ಒಟ್ಟು 109 ಕಡೆಗಳಲ್ಲಿ , 43 ದಾಸರು , 103 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾಗೀರಥೀ ಜನಕಗೆ ಭಾಗವತಪ್ರಿಯಗೆ ಆಗ ನೀರೆರೆದರವಿಂದಲೋಚನನಿಗೆ ಗೋಪಿ 1 ಸಾಗರಶಯನನ ತೂಗಿ ತೊಟ್ಟಿಲೊಳಿಟ್ಟು ನಾಗಮುರಿಗೆ ವಂಕಿ ನಂದಗೋಪನ ಸುತಗೆ ಬೆರಳಿಗುಂಗುರ ಕೋಟಿಭಾಸ್ಕರತೇಜಗೆ ಹೊಳೆವೊ ಬಿಂದಲಿ ಗುಂಡು ಭುಜಕೀರ್ತಿ ಭೂಷಣ 2 ಮಲಕು ಮುತ್ತಿನ ಹಾರ ಪದಕ ಪಚ್ಚೆಯ ಕಾಂತಿ ಕೌಸ್ತುಭ ರತ್ನ ಥಳಥಳಿಸುವ ಕರ್ಣದಲ್ಲಿ ಬಾವುಲಿ ಚೌಕುಳಿ ಚಳತುಂಬು ಮುತ್ತಿನಬಟ್ಟು ಮುಂದಲೆಗೆ 3 ಹೊಸ ವಜ್ರದರಳೆಲೆ ಹುಲಿಯುಗುರು ತಾಯಿತ ಕುಸುಮನಾಭಗೆ ಕಿರುಗೆಜ್ಜೆ ಕಾಲಲಂದಿಗೆ ಮಿಸುಣಿ ಮಾಣಿಕ್ಯದುಡಿದಾರದಡ್ಡಿಕೆ ಕಟ್ಟಿ ಗೋಪಿ 4 ಕಂಜನಯ್ಯನ ನೋಡೆ ಕಂಗಳಿನ್ನೆರಡಿಲ್ಲ ಜಿಹ್ವೆ ಒಂದೆ ಸಾಲದೆನಗೆಂದು ಅಂಗಿಟೊಪ್ಪಿಗೆ ಹಾಕ್ಯಾಲಿಂಗನೆ ಮಾಡುತ ಸತಿ ತಾನಂದಾನಂದಭರಿತಳಾಗಿ5 ತನ್ನ ಮಗನ ಮುದ್ದು ತಾ ನೋಡಿ ಸಾಲದೆ ಹೊನ್ನ ಪುತ್ಥಳಿಯಂತೆ ಹೊಳೆವೊ ಕೂಸನು ಎತ್ತಿ ನಿನ್ನ ಮಗನ ಆಟ ನೀ ನೋಡೆಂದೆನುತಲಿ ತನ್ನ ಪತಿಯ ತೊಡೆಯಲ್ಲಿಟ್ಟು ನಲಿಯುತ 6 ಹೊನ್ನ ಪುತ್ಥಳಿಗೊಂಬೆ ಹೊಸ ಚಿನ್ನದರಗಿಳಿಯೆ ಹೊನ್ನು ತಾ ಗುಬ್ಬಿತಾರಮ್ಮಯ್ಯ ಎನುತಲಿ ಬಣ್ಣ ಬಣ್ಣದ ಆಟ ವರ್ಣಿಸುತಲಿ ನೀಲ- ವರ್ಣನ ತನ್ನ ತೋಳಿಂದಪ್ಪಿ ನಲಿಯುತ 7 ಸೃಷ್ಟಿಮಾಡುವರಿಲ್ಲೀ ಶಿವ ಬ್ರಹ್ಮರೊಡೆಯನ ಸೃಷ್ಟಿಕರ್ತನಾದನನ್ಹುಟ್ಟಿಸಿದ ನಾಭಿಯಿಂದಿವನು ಹೊಟ್ಟೆಲೀರೇಳು ಜಗವಿಟ್ಟು ಸಲಹುವ ಎಷ್ಟು ಸರ್ವೋತ್ತಮ ಈಗಿಲ್ಲ್ಯವತರಿಸಿದ 8 ಚತುರವದನಗೆ ವೇದ ತಂದಿಟ್ಟು ಸಾಗರ ಮಥಿಸಿ ಮಂದರವನು ಪೊತ್ತು ಅಮೃತವ ಹೀರಿ ಪೃಥಿವಿಯನು ತಂದ ಕೋರೆಯಲಂದ್ಹಿರಣ್ಯಾಕ್ಷನ ಹತವ ಮಾಡಿದ ತಾ ಭೂಪತಿ ಎಂದೆನಿಸಿದಿವನು 9 ಪರಮಭಕ್ತನು ಕರೆಯೆ ಬಿರುದು ಕಂಬದಿ ಬಂದು ಕರುಳ ಬಗೆದ ಪುಟ್ಟ ತÀರÀಳ ರೂಪವ ನೋಡಿ ಮರುಳಾಗಿ ಬಲಿ ಮೂರು ಚರಣ ದಾನ ನೀಡೆ ಬೆಳೆದು ಬ್ರಹ್ಮಾಂಡಕ್ಕೆ ಭುವನ ವ್ಯಾಪಿಸಿಕೊಂಡ10 ಕ್ಷತ್ರ ಸಂಹಾರಿ ತಾ ಎತ್ತಿ ಧನುವ ಸೀತಾ ಸೌ- ಮಿತ್ರಿಸಹಿತ್ವನದಲ್ಲಿ ಇರುತಿರಲಾಗ ಪತ್ನಿ ಒಯ್ಯಲು ಅಸುರನ್ಹತ್ತು ಶಿರಗಳ ತರಿದ ದುಷ್ಟ- ರಂತಕನೆ ನಿರ್ದುಷ್ಟ ಸಜ್ಜನಪ್ರಿಯ 11 ದೇವಾಧಿದೇವ ದೇವಕ್ಕಿ ಜಠರದಿ ಬಂದು ಮಾಯಾ- ಪೂತಣಿಯನ್ನು ಕೊಂದು ವಿಷಮೊಲೆನುಂಡು ಕಾಲಲಿ ಶಕಟನ ಕೆಡವಿದ ಯದುವೀರ ತಾ- ಗೋಪಾಲಕ ಗೋಪೀಸುತನೆಂದೆನಿಸಿಕೊಂಡ12 ವಿಪರೀತ ಮಾಯದಿ ತ್ರಿಪುರದ ಜನರಿಗೆ ದುರ್ಮತವ ಬೋಧಿಸಿ ಅಸುರಾರಿ ಮೋಹಕ ತೋರಿ ಚಪಲ ಚೆನ್ನಿಗ ಖಡ್ಗಪಿಡಿದು ತೇಜಿಯ- ನೇರಿ ಕಪಟನಾಟಕ ಕಲಿಮರ್ದನ ಕರಿಗ್ವರವಿತ್ತ13 ಜನ್ಮಕರ್ಮವು ಜರಾಮರಣಗಳಿವಗಿಲ್ಲ ಜಗದೋ- ಪರಬ್ರಹ್ಮನ ಪಾದಾಂಘ್ರಿಸ್ಮರಣಿ (ಣೆಯಿ?)ರೆ ಪರಮಾ- ದರದಿ ಕರೆದೊಯ್ವ ತನ್ನ (ಬಳಿಯ)ಲ್ಲೆ 14 ಏಸುಜನ್ಮದ ಫಲವಿನ್ನೆಷ್ಟು ಜನ್ಮದ ಸುಕೃತ ಈ ಸಮಯದಿ ಫಲಿಸಿತೀತ ಇಲ್ಲುದಿಸಿರಲು ದೋಷವರ್ಜಿತನೆ ಸಂತೋಷಭರಿತನಿವ ಭೀ- ಮೇಶಕೃಷ್ಣ ಯಶೋದೆ ಕೂಸೆಂದೆನಿಸಿಕೊಂಡ15
--------------
ಹರಪನಹಳ್ಳಿಭೀಮವ್ವ
ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ | ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ಪ ದುರುಳ ಪಾಮರ ಸಂಕರನೆಂಬುವನು | ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ | ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ | ವರರು ಇರದಂತಾಗೆ ಸುಜನರು ಕೂಗೆ 1 ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ | ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ | ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ | ನಳಿನನಾಭನ ಚರಣ ಮನದಲಿಟ್ಟ ಪರಣಾ 2 ಇಪ್ಪತ್ತು ಒಂದು ದುರ್ಮತದ ವರ ಕುವಾಕು | ಸರ್ಪನನ್ ಗರುಡ ಶೀಳಿದಂತೆ ಕೇಳಿ | ಇಪ್ಪ ಬಲು ಅಜ್ಞಾನ ಓಡಿಸಿ ಸುಜ್ಞಾನ | ತಪ್ಪದಲೆಗರದು ಸಂತರನೆಲ್ಲ ಪೊರೆದು 3 ಮಿಥ್ಯ | ಪಂಚವಿರಹಿತ ಹರಿ ಪರನೆಂದು ಸಾರೀ | ಚಂಚಲವ ಪರಿಹರಿಸಿ ಮರುತ ಮತ ಉದ್ಧರಿಸಿ | ಕಾಯ ಸುಖ ತೀರ್ಥರಾಯಾ4 ಸುರರಾದಿಗಳ ಮಣಿಯ ಆರಾರು ನಿನಗೆಣೆಯೇ | ಅರಸಿದರೆ ಕಾಣೆ ಹರಿ ಪದಗಳಾ ಆಣೆ | ಶಿರಿ ವಿಜಯವಿಠ್ಠಲನ್ನ ಭಜಿಸುವ ಯತಿರನ್ನ | ಶರಣಪಾಲಕ ಪೂರ್ಣಪ್ರಜ್ಞ ಗುಣಪೂರ್ಣ 5
--------------
ವಿಜಯದಾಸ
ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಯವಾಯಿತು ರತುನ | ಮರೆ ಮೋಸಮಾಡಿ ಪ. ಮಾಯವಾಯಿತು ಎನ್ನ ಮೋಹದ ಮಮ ಗುರುವೆಂತೆಂಬ ರತುನ ನೋಯಲೇಕಿದಕಿನ್ನು ನೃಹರಿ ಉ- ಪಾಯದಿಂದಪಹರಿಸಿವೈದನು ಅ.ಪ. ಕರಗತವಾಗಿ ಇತ್ತು | ಪ್ರಕಾಶವು ಧರಣಿಯಲ್ಲಿ ವ್ಯಾಪಿಸಿತ್ತು ಪರಿಪರಿ ಸಜ್ಜನಕೆ ತತ್ವದ ವರ ಸುಧೆಯನುಣಿಸುತ್ತಲಿತ್ತು ಕರಕರದು ಅಂಕಿತವ ಕೊಡುತಲಿ ಪರಮ ಸಾಧನಗೈಸುತಿತ್ತು 1 ಸುಂದರವಾಗಿ ಇತ್ತು | ದುರ್ಜನರಿಗದ ರಂದ ತೋರದಲೆ ಇತ್ತು ಒಂದೊಂದೂ ಗುಣ ವರ್ಣಿಸಲು ಈ ಮಂದ ಮತಿಗಳವಲ್ಲವಿನ್ನು ತಂದೆ ಮುದ್ದುಮೋಹನಾರೆಂ- ತೆಂದು ಜಗದಲಿ ಮೆರೆಯುತಿತ್ತು 2 ಮಾಸಿ ಪೋದಂಥ ಹರಿ | ದಾಸಕೂಟ ತಾ ಸ್ಥಾಪಿಸುತ ಈ ಪರಿ ವಾಸುದೇವನ ಗುಣಮಣಿಗಳ ರಾಶಿಭೂತದಿ ಅರುಹಿ ಶಿಷ್ಯರ ಸಾಸಿರಾನೂರ್ಮೇಲೆ ಹೆಚ್ಚಿಸಿ ತಾ ಸೂರೆಗೊಂಡಾನಂದವನು3 ಗತಶಾಲಿ ಸಾಹಸ್ರವು | ಮೇಲೆಂಟು ಶತವು ಮತ್ತರವತ್ತೆರಸುವು ವತ್ಸವಿಕ್ರಮ ಪ್ರಥಮ ಮಾಸವು ಪ್ರಥಮ ಪಕ್ಷದ ರಾಮನವಮಿ ಹಿತದಿ ಮಂಗಳವಾರ ಸೂರ್ಯನ ಗತಿಯು ನೆತ್ತಿಯೊಳೋರೆ 4 ಎಷ್ಟು ಪೊಗಳಲಳವು | ಆನಂದ ರತ್ನದ ಗುಟ್ಟರಿಯದು ಜಗವು ಶ್ರೇಷ್ಠ ಗೋಪಾಲಕೃಷ್ಣವಿಠಲನು ಕೊಟ್ಟು ಕಳುಹಿಸಿ ಧರೆಯೊಳ್ಮೆರಸಿ ಥಟ್ಟನೇ ತಾ ಕರೆಸಿಕೊಂಡು ಶ್ರೇಷ್ಠ ಶಯ್ಯೆಯ ಮಾಡಿಕೊಂಡನು 5
--------------
ಅಂಬಾಬಾಯಿ
ಮೂರ್ಖ ತಿಳಿವನೆ ಗುರುವೆ ನಿನ್ನ ಬೋಧದ ಸವಿಯ ಅರ್ಕನಾ ತೇಜವನು ಗೊಗೆಯರಿದಪುದೇ ಪ ನೀನೆ ಪರಮಾತ್ಮನಿಹೆ ಎಂದು ನೀ ಬೋಧಿಸಲು ಮಾನವ ನಾನು ಪರಮಾತ್ಮನೆ ಏನಾದರೂ ಪೇಳಿ ಮೋಸಮಾಳ್ಪನು ಎಂದು ಸ್ವಾನುಭವ ಪಡೆಯದಲೆ ನಿನ್ನ ನಿಂದಿಸುವಾ 1 ಕರ್ಮದಾ ಸಂಕಲೆಯ ಕಟ್ಟಿಕೊಂಡಿಹ ಜೀವ ಕರ್ಮ ಕಳೆಯುವ ದಿವ್ಯ ಜ್ಞಾನವರಿಯುವನೇ ದುರ್ಮತಿಯು ದ್ವೇಷಿಸುತ ಬೋಧದಲಿ ಮನವಿಡದೆ ಧರ್ಮವಂತನು ಎಂಬ ಒಣ ಹೆಮ್ಮೆ ಪಡುತಿರುವ 2 ಈ ನಿಂದೆ ಸ್ತೋತ್ರಗಳಿಗೊಳಗಾಗುವವನೆ ನೀ ಸ್ವಾನುಭವಸಂವೇದ್ಯ ಕೇವಲಾನಂದಾ ನೀನೆ ಸರ್ವವ್ಯಾಪಿ ನಿನ್ನ ನಿಂದಿಸಿದೊಡೆ ತಾನು ತನ್ನನು ಬೈದು ದೂರಿಕೊಂಡಂತೆ 3 ಜಗದ ಸುಖಕಾಗಿ ಬಲು ಕಾತರಿಪ ಮನುಜನಿವ ಜಗದಾಚೆಗಿಹ ಪರಮಶಾಂತಿಯರಿಯುವನೇ ಸೊಗಸಾಗಿ ತಿಳಿಯುವೊಡೆ ಜಿಜ್ಞಾಸುವಲ್ಲದೆ ಅಘನಾಶಶಂಕರನೆ ಅನ್ಯರರಿಯುವರೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಯಾಕೆ ನಿನ್ನವರೊಳು ದೂರದೃಷ್ಟಿ ಪ್ರಭುವೆ ಲೋಕಬಂಧು ದಯಾಸಿಂಧು ದಾಸಜನರರಸ ಪ ಭ್ರಷ್ಟನಿವ ನಿತ್ಯದಲಿ ಮುಟ್ಟಿ ಸ್ನಾನಗೈಯನೆಂದು ಬಿಟ್ಟಿ ಬೇಸರ ಮಾಡಿ ಸಿಟ್ಟಗೆದ್ದಿರುವ್ಯೋ ಪುಟ್ಟಿ ಜತೆಗೂಡಿಲ್ಲೆ ಬಿಟ್ಟು ಅಗಲುವ ದೇಹ ಎಷ್ಟು ತೊಳೆದರೇನೆಂದು ಗಟ್ಟಿಮಾಡಿಬಿಟ್ಟೆ 1 ಕಡುಹೀನ ಕುಲಯೋಗ್ಯ ಮಡಿ ಅರಿಯ ಇವನೆಂದು ಕಡುಗೋಪದಿಂದೆನ್ನ ನುಡಿಕೇಳದಿರುವ್ಯೋ ಮುಡಿಚೆಟ್ಟಿನಲಿ ಬಂದು ಕಡುಹೊಲಸು ತುಂಬಿರ್ದ ಜಡದೇಹಕ್ಯಾತರ ಮಡಿಯೆಂದು ಬಿಟ್ಟೆ 2 ನಿತ್ಯನೇಮವರಿಯದ ಅತ್ಯನಾಚಾರಿಯೆಂದು ನಿತ್ತರಿಸದೆನ್ನ ಮುಖವೆತ್ತಿ ನೋಡದಿರುವ್ಯೋ ಪಿತ್ತ ರಕ್ತ ಮಜ್ಜ ಮಾಂಸ ಮತ್ತೆ ಮಲ ಮೂತ್ರ ಕ್ರಿಮಿ ಹೊತ್ತ ಭಾಂಡಿದೆಂದರಿತು ನಿತ್ಯನೇಮ ಬಿಟ್ಟೆ 3 ಸತ್ಯಕರ್ಮದ ಮಹಿಮೆ ಗೊತ್ತಿಲ್ಲದಧಮ ಮಹ ಧೂರ್ತ ಪಾತಕಿಯೆಂದು ಮರ್ತೆನ್ನಬಿಟ್ಟ್ಯೋ ಎತ್ತನೋಡಲು ನೀನೆ ಸುತ್ತಿ ವ್ಯಾಪಿಸಿ ಜಗವ ಹೊತ್ತು ಆಳುವುದರಿತು ಸತ್ಕರ್ಮ ಬಿಟ್ಟೆ 4 ನೀನೆ ನಿರ್ಮಿಸಿದಭವ ನಾನಾಲೋಕ ವೇದಶರ್ಮ ನೀನೆ ವಿಶ್ವಾತ್ಮಕನೈ ನೀನೆ ಸೂತ್ರಧಾರಿ ಧ್ಯಾನದಾಯಕ ಮಮಪ್ರಾಣ ಶ್ರೀರಾಮ ನಿನ್ನ ಧ್ಯಾನವೊಂದೆ ಅಧಿಕೆಂದು ನಾನಾಕರ್ಮ ಮರೆದೆ 5
--------------
ರಾಮದಾಸರು
ರುದ್ರದೇವರು ಪಾಲಿಸೊ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ಪ ವೇದವೇದಾಂತ ಪುರಾಣಗಳೆಲ್ಲನೀದಯಾಳುವೆಂದು ಪೊಗಳುತಿರೆಹಾದಿಬೀದಿ ದೇವತೆಗಳಿಗೆರಗಿ ನಾಖೇದಬಟ್ಟು ನಿನ್ನ ಮೊರೆ ಹೊಕ್ಕೆ ಮಹದೇವ 1 ತುಂಗಾ ಕುಮದ್ವತಿ ಸಂಗಮೇಶ್ವರ ನಿನ್ನಕಂಗಳಿಂದಲಿ ನೋಡೂ ಕರುಣದಿಂದಕಂಗೆಟ್ಟು ಕಳವಳಿಸುತಿರೆ ನೀ ನೋಡಿಭಂಗಪಡಿಸಿದರೇನು ಭಾಗ್ಯವು ಬರುವದು 2 ಆಪತ್ತು ಕಳೆದು ಸಂಪತ್ತು ನೀಡಿ ನಿನ್ನರೂಪವ ತೋರಿಸೋ ತ್ವರಿತದಲಿಗೋಪತಿಕೃಷ್ಣವಿಠಲನೆಲ್ಲ ಲೋಕವವ್ಯಾಪಿಸಿರಲು ಸಂದೇಹ ವ್ಯಾತಕಯ್ಯಾ 3
--------------
ಗೋಪತಿವಿಠಲರು
ವಾನರ ವಂದ್ಯ ವಿಠಲ | ನೀನೆ ಪೊರೆ ಇವಳಾ ಪ ಗಾನ ಲೋಲನೆ ದೇವ | ಮೌನಿ ಕುಲ ಪೂಜ್ಯಾ ಅ.ಪ. ದಾಸತ್ವ ದೀಕ್ಷೆಯನು | ಆಶಿಸುವಳೀ ಕನ್ಯೆವಾಸವ ವಂದಿತನೇ | ವಾಸುದೇವಾಖ್ಯಾವಾಸನೆಯ ತೆರದಿ ಉಪ | ದೇಶವಿತ್ತಿಹೆನೆಯ್ಯಪೋಷಿಸೋ ಬಿಡದಿವಳ | ಹೃಷಿಕೇಶ ಹರಿಯೇ 1 ಸತಿ ನಿನ್ನ ಸ್ಮøತಿಯಾ |ಒಲಿಸಿ ಸರ್ವದ ನಿನ್ನ | ಪೊಳೆವ ಮಹಿಮೆಗಳನ್ನಒಲಿಸುವಂದದಿ ಮಾಡೊ | ಬಲ ಭೀಮ ವಂದ್ಯಾ 2 ಪರಿ ಪೂರ್ಣ | ಅಕುಟಿಲಾತ್ಮಕನೇಮುಕುತಿದಾಯಕ ಹರಿಯೆ | ಭಕುತ ವತ್ಸಲ ದೇವನಿಖಿಲ ಜಗವ್ಯಾಪಿ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ಪ ವನಚರ ನಗಧರ ಅವನಿಯ ಉದ್ಧಾರ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ - ವಣದಿ ಪಡದೋ ಶ್ರೀ ವಿಜಯವಿಠ್ಠಲಾ 1 ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ2 ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ3 ಬಕಮುಖ ದನುಜರ ಹಕ್ಕಲಗೊಳಿಸಿ ಬಲು ಯುಕುತಿಯಿಂದಲಿ ಭಕುತರ ಪೊರದೆ ವಿಕಸಿತ ಕಮಲನಯನ ಕಂಜನಾಭನೆ ಸಕಲ ಸುರರ ಪಾಲ ವಿಜಯವಿಠ್ಠಲಾ 4 ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ ರುಕ್ಮಿಣಿ ಪತಿಯಾದಾ ಚಕ್ರಪಾಣಿ ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ 5 ಘನವಾದ ವಿಶ್ವರೂಪವ ತೋರಿದೆ ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ ವನಜ ಸಂಭವನಯ್ಯ ವಿಜಯವಿಠ್ಠಲಾ 6 ವನಿತೆಯರ ವ್ರತ ಭಂಗವ ಮಾಡಿ ದಾನವರ ಮೋಹಿಸಿದೆಯೊ ಪವನನೊಡಿಯಾ ಉನುಮತ ಜನ ಕುಲ ಸನುಮತ ಶಾಸ್ತ್ರವ ವ- ದನದಲಿ ಮೆದ್ದಿಯೊ ವಿಜಯವಿಠ್ಠಲಾ 7 ರಜೋತಮ ಗುಣವನು ಭುಂಜಿಸುತ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ ಸುಜನಪಾಲ ನೀನು ವದಗಿ ವಾಜಿಯನೇರಿ ಭಜನಗೈಸಿದ ವೇಗ ವಿಜಯವಿಠ್ಠಲಾ 8 ಗೋಕುಲದಲಿ ಅನೇಕ ಲೀಲೆಯ ತೋರಿ ಬೇಕಾದ ವರ ಪುಂಡರೀಕಗಿತ್ತೆ ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ9
--------------
ವಿಜಯದಾಸ
ವಿಶ್ವ ಕಾಯೋ ಎನ್ನ ಪ ಪರಮಾತ್ಮ ನೀ ದೂರ ಮಾಡಿದರೆ ಗತಿಯೇನು ಅ.ಪ ನಿನ್ನ ಲೋಕಕೆ ಎನ್ನ ವೈದಾಗ ಕರುಣಾತ್ಮ ನಿನ್ನ ಕ್ರಿಯ ಗುಣ ರೂಪ ತೋರಿ ಎನಗೆ ನಿನ್ನ ಪರಿವಾರ ಜನರಲ್ಲಿ ಸೇರಿಸಿ ಪರಮ ಧನ್ಯನಾ ಮಾಡಯ್ಯ ಮದ್ಬಿಂಬ ಮಾರಮಣ 1 ಸ್ಮøತಿ ಜ್ಞಾನ ಮನ ಬುದ್ಧಿ ಮಾತ್ರ ಭೂತವು ಕರಣ ಧಾತು ಸಪ್ತಕ ಪಂಚ ಕೋಶಗಳಲಿ ಸತಿ ಸಹಿತ ಪ್ರಥಮಾಂಗನಲಿ ಕುಳಿತು ನೀ ಸತತ ಪ್ರತಿ ತತ್ವ ವ್ಯಾಪಿಸಿ ಜೀವಕರ್ಮವ ಮಾಳ್ಪೆ 2 ಚತುರ ದಶಲೋಕದಲಿ ಪ್ರತಿದೇಹರಥ ನಿನಗೆ ಕೃತಿರಮಣ ಸರ್ವತ್ರ ನಿನ್ನ ಲೀ¯ ಸತಿ ರಮಣ ಸುರರೆಲ್ಲ ಗತನಿದ್ರರಾಗಿನ್ನು ನೋಳ್ಪರೈ ಮಹಚಿತ್ರ 3 ಕಂಡ ಕಡೆಯಲಿ ಪೂಜೆ ಭಂಡಾರ ತುಂಬಿಹುದು ವಿಧಿ ಸುರರು ಸರ್ವತ್ರ ನಿನ್ನ ಕಂಡು ಪೂಜಿಪರಯ್ಯಾ ಪೂರ್ಣ ವಿಭವಗಳಿಂದ ಮಂಡÉ ಬಾಗಿದೆ ಭಕ್ತ ತಂಡದಲಿ ಇಡು ಎನ್ನ 4 ಪೂಜ್ಯ ಪೂಜಕನಾಗಿ ಪರಿಪೂರ್ಣ ವೈಭವದಿ ಪೂಜಿಸುವೆ ನಿನ್ನ ನೀ ಸರ್ವಕಾಲ ಭೋಜ್ಯ ಭೋಕ್ತøನಾಗಿ ಆನಂದ ಸಿರಿಗೀವೆ ಅಜರುದ್ರ ಸುರಗಣಕೆ ಉಣಿಸಿ 5 ಹದಿನೆಂಟು ನರಮುಖವು ಮಧ್ಯ ಗಜಮುಖ ದೇವ ಪದವೆರೆಡು ಭುಜ ನಾಲ್ಕು ಪದುಮೆ ರಮಣ ಉದಯಾರ್ಕ ಕಿರೀಟ ಕುಂಡಲಭೂಷ ಗದೆ ಪದುಮ ಆರೆ ಶಂಖ ಮಣಿಯುಕ್ತ ಮಾಲಧರ 6 ಮೂರ್ತಿ ಜಯೇಶವಿಠಲ ವಿಶ್ವನಾಮಕ ವಿಶ್ವವ್ಯಾಪ್ತಗುಪ್ತ ಉಚ್ಛ್ವಾಸ ಬಿಡುತಿಹೆನೊ ಉಡುಗಿ ಸಕಲ ಶಕ್ತಿ ಉತ್ಸಾಹ ನೀಡಯ್ಯ ಸ್ವಾಂತರದಿ ಕಲೆತೆನ್ನ 7
--------------
ಜಯೇಶವಿಠಲ
ವೆಂಕಟರಮಣ ಶ್ರೀ ವೆಂಕಟರಮಣ ಶ್ರೀವೆಂಕಟರಮಣನೇ ||ಅ|| ಪಂಕಜೋದ್ಭವ ಪಿತ ಪಿಳ್ಳಂಕೇರಿಯ ವಾಸವೆಂಕಟರಮಣನೇ ಅ.ಪ. ಭದ್ರ ಮೂರುತಿ ಸಣ್ಣ | ಆದ್ರಿಯಾಶ್ರಯಿಸಿ ನಿಂತಿದ್ದಿ ಕಾರಣವೇನೋ |ಶುದ್ಧ ಜನರು ಮಾಳ್ಪ | ಶುದ್ಧ ಸೇವೆಯ ಗೊಂಡುದ್ಧರಿಸಲು ಯೋನೋ 1 ನೀರೊಳು ಮುಳು ಮುಳಿಗಿ | ಭಾರಿ ಗಿರಿಯ ಪೊತ್ತುಕೋರೆಹಲ್ಲನು ತೋರೇನೋ |ಧೀರ ಕಂದನ ಕಾಯ್ದ | ನಾರಸಿಂಹನೆ ಬಲಿಯದ್ವಾರ ಕಾಯ್ದಿಹದೇನೋ 2 ನೃಪರ ಸವರಿ | ನಾರಿ ಚೋರನ ಕೊಂದುಚಾರ ಗೋಪೆರ ಕೂಡೇನೊ |ಸಾರಿ ತ್ರಿಪ್ಪುರವನ | ನಾರೇರ ವ್ರತ ಕೆಡಿಸಿವೀರ ರಾವುತನಾದದ್ದೇನೋ 3 ಪಂಚ ರೂಪದಿ ಪ್ರ | ಪಂಚವ ವ್ಯಾಪಿಸಿಪಂಚಾತ್ಮಕ ನಾದದ್ದೇನೋ |ಅಂಚೆ ಗಮನನಾದಿ | ಪಂಚ ಪಂಚರಲ್ಲಿಸಂಚು ಗೊಳಿಪುದೇನೋ | 4 ಇಂದ್ರಾ ವರಜ ದೇ | ವೇಂದ್ರ ಗಭೀಷ್ಟದಬಂದಲ್ಲಿ ನಿಂದಿರ್ಪುದೇನೋಇಂದು ಕುಲಜ ರಾ | ಜೇಂದ್ರ ಜನಮೇಜಯಗಂದು ಒಲಿದು ನಿಂತಿಲ್ಲೇನೋ 5 ತೊಂಡ ಮಾನಾನಂದಅಂಡಜವಾಹ ವಿಖ್ಯಾತಾ6 ಭಾವ ಶುದ್ಧೀಲಿ ಸ್ತವನ | ದೇವ ಶರ್ಮನು ಮಾಡೆಭಾವಕ್ಕೊಲಿದು ಮೋಕ್ಷವಿತ್ಯೋ |ಗೋವ ಕಾವ ಗುರು | ಗೋವಿಂದ ವಿಠಲ ಭಕ್ತಿಭಾವ ನಿನ್ನಯ ಪದದಲ್ಲಿಯೋ7
--------------
ಗುರುಗೋವಿಂದವಿಠಲರು
ಶ್ರೀ ಧನ್ವಂತ್ರಿ ಸ್ತೋತ್ರ(ನಾರಾಯಣಾಚ್ಯುತ ವಿಠಲ ದಾಸಿಗಾಗಿ) ಕಾರುಣ್ಯ ನಿಧಿ ತವಾ | ಪಾರ ಮಹಿಮೆಯ ಕೇಳಿಸಾರಿದೆನೊ ಪಾದಾಬ್ಜ ಶರಣೆಂದು | ಶರಣೆಂದೆಶ್ರುನಾಥಪಾರು ಮಾಡಾಕೆಯ ವೃಜಿನವ 1 ಆಂತ್ರಕೆಟ್ಟಿಹುದೆಂದು | ತಾಂತ್ರಿಕರು ಪೇಳುವರುಆಂತ್ರ ಸರಿಮಾಡುವ ಕಾರ್ಯವ | ಕಾರ್ಯನಿರ್ವಹಿಸಿ ಸ್ವಾ-ತಂತ್ರ ಪುರುಷಾ ದಯತೋರೋ 2 ಪಾದ ಭಜಿಸೂವ | ಭಜಿಸೂವ ದಾಸಿಗೆಈ ರೀತಿ ಭವಣ್ಯಾಕೊ ಧನ್ವಂತ್ರಿ 3 ಆರೋಗ್ಯ ಆಯುಷ್ಯ | ಆರಾಧಕರ್ಗೀವೆಈರನುತ ಧನ್ವಂತ್ರಿ ಕರುಣಾಳು | ಕರುಣಾಳು ಸರ್ವಜ್ಞಆರೋಗ್ಯ ದಾಸಿಗೆ ಕೊಡು ಎಂಬೆ4 ಧಂ ಎಂದು ಉಚ್ಛರಿಸೆ | ಧ್ವಂಸ ಮಾಡುವೆ ರೋಗಧನಂತ್ರಿಯೆನ್ನೆ ಭವರೋಗ | ಭವರೋಗ ವಾರಿಸುವಧನ್ವಂತ್ರಿ ರೂಪಿ ನಮೊ ಎಂಬೆ 5 ಕರದಲ್ಲಿ ಸುಧೆ ಕಲಶ | ಧರಿಸಿರುವ ಬಗೆಯೇನೊಶರಣರ್ಗೆ ಸುಧೆಯಾನುಣಿಸುತ್ತ | ಉಣಿಸುತ್ತಲಮರತ್ವಕರುಣಿಸುವಿ ಎಂದೂ ಶ್ರುತಿ ಸಿದ್ಧ 6 ಇಂತಿರಲು ದಾಸಿಸ | ತ್ಪಂಥಗಳನ್ನುದ್ದರಿಸೊಅಂತು ತವ ಚರಣಾಬ್ಜ ಬೇಡುವೆ | ಬೇಡುವೆನೋಪಾದಾಕ್ರಾಂತಳಿಗೆ ಸುಧೆಯಾ ನೂಣೀಸೊ7 ಚಂದ್ರ ನಿವಹದ ಕಾಂತಿ | ಯಿಂದಮೃತ ಕಿರಣದಿಂಹೊಂದ್ಯಮಿತ ಸುಖರೂಪಿ ಉಲ್ಲಾಸವೀವುತ್ತಚಂದುಳ್ಳ ಸುಧೆ ಕಲಶ ಪಿಡಿಯುತ್ತ 8 ಆತು ಜ್ಞಾನಾಂಕವನು | ಆತ್ಮಸ್ಥಶೀತಾಂಶುಧೌತ ಮಂಡಲಗ ಲಕ್ಷ್ಮೀಶ | ಲಕ್ಷ್ಮೀಶ ಹರಿಯನ್ನುಮಾತು ಮಾತಿಗೆ ನಾನು ಸ್ಮರಿಸೂವೆ 9 ಉತ್ತಮಾಂಗದಲಿರುವ | ಹತ್ತೆರಡು ದಳ ಕಮಲಪ್ರಸ್ಥಿತನು ಧನ್ವಂತ್ರಿ ಮಕರಂದ | ಮಕರಂದ ಸ್ರವಿಸುವನಭಕ್ತಿಯಲಿ ಸ್ಮರಿಸೋದು ರೋಗಾರ್ತೆ 10 ಕಮಲ ಹೃದಯಸ್ಥ 11 ಸದನ ಷಟ್ದಳ ಕಮಲಗುದವು ಮೂಲಾಧಾರಾನಾಲ್ದಳವುನಾಲ್ದಳ ಕಮಲಸ್ಥಬದಿಗನು ಧನ್ವಂತ್ರಿ ರೂಪೀಯು 12 ರೂಪೀ ಈ ದೇಹವನು | ವ್ಯಾಪಿಸುತ ತಾನಿದ್ದುಕಾಪಾಡಲೋಸುಕದಿ ಮಕರಂದ | ಮಕರಂದ ಸುರಿಸುವವ್ಯಾಪಾರದಿಂ ಜೀವರುದ್ಧಾರ 13 ಹತ್ತಿರುವ ಅಜ್ಞಾನ | ವತ್ತಿಬಹ ಭಯದುಃಖಮತ್ತೆ ಮಹವಿಷವು ಇದರಿಂದ | ಇದರಿಂದ ಪರಿಹಾರ ಭಕ್ತಿಯಿಂ ಭಜಿಸೇ - ಸುಖ ಸೌಖ್ಯ 14 ಶರಣರ್ಗೆ ತಪ್ಪದೆಲೆ | ಗೆರೆವೆ ಸೌಖ್ಯಂಗಳನುಗುರು ಗೋವಿಂದ ವಿಠಲಾ | ವಿಠ್ಠಲ ಧನ್ವಂತ್ರಿಮರುತಾಂತರಾತ್ಮಾ ಸಲಹಯ್ಯ15
--------------
ಗುರುಗೋವಿಂದವಿಠಲರು
ಶ್ರೀ ಪಾಂಡುರಂಗ ಪ್ರಾರ್ಥನೆ ಪಾದ ಅಮಿತ ನೀಲಮೇಘಶ್ಯಾಮ ವಿಠಲನ್ನ 1 ಶಿಲೆಯನುದ್ಧರಿಸಿರ್ಪ ಪಾದಕೆ ಬಲಿಯ ಮೆಚ್ಚಿದ ಪಾದಕಮಲಕೆ ನಲಿವಿನಿಂದಲಿ ನಮಿಸಿ ಪೊಗಳುವೆಕಲಿಮಲಂಗಳನೆಲ್ಲ ತರಿಯುತತಲೆಯೊಳಾಶೀರ್ವಾದವೀಯಲು ಬಿದ್ದು ಬೇಡುವೆನು 2 ಕ್ರೂರ ರಕ್ಕಸರುಪಟಳಂಗಳ ವೀರತನದಿಂ ಚಕ್ರದಡಗಿಸಿ ಮಾರಪಿತ ಭವದೂರ ಕಂಸರಲಿ ದಣಿಯುತಲಿ ಯಾರ ಗೊಡವೆ ನಮಗೇನು ಎನ್ನುತ ಶ್ರೀ ರಮಾವರ ದೇವಿ ಸಹಿತೀ ದಾರಿಯೋಳ್ಮಿಜ ಭಕ್ತಗಾಶ್ರಯನಾಗಿ ನಿಂತಿಹನೆ 3 ಕಾಯ ಧರಿಸಿದ ಭಕ್ತವರ್ಯನ ಮಾಯೆಯಿಂದಲಿ ನೋಡಿ ನಲಿಯಲು ಬಂದ ವಿಠ್ಠಲನೆತೋಯಜಾಕ್ಷಿಯಳಾದ ಲಕುಮಿಯರಾಯ ಶ್ರೀಹರಿ ನಿನಗೆ ಇಟ್ಟಿಗೆ ಯಾಯಿತೇ ಬಲು ಸಂಖ್ಯದಂಸನ ನಿಂತುಕೊಳ್ಳಿಲ್ಕೆ 4 ತಾತನಂಘ್ರಿಯ ಸೇವೆಗೆಯ್ದಿರು-ವಾತ ಬರ¯ಂದನಿಮಿಷಾಗ್ರಣಿ ತಾತ ನಿಂತೆಯ ಸೊಂಟದ ಮೇಲೆ ಕೈಯಿಟ್ಟುಮಾತೆಯಾದವರು ಹಾಗೆ ಸಂಗಡ ಪ್ರೀತಿಯಿಂದಲೆ ನಿಂತುಕೊಂಡಳು ಖ್ಯಾತಿಯಾಯಿತು ಪಾಂಡುರಂಗನ ಲೀಲೆ ಭಕ್ತರಲಿ 5 ಸತ್ತು ಹುಟ್ಟುವ ಬಾಧೆಯಿಲ್ಲದಸತ್ಯವಂತನೆ ಕೊಟ್ಟ ಇಟ್ಟಿಗೆ ಮೆತ್ತಗಿಹುದೆÉೀನಷ್ಟು ದಿವಸವು ನಿಂತುಕೊಂಡಿರುವೆಮತ್ತೆ ಪೇಳುವುದೇನು ದೇವನೆ ಸುತ್ತು ಮುತ್ತಿನ ಜಗಕೆ ಆಸರವಿತ್ತೆ ನಿನಗಾಸರವು ಯಾವುದು ಭಕ್ತವತ್ಸಲನೆ 6 ಹೇ ದಯಾನಿಧೆ ಯಾದವಾಗ್ರಣಿ ಮಂದವಾಖ್ಯನೆ ಭೀಮತಡೆಯೊಳು ಆದರಮ್ಮಿಗೆ ತೋರಿ ಕರೆದನೆ ನಿಮ್ಮನೀರ್ವರನು ಬಾಧೆಬಡುತೀ ನಿಂತ ಕಾಲಿಗೆಹಾದಿನೋಡುವವೆಷ್ಟೊ ಬೆಳೆಯುಚೋದ್ಯವಲ್ಲವೆ ನಿನ್ನ ಲೀಲೆಯು ದಿವ್ಯವಿಗ್ರಹನೇ 7 ಆದಿಮೂರುತಿ ನಿನ್ನ ಹುಡುಕಲುವೇದ ಶಾಸ್ತ್ರ ಪುರಾಣವೆಂಬವು ಹಾದಿ ಕಾಣದೆ ನಿಂತವಲ್ಲೈ ನೀನೆ ಬಂದೀಗಮೇದಿನೀ ತಳದಲ್ಲಿ ಭಕ್ತರಹಾದಿ ನೋಡುತ ನಿಂತುಕೊಂಡಿರೆಹೋದವೆಷ್ಟೋ ದಿವಸ ಶ್ರೀಹರಿ ನಿನ್ನ ಲೀಲೆಯಲಿ 8 ನೀಲಮೇಘ ಶ್ಯಾಮ ಕೀರ್ತಿಯ ಜಾಲವನ್ನುರೆ ಭಜನೆ ಮಾಡುತತಾಳಹಾಕುತ ಸಂತಮಂಡಳಿ ಕುಣಿದು ಬರುತಿರಲುಧೂಳವೇಳುವದನ್ನು ಕಣ್ಣಲಿವೇಳೆಗಳೆಯದೆ ನೋಡಿ ನಲಿವುದುಲೀಲೆಯಲ್ಲವೆ ಪಾಂಡುರಂಗನೆ ವಿಶ್ವಚಾಲಕನೆ9 ಸರಸಿಜಾಕ್ಷನೆ ಕರಗಳೆರಡನುಇರಿಸಿ ಟೊಂಕದೊಳೇನು ನೋಡುವಿಪರಮ ಭಕುತನ ತಂದೆ ತಾಯ್ಗಳ ಸೇವೆ ಮಾಡುವುದುದೊರೆಯಲಾರದೆ ಕಲಿಯ ಕಾಲದೆ ದುರಿತ ನೀಗಿಸಿಕೊಂಡನಲ್ಲವೆ ಆರುಗಿಯಾದರು ನೋಡಲೊಲ್ಲನು ಭಕ್ತಿಬಲದಿಂದ 10 ಚಿನ್ನದರಸನೆÉ ನಿನ್ನ ಕೈಯನುಘನ್ನ ಟೊಂಕದ ಮೇಲೆ ಇರಿಸುತನನ್ನಿಯಿಂ ಭರವಸೆಯ ಕೊಡುವಿಯೊ ಭವದ ಸಾಗರವುತನ್ನ ನಂಬುತ ದಾಟಿ ಹೋಗುವಸನ್ನುತಾತ್ಮರಿಗಿಷ್ಟಯೆಂಬುದ ಚೆನ್ನವಾಗಿಯೆ ತಿಳಿಸಲೋಸುಗ ಹೀಗೆ ನಿಂತಿಹೆಯಾ 11 ನಾನು ನಿನ್ನನು ಕರೆಯದಿದ್ದರು ನೀನೆ ಬಂದಿಲ್ಲೇಕೆ ನಿಂತೆಯೊ ದೀನಪಾಲಕನೆಂಬ ಬಿರುದನೆ ಕಾಯಲೋಸುಗವೇಶಾನೆ ಸಂಪದವಿದ್ದ ದ್ವಾರಕೆ ಯಾನೆ ಕುದುರೆಗಳಿಂದ ಶೋಭಿಪ ದಾನವಾಂತಕ ಕೃಷ್ಣರಾಯನೆ ಈಗ ಪಂಡರದೀ 12 ಕರ್ಮ ಮುಗಿದಿಹುದೇಮಿಕ್ಕಿದವರೇನನ್ಯಯ ಪುತ್ರರೆ ತಕ್ಕ ಯೋಚನೆಗೆಯ್ದು ನಂತರತೆಕ್ಕೆಯೋಳ್ಸಲಹುವದು ಲೇಸೈ ಭಕ್ತವತ್ಸಲನೆ 13 ಹಾಲು ಮೊಸರಾ ಬೆಣ್ಣೆಯುಂಡೆಯ |ಲೀಲೆಯಿಂದಲೆ ಕದ್ದ ಕಳ್ಳನೆಚ್ಯಾಳಿಬಲಿತಾ ಬಳಿಕ ಬಿಡುವೆಯಾ ಭಕ್ತರಂತಹರಗಾಳಿ ಸೋಂಕಿದ ನೆವ ಮಾತ್ರಕೆಜಾಲಬೀಸುತ ಕದ್ದು ಕೊಳ್ಳುವಿಹೇಳಲೇನೈ ಹಿಂದಿನೆಷ್ಟೊ ಜನ್ಮದಘನಿದನಾ 14 ನಿನ್ನನೇ ನೆರೆ ನಂಬಿ ಭಜಿಸುವಪುಣ್ಯವಂತರ ಹೃದಯಮಂದಿರ-ವನ್ನೆಮಾಡಿದ ಪಾಂಡುರಂಗನೆ ನೀನು ಜಗದೊಳಗೆಘನ್ನ ಪಾಪದಿ ಬಳಲುತಿರುವವ-ರನ್ನುಸಲುಹಲು ಬಂದೆಯೇನೈಸನ್ನುತಾಂಗನೆ ಭಜನಿಗೊಲೆಯುವ ದಿವ್ಯ ವಿಠ್ಠಲನೆ 15 ವೇದಗಳ್ಳನ ಸದೆದು ಬ್ರಹ್ಮಗೆ ಮೋದದಿಂದಲಿ ಕೊಟ್ಟ ಮತ್ಸ್ಯನೆಆದಿಕೂರ್ಮನೆಯಾಗಿ ಮಂದರನೆಗಹಿ ನಿಂದವನೇಬಾಧೆÉ ಬಿಡಿಸುವ ಕ್ರೂರ ರಕ್ಕಸಭೇದಿಯಾಗುತ ಧರಣಿ ಮಂಡಲಸೇದಿ ತಂದನ ನೀನೆಯಲ್ಲದೆ ದಿವ್ಯ ವಿಠ್ಠಲನೆ 16 ಒಂದೆ ಮನದೊಳು ನೆನೆದ ಕುವರಗೆಬಂದೆ ಕಂಬದೆ ನಾರಸಿಂಹನೆನಿಂದ ಮಾತ್ರಕೆ ಮೂರು ಪಾದದ ಭೂಮಿದಾನದಲೀತಂದು ಪಾತಾಳದಲಿ ಬಲಿಯನುಚಂದದಿಂದಲಿ ಇಟ್ಟ ವಾಮನತಂದೆಯಾಡಿದ ನುಡಿಯ ನಡಿಸಿದ ಭಾರ್ಗವತ್ತೀ 17 ಸೀತೆಗೋಸುಗ ರಾಮನಾಗುತಖ್ಯಾತಿಗೋಸುಗ ಕೃಷ್ಣನಾದೆಯಲೇಪ್ರೀತಿಗೋಸುಗ ಬಾಧ್ಯನಾಗುತ ಜಗವ ಪಾಲಿಸಿದ್ಯಾಜಾತಿಯಶ್ವವನೇರಿ ರಿಪುಗಳÁತ ಮಾಡಿದ ಕಲ್ಕ್ಯರೂಪನೇಯಾತಕೀಪರಿ ಚಂದ್ರಭಾಗದಿ ನಿಂತೆ ಬೆರಗಾಗಿ 18 ನಿನ್ನ ನಾಮಗಳಮಿತವಿದ್ದರುನನ್ನ ನಾಲಿಗೆಗಷ್ಟು ಬರುವವೆ ?ಸನ್ನುತಾಂಗನೆ ಪಾಂಡುರಂಗನೆ ದಿವ್ಯ ವಿಠ್ಠಲನೆನ್ನುತಿಷ್ಟೇ ನಾಮಗರೆವೆನುಚಿನ್ನದರಸನೆ ಭಕ್ತಸಂಘದೊಳೆನ್ನ ಕೂಡಿಸಿ ಕಾಯಬೇಕೈ ಪರಮ ಭಗವಂತಾ 19 ಕಾಲಕಾಲಕೆ ನೇಮನಿತ್ಯಗ-ಳಾಲಯಂಗಳ ಮಧ್ಯದೆಸಗದೆಜಾಲಿಯಂತೇಗೆಲ್ಲ ಜನರಿಗೆ ಬೆಳೆದೆ ಬಾಧಿಸುತಬಾಲ ಯೌವನ ವಾರ್ಧಿಕತ್ವದೆಕಾಲಪೋಯಿತು ನಿನ್ನ ನೆನೆಯದೇ ಹೇಳಲೇನೈ ಕಾಲನೆಳೆಯುವನು 20 ಕಂತು ಜನಕನೆ ನಿನ್ನ ನಾಮದಮಂತ್ರವೆನಗಿನ್ನೆಲ್ಲಿ ಬರುವುದು ಶುದ್ಧ ಪಶುವಾದೇಅಂತರಾತ್ಮನೆ ನೀನು ಈ ತೆರನಿಂತುಕೊಂಡರೆ ನನ್ನ ಗತಿಯೇ-ನೆಂತ ಹೇಳಲಿ ಸಂತೆ ತೀರಿತು ಸಲಹೊ ವಿಠ್ಠಲನೇ 21 ಕಾಲ ಬಂದಿದೆಸದ್ಯಕಾರೂ ಕಾವರಿಲ್ಲವುದ್ಧಪಾಶದಿ ಬಿಡಿಸಬಾರೈ ದೀನ ಬಾಂಧವನೇ 22 ಕಾಯಕಿರುವದ ಬಂಧು ಬಳಗವು ಹೇಯ ದುಡ್ಡನೆ ಶಳಯಲೋಸುಗಜೀಯ ನಿನ್ನಂತಾರು ಇಲ್ಲವು ಜೀವಕನು ಸರಿಸೀತಾಯ ತಂದೆಯ ಜಗಕೆ ಲಕ್ಷ್ಮೀರಾಯ ನೀನೇ ಅಲ್ಲವೇನೈ ಬಾಯ ಬಿಡುವೆ ಅಜ್ಞಬಾಲರ ಕಾಯೊ ವಿಠ್ಠಲನೇ 23 ಅಣ್ಣನಾಗುತ ದ್ರುಪದ ಸುತೆಗಾಬಣ್ಣದಂಚಿನ ಸೀರೆ ಉಡಿಸಿದೆನಿನ್ನ ಬಾಲ್ಯದ ಸುಖ ಸುಧಾಮಗೆ ಕೊಟ್ಟಿಯ್ಯೆಸಿರಿಯಹಣ್ಣಿನಾಶೆಗೆ ಶಬರಿ....ಗೊಲಿದೈಬೆಣ್ಣೆಯಾಶೆಗೆ ಗೋಪಿಗೊಲಿದೈಮಣ್ಣಿನಾಶೆಗೆ ಬಲಿಯ ಬಾಗಿಲ ಕಾಯ್ದ ವಿಠ್ಠಲನೇ 24 ನಿನ್ನ ನೆಂದು ಕಾಣದಿದ್ದವಕುನ್ನಿ ಪಾಮರನಣ್ಣನೆಂಬೆನೆಹಣ್ಣು ಹಂಪಲವೆನಗೆ ಸಾಲವು ನಿನಗೆ ಕೊಡಬಹುದೇನನ್ನ ತೆರದಾಚಾರ ಹೀನರೆಇನ್ನು ಗೆಳೆಯರು ನನಗೆ ಆದರುಮುನ್ನ ಮಾಡಿದ ಪಾಪ ಬಹಳಿದೆ ಕೊಳ್ಳೊ ನೀನದನೂ 25 ಹಿರಿಯರೆಸಗಿದ ಪುಣ್ಯದಿಂದಲೆದೊರಕಿತಲ್ಲವೆ ನಿನ್ನ ನೆನೆವುದುಪರಮ ಸುಂದರ ಪಾಂಡುರಂಗನೆ ಬಾರೊ ಮಾನಸದೀತರಳರಾಟದಿ ತನ್ನ ತಾಯಿಯಮರೆತ ತೆರದಿಂ ಬಿಟ್ಟು ಕೆಟ್ಟೆನುಕರಗದೇನೈ ನನ್ನ ಮನವದು ನಿನ್ನ ದೆಶೆಯಿಂದ 26 ಕೂಸು ಆಟದೊಳಿದ್ದರೇನೈಹೇಸಿ ಕೆಲಸಹೊಳಿದ್ದರೇನೈದೋಷಗಳೆಯುತ ಪೊರೆವಳಲ್ಲಿದೆ ಪಡೆದ ತಾಯವ್ವಶ್ರೀಶ ವಿಠ್ಠಲ ಪಾಂಡುರಂಗನೆಘಾಸಿಗೊಳಿಸುವ ಮುನ್ನಯವನರುಪಾಶ ಬಿಡಿಸೈ ಭಕ್ತವತ್ಸಲ ದಿವ್ಯ ವಿಠ್ಠಲನೇ 27 ಕಾಮನಯ್ಯ ಸುಧಾಮ ಸಖ ಶ್ರೀರಾಮ ವಿಠ್ಠಲ ದಿವ್ಯ ರೂಪನೆಪ್ರೇಮವೆನ್ನಲ್ಲಿಟ್ಟು ಸಲಹೊ ಪುಣ್ಯವರ್ಜಿತನೆತಾಮಸತ್ವದ ಕೆಲಸವೆಲ್ಲವನೇಮದಿಂದಲೆ ಮಾಡಿ ನಾ ನಿ-ಸ್ಸೀಮನಾಗಿಹೆ ಕಾಯೆಯೊ ವಿಶ್ವವ್ಯಾಪಿ ವಿಠ್ಠಲನೇ 28 ನಾನು ಹೇಳುವುದೇನು ದೇವನೆನೀನೆ ತಿಳಕೊಂಡಿರ್ಪೆ ಎನ್ನಯಮಾನಕುಚಿತಪ್ಪಂತೆ ಸತ್ಫಲ ಕೊಡು ದಯಾಂಬುಧಿಯೇನೀನು ನಿಂvಡೆÉಗೆನ್ನ ಜಗ್ಗುತಸಾನುರಾಗದೆ ಪೊರೆಯೊ ವಿಠ್ಠಲನೀನೆಯಾದರು ಬಾರೊ ಭಕ್ತರ ಹೃದಯ ಮಂದಿರಕೆ 29 ಮಂಗಳಂ ಮಧುಕೈಟಭಾರಿಗೆಮಂಗಳಂ ಶ್ರೀವತ್ಸಧಾರಿಗೆಮಂಗಳಂ ಬ್ರಹ್ಮಾಂಡ ಪಾಲಕ ಪಾಂಡುರಂಗನಿಗೆಮಂಗಳಂ ಶ್ರೀ ಲಕುಮಿದೇವಿಗೆಮಂಗಳಂ ಭೀಮಾತಟಾಕಿಗೆಮಂಗಳಂ ಸದ್ಭಕ್ತ ಮಂಡಳಿಗೆಗಳ ಭೂತಳಕೆ 30
--------------
ಪಾಂಡುರಂಗ
ಶ್ರೀ ರಮೇಶನೆ | ಶ್ರೀ ನಾರಸಿಂಹ ಶ್ರೀ ರಮೇಶನೆ ಪ. ಶ್ರೀ ರಮೇಶ ಸುರ ಸಾರ್ವಭೌಮ ಭವ ತಾರಕಗೊಳಿಸುವ ಕಾರಣಪುರುಷ ಅ.ಪ. ಆದಿಮೂಲನೆ | ಅಪಾರ ಮಹಿಮ ಖೇದದೂರನೆ ವಾದಿಪ ಪಿತನೊಳು ಸಾಧಿಪೆ ನಿನ ಮತ ಮೋದಗೊಳಿಸಿ ಪ್ರಹ್ಲಾದನ ಪೊರೆದೆ 1 ಶೌರಿ ಭೂಧರಾ ದೊರೆ ಕಾದಿದ ದುಷ್ಟ ದೈತ್ಯಾದಿಗಳ ಕೊಂಡು ಮೋದವಿತ್ತೆ ಭೂದೇವಿಗೆದೆ ಶ್ರೀಶಾ 2 ಭೂಪರೈವರು | ಎದುರಲ್ಲಿ ಇರಲು ಪಾಪಿ ಖೂಳರು ದ್ರೌಪದಿ ವಸನವ ಕೈಪಿಡಿದೆಳೆಯಲು ಪತಿ ಸಲಹೆನೆ ತಾಪವ ಬಿಡಿಸದೆ 3 ನೀರೊಳಾಡಿದೆ | ನೀ ಕಲ್ಲು ಪೊತ್ತು ನಾರಿಯ ತಂದೆ ನಾರಸಿಂಹ ವಟು ವೀರರಾಮಚಂದ್ರ ಜಾರಚೋರ ವಸ್ತ್ರದೂರನೆ ಕಲ್ಕಿ 4 ಗೋಪಾಲಕೃಷ್ಣ | ವಿಠ್ಠಲದೇವ ಕಾಪಾಡೊ ಕೃಷ್ಣ ರೂಪ ರೂಪಾಂತರ ವ್ಯಾಪಿಸಿ ಜಗದೊಳು ಶ್ರೀಪತಿ ಹೃದಯದಿ ರೂಪವ ತೋರೊ 5
--------------
ಅಂಬಾಬಾಯಿ
ಶ್ರೀ ವೇಣುಗೋಪಾಲ ಕೃಷ್ಣಾ ಕಾವುದೈ ಪರಿಹರಿಸಿ ನೀನೆನ್ನ ಕೃಷ್ಣಾ ಪ ಶ್ರೀ ವ್ಯಾಸರಾಯಾರ್ಜಿತ ಕರುಣಾ ದೇವಾದಿನುತಚರಣ ಗುಣಗಣಾಭರಣ ಅ.ಪ. ಭೂಮಿ ಆಕಾಶಾದಿ ಸಕಲವನು ವ್ಯಾಪಿಸಿದಪ್ರೇಮದಿಂ ನಿನ್ನಂಶವನು ಪೂರ್ಣಗೊಳಿಸಿದನೇಮದಿಂ ಜಾಂಬುವತಿ ಭಕುತಿಯಿಂ ಪೂಜಿಸಿದಭೀಮರಥಿಯಿಂ ಬಂದು ಶ್ರೀ ವ್ಯಾಸರಾಯಗೊಲಿದ 1 ಪುರಂದರ ಕಚ್ಚು ನೈವೇದ್ಯಕ್ಕೆಮೆಚ್ಚಿಯತಿ ವ್ಯಾಸರನು ಅಚ್ಚರಿಯಗೊಳಿಸಿದಹುಚ್ಚು ಕುರುಬಗೆ ಜಗನ್ನಾಥದಾಸರ ಜನುಮದಿಚ್ಛೆಯನು ವ್ಯಾಸರಿಂ ಪೂರೈಸಿ ಮೆರೆಯುತಿಹ 2 ಕನ್ನಡದ ರಾಜ್ಯವೆಂದೆನಿಸಿದ ವಿದ್ಯಾನಗರದುನ್ನತಿಯ ಗೈದ ಯತಿ ವ್ಯಾಸರನು ಪಟ್ಟದೊಳುಸನ್ನಹಿಸಿ ಘನ ಕೃಷ್ಣ ನರಪತಿಗೆ ಬಂದಿದ್ದಬನ್ನ ಕುಹುಯೋಗವ ಸಂಹರಿಸಿ ಪಾಲಿಸಿದ 3 ಪ್ರಾಣಯತಿ ಹರ ವ್ಯಾಸರಾಯಾದಿ ಹರಿದಾಸಜಾಣರನು ಕುಣಿಸಲಿಕೆ ನಾದವನು ಕೊಡಲೆಂದುವೇಣುವನು ಊದುತ್ತೆ ಮೋದಿಸುವನೆಂಬಂತೆಕಾಣಿಸುವ ರೀತಿಯಲಿ ನರ್ತಿಸುತ ನಿಂತಿರುವ 4 ವ್ಯಾಸರಂದದಿ ಧರ್ಮದುಪದೇಶ ಮಾಡುತ್ತೆದೇಶದೊಳು ಪಸರಿಸಲು ಲಕ್ಷ್ಮೀಶ ತೀರ್ಥರನುಶಾಸನವ ಗೈದುಪನ್ಯಾಸಕ್ಕೆ ನೇಮಿಸಿದಶ್ರೀಶ ಗದುಗಿನ ವೀರನಾರಾಯಣನು ಎಂಬ 5
--------------
ವೀರನಾರಾಯಣ