ಒಟ್ಟು 174 ಕಡೆಗಳಲ್ಲಿ , 47 ದಾಸರು , 123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಣಿ ಪರಮಕಲ್ಯಾಣಿ ನಮೋ ನಮೋ ಅಜನರಾಣಿ ಪಂಕಜಪಾಣಿ ಪ. ಭಳಿರೆ ಭಳಿರೆ ಅಂಬೆ ಭಕ್ತಜನಸುಖದಂಬೆಸುಳಿದಾಡು ಶುಭನಿತಂಬೆ ಅಮ್ಮ ನಿಮ್ಮಹೊಳೆ ಹೊಳೆವ ಮುಖ ಮುಕುರ ಬಿಂಬೆಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಬೊಂಬೆ 1 ವಾಗ್ದೇವಿ 2 ಜಯಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆದಯಮಾಡು ಧವಳಗೀತೆ ಸತತ ಶ್ರೀಹಯವದನ ಪದಕೆ ಪ್ರೀತೆ ಇಳೆಯೊಳಗೆನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ 3
--------------
ವಾದಿರಾಜ
ವಾಣಿ ಮಂಗಳಂ ದೇವಿ ಪ ಗೀರ್ವಾಣಿ ಕಮಲಪಾಣಿ ಭ್ರಮರವೇಣಿ ಕೀರವಾಣಿ ಅ.ಪ. ಇಂದುವದನೆ ದೇವಿ ಚಂದ್ರಧವಳ ಸುಂದರಾಂಗಿ ಕುಂದರದನೆ ಮಂದಗಮನೆ 1 ವೀಣಾ ಪಾಣಿ ದೇವಿ ಶೋಣ ಬಿಂದು ದಶನ ವಸನೆ ಏಣನಯನೆ ಧವಳ ವಸನೆ 2 ಅಂಬುಜಾಕ್ಷಿ ದೇವಿ ಕುಂಭ ಸಂಭವಾದಿ ವಿನುತೆ ಕಂಬುಕಂಠಿ ಶಂಭು ಸೋದರಿ 3 ಶಾರದಾಂಬೆ ದೇವಿ ಅಂಬರೋಪಮಾನ ಮಧ್ಯೆ ಜಂಭವೈರಿ ಗೀಯಮಾನೆ 4 ಜ್ಞಾನರೂಪೆ ದೇವಿ ಮೌನಿ ಹೃದಯ ಕಮಲಹಂಸೆ ಧೇನುನಗರ ಸನ್ನಿವಾಸೆ 5
--------------
ಬೇಟೆರಾಯ ದೀಕ್ಷಿತರು
ವಾಣಿ ವರದೆ ಶಾರದೆ ನಿನ್ನ ಚರಣವ ಸೇರಿದೆ ಪ. ಎನ್ನ ನಾಲಿಗೆಯೊಳ್ನೆಲಸು ಹರಿಲೀಲೆಯನ್ನು ನುಡಿಸು 1 ಅತಿರೋಹಿತ ವಿಜ್ಞಾನಿ ವೇದವ್ಯೂ ಹಕಭಿಮಾನಿ 2 ಲಕ್ಷ್ಮೀನಾರಾಯಣನ ಸೊಸೆ ಸರ್ವಾಧಾರ ಭಕ್ತಿವಿಲಾಸೆ3
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಿಜನ ಹೃದಯೇಶ್ವರಿ ಸರ್ವವಿದ್ಯಕಾಧಾರಿ ಪ ವಾಣಿವಿರಂಚಿ ರಾಣಿ ಪಂಕಜ ಪಾಣಿ ಕಾಳಾಹಿವೇಣಿ ನಿನ್ನಯ ವೀಣೆಯಿಂದಲಿ ವೇಣುಗಾನವ ಮಾಣದೆ ಪಾಡುತ ಕುಣಿಕುಣಿಯುತ ಬಾರೆ 1 ಮಂದಯಾನೆ ಪೂರ್ಣೆಂದುವದನೆ ಕುಂದುರಹಿತೆ ಬಂದು ರಕ್ಷಿಸೆ ಮಂದಮತಿಯನಿಂದು ಬೇಗನೆ ಕಂದ ನಾನೆಂದ ನೀ ಛಂದದಿ ಅರಿಯುತ 2 ಸಾರಸಾಕ್ಷಿ ಮಯೂರವಾಹನೆ ಶಾರದಾಂಬೆ ಕಲಕೀರವಾಣಿಯೆ ಸಾರಿ ಬೇಡುವೆ ತೋರು ಕರುಣದಿ ಧೀರನಾ ಗಂಭೀರನಾ ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ವಾಹನ ಈಕ್ಷಿಸು ಪ್ರೇಮದೊಳೆನ್ನ ನೀಂ ಪ ಭೂರಿ ಸಾರಸ ಸನ್ನಿಭ ಲೋಚನ ಶ್ರೀಶ ಶಾರದ ಚಂದ್ರಸಮ ಹಾರ ವಿಹಾರ1 ಇಂದಿರೆ ತನುಮಂ ಅಂದದೊಳಪ್ಪುತ ಮೋದವ ಪೊಂದಿ ವಂದಿತ ಜನ ಮನೋನಂದ ವಿನೋದ 2 ಶ್ರೀವನಮಾಲಾ ಭಾವಿತಭಾವ ದೇವಚಿದಾತ್ಮ ಜೀವಪ್ರಭಾವ ಶ್ರೀ ವಿಭವಾನ್ವಿತ ಪಾವನರೂಪ 3 ವೈರಿ ಜ್ಞಾನ ಸ್ವರೂಪ ಭಾನುಕರಾರ್ಪಿತ ಭಾಮ ಯಶೋಧ ಧೇನುಕಪುರಪ್ರಿಯ ಗಾನ ಸ್ವರೂಪ 4
--------------
ಬೇಟೆರಾಯ ದೀಕ್ಷಿತರು
ಶಯನ ಸಮಯಕಂ||ಸಂದಣಿ ಹರೆಯದೆ ಭಕ್ತರವೃಂದವು ಕೈವಾರಿಸುತ್ತ ಬರಲೆಡಬಲದೊಳ್‍ಇಂದಿರೆ ಧರಣಿಯು ಸಹಿತಾಮಂದಸ್ಮಿತಮುಖನು ನೋಡುತೈತಹನೊಲವಿಂದೇವ ಶಯನಕೆ ಬರುವ ಸಮಯ ಬಳಿಕೀಗದೇವತೆಗಳೆಲ್ಲರನು ಕಳುಹಿ ನಿಜ ಮಂದಿರಕೆ ಪಶ್ರೀದೇವಿ ಭೂದೇವಿಯರು ತಮ್ಮ ಕರಗಳಲಿಆದಿಪುರುಷನ ಕರಗಳನು ಪಿಡಿದು ಮುದದಿಮಾಧವನ ಮುಖಪದ್ಮವನು ನೋಡಿ ಹರುಷದಲಿವೇದವೇದ್ಯನ ಪೀಠದಿಂದಿಳಿಸಿ ತರುತಿಹರು 1ಸನಕಾದಿ ಭಾಗವತ ಮೂರ್ತಿ ತಾನಿದಿರಿಟ್ಟು ಮತ್ತೀಗಮನದೊಳಗೆ ನೆಲಸುವಂದದಿ ಮುಂದೆ ನಿಂದಿಹನು 2ತನ್ನಿಂದ ನಿರ್ಮಿಸಿದ ಫಲಪತ್ರಗಳಮನ್ನಿಸುತ ಭಕ್ತಿಯಲಿ ಭಕ್ತರಿತ್ತುದನುಉನ್ನತದ ಪದವಿಯನು ಬಳಿಕಿತ್ತು ಬರುತಿಹನುಪನ್ನಗಾರಿಧ್ವಜನು ತಿರುಪತಿಯ ವೆಂಕಟನು 3ಓಂ ವೇಣುನಾದ ವಿಶಾರದಾಯ ನಮಃ
--------------
ತಿಮ್ಮಪ್ಪದಾಸರು
ಶರಣು ಶರಣು ಶರಣು ಶ್ರೀ ಗಣನಾಥ ಪಶರಣು ಶ್ರೀಶಾರದೆಯೆ ಶರಣು ವೆಂಕಟರಮಣ ಶರಣು ಸದ್ಗುರುವೆಅ.ಪಶರಣು ಮಾತೆಯ ಪಿತನೆ ಶರಣು 'ತಬೋಧಕನೆಶರಣು ಬುದ್ಧಿಪ್ರದನೆ ಶರಣು ಸುಖಕರನೆಶರಣು ವೇದಾಂತೋಪವೇಶನೆ ಪೋಷಕನೆಶರಣು ಚನ್ನಾಂಬೆ ಶ್ರೀ ನಾರಾಯಣಾರ್ಯ 1Àರಣು ನಾರಾಯಣಾರ್ಯ ಸದ್ಗುರುವರ್ಯಶರಣು ಶ್ರೀವಾಸುದೇವಾರ್ಯ ಸದ್ಗುರುವೆಶರಣು ಶ್ರೀ ಕೃಷ್ಣಯೋಗೀಂದ್ರ ಸದ್ಗುಣಸಾಂದ್ರಶರಣು ಶ್ರೀ ವೆಂಕಟದಾಸಾರ್ಯ ಗುರುವರ್ಯ 2ಶರಣು 'ಪ್ರೋತ್ತಮನೆ ಶರಣು ಪ'ತ್ರೆಯರೆಶರಣು ಹರಿಹರ ಭಕುತರೆ ಮಹಾತ್ತಮರೆಶರಣು ಶ್ರೀ ಚಿಕ್ಕನಾಗಪುರವಾಸ ವೆಂಕಟೇಶಶರಣು ಮರೆಹೊಕ್ಕೆ ನಿಮ್ಮ ನಾನು ತಿಮ್ಮದಾಸ 3ಸಂಕೀರ್ಣ ಕೃತಿಗಳು
--------------
ತಿಮ್ಮಪ್ಪದಾಸರು
ಶರಣು ಶಾರದೆ ವಾಣಿ ಪಡರಮಾನಂದದ ಕೇಣಿ ಸುರಸಕಲ ಕೀರ್ವಾಣಿ ಕಲ್ಯಾಣಿ 1 ವಿದಿತ ಸುವಿದ್ಯದಾನಿ ಸದಮಲ ಸುಪ್ರವೀಣಿ ಮದಮತ್ತಗಜಗಾಮಿನಿ ಕಲ್ಯಾಣಿ 2 ಸ್ಪಹಿತ ಸುಖಕಾರಿಣೀ ಸಹಕಾರಿ ನಿರಂಜನ ಮಹಿಪತಿಸುತ ಸ್ವಾಮಿನೀ ಕಲ್ಯಾಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶಾರದೆ ವಾಣೀ ಸರಸಿ ಜಾಸನ ರಾಣಿ ಶರಣು ವಿದ್ಯಾಂಬುಧಿಯೆ ಸರ್ವಗುಣಗಣನಿಧಿಯೇ ಶರಣು ಧೀನೋದ್ಫರಣಿ ಶುಭ್ರಾಂಬರಾವರಣಿ ಭವ ತಾರಣೀ ಶರಣಿ ಶೃತಿ ವಿಖ್ಯಾತೆ ಸಲೆ ಜಗತ್ರಯ ಮಾತೆ ಶರಣು ಶ್ರೀ ಧವಳಾಂಗೆ ಸುರವರಾರ್ಜಿತ ತುಂಗೆ ಶರಣು ಮಹಿಪತಿ ಕಂದ ನಾಸ್ಯದಿ ನೆಲಿಸಿಛಂದ ಸಲಹಮ್ಮ ಕರುಣದಿಂದ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಾರದಾಂಬೆ | ಜಯ ಜಯ | ಶಾರದಾಂಬೆಪ. ಶಾರದಾಂಬೆ ಅ.ಪ ನಿರತವು ನೀ ಮನ| ವೊಲಿಯುತಲೆನ್ನಯ | ಕರುಣಿಯೆ ನೀ ದಯ | ದೋರುತ ಪೊರೆವುದು | ಶಾರದಾಂಬೆ 1 ಹರಿನಾಮಾಮೃತ | ವನುದಿನವೆನ್ನಯ | ರಸನೆಯು ಸೇವಿಸು | ವಂದದಿ ನೀ || ವರಗಳ ನೀ ವಾ| ಗ್ದೇವಿಯೆ ಕರುಣಿಸು | ಶಾರದಾಂಬೆ2 ಮರಣದ ಕಾಲದಿ | ಹರಿಯನು ಬಾಯೊಳು | ಸ್ಮರಿಸುವ ಜ್ಞಾನವ | ನೀಯುತಲಿ || ಶರಣನ ಪೊರೆವುದು | ಪರಮ ಕೃಪಾಕರಿ | ಶಾರದಾಂಬೆ 3 ಮಾಡು ನೀ ಕೃಪೆಯ | ನ್ನನವರತ || ಜೋಡಿಸಿ ಕೈಗಳ | ವಿನಯದಿ ಬೇಡುವೆ | ಶಾರದಾಂಬೆ 4 ವೀಣಾಪಾಣಿ | ಕೋಕಿಲ ವಾಣಿ | ಪನ್ನಗವೇಣಿ | ಬೊಮ್ಮನ ರಾಣಿ || ದೀನನ ನುಡಿಗಭಿ | ಮಾನವನೀವುದು | ಶಾರದಾಂಬೆ 5
--------------
ವೆಂಕಟ್‍ರಾವ್
ಶಾರದಾವರ ಪ ಸಾರಿ ಸಂನ್ನುತಿಪ್ಪಾ | ವರವ ನೀಯೆನ್ನಪ್ಪಾ ಅ.ಪ ಪರ ಕಷ್ಟ ಪರಿಸೊ | ಇಷ್ಟಾರ್ಥ ಪಾಲಿಸೊ 1 ಭಾರವೊಪ್ಪಿಸಿದೆನು | ಪಾರಗಾಣಿಸಿದನು 2 ಮರೆಯ ಹೊಕ್ಕೆನೂ | ವರಕವಿತ್ವವನ್ನೂ | ಮೆರೆಯಿಸಿ ಇರಿಸೆನ್ನಾ ಸತ್ಕೀರ್ತಿ | ಸ್ಥಿರ ಸದಾನಂದಾರ್ತಿ 3
--------------
ಸದಾನಂದರು
ಶಾರದೆ ನಿನ್ನ ಪಾದವ ಆರಾಧಿಸುವೆವುವಾರಿಜ ಭವಕ್ಕೆ ಸೇರಿಸು ಹರಸು ಪ. ನಿತ್ಯ ಭಜಿಸುವೆವುಸಚ್ಚಿದಾನಂದನ ಚಿತ್ತದಿ ನಿಲ್ಲಿಸ1 ರಂಭೆ ನಮ್ಮಯ ಹೃದಯ ಅಂಬರದೊಳು ನಿಂತುಅಂಬುಜನಾಭನ ತುಂಬಿಸು ಮನದಿ2 ಅರಿಷಿಣ ಕುಂಕುಮ ಬೆರೆಸಿದ ಪರಿಮಳಸರಸದಿ ಕೈ ಕೊಂಡು ಅರಸಿಯರ ಗೆಲಿಸ 3 ಅತ್ತಿ ಹೂವಿನಸೀರೆ ಮುತ್ತಿನಾಭರಣವಅರ್ಥಿಲೆ ಕೈ ಕೊಂಡು ಮಿತ್ರೆಯರ ಗೆಲಿಸ4 ಪತಿ ಸೌಭಾಗ್ಯವ ರಚಿಸಲುಶೀಘ್ರದಿ ತೋರಿಸೆ ಕುಗ್ಗದೆ ನಮಗೆ 5 ಪತಿ ನಿತ್ಯ ರಾಮೇಶನ ತತ್ವವ ರಚಿಸುವೆ ಸತ್ಯವ ನುಡಿಸೆ ಶಾರದಾದೇವಿ6
--------------
ಗಲಗಲಿಅವ್ವನವರು
ಶಾರದೆ ಪೊರೆಯೆನ್ನಾ - ಮಾತೆಯೆತೋರಿಸಿ ತವ ಚರಣಾ ಪ ಶಾರದೆ ತವ ಪದ | ಸಾರಿ ಭಜಿಸುವೆನುದೊರಗೈವುದೆನ್ನ | ಭಾರಿ ಅಜ್ಞಾನವ ಅ.ಪ. ವೀತ ದುರಿತೆ ಖ್ಯಾತೇ | ಶಿವಮಾತೆಯೆ ಸದ್ಗುಣ ಗಣ ವ್ರಾತೇ ||ಶಾತಕುಂಭೋಧರ | ಪ್ರೀತಿ ವಿಷಯ ಜಗನ್‍ಮಾತೆಯೆ ಹರಿಗುಣ | ಗಾಥೆಯ ಗೀತೆಯೆ 1 ಹಯಾಸ್ಯ ಪದದಲಿ 2 ಈಶಾಹಿ ವಿಹಗೇಂದ್ರಾ | ಸ್ವರ್ಗಾಧೀಶಾಧಿಪರು ಛಂದಾ ||ಮೀಸಲು ಮನದಲಿ | ಕ್ಲೇಶಗಳಿಲ್ಲದೆತಾಸು ತಾಸಿಗೆ ನಿನ್ನೆ | ಸೂಸಿ ಭಜಿಸುವರು 3 ನರಹರಿ ಗುರುಭಕ್ತೀ | ಬ್ರಾಹ್ಮೀಸರಸ್ವತಿ ಗಾಯಿತ್ರೀ ||ಅರ ವಿದೂರ ನರ | ಹರಿಯನು ಭಜಿಸುವಸುರ ಚಿರ ವಾಣಿಯ | ಕರುಣಿಸು ವಾಣೀ 4 ಪರ ಬೊಮ್ಮಾ |ಭಾವಜ ಪಿತ ಗುರು | ಗೋವಿಂದ ವಿಠಲನಓವಿ ಭಜಿಸುವಂಥ | ಭಾವವ ನೀಯೇ 5
--------------
ಗುರುಗೋವಿಂದವಿಠಲರು
ಶಾರದೆ ಸರ್ವ ವಿಶಾರದೆ ಶ್ರೀ ಪ. ಋಜುಗಣಸ್ಥೆ ಪಂಕಜಭರಮಣಿ ತ್ರಿಜಗಜ್ಜನನಿ ಸುಖವಾರಿಧೆ 1 ವಾಗಭಿಮಾನಿ ವಾಣಿ ಫಣಿವೇಣಿ ಯೋಗಿನಿ ಜ್ಞಾನಸೌಭಾಗ್ಯದೆ 2 ಪ್ರಿಯ ಲಕ್ಷ್ಮೀನಾರಾಯಣಕಿಂಕರಿ ಶ್ರೇಯಸ್ಕರಿ ಸದ್ಭೂರಿದೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶಾರದೆಯೇ ಕರುಣಾವಾರಿಧಿಯೇ ಪ ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ಅ. ಪ. ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನ ಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ 1 ಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ 2 ಅಜನ ಪಟ್ಟದ ರಾಣಿ ಅಬುಜ ಪಲ್ಲವ ಪಾಣಿ ವಿಜಯವಿಠ್ಠಲನ ಸೊಸೆ ಮುದ್ದುವಾಣಿಯೆ 3
--------------
ವಿಜಯದಾಸ