ಒಟ್ಟು 247 ಕಡೆಗಳಲ್ಲಿ , 67 ದಾಸರು , 236 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂ ಶ್ರೀ ರಘುಕುಲಾಬ್ಧಿಚಂದ್ರ ಭವತು ತೇ ಶುಭಮಂಗಳಂ ಶ್ರೀರಘುಕುಲಾಬ್ದಿಚಂದ್ರ ಪ. ಸುರರಿಪುಶಮನ | ಕ್ಷೀರಶರಧಿಶಯನಾ ಕರಿವರನಮನ ಮುರಹರ ಶ್ರೀ | ಸುರವೈರಿಭಯಂಕರ ಮಾವರಶ್ರೀ | ಸರಸಿಜಾಕ್ಷ ಸಾಧುಪಕ್ಷ ದುರಳಶಿಕ್ಷ ಶ್ರೀಕಟಾಕ್ಷ 1 ಹರಣ ಭುವಿರ ಜಾರಮಣ ಭಯಹರ | ಪವನಾತ್ಮಜ ಕವಿಜನಾಳಿಪೂರ್ಣಕಾಮ 2 ದಾಸ ಹೃದಯಾವಾಸ | ದಶಶಿರಧ್ವಂಸ ಶಶಿನಿಭಹಾಸ | ದಶರಥಸುತ | ಶ್ರೀ ವಸುಮತೀಶ ಕುಲವಿಭೂಷ | ಶೇಷಶೈಲ ಶಿಖರಾವಾಸ ಜಯಮಂಗಳಂ3
--------------
ನಂಜನಗೂಡು ತಿರುಮಲಾಂಬಾ
ಟೀಕಾಕೃತ್ಪಾದ ಕರುಣಾಕರ ಗುರು ಶ್ರೀಕಾರಸರಿತವಾಸ ನಾಕಾಧಿಪನೆ ಮನಶೋಕಾ ಹರಿಸಿ ನಿತ್ಯ 1 ಪೂರ್ಣಬೋಧರ ಮತಾರ್ಣವಚಂದಿರ ನಿರ್ಣಯಿಸಿದೆ ಟೀಕಾರ್ಣವದೊಳು ಸುಧ ಉಣ್ಣಿಸಿದೆಯೊ ಗ್ರಂಥ ವರ್ಣಿಸಿಇರುವೆ ಸತ್ಯ 2 ಮಿಥ್ಯಾವಾದಿಗಳ ಸತ್ಯ ತತ್ತ್ವವೆಲ್ಲ ಕತ್ತರಿಸಿದೆ ನಿತ್ಯ ದೈತ್ಯೋನ್ಮತ್ತರನೆಲ್ಲಾ ಸದೆದೆ3 ನಾಕಾಪತಿಗೆ ದೈತ್ಯಲೋಕಗಳಾ ಬಾಧೆ ತಾ ಕಳೆಯಲು ನಿತ್ಯ ಶ್ರೀಕರದಮೃತವ ಶ್ರೀಕಾಂತನಿತ್ತಂತೆ ನೀ ಸುಧೆಯನು ತಂದೆ 4 ದಶಪ್ರಮತಿಸುಶಾಸ್ತ್ರಶರಧಿಯೊಳು ವಾಸಿಸುವೆಯೊ ನಿತ್ಯ ಮೀಸಲಮನ ಕೊಟ್ಟೆನ್ನಾಸೆಯ ಹ ರಿಸಿ ಪದಸೇವೆಯ ಕೊಡೊ ನಿತ್ಯ5 ಪಾಕಶಾಸನ ಸುಖ ಬೇಕಾಗಿ ತೊರೆದು ನೀ ನೇಕಾಂತದಲಿ ನಿಂತೇ ಲೋಕಸುಖದಿ ಭವಶೋಕದಲ್ಲಿಹ ಎ ನ್ನ ಕಾಪಾಡುವುದು ನಿತ್ಯ6 ಶೇಷಾವೇಶ ಆವೇಶಾಮಹಿಮ ಎನ್ನ ದೋಷರಾಶಿಯ ಕಳೆದು ಶೋಷಿಸು ಮನಕಲ್ಮಷವಿಷವನೆಲ್ಲ ನಿ ಶ್ಶೇಷವ ಮಾಡಿ ಸಲಹೊ 7 ಹಲವು ವಿಷಯದ ಹಂಬಲದಿಂದ ಎನ್ನ ಜ್ಞಾನ ಹೊಲಬುಗೆಟ್ಟುದು ನಿತ್ಯ ಅಲವಬೋಧರ ತತ್ತ್ವ ಲವಮಾತ್ರವಾದರು ನೀ ಎನಗೆ ಪಾಲಿಸೊ8 ಮುಕ್ತಿಮಾರ್ಗಕೆ ಜ್ಞಾನಭಕ್ತಿವೈರಾಗ್ಯಗುರು ಭಕ್ತಿಯೆ ಮುಖ್ಯಕಾರಣ ಯುಕ್ತಶಾಸ್ತ್ರ ಪ್ರಸಕ್ತಿ ಇಲ್ಲದ ತ್ವ ದ್ಭಕ್ತನಾದೆನ್ನ ಸಲಹೊ9 ಅಕ್ಷೋಭ್ಯ ಕಟಾಕ್ಷದಿ ಯತಿ ಹ ರ್ಯಕ್ಷನಾಗಿಹೆ ದೀಕ್ಷಾ ಶಿಕ್ಷೆಮಾಡಿ ಪರಪಕ್ಷವಾದಿಗಳನ್ನು ಸ ತ್ಶಿಕ್ಷಕನಾಗಿ ಮೆರೆದೆ10 ಮರುತಾಂತರ್ಗತ ಶ್ರೀ ವೇಂಕಟೇಶನ ಪಾದ ಚರಣಕಮಲಮಧುಪ ನಿರುತ ನೀ ಕರುಣಿಸು ಉರಗಾದ್ರಿವಾಸವಿಠಲನ ನಿಜದಾಸ 11
--------------
ಉರಗಾದ್ರಿವಾಸವಿಠಲದಾಸರು
ತವದಾಸೋಹಂ ದಾಶರಥೆ ಪ ಪಶುಪತಿ ಶಶಿರವಿನೇತ್ರಾ ದಾಶರಥೆ 1 ಕದನಪ್ರಚಂಡ ದಾಶರಥೆ 2 ಹಾಟಕವಸನಾ ದಾಶರಥೆ 3 ಮನುಜವಿಶೇಷ ದಾಶರಥೆ 4 ಕರಧೃತಗೋತ್ರ ದಾಶರಥೆ 5 ಶ್ರೀವಧೂರಮಣ ದಾಶರಥೆ 6 ಶಿಕ್ಷಿತಕಾಕ ದಾಶರಥೆ 7 ವ್ಯಾಘ್ರಾದ್ರಿಸದನ ದಾಶರಥೆ 8 ವರದಾರ್ಯವಿಠಲ ದಾಶರಥೆ 9
--------------
ವೆಂಕಟವರದಾರ್ಯರು
ತವದಾಸೋಹಂ ದಾಶರಥೆ ಪ ದಶರಥಪುತ್ರಾ-ಪಶುಪತಿಮಿತ್ರ-ಶಶಿರವಿನೇತ್ರಾ-ದಾಶರಥೆ1 ಕದನಪ್ರಚಂಡ ದಾಶರಥೆ 2 ತಾಟಕಾಹನನ ತಾಡಿತಕುಜನ ಹಾಟಕವಸನಾ-ದಾಶರಥೆ 3 ಮನಸಿಜವೇಷ ಮಂಜುಳಭಾಷ ಮನುಜವಿಶೇಷ ದಾಶರಥೆ4 ಶರದಾಭಗಾತ್ರ ಶರನಿಧಿಯಾತ್ರಾ ಕರಧೃತಗೋತ್ರ ದಾಶರಥೆ 5 ರಾವಣಹರಣ-ಪಾವನಚರಣ-ಶ್ರೀವಧೂರಮಣ-ದಾಶರಥೆ 6 ರಕ್ಷಿತಲೋಕ ರಚಿತಸು ಶ್ಲೋಕ ಶಿಕ್ಷಿತಕಾಕ ದಾಶರಥೆ 7 ವ್ಯಾಘ್ರಾಗಶಮನ-ವ್ಯಾಘ್ರಾರಿಗಮನ ವ್ಯಾಘ್ರಾದ್ರಿಸದನ ದಾಶರಥೆ 8 ಪರಿಹೃತ ಕುಟಿಲ-ಸರಸಿಜನಿಟಿಲ ವರದಾರ್ಯವಿಠಲ ದಾಶರಥೆ 9
--------------
ಸರಗೂರು ವೆಂಕಟವರದಾರ್ಯರು
ತಾತ್ವಿಕ ಹಿನ್ನೆಲೆ ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ ಬಗೆ ತಿಳಿಯುವರಾರಮಮ ಪ ಮಗನ ಮಗನಿಗೆ ಒಲಿದು ಮಗಳಧಾರೆಯನೆರದಿ ಮಗಳಮಗನ್ವೈರಿಯ ನಿಗಯಿಟ್ಟು ಸಲಹಿದಿ ಅ.ಪ ಓಂಕಾರದಾಚೆಗಿರ್ದ ಅಮಲರೂಪ ಓಂಕಾರದೊಳು ನೆಲೆಸಿದಿ ಅಂಕುರಿಸಕ್ಷರ ತ್ರಯಲಂಕಾರದಿಂ ಸೃಷ್ಟಿ ಸಂಕಲ್ಪಗೈದು ನಿಷ್ಕಲಂಕನೆಂದೆನಿಸಿದಿ 1 ಸೃಷ್ಟಿ ಉತ್ಪತ್ತಿಗೈದಿ ಉದರದಿ ಇಟ್ಟು ರಕ್ಷಕನೆಂದೆನಿಸಿದಿ ಶಿಕ್ಷಕೆನಿಸಿ ಸರ್ವಸಾಕ್ಷಿನೀನೆಯಾಗಿ ಮೋಕ್ಷ ನೀಡುವ ಮದಧ್ಯಕ್ಷನೆಂದೆನಿಸಿದಿ 2 ಮೇದಿನಿಗೆ ಪತಿಯೆನಿಸಿದಿ ದಾಸರ ಪ್ರಿಯ ಮೇದಿನಿಸುತೆ ಮದುವ್ಯಾದಿ ವೇದಸಮ್ಮತಗೈದಿ ಸಾಧುಜನಕಹುದಾದಿ ಆದಿಶ್ರೀರಾಮ ಮಮ ಬೌದ್ಧದೇವನಾದಿ 3
--------------
ರಾಮದಾಸರು
ತಿರುಪತಿ ಶೇಷಾದ್ರಿವಾಸ ಶ್ರೀನಿವಾಸ ಪ ಶೇಷಾದ್ರಿವಾಸ ವಾಸುಕಿಶಯನನೆ ಕೇಶಿಸಂಹಾರಕನೆ ಕ್ಲೇಶಭವದೂರನೆ ಅ.ಪ ಭಾಭರಣನೇ ಕರುಣಾಸಾಗರನೆ 1 ಪಾಂಡವಪಕ್ಷ ಶ್ರೀನಿವಾಸ ದೈತ್ಯಕುಲಶಿಕ್ಷ ಯಾದವರಕ್ಷ ಯದುಕುಲಪಕ್ಷನೆ ಸಜ್ಜನ ರಕ್ಷನೆ ಕರುಣಾಕಟಾಕ್ಷನೆ 2 ಭವಭಯಭಂಗ ಶ್ರೀನಿವಾಸ ಕರುಣಾಪಾಂಗ ಗರುಡತುರಂಗನೆ ನೀಲಮೇಘಾಂಗನೆ ಸುಗ್ರೀವಸಂಗನೆ ವಾಲಿ ವಿಭಂಗನೆ 3 ಕ್ಷೀರಾಬ್ಧಿಯಿಂದ ನಾರಾಯಣ ಭರದಿ ತಾ ಬಂದ ಕಮಲದೊಳಗೆ ಬಂದ ರಮಣೀಸಹಿತ ತಾ ನಿಂದ ಭಕ್ತರ ಪೊರೆಯುತ ನಿಂದ ಗೋವಿಂದ 4 ಗರುಡವಾಹನನೆ ಶ್ರೀನಿವಾಸ ಪರಮಪಾವನನೆ ಪಂಕಜನಯನನೆ ಪದ್ಮಿನೀ ಅರಸನೆ ಶ್ರೀನಿವಾಸನೆ ಎನ್ನ ರಕ್ಷಿಸೊ ನೀನು 5
--------------
ಯದುಗಿರಿಯಮ್ಮ
ತಿರುಪತಿ ಯಾತ್ರೆಯ ಮಾಡಿ ತಿರುಪತಿ ಪ ತಿರುಪತಿಯಾತ್ರೆಯ ಮಾಡಿ ಮನದ ದುರಿತಪಾಪಗಳನೀಡಾಡಿ ಆಹ ಸ್ಮರಕೋಟಿ ತೇಜನ ದರುಶನಲಾಭವು ದೊರಕಿದ ಸುಜನರ ಚರಿತೆಯ ಕೇಳುತ್ತ ಅ.ಪ ಸುಟ್ಟು ಹೋಗುವದಿದು ಚಂದ ಮೆಟ್ಟು ಮೆಟ್ಟಿಲನೇರುವ ವೃಂದ ಜನ ಸೃಷ್ಟಿಗೊಡೆಯ ಗೋವಿಂದ ಆಹಾ ದಿಟ್ಟಮನದಿ ಪರಮೇಷ್ಠಿಪಿತನ ಪಾಡಿ ಗಟ್ಯಾಗಿ ಗೋವಿಂದ ಗೋವಿಂದನೆನುವರು1 ಗಾಳಿಗೋಪುರವನ್ನೆ ದಾಟಿ ಭಕ್ತ- ರಾ ಮಂಟಪಕೆ ಉಂಟೆ ಸಾಟಿ ತಾಳ ಮೇಳದವರ ಗಲಾಟೀಯಿಂದ ಶೋಭಿಪ ಪವನನಕೋಟಿ ಕೇಳಿ ನೋಡುತ್ತ ಭಕುತಿಸೂರ್ಯಾಡುತ್ತ ಮಹಿಮೆ ಕೊಂ- ಡಾಡುತ್ತ ಪಾಡುತ್ತ ಕುಣಿವ ಸಜ್ಜನರೆಲ್ಲ 2 ಸ್ವಾಮಿ ಪುಷ್ಕರಣಿಯ ಸ್ನಾನ ಮಾಡಿ ಆ ಮಹವರಹದೇವರನ್ನ ಕಾಮ- ಧೇನೆಂಬ ಶ್ರೀ ಗುರುಗಳನ್ನ ನೋಡಿ ಆ ಮಹಾ ಅಶ್ವತ್ಥರಾಜನ್ನ ಸ್ತುತಿಸಿ ನೇಮದಿ ದಿಗ್ಗಾವಿ ಆಚಾರ್ಯರಿಗೆ ನಮಿಸಿ ಶ್ರೀಧರನಾಲಯ ದ್ವಾರಕ್ಕೆ ಪೋಗಲು 3 ಮೂರು ದ್ವಾರಗಳನ್ನೆ ದಾಟಿ ಮು- ರಾರಿಯ ಗುಡಿಸುತ್ತ ಕೋಟೆಯಲ್ಲಿ ಸಾರುವ ಭಕುತರ ಭೇಟಿಯಿಂದ ಅ- ಪಾರ ಜನುಮದ ಪಾಪಮೂಟೆ ಪೋಗಿ ಬೇಗದಿ ವಿಮಾನ ಶ್ರೀನಿವಾಸನ ನೋಡಿ ಸಾಗರಶಯನನ ದರುಶನ ಕೊಡುಕೊಡು ಎಂದು 4 ಕೊಪ್ಪರಿಗೆಯು ಮನೆಯಂತೆ ಹಣ ತಪ್ಪದೆ ಸುರಿಯುವರಂತೆ ನ- ಮ್ಮಪ್ಪ ವೆಂಕಟಸ್ವಾಮಿಯಂತೆ ತಪ್ಪನಾಡುವರ ಶಿಕ್ಷಿಪನಂತೆ ಆಹಾ ಕ್ಷಿಪ್ರದಿ ಶ್ರೀಧರನಪ್ಪಣೆಯಂದದಿ ಅಪ್ರಮೇಯನ ಸೇವೆಗೊಪ್ಪುವ ಸುಜನರು 5 ಹೇಮದ್ವಾರದಿ ನಿಂತ ಜನರು ನಮ್ಮ ಸ್ವಾಮಿ ಶೃಂಗಾರ ನೋಡುವರು ಶ್ರೀನಿ- ವಾಸನೆ ಸಲಹು ಎಂಬುವರು ಪಾಹಿ ಪಾಹಿ ಶ್ರೀಪತಿ ಎನ್ನುತಿಹರು ಶ್ರೀಶ ಗೋವಿಂದ ಗೋವಿಂದ ಗೋವಿಂದ ಮಾಧವ ಮಾತುಳಾಂತಕ ದೇವ ಮಾತು ಲಾಲಿಸು ಎಂದು6 ಚರಣದಂದಿಗೆ ಗೆಜ್ಜೆವಲಿಯೆ ಪೊನ್ನ ಸರಪಳಿ ಪಾಡಗ ನಲಿಯೆ ಒಳ್ಳೆ ಜರದ ಪೀತಾಂಬರ ಹೊಳೆಯೆ ಪಟ್ಟೆ ವರವಲ್ಲಿ ಹೊಳೆಯುತ್ತ ಮೆರೆಯೆ ಆಹ ಸರಗಳು ವಲಿಯುತ್ತ ಪದಕಂಗಳ್ಹೊಳೆಯುತ್ತ ಉರದಲ್ಲಿ ಶ್ರೀದೇವಿ ಇರುವ ವೈಭವ ನೋಡಿ7 ವರಶಂಖು ಚಕ್ರ ಹಸ್ತದಲಿ ದಿವ್ಯ ಸಿರದಿ ಕಿರೀಟ ಮೆರೆಯುತಲಿ ಪಟ್ಟೆ ತಿಲುಕ ಕಸ್ತೂರಿ ಹೊಳೆಯುತಲಿ ಥಳ ಥಳ ಹೊಳೆವ ಮುಖಕಾಂತಿಯಲಿ ಅಹ ಕಡೆಗಣ್ಣ ನೋಟದಿ ಜಗವಮೋಹನ ಮಾಳ್ಪ ಅಗಣಿತ ಮಹಿಮನ ಸುಗುಣವ ಪಾಡುತ್ತ 8 ಕರುಣಿಗಳರಸನೆ ದೇವ ತನ್ನ ಶರಣು ಹೊಕ್ಕವರನ್ನೆ ಕಾವ ತನ್ನ ಭಜಕರಿಗಭಯವ ನೀವ ಇನ್ನು ಸರಿಯುಂಟೆ ಶ್ರೀರಮಾದೇವ ಅಹ ಪರಿಸರನೊಡೆಯನ ನಿರುತದಿ ಧ್ಯಾನಿಸಿ ದುರಿತಗಳಳಿದು ಸದ್ಗತಿಯ ಪಡೆವರೆಲ್ಲ 9 ಕಾಲಹರಣ ಮಾಡದಂತೆ ತ್ರಿ- ಧಾಮನ ಸ್ಮರಿಸುವ ಚಿಂತೆಯಲ್ಲಿ ಆಲಸ್ಯ ತೊರೆದಿಹರಂತೆ ಶ್ರೀನಿ- ವಾಸನೆ ಇದಕ್ಹೊಣೆಯಂತೆ ಅಹ ಕಾಲಕಾಲಕೆ ತಕ್ಕ ಲೀಲೆಯ ತೋರುವ ಪಾದ ಧ್ಯಾನಿಪ ಸುಜನರು 10 ಹತ್ತವತಾರದ ಹರಿಯು ತನ್ನ ಭಕ್ತರು ಸ್ತುತಿಸುವ ಧ್ವನಿಯ ಕೇಳಿ ಚಿತ್ತದಿ ನಲಿಯುವ ಪರಿಯು ಸುರರು ವಿಸ್ತರಿಸುವ ದಿನಚರಿಯು ಅಹ ಭಕ್ತರ ಸ್ತುತಿಸಲು ಮತ್ತವರಿಗೊಲಿಯುವ 11
--------------
ನಿಡಗುರುಕಿ ಜೀವೂಬಾಯಿ
ತಿಳಿಯದು ಆರಿಗೆ ನಳಿನಾಕ್ಷನ ಘನ ವಿಲಸಿತಮಹಿಮೆ ಸುಲಭವಲ್ಲಮಮ ಪ ಒಳಗು ತಾನೆ ಹೊರಗು ತಾನೆ ಒಳಗ್ಹೊರಗೊಂದಾಗಿ ಬೆಳಗುವ ತಾನೆ ಬಳಗ ತಾನೆ ಬಂಧು ತಾನೆ ಹಲವು ಜೀವರ ಸಲೆರೂಪನು ತಾನೆ 1 ಹಸಿವು ತಾನೆ ತೃಷೆಯು ತಾನೆ ಹಸಿತೃಷೆ ತೀರಿಪ ಸೂತ್ರನು ತಾನೆ ಎಸೆವ ತತ್ವಮಸಿ ಮಹವಾಕ್ಯವ ಕುಶಲದಿ ನುಡಿಸುವ ಈಶನು ತಾನೆ 2 ರಕ್ಷಕ ತಾನೆ ಶಿಕ್ಷಕ ತಾನೆ ಸಾಕ್ಷಿಯಾಗಿ ನ್ಯಾಯ ವೀಕ್ಷಿಪ ತಾನೆ ಸೂಕ್ಷ್ಮಜ್ಞಾನವಿತ್ತಕ್ಷಯದ್ಹೊರೆಯುವ ಮೋಕ್ಷಕರ್ತ ಶ್ರೀರಾಮ ತಾನೆ 3
--------------
ರಾಮದಾಸರು
ದಯದಿಂದಲಿ ನೋಡೊ ಎನ್ನಾ ಹಯವದನ್ನಾ ಶ್ರೀಹರಿ ಪ ವರಗಳ ನೀಡಿ ಅ.ಪ. ಭಕುತದಿ ಕೂಡಿ ಆಡುವೆ ನೀ ನಿತ್ಯ ಸುಜನರಿಗೆ ಕಾಡಿ ಕೆಣಕುವ ಈ ಖೋಡಿ ಅನುದಿನ ಸಾಮಗಾನ ಪ್ರೇಮಾ ಬ್ರಹ್ಮಾದಿಗಳಿಗೆ ಕಾಮಿತಪ್ರದ ರಾಮಾ ಪರಿಪೂರ್ಣ ರಾಮಾ 1 ಶಾಮಸುಂದರ ಶಕಟಾಸುರಮರ್ದನ ಸಾಮಜವರದನೆ ಮಾತುಳಾಂತಕ ಮದನ ಜ£ಕÀನೆ ಕರುಣಿಸಿ ಎನ್ನನು 2 ಏನು ಬಲ್ಲೆನು ನಾನು ನಿನ್ನ ಮಹಿಮೆಯನ್ನು ದೀನ ಸುರಧೇನು ಬಣ್ಣಿಸಲಳವೆ ನಿನ್ನ ಮಹತ್ತನ್ನು ಮುನಿಮೌನಿವರರಿಂದ ಅನಘನೆನಿನ್ನಮಿತ ಗುಣಗಣನ ಕಾಣದೆ ಲಕುಮಿ ಮನದಲ್ಲಿ ಅನುವು ತಪ್ಪೆ ನಿತ್ಯ 3 ಹಾಟಕಾಂಬರಧರ ಶ್ರೀವತ್ಸಲಾಂಛನ ಜಟಾಮಕುಟ ಕುಂqಲ ಕೈಟಭಾಂತಕನೆ ಕಡಲಮಂದಿರ ಕುಟಿಲ ಕಟುಮತಿ ಖಳರನು ಶಿಕ್ಷಿಸಿ ಕೈಯ್ಯ ಬಿಡದೆ ಎನ್ನಾ ಮಾನಿಧಿವಿಠಲ ಕಾಲಿಗೆ ಬೀಳುವೆ 4
--------------
ಮಹಾನಿಥಿವಿಠಲ
ದರ್ಭಶಯನ ಶ್ರೀರಾಮದೇವರ ಸ್ತೋತ್ರ ಪಂಕ ಕಳೆಯೊ ಎನ್ನ | ಕರುಣಾರಸ ಪೂರ್ಣ ಪ ಲಂಕೇಶನನು ಜಗ್ವೊಲಿದ ಹರಿಯೇ | ಆಶ್ರಿತರಿಗೆ ಧೊರೆಯೇ ಅ.ಪ. ಭವ ವಿಮುಕ್ತನಹನೂಕವಿ ಜನ ನುತ ಸತ್ಪ್ರವರ ನಿನ್ನ ಲೀಲಾ | ಲೋಕ ಶಿಕ್ಷೆಗನುಕೂಲ |ತವಕದಿ ಗೈದೆ ವಿವಿಧ ಪೂಜೆಗಳನ್ನ | ನವ ಪಾಪಾಣಗಳನ್ನ 1 ಶರಧಿ ಸಿಂಧು ಪತಿಯ ನೋಡೀ | ದರ್ಭಶಯನ ಮಾಡೀಕಪ್ಪುಗೊರಳ ಸಖ ಕುಪಿತನಾಗೆ ನೀನೂ | ಬೆದರಿ ಬಿನ್ನವಿಸಿದನೂಒಪ್ಪಿ ಬಂಧಿಸಿದೇ ಸೇತುವೆಯನ್ನಾ | ಭಕ್ತರಿಗೆ ಪ್ರಸನ್ನಾ 2 ಸಿರಿ ಮಾಧವ ಶ್ರೀನಲ್ಲಾ | ಗುರು ಗೋವಿಂದ ವಿಠ್ಠಲ |ಮಾತು ಮಾತಿಗೆ ಕೊಡು ತವ ಲೀಲಾ | ಉಚ್ಚರಿಸುವ ಸೊಲ್ಲಾ 3
--------------
ಗುರುಗೋವಿಂದವಿಠಲರು
ದಾಸರಾಯ ಪುರಂದರದಾಸರಾಯ ಪ. ಘಾಸಿಗೊಳಿಸದೆ ಇತ್ತು ಕರುಣಿಸಿ ವಾಸುದೇವನ ಕೃಪೆಗೈಸಿರಿ ಅ.ಪ. ದಾಸಕೂಟಕೆ ಮೊದಲನೆ ಗುರು ದೊಷವರ್ಜಿತ ಭಕ್ತರೆನಿಸಿ ಆಶಪಾಶವೆ ತೊರೆದು ಹರಿಯ ದಾಸತನವನು ತೋಷದಲಿ ಕೊಂಡು ಕೇಶವನು ಸರ್ವೋತ್ತಮನು ಎನ್ನುತ ಶ್ರೀಶನ ಗುಣಗಳನೆ ಪೊಗಳುತ ಭೂಸುರರ ರಕ್ಷಿಸುತ ಭಕ್ತರ ಕ್ಲೇಶಗಳೆÉದಂಥ ಗುರುವರ 1 ವೀಣೆ ಕರದಲಿ ಗಾನಮಾಡುತ ಜಾಣತನದಲಿ ಕೃಷ್ಣನೊಲಿಸುತ ಆನಂದದಲಿ ನರ್ತಿಸುತ್ತ ಧ್ಯಾನದಲಿ ಶ್ರೀ ಹರಿಯ ನೋಡುತ ಆನನವ ತೂಗುತ್ತ ವೇದ ವಿ- ಧಾನದಲಿ ಪದಗಳನೆ ರಚಿಸುತ ಮೌನಿವ್ಯಾಸರ ಶಿಕ್ಷೆಯಿಂದಲಿ ದಾನವಾಂತಕ ಹರಿಯನೊಲಿಸಿದ 2 ಪಾಪಿಗಳ ಪಾವನಗೈಸುತ ಶ್ರೀ ಪತಿಯ ಅಂಕಿತವ ನೀಡುತ ಈ ಪರಿಯಲಿ ಮೆರೆದ ಮಹಿಮೆಯ ನಾ ಪೇಳಲಳವಲ್ಲವಿನ್ನು ನಾ ಪಿರಿಯರಿಂ ಕೇಳಿದುದರಿಂ ದೀಪರಿ ನುಡಿದಿರುವೆನಲ್ಲದೆ ಗೋಪಾಲಕೃಷ್ಣವಿಠ್ಠಲನ ರೂಪ ನೋಡುತ ಸುಖಿಸುವಂಥ 3
--------------
ಅಂಬಾಬಾಯಿ
ದೀನರಕ್ಷಕ ದೈತ್ಯ ಶಿಕ್ಷಕ ಏನ ಪೇಳಲಿ ಎಂತು ತಾಳಲಿ ಪ. ಹಗಲು ರಾತ್ರೆಯು ಹಲವು ಚಿಂತೆಯು ದ್ವಿಗುಣವಾಯಿತು ಧೈರ್ಯ ಕುಂದಿತು ನಗುವ ವಿಧಿಯನು ನೆನೆಯದಾಸೆಯ ಬಿಗುವಿನಿಂದ ಬೆಂಡಾದೆ ಕೇಶವ 1 ಸಂದ ಕಾಲವು ಸುಮ್ಮಗ್ಹೋಯಿತು ಮುಂದಿನವಧಿಯ ಮರವು ಮುಸುಕಿತು ಸುಂದರ ಸ್ಮಿತಾನಂದ ಮೂರುತಿ ಇಂದಿರೇಶ ನೀ ಎಂದು ತೋರುತಿ 2 ಗಣನೆಯಿಲ್ಲದಗಾಧ ತಪ್ಪನು ಎಣಿಸಲಾರೆನು ಎಂತು ನುಡಿವೆನು ವನಜನಾಭ ನೀನಾವ ಯುಕ್ತಿಯ ನೆನಸಿ ಸಲಹುವೆ ಎಂಬುದರಿಯೆನು 3 ಅಂತವಿಲ್ಲದಾ ಚಿಂತೆ ಎನ್ನನು ಭ್ರಾಂತಿಗೊಳಿಪುದು ಭಂಡು ಮಾಳ್ಪುದು ಕಂತುಜನಕ ಭೂಕಾಂತ ಕರುಣಿಸು ಸ್ವಾಂತರಂಗದಿ ನಿಂತು ನಿಯಮಿಸು 4 ನಿತ್ಯ ಸಲಹುವ- ನೆಂಬ ಬಿರುದ ನಾನರಿತು ನುಡಿದೆನು ಶಂಭುವಂದ್ಯ ಶೇಷಾದ್ರಿನಾಥ ಪಾ- ದಾಂಬುಜಾಶ್ರಿತನೆನಿಸು ಎನ್ನನು 5
--------------
ತುಪಾಕಿ ವೆಂಕಟರಮಣಾಚಾರ್ಯ
ದೇವ ತ್ರಾಹಿ ಗೋಪಾಲಕೃಷ್ಣ ದೇವ ತ್ರಾಹಿ ಪ ದೇವ ತ್ರಾಹಿ ದಯಯಾ ವನಚತುರ ನಿರಾವರಣಾಖಿಲ ಭಾವಭರಿತ ನಿಜಪಾವನ ಭಕ್ತಜನಾವಳಿಸಂವೃತ ಭಾವಜಜನಕ ಅ.ಪ ನಿರ್ಗುಣ ನಿರುಪಮ ದುರ್ಗಮಗುಣಗಣ ನರ್ಗಳಾವಾಸನಾ ನಿರ್ಗಮಹೇತ್ವಪವರ್ಗದ ಕೃಷ್ಣಾ 1 ಇಂದಿರಾ ಮುನಿ ಮನೋಮಂದಿರ ವಿನತಾ ನಂದನವಾಹನ ಕುಂದರದನ ಕುರು ನಂದನ ಸೇನಾ ವೃಂದನಿಷೂದನ ನಂದನ ಕೃಷ್ಣಾ 2 ಅರ್ಜುನಪಾಲಕ ದುರ್ಜನಶಿಕ್ಷಕ ಸಜ್ಜನರಕ್ಷಕ ಭರ್ಜಿತಕರ್ಮ ಸುದುರ್ಜಯ ಮೋಕ್ಷದನಿರ್ಜರ ತಿರುಪತಿ ನಿರ್ಜಿತ ವೆಂಕಟಕೃಷ್ಣ 3
--------------
ತಿಮ್ಮಪ್ಪದಾಸರು
ದೇವ ನೀನುಪಕಾರ ಅಪಾರ ಮಾಡಿದೆ ಕಾವ ಕರುಣಾ ಸ್ವಭಾವ ಕೇಳು ಪೇಳುವೆ ಪ ನವಯುವತಿ ಶಿಲೆ ಕೊರಳಿಗೆ ಕಟ್ಟಿಕೊಂಡು ಭವ ಸಾಗರದೊಳು ಮುಳುಗಿ ಪೋಗುವ ನಾ ಅವಸರಕೊದಗಿ ಪಿಡಿದು ದಡ ಸೇರಿಸಿ ದವನಾಗಿ ಎಚ್ಚರಿಕೆ ತಂದಿತ್ತೆ ದಯಾಳೊ 1 ಭಾರ ತಾಳದು ಎಂದು ಸೂತ್ರವೂ ಶಿಖಿಯೊ ನಿ ವಾರಿಸಿ ತನುವಿಗೆ ಲಘುವು ಮಾಡಿದೇಯೆ ಭಾರಮಯತಾ ರಜ್ಜು ಮನಕೆ ಸುತ್ತಿದೆ ಆಶಾಂ- ಕುರ ಕೇಶಗಳು ಬೆಳದಿವೆ ಪರಿಹರಿಸು 2 ಲಕ್ಷ್ಯವಿಲ್ಲದೆ ಅನ್ನ ಮೊದಲಾಗಿ ಕೊಡುವಂಗೆ ಶಿಕ್ಷಿಸಿ ಗರ್ವವು ಕಳೆದು ಈಗ ಭಿಕ್ಷುಕನ ಮಾಡಿದೆ ನಿನ್ನದೆ ಬೇಡುವೆ ಲಕ್ಷ್ಮೀಪತಿಯೆ ಅಂತರಂಗದ ಗೃಹಸ್ಥ 3 ಏಳು ಮನೆಗಳನ್ನು ಕೇಳೋದು ಯತಿಧರ್ಮ ಏಳಲಾರಿನೊ ವೃದ್ಧ ಕೇಳಲಾರೆ ಕೇಳುವೆ ನಿನ್ನನೇ ಏಳು ಭಿಕ್ಷವ ನೀಡು ಬಾಳುವೆ ಬಹುಕಾಲ ನಿನ್ನ ಕೊಂಡಾಡುತ 4 ಶ್ರೋತ್ರಕ್ಕೆ ನಿನ್ನ ಕಥೆ ನಾಸಕೆ ನಿನ್ನ ಗಂಧ ನೇತ್ರಕ್ಕೆ ನಿನ್ನ ರೂಪ ರಸನಿಗೆ ನಾಮಾಮೃತ ಗಾತ್ರಕ್ಕೆ ನಿನ್ನ ಪಾದಸ್ಪರುಷ ಮನೋಬುದ್ಧಿ ಮಾತ್ರಕ್ಕೆ ಗುಣಕರ್ಮ ಕೊಡು ವಾಸುದೇವವಿಠಲ5
--------------
ವ್ಯಾಸತತ್ವಜ್ಞದಾಸರು
ನಕ್ತಂಚರವಿದಾರಿ ಭಕ್ತವತ್ಸಲಶೌರಿ ವ್ಯಕ್ತಾವ್ಯಕ್ತನಮೋ ವಿಶ್ವಕರ್ತ ಪಾಹಿ ತ್ರೈವಿಕ್ರಮ ಪರಮಪಾವನನಾಮ ಅಹಿತಸಂಕುಲಭೀಮ ಪೂರ್ಣಕಾಮ ಬಲಿಮಂದಿರದ್ವಾರ ತಲನಿಲಯ ಶ್ರೀಧರ ಜಲಧಿಸಮಗಂಭೀರ ವರದ ಧೀರ ಪಾಕಶಾಸನ ಪಕ್ಷ ನಾಕಾರಿ ಕುಲಶಿಕ್ಷ ಶ್ರೀಕಲಾಂಕಿತವಕ್ಷ ಶರಣ ರಕ್ಷ ಪಂಕಜಾಸನ ಪೂಜಿತಾಂಘ್ರಿಯುಗಳ ಪಂಕಜೇಕ್ಷಣ ಪಾಹಿ ಪದ್ಮನಾಭ
--------------
ನಂಜನಗೂಡು ತಿರುಮಲಾಂಬಾ