಡಿಗೆರಗಿದಳು4 ಹೆಣ್ಣು ಕೊಟ್ಟ ಮ್ಯಾಲೆ ಹಿತವ ಚಿಂತಿಸಬೇಕು ಇನ್ನು ನುಡಿದಲ್ಲಿ ಫಲವೇನೊಇನ್ನು ನುಡಿದಲ್ಲಿ ಫಲವೇನೊ ಅಣ್ಣಯ್ಯಎನ್ನ ಮುಖವ ನೋಡಿ ಕರುಣಿಸೊ 5 ಎನ್ನವ್ವ ಸುಭದ್ರಾ ಈ ನುಡಿನಿನಗ್ಯಾಕೆ ನೀನು ನಿಮ್ಮಿಂದ ನಿಮ್ಮವರುನೀನು ನಿಮ್ಮಿಂದ ನಿಮ್ಮವರಿಗೆ ಪ್ರಾಣವ ನಾನು ಕೊಡುವೆನು 6 ಮೊದಲೆ ಅತ್ತೆಯ ಮಗ ಆದರದಿಂದ ನಿನ್ನ ಕೊಟ್ಟೆ ಹೆದರೋನೆ ಅವನು ನಮಗಿನ್ನುಹೆದರೋನೆ ಅವನು ನಮಗಿನ್ನು ಎನುತಲೆಮುದದಿ ರಾಮೇಶ ನುಡಿದನು7
--------------
ಗಲಗಲಿಅವ್ವನವರು
ಕಮಲೆ ನಿನ್ನನು ಭಜಿಪೆ ಕಮನೀಯಗಾತ್ರೆ ಸುಮನಸರ ಜನನಿ ನಿನ್ನಮಲಪದ ತೋರೆ ಪ. ಲೋಕಸುಂದರಿ ಎನ್ನ ಶೋಕಗಳ ತರಿದು ಅವ ಏಕಮನಸು ನೀಡೆ ಶ್ರೀ ಕಳತ್ರನ ಪದದಿ ನೀ ಕರುಣಿಸಿದನೆ ನನಗನೇಕ ಜನ್ಮದಲಿ 1 ಪತಿ ಎಂದೆಂದಿಗೆ ತೊಲಗದಂದದಲಿ ನೀಡೆ ಒಂದನರಿಯೆನೆ ಈಗ ಬಂದೆನೇ ನಿನ್ನ ಬಳಿಗೆ ನಂದಕಂದನ ತೋರಿ ಕುಂದು ಪರಿಹರಿಸೆ 2 ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ಕಾಪಾಡೆ ಸತತದಲಿ ಕಾರುಣ್ಯಶಾಲಿ ನೀ ಪಯೋಬ್ಧಿಯೊಳ್ ಕೈಪಿಡಿದೆ ಶ್ರೀ ಹರಿಯ ರೂಪ ರೂಪಾಂತರದ ವ್ಯಾಪಾರ ತಿಳಿಸೆ 3
--------------
ಅಂಬಾಬಾಯಿ
ಕಮಲೋದ್ಭವನ ತಾಯೇ | ನಮಿಸುವೆನ್ನನು ಕಾಯೇ ಕಮಲಾಕ್ಷ ಹರಿ ಪ್ರೀಯೆ | ಚಿತ್ಪ್ರಕೃತೇ ಪ ಓಂಕಾರ ವಾಚ್ಯನ | ಶಂಕೆ ಇಲ್ಲದೆ ಭಜಿಸೇಸಂಖ್ಯೆ ರಹಿತ ರೂಪಳೇ |ಯಂಕಾಮಯೇ ತಂತಮು | ಗ್ರಂ ಕೃಣೋಮೆಂದು ಬಿಂಕದಿ ಶ್ರುತಿ ಪೇಳ್ವುದೇ 1 ಆಪಾಂಗ ವೀಕ್ಷಣ ಸೃಷ್ಠಿ | ವ್ಯಾಪಾರಂಗಳ ಹರಿಕೃಪೆಯಿಂದ - ಗೈಯ್ಯುವಳೇ |ಅಪವಿತ್ರರಿಗೆ ಯೋಗ್ಯ | ವಿಪರೀತ ಮತಿಯಿತ್ತು ಕುಪಥಾಂಧಂತದು ಪ್ರಾಪಕೇ 2 ಕಂಬು ಚಕ್ರಾಂಕಿತನ | ಅಂಬುಜಾಕ್ಷನ ಹೃದಯಾಂಬರದಲಿ - ತೋರಿಸೇ |ಇಂಬಿಟ್ಟು ಮನ ಬಯಕೆ | ತುಂಬಿಸುವುದು ಅನ್ಯಹಂಬಲ ನೀ ಕೊಡದೇ3 ಸನ್ನುತ | ಮೋಕ್ಷದಾಯಕ ಪರಮಾಕ್ಷರ ಶ್ರೀ ಹರಿಯ |ಈಕ್ಷಿಪ ಸುಖ ಕೊಡು | ಪೇಕ್ಷಿಸದಲೆ ತಾಯೆಲಕ್ಷಣವಂತೇ - ಗುಣವಂತೇ 4 ಕರವೀರ ಪುರದರಿಸಿ | ಶರದಿ ಸಂಭವೆ ಎನಿಸಿವರವ ನೀಡುತ ಪೊರೆವೇಗುರು ಗೋವಿಂದ ವಿಠ್ಠಲ | ಚರಣ ನೀರೇರುಹಕರುಣಿಸಿ ಸಲಹೇ - ಮಾತೇ 5
--------------
ಗುರುಗೋವಿಂದವಿಠಲರು
ಕರ ಪಿಡಿಯೊ ಬೇಗಾ ಪ ಸಿರಿ | ಮಾಧವನೆ ಭಿನ್ನವಿಪೆಕಾದುಕೊ ಬಿಡದಿವನ | ಹೇ ದಯಾಪೂರ್ಣ 1 ಪ್ರಾಚೀನ ಕರ್ಮಗಳ | ಯೋಚಿಸಲು ಯನ್ನಳವೆಮೋಚ ಕೇಚ್ಛೆಯ ತೋರೊ | ಕೀಚಕಾರಿ ಪ್ರೀಯನೀಚೋಚ್ಛ ತರತಮವ | ವಾಚಿಸಿವನಲಿ ನಿಂತುವಾಚಾಮ ಗೋಚರನೆ ಸಾಕ್ಷಿ ವೇದ್ಯಾ 2 ಭಾಗವತ ಪೀಯೂಷ | ವೇಗ ಉಣಿಸುತಲಿವನನೀಗೊ ಭವರೋಗವನು | ನಾಗಾರಿವಾಹಾಜಾಗರ ಸ್ವಪ್ನದಲಿ | ನೀಗಿ ಭ್ರಮವೆರಡನ್ನುಜಾಗು ಮಾಡದೆ ಸಲಹೋ ಭೊಗಿಶಯನಾ 3 ಭವ | ಅಂಬುಧಿಯ ದಾಂಟಿ ನೀ-ಲಾಂಬು ದಾಭ ಹರಿ ಹೃದಯಾಂಬರದಿ ತೋರಿಇಂಬಿಟ್ಟು ಭಕ್ತನ್ನ | ಸಲಹೆ ಬಿನ್ನವಿಪೆ ಕೃ-ಪಾಂಬುಧಿಯೆ ತವ ಪಾ | ದಾಂಬುಜದಲಿಡುವೆ 4 ಭಾವ ಕ್ರಿಯ ದ್ರವ್ಯದೊಳು | ಅದ್ವಯನು ನೀನೆಂಬಭಾವದನುಭವವಿತ್ತು | ಇವನ ಪಾಲಿಪುದುಕಾವ ಕರುಣಿಯೆ ಗುರು | ಗೋವಿಂದ ವಿಠ್ಠಲನೆಗೋವತ್ಸಧ್ವನಿದಾವು | ಧಾವಿಸೂವಂತೆ 5
--------------
ಗುರುಗೋವಿಂದವಿಠಲರು
