ಒಟ್ಟು 1228 ಕಡೆಗಳಲ್ಲಿ , 101 ದಾಸರು , 979 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಗರಕನ್ನಿಕೆಯ ಪ್ರಾಣಮನೋಹರ ಪ ಕಿಂಕರೋದ್ಧಾರಣ ಜಿಂಕೆಸಂಹರಣ ಲಂಕಾಪುರನಾಶನ ಶಂಖ ಚಕ್ರಧಾರಣ ಶಂಕರಾದಿವಂದನ ಪಂಕಜನಯನ 1 ತಾಪತ್ರನಿರ್ಮೂಲ ಪಾಪಮೋಚನ ಶೀಲ ಗೋಪೇರಾನಂದ ಲೀಲ ಗೋಪಾಲಬಾಲ ಪಾಪಿಜನಕುಲಕಾಲ ಆಪತ್ತಿನಲ್ಲನುಕೂಲ ದ್ರೌಪದಿಯ ಪರಿಪಾಲ ಶ್ರೀಪತಿಯ ವಿಠಲ 2 ದೀನಜನಮಂದಾರ ಧ್ಯಾನಿಪರ ಪ್ರಿಯಕರ ಜ್ಞಾನಿಗಳ ಆಧಾರ ವನಮಾಲಧರ ಬಾಣಾರಿ ಧುರಧೀರ ಭಾನುಕೋಟಿ ಪ್ರಭಾಕರ ಜಾನಕೀರಮಣ ಶ್ರೀರಾಮಪ್ರಭು ಸುಂದರ 3
--------------
ರಾಮದಾಸರು
ಸಾಗಿ ಬಾರಯ್ಯ ನೀ | ಬಾಗಿ ನಮಿಸುವೇಯೋಗಿಗಳರಸನೇ ಶ್ರೀನಿವಾಸ ಪ ಭೋಗಿಶಯನನೆ ನಿನ್ನ ಭಾಗವತರು ಬಂದುಜಾಗು ಮಾಡದೆ ನಿನ್ನ ಬಾಗಿಲೊಳು ನಿಂತಿಹರೋ ಅ.ಪ. ಇಂದಿರೇ ರಮಣಗೋವಿಂದ ನೀನೇ ಗತಿಯೆಂದು ಭಜಿಸುತಿರಲುಆನÀಂದದಿಂದತÀಂದೆಯ ಬಾಧೆಗೆ ತಂದು ತೋರಲು ಸ್ತಂಭ ತಂದೆ ತಾಡನೆಯ ಮಾಡಲುಬಂದೆಯಾ ಪರಿಪರಿ ವಿಧ ಭಯದಿಂದವೋಡಲು ಬಂದು ಅಸುರನ್ನಆರ್ಭಟಿಸಿ ಕೆಡಹುತಛಂದದಲಿ ಬಗೆಯುತಸುರನ್ನ ಕೊರಳೊಳು ಮಾಲೆ ಅಂದು ಧರಿಸಿದ ಅಧಿಕ ಸಂಪನ್ನಪ್ರಳಯಾಗ್ನಿಯಂತಿರೆ ನಿನ್ನ ಸ್ತುತಿಸಲು ಅರಿಗೊಸೆದಿನ್ನು ಅನುತಿರಲುನಿನ್ನಯಮುಂದೆ ಭಜಿಸುತ ಕಂಡು ಬರಲಾನಂದದಿಂದಲಿ ಚಂದದಿ ಸಲಹಿದಾನಂದದಲಿ ಮಂದರೋದ್ಧರ ಎನ್ನ ಸಲಹೋ 1 ಮೃಗ ಬೇಡಲು ಬಾಣ ಎಸೆಯಲು ಅದು ಲಕ್ಷ್ಮಣಾಯೆಂದು ಕೂಗಲುಮತ್ತಾತ ಪೋಗಲು ಇತ್ತ ರಾವಣನು ಕರೆದೊಯ್ಯೆ ಸತಿಯಳ ವಾತಸುತ ತಾನೆನಿಸೇ ನೀ ಮುನ್ನಾ ಅವ ಪೋಗೆ ಉಂಗುರ ಖ್ಯಾತಿಯಿಂದಲಿನೀಡಲದಕಿನ್ನು ತನುಮನದ-ಲತಿ ಭೋಗದಿ ಶಿಖೆಯ ಶಿರೋಮಣಿಯನ್ನೆ ಕೊಡಲನುಗ್ರಹದಲಿಛಾತಿಯಿಂದಲಿ ಅವಗೆ ವಿಧಾತ ಪದವಿಯ ಪಾಲಿಸಿದೆ ಜಗನ್ನಾಥಇಂದ್ರಾದ್ಯಮರ ವಂದಿತ ವೀತಭಯ ಜಗನ್ನಾಥ ಸಲಹೋ2 ಮಂಗಳಾಂಗನೆ ನಿನ್ನ ಸುಖವ ಕೊಟ್ಟು ಅಂಗನೆಯರಬಾಧೆಬಿಡಿಸೊ ಇಂದುಅಂಗನೇಯರು ಬಂದು ಭಂಗಪಡಿಸಲದಕೆ ಪೋಗುತಾ ಮಾರನ್ನಬಾಧೆಯ ಕಳೆಯುತಾಪರಿಪರಿಯ ಸುಖಗಳ ಸಂಗಡಿಲ್ಲದೇ ನೀಡಿಯೊ ಮಲ್ಲಮರ್ದನನೇ ಎನುತಿರೆಬೇಗದಿಂದಲಿ ಓಡಿಪೋದೆಲ್ಲೊ ಭಕ್ತರನು ಸಲಹುವೆನೆಂಬೋಬಿರುದು ನಿನಗೆ ಉಂಟಲ್ಲಾಅನುತಿರಲು ನಿನ್ನಯ ಎನ್ನ ಮನ ಉತ್ತಂಗಸುತಸತ್ಸಂಗ-ವೀವುದು ವಿಹಿತ ದೇವನೇತುರಂಗನಾಥನೇ ರಂಗವಿಠಲನೆ ದೇವ ದೇವರ ದೇವ ಸಲಹೋ3
--------------
ಶ್ರೀಪಾದರಾಜರು
ಸಾರ ಪ ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ 1 ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ 2 ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ 3
--------------
ಕನಕದಾಸ
ಸಾರಿಭಜಿಸಿರೋ 'ಜಯರಾಯರಂಘ್ರಿಯಪಾರುಮಾಳ್ಪರಾ ಸಂಸಾರಸಾಗರಾ ಪದೇಶ ದೇಶವಾ ಪರದೇಶಿಯಂದದಿಬ್ಯಾಸರಿಲ್ಲದೆ ತಿರುಗಿ ಕಾಶಿಗ್ಹೋದರು 1ಸಪ್ನದಲ್ಲಿ ಶ್ರೀ ಪುರಂದರದಾಸರಾಯರುವ್ಯಾಸಕಾಶಿಯಲ್ಲಿ ದಾಸ ದೀಕ್ಷೆಕೊಟ್ಟರು2ಬಾು ತೆರೆುತು ನಾಲಿಗೆ ಮೇಲೆ ದಾಸರು'ಜಯ'ಠ್ಠಲಾ ಎಂದು ಬರೆದು ಬಿಟ್ಟರು 3ಎಚ್ಚರಾುತು ದಿವ್ಯ ಜ್ಞಾನ ಹುಟ್ಟಿತು ಧೈನ್ಯ ಓಡಿತು ಹರಿಯ ಧ್ಯಾನ ಹತ್ತಿತು 4ದಾಸರಾದರು ಹರಿಯ ದಾಸರಾದರು ಕೂಸೀಮಗ ದಾಸ 'ಜಯದಾಸರಾದರು 5ಹರಿಯ ಶ್ರೇಷ್ಠತೆ 'ಂದೆ ಒರೆಗೆ ಹಚ್ಚಿದಾಭೃಗುಮರ್ಹಯೇ ನಮ್ಮ 'ಜಯದಾಸರು6ಪಾಪಕಳೆವರು ಭಕ್ತರ ತಾಪಕಳೆವರುಭೂಪತಿ'ಠ್ಠಲನ ಅಪರೋಕ್ಷ ಮಾಳ್ಪರು 7
--------------
ಭೂಪತಿ ವಿಠಲರು
ಸಿರಿ ಪಾಂಡುರಂಗನಾ ಪಾಡಿದೆನೊ ಜಗದಂತರಂಗನ ಖಗ ತುರಂಗನ ಬೇಡಿದೆನೊ ಗುಣಾಂತರಂಗನಾ ಪ ಕಪಿಲ ವಿಭುಹರಿ ಸಾರ್ವಭೌಮ ಸು ತಪನಂದನ ಕೃಷ್ಣ ಕೃಷ್ಣ ಗೀರ್ವಾಣ ತಪಯಜ್ಞ ಜಿತದತ್ತ ಧನ್ವಂತ್ರಿ ವಿನುತ ವೃಷಭ ಹಯ ಲಪನ ವೈಕುಂಠ ಹಂಸ ತಪನಾ ಕುಪಿತ ಜಿತ ಮುನಿ ನರನಾರಯಣ ಅಪರಿಮಿತ ರೂಪ ಧರಿಸಿದಾನಂದ ಗುಪಿತ ಮಹಿಮನ 1 ಮುನಿವನ ಜಿತ ಚಿತ್ತ ಶುದ್ಧದಿ ಜನನಿ ಜನಕನ ಚರಣ ಸೇವೆಯ ಅನುದಿನದಿ ಘನವಾಗಿ ಮಾಡುತ ಗುಣಗಳಿಂದಲಿಯಿರಲು ಇತ್ತಲು ಮುನಿ ನಾರದನು ಗಾಯನವ ಗೈಯುತ ಇನಿತು ಸೋಜಿಗ ನೋಡಿ ತನ್ನಯ ಜನಕಗರುಹಲು ನಗುತಲಾ ಮನದಿ ಕೈಕೊಂಡ ಮೂಲ ಮೂರ್ತಿಯ 2 ಪೊಡವಿಯೊಳು ನೀನವತರಿಸಿ ಆ ದೃಢü ಬಕುತನಿಗೆ ದರುಶನವೆ ಇ ತ್ತಡಿಗಡಿಗೆ ಸುಖಬಡಿಸಿ ಅಲ್ಲಲ್ಲಿ ಬಿಡದೆ ನಿಲ್ಲುವೆ ನಿಮ್ಮ ಸಹಿತಲಿ ವಿನುತ ಕಳುಹಿದ ಒಡನೆ ಸಲ್ಲಿಪೆನೆಂದ ಯಮುನಾ ತಡಿಯ ಜನಿಸಿದ ಜಗನ್ಮೋಹನಾ 3 ನಿಧಿಯ ನೋಡುವೆನೆನುತ ಗೋವುಗಳ ಮುದದಿ ಮೇಯಿಸಿಕೊಳುತ ಕಾವುತ ಒದಗಿ ಗೋವಳರೊಡನೆ ಬಂದನು ವಿಧಿ ಸಂಭವಾದ್ಯ ಭಕ್ತನ ಎದುರಲಿ ನೋಡಿದನು ಹೋ ಹೋ ಇದೇ ಸಮಯವೆಂದು ನಿಂದಾ ಹಿಂಭಾ ಗದಲಿ ಭಕ್ತಿಗೆ ಮೆಚ್ಚಿ ಬಲು ವೇಗಾ4 ತಿರುಗಿ ನೋಡದಲಿರಲು ಭಕುತನ ಮರಳೆ ಮಾತಾಡಿಸಲು ಇಟ್ಟಿಗೆ ಭರದಿ ಹಿಂದಕೆ ಒಗಿಯೆ ವಿಠ್ಠಲ ಹರುಷದಲಿ ವಶವಾಗಿ ನಿಲ್ಲಲು ಕರುಣರಸ ಸಂಪೂರ್ಣ ದೇವನ ನಿರೀಕ್ಷಿಸಿದ ಜಯವೆಂದು ಪೊಗಳಿ ವರವ ಬೇಡಿದ ಪುಂಡರೀಕನು ಗಿರಿಯನೆತ್ತಿದ ಗೋಕುಲೇಶನ 5 ಭಕುತ ಮನೋರಥ ಎನ್ನ ಪೆಸರಿಲಿ ಸಕಲ ಲೋಕದೊಳಗೆ ನೀನೆ ಮುಕುತಿ ಕೊಡುತಲಿ ಇಲ್ಲೆ ನಿಲುವದು ಅಖಿಳ ಬಗೆಯಿಂದ ಭಜನೆಗೊಳುತ ನೀ ರುಕ್ಮಿಣಿಪತಿ ಒಲಿದು ಪಾಲಿಸಿ ವ್ಯಕುತವಾದನು ಪೂರ್ವಮುಖನಾಗಿ ಸುಖವಯೋನಿಧಿ ಮೆರೆಯುತಲಿ ಇಂದೂ 6 ಕ್ರೋಶ ಯೋಜನ ಯೋಜನತ್ರಯ ದೇಶ ಪರಿಮಿತ ಕ್ಷೇತ್ರವಿಪ್ಪುದು ವಾಸ ಒಂದಿನಮಲ ಮನುಜರನ ಲೇಸು ಪುಣ್ಯಗಳೆಣಿಸಿ ಸರಸಿ ಜಾಸನನು ಬೆರಗಾಗಿ ನಿಲ್ಲುವ ದೋಷ ವರ್ಜಿತ ಹರಿಯ ನೆನೆಸುತ ಆ ಸೇತು ಮಧ್ಯದಲಿ ವಿಶೇಷವಾಗಿದ್ದ ಈ ಕ್ಷೇತ್ರ ಮೂರ್ತಿಯಾ 7 ನಂದಾ ಮಂದಾಕಿನಿ ಮಧ್ಯಾಹ್ನಕೆ ನಿಂದಿರದೆ ಬರುತಿಪ್ಪ ಪ್ರತಿದಿನ ಚಂದ್ರಭಾಗಾ ಪ್ರಸೂನುವತಿ ಅರ ಕುಂಡಲ ಚತುರ ದಿಕ್ಕಿನಲಿ ಪೊಂದಿಪ್ಪವು ಓರ್ವನಾದರು ಮಿಂದು ತೀರ್ಥದಲಿ ಆ ನಂದ ಸತ್ಕರ್ಮ ಚರಿಸಲಾಕ್ಷಣ ಇಂದಿರೇಶನು ಒಲಿವ ನಿಶ್ಚಯಾ 8 ದ್ವಾರಸ್ಥ ಜಯ ವಿಜಯ ನಾರದ ಭಾರತಿ ಪಂಚ ಕೋಟಿ ದೇವರು ಶ್ರೀರಮಣಿ ಮಿಕ್ಕಾದ ಜನರೆಲ್ಲ ಈರೆರಡು ದಿಕ್ಕಿನಲಿಯಿಹರು ಸುತ್ತಲಿ ಪಾಡುತ್ತ ಕುಣಿಯುತ್ತ ಹಾರುತಲಿ ಹಾರೈಸಿ ನಾನಾ ವಿ ಹಾರದಲಿ ಪುರಿ ಪ್ರದಕ್ಷಣಿ ವಿ ಸ್ತಾರ ಮಾಡುತಲಿಪ್ಪ ಸೊಬಗನಾ 9 ಎರಡು ವಿಂಶತಿ ಗುದ್ದು ಮೊಳವೆ ಕರಿಸಿ ಕೊಂಬೊದೊಂದೆ ನಿಷ್ಕವು ಇರದೆ ಇವು ನಾನೂರುಯಾದಡೆ ವರಧನಸ್ಸು ಪ್ರಮಾಣವೆನಿಸೊದು ಗುರುತು ತಿಳಿವದು ಇಂಥ ಧನಸ್ಸು ಅರವತ್ತು ಪರಿಮಿತಾ ಈ ಭೀಮಾ ಸರಿತೆಗಳು ಪರಿಪರಿ ತೀರ್ಥಗಳಕ್ಕು ನಿರೀಕ್ಷಿಸಿ ವಂದನೆಯ ಮಾಡುತಾ 10 ಜ್ಞಾತಿ ಗೋತುರ ಹತ್ತದೊಂದೆ ಮಾತು ಮನ್ನಿಸಿ ಕೇಳಿ ಸುಜನರು ವಾತದೇವನ ಕರುಣತನವನು ನೀತಿಯಲಿ ಪಡಕೊಂಡು ಸತ್ವದಿ ಜ್ಞಾತ ಅನುಷ್ಠಾನದಲಿ ನಡೆದು ಪು ಮಾನವ ಬಂದರಾದಡೆ ಆತುಮದೊಳು ಹರಿ ಪೊಳೆದು ಬಲು ಕೌತುಕವ ತೋರಿಸುವ ರಂಗನಾ 11 ಶಯ್ಯಾ ಹರಿ ದಿನದಲಿ ಮಾನವ ಕಾಯ ನಿರ್ಮಳನಾಗಿ ಫಂಡರಿ ರಾಯ ರಾಜೀವನೇತ್ರ ತ್ರಿಭುವನ ನಾಯಕನ ಕ್ಷೇತ್ರಕ್ಕೆ ಮನಮುಟ್ಟಿ ಗಾಯನವ ಮಾಡುತಲಿ ಬಂದ ನಿ ರ್ಮಾಯದಲಿ ಕೊಂಡಾಡಿ ದಮ್ಮಯ್ಯ ಕೈಯ ಪಿಡಿಯನೆ ಕರುಣದಿಂದ ಸಾ ಹಾಯವಾಗುವ ವಾಣಿ ಜನಕನಾ 12 ಮಕುಟ ಕುಂಚಿ ಕುಲಾಯ ಕುಂತಳ ಕುಂಡಲ ಮಣಿ ಕಿರಣ ಸ ನ್ನುಖ ಮುಕರ ಸೋಲಿಸುವ ಕಾಂತಿ ಚಂ ನಾಸಿಕ ಮುಖ ಮೃಗನಾಭಿ ಸಣ್ಣ ತಿ ಲಕ ಕೌಸ್ತುಭಗಳ ತುಲಸಿ ಮಾಲಿಕಾ ನಖ ಪದಕ ಕಟೆಕಂಬು ಕರದ್ವಯ ನಖ ಪಾದ ಭೂಷಣ ಮಾ ಣಿಕ ಇಟ್ಟಿಗೆ ಮೇಲೆ ನಿಂದ ವಿಠ್ಠಲನ 12 ಸಂಗಮ ಸುರ ಮಥನ ಕಾಳಿಂಗ ಭಂಗ ಭಾವುಕ ಭಕ್ತಜನಲೋಲ ಶೃಂಗಾರಾಂಬುಧಿ ರೋಮ ಕೋಟಿ ಕೋಟಿ ಲಿಂಗಧರ ಗೌರೀಶ ಸುರಪ ನಂಗ ಮಿಗಿಲಾದ ಮುನಿವಂದಿತಾ ಮಾ ತುಂಗ ವರದ ಗೋವಿಂದ ವರದೇಶ ಸಂಗ ನಿಃಸಂಗ ಸುಪ್ರಸನ್ನ ನೀ ಅನುದಿನ 14 ಪೇಳಲೊಶವೇ ಲೋಹದಂಡಿ ಹಿ ಯ್ಯಾಳಿ ಕ್ಷೇತ್ರದ ಮಹಿಮೆ ಸಾವಿರ ನಾಲಿಗಿಂದಲಿ ಪೊಗಳಿ ಸುಮ್ಮನೆ ವ್ಯಾಳಪತಿ ಬೆರೆಗಾಗಿ ನಿಲ್ಲುವ ಸಲಿಗೆ ನಾ ಮಾಳ್ಪರು ವಿಲಿಂಗರು ಮೇಲು ಮೇಲೀ ಭುವನದೊಳಗಿದ್ದು ಹೇಳಿ ಕೇಳಿದ ಜನರಿಗಾನಂದಾ ಬಾಲಾ ವಿಜಯವಿಠ್ಠಲರೇಯನಾ 15
--------------
ವಿಜಯದಾಸ
ಸಿರಿ ಹರಿಯೇ | ಎನ್ನ ದೊರೆಯೇ ಪ ಎದುರಾಳಿ ಜನ ಬಂದು | ಹದನ ಗೆಡಲು ಮನಬದಿಗ ನಾಗಿಹ ನಿನ್ನ | ಹುದುಗಿಸುತಿಹರಯ್ಯ ಅ.ಪ. ಎನ್ನ ಕಂಗಳು ನಿನ್ನಯ | ರೂಪಂಗಳಚೆನ್ನಾಗಿ ನೋಡದೆಲೆ | ವಿಷಯಾನ್ಯವ |ನನ್ನೆಯಿಂದಲಿ ನೋಡಿ | ಧನ್ಯರಾದೆವು ಎಂದುಮನ್ನಿಸುತಿಹವಯ್ಯ | ಘನ್ನ ಗೋಪಾಲನೆ1 ಕರ್ಣಗಳ್ಹದನ ಕೇಳೋ | ಶ್ರೀಹರಿ ನಿನ್ನಗುಣಗಳ ಕೇಳದಲೇ | ಯುವತೀಯರ ||ತನುಗಳೊರ್ಣನೆ ಕೇಳಿ | ಕ್ಷಣ ಕ್ಷಣಕಾನಂದಸೊನೆಯಿಂದ ತೊಯ್ದಂತೆ | ಎಣಿಸುತಿಹವು ಅಯ್ಯ 2 ಪ್ರಾಣ ಛಾದಿಯ ಪೇಳ್ವೆನೊ | ನೀ ಮುಡಿಧೂವಾಘ್ರಾಣಿಸದೆಲೆ ಕನ್ಯೇರು | ಮುಡಿದಿಹ ಪುಷ್ಪ |ಘ್ರಾಣಿಸುತ್ತಲಿ ಬಹು | ಆನಂದ ಪಡುತಲಿನಾನಾ ಜನ್ಮದಿ ದುಷ್ಟ | ಯೋನಿಗೆ ತರುವೋದು 3 ವದನದ ಪರಿಯ ಕೇಳೊ | ನಿನ್ನಯ ಗುಣಮುದದಲಿ ವರ್ಣಿಸದೆ | ಧನಿಕರ ಸ್ತುತೀ ||ವದಗಿ ಪೇಳುತ ಮುಂದೆ | ಉದರ ಕೋಸುಕವಾಗಿವಿಧಿಯ ಮಾರುತ ದುಷ್ಟ | ಸಾಧನವಾಯ್ತಯ್ಯ 4 ಸ್ಪರಿಶೇಂದ್ರಿಯರ ಸಾಧನ | ಕೇಳೆಲೊ ಹರಿಹರಿಭಕ್ತರಾಲಿಂಗನ | ಮಾಡದಲಿದ್ದುಪರಸ್ತ್ರೀಯ ಸ್ಪರಿಶಕ್ಕೆ | ಹರಿಯುವಂತಿಹುದನ್ನಪರಿಹಾರ ಗೈ ಗುರು | ಗೋವಿಂದ ವಿಠಲಯ್ಯ 5
--------------
ಗುರುಗೋವಿಂದವಿಠಲರು
ಸೀತಾ ಕಲ್ಯಾಣ ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ ಹೆಳವನಕಟ್ಟೆ ವೆಂಕಟ ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ. ಮದುವೆಯ ನಾಲ್ಕು ದಿವಸದಲ್ಲಿ ಮದುವಣಿಗನು ರಾಮ ಜಾನಕಿಗೆ ಪದನ ಹೇಳುವೆ ಸುಜನರು ಕೇಳಿ ಜಯ ಜಯ 1 ಚಿತ್ತಜಪಿತ ಶ್ರೀರಾಮರಿಗೆ ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ ಮುತ್ತೈದೇರನು ಕರೆಸಿದಳು ಜಯ ಜಯ 2 ಪೀತಾಂಬರದುಡುಗೆಯನುಟ್ಟು ಜ್ಯೋತಿಯಂದದಿ ಥಳಥಳಿಸುತಲಿ ಜಾತಿಮಾಣಿಕದಾಭರಣವಿಟ್ಟು ರಾಮರ ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ 3 ಚೀಣ ಚೀಣಾಂಬರಗಳನುಟ್ಟು ವೇಣಿ ಕಸ್ತೂರಿಯ ಪಣೆಗಿಟ್ಟು ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ ಬಾಣನ ಪಟ್ಟದಾನೆಗಳಂತೆ ಜಯ ಜಯ 4 ಪೊಂಬಣ್ಣದ ಹಳದಿಯ ಕಲೆಸಿ ತುಂಬಿದ ಹರಿವಾಣದೊಳಗೆ ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ ಸಂಭ್ರಮಕೆ ನಡೆತಂದರಾಗ ಜಯ ಜಯ 5 ಗರುಡನ್ವಲ್ಲಭ ಸೌಂದರದೇವಿ ವರುಣನ್ವಲ್ಲಭೆ ಕಾಳಕದೇವಿ ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ 6 ಬ್ರಹ್ಮವಲ್ಲಭೆ ಶಾರದಾದೇವಿ ವಾ- ಯುರಮಣಿ ಅಂಜನಾದೇವಿ ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ7 ಅಲ್ಲಲ್ಲಿ ನಡೆವ ನಾಟಕಶಾಲೆ ಬಿಲ್ಲಾಳು ಬೆತ್ತ ಕಾಟನವರು ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ ಚೆಲ್ಲುತ ದಶರಥ ನಡೆದನಾಗ ಜಯ ಜಯ 8 ಹೊಡೆವ ತಂಬಟೆ ಭೇರಿ ನಿಸ್ಸಾಳೆ ಬಿಡದೆ ಚೀರುವ ಹೆಗ್ಗಾಳೆಗಳು ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ ನಡೆದರು ಜನಕರಾಯನ ಮನೆಗೆ ಜಯ ಜಯ 9 ಕುಸುಮಬಾಣನ ಮಾರ್ಬಲದಂತೆ ಹಸುರು ಪಚ್ಚೆಯ ಪಲ್ಲಕ್ಕಿಗಳು ಮುಸುಕಿದ ಪರಿಮಳದೊಳಪ[ಸಾ]ತಕೆ ದಶರಥ ಬಂದನೆಂದರೆ ಜನರು ಜಯ ಜಯ 10 ಭರದಿಂದಲೆದ್ದು ಜನಕರಾಯ ತರಿಸಿ ನಿವಾಳಿಗಳನು ಹಾಕಿ ಹರುಷದಿ ಕೈಲಾಗವ ಕೊಟ್ಟಯೋಧ್ಯದ ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ11 ಬೇಗದಿ ಗದ್ದುಗೆಯನು ಹಾಸಿ ಬೀಗನ ಉಪಚರಿಸಿದ ಜನಕ ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ ನಾಗಭೂಷಣನು ಕುಳಿತನಾಗ ಜಯ ಜಯ 12 ಸುತ್ತಣ ರಾಯರಾಯರಿಗೆಲ್ಲ ರತ್ನಗಂಬಳಿಗಳ ಹರಹಿದರು ಅರ್ತಿಯಿಂದಲಿ ಸುರರೆಲ್ಲರು ಕುಳಿತರು ವಿಸ್ತರಿಸಿದ ಮಂಟಪದೊಳಗೆ ಜಯ ಜಯ 13 ಮಣಿಮಂಟಪದೊಳು ಹಸೆಹಾಸಿ ಕನಕ ಮಣಿಯ ತಂದಿಳುಹಿದರು ದಿನಕರಕುಲರಾಮ ಹಸೆಗೇಳೆನುತಲಿ ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ 14 ಪೊಕ್ಕಳೊಳಜನ ಪೆತ್ತವನೇಳು ಅಕ್ರೂರಜನ ಪೆತ್ತವನೇಳು ಮುಕ್ಕಣ್ಣನ ರಿಪುಬಲವ ಸಂಹರಿಸಿದ ಭಕ್ತವತ್ಸಲ ಹಸೆಗೇಳೆಂದರು ಜಯ ಜಯ 15 ದಶರಥರಾಜನಂದನನೇಳು ಅಸುರಸಂಹಾರ ಕಾರಣನೇಳು ವಸುಧೆಗೊಡೆಯ ರಾಮ ಹಸೆಗೇಳೆನುತಲಿ ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ 16 ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ ಕುಶಲದ ಬಾಸಿಂಗವ ಪಿಡಿದು ಅಸುರಾರಿಯ ಮಸ್ತಕಕಳವಡಿಸೋರು ವಸುದೇವನಾಗೆಂದು ಹರಸುತಲಿ ಜಯ ಜಯ 17 ತಂಡತಂಡದ ರತ್ನ ಅಡಸಿದಾಗ ಮಣಿ ಬಿಗಿದಿದಾಗ ತೊಂಡಿಲ ಮುತ್ತೈದೇರಳವಡಿಸೋರು ಕೋ- ದಂಡ ಪಾಣಿಸತಿಜಾನಕಿಗೆ ಜಯ ಜಯ 18 ಬೆರಳಿಗೆ ಮುದ್ರೆ ಉಂಗುರವಿಟ್ಟು ಕೊರಳಿಗೆ ಏಕಾವಳಿಯನೆ ಹಾಕೋರು ತರಳಾಕ್ಷಿಯರಾ ಜಾನಕಿಗೆ ಜಯ ಜಯ 19 ಬೊಂಬೆಯ ತೊಂಡಿಲ ಮುಡಿದಿರ್ದು ಕುಂಭಿಣಿಸುತೆ ಕುಳ್ಳಿರಲಾಗಿ ಅಂಬುಜಾಂಬಕ ರಘುರಾಮನ ಹರುಷದಿ ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]20 ಬಂದನೆ ಭಾಗ್ಯಲಕ್ಷ್ಮೀರಮಣ ಬಂದನೆ ಭಕ್ತವತ್ಸಲ ಸ್ವಾಮಿ ಬಂದನೆ ಜಾನಕಿಯಡೆ ರಾಮನು ತಾ ಬಂದನೆ ಮಣಿಮಂಟಪದೆಸೆಗೆ [ಜಯ ಜಯ] 21 ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ 22 ಕೌಸಲ್ಯಸುತ ಕುಮಾರ ಬಂದ ಹಂಸವಾಹನಪಿತ ರಾಮ ಬಂದ ಕಂಸಾರಿ ದುಃಖವಿ [ನಾಶ] ರವಿಕುಲ ವಂಶೋದ್ಧಾರಕ ಬಂದನಾಗ [ಜಯ ಜಯ] 23 ಭಕ್ತವತ್ಸಲ ರಾಘವ ಬಂದ ಮುಕ್ತಿದಾಯಕ ಶ್ರೀರಾಮ ಬಂದ ಅರ್ಕನು ಶತಕೋಟಿತೇಜನು ಜಗಕತಿ- ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ 24 ಸಿಂಧುಬಂಧನ ರಾಘವ ಬಂದ ಪು- ರಂದರವರದ ಶ್ರೀರಾಮ ಬಂದ ಇಂದುವದನೆಪತಿ ರಾಮ ಬಂದನು ರಾಮ- ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 25 ಯಜ್ಞಶಿಕ್ಷಾಮಿತ್ರ ರಾಮ ಬಂದ ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ- ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ 26 ಯಂತ್ರವಾಹಕ ರಾಘವ ಬಂದ ಮಂತ್ರಮೂರುತಿ ರಾಮ ಬಂದ ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ 27 ದೂಷಕಹರಣ ಶ್ರೀರಾಮ ಬಂದ ವಿ- ಭೀಷಣವರದ ರಾಘವ ಬಂದ ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ- ದೀಶ ತಾ ಬಂದನೆಂದವೆ ಕಹಳೆ ಜಯ ಜಯ 28 ತಾಟಕಪ್ರಾಣಾಪಹಾರ ಬಂದ ಜಟÁಯುಮುಕ್ತಿಕಾರಣ ಬಂದ [ತಾಟಂಕ] ಧರ ನಾರಾಯಣ ರವಿಕುಲ ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ 29 ವೀರ ವಿಕ್ರಮ ರಾಘವ ಬಂದ ಮಾರೀಚಮರ್ದನ ರಾಮ ಬಂದ ನಾರಿ ಶ್ರೀ ಜಾನಕಿರಮಣ ಬಂದನು ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ 30 ದೇವಕುಮಾರ ರಾಘವ ಬಂದ ದೇವರ ದೇವನು ರಾಮ ಬಂದ ಭಾವೆ ಶ್ರೀ ಜಾನಕಿರಮಣ ಬಂದನು ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 31 ನಿರುಪಮಚರಿತ ರಾಘವ ಬಂದ ದುರಿತದಲ್ಲಣ ರಾಮದೇವ ಬಂದ ಭರತಶತ್ರುಘ್ನರ ಸಹೋದರಯೋಧ್ಯದ ಸುರಪತಿ ಬಂದನೆಂದವೆ ಕಹಳೆ ಜಯ ಜಯ 32 ಹೇಮಖಚಿತ ರತ್ನ ಪೀಠದಲಿ ಭೂಮಿಜೆ ಸಹಿತ ಕುಳಿತ ರಾಮ ವಾಮ ಭಾಗದಿ ಒಪ್ಪಿರ್ದಳು ಜಾನಕಿ ಆ ಮಹಾಸಭೆಯನು ಬೆಳಗುತಲಿ ಜಯ ಜಯ 33 ಕುಂದಣ ರತ್ನದಡ್ಡಿಕೆಯೊಳಗೆ ಹೊಂದಿಸಿ ನವರತ್ನ ಇರುವಂತೆ ಇಂದುವದನೆ ಜಾನಕಿ ಹರುಷದಿ ರಾಮ ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ 34 ಹೇಮದ್ಹರಿವಾಣದೊಳಗ್ನಿಯನು ಕಾಮಿನಿಯರು ತಂದಿಳುಹಿದರು ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ ಹೇಮಾರ್ಚನೆಗಳ ತೊಡಗಿದನು ಜಯ ಜಯ 35 ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು ಪೂಜಿಸಿದನೆ ವಿಘ್ನೇಶ್ವರನ ರಾಜವದನೆಯ ಒಡಗೊಂಡು ರಾಘವ ಪೂಜಿಸಿದನೆ ಋಷಿಮುನಿವರರ ಜಯ ಜಯ 36 ಇಂದ್ರಾದಿ ಮುನಿಗಳು ಕೈಹೊಡೆದು ಚಂದ್ರ ಸೂರ್ಯರು ಉಘೇಉಘೇಯೆನಲು ಮಂದಾರ ಮಲ್ಲಿಗೆ ಮಳೆಗಳ ಕರೆದರು ಅಂದದಿ ಸುರಜನರೆಲ್ಲರಾಗ ಜಯ ಜಯ 37 ಅರಳುವ ಕೆಂದಾವರೆ ಕುಸುಮ ಪರಿಮಳ ಸುರಮ್ಯ ಕಣ್ಗೆಸೆಯೆ ಎರಗುವ ಮರಿದುಂಬಿಗಳಂತೆ ರಾಘವ ಕರಗಳ ಪಿಡಿದೆÀತ್ತಿದ ಸತಿಯ [ಜಯ ಜಯ] 38 ಇಳೆಯ ಜಗಂಗಳನುದರದಲಿ ಅಳವಡಿಸಿದ ಮಹಾತ್ಮಕನು ಇಳೆಯ ಮಗಳನು ಎತ್ತಲಾರದೆ ರಾಮ ಬಳಲಿದನೆಂದು ನಕ್ಕರು ಜನರು ಜಯ ಜಯ 39 ಪರಾಕು ಸ್ವಾಮಿ ಪರಾಕು ದೇವ ಪಾದ ಎಚ್ಚರಿಕೆ ಸೀತಾಪತಿ ರಾಮನೆ<
--------------
ಹೆಳವನಕಟ್ಟೆ ಗಿರಿಯಮ್ಮ
ಸೀತಾಪತಿವಿಠಲ ದಾಸಳ ನಿರ್ಯಾಣ ಪದ ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36 ತೊರೆದೈದು ದಿನ ಅನ್ನ ಹರಿಧ್ಯಾನಂಗತಳಾಗಿ ವರ ಗಂಗೆ ವದನದಿ ಪ್ರಾಶನಗೈದು ಅಭಿಮಾನ ತೊರೆದು ಭ್ರಾಂತಿಯ ಮೆರೆದು 37 ವರಹಜೆ ತುಂಗ ತೀರದಿ ಪ್ರಾಣನಾಥನ ಚರಣಮೂಲದಿ ಶಿವಮೊಗ್ಗ ಕ್ಷೇತ್ರದಲಿ ಹರಿಸ್ಮರಣೆಯಲಿ ಪ್ರಾಣ ಸಲಿಸುತಲಿ 38 ಸ್ವಭಾನುವತ್ಸರ ಭಾದ್ರಪದ ಬಹುಳ ಇದ್ದ ದಶಮಿ ದಿನ ಗುರುವಾರದಲ್ಲಿ ಮಧ್ಯರಾತ್ರಿಯಲಿ ತನು ತೊರೆದಿಲ್ಲಿ 39 ಕೇಶವದೂತರು ಮೀಸಲಿಂದಲಿ ನಿನ್ನ ಘಾಸಿಗೊಳಿಸದೆ ಕರೆದೊಯ್ದರೇನಮ್ಮ ಪೇಳೆ ಎನ್ನಮ್ಮ ಎಲ್ಲಿ ಪೋದ್ಯಮ್ಮ 40 ಹೆತ್ತಮ್ಮಗಿಂತಲೂ ಹೆಚ್ಚಾಗಿ ನಮ್ಮನ್ನು ಅರ್ಥಿಯಿಂ ಬೆಳೆಸಿದೆ ಅಭಿಮಾನದಿಂದ ಅನುರಾಗದಿಂದ ಬಹುಮಾನದಿಂದ 41 ಮೊಮಕ್ಕಳೆಂದರೆ ಬಹು ಪ್ರೀತಿ ನಿನಗಲ್ಲೆ ಒಮ್ಮೆ ನಾಲ್ವರು ಬಂದು ಇರುವೆವು ನಾವು ಆಲ್ಪರಿಯುವೆವು ಅಗಲಿ ಸೈರಿಸೆವು 42 ಅರ್ಥಿಲಿ ರಮಾಕಾಂತ ವಿಠಲಾಂಕಿತ ಕೃಷ್ಣ ಮೂರ್ತಿಯು ಪುತ್ರಗಿಂತಧಿಕದಿ ನಿನ್ನ ಅಂತ್ಯಕ್ರಿಯವನ್ನ ಮಾಡಿದ ಧನ್ಯ 43 ಶ್ರದ್ಧೆಯಿಂದಗ್ರಜನಿಂದ ಕೂಡುತ ನಿನ್ನ ಶುದ್ಧಭಾವದಿಗೈದ ಅಂತ್ಯಸೇವೆಯನು ಸ್ವೀಕರಿಸಿ ನೀನು ಹರಸಿ ಹಿತವನ್ನು 44 ತಿಳಿದು ತಿಳಿಯದೆ ನಾನು ಗೈದಪರಾಧವ ನಲವಿಂದ ಕ್ಷಮಿಸಿ ನಮ್ಮನು ಮನ್ನಿಸಿದೆ ಸಹನವ ತಳದೆ ಬಹು ಪ್ರೀತಿಗೈದೆ 45 ಎಲ್ಲ ಪರಿಯಲಿ ನಮ್ಮ ಕ್ಷಮಿಸಿ ಕಾಪಾಡಮ್ಮ ಬಲ್ಲಿದಳು ನೀನು ಆಶೀರ್ವದಿಸುವುದು ಸುಖವ ತೋರುವುದು ಕೃಪೆಯ ಮಾಡುವುದು 46 ಅಂಜನೆಕಂದ ನಿನ್ನವನೆಂಬ ಅಭಿಮಾನ ರಂಜಿಸೆ ಸಹಜದಿ ನಿನ್ನೊಳು ಮಾತೆ ಜಗದಿ ವಿಖ್ಯಾತೆ ಹರಿಗತಿಪ್ರೀತೆ 47 ಪತಿಗುರು ಪವನ ಹೃದ್ಗತಮೂರ್ತಿ ಚಿಂತನ ರತಳೆ ನಿನ್ನಯ ಚರಿತೆ ಪೇಳ್ದೆ ತಿಳಿದನಿತು ತಪ್ಪನು ಮರೆತು ಲಾಲಿಸು ಮಾತು 48 ಗೋಪಾಲಕೃಷ್ಣವಿಠಲನ ಸದ್ಭಕ್ತಳೆ ಶ್ರೀ ಪಾದಕ್ಕೆರಗಿ ನಾ ಜಯವ ಪಾಡುವೆನು ಧನ್ಯಳೇ ನೀನು ಮಾನ್ಯಳೆ ನೀನು 49
--------------
ಅಂಬಾಬಾಯಿ
ಸುಗುಣೆಯ ಕೂಟವೆ ಕೂಟ ಪ ಹಗಲಿರುಳೆನ್ನದೆ ಬಗೆ ಬಗೆ ರತಿಯೊಳು ಸೊಗಯಿಸಿ ದೇಹ ಧಾತುಗಳನು ಕೆಡಿಸುವ ಅ.ಪ ಗನುದಿನ ಬಾಧಿಪ 1 ಮಾಡಿ ಹಾಸಿಗೆ ಮಂಚಾದಿಗಳಲಿ ರೂಢಿಸಿ ಕಾಮಿನಿ ಕೂಡುವ ತೆರದೊಳೋ ಲಾಡಿ ಶರೀರದ ನಾಡಿಯ ನಿಲ್ಲಿಸುವ 2 ನಿದ್ರೆಯ ಸಮಯವ ನೋಡುತ ಮುದ್ದಾಡುತ ನಮ್ಮ ನೊದ್ದಾಡಿಸುತಿಹ 3 ತೊಗಲಿನ ನರಕ್ಕೆ ತಗಲೆ ನಿದ್ರೆಯ ನಗಲಿಸಿ ಬೇಗದಿನುಸುಳಿ ಕದ್ದೋಡುವ4 ತೊಗಟೆ ರಕ್ತದ ಸುವಿನೋಡಿ ಬುಗುಟೆದ್ದ ಗಾಯವ ವಿಗಟವ ಮಾಡುವ 5 ಕಪಟ ಕಾಟಕರ್ಮದ ನಿಸರ್ಗದಲ್ಲಿನ ಬಲು ಕೋಟಲೆಯುಂಬೆ ನಿನ್ನ ಕೂಟದ ಜನರಿಗೆ 6 ಬಿರುದನು ಪೊಗಳುತ ನಿಂದೆ ವರದವಿಠಲ ನಿನ್ನ ಶರಣರಾದವರಿಗೆ 7
--------------
ವೆಂಕಟವರದಾರ್ಯರು
ಸುಮ್ಮನೆ ಹರಿಯ ದೂಷಿಸದಿರು ಯಮ- ಧರ್ಮನಾಳ್ಗಳು ನಿನ್ನ ಎಳದೊಯ್ವರೊ ಪ ಇಷ್ಟೂನು ವಿಷ್ಣು ಮಾಯವು ಎಂದು ಈ ಸೃಷ್ಟಿ ಕರ್ತನು ಶ್ರೀಹರಿ ಎಂದು ಸ್ಪಷ್ಟದಿ ಮನದಲ್ಲಿ ತಿಳಿಯದೆ ದುರುಳ ಮಾತನಾಡಬಹುದೆ 1 ಲೋಕನಾಯಕ ಲಕ್ಷ್ಮೀಲೋಲನಾ ಜಗದೇಕ ವಿನುತರಾಮ ದೇವರನಾ ಶ್ರೀ ಕರುಣಾಂಬುದಿ ಶಾಂತನಾ ಇನ್ನು ನೀ ಕಾಣದೆ ಈ ಪರಿನಿಂದೆಯೆನೆ 2 ಹರಿಶರಣರ ಕೊಂಡಾಡುತಿರು ಘೋರ ನರಕದೊಳಗೆ ಬಿದ್ದು ನರಳದಿರು ಪರಮಭಕ್ತರ ಬಾಯಿಲೆ ಬೊಗಳದಿರು ಅತಿ ಪಾಪಿಯಾಗಿರುವರ ಸೇರಿ ಹೋಗದಿರು 3 ಶೃತಿ ಶಾಸ್ತ್ರಗಳು ಸುಜ್ಜನ-------- ಇಂಥ ಕೃತಕ ಶಾಸ್ತ್ರಗಳ ನೋಡಿ ಕೂಗಬೇಡಾ ಸದ್ಗತಿ ಮಾರ್ಗಕೆ ಹೊರಗಾಗ ಬೇಡಾ 4 ಹರಬ್ರಹ್ಮ ಇಂದ್ರಾದಿಗಳೆಲ್ಲ ಶ್ರೀಹರಿಯ ಸೇವಕರೆಂಬುದು ಬಲ್ಲ 'ವರಹೆನ್ನ ವಿಠ್ಠಲನ ’ ನೀನೆ ಬಲ್ಲ ಅವರ ಚರಣಕ್ಕೆ ಎರಗುವದು ಅಲ್ಲಾ 5
--------------
ಹೆನ್ನೆರಂಗದಾಸರು
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
--------------
ವಿದ್ಯಾಪ್ರಸನ್ನತೀರ್ಥರು
ಸುವ್ವಿ ಶ್ರೀ ದೇವಿರಮಣ ಸುವ್ವಿ ಸರ್ಪರಾಜಶಯನ ಹರಣ ಸುವ್ವಿ ನಾರಾಯಣ ಪ ಭವ್ಯಚರಿತ ದುರಿತವಿಪಿನ ಹವ್ಯವಾಹನ ಭವೇಂದ್ರಾದಿ ಸೇವ್ಯಮಾನ ಸುಪ್ರಸಿದ್ಧ ಸುಲಭsÀ ಮೂರುತಿ ಅವ್ಯಯಾಮಿತ ಸುಖಾತ್ಮ ದಿವ್ಯ ಮಹಿಮೆ ತುತಿಪೆ ಸುವಿವೇಕಿಗಳಿಗೆ ಕೊಡುವುದಮಿತ ಮೋದವ 1 ವಾಸವಾದ್ಯಮರ ವಾರಾಶಿ ಶಾರದೇಂದು ಮಧ್ವ ದೇಶಿಕಾರ್ಯ ಚಿತ್ತ ಸಿಂಹಪೀಠಮಧ್ಯಗ ದೇಶಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ ಹೀ ಸಮೇತ ಕೃಷ್ಣ ಕೊಡಲಿ ಎಮಗೆ ಮಂಗಳ 2 ಕಮಲ ಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ ಶರಧಿ ಮಥನದಿ ಕಮಠ ರೂಪಿನಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ 3 ಕನಕ ಲೋಚನನ ಸದೆದು ಮನುಜಸಿಂಹ ವೇಷನಾದ ದ್ಯುನದಿ ಪಡೆದು ಜನನಿ ಕಡಿದು ವನವ ಚರಿಸಿದ ಜನಪ ಕಂಸನ್ನೊದೆದು ತಿರಿಪುರವನಿತೆಯರ ಸುವ್ರ್ರತ ವಿನುತ ಕಲಿ ದೇವರಾಜ ಎಮ್ಮ ಸಲಹಲಿ 4 ಪಾಹಿ ಪಾವನ ಚರಿತ್ರ ಪಾಹಿ ಪದ್ಮ ಪತ್ರನೇತ್ರ ನಿಗಮ ಗಾತ್ರ ಮಾಂ ಪಾಹಿ ಸಜ್ಜನಸುಮಿತ್ರ ಪಾಹಿ ದೋಷದೂರ ಸುಗುಣ ಪಾಹಿ ಜಗನ್ನಾಥ ವಿಠಲ ಜಯ ತ್ರಿಧಾಮಗ 5
--------------
ಜಗನ್ನಾಥದಾಸರು
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಸುವ್ವಿ ಸುವ್ವಿ ನಮ್ಮ ಶ್ರೀರಮಣನೆನೆಸಿದ ವಿನೋದಿ ಹರಿ ಸರ್ವೋತ್ತಮಗೆ ಸುವ್ವಿಪ. ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ ಪರಮೇಷ್ಠಿ ಗುರುಗಳಿಗೆ ಶರಣೆಂಬೆ ಸುವ್ವಿ ಪರಮೇಷ್ಠಿ ಗುರುಗಳಿಗೆ ಹರಿ ಪರನೆಂದು ಪೇಳ್ವ ಶ್ರೀಮದಾನಂದತೀರ್ಥರಿಗೆ ಸಾಸೀರ ಶರಣೆಂಬೆ 1 ವಾಸುದೇವ ಪರ ಸಂಕರ್ಷಣ ಅತಿಕ್ರೂರಸಂಹಾರಕಾರ ಸುವ್ವಿ ಸಂಕರ್ಷಣ ಅತಿಕ್ರೂರಸಂಹಾರಕಾರ ಪ್ರದ್ಯುಮ್ನ ಬೊಮ್ಮ ಕುಮಾರನಂತೆ ಸುವ್ವಿ 2 ಸೂಕರ ನರಹರಿ ಕಾಯ ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣ ಸುವ್ವಿ ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣನಾದ ಬೌದ್ಧ ಕಲ್ಕಿ ರೂಪ ಪ್ರಸಿದ್ಧವಂತೆ ಸುವ್ವಿ3 ಮುಖ್ಯಪ್ರಾಣ ಆವಲ್ಲಿ ನಾರಾಯಣ ಇವರಿಬ್ಬರ ಗುಣವನರಿಯದವನೆ ಸುವ್ವಿ ಇವರಿಬ್ಬರ ಗುಣವ ಅರಿಯದವನೆ ಗೌಣನೆಂಬರ್ಥದಲಿ ಬ್ರಹ್ಮಸೂತ್ರ [ದಂಬಂತೆ] ಸುವ್ವಿ4 ಆತ್ಮನು ಅತಂತ್ರ ಪರಮಾತ್ಮನು ಸ್ವತಂತ್ರ ದುಃ- ಖಾತ್ಮನು ಜೀವಾತ್ಮ ಪರಮಾತ್ಮನಲ್ಲ ಸುವ್ವಿ ದುಃ- ಖಾತ್ಮನು ಜೀವಾತ್ಮ ಪರಮಾತ್ಮನಲ್ಲ ವಾದಿ ಜ್ಞಾನಾನಂದಕ ಹರಿಗೆ ಸಮರಿಲ್ಲ ಸುವ್ವಿ 5 ಜಡದಲ್ಲಿ ಜೀವಾತ್ಮ ಜಡ ಜೀವರÀಲಿ ಪರಮಾತ್ಮ ಕ್ರೀಡೆಯಿಂದ ಏಕಾತ್ಮ ಬಿಡದಿಹ ಸುವ್ವಿ ಕ್ರೀಡೆಯಿಂದ ಏಕಾತ್ಮ ಬಿಡದಿಹುದು ವಾದಿ ದ್ವಾಸುಪರ್ಣ ವೆಂಬೋ ಶ್ರುತಿ ಲೇಸು ಲೇಸು ಸುವ್ವಿ 6 ಜಡ ಹರಿಗಳ ಭೇದ ಜೀವ ಜೀವಕೆ ಭೇದ ಜೀವೇಶ್ವರಗೆ ಭೇದ ಶರೀರ ಭೇದ ಸುವ್ವಿ ಜಡ ಜೀವರಿಗೆ ಭೇದ ಶರೀರ ಭೇದ [ವೆನ್ನಿ] ಜಡಜೀವ ಭೇದ ಪಂಚಭೇದಗಳು ಸುವ್ವಿ 7 ಪಂಚಭೇದಗಳೆಂಬ ಪ್ರಪಂಚದಲಿ ಸಕಲ ವೈಕುಂಠದೊಳಗಿನ ವಿವರ ಒಂದುಂಟು ಕೇಳು ಸುವ್ವಿ ವೈಕುಂಠÀದೊಳಗಿನ ವಿವರ ಒಂದುಂಟು ಕೇಳು ವಾದಿ ಸಾಕು ಸಾಕು ನಾಲ್ಕುವಿಧ ಮುಕ್ತಿಯುಂಟಲ್ಲಿ ಸುವ್ವಿ 8 ಶ್ರವಣಕೀರ್ತನ ಹರಿಸ್ಮರಣೆ ಸೇವನ ಪೂಜನ ವಂದನ ಹರಿದಾಸ್ಯ ಸಖ್ಯಮಾತ್ಮನಿವೇದನೆ ಸುವ್ವಿ [ಹರಿದಾಸ್ಯ ಸಖ್ಯಮಾತ್ಮ ನಿವೇದನೆಗಳು ತಮ್ಮ] ಅರ್ಥ ಕೂಡೊಂಬತ್ತುಭಕ್ತಿ ಸತ್ಯ ಉಂಟು ಸುವ್ವಿ 9 ಜೀವೇಶ[ನೊಂದು] ಹರಿನಿರ್ಗುಣನೆಂದು ಅಪೂರ್ಣ ಗುಣನೆಂದು ಬ್ರಹ್ಮಾದಿಗಳೊಂದು ಸುವ್ವಿ ಬ್ರಹ್ಮಾದಿಗಳೊಂದು ಸಮರಧಿಕಾರ ಅವತಾರ ಎಲ್ಲ ಒಂದೆ ಎಂಬುವಗೆ ಸುವ್ವಿ 10 ಅವತಾರವೆಲ್ಲ ಅಂಶವತಾರವೆಂದ ಹರಿಭಕ್ತರಲ್ಲಿ ಕೋಪ ಸುವ್ಯಕ್ತವಾಯಿತು ಸುವ್ವಿ ಕೋಪ ಸುವ್ಯಕ್ತವಾಯಿತು ವಾದಿ ಹರಿಭಕ್ತರೊಡನೆ ಕೋಪಂಗಳು ವ್ಯರ್ಥವಾಯಿತು ಸುವ್ವಿ 11 ಪಂಚಮಹಾಭೂತ ದೇಹ ಸಂಚಯರೆಲ್ಲ ಸಂಚಿತಾದಾ ಕರ್ಮಗಳ ಸಂಚಯರೆಲ್ಲ ಸುವ್ವಿ ಸಂಚಿತಾದಾ ಕರ್ಮಗಳ ಸಂಚಯರೆಲ್ಲ ಮುಕ್ತರ ದೇಹವೆಲ್ಲ ಸುಖದ ಸಂದೋಹವಂತೆ ಸುವ್ವಿ 12 ಶರೀರದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ಪಿರಿಯವಾದವು[ನೂರೊಂದು] ಐದು ಸುವ್ವಿ ಪಿರಿಯವಾದವು[ನೂರೊಂದು] ಐದು ಮೂರು ಒಂದು ಈ ಪರಿಯಾಗಿ ಇಪ್ಪುವಂತೆ ಸುವ್ವಿ 13 ಇಳಾನಾಡಿ ಸಾವಿರ ಸೀಳುಮಾಡಿ ಅದರೊಳು ಸೀಳುಮಾಡಿದರೇಳು ವಿರಳನಂತೆ ಸುವ್ವಿ ಸೀಳುಮಾಡಿದರೇಳು ವಿರಳನಂತೆ ನಾಡಿಯಲ್ಲಿ ರಕ್ತವರ್ಣನಾಗಿ ನಾರಾಯಣನಿಹ್ಯ ಸುವ್ವಿ 14 ಒಂದುನಾಡೀ ಪೆಸರು ಸುಷುಮ್ನನಾಡಿಯೆಂಬರು ಅದರಂತರ ಕಡೆಯಲಿ ರಂಧ್ರವಂತೆ ಸುವ್ವಿ ಅದರಂತರ ಕಡೆಯಲಿ ರಂಧ್ರÀ್ರವಂತೆ ನಾಡಿಯಲಿ ಕಮಲ ಮಧ್ಯದಲಿ ತಾ ವಿಮಲನಂತೆ ಸುವ್ವಿ 15 ನಾಡಿ ಮೂಲದೊಳು ನಾಲ್ಕುದಳದ ಕಮಲವುಂಟು [ನೀಲ]ವರ್ಣದಿಂದ ಸಂಪೂರ್ಣನಂತೆ ಸುವ್ವಿ [ನೀಲ]ವರ್ಣದಿಂದ ಸಂಪೂರ್ಣ[ನೀಲವರ್ಣ ಅನಿರುದ್ಧ] ನಲ್ಲಿ ತಾ ವಾಸನಂತೆ ಸುವ್ವಿ 16 ಪೊಕ್ಕುಳಲಿ ಆರುದಳ ಇಕ್ಕ್ಕು ರೀತಿಯಿಂದಲೇಳು [ಬಿಂಕನಾದ] ಸಂಕರ್ಷಣ ಮುಖ್ಯನಂತೆ ಸುವ್ವಿ [ಬಿಂಕನಾದ ಸಂಕರ್ಷಣ] ಮುಖ್ಯನಂತೆ ಜೀವಗೆ ಪಿಂಗಳ ವರ್ಣನಾಗಿ ಹಿಂಗದಿಹ ಸುವ್ವಿ 17 ಇಡಾನಾಡಿ [ಉದೀಚಿ] ಪಿಂಗಳ ದಕ್ಷಿಣದಲಿ ಪ್ರತೀಚಿ [ವಜ್ರಿಕೋ ಪೂರ್ವಾ ಅಂತೆ] ಸುವ್ವಿ ಪ್ರತೀಚಿ ವಜ್ರಿಕೋದೀಚಿ ಬ್ರಹ್ಮನಾಡಿ ಸುತ್ತಾ ಪಂಚನಾಡಿಗಳ ಪಂಚರೂಪಗಳೆ ಸುವ್ವಿ 18 ಎಂಟುದಳ ಕೆಂಪು ಉಂಟು ಹೃದಯ ಕಮಲದಲಿ ವೈಕುಂಠಪತಿ ಚತುರನ ಮಂಟಪವೆ ಸುವ್ವಿ ವೈಕುಂಠಪತಿ ಚತುರನ ಮಂಟಪದ ಮಧ್ಯದಲಿ ವಾಯು ಜೀವರಿಗೆ ಸಹಾಯನಂತೆ ಸುವ್ವಿ 19 ಕೂದಲ ಕೊನೆಯ ಹತ್ತು ಸಾವಿರ ವಿಧವನೆಮಾಡಿ ಜೀವ ಪರಿಮಾಣ ಒಂದೆ ಕಂಡ್ಯ ಸುವ್ವಿ ಜೀವ ಪರಿಮಾಣ ಒಂದೆ ಕಂಡ್ಯ ಚತುರನ ಅಂಗುಷ್ಟದÀಷ್ಟು ಜೀವ [ಅಂಶನಂತೆ] ಸುವ್ವಿ 20 ಸ್ಥೂಲಾಂಗುಷ್ಠ ಪರಿಮಾಣ ಪ್ರಾಜ್ಞನಾದ ನಾರಾಯಣ ಹೃದಯಕಮಲದ ಒಳಗೆ ವಿಮಲನಂತೆ ಸುವ್ವಿ ಹೃದಯಕಮಲದ ಒಳಗೆ ವಿಮಲನಂತೆ [ಜೀವಂಗಾ ರೂಪದಲಿ] ಹರಿ ತಾ ರಕ್ಷಿಪನಂತೆ ಸುವ್ವಿ 21 ಹೃದಯಾಕಾಶದಲಿ ಪ್ರಾದೇಶ ಪರಿಮಾಣ ಆದಿ ಪುರುಷನಿಹ್ಯ ಈ ವಿಧವಾಗಿ ಸುವ್ವಿ ಆದಿ ಪುರುಷನಿಹ್ಯ ಈ ವಿಧವಾಗಿ ಜೀವಗೆ ಗೃಹದೋಪಾದಿಯಲಿ ಹರಿ ರಕ್ಷಕನಂತೆ ಸುವ್ವಿ 22 ಕಂಠದೇಶದಲಿ ಉಂಟು ತೈಜಸಮೂರ್ತಿ ಕರ ಹತ್ತೊಂಬತ್ತು ಶಿರಗಳು ಸುವ್ವಿ ಕರ ಹತ್ತೊಂಬತ್ತು ಶಿರಗಳು ಮಧ್ಯದಲ್ಲಿ ಕರಿಮುಖ ಹಸ್ತಿಯಾಗಿಪ್ಪನಂತೆ ಸುವ್ವಿ 23 ಕಿರುನಾಲಗೆಯಲ್ಲಿ ಎರಡುದಳ ಕಮಲ ಅರವಿಂದ ಪದ್ಮದಲಿ ನಾರಾಯಣನಿಹ್ಯ ಸುವ್ವಿ ಅರವಿಂದ ಪದ್ಮದಲಿ ನಾರಾಯಣನಿಹ್ಯ ಹರಿಯು ರೂಪವೆಲ್ಲವಾಗಿ ಇಪ್ಪನಂತೆ ಸುವ್ವಿ 24 ದÀಕ್ಷಿಣಾಕ್ಷಿಯಲಿ ಲಕ್ಷಣ ವಿಶ್ವಮೂರ್ತಿ ಶಿಕ್ಷಕನಾಗಿ ಜೀವರ ವಂಶರಕ್ಷಕನಂತೆ ಸುವ್ವಿ ಜೀವರ ವಂಶರಕ್ಷಕನನ್ನೆ [ಜಾಗರವ ಕಾಣಿಸೋನಷ್ಟೆ] ವಾಣಿ ನಿಪುಣನಂತೆ ಸುವ್ವಿ 25 ಈ ದೇವರು ಪ್ರಾಜ್ಞನಾದ ಹರಿಯ ಕೂಡಿ ನಿದಾನಿಸಲು ಜೀವಂಗೆ ಸುಖತೇಜಸವು ಸುವ್ವಿ ನಿದಾನಿಸಲು ಜೀವಂಗೆ ಸುಖತೇಜಸವು ಅನೇಕಾಗಿ ತೈಜಸನಲ್ಲಿ ಸ್ವಪ್ನಭಾಗ್ಯ ಸುವ್ವಿ 26 ಹುಬ್ಬುಗಳ ಮಧ್ಯದಲಿ ಶುಭ್ರ ನಾಲ್ಕುದಳ ಕಮಲ ಅನಿರುದ್ಧ ನೀಲಾಭ್ರವರ್ಣ ಸುವ್ವಿ ಅನಿರುದ್ಧ ನೀಲಾಭ್ರವರ್ಣನಾಗಿ ಹರಿ ಅಲ್ಲಿ ಅದೃಶ್ಯವಾಗಿರುವನಂತೆ ಸುವ್ವಿ 27 ಶಿರದಲ್ಲಿ ಶುಭ್ರ ಹನ್ನೆರಡುದಳ ಕಮಲ ಅರುಣವರ್ಣನಾದ ನಾರಾಯಣನಿಹ್ಯ ಸುವ್ವಿ ಅರುಣವರ್ಣನಾದ ನಾರಾಯಣನಿಹ್ಯ ಹರಿಯು ಈ ಪರಿಯಲಿ ತಿಳಿದವರಧಿಕರಂತೆ ಸುವ್ವಿ 28 ಬ್ರಹ್ಮಹತ್ಯ ಶಿರಸ್ಕಂಚ ಸ್ವರ್ಣಸ್ತೇಯ ಭುಜದ್ವಯಂ ಸುರಾಪಾನ ಹೃದಾಯುಕ್ತಂ ಗುರುತಲ್ಪ ಸುವ್ವಿ ಸುರಾಪಾನ ಹೃದಾಯುಕ್ತಂ ಗುರುತಲ್ಪ ಕಟಿದ್ವಯಂ ಪಾದ ಪಾಪರೂಪಗಳೆ ಸುವ್ವಿ29 ಪಾತಕ ಪ್ರತ್ಯಂಗಗಳು ಉಪಪಾತಕ ರೋಮಂಗಳು ಪಾಪಪುರುಷ ರಕ್ತನೇತ್ರ ನೀಲಪುರುಷ ಸುವ್ವಿ ಪಾಪಪುರುಷ ರಕ್ತನೇತ್ರ ನೀಲಪುರುಷನಾಗಿ ವಾಸ ವಾಮಕುಕ್ಷಿಯಲಿ ನ್ಯಾಸವಂತೆ ಸುವ್ವಿ 30 ಪುರುಷ ಷೋಡಶನಾದ ಷಟ್ಕೋಣದಲ್ಲಿ ಪ್ರದ್ಯುಮ್ನನಿಹ್ಯ ತ್ರಿಕೋಣದಲಿ ಧ್ಯಾನ ಸಂಕರ್ಷಣ ಕೊಡುವ ಸುವ್ವಿ ತ್ರಿಕೋಣದಲಿ ಧ್ಯಾನ ಸಂಕರ್ಷಣ ಕೊಡುವ ದೇಹ ಪವಿತ್ರ [ವಾಸುದೇವರಲ್ಲಿ ಸುವ್ವಿ]31 ಹನ್ನೆರಡಂಗುಲಮೇಲೆ ಹನ್ನೆರಡುದಳ ಕಮಲ [ಪ್ರಪÀನ್ನರಿಗೆ] ಮೋಕ್ಷ ಪ್ರಸನ್ನ ಕೊಡುವ ಸುವ್ವಿ [ಪ್ರಪÀನ್ನರಿಗೆ] ಮೋಕ್ಷ ಪ್ರಸನ್ನ ಕೊಡುವ ತುರಿಯ ಸಿತದಳದಲ್ಲಿ ನಿಧಾನಿಸಲು ಸುವ್ವಿ 32 ಮುಖ್ಯಪ್ರಾಣನೆಂಬೊ ಗುರುವು ಹರಿಗೆ ಸಖ್ಯನಾದ ಬಂದ ದುಃಖ ಪರಿಹರಿಸಿ ಸುಖಬಡಿಸುವ ಸುವ್ವಿ ಬಂದ ದುಃಖ ಪರಿಹರಿಸಿ ಸುಖಬಡಿಸುವ ಮಾರುತನು ಹನುಮ ಭೀಮಸೇನ ರೂಪಗಳು ಸುವ್ವಿ 33 ಮೂರನೆ ಅವತಾರ ಆನಂದತೀರ್ಥರು ವೀರವೈಷ್ಣವರಿಗೆ ಆದಿಗುರುಗಳು ಸುವ್ವಿ ಪಾದ ನೆನೆದರೆ ಘೋರ ಸಂಸಾರವನು ನೀಗಿಸುವನು ಸುವ್ವಿ 34 ಘೋರ ಸಂಸಾರವನು ನೀಗಿಸುವ ಹಯವದನ ತನ್ನ ಪಾದದ ಸಮೀಪದಲಿಟ್ಟು ಸಲಹುವ ಸುವ್ವಿ ಪಾದದ ಸಮೀಪದಲಿಟ್ಟು ಸಲಹುವ ಹಯವದನ ಖೇದಗಳ ಬಿಡಿಸಿ ರಕ್ಷಿಸುವ ಸುವ್ವಿ 35
--------------
ವಾದಿರಾಜ
ಸುಳಾದಿ ಧ್ರುವತಾಳ ಶ್ರೀನಿವಾಸನೆ ನೀನು ಬ್ಯಾಗನೆ ಬಂದು ಸಾನುರಾಗದಿ ಸಂಸಾರ ಬಿಡಿಸೋ ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ ಮಾನವ ಕಾಯ್ವುದು ಮಂಗಳಾಂಗನೆ ಏನೇನು ಕಾರ್ಯಗಳು ನಿನ್ನಾಧೀನವಾಗಿರಲು ನಾನುನನ್ನದು ಎಂದು ಮಮತೆಯನೆ ಕೊಟ್ಟು ಅನ್ಯಾಯದಿಂದ ಎನ್ನzಣಿಸುವುದು ದಾನವಾಂತಕರಂಗ ಮುದ್ದುಮೋಹನವಿಠಲ ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ 1 ಮಠ್ಯತಾಳ ಎನ್ನಪರಾಧಗಳು ಅನಂತವಿರುವದನ್ನು ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ 2 ತ್ರಿವಿಡಿತಾಳ ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ ಸಂಭ್ರಮದಿಂದ ಕಾಯೊ ಕರುಣಾನಿಧೆ ಶಂಬರಾರಿಯಜನಕ ಮುದ್ದುಮೋಹನವಿಠಲ ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ 3 ಅಟ್ಟತಾಳ ಏನೇನುದಾನ ಅನಂತ ಮಾಡಲೇನು ಕಾನನದಲಿ ಪೋಗಿ ತಿರುಗಿತಿರುಗಿದಂತೆ ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ ವಾನರ ವಂದ್ಯ ಮುದ್ದುಮೋಹನವಿಠಲ ನಾನಾವಿಧದಿಂದ ನಂಬಿದೆನೊ ಹರಿಯೇ4 ಆದಿತಾಳ ನೀನೆ ಅನಾಥಬಂಧು ನೀನೆ ಅದ್ಭುತಮಹಿಮ ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು 5 ಜೊತೆ ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ
--------------
ಮುದ್ದುಮೋಹನವಿಠಲದಾಸರು