ಒಟ್ಟು 105 ಕಡೆಗಳಲ್ಲಿ , 43 ದಾಸರು , 99 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯಾ ನೋಡಮ್ಮ ಶ್ರೀಯರಸ ನೀಲಮೇಘ ಛಾಯ ಕೃಷ್ಣರಾಯ ತನ್ನ ಪ. ಕಾಶೀಶ ಮೃತ್ಯುಂಜಯಾಯಿ ವಿಷವಲ ಭಂಜನಾದಿಗಳೀತನಿಗಂಜಿ ಕೊಂಬುವರು ಮಂಜುಳಾತ್ಮ ನಿಜಕರಕಂಜದಿಂದ ಪಾದವೆತ್ತಿ ನಿರಂಜನ ತಾ ಲೀಲೆಯಿಂದ 1 ಪುಟಿತಹಾಟಕ ಮಣಿಘಟಿತ ಕಂಕಣಾಂಗದ ಕಟಿಸೂತ್ರಗಳನಿಟ್ಟು ನಟನಂದದೀ ವಟಪತ್ರಶಾಯಿವೋಷ್ಠಪುಟದಿ ಪಾದವನಿಕ್ಕಿ ಕಟಬಾಯೊಳಮೃತವಾ ಸ್ಫುಟವಾಗಿ ಸುರಿಸುತ 2 ಲಿಂಗದೇಹಭಂಗತಾಗಿನಂಗವನ್ನು ದೂರಗೈಸಿ ತುಂಗಮತಿವಂತ ಋಷ್ಯ ಶೃಂಗಾದಿಗಳು ನಿತ್ಯ ಮಂಗಳ ದೇವಿಯರ ಗಂಗೆಯ ಪಡೆದು ಶಿವಂಗ ಶುದ್ಧಿಗೈಸಿ 3 ಗೋಪಿ ಗೃಹ ಕರ್ಮರತಳಾಗಿರಲು ಒಮ್ಮನದಿಂದ ಅಮ್ಮರ ಗಣಾರಾಧಿತ ಕ್ಷಮೆಯನಳದ ಪಾದ ಸುಮ್ಮಗೆ ಕರದೊಳೆತ್ತಿ ಖಮ್ಮಗಿಹದೆಂದು ತನ್ನ 4 ಕರಪಲ್ಲವಾಧೃತ ಲೋಕವಂದ್ಯರೂಪ ಫಣಿ- ಶೇಖರಾದ್ರಿವಾಸ ಭಕ್ತನಾಕ ಭೂರುಹ ನೀಕರಿಸಿ ದುರಿತವ ಸೋಕದಂತೆ ನಮ್ಮನೀಗ ಸಾಕುವ ಪರಮ ಕರುಣಾಕರ ಶ್ರೀ ಕೃಷ್ಣ ತನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಲೆಯ ಹಾಕುವೆ ಲೀಲೆಯಿಂ ತಳೆವುದು ಶ್ರೀಲಲನಾವರ ಪಾಲಿಸು ಕಂಠವ ಪ ಸಂಪಿಗೆ ಮಲ್ಲಿಗೆ ಮೊಲ್ಲೆಗುಲಾಬಿಯು ಸೊಂಪಿನ ಪಚ್ಚೆಯ ಇಂಪಿನಿಂ ಕಟ್ಟಿದ 1 ಮರುಗ ಸೇವಂತಿಗೆ ಪಾದರಿ ಹೂವಿನ ಮೆರೆವ ಮಂದಾರದ ಪಾರಿಜಾತದ ಸುರ 2 ಸುರಗಿ ಸುಗಂಧರಾಜ ಸುರಹೊನ್ನೆ ದವನವು ಪರಮಗುಣಾಕರ ವರದಹೆಜ್ಜಾಜಿಯ 3
--------------
ಶಾಮಶರ್ಮರು
ಮುದ್ದು ಕೃಷ್ಣ ಮುನಿ ಶರಣ ಉದ್ಧರಿಸು ನೀ ಉಡುಪಿ ರನ್ನ ಪ. ಮುದ್ದೆ ಬೆಣ್ಣೆ ಕೊಡುವೆ ಚೆನ್ನ ಮಧ್ವಮುನಿಯ ಮನ ಪ್ರಸನ್ನ ಅ.ಪ. ಲೀಲೆಯಿಂದ ಕೊಳಲನೂದಿ ಕಾಳಿಮಡುವ ಕಲಕಿ ನಿಂದ ಲೀಲೆ ಕೇಳೆ ಮನಕಾನಂದ 1 ನಿನ್ನ ಮಹಿಮೆ ಅಧಿಕವಾಗಿ ಎನ್ನ ಮನಕೆ ಹರುಷವಾಗಿ ಪನ್ನಗೇಂದ್ರಶಯನ ಸ್ವಾಮಿ ನಿನ್ನ ರೂಪ ತೋರೊ ಪ್ರೇಮಿ 2 ಪೊರೆ ಗೋಪಾಲಕೃಷ್ಣವಿಠ್ಠಲ ನಿರುತ ನಿನ್ನ ಚರಣ ಕಮಲ ಮೊರೆಯ ಹೊಕ್ಕೆ ಮರೆಯದೆನ್ನ ಕರುಣೆಯಿಂದ ಕಾಯೊ ಘನ್ನ 3
--------------
ಅಂಬಾಬಾಯಿ
ಮೂರು ನಾಮಗಳ ಧರಿಸಿರುವ ಕಾರಣವೇನು ಸಾರಿ ಪೇಳಲೊ ಈಗಲೆ ಪ. ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ. ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು ಕರವ ಮುಗಿದು ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು ಮಧ್ವಮತ ದೈವವೆಂದಿನ್ನು ತಿಳಿಯುವರೆ 1 ಮೂರುರೂಪನು ನಾನು ಮೂರು ಲೋಕಗಳಿಹವು ಮೂರು ಮಾಳ್ಪೆನು ಜಗವ ಮೂರು ಗುಣದಿ ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ ಪಾರು ಮಾಡುವೆನೆಂದು ತೋರುವ ಸೊಬಗೊ 2 ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ ಪಾಲಸಾಗರಶಾಯಿ ಚಲುವಮೂರ್ತಿ ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3 ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು ತೋರುವನು ನಿಜರೂಪ ಭಕ್ತಗೆಂದು ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ ಮೂರುನಾಮವೆ ಗತಿ ಎನ್ನುವ ಬಗೆಯೊ 4 ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ ಈ ಲೀಲೆ ಬಗೆಯನು ಅರಿವವರ್ಯಾರೊ ವ್ಯಾಳಶಯನ ವೆಂಕಟೇಶ ಎನ್ನ ಮನದಿ ಕಾಲಕಾಲಕೆ ನಿನ್ನ ರೂಪವನೆ ತೋರೋ 5
--------------
ಅಂಬಾಬಾಯಿ
ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನಕಮಲವದನೆ ನೀ ತೋರೆ ಪ ಬಾಯೊಳಗಿಹಳ ಗಂಡನ ನಿಜ ತಮ್ಮನತಾಯ ಪಿತನ ಮಡದಿಯ ಧರಿಸಿದನಸ್ತ್ರೀಯಳ ಸುತನ ಕೈಯಲಿ ಶಾಪಪಡೆದನದಾಯಾದಿಯ ಮಗನಸಾಯಕವದು ತೀವ್ರದಿ ಬರುತಿರೆ ಕಂಡುಮಾಯಾಪತಿ ಭೂಮಿಯನೊತ್ತಿ ತನ್ನಯಬೀಯಗನ ತಲೆಗಾಯಿದಂಥರಾಯನ ಕರೆದು ತೋರೆ 1 ನಾಲಗೆ ಎರಡರವನ ಭುಂಜಿಸುವನಮೇಲೇರಿ ಬಹನ ತಂದೆ ಇಹ ಗಿರಿಯನುಲೀಲೆಯಿಂದಲಿ ಕಿತ್ತೆತ್ತಿದ ಧೀರನಕಾಳೆಗದಲಿ ಕೊಂದನಲೋಲಲೋಚನೆಯ ಮಾತೆಯ ಪುತ್ರನಣುಗನಮೇಲು ಶಕ್ತಿಗೆ ಉರವನಾಂತು ತನ್ನವರನುಪಾಲಿಸಿದಂಥ ದಾತನಹ ದೇವನಲೋಲೆ ನೀ ಕರೆದು ತೋರೆ 2 ಉರಿಯೊಳು ಜನಿಸಿದವನ ನಿಜ ತಂಗಿಯಸೆರಗ ಪಿಡಿದ ಖಳನಣ್ಣನ ತಂಗಿಯವರನ ತಲೆಯನು ಕತ್ತರಿಸಿದ ಧೀರನಗುರುವಿನೊಳುದಿಸಿದನಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನಕರೆದು ವರವನಿತ್ತು ಮನ್ನಿಸಿ ಸಲಹುವಉರಗಗಿರಿಯ ವೆಂಕಟಾದಿಕೇಶವನ ಗರತಿ ನೀ ಕರೆದು ತಾರೆ 3
--------------
ಕನಕದಾಸ
ರಾಮ - ರಕ್ಕಸ ಸಂಕಲ ಭೀಮಮುನಿದರೆ ಲೋಕ ವಿರಾಮ | ಸಾಮಸನ್ನುತ ನಿಸ್ಸೀಮ ಪ ಕಾಮಿತಾರ್ಥ ಸುಮಹೋದಧೆ - ನಿಪ್ಕಾಮನ ಮಾಡೆಲೊ ವಾಮನ ಮೂರ್ತಿಅ.ಪ. ಧಾಮ ವೈರಿ ಸುತ್ರಾಮ ||ಕಾಮನಯ್ಯ ಕಮ | ನೀಯ ಮೂರುತಿಯೆಕಾಮಿಪೆ ನಿನ್ನನು | ಭೂಮ ಗುಣಾರ್ಣವ 1 ಪಾತಕ ಕಳೆಯೋ 2 ಬಾಲಾ - ಕೆಡಿಸಿದೆ ಗೋಪೆರ ಶೀಲಾ | ಜನನಿಗೆ ತೋರಿದೆ ಲೀಲಾವದನದಿ ಲೋಕ ವಿಶಾಲಾ | ಮಾವ ಕಂಸಗೆ ನೀ ಕಾಲಾ ||ಪಾಲು ಮೊಸರು ಬೆಣ್ಣೆ | ಲೀಲೆಯಿಂದಲಿ ಮೆದ್ದುಜಾಲತನದಿ ನಿಮ್ಮ | ಬಾಲರೆಂದ್ಹೇಳಿದೆ 3 ಶ್ರೀತಾಕೇಶಿ ನಿಷೂದನ ವೃಷ್ಟೀಶ | ಸೋಜಿಗವೇನಿದು ಸರ್ವೇಶಸಂತತ ಭಜಿಪರ ಅಘನಾಶ | ದಾಸ ಜನರ ಹೃತ್ತೋಷ ||ವಾಸವ ಮುಖ ದೇ | ವೇಶ ನಿನ್ನಯ ಪಾದಆಶ್ರಯ ದೊಳಗಿಟ್ಟು | ಪೋಷಿಸು ಎನ್ನ 4 ಕರ್ತಾ - ರಕ್ಷಿಸೆನ್ನ ತ್ರಿಜಗದ್ಭರ್ತ | ನೀ ಲೋಕೈಕ ಸಮರ್ಥಗುರು ಕರುಣದಿ ನಾನು ಕೃತಾರ್ಥ | ಒರೆವೆನೊ ನಾನೊಂದು ವಾರ್ತಾಆರ್ತೇಷ್ಟದ ಗುರು | ಗೋವಿಂದ ವಿಠಲಮೂರ್ತಿ ನೆಲಸೊ ಮಮ | ಹೃತ್ಕಮಲದಲಿ5
--------------
ಗುರುಗೋವಿಂದವಿಠಲರು
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ
ರುದ್ರದೇವರು ಉಮೇಶಾ ಪರಿಪಾಲಿಸೊ ಪ ಉಮೇಶ ಪಾಲಿಸು ರಮೇಶನ ಪಾದ ಕಮಲಗಳಿಗೆ ಭ್ರಮರನೆನಿಸಿ1 ಕಾಲನಿಯಾಮಕ ನೀನಾಗಿ ಜಗವನು ಲೀಲೆಯಿಂದಲಿ ಕಾವ ಶೂಲ ಪಾಣಿಯೆ 2 ಸಿರಿ ಶೇಷಾವಿಠ್ಠಲನ ದಾಸನೆನಿಸಿ ಸಂತೋಷಗೊಳಿಸೊ 3
--------------
ಬಾಗೇಪಲ್ಲಿ ಶೇಷದಾಸರು
ಲೀಲೆಯಿಂ ಬಾ ಲೋಲಲೋಚನೆ ಕೋಲನಾಡುವ ಪ. ಶೀಲದಿಂದೆಮ್ಮಾಳ್ವ ಭೂಪಗೆ ಜಯವ ಪಾಡುವ ಅ.ಪ. ಮಂದಗಮನದಿಂದ ಬಾ ಅರವಿಂದ ಲೋಚನೆ ಮಂದಿಗಳಿಗಾನಂದ ಸಮಯಮಿಂದು ಪೊಸತೆನೆ 1 ಬಣ್ಣ ಬಣ್ಣ ಬೆಳೆಗಳಿಂ ಪೊಂಬಣ್ಣ ದುಡುಪಿನಿಂ ಕಣ್ಮನಂಗಳ ತಣ್ಪುಗೊಳಿಪಳ್ ಜನ್ಮಭೂಮಿತಾಂ 2 ನವನವೊತ್ಸವದಿರವ ಸೂಚಿಪ ಶರತ್ಸಮಾಗಮಂ [ತವ] ಮೆರೆವುದರರೆ ಶೇಷಶೈಲವರದನೊಲವಿನಿಂ3
--------------
ನಂಜನಗೂಡು ತಿರುಮಲಾಂಬಾ
ಶೂರ್ಪಾಲಯ ಕ್ಷೇತ್ರದ ನರಹರಿ ಸ್ತೋತ್ರ (ಕೃಷ್ಣಾತೀರ) ನರಹರೀ ಪಾಹಿ | ಮರನೂರ ನರಹರೀ ಪ ಪರಿ ಭವಣೆಯ | ಪರಿಹರಿಸುತ ಮುನ್ನವರ ವೈರಾಗ್ಯವನಿತ್ತು | ಕರುಣೀಸೊ ಸಂಪನ್ನ ಅ.ಪ. ಸತಿ | ಕೃಷ್ಣೆಗಕ್ಷಯ ವಸನಸೃಷ್ಟಿಗಿತ್ತವ ಹರಿ | ಕೃಷ್ಣನೆ ಸಲಹೆನ್ನ 1 ಬುದ್ಧ | ಆಘಹರ ಕಲ್ಕಿಯೆ 2 ಜನಿತ ಸುಖ ಜಲ ಕಣ್ಣ | ಬಿಂದುಯುಗಳವು ಬೀಳೆ ಪಾವನ್ನ | ವೃಕ್ಷಯುಗಳೋದಯವಾಯ್ತು ಮುನ್ನ | ಆಹಅಗಣಿತ ಮಹಿಮ | ಅಶ್ವತ್ಥ ಸನ್ನಿಹಿತನೆನಿಗಮ ವೇದ್ಯನೆ ಸರ್ವ | ಜಗದೀಶ ಸಲಹೆನ್ನ 3 ಶೂಲಿಯಿಂದೊಡಗೂಡಿ ರಾಮ | ಚಂದ್ರಪಾಲಿಸುತಿಹ ಸಾರ್ವಭೌಮ | ಸುಜನಾಳಿ ಪಾಪಾರಣ್ಯ ಧೂಮ | ಕೇತುಓಲೈಪ ಜನರಘ ಭಸ್ಮ | ಆಹಲೀಲೆಯಿಂದಲಿ ಗೈವ | ಆಲಯವಿದು ಶೂರಪಾಲೀಯ ಕ್ಷೇತ್ರದಿ | ಶ್ರೀಲೋಲ ನರಹರಿ 4 ನಡು ನದಿಯೋಳು ಕೋಟೇಶ | ಮತ್ತೆಪಡುವಲಯದೋಳು ಕಂಕೇಶ | ಇನ್ನುಬಡಗ ನರಹರಿ ಬಳಿ ಬೈಲೇಶ | ಆಹರೊಡಗೂಡಿ ನೆಲಸೀಹ | ಕಡು ಮುದ್ದು ರೂಪದಿದೃಢ ಭಕ್ತನೆನಿಸೀಹ | ಮೃಡನಿಂದ ಪೂಜಿತ 5 ಅಜಪಿತ ಪದಜಳು ಎನಿಪ | ಮತ್ತೆಅಜಾಂಡ ಕಟಹದಿಂ ಬರ್ಪ | ಇನ್ನುಅಜಸುತ ಶಿರದಲಿ ಧರಿಪ | ಸಗರಜರ ಪಾಪವನ್ನು ಹರಿಪ | ಆಹಮಝಬಾಪು ಗಂಗೆಯ | ನಿಜ ಪಾಪ ಕಳೆಯಲುಅಜಸುತ ನಾಜ್ಞೆಯಿಂ | ಬಿಜಯಿಸಿದಳು ಇಲ್ಲಿ 6 ಪರರಘಗಳ ಹೊತ್ತು ಗಂಗೆ | ಬಂದುಹರ ಪೇಳಿದಂಥ ದ್ವಿಜಂಗೆ | ಶೂರ್ಪವರ ವಾಯು ನ್ವಿತ್ತಳವಂಗೆ | ಪಾಪಹೊರದೂಡಿದಳು ಮಂಗಳಾಂಗೆ | ಆಹಗುರುಕನ್ಯಾಗತನಾಗೆ | ಸರಿದ್ವರ ಕೃಷ್ಣೇಲಿಬೆರೆಯುತ ಸುರ ನದಿ | ಹರಿಪಳು ಜನರಘ 7 ಮಧ್ವಾರ್ಯ ಸಂತತಿ ಜಾತ | ಗುರುವಿದ್ಯಾಧೀಶರು ಇಲ್ಲಿ ಖ್ಯಾತ | ದ್ವಾದಶಬ್ದ ಪರಿಯಂತನುಷ್ಠಾತ | ಪ್ರಾಣಮುದ್ದು ಪ್ರತಿಮೆ ಪ್ರತಿಷ್ಠೀತ | ಆಹಶುದ್ಧ ದ್ವಾದಶಿ ದಿನ | ಸದ್ವೈಷ್ಣ್ವ ಲಕ್ಷರ್ಗೆವಿಧ್ಯುಕ್ತ ಭೋಜನ | ಶ್ರದ್ಧೆಯಿಂದಲಿ ಗೈದರ್ 8 ಪರ ತತ್ವವೆನಿಸಿ | ಸ್ತುತಿಸ್ಕಂದೋಕ್ತ ಮಹಿಮೆಯ ಸ್ಮರಿಸಿ | ಆಹಇಂದುಪ ಗುರು ಗೋ | ವಿಂದ ವಿಠಲನಹೊಂದಿ ಭಜಿಪರ್ಗ | ಬಂಧನವೆಲ್ಲಿಹದೋ 9
--------------
ಗುರುಗೋವಿಂದವಿಠಲರು
ಶ್ರೀ ಪತಿಯೆ ನಿನ್ನ ದಯವೆಂತಾಹದೋ ಪಾಪಕರ್ಮವ ಮಾಡಿ ಜೀವಿಸುವೆ ನಿರುತ ಪ ಬಾಲತನವನು ಬಾಲಲೀಲೆಯಿಂದಲಿ ಕಳೆದೆ ಕೀಳು ಜನರೊಡನೆ ಸ್ನೇಹವ ಬೆರಸಿದೆ ಹಾಳು ಹರಟೆಗೆ ಹೊತ್ತು ಸಾಲದೋಯಿತು ಯನಗೆ ಶ್ರೀ ಲೋಲ ನಿನ್ನಡಿಗೆ ದೂರಾದೆ ನಾನು 1 ಬುದ್ಧಿ ಪೂರ್ವಕದಿ ಸದ್ವಿದ್ಯೆಯನು ಕಲಿಯದಲೆ ಶುದ್ಧ ತಾಮಸ ವಿದ್ಯದೊಳು ರಮಿಸಿದೆ ಮಧ್ವಶಾಸ್ತ್ರದಸಾರವನ್ನು ತಿಳಿಯದೆ ನಾನು ಕದ್ದಕಳ್ಳನ ತೆರದಿ ಬಾಳಿದೆನು ಬರಿದೆ 2 ಪ್ರಾಯತನವೆ ವಿಷ ಪ್ರಾಯವಾಯಿತು ಎನಗೆ ಕಾಯಜನ ಉಪಟಳದಿ ಮತ್ತನಾದೆ ತೋಯಜಾಕ್ಷಿಯರ ದುರ್ಮಾಯ ಜಾಲಕೆ ಸಿಲುಕಿ ನೋಯಿಸಿದೆ ನಿಜ ಸತಿಯ ಪರಿಪರಿಯಲಿಂದ 3 ಮದನ ಜನಕನೆ ನಿನ್ನ ಮಧುರನಾಮವ ಮರೆದು ಸುದತಿಯರ ಅಧರಾಮೃತಕೆ ಬೆರೆದು ವಿಧಿಕುಲಾಚರಣೆ ಜರೆದ್ಹÀÀಗಲಿರುಳು ನಾರಿಯರ ವದನವನು ನೋಡಿ ಮೋದಿಪನರಾಧಮನೊಳ್ 4 ಉದರ ಗೋಸುಗ ಪರರ ಹೃದಯ ದ್ರವಿಸುವ ತೆರದಿ ವಿಧ - ವಿಧದಿ, ಆತ್ಮ ಸ್ತೊತ್ರವನೆ ಪೊಗಳಿ ಸದ-ಸದ್ವಿ ವೇಕವನು ತೊರೆದನ್ಯರ್ಹಳಿದು ಬಲು ಚದುರ ನಾನೆಂಧೇಳಿ ಮೋಸಗೊಳಿಸುತ ಜನರ 5 ಸಿರಿ ಚರಣಕ್ಕೆ ಶಿರ ಬಾಗ ದ್ಹರಿ ಭಕುತರಿಗೆ ವಿನಯದಿಂದೆರಗದೆ ನಿರುತದಲಿ ನಾಚಿಕಿಲ್ಲದಲೆ ಭೂದನುಜಯ ವಾನರಿಗೆ ಕರಮುಗಿದು ಜೀವಿಪÀಖೂಳ ಮನುಜನೊಳು 6 ಸತ್ಯಧರ್ಮವÀ ತ್ಯಜಿಸಿ ಮತ್ತೆಯುತ್ತಮರಜಾ - ನ್ನತ್ಯವನು ಸಹಿಸದಲೆ ತತ್ತಳಿಸುವೆ ಪೆತ್ತವರ ಸೇವಿಸದೇ ಮಿಥ್ಯವನೆ ಬೊಗಳಿದು - ಷ್ಕøತ್ಯದಿಂಬಾಳ್ವ ಉನ್ಮತ್ತನರ ಪಶುವಿನೊಳು 7 ಹರಿಗೆರಗದಿರುವÀÀ ಶಿರ ಹರಿಯ ಸ್ಮರಿಸದ ಜಿಂಹೆ ಹರಿವಾರ್ತೆಯಾಲಿಸದ ಕರ್ಣಂಗಳು ಕರ ಹರಿಯ ನೋಡದ ಚಕ್ಷು ಸರುವ ಪರಿಯ ಪವಿತ್ರದೇಹಧರಿಸಿದ ನರಗೆ 8 ವಿತ್ತ ಪಹರಿಸಿ ಪರರ ನಿಂದಿಸಿ ಪರರ ಬಲುವಂಚಿಸಿ ಪರಮೇಷ್ಟಿ ಜನಕನೆ ಪರತರ ಪರಂಜ್ಯೋತಿ ಪರದೈವನೆಂದರಿಯದಿರುವ ಪಾಮರನಿಗೆ 9 ನಾಮಾಡದಿಹ ಪಾಪ ವೀಮಹಿಯೊಳೊಂದಿಲ್ಲ ಸೀಮೆಗಾಣಲು ರವಿಜನಿಗೆ ಸಾಧ್ಯವಿಲ್ಲ ಆ ಮಹಾನರಕÀಂಗಳೆನಗೆÀ ತಕ್ಕವು ಅಲ್ಲ ಸ್ವಾಮಿ ನೀಪೊರೆಯದಿರೆ ಯನಗಾರು ಗತಿಯಿಲ್ಲ 10 ಏನಾದರೊಳಿತೆ ವರದೇಶ ವಿಠಲ ನಿನ್ನಾ ಙÁ್ಞನುಸಾರದಿ ಕರ್ಮಗಳ ಮಾಡಿದೆ ಧೀನರಕ್ಷಕನೆಂಬ ಬಿರಿದು ನಿಜ ವಿದ್ದರಾ - ದೀನನಾದವನನುದ್ಧರಿಸಲರಿಯಾ 11
--------------
ವರದೇಶವಿಠಲ
ಶ್ರೀ ಪಾಂಡುರಂಗ ಪ್ರಾರ್ಥನೆ ಪಾದ ಅಮಿತ ನೀಲಮೇಘಶ್ಯಾಮ ವಿಠಲನ್ನ 1 ಶಿಲೆಯನುದ್ಧರಿಸಿರ್ಪ ಪಾದಕೆ ಬಲಿಯ ಮೆಚ್ಚಿದ ಪಾದಕಮಲಕೆ ನಲಿವಿನಿಂದಲಿ ನಮಿಸಿ ಪೊಗಳುವೆಕಲಿಮಲಂಗಳನೆಲ್ಲ ತರಿಯುತತಲೆಯೊಳಾಶೀರ್ವಾದವೀಯಲು ಬಿದ್ದು ಬೇಡುವೆನು 2 ಕ್ರೂರ ರಕ್ಕಸರುಪಟಳಂಗಳ ವೀರತನದಿಂ ಚಕ್ರದಡಗಿಸಿ ಮಾರಪಿತ ಭವದೂರ ಕಂಸರಲಿ ದಣಿಯುತಲಿ ಯಾರ ಗೊಡವೆ ನಮಗೇನು ಎನ್ನುತ ಶ್ರೀ ರಮಾವರ ದೇವಿ ಸಹಿತೀ ದಾರಿಯೋಳ್ಮಿಜ ಭಕ್ತಗಾಶ್ರಯನಾಗಿ ನಿಂತಿಹನೆ 3 ಕಾಯ ಧರಿಸಿದ ಭಕ್ತವರ್ಯನ ಮಾಯೆಯಿಂದಲಿ ನೋಡಿ ನಲಿಯಲು ಬಂದ ವಿಠ್ಠಲನೆತೋಯಜಾಕ್ಷಿಯಳಾದ ಲಕುಮಿಯರಾಯ ಶ್ರೀಹರಿ ನಿನಗೆ ಇಟ್ಟಿಗೆ ಯಾಯಿತೇ ಬಲು ಸಂಖ್ಯದಂಸನ ನಿಂತುಕೊಳ್ಳಿಲ್ಕೆ 4 ತಾತನಂಘ್ರಿಯ ಸೇವೆಗೆಯ್ದಿರು-ವಾತ ಬರ¯ಂದನಿಮಿಷಾಗ್ರಣಿ ತಾತ ನಿಂತೆಯ ಸೊಂಟದ ಮೇಲೆ ಕೈಯಿಟ್ಟುಮಾತೆಯಾದವರು ಹಾಗೆ ಸಂಗಡ ಪ್ರೀತಿಯಿಂದಲೆ ನಿಂತುಕೊಂಡಳು ಖ್ಯಾತಿಯಾಯಿತು ಪಾಂಡುರಂಗನ ಲೀಲೆ ಭಕ್ತರಲಿ 5 ಸತ್ತು ಹುಟ್ಟುವ ಬಾಧೆಯಿಲ್ಲದಸತ್ಯವಂತನೆ ಕೊಟ್ಟ ಇಟ್ಟಿಗೆ ಮೆತ್ತಗಿಹುದೆÉೀನಷ್ಟು ದಿವಸವು ನಿಂತುಕೊಂಡಿರುವೆಮತ್ತೆ ಪೇಳುವುದೇನು ದೇವನೆ ಸುತ್ತು ಮುತ್ತಿನ ಜಗಕೆ ಆಸರವಿತ್ತೆ ನಿನಗಾಸರವು ಯಾವುದು ಭಕ್ತವತ್ಸಲನೆ 6 ಹೇ ದಯಾನಿಧೆ ಯಾದವಾಗ್ರಣಿ ಮಂದವಾಖ್ಯನೆ ಭೀಮತಡೆಯೊಳು ಆದರಮ್ಮಿಗೆ ತೋರಿ ಕರೆದನೆ ನಿಮ್ಮನೀರ್ವರನು ಬಾಧೆಬಡುತೀ ನಿಂತ ಕಾಲಿಗೆಹಾದಿನೋಡುವವೆಷ್ಟೊ ಬೆಳೆಯುಚೋದ್ಯವಲ್ಲವೆ ನಿನ್ನ ಲೀಲೆಯು ದಿವ್ಯವಿಗ್ರಹನೇ 7 ಆದಿಮೂರುತಿ ನಿನ್ನ ಹುಡುಕಲುವೇದ ಶಾಸ್ತ್ರ ಪುರಾಣವೆಂಬವು ಹಾದಿ ಕಾಣದೆ ನಿಂತವಲ್ಲೈ ನೀನೆ ಬಂದೀಗಮೇದಿನೀ ತಳದಲ್ಲಿ ಭಕ್ತರಹಾದಿ ನೋಡುತ ನಿಂತುಕೊಂಡಿರೆಹೋದವೆಷ್ಟೋ ದಿವಸ ಶ್ರೀಹರಿ ನಿನ್ನ ಲೀಲೆಯಲಿ 8 ನೀಲಮೇಘ ಶ್ಯಾಮ ಕೀರ್ತಿಯ ಜಾಲವನ್ನುರೆ ಭಜನೆ ಮಾಡುತತಾಳಹಾಕುತ ಸಂತಮಂಡಳಿ ಕುಣಿದು ಬರುತಿರಲುಧೂಳವೇಳುವದನ್ನು ಕಣ್ಣಲಿವೇಳೆಗಳೆಯದೆ ನೋಡಿ ನಲಿವುದುಲೀಲೆಯಲ್ಲವೆ ಪಾಂಡುರಂಗನೆ ವಿಶ್ವಚಾಲಕನೆ9 ಸರಸಿಜಾಕ್ಷನೆ ಕರಗಳೆರಡನುಇರಿಸಿ ಟೊಂಕದೊಳೇನು ನೋಡುವಿಪರಮ ಭಕುತನ ತಂದೆ ತಾಯ್ಗಳ ಸೇವೆ ಮಾಡುವುದುದೊರೆಯಲಾರದೆ ಕಲಿಯ ಕಾಲದೆ ದುರಿತ ನೀಗಿಸಿಕೊಂಡನಲ್ಲವೆ ಆರುಗಿಯಾದರು ನೋಡಲೊಲ್ಲನು ಭಕ್ತಿಬಲದಿಂದ 10 ಚಿನ್ನದರಸನೆÉ ನಿನ್ನ ಕೈಯನುಘನ್ನ ಟೊಂಕದ ಮೇಲೆ ಇರಿಸುತನನ್ನಿಯಿಂ ಭರವಸೆಯ ಕೊಡುವಿಯೊ ಭವದ ಸಾಗರವುತನ್ನ ನಂಬುತ ದಾಟಿ ಹೋಗುವಸನ್ನುತಾತ್ಮರಿಗಿಷ್ಟಯೆಂಬುದ ಚೆನ್ನವಾಗಿಯೆ ತಿಳಿಸಲೋಸುಗ ಹೀಗೆ ನಿಂತಿಹೆಯಾ 11 ನಾನು ನಿನ್ನನು ಕರೆಯದಿದ್ದರು ನೀನೆ ಬಂದಿಲ್ಲೇಕೆ ನಿಂತೆಯೊ ದೀನಪಾಲಕನೆಂಬ ಬಿರುದನೆ ಕಾಯಲೋಸುಗವೇಶಾನೆ ಸಂಪದವಿದ್ದ ದ್ವಾರಕೆ ಯಾನೆ ಕುದುರೆಗಳಿಂದ ಶೋಭಿಪ ದಾನವಾಂತಕ ಕೃಷ್ಣರಾಯನೆ ಈಗ ಪಂಡರದೀ 12 ಕರ್ಮ ಮುಗಿದಿಹುದೇಮಿಕ್ಕಿದವರೇನನ್ಯಯ ಪುತ್ರರೆ ತಕ್ಕ ಯೋಚನೆಗೆಯ್ದು ನಂತರತೆಕ್ಕೆಯೋಳ್ಸಲಹುವದು ಲೇಸೈ ಭಕ್ತವತ್ಸಲನೆ 13 ಹಾಲು ಮೊಸರಾ ಬೆಣ್ಣೆಯುಂಡೆಯ |ಲೀಲೆಯಿಂದಲೆ ಕದ್ದ ಕಳ್ಳನೆಚ್ಯಾಳಿಬಲಿತಾ ಬಳಿಕ ಬಿಡುವೆಯಾ ಭಕ್ತರಂತಹರಗಾಳಿ ಸೋಂಕಿದ ನೆವ ಮಾತ್ರಕೆಜಾಲಬೀಸುತ ಕದ್ದು ಕೊಳ್ಳುವಿಹೇಳಲೇನೈ ಹಿಂದಿನೆಷ್ಟೊ ಜನ್ಮದಘನಿದನಾ 14 ನಿನ್ನನೇ ನೆರೆ ನಂಬಿ ಭಜಿಸುವಪುಣ್ಯವಂತರ ಹೃದಯಮಂದಿರ-ವನ್ನೆಮಾಡಿದ ಪಾಂಡುರಂಗನೆ ನೀನು ಜಗದೊಳಗೆಘನ್ನ ಪಾಪದಿ ಬಳಲುತಿರುವವ-ರನ್ನುಸಲುಹಲು ಬಂದೆಯೇನೈಸನ್ನುತಾಂಗನೆ ಭಜನಿಗೊಲೆಯುವ ದಿವ್ಯ ವಿಠ್ಠಲನೆ 15 ವೇದಗಳ್ಳನ ಸದೆದು ಬ್ರಹ್ಮಗೆ ಮೋದದಿಂದಲಿ ಕೊಟ್ಟ ಮತ್ಸ್ಯನೆಆದಿಕೂರ್ಮನೆಯಾಗಿ ಮಂದರನೆಗಹಿ ನಿಂದವನೇಬಾಧೆÉ ಬಿಡಿಸುವ ಕ್ರೂರ ರಕ್ಕಸಭೇದಿಯಾಗುತ ಧರಣಿ ಮಂಡಲಸೇದಿ ತಂದನ ನೀನೆಯಲ್ಲದೆ ದಿವ್ಯ ವಿಠ್ಠಲನೆ 16 ಒಂದೆ ಮನದೊಳು ನೆನೆದ ಕುವರಗೆಬಂದೆ ಕಂಬದೆ ನಾರಸಿಂಹನೆನಿಂದ ಮಾತ್ರಕೆ ಮೂರು ಪಾದದ ಭೂಮಿದಾನದಲೀತಂದು ಪಾತಾಳದಲಿ ಬಲಿಯನುಚಂದದಿಂದಲಿ ಇಟ್ಟ ವಾಮನತಂದೆಯಾಡಿದ ನುಡಿಯ ನಡಿಸಿದ ಭಾರ್ಗವತ್ತೀ 17 ಸೀತೆಗೋಸುಗ ರಾಮನಾಗುತಖ್ಯಾತಿಗೋಸುಗ ಕೃಷ್ಣನಾದೆಯಲೇಪ್ರೀತಿಗೋಸುಗ ಬಾಧ್ಯನಾಗುತ ಜಗವ ಪಾಲಿಸಿದ್ಯಾಜಾತಿಯಶ್ವವನೇರಿ ರಿಪುಗಳÁತ ಮಾಡಿದ ಕಲ್ಕ್ಯರೂಪನೇಯಾತಕೀಪರಿ ಚಂದ್ರಭಾಗದಿ ನಿಂತೆ ಬೆರಗಾಗಿ 18 ನಿನ್ನ ನಾಮಗಳಮಿತವಿದ್ದರುನನ್ನ ನಾಲಿಗೆಗಷ್ಟು ಬರುವವೆ ?ಸನ್ನುತಾಂಗನೆ ಪಾಂಡುರಂಗನೆ ದಿವ್ಯ ವಿಠ್ಠಲನೆನ್ನುತಿಷ್ಟೇ ನಾಮಗರೆವೆನುಚಿನ್ನದರಸನೆ ಭಕ್ತಸಂಘದೊಳೆನ್ನ ಕೂಡಿಸಿ ಕಾಯಬೇಕೈ ಪರಮ ಭಗವಂತಾ 19 ಕಾಲಕಾಲಕೆ ನೇಮನಿತ್ಯಗ-ಳಾಲಯಂಗಳ ಮಧ್ಯದೆಸಗದೆಜಾಲಿಯಂತೇಗೆಲ್ಲ ಜನರಿಗೆ ಬೆಳೆದೆ ಬಾಧಿಸುತಬಾಲ ಯೌವನ ವಾರ್ಧಿಕತ್ವದೆಕಾಲಪೋಯಿತು ನಿನ್ನ ನೆನೆಯದೇ ಹೇಳಲೇನೈ ಕಾಲನೆಳೆಯುವನು 20 ಕಂತು ಜನಕನೆ ನಿನ್ನ ನಾಮದಮಂತ್ರವೆನಗಿನ್ನೆಲ್ಲಿ ಬರುವುದು ಶುದ್ಧ ಪಶುವಾದೇಅಂತರಾತ್ಮನೆ ನೀನು ಈ ತೆರನಿಂತುಕೊಂಡರೆ ನನ್ನ ಗತಿಯೇ-ನೆಂತ ಹೇಳಲಿ ಸಂತೆ ತೀರಿತು ಸಲಹೊ ವಿಠ್ಠಲನೇ 21 ಕಾಲ ಬಂದಿದೆಸದ್ಯಕಾರೂ ಕಾವರಿಲ್ಲವುದ್ಧಪಾಶದಿ ಬಿಡಿಸಬಾರೈ ದೀನ ಬಾಂಧವನೇ 22 ಕಾಯಕಿರುವದ ಬಂಧು ಬಳಗವು ಹೇಯ ದುಡ್ಡನೆ ಶಳಯಲೋಸುಗಜೀಯ ನಿನ್ನಂತಾರು ಇಲ್ಲವು ಜೀವಕನು ಸರಿಸೀತಾಯ ತಂದೆಯ ಜಗಕೆ ಲಕ್ಷ್ಮೀರಾಯ ನೀನೇ ಅಲ್ಲವೇನೈ ಬಾಯ ಬಿಡುವೆ ಅಜ್ಞಬಾಲರ ಕಾಯೊ ವಿಠ್ಠಲನೇ 23 ಅಣ್ಣನಾಗುತ ದ್ರುಪದ ಸುತೆಗಾಬಣ್ಣದಂಚಿನ ಸೀರೆ ಉಡಿಸಿದೆನಿನ್ನ ಬಾಲ್ಯದ ಸುಖ ಸುಧಾಮಗೆ ಕೊಟ್ಟಿಯ್ಯೆಸಿರಿಯಹಣ್ಣಿನಾಶೆಗೆ ಶಬರಿ....ಗೊಲಿದೈಬೆಣ್ಣೆಯಾಶೆಗೆ ಗೋಪಿಗೊಲಿದೈಮಣ್ಣಿನಾಶೆಗೆ ಬಲಿಯ ಬಾಗಿಲ ಕಾಯ್ದ ವಿಠ್ಠಲನೇ 24 ನಿನ್ನ ನೆಂದು ಕಾಣದಿದ್ದವಕುನ್ನಿ ಪಾಮರನಣ್ಣನೆಂಬೆನೆಹಣ್ಣು ಹಂಪಲವೆನಗೆ ಸಾಲವು ನಿನಗೆ ಕೊಡಬಹುದೇನನ್ನ ತೆರದಾಚಾರ ಹೀನರೆಇನ್ನು ಗೆಳೆಯರು ನನಗೆ ಆದರುಮುನ್ನ ಮಾಡಿದ ಪಾಪ ಬಹಳಿದೆ ಕೊಳ್ಳೊ ನೀನದನೂ 25 ಹಿರಿಯರೆಸಗಿದ ಪುಣ್ಯದಿಂದಲೆದೊರಕಿತಲ್ಲವೆ ನಿನ್ನ ನೆನೆವುದುಪರಮ ಸುಂದರ ಪಾಂಡುರಂಗನೆ ಬಾರೊ ಮಾನಸದೀತರಳರಾಟದಿ ತನ್ನ ತಾಯಿಯಮರೆತ ತೆರದಿಂ ಬಿಟ್ಟು ಕೆಟ್ಟೆನುಕರಗದೇನೈ ನನ್ನ ಮನವದು ನಿನ್ನ ದೆಶೆಯಿಂದ 26 ಕೂಸು ಆಟದೊಳಿದ್ದರೇನೈಹೇಸಿ ಕೆಲಸಹೊಳಿದ್ದರೇನೈದೋಷಗಳೆಯುತ ಪೊರೆವಳಲ್ಲಿದೆ ಪಡೆದ ತಾಯವ್ವಶ್ರೀಶ ವಿಠ್ಠಲ ಪಾಂಡುರಂಗನೆಘಾಸಿಗೊಳಿಸುವ ಮುನ್ನಯವನರುಪಾಶ ಬಿಡಿಸೈ ಭಕ್ತವತ್ಸಲ ದಿವ್ಯ ವಿಠ್ಠಲನೇ 27 ಕಾಮನಯ್ಯ ಸುಧಾಮ ಸಖ ಶ್ರೀರಾಮ ವಿಠ್ಠಲ ದಿವ್ಯ ರೂಪನೆಪ್ರೇಮವೆನ್ನಲ್ಲಿಟ್ಟು ಸಲಹೊ ಪುಣ್ಯವರ್ಜಿತನೆತಾಮಸತ್ವದ ಕೆಲಸವೆಲ್ಲವನೇಮದಿಂದಲೆ ಮಾಡಿ ನಾ ನಿ-ಸ್ಸೀಮನಾಗಿಹೆ ಕಾಯೆಯೊ ವಿಶ್ವವ್ಯಾಪಿ ವಿಠ್ಠಲನೇ 28 ನಾನು ಹೇಳುವುದೇನು ದೇವನೆನೀನೆ ತಿಳಕೊಂಡಿರ್ಪೆ ಎನ್ನಯಮಾನಕುಚಿತಪ್ಪಂತೆ ಸತ್ಫಲ ಕೊಡು ದಯಾಂಬುಧಿಯೇನೀನು ನಿಂvಡೆÉಗೆನ್ನ ಜಗ್ಗುತಸಾನುರಾಗದೆ ಪೊರೆಯೊ ವಿಠ್ಠಲನೀನೆಯಾದರು ಬಾರೊ ಭಕ್ತರ ಹೃದಯ ಮಂದಿರಕೆ 29 ಮಂಗಳಂ ಮಧುಕೈಟಭಾರಿಗೆಮಂಗಳಂ ಶ್ರೀವತ್ಸಧಾರಿಗೆಮಂಗಳಂ ಬ್ರಹ್ಮಾಂಡ ಪಾಲಕ ಪಾಂಡುರಂಗನಿಗೆಮಂಗಳಂ ಶ್ರೀ ಲಕುಮಿದೇವಿಗೆಮಂಗಳಂ ಭೀಮಾತಟಾಕಿಗೆಮಂಗಳಂ ಸದ್ಭಕ್ತ ಮಂಡಳಿಗೆಗಳ ಭೂತಳಕೆ 30
--------------
ಪಾಂಡುರಂಗ
ಶ್ರೀ ಲಕ್ಷ್ಮೀನೃಸಿಂಹ ಪ್ರಾದುರ್ಭಾವ ದಂಡಕ ಶ್ರೀರಮಾ ಮಾನಿನೀ ಮಾನಸೇಂದೀವರೋತ್ಫುಲ್ಲ ಸಂಫುಲ್ಲ ಚಂದ್ರಾ ಚಿದಾನಂದ ಸಾಂದ್ರಾ ಸದಾ ಸನ್ನುತೇಂದ್ರಾ ನಮೋಪೇಂದ್ರ ನಿಸ್ತಂದ್ರ ನೀ ಕೇಳು, ಆ ರೀತಿ ಪ್ರಹ್ಲಾದನಲ್‍ಸಜ್ಜನಾಹ್ಲಾದನಲ್ ದೈತ್ಯ ಸತ್ಪುತ್ರರಾವೇಳೆ ಶ್ರೀಕಾಂತನ ಜ್ಞಾನ ಭಕ್ತಿ ಕ್ರಿಯಾಗಾಧೆಗಳ್ ಬೋಧೆಗಳ್ ಕೇಳಿ ತಾವೆಲ್ಲರಾಮಾರ್ಗದಲ್ಲೇ ಸುನಿರ್ದಿಷ್ಟ ಸನ್ಮಾರ್ಗದಲ್ಲೇ ಪರಾಭೂತ ಷಡ್ವರ್ಗದಲ್ಲೇ ಮನಸ್ಸಿತ್ತು ಧರ್ಮಾರ್ಥ ಕಾಮಸ್ಪøಹ ಗ್ರಂಥಗಳ್ 10 ಸಿದ್ಧ ಸಂಸಾರ ಸಂಬಂಧಗಳ ಹತ್ತುವೂದಾಗದೇ ದಾನವಾಚಾರ್ಯರಾಶ್ಚರ್ಯದಿಂದಾಗ ತಾವೇಸುರೀತಿಂದಲಾಯಾಸುರೀವಿದ್ಯೆಗಳ ಗದ್ಯಗಳ್ ಪದ್ಯಗಳ್ ಪಾಠ ಪೇಳ್ತಿದ್ದರಾ ಪಾಠಗಳ್ ಒಪ್ಪದೇ ತಪ್ಪದೇನಿಂತು ಮಾರಾಟಗಳ್ ಮಾಡುತಾ ವಿಷ್ಣುಭಕ್ತಿ ಕ್ರಿಯಾಪಾಠಗಳ್ ಪಾಡುತಾ ಎಲ್ಲರೊಂದಾಗೆ ತಾವ್‍ನೋಡಿ ಅಂಜ್ಯಾಡಿ ಇನ್ನೇನು ಈಸೂನುಗಳ ದೈತ್ಯರಾಟ್ ಸೂನನಲ್ ಬುದ್ಧಿ ಭೇದೈಸಿ ದುರ್ಬೋಧಗಳ್ ಕೇಳಿ ದುಸ್ಸಾಧ್ಯರಂ 20 ಕರ್ಣ ಕಾಠೋರ್ಯ ಬಾಣಾಳಿಗಳ್ ರೀತಿ ಅಪ್ರೀತಿಯಾಸೂತಿ ದುರ್ನೀತಿ ತಾ ಸೈಸದೇ ಕೋಪಸಂದೀಪನಾವೇಶದಿಂದಲ್ ಚಲದ್ಗಾತ್ರನಾಗೆದ್ದು ಪ್ರೋದ್ಯದ್ದಯಾಪಾತ್ರನಂತಿಪ್ಪ ತತ್ಪುತ್ರ ಸಂಹಾರದಲ್ ಚಿತ್ತವಂ ಪೆತ್ತವಂ ಪಾಪÀಸಂವೃತ್ತನೇತ್ರ ಪ್ರಮಾಕ್ಷೇಕ್ಷನಾಗಲ್ ಸಮ 30 ಕ್ಷೈಸಿ ದುಷ್ಟೋಕ್ತಿಗಳ್ ಬಾಗುತಾ ಕೂಗುತಾಸಾಧು ಸಧ್ಭಕ್ತಿಯಿಂದಲ್ ಮಹದ್ಭಕ್ತಿಯಿಂದಲ್ಲಿ ತನ್ನಲ್ಲಿ ಚೆನ್ನಲ್ಲಿ ಬದ್ಧಾಂಜಲಿಯಾಗಿ ಸಿದ್ಧಾಂತ ಸದ್ಭಕ್ತಿಯಿಂದಲ್ಲಿ ನಿಂದಿದ್ದ ಪ್ರಹ್ಲಾದ ಧೀಮಂತಗೇ ನಿರ್ಮಲಸ್ವಾಂತಗಾವೇಳೆ ಪಾದಾಹತವ್ಯಾಳಿಯಂತೇ ಭುಜಶ್ವಾಸಗಳ್ ಬೇಸಿಗಳ್ ಬೀಸುತಾಕಂದಗಾ ತಂದೆ ಸುಭಾಷಿಪಂ. ಹೋಯೆಲೋ ದುರ್ವಿನೀತಾಯೆಲೋ ಮಂದಬುದ್ಧೇಯೆಲೋಇಂತು ನೀ ಸ್ತಬ್ಧನಾದೇತಕೋ ವಂಶಘಾ40 ತೀಯೆಲೋ ಪಾಪಜಾತೀಯೆ ನೀ ಹೀಗೆ ಮಚ್ಛಾಸನಾತೀನಾಗಪ್ಪೊಡೇ ನಿನ್ನ ನಿನ್ನಾ ಯಮದ್ವಾರಕೇ ಕಳುಹುವೆಂ ನೋಡೆಲಾನಾನು ಕೋಪಿಷ್ಠನಾಗಿಪ್ಪೊಡೇ ಅಂಜಿ ಮೂರ್ಲೋಕಗಳ್ ಲೋಕಪಾನೀಕಗಳ್ ಕಂಪ ಕಾಣುತ್ತವಿಂಥಾ ಬಲಿಷ್ಠನ್ನ ನೀನೆನ್ನ ಸಂಪದ್ಬಲ ಶ್ರೀಯನಾಶ್ರೈಸದೇ ಬಿಟ್ಟರಿನ್ನಾವನಲ್ ನೀಂ ಬಲಶ್ರೀಯನಾಶ್ರೈಸುವೇಯೋ ಎಲಾ ಏಕೆ ಮಚ್ಛಾಸನಾತೀತನಾಗೂವಿಯೋ ಕಂದ ಪೇಳೆಂದರೇ, ತಂದೆಗಾ 50 ತಂದೆ ಕೇಳಯ್ಯ ಬ್ರಹ್ಮಾದಿ ಆಸ್ತಂಭಪರ್ಯಂತವುಂ ಜಂಗಮಸ್ಥಾವರಾತ್ಮ ಪ್ರಪಂಚೋಚ್ಚ ನೀಚ ಪ್ರಜಾನೀಕ ಯಾವತ್ತದಾವಾತನಾಧೀನದಲ್ಲಿಪ್ಪುದೋ ಆತನೇ ಎನ್ನಗೇ ನಿನ್ನಗೇಇನ್ನು ಮಿಕ್ಕಾದ ಚೈತನ್ಯಕೆಲ್ಲಾ ಬಲಶ್ರೀಯು ತಾನಾದನೇ ಕಾದನೇ ಕಾಲರೂಪೀಶ್ವರೋರುಕ್ರಮಾಕಾರನೆಂಬಾತನೇಆತನೇ ಆತನೇ ತೇಜ ಓಜಸ್ಸಹಾಸತ್ವ ಸಂಪದ್ಬಲ ಶ್ರೀಂದ್ರಿಯಾತ್ಮನ್ ಸ್ವಯಂ60 ಸ್ವಾಂತ ನೀನಿತ್ತು ಸರ್ವತ್ರ ಸಮಚಿತ್ತನಾಗಯ್ಯ ಎನ್ನಯ್ಯನೇ ನಿನ್ನಗಾಮೇಲೆ ವಿದ್ವೇಷ ಮಾಡೂವರಾರಿಲ್ಲವಂತಸ್ಸಿನಲ್ಲಿಪ್ಪ ಕಾಮಾದಿ ಷಡ್ವರ್ಗವೆಂಬಾ ಮಹಾವೈರಿಗಳ್ ಕಳ್ಳರಂತೆಲ್ಲರುಂ 70 ದೇಹವೆಂಬೋ ಮಹಾರಾಜಧಾನೀ ವೃಥಾಹಾನಿ ಮಾಡೂವರಂಥಾವರಂ ಗೆಲ್ಲದೇಕೆಲ್ವರೀ ದಿಕ್ಕುಗಳ್ ಸರ್ವವಂ ಗೆದ್ದವೆಂತೆಂದು ಹಿಗ್ಗೂವರಂತಸ್ಸಿನಲ್ಲಿಪ್ಪ ಕಾಮಾದಿ ಷಡ್ವರ್ಗ ಗೆದ್ದಾತಗೇ ಜ್ಞಾನಸಂಪೂತಗೇ ಸಾಧು ಸಂಭೂತ ಸರ್ವಂಸಮಂಚೇತಗಾಮೇಲೆ ತನ್ಮೋಹ ಸಂಜಾತವೆಂತಪ್ಪುದೋ ಶಾತ್ರವವ್ರಾತವೆಲ್ಲಿಪ್ಪುದಯ್ಯಾ ಸದಯ್