ಕರ ಮುಗಿವೆ ಶರಜನೇ ಪ ಕರಗಳ ಮುಗಿವೆನು ಕರುಣಿಗಳರಸನೇ ಕರಮುಗಿವೆ ಅ.ಪ ಕಾಲಕಾಲನ ಪ್ರಿಯ ಬಾಲ ಕುಮಾರ | ಶೀಲ ಸುಗುಣ ರತ್ನಾಮಾಲ ಗಂಭೀರ | ಕರಮುಗಿವೆ 1 ಬೆನಕನನುಜ ಗುಹ ದಿನಪನ ತೇಜಾ ರಣದÀಲಿ ಸೇನಾನಿ ಸನಕಾದಿ ಪೂಜಾ | ಕರಮುಗಿವೆ2 ಚರಣ ದಾಸರಿಗಿಷ್ಟ ಕರುಣಿಸಿ ಕೊಡುವಾ ಸುರವರ ಪಾವಂಜೆ ಪುರದ ಶ್ರೀ ದೇವಾ | ಕರಮುಗಿವೇ 3
--------------
ಬೆಳ್ಳೆ ದಾಸಪ್ಪಯ್ಯ
ಕರಕಮಲ ತಡೆಯುವುದೆ ಕಟುಖಾರವಾ ನಿತ್ಯ ಪೂಜಿಸುವ ಕೋಮಲದಾ ಪ. ಪರಿವಾರ ಜನವು ಭೋಜನಕೆ ಕುಳಿತಿರಲು ನರ ಹರಿಗೆ ಅರ್ಪಿತದ ಹುಳಿಯಲ್ಲಿ ಕರವಿಟ್ಟು ಪರಿಪಕ್ವ ಶಾಖದ ಹೋಳುಗಳ ಬಡಿಸಲು ಕರ ಕರೆಗೆ ಸಿಲುಕೇ 1 ಮಧ್ವದುಗ್ಧಾಭ್ಧಿಯಲಿ ಜನಿಸಿದ ಸುಧಾರಸವ ಶುದ್ಧ ದೃಷ್ಟಿಯಲ್ಲೀ ಸವಿಸವಿದು ಮಧುರಾ ಹೃದ್ವಜದಲಿ ತುಂಬಲನುವಾದ ಪುಸ್ತಕವ ಮುದ್ದಾಗಿ ಪಿಡಿಯಲನುಕೂಲವಾಗಿ ಇಂಥ 2 ಗಂಧ ಕುಸುಮಾಕ್ಷತೆಗಳಿಂದ ಶ್ರೀ ತುಳಸಿದಳ ದಿಂದ ವಿಠ್ಠಲ ಕೃಷ್ಣ ಲಕ್ಷ್ಮಿನರಹರಿಯಾ ವೃಂದ ಸಾಲಿಗ್ರಾಮ ಹನುಮ ಯತಿಕುಲಜರುಗ ಳಿಂದ ಸಹಿತದಿ ಪೂಜೆ ವಿಭವದಲಿ ಗೈದಾ 3 ಮಧುರಾನ್ನ ಸವಿದು ಮಧುಸೂದನನ ಗುಣಗಳನು ವಿಧವಿಧದಿ ಮಧ್ವಗ್ರಂಥದಿ ಕಂಡು ನಲಿದೂ ಹೃದಯ ನಿರ್ಮಲದಿ ಆಲಿಸುವ ಭಕ್ತರಿಗೆ ಮಧುರ ರಸಮನದ ಎಡೆಯಲ್ಲಿ ಬಿಡಿಸುವ ಇಂಥ 4 ಗೋಪಾಲಕೃಷ್ಣವಿಠ್ಠಲನ ಭಕ್ತರು ಬಂದು ಶ್ರೀಪಾದಕೆರಗೆ ಸಿರದಲ್ಲಿ ಅಕ್ಷತೆಯಾ ಅಪಾರ ಕರುಣದಿಂದಲಿ ಸೂಸಿ ನಲಿಯುತಲಿ ಅಪತ್ತು ಕಳೆವ ಶ್ರೀ ಪ್ರದ್ನುಮ್ನತೀರ್ಥಯತಿ 5
--------------
ಅಂಬಾಬಾಯಿ
ಕರದೊಳಿನ ಮಣಿಗೆ ಕನ್ನಡಿಯೇತಕೆ ಪ ಸಿರಿ ರಮಣನಲತಿ ಸಂಶಯವೇತಕೆ ಅ.ಪ ಶರಧಿಯ ಜಲವನ್ನು ಪರಿಪರಿ ದೇಶಕೆ ಬಿರುಗಾಳಿಗಳಿಂದ ದೊರಕಿಸುವನು ಯಾರು ಧರೆಯೊಳು ನವನಾಗರಿಕರೆಂದರಿಯುವ ಪರಿ ತರವೆ ಯೋಚಿಸೆಲೊ 1 ಎಲ್ಲಾ ದೇಶಗಳ ವಿಚಾರ ನೋಟಗಳನ್ನು ಇಲ್ಲೇ ತೋರಿಸುವಂಥ ನಲ್ಲರು ಇರುವರು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಂದು ಬಲ್ಲರೇ ಇವರು ತಲ್ಲಣಿಸುತಿಹರು 2 ಘಾಸಿಯ ಮಾಡದೆ ಪೋಷಿಸುವನು ಯಾರು ಈಶನ ಕರುಣವು ಲೇಶ ತಪ್ಪಿದರೆ ಆ ಶಿಶುವಿನ ಜೀವದಾಶೆ ಎಂತಿಹುದೊ 3 ಎಲ್ಲಾ ನಾರಿಯರು ಗರ್ಭ ಧರಿಸುವರೆ ಎಲ್ಲಾ ಬೀಜಗಳಿಂದ ತರುಗಳು ಬರುವುದೆ ಬಲ್ಲವರುಂಟೆ ಇದಕೆ ಕಾರಣ ಲಕ್ಷ್ಮೀ ಪರಿ 4 ಭಿನ್ನದೇಶಗಳಲ್ಲಿ ಭಿನ್ನ ರೂಪಗಳುಳ್ಳ ಭಿನ್ನ ಗುಣಗಳುಳ್ಳ ಭಿನ್ನ ಜಂತುಗಳಿಗೆ ಭಿನ್ನ ಕಾಲಗಳಲ್ಲಿ ಅನ್ನವನೀಯಲು ಅನ್ಯರಿಗಳವೆ ಪ್ರಸನ್ನನಿಗಲ್ಲದೆ 5
--------------
ವಿದ್ಯಾಪ್ರಸನ್ನತೀರ್ಥರು
ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ ವರ ವೆಂಕಟಾದ್ರಿವಾಸ ಪ. ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ. ಆವ ಪರಿಯಿಂದ ಜಗದೊಳು ನೋಡೆ ಕಾವರಿ ನ್ನಾವರುಂಟೆಲೊ ದೇವನೆ ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ ದೀವಿಧದ ಬವಣೆಯನ್ನೇ ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ- ಲಾವ ಸಂಶಯ ಕಾವನೇ ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ ಜೀವಕ್ಹಿತ ಕೊಡು ಪ್ರೀತನೇ | ಇನ್ನೇ 1 ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ ವರ ಸುಧೆಯನವರಿಗುಣಿಸೀ ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ ಪರಿಪರಿಯ ಸೌಖ್ಯ ಸುರಿಸೀ ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು ಪರಿಕರಿಸಿ ನೀನೀಕ್ಷಿಸೀ ಪರಿ ಕಾಣೆ ಹರಿಸು ಭಯ ಶ್ರೀ ನರಹರೇ | ಶೌರೇ 2 ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ- ಕರವಿಂದ ದಳ ನೇತ್ರನೇ ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ ಗರುವ ನುಡಿಯಲ್ಲ ನೀನೇ ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ ಪರಿಹರಿಸು ಕ್ಲೇಶಗಳನೇ ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ- ಗಿರಿನಿಲಯ ಭಕ್ತ ಪ್ರೀಯಾ | ಜೀಯಾ 3
--------------
ಅಂಬಾಬಾಯಿ
ಕರವ ಜೋಡಿಸಿ ಎಲ್ಲರಿಗೊಂದಿಸಿ ಪ. ಎಲ್ಲರಿಗೊಂದಿಸಿ ಫುಲ್ಲನಾ¨sನÀ ಮುಖ್ಯವಲ್ಲಭೆಯರುನಾವು ಗೆಲ್ಲಬೇಕೆಂದುಅ.ಪ. ಮಡದಿ ಇಂದಿರಾದೇವಿ ಕಡೆಗಣ್ಣನೋಟದಿ ಪಡೆದಾಳು ಲೋಕಬ್ರಹ್ಮರುದ್ರಾದಿ ಪಾದಂಗಳಿಗೆ ನೀವೆ ಮಹಾಲಕ್ಷ್ಮಿಪಾದಂಗಳೆಗೆ ನೀವೆ ಮಹಾಲಕ್ಷ್ಮಿ ದೇವಿಯಶುಭಾಂಗಿಯ ಮೊದಲೆ ಬಲಗೊಂಬೆ 1 ಪರಮೇಷ್ಠಿ ಪರಮೇಷ್ಠಿ ಪಾದ ಪದ್ಮವನೆ ಮೊದಲೆ ಬಲಗೊಂಬೆ2 ವಾಣಿ ಅಜನ ಪಟ್ಟದರಾಣಿ ಪನ್ನಂಗ ವೇಣಿಜಾಣಿ ಕೊಡು ಎಮಗೆ ಮತಿಗಳಜಾಣಿ ಕೊಡು ಎಮಗೆ ಮತಿಗಳ ನಿನ್ನಪಾದರೇಣುವ ಮೊದಲೆ ಬಲಗೊಂಬೆ 3 ಪಾದ ವನಜವ ಮೊದಲೆ ಬಲಗೊಂಬೆ4 ಭಾರತಿ ನಿನ್ನ ಪಾದವಾರಿಜ ಚರಣವ ಬಾರಿ ಬಾರಿಗೆ ಸ್ಮರಿಸುವೆಬಾರಿ ಬಾರಿಗೆ ಸ್ಮರಿಸುವೆ ನಮಗಿನ್ನುತೋರೆ ಬೇಗ ಮತಿಗಳು5 ಇಂದ್ರನ ಗೆದ್ದು ಸುಧೆಯ ತಂದ ಮಾತೆಯ ಬಂಧನ ಕಡೆದ ಬಲು ಧೀರಬಂಧನ ಕಡೆದ ಬಲುಧೀರನಾದ ಖಗೇಂದ್ರನ ಮೊದಲೆ ಬಲಗೊಂಬೆ6 ಸಾಸಿರ ಮುಖದಿಂದ ಶ್ರೀಶನ ಸ್ತುತಿಸಿದವಾಸುದೇವಗೆ ಹಾಸಿಗೆವಾಸುದೇವಗೆ ಹಾಸಿಗೆ ಯಾದಶೇಷಗೆ ಮೊದಲೆ ಬಲಗೊಂಬೆ7 ಅಪಾರ ಮಹಿಮನೆ ತ್ರಿಪುರಸಂಹಾರಕಚಂದ್ರ ಶೇಖರನೆ ಸರ್ವೇಶ ಚಂದ್ರ ಶೇಖರನೆ ಸರ್ವೇಶ ನಿನ್ನಪಾದದ್ವಂದ್ವವ ಮೊದಲೆ ಬಲಗೊಂಬೆ 8 ವಾರುಣಿ ಅಪರ್ಣಾದೇವಿಯರು ಕರುಣಿಸಿನಮಗೆ ಕಾಲಕಾಲಕರುಣಿಸಿನಮಗೆ ಕಾಲಕಾಲಕೆರಾಮೇಶನ ತರುಣಿಯರೆ ಗೆದ್ದು ಬರಬೇಕ9
--------------
ಗಲಗಲಿಅವ್ವನವರು
ಕರವ ಪಿಡಿ ಗುರುರಾಯ | ಶಿರಬಾಗಿ ಬೇಡುವೆ ಪೊರೆಯೊ ಸತ್ಕವಿಗೇಯ | ನೆರೆನಂಬಿದೆನು ನೀ ಮರೆಯದಿರು ಶುಭಕಾಯ | ಹೇ ಸೂರಿವರ್ಯ ಪ ಉರಗಕೇತನ ಮೊರೆಯ ಲಾಲಿಸಿ ತರಣಿಜನಿಗೆರಡೊಂದು ಯುಗದಲಿ ಧುರದಿ ಸಾರಥಿಯಾಗಿ ಸ್ಯಂದನ ಭರದಿ ನಡೆಸಿದ ಪರಮ ಪುರುಷನೆ ಅ.ಪ ಶರಣು ಜನ ಸುರಧೇನು | ಹೇ ತಾತ ನೀ ಮೂರೆರಡು ಜನುಮಗಳನ್ನು | ಕಳೆದು ಮ ತ್ತುರುವ ಅವತಾರವನು ಭಕ್ತಿಪೂರ್ವಕ ಪಿರಿಯರಾಜ್ಞದಿ ನೀನು ಪೂರೈಸಲಿನ್ನು ಧರಣಿಯೊಳಗವತರಿಸಿ ನರರಿಗೆ ಅರಿಯದಂದದಿ ಹರಿಯ ದಿಸೆಯೋಳ್ ಹರಿಯ ಸ್ಮರಿಸುತ ಚರಿಪ ಧೊರೆ ತವ ಚರಣ ದರುಶನಗರೆದು ಕರುಣದಿ 1 ಕ್ಲೇಶ ತಡಮಾಡದಲೆ ನೀ ಭವ ಪಾಶ | ದೃಢಮನವ ಕೊಡು ನಿ ನ್ನಡಿಗಳಲಿ ನಿರ್ದೋಷ | ನುಡಿಯಲಾಲಿಸಿ ಬಿಡದೆ ಮಾಡುಪದೇಶ ಪೊಡವೀಶದಾಸ ಒಡೆಯನೇ ನೀನಡಗಿ ಎನ್ನನು ಕಡೆಗೆ ನೋಡಲು ಪಡೆದ ಜನನಿಯು ಪಿಡಿದು ಬಾಲನ ಮಡುವಿನೋಳ್ ತಾ ಬಿಡುವ ತೆರ ತವ ನಡತೆ ಎನಿಪುದು 2 ಮಂದನಾನಿಜವಯ್ಯ | ಸಂದೇಹವಿಲ್ಲದೆ ಕುಂದು ಎಣಿಸದೆ ಜೀಯ ಬಂದೆನ್ನ ಮನದಲಿ ನಿಂದು ನೀಸಲಹಯ್ಯ ವಂದಿಪೆನು ಶ್ರೀ ಪು ರಂದರಾರ್ಯರ ಪ್ರೀಯ ಆನಂದ ನಿಲಯ 3
--------------
ಶಾಮಸುಂದರ ವಿಠಲ