ಒಟ್ಟು 1740 ಕಡೆಗಳಲ್ಲಿ , 104 ದಾಸರು , 1431 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೊ ಬಾರೊ ಬಾರೊ ಶ್ರೀಹರಿ ಭಕ್ತರಾಧಾರಿ ಪ ನಿಗಮವನ್ನು ಅಜಗಿತ್ತೆ ನಗವ ಬೆನ್ನಲಿ ಪೊತ್ತೆ ನೆಗಹಿ ಧರಣಿಯನು ಇತ್ತೆ ಮಗುವ ಪೊರೆದೆ ಸುಗುಣ ಹರಿಯೆ 1 ಪದದಿ ಗಂಗೆಯನ್ನು ಪಡೆದೆ ಬುಧರಿಗೊಲಿದು ಕೊಡಲಿ ಪಿಡಿದೆ ಸುದತಿ ನೆವದಿ ಖಳರ ಬಡಿದೆ ಒದಗಿ ಅಕ್ಷಯವಿತ್ತೆ ಹರಿಯೆ 2 ದುರಳ ತ್ರಿಪುರರನ್ನು ಗೆಲಿದೆ ಭರದಿ ಯವನ ಬಲವ ಮುರಿದೆ ಗರುಡಾಚಲದಿ ನಿಂತು ಭಕ್ತರ ಪೊರೆವ ಲಕ್ಷ್ಮೀಕಾಂತ ಹರಿಯೆ 3
--------------
ಲಕ್ಷ್ಮೀನಾರಯಣರಾಯರು
ಬಾರೊ ಬೇಗ ನೀರಜಾಕ್ಷದೂರು ಇದು ಯಾತಕೊ ಪ ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ ಪಿಡಿದುವಶನಾಗು ಎಂದು ಪೇಳಿನಸುನಗುತಲಿದ್ದೆಯಂತೆ 1 ಕುಸುಮಶರನ ಪೆತ್ತವನೆಬಸವನಾದೆ ಊರೊಳಗೆಶಶಿಮುಖೇರ ದೂರು ಬಹುಪಸರಿಸಿತು ಪೇಳಲಾರೆ2 ಕಂದಕೇಳು ಇಂದುಮುಖಿಯರಹೊಂದಿ ಆಡಲೇಕೆ ಈಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ 3
--------------
ವ್ಯಾಸರಾಯರು
ಬಾರೊ ರಂಗ ಕೋಮಲಾಂಗ ದಾರಿಗೆ ತನ್ನಂಗಸಂಗ ನೀಡಲ್ಹೋದ ಎನ್ನ ಕಂಗಳಿಂದ ನೋಡದೆ 1 ಉಂಗುರಗುರುಳ ಚೆಲ್ವೆ ಉದಯಭಾಸ್ಕರನಂತಿದ್ದ ಜಾಂಬವಂತಿಯೇರ್ಹಂಬಲಿಸುತ್ಹೋದನೆ ಸಖಿಯೆ 2 ರಂಗುತುಟಿ ರಜತದಾಭರಣ ಕುಂದಣದಂತಿರುವೋ ಕೋಮಲೆ ಇಂದು ನಾ ಕರೆತಾವೇನಮ್ಮ ಸುಂದರಾಂಗನ 3 ವೇಳ್ಯಮಾಡಿದೆನ್ನರಮಣ ಕಾಳಾದೇವಿ ಮನೆಯಲವಳ ತೋಳ ಪಿಡಿದು ಸೆಳೆಮಂಚದಲ್ಲಿ ಕುಳಿತಿಹನೆ 4 ಏಳು ಏಳೆಂದೆಬ್ಬಿಸುತಲಿ ಈರೇಳು ಲೋಕದೊಡೆಯನ ನಾಳೆ ನಾ ಕರೆತಾವೇನಮ್ಮ ನಾರದಪ್ರಿಯನ 5 ಅಮ್ಮನಾ ಸ್ಮರಿಸಲ್ಲಾ ್ಹ್ಯಗೆ ಪನ್ನಂಗಶಯನ ನೀಲ ರನ್ನಮಂಚದಲ್ಲಿ ಲೆತ್ತವನ್ನಾಡಹೋದ 6 ಅನ್ನವನು ಬಿಟ್ಟು ಭಾಮೆ ತನ್ನ ಪ್ರಾಣ ತೊರೆವೋಳೆಂದು ಮನ್ನಿಸಿ ಕರೆತಾವೇನಮ್ಮ ನಿನ್ನಾಳುವೋನ 7 ಮುದ್ದು ಮುಖವನು ನೋಡುತಿದ್ದನಾಕೆ ಮಂದಿರದಲ್ಲಿ ಮದ್ದು ಮಾಡ್ವೊಲಿಸಿದ್ದಾಳೇನಾ ಭದ್ರಾ ಕೃಷ್ಣಗೆ 8 ಸದ್ಯೋಜಾತನಯ್ಯನಯ್ಯ ಕದ್ರುಕುಮಾರನ ಶಯ್ಯ- ನ್ನ ್ಹದ್ದೇರಿಸಿ ಕರೆತಾವೇನಮ್ಮ ಪದ್ಮನಾಭನ 9 ಅತ್ಯಂತ ಪ್ರೀತಿ ಮೋಹದ ಮಿತ್ರವಂತೆ ಮಂದಿರದಲ್ಲಿ ವತೆÀ್ತಯಿಟ್ಟಂತಾಯಿತಮ್ಮ ವಾಮಾಂಗಿ ಹರಿಯ 10 ಸತ್ಯವಾಗಿ ಕೇಳೇ ಭಾಮೆ ಹೆತ್ತ ತಾಯಿ ತಂದೆಯರಾಣೆ ಹಸ್ತ ಮುಗಿದು ಕರೆತಾವೇನರ್ಕಕೋಟಿತೇಜನ 11 ಪಚ್ಚೆಪದಕ ರತ್ನದಾಭರಣ ಅಚ್ಚಮುತ್ತಿನಂತಿರುವೊಳ್ವೊಯ್ಯಾರಿ ಮೆಚ್ಚು ಮಾಡೊಲಿಸಿದ್ದಾಳೇನೊ ಲಕ್ಷಣಾ ಹರಿಯ 12 ರಕ್ಷಿಸ್ಹರಿ ರಕ್ಷಿಸೆಂದು ಇಕ್ಷು ಬಿಲ್ಲನಯ್ಯನ ಕರೆತಂದು ಈ ಕ್ಷಣದಲ್ಲಿ ಕೂಡಿಸುವೆ ಇಂದಿರಾಪತಿಯ 13 ಚೆಲ್ವೆರುಕ್ಮಿಣಿ ಮಂದಿರದಲ್ಲಿ ಮಲ್ಲಿಗೆ ಮಂಚದಲ್ಲೆಚ್ಚರಿ- ಲ್ಲದ್ಹಾಗೆ ಕುಳಿತಿದ್ದ ಬರುವೋನಿಲ್ಲಿಗಿನ್ನಾ ್ಹ್ಯಗೆ14 ಪಲ್ಲವಪಾದಗಳಿಂದ ನಿಲ್ಲದೆ ಭೀಮೇಶಕೃಷ್ಣ ಇಲ್ಲಿಗೆ ಬಂದಿರುವ ನೋಡೆ ಫುಲ್ಲನಯ್ಯನು 15
--------------
ಹರಪನಹಳ್ಳಿಭೀಮವ್ವ
ಬಾರೊ ಸುದಾಮ ಬಾರೆನ್ನ ಮಿತ್ರ ದಾರಿ ನಮ್ಮಲ್ಲಿಗೆ ತೋರಲಿಲ್ಲೇನೊ ಪ ನಿನ್ನಯ ಪತ್ತೆಯು ಸಿಕ್ಕಲಿಲ್ಲೆನಗೆ ಎನ್ನಯ ಪತ್ತೆಯು ನಿನಗತಿ ಸುಲಭ ಎನ್ನತ್ತಿಗೆ ಕ್ಷೇಮದಿಂದಿರುವಳೆ ಪೇಳೊ ನಿನ್ನತ್ತಿಗೆ ಕ್ಷೇಮದಿರುವಳು ಕೇಳು 1 ಸತಿಸುತರನು ಕಾಣದುಂಟೇನೊ ಚಿಂತೆ ಸತಿಸುತರನ್ನಿಲ್ಲಿ ಕರೆಸುವೆ ಕಾಣೊ ನೀ ತಂದ ಒಡವೆಗಳೇನೇನು ತೋರೊ ಪೃಥುಕದ ಗಂಟನೆ ಬಿಚ್ಚೊ ನೀ ಬೇಗ 2 ಪೃಥುಕೈಕÀ ಮುಷ್ಟಿಯ ತಿಂದಾಗುತಿರಲು ಕ್ಷಿತಿಪತಿ ಕರವನೆ ಪಿಡಿದಳು ಭೈಷ್ಮೀ ಪೃಥುಕದ ಮುಷ್ಟಿಗೆ ಮೋಕ್ಷವ ಕೊಡುವಿ ಮತ್ತಿನ್ನು ತಂದರೆ ಕೊಡುವುದೇನರಸ 3 ತಟ್ಟಿ ಮುದ್ದಾಡಿ ಸುದಾಮನ ಬಿಡನು ಪುಟ್ಟಾದ ಮಕ್ಕಳ ಬಿಟ್ಟು ಬಂದಿರುವಿ ಕಷ್ಟವು ನಿನಗೇನೊ ಮಿತ್ರ ನಾನಿರಲು 4 ರಾಜೇಶ ಹಯಮುಖ ಚರಣಾಬ್ಜಗಳನು ಭಜಿಸುತ್ತ ನೀ ಪೋಗು ಮರೆಯದೆ ಮಿತ್ರನ ಮೂಜಗದೊಳಗಿಂಥ ಮಿತ್ರನೆಲ್ಲಿಹನು 5
--------------
ವಿಶ್ವೇಂದ್ರತೀರ್ಥ
ಬಾರೋ ನಲಿದಾಡೋ ಜಿಹ್ವೆಯಲಿ ಮೂರಧಿಕಾರೊಡೆಯನೆ ಬಾರೋ ನಲಿದಾಡೋ ಜಿಹ್ವೆಯಲಿ ಪ ದಾಸಾ ಬಹು ಮೋಸಕ್ಕೊಳಗಾಗಿಹೆನು ಶ್ರೀಶಾ ಕರಪಿಡಿಯೆನ್ನ ದೋಷ ಮಹದಾಶಾ ವಹಿಸಿರುವೇನು ಘಾಸಿಯಾದೇನು ಮಾಡೋ ಕರುಣಾರ್ಣವದಿ ಈಶಾ ಘನವೇಷಾ ಬಹುತೋಷ ದಾಸನ ಮಾಡಿಕೊ ಎನ್ನ 1 ಕಂದೀ ನಾ ಕುಂದೀ ಗೃಹದೊಳಗೆ ಮಂದಿಯಾ ಶೇರಿದೆ ನೊಂದೇ ಬಹು ಬೆಂದೇ ಮನದೊಳಗೆ ಬಂಧನದೊಳು ಶಿಲ್ಕಿ ಸುಂದರ ಮೂರುತಿ ಸಂದಣಿಯದೆ ನಾ ಹೊಂದಿದೆನಿನಭವ ಭವ ನಾಯಿಂದೂ ದ್ವಂದ್ವಾಪದವಿಡಿದಿದೆ 2 ಘೋರಾ ನಿಸ್ಸಾರ ಭವದೊಳಗೆ ದಾರಿಗಾಣೆನು ಮಾರಾ ಬಹುದೀ ರಾಮನದೊಳಗೆ ಶೇರಿ ಕುಣಿವಾನು ಮಾರಜನಕ ನಿನ್ ಹಾರೈಶನುದಿನ ಶೇರಿ ಭಜಿಸಿ ನಿನ್ನ ನರಸಿಂಹವಿಠ್ಠಲ ಸಾರಿ ನಿನ ಕೋರಿ ಪದಶೇರಿ ಆರಾಧಿಸುವೀಗಳೆ 3
--------------
ನರಸಿಂಹವಿಠಲರು
ಬಾರೋ ಬಾರೋ ಎನ್ನ ನೀ ತಾರಿಸ ಬಾರೋ ಪ ಸಾರಥಿ ಬಾರೋ | ವಾಸುಕಿ ಶಯನಾವಂತನೇ ಬಾರೋ | ವಾಸುದೇವ ಮುಕುಂದನೆ ಬಾರೋ | ವಾಸ ಮಾಡಿದೆ ಕ್ಷೀರಾಬ್ಧಿಲಿ ಬಾರೊ 1 ಕರಿವರ ಸಂಕಟ ಹರಿಸಿಹ ಬಾರೋ | ಕರುಣಾಕರ ಗೋಪಾಲನೆ ಬಾರೋ | ಕರದಲಿ ಚಕ್ರವ ಪಿಡಿದಿಹ ಬಾರೋ | ಕರಿಚರ್ಮಾಂಬರ ಮಿತ್ರನೆ ಬಾರೋ 2 ಸರಸೀರುಹದಳ ನೇತ್ರನೇ ಬಾರೋ | ಸರಸೀರುಹ ಸಂಭವ ವಂದ್ಯನೇ ಬಾರೋ | ಸರಸಿಜೋವನಾಭನೆ ಬಾರೋ | ಸಾರಥಿ ಬಾರೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ಭವನುತಚರಣನೆ ಸಾರಸುಗುಣ ಪರಿಪೂರಿತ ಕರುಣನೆ ಪ ಚರಣಕಮಲಗಳಿಗೆರಗುವೆ ಭಕ್ತಿಯಲಿ ಭರದಲಿ ಎನ್ನನು ಪೊರೆಯಲು ಮುದದಲಿ 1 ಅರಿದರ ವರಗಳ ಕರದಲಿ ಪಿಡಿಯುತ ಕರಿಯನು ಪೊರೆಯುವ ತ್ವರೆಯಲಿ ಬಹವೋಲ್2 ಪರಮಪುರುಷ ಫಣಿಗಿರಿಶಿಖರಾಲಯ ವರದವಿಠಲ ಸುಖಕರ ಕಮಲಾಲಯ 3
--------------
ವೆಂಕಟವರದಾರ್ಯರು
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ಬಾರೋ ಮನೆಗೆ ರಂಗಾ ಕರುಣಾ ಪಾಂಗ ನರಸಿಂಗ ಪ. ಬಾರೋ ನಿನ ಪರಿವಾರ ಸಹಿತಲಿ ವಾರೆರೊಡಗೂಡಿ ನೀರಜಾಕ್ಷನೆ ಭವ ಕರುಣಾಂಬುದೆ ಅ.ಪ. ಪಿಡಿದು ಖಡ್ಗವ ನಿನ್ನ ವಡೆಯನ ತೋರೆಂದು ಘುಡುಘುಡಿಸಲು ಕಂದ ವಡನೆ ಕೂಗೆ ವಡಲ ಬಗೆದು ಕರುಳ ಮಾಲೆಯ ಪಿಡಿದು ಧರಿಸುತ ವಡನೆ ಭಕ್ತನ ಬಿಡದೆ ಸಲಹಿದ ಕಡು ದಯಾನಿಧೆ 1 ಪಿತನ ತೊಡೆಯಿಂದ ಭೂಪತಿಸತಿ ನೂಕಲು ಅತಿಭಯದಲಿ ಧ್ರುವ ಖತಿಗೊಳ್ಳುತ ಪತಿತ ಪಾವನ ನಿನ್ನ ಕಾಣಲು ಮುನಿ ಪತಿಯು ಪೇಳಿದ ಪಥದಿ ಪುಡುಕೆ ಅತಿಶಯದಿ ಬಂದ್ಹಿತವ ಕೋರಿದ ಗುಣಾನ್ವಿತ ದಯಾಂಬುಧೆ2 ಕರಿ ಮೊರೆಯಿಡೆ ಸಿರಿಗ್ಹೇಳದಲೆ ಬಂದು ಗರುಡ ಗಮನನಾಗಿ ತ್ವರಿತದಿಂದ ಶರಣಪಾಲಕ ನಿನ್ನ ಚಕ್ರದಿ ತರಿದು ನಕ್ರ ನಕರಿಯ ಪೊರೆದ ತೆರದೊಳೆನ್ನ ವಗುಣಗಳೆಣಿಸದೆ ಹರುಷದಲಿ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಬಾಲಕನೆಂದೆತ್ತಿಕೊಂಡೆನೆ - ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ ಪ ಬಾಲಕನೆಂದೆತ್ತಿಕೊಂಡರೆ - ವಾರೆ ಮಾಡಿ ಮೋರೆ ನೋಡಿಶ್ರೀಲತಾಂಗಿಯರ ಲೋಲ - ಮಾರನಾಟವಾಡಿ ಪೋದನೆ ಅ ಹೊತ್ತರೆದ್ದು ಮನೆಗೆ ಬಂದನೆ - ಯಶೋದೆ ಕೇಳೆ ಎತ್ತಿಕೊಂಡು ಮುತ್ತುಕೊಟ್ಟೆನೆಎತ್ತಿಕೊಂಡು ಮುತ್ತು ಕೊಟ್ಟರೆಮುತ್ತಿನ್ಹಾರ ಕೊರಳಿಗ್ಹಾಕಿಚಿತ್ತಜಾತ ಕೇಳಿಯಲ್ಲಿಬತ್ತಲೆ ನಿಂದೆತ್ತು ಎಂದನೆ1 ಗಂಡನಂತೆ ಮನೆಗೆ ಬಂದನೆ - ಯಶೋದೆ ಕೇಳೆಮಿಂಡನಂತೆ ಕಣ್ಣು ಹೊಡೆದನೆಪುಂಡಪೋಕರನ್ನು ಮೀರಿದುಂಡು ಕುಚಗಳನ್ನು ಪಿಡಿದುದಿಂಡುರುಳಿಸಿ ಒಂದುಸರಲಿಬಂಡನುಂಡು ಹಾರಿ ಪೋದನೆ 2 ಏಸು ಮೋಸ ಕಲಿತ ಜಾಣನೆ - ಯಶೋದೆ ಕೇಳೆವಾಸುದೇವ ಮಾಯಕಾರನೆಹಾಸುಮಂಚದ ಹಾಸುಗೆಯಲಿತೋಷದಿಂದ ಬಾಚಿ ಸೆಳೆದುಶೇಷನನ್ನು ಪೂಜಿಸೆಂದಶ್ರೀಶ ಬಾಡದಾದಿ ಕೇಶವ 3
--------------
ಕನಕದಾಸ
ಬಾಲಕೃಷ್ಣ ಇಂದುವದನೆ ಎನ್ನ ಕಂದನ ನೋಡೆ ಪ ಮಂದಿರದೊಳಗೆಷ್ಟು ಚಂದದಿಂದಾಡುವನೆ ಅ.ಪ ದೃಷ್ಟಿ ಮಾಲೆಯ ಕಟ್ಟಿಪೆ ಕೊರಳೊಳುದೃಷ್ಟಿ ಆಗುವುದಲ್ಲೆ ಪುಟ್ಟ ನಮ್ಮಪ್ಪನಿಗೆ 1 ನಗುವನು ಬೆಳದಿಂಗಳ ಹಗಲೆ ಬಂದಿಹುದೇನೆನಗುತ ನಿಂತಿರುವ ಸುಗುಣವಂತನ್ನ ಎನ್ನಬಗಲೊಳಗೆತ್ತಿಕೊಂಬುವೆನೆ 2 ದಧಿ ಪೇಯ ಪಿಡಿಯನು ಒಂದಿ£ 3 ಅಂಗಿ ಕುಂಚಿಗಿ ಹಾಕಿ ಶೃಂಗರಿಸುವೆನುಅಂಗಳದೊಳಗೆಷ್ಟು ಮಂಗಳ ತೋರುವನೆ 4 ಕೂಸಿನಿಂದಲೆ ಗೋಷ್ಟ ಭೂಷಿತವಾಗಿದೆಸಂತೋಷಿಸುತ ಇಂದಿರೇಶನು ನಲಿವನು 5
--------------
ಇಂದಿರೇಶರು
ಬಾಲಕೃಷ್ಣ ಹರಿ ವಿಠಲ | ಪಾಲಿಸೋ ಇವಳಾ ಪ ಲೀಲಾ ಮನೋರೂಪ | ಕಾಳಿಂದಿ ರಮಣಾ ಅ.ಪ. ಈ ದಾಸತ್ವ ದೀಕ್ಷಾ | ಸಾಧಿಸುವುದತಿ ಕಷ್ಟಸಾಧು ಈ ಕನ್ಯೆ ಬಹು | ಭಕ್ತಿಯಲಪೇಕ್ಷೆಗೈದು ಬೇಡಿಹಳಿವಳು | ಭೋಧಿಸಿಹೆ ಅಂಕಿತವಕಾದುಕೋ ದಯವನಧಿ | ಬಾದರಾಯಣನೇ 1 ಕಾಮಾದಿಗಳ ಕಳೆದು | ನೇಮದಲಿ ಸಾಧನವನೀ ಮಾಡಿ ಮಾಡಿಸೋ | ಕಾಮ ಪಿತ ಹರಿಯೇಸ್ವಾಮಿ ನೀನಲ್ಲದಲೆ | ಅನ್ಯರನು ನಾ ಕಾಣೆಭೀಮ ಭವಾರ್ಣವವ | ದಾಟಿಸಲು ನಾಕಾಣೆ 2 ಭವವನಧಿ ನವ ಪೋತ | ತವನಾಮ ಸ್ಮøತಿಯಿತ್ತುಪವನ ಸದನದಿ ನಿನ್ನ | ನಂದನದಲ್ಲಿರಿಸೋಅವರಿವರ ಮನೆ ವಾರ್ತೆ | ಕಿವಿಗೆ ಕೇಳಿಸಬೇಡಭವನದಲಿ ಸಾಧನವ | ಗೈವಂತೆ ಮಾಡೋ 3 ಸಾಧು ಸಂಗವ ಕೊಟ್ಟು | ನೀ ದಯದಿ ಕಾಪಾಡೋಮೋದ ತೀರ್ಥರ ಮತವ | ಭೋದಿಸೋ ಮುದದೀಮಾಧವನೆ ಕಾಮಿತವ | ಆದರದಿ ಪಾಲಿಸುತಕಾದುಕೋ ಬಿಡದಿವಳ | ಶ್ರೀದ ನರಹರಿಯೇ 4 ಭಾವ ಭಕ್ತಿಯಲಿಂದ ಹಿರಿಯರ ಸೇವಿಸುವಭಾವುಕಳ ಕೈಪಿಡಿದು | ಕಾಪಾಡೊ ಹರಿಯೇಗೋವು ಕರುವಿನ ಮೊರೆಗೇ | ಧಾವಿಸೀ ಬರುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಬಾಲನೇನೆ ನಿನ್ನ ಮಗನು ಗೋ- ಪಾಲಕೃಷ್ಣನು ಪ. ಬಾಲನೇನೆ ನಿನ್ನಮಗನು ಬಾಲಕಿಯರಾಲಯ ಪೊಕ್ಕು ಶೀಲಗೆಡಿಸಿ ಸಾಲದೆ ಗೋ- ಕುಲವನು ಸೂರೆಮಾಡಿದ ಅ.ಪ. ಕಾಲು ಇಲ್ಲದೆ ನಡೆವನೀತ ಮೇಲುಗಿರಿಯ ಬೆನ್ನಲಾಂತ ಮೂಲಬೇರ ಮೆಲ್ಲುವಾತ ಜ್ವಾಲರೂಪಿ ಸ್ಥೂಲಕಾಯ ಬಾಲನಾಗಿ ಭೂಮಿಬೇಡಿದ ಹಾಲು ಕುಡಿಸಿದ ತಾಯ ಎರವು ಮಾಡಿದ ವಲ್ಕಲವನುಟ್ಟು ಅಡವಿ ಆಲಯವ ತಿರುಗಿದ ಶ್ರೀರಾಮಚಂದ್ರ ವೇಲಾಪುರದ ಸೋರುಮುಡಿಯ ಬಾಲೆಯನು ಸೋಲಿಸಿ ಕಾಲದಲ್ಲಿ ಕಲ್ಕ್ಯನಾದ 1 ಮಡುವಿನಲ್ಲಿ ಅಡಗಿಯಿರುವ ಪೊಡವಿ ದೊಡ್ಡನೆತ್ತಿ ಪೊರೆವ ಅಡವಿಯಲ್ಲಿ ಆಡುತಿರುವ ಕಡುಕ್ರೂರ ಹಿಡಿದ ಹಟವ ಹುಡುಗನಾಗಿ ಪೊಡವಿ ಬೇಡಿದ ಕೊಡಲಿ ಪಿಡಿದು ಕಡಿದು ಕ್ಷತ್ರಿಯರ ಕುಲವ ತರಿದನೆ ರಾವಣಾದಿ ಪಡೆಯನೆಲ್ಲ ಸಂಹರಿಸಿದ ಶ್ರೀರಾಮಚಂದ್ರ ತುಡುಗು ಮಾಡಿ ಗಡಿಗೆ ಪಾಲ ಕುಡಿದು ಕಡಹದಲ್ಲಿ ಅಡಗಿ ಬಿಡದೆ ತ್ರಿಪುರವ್ರತಕೆಡಿಸಿ ಪಿಡಿದು ತೇಜಿಯ ನಡೆಸುತಿಹನು 2 ನೀರಪೊಕ್ಕು ವೇದತಂದು ಭಾರಪೊತ್ತು ಬೆನ್ನಲಿಟ್ಟು ಕೋರೆಹಲ್ಲು ತೋರುವ ಕ್ರೂರವದನ ಅಪಾರ ಮಹಿಮ ಪಾದ ಭೂಮಿ ಬೇಡಿದ ವಿಪ್ರರ ಕರೆಸಿ ಧಾರುಣಿಯನೆ ದಾನ ಮಾಡಿದ ಪರ್ವತಗಳ ತರಿಸಿ ಶರಧಿಯನ್ನು ಸೇತುಕಟ್ಟಿದನೆ ಶ್ರೀರಾಮಚಂದ್ರ ಜಾರ ಚೋರ ಮಾರನಯ್ಯ ನಾರೇರಪ್ಪಿ ಮರುಳುಮಾಡಿ ವಾರಿಜಾಕ್ಷ ಹಯವದನ ಏರಿ ಕುದುರೆ ವೈಹಾಳಿಮಾಡಿದ 3
--------------
ವಾದಿರಾಜ
ಬಾಲೆಯರೆಲ್ಲರು ಬನ್ನಿರೆ ರನ್ನದ ಕೋಲ್ಗಳನೀವ್ ಪಿಡಿದು ಪ. ಮೇಲಹ ಪದಮಂ ಪಾಡುವ ಕೋಲಾಹಲ ಸಮಯವಿದು ಅ.ಪ. ಶರಧಿತನೂಭವೆ ನೀ ಬಾ ಬಾ ನೆರೆಮೆರೆವೀ ಶರದುತ್ಸಹಮಂ ಅರಿಪುತು ಜಗಕಿಂದು 1 ನಿಗ್ರಹಕಾರ್ಯದಿಂದುಗ್ರನಾಗಿಹ ಭರ್ಗನಕೆಲಕೈತಂದು ವ್ಯಗ್ರತೆಯಿಳಿಸಿ ಪೊರೆ ಶೀಘ್ರದಿ ಗಿರಿಸುತೆ ಸಮಗ್ರ ಭಾರತಮಿಂದು2 ಸರಸ್ವತಿ ಬಾ ನಿನ್ನರಸನ ಕೆಲಸಾರ್ ಧರೆಯೊಳ್ ಸುಪ್ರಜರಂ ನೆರೆ ಸೃಜಿಸುವ ವೋಲ್ ಅರುಹು ವಿಚಕ್ಷಣೆ ಅಸುರರ ಪಡೆಯದಿರೆನ್ನು3 ಶರದಿತನೂಭವೆ ಅರಸಗೆ ನೀನೊರೆ ಪರಿಪರಿ ವಿಧದಿಂದಂ ಕೊರತೆಯದಿಲ್ಲದೆ ಪೊರೆ ಜಗಮೆನ್ನುತ ಪೊರೆವೆವು ಛಲದಿಂದಂ4 ಭಾರತ ಜನನಿಯ ಭಾಗ್ಯೋದಯಮಂ ತೋರಿರೆ ಶಕ್ತಿತ್ರಯರೆ ಭಾರತವೀರರಿಗಾರೋಗ್ಯೈ ಶ್ವರ್ಯಂಗಳ ಕರುಣಿಸಿರೇ 5 ರಾಷ್ಟ್ರಪ್ರಮುಖರ ಕಷ್ಟಂಗಳ ನಾ ವೆಷ್ಟೆಂದೊರೆದಪೆವೇ ಸೃಷ್ಟಿ ಸ್ಥಿತಿ ಲಯಕರ್ತರು ನೀವಿರೆ ದೃಷ್ಟಿಸಿರೀಗೆನ್ನುವೆವೆ 6 ಕನ್ನಡತಾಯಿಯ ಕನ್ನೆಯರಾವು ಉನ್ನತಿಯನ್ನೆಳಸುವೆವು ಮನ್ನೆಯರ್ ನೀವೆಮ್ಮೋಳಿನ್ನಾವೇಶಿಸೆ ಧನ್ಯರು ಮಾನ್ಯರು ನಾವಹೆವು7 ಆರ್ಯಮಹಿಳೆಯರೆನೆ ವೀರಮಾತೆಯರೆನೆ ಧಾರುಣಿಯೊಳಗೆಮ್ಮಂ ಧೈರ್ಯಸ್ಥೈರ್ಯೌದಾರ್ಯ ಗುಣಂಗಳ ಪೂರಿತರಪ್ಪಂತೊಸೆವುದೆಮಗಿನ್ನು 8 ಒಲಿದೆಮ್ಮನು ನೀವ್ ನೆಲೆಸಿರೆ ನಲವಿಂ ಬಲಗೊಳ್ಳುತ್ತಾನವರತಂ ಕಲಿಯುಗಮಲ್ಲಿದು ಕೃತಯುಗಮೆನುವೋಲ್ ಬೆಳಗುವೆವೆಲ್ಲೆಡೆಯೋಳ್9 ಪರಿ ಭಾವಿಸಿ ಮನ್ನಿಸಿರೆ ಶ್ರೀವರ ಶ್ರೀಶೇಷಗಿರೀವರ ನಾವಗ ಮೋವುಗೆ ಕರುಣಿಸಿರೆ 10
--------------
ನಂಜನಗೂಡು ತಿರುಮಲಾಂಬಾ
ಬಾಳು ಪ್ರೀತಿಯಲಿ ನಮ್ಮ ಬಾಲಕೃಷ್ಣಗೆ ದ್ರಾಕ್ಷಾ-ದೋಳು ಬಂದಿಹ ಗೋಕುಲಾಲಯದಿಂದ ಪ ಪುಟ್ಟ ಕರದಿ ಚೌಕಿಲಿಟ್ಟ ದ್ರಾಕ್ಷದ ಬೆಳ್ಳಿಬಟ್ಟಲಾ ಪಿಡಿಯುತ ದೃಷ್ಟಿಗ್ಹೇಳಿದಾನು 1 ಉದ್ಧವಾ ಪದವನ್ನು ಶುದ್ಧವಾಗಲೆ ಪಾಡೆಮುದ್ದು ಕನಕಕಾಂಬೆ ಉದ್ದ ಬಾಲಕನು 2 ಸುಂದರ ಬಾಲಕಾ ಇಂದಿರೇಶನೆ ಇವಇಂದು ನೋಡುತ ಮುಖ ನಂದವಾಗಿಹುದು ಆನಂದವಾಗಿಹುದು 3
--------------
ಇಂದಿರೇಶರು