ಒಟ್ಟು 80 ಕಡೆಗಳಲ್ಲಿ , 36 ದಾಸರು , 75 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ. ಗಣಪತಿ ಸರಸ್ವತಿಯರು261ಶ್ರೀ ಗಣನಾಥನಿಗೆ | ಶಾರದಾಂಬಿಕೆಗೆಶ್ರೀ ಗೌರಿ ಭೂದೇವಿ ಶ್ರೀದೇವಿಗೆ |ಶ್ರೀಗುರುಮಹಾವಿಷ್ಣು ಬ್ರಹ್ಮರುದ್ರಾದ್ಯರಿಗೆಸಿರಿಚರಣ ಪಂಕಜಗೆ ನಮಿಸಿ ನುತಿಸುವೆನು 1ಅಷ್ಟ ದಿಕ್ಪಾಲರಿಗೆ ಶಿಷ್ಯಮರುದ್ಗಣಗಳಿಗೆಅಷ್ಟವಸು ಸಪ್ತಋಷಿ ನವಗ್ರಹಾದ್ಯರಿಗೆ |ಶ್ರೇಷ್ಠ ಹನುಮಂತನಿಗೆ ಕನಕಾದಿ ದಾಸರಿಗೆಸೃಷ್ಟಿಯೊಳು ಕವಿಜನಕೆ ಕೈಮುಗಿವೆನು 2ವಿಪ್ರಕುಲ ಸಂಜಾತ ಮಯ್ಯೂರ ಮಡಿಪುರದೊ-ಳಿಪ್ಪ ವೆಂಕಟರಾಯ ಗೋಳೇರ ಸುಕುಮಾರ |ಸರ್ಪಶಯನನ ದಾಸ ಗೋವಿಂದನೆಂಬವನುಜಲ್ವಿಸಿಯೆ ವಿರಚಿಸಿದೆನೀ ಕೃತಿಯನು 3ಯತಿಗಣ ಪ್ರಾಸ ವಿಷಮಾಕ್ಷರಗಳೊಂದರಿಯೆಕೃತ ದೋಷ ರಾಗ ಲಯ ಭೇದವನು ತಿಳಿಯೆ |ಪೃಥುವಿಯೊಳು ಕವಿಗಳಂತಗ್ಗಳನು ನಾನಲ್ಲಅತಿಶಯದ ನ್ಯೂನತೆಯ ಬಲ್ಲ ಶ್ರೀನಲ್ಲ 4ತಪ್ಪು ಸಾವಿರವಿರಲು ತಿದ್ದಿ ಬಲ್ಲವರಿದನುಒಪ್ಪುವಂದದಿ ಜಗದಿ | ಮೆರೆಸಿ ವಾಚಕರುಸರ್ಪಶಯನನ ಕೃಪೆಗೆ ಪಾತ್ರರಾಗುತ ನೀವುಕ್ಷಿಪ್ರದಲಿ ಗೋವಿಂದದಾಸ£À£Àು ಪರಸಿ ಮನ್ನಿಪುದು 5
--------------
ಗೋವಿಂದದಾಸ
ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪಕಂಜಹರನ ಪಿತನಪಾದ|ಕಂಜನಿರತಭಜಿಸುತಿರಲು ||ಅ.ಪ||ಎರಡು ಒಂದು ಕೋಟಿರೂಪ|ಧರಿಸಿ ರಕ್ಕಸರೊಳು ಕಾದಿ ||ಹರಿಯ ಕರುಣ ಗಳಿಸಿದವನ |ಚರಿತೆಗಳನು ಸ್ಮರಿಸುತಿರಲು 1ತಾಸಿಗೆಂಟು ಒಂದು ನೂರು |ಶ್ವಾಸಜಪವ ಮಾಡಿ ಜಂತು ||ರಾಶಿಗಳಿಗೆ ಸತತ ಬೇಡಿ |ದಾಸೆ ಪೂರ್ತಿಸುವವನಿರಲು2ಜಂಗಮರಿಗೆಪಾಣಿಚರಣ|ಕಂಗಳುಕಿವಿಯಾಡಿಸುತಲಿ ||ಪಿಂಗಳನಿಭಭಾರತೀಶ|ಹಿಂಗದನವರತ ಪೊರೆಯಲು 3ಪರಿಹರಿಸುತಲಗ್ನಿ ಭಯವ |ತ್ವರದಿ ಹಿಡಿಂಬ ಕೀಚಕ ಪ್ರಮು |ಖರನು ಕುರುಪತಿಯ ಕುಲವತರಿದ ಕುಂತೀ ಕುವರನಿರಲು 4ಭುಜಕೆ ಗೋಪೀಚಂದನವನು |ವಿಜಯಚಕ್ರಗಳನು ಧರಿಸಿ ||ಕುಜನರಿಪುಪ್ರಾಣೇಶ ವಿಠಲ |ಭಜಕನ ದಯ ಪೂರ್ಣವಿರಲು 5
--------------
ಪ್ರಾಣೇಶದಾಸರು
ಇಂತಿರುವುದೇನು ಬಗೆ ರಾಮಾ |ಹರಿಸ್ವ-ತಂತ್ರ ಶ್ರೀನಿಧಿಯೆಂದು ಪೊಗಳುತಿವೆ ವೇದ ಪವಿಧಿಗೆ ಪದವಿತ್ತವನೇ ವನವ ಚರಿಸುವದೇನೋ |ಪದುಮ ಸದನೆಯ ರಮಣ ಬಡವನಾಗಿಹದೇನೋ ||ಮದನಜನಕನೆ ಋಷಿಗಳಂತೆ ಆಗುವದೇನೋ |ಉದರದೊಳು ಬಹು ಜಗಂಗಳಿರಲೂ ಪತ್ರ ಸದನವಾಶ್ರಯಿಸಿ-ಕೊಂಡಿರುವಿ ಇದು ಏನೋ 1ನಿತ್ಯತೃಪ್ತನೆ ಶಬರಿಯೆಂಜಲುಂಬುವದೇನೋ |ಉತ್ತಮ ವಿಹಗವಿರಲು ಕಾಲ್ನಡಿಗೆಯಿದೇನೋ ||ಭೃತ್ಯರುದಿವಿಜರುನೀಂ ಚಾಪವ ಹೊರುವದೇನೋ |ನಿತ್ಯಶ್ರೀ ಹೃದಯದೊಳಗಿರಲು ನಿನ್ನ ಪತ್ನಿ ಹೋದಳೆಂದುಚಿಂತಿಸುವದೇನೋ2ಸ್ವಾಮಿ ಅಹಿಶಯನ ತೃಣಶಾಯಿಯಾಗುವದೇನೋ |ಭೂಮಿ ನಿನ್ನೊಂದಂಘ್ರಿ ಸೇತು ಕಟ್ಟುವದೇನೋ ||ಈ ಮರುಳು ರಕ್ಕಸರು ನಿನಗೊಂದೀದೇನೋ |ತಾಮಸರ ಮೋಹಿಸುವದಕೆ, ಭಕ್ತ ಪ್ರೇಮ ಪ್ರಾಣೇಶ ವಿಠ್ಠಲನೆಲೀಲೆಯೇನೋ3
--------------
ಪ್ರಾಣೇಶದಾಸರು
ಇನ್ನೇಕೆ ಯಮನ ಬಾಧೆಗಳು? |ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ಪಪತೀತ ಪಾವನನೆಂಬ ನಾಮ-ಸಕಲ |ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ||ಕ್ರುತುಕೋಟಿ ಫಲ ಒಂದೇ ನಾಮ-ಸದ್ |ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ1ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ |ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ||ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ |ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ 2ಹದಿನಾಲ್ಕು ಲೋಕವಾಳುವ - ನಮ್ಮ |ಮದನಜನಕನಾಗಿ ಮಹಿಮೆ ತೋರುವ ||ಪದುಮನಾಭನಾಗಿ ಮೆರೆವ- ನಮ್ಮ |ಪುರಂದರವಿಠಲನ ಹರುಷದಿ ಕರೆವ 3
--------------
ಪುರಂದರದಾಸರು
ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ಪಸ್ಥಾಣುವಮೂರ್ತಿಪಾದಸೇವೆತಾನೆನಿರತಮಾಡುತಿಹಳೊ ಅ.ಪಭೂತಗಣದ ಯೂಥವಿರಲುಸೂತಗಣನಾಥಾದ್ಯರಿರಲುಭೂತಪತಿಯಚರಣತೊಳೆದುತೀರ್ಥಕೊಡುತ ಬರುವಳ್ ಸಭೆಗೆ 1ನಾರದರು ದಿಕ್ಪಾಲರಿರಲುವಾರಿಜಾಸನ ವಿಷ್ಣುವಿರಲುಮಾರಹರನಿಗಾರತಿ ಎತ್ತಿತಾನೆ ಸಭೆಗೆ ತೋರಿಸುವಳು 2ವಸುಗಳ್ ಸಪ್ತ ಋಷಿಗಳಿರಲುಅಸುರ ಶಿಕ್ಷರು ನುತಿಸುತಿರಲುಪಶುಪತಿಯ ಲೇಪಿಸಿದ ಭಸ್ಮಗೋವಿಂದಾದ್ಯರಿಗೆ ಪ್ರಸಾದ ಕೊಡುವಳ್ 3
--------------
ಗೋವಿಂದದಾಸ
ಘಾತಕರಿನ್ನೇಕೆ ಪರಮಾರ್ಥ ಶ್ರವಣನೀತಿವಂತರೆ ನಿಮಗೆ ಪರನಿಂದೆ ಏಕೆ ? ಪ.ಕೋತಿಗಂದಣವೇಕನಾಥನಿಗೆ ಮುನಿಸೇಕೆ ?ಹೋತು ಕಾಳಗವಾಡೆ ಖ್ಯಾತಿಯೇಕೆ ?ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ?ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? 1ದಯವಂತನಲ್ಲದಾ ದೊರೆಯ ಸೇವೆಯು ಏಕೆ ?ಭಯವು ಉಳ್ಳವಗೆ ರಣರಂಗವೇಕೆ ?ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆವ್ಯಯವಾದ ಧನಕಿನ್ನು ಚಿಂತೆಯೇಕೆ ? 2ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ?ಚೆಲ್ವ ಶ್ರೀಪುರಂದರ ವಿಠಲನ ದಯವಿರಲುಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ? 3
--------------
ಪುರಂದರದಾಸರು
ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.ಏಳುತುದಯಕಾಲದಲ್ಲಿ |ವೇಳೆಯರಿತು ಕೂಗುವಂಥ ||ಕೋಳಿ ತನ್ನ ಮರಿಗೆ ಮೊಲೆಯ |ಹಾಲಕೊಟ್ಟು ಸಲಹಿತೆ ? 1ಸಡಗರದಲಿ ನಾರಿಜನರು |ಹಡೆಯುವಾಗ ಸೂಲಗಿತ್ತಿ ||ಅಡವಿಯೊಳಗೆ ಹೆರುವ ಮೃಗವ |ಪಿಡಿದು ರಕ್ಷಣೆ ಮಾಳ್ಪರಾರು 2ಹೆತ್ತ ತಾಯಿ ಸತ್ತ ಶಿಶುವು |ಮತ್ತೆ ಕೆಟ್ಟಿತೆಂಬರು ಜನರು ||ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |ನಿತ್ತು ರಕ್ಷಣ ಮಾಡುವರಾರು 3ಗಟ್ಟಿಮಣ್ಣಿನ ಶಿಶುವ ಮಾಡಿ |ಹೊಟ್ಟೆಯೊಳಗೆ ಇರಿಸುವಂಥ ||ಕೊಟ್ಟ ದೈವ ಕೊಂಡೊಯ್ದರೆ |ಕುಟ್ಟಿಕೊಂಡು ಅಳುವುದೇಕೆ 4ನಂಬಿಗೆಗಿವು ಸಾಲವೆಂದು |ಹಂಬಲಿಪುದು ಲೋಕವೆಲ್ಲ ||ನಂಬಿ ಪುರಂದರವಿಠಲ - |ನೆಂಬ ನಾಮ ನುಡಿದ ಮೇಲೆ 5
--------------
ಪುರಂದರದಾಸರು
ಚಿಂತೆಗೆಣಿಕೆ ಇಲ್ಲದಂತಾಗಿ ಎನ್ನಂತರಂಗದ ಕ್ಲೇಶಕೆಂತೌಷಧ ರಂಗ ಪ.ಒಂದು ದೊರೆತರೆ ಇನ್ನೊಂದಾಗಲುಬೇಕುಮಂದಿರವಿರಲು ಮೇಲಟ್ಟ ಬೇಕುಮಂದಮತಿಸತಿಇನ್ನೊಬ್ಬ ಸುಗುಣಿ ಬೇಕುಎಂದೆಂದು ಬೇಕೆಂಬ ನುಡಿಗುಂದದು ರಂಗ 1ಅವಭೋಗಿ ಅವಗಿಂತ ಮೀರ್ವೆನೆಂಬುವ ಹವಣುಅವನ ವಿದ್ಯಕೆ ಹೆಚ್ಚಲೆಂಬ ಹವಣುತವಕದಿ ಸಂಪದ ಮೇಳವಿಸುವ ಹವಣುಅವಿರಳ ಹವಣಕೆ ಕಡೆಗಾಣೆ ರಂಗ 2ರೂಢಿಲಿ ಸಿರಿವಂತರ ಮುಂದೆಖೋಡಿಮಾತಾಡಿ ಗುದ್ದಿಸಿಕೊಂಡ ನರನಂತೆನೋಡ ಪ್ರಸನ್ವೆಂಕಟೇಶಅಲ್ಲದಕೃತ್ಯಮಾಡಿ ಕ್ಲೇಶವನುಂಡೆ ನಿನ್ನ ಬೇಡದೆ ರಂಗ 3
--------------
ಪ್ರಸನ್ನವೆಂಕಟದಾಸರು
ಜೋ ಜೋ ಯಶೋದೆಯ ನಂದ ಮುಕುಂದನೆಜೋ ಜೋ ಕಂಸಕುಠಾರಿ ಪ.ಜೋ ಜೋ ಮುನಿಗಳ ಹೃದಯಾನಂದನೆಜೋ ಜೋ ಲಕುಮಿಯ ರಮಣ ಅಪಹೊಕ್ಕುಳ ಹೂವಿನ ತಾವರೆಗಣ್ಣಿನಇಕ್ಕಿದಮಕರ ಕುಂಡಲದಜಕ್ಕುಳಿಸುವ ಕದಪಿನ ಸುಳಿಗುರುಳಿನಚಿಕ್ಕ ಬಾಯ ಮುದ್ದು ಮೊಗದ ||ಸೊಕ್ಕಿದ ಮದಕರಿಯಂದದಿ ನೊಸಲೊಳಗಿಕ್ಕಿದ ಕಸ್ತೂರಿ ತಿಲಕ |ರಕ್ಕಸರೆದೆದಲ್ಲಣ ಮುರವೈರಿಯೆಮಕ್ಕಳ ಮಾಣಿಕ್ಯ ಜೋ ಜೋ 1ಕಣ್ಣ ಬೆಳಗು ಪಸರಿಸುತಿರೆಗೋಪಿಅರೆಗಣ್ಣ ಮುಚ್ಚಿ ನೋಡಿ ನಗುತ |ಸಣ್ಣ ಬೆರಳುಗಳ ಬಾಯೊಳಗಳವಡಿಸಿಪನ್ನಗಶಯನ ತೊಟ್ಟಿಲಲಿ ||ನಿನ್ನ ಮಗನ ಮುದ್ದನೋಡು ಎಂದೆನುತಲಿತನ್ನ ಪತಿಗೆ ತೋರಿದಳು |ಹೊನ್ನ ಬಣ್ಣದ ಸೊಬಗಿನ ಖಣಿಯೆ ಹೊಸರನ್ನದ ಬೊಂಬೆಯೆ ಜೋ ಜೋ 2ನಿಡು ತೋಳ್ಗಳ ಪಸರಿಸುತಿರೆ ಗೋಪಿಯತೊಡೆಯ ಮೇಲ್ಮಲಗಿ ಬಾಯ್ದೆರೆಯೆ |ಒಡಲೊಳಗೀರೇಳು ಭುವನವಿರಲು ಕಂಡುನಡುಗಿ ಕಂಗಳನು ಮುಚ್ಚಿದಳು ||ಸಡಗರಿಸುತ ತಾನರಿಯದಂತೆಯೆಹೊಡೆ ಮರುಳಿ ಮೊಗವ ನೋಡುತಲಿಕಡಲಶಯನ ಮೊಗವ ನೋಡುತಲಿಕಡಲಶಯನ ಶ್ರೀ ಪುರಂದರವಿಠಲನುಬಿಡದೆ ನಮ್ಮೆಲ್ಲರ ರಕ್ಷಿಸುವ 3
--------------
ಪುರಂದರದಾಸರು
ನಾ ನಿನ್ನ ಧ್ಯಾನದೊಳಿರಲು - ಇಂಥಹೀನ ಮಾನವರಿಂದೇನಾಹೋದು ಹರಿಯೆ ಪ.ಮಚ್ಚರಿಸಿದರೇನ ಮಾಡಲಾಪರೊ ಎನ್ನಅಚ್ಯುತ ನಿನ್ನದೊಂದು ದಯವಿರಲು ||ವಾಚ್ಛಲ್ಯ ಬಿಡದಿರು ನಿನ್ನ ನಂಬಿದ ಮೇಲೆಕಿಚ್ಚಿಗೆ ಗೊರಲೆ ಮುತ್ತುವುದೆ ಕೇಳೆಲೊ ರಂಗ 1ದಾಳಿಯಲಿ ತೇಜಿ ವೈಹಾಳಿಯಲಿ ನಡೆಯಲುಧೂಳು ರವಿಗೆ ತಾನು ಮುಸುಕುವುದೇ ||ತಾಳಿದವರಿಗೆ ವಿರುದ್ಧ ಲೋಕದೊಳುಂಟೆ ?ಗಾಳಿಗೆ ಗಿರಿ ನಡುಗುವುದೆ ಕೇಳೆಲೊ ರಂಗ 2ಕನ್ನಡಿಯೊಳಗಿನ ಗಂಟ ಕಂಡು ಕಳ್ಳಕನ್ನವಿಕ್ಕಲು ವಶವಾಗುವುದೇ ?ನಿನ್ನ ಧ್ಯಾನವ ಮಾಡೆ ಪುರಂದರವಿಠಲನೆಚಿನ್ನಕ್ಕೆ ಪುಟವಿಕ್ಕಿದಂತೆ ಕೇಳೆಲೊ ರಂಗ 3
--------------
ಪುರಂದರದಾಸರು
ನೋಡುನೋಡುದಯಮಾಡು ಮಾಡಿನ್ನಪ.ನೋಡುವೈರಾಗ್ಯಭಾಗ್ಯವಿಹೀನನಕಾಡುತಿದೆ ಮನ ಕರುಣಾಸಂಪನ್ನ ಅ.ಪ.ಸ್ನಾನ ಸಂಧ್ಯಾವಂದನೆ ಸಚೇಲದಿಧ್ಯಾನ ಮೌನವ ಹಿಡಿಸಿಜ್ಞಾನ ಭಕ್ತಿ ವಿರಕ್ತಿ ಮಾತಿನನಾಣ್ನುಡಿಯಂತೆ ನುಡಿಸಿದಾನ ಧರ್ಮ ಕೈವಲ್ಯದಾರ್ಯೆಂದು ನಿದಾನ ತುಷ್ಟಿಯ ಬಡಿಸಿತಾನರೆಕ್ಷಣ ಸ್ವಸ್ಥವಿರದೆಲ್ಲಹಾನಿ ಮಾಡಿತೆನ್ನ ಚಿತ್ತವ ಕೆಡಿಸಿ 1ಸಾಲಂಕೃತ ಬಾಲನೊಯ್ದಡವಿಯಲಿ ಕೊಲ್ವಆಲಯದ ಕಳ್ಳನಂತೆಬಾಲೆಯನ್ನಾಳದೆ ಷಂಡಘನಕೂಪದೊಳು ನೂಕಿಸುವಂತೆಪೇಳಲೇನು ದುರ್ಬಲರನು ಅರಸ ತಾಶೂಲಕಿಕ್ಕಿಸುವಂತೆಮೇಲೆ ಮೇಲೆ ದುರ್ವಿಷಯಾಟವಿಯೊಳುಕಾಲಕಟ್ಟ್ಯೆನ್ನ ಕೆಡಹುತಿದೆ2ಕನ್ನಿಕೆಗೆ ವರನೊಪ್ಪಿದರೆ ತೆತ್ತಿಗನ್ನ ಪ್ರತಿಕೂಲವೇನುಪುಣ್ಯಶ್ಲೋಕನ ಅಭಯವಿರಲು ಸುಖಿಗನ್ಯ ತೊಡರ್ಯಾಕಿನ್ನಮನ್ನೆಯನ ಪಾದವಿಡಿದಿಹ ಮಡದಿಗೆಅನ್ಯರಾತಂಕವೇನು ಪ್ರಸನ್ನವೆಂಕಟಸ್ವಾಮಿ ನೀ ಒಲಿದರೆಕುನ್ನಿ ಮನ ಕಾಡಿ ಮಾಡುವದೇನು 3
--------------
ಪ್ರಸನ್ನವೆಂಕಟದಾಸರು
ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು
ಶಕ್ತನಾದರೆ ನಂಟರೆಲ್ಲ ಹಿತರು - ಅಶಕ್ತನಾದರೆ ಆಪ್ತರವರೆ ವೈರಿಗಳು ಪ.ಕಮಲಾರ್ಕರಿಗೆ ನಿರುತ ಕಡುನಂಟುತನವಿರಲುಕಮಲ ತಾ ಜಲದೊಳಗೆ ಆಡುತಿಹುದುಕ್ರಮತಪ್ಪಿ ನೀರಿನಿಂದ ತಡಿಗೆ ಬೀಳಲು ರವಿಯಅಮಿತ ಕಿರಣಗಳಿಂದ ಕಂದಿ ಪೋಗುವುದು 1ವನದೊಳುರಿ ಸುಡುತಿರಲು ವಾಯು ತಾ ಸೋಂಕಲ್ಕೆಘನ ಪ್ರಜ್ವಲಸುತಿಹುದು ಗಗನಕಡರಿಮನೆಯೊಳಿರ್ದಾ ದೀಪ ಮಾರುತನು ಸೋಂಕಿದರೆಘನಶಕ್ತಿ ತಪ್ಪಿ ತಾ ನಂದಿ ಹೋಗುವುದು 2ವರದ ಶ್ರೀ ಪುರಂದರವಿಠಲನ ದಯವಿರಲುಸರುವ ಜನರೆಲ್ಲ ಮೂಜಗದಿ ಹಿತರುಕರಿಯ ಸಲುಹಿದ ಹರಿಯ ಕರುಣ ತಪ್ಪಿದ ಮೇಲೆಮೊರೆಹೊಕ್ಕರೂ ಕಾಯ್ವ ಮಹಿಮರುಂಟೇ ದೇವ 3
--------------
ಪುರಂದರದಾಸರು
ಸಂಸಾರವೆಂಬ ಸಾಗರವನುತ್ತರಿಸುವರೆಕಂಸಾರಿಯೆಂಬ ನಾಮವೊಂದೆ ಸಾಕು ಮರುಳೆ ಪ.ಯತಿಯಾಗಬೇಡ ವೈರಾಗ್ಯವರಿತು ಸಕಲವ್ರತವ ಮಾಡುವೆನೆಂಬ ನೇಮ ಬೇಡ ||ಶ್ರುತಿ - ಸ್ಮøತಿಗಳನರಿತು ನಡೆವೆನೆನಬೇಡ ಶ್ರೀ -ಪತಿಯ ಶ್ರೀನಾಮವೊಂದೆ ಸಾಕು ಮರುಳೆ 1ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡ ||ಅನುವರಿತು ನೀರೊಳಗೆ ಬಿಡದೆ ಮುಳುಗಲುಬೇಡ |ವನಜಾಕ್ಷ ನಾಮವೊಂದೇ ಸಾಕು ಮರುಳೆ 2ತೀರ್ಥಯಾತ್ರೆಗೆ ನೀನು ತಿರುಗಿ ಝೊಂಪಿಸಿ ಕೃ -ತಾರ್ಥನಾದೆನೆಂಬ ಹೆಮ್ಮೆ ಬೇಡ ||ಧೂರ್ತಭಂಜನ ನಮ್ಮ ಪುರಂದರವಿಠಲ ಸಂ -ಕೀರ್ತಿನೆಯ ಮಾಡಿ ಮೋಕ್ಷವನೈದು ಮರುಳೆ ** 3
--------------
ಪುರಂದರದಾಸರು
ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ ಪಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ 1ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ 2ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ 3ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ 4ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ 5ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ 6ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ 7ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ 8ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ 9ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ 10ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ 11ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ 12ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ 13ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ 14ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ 15
--------------
ಪ್ರಾಣೇಶದಾಸರು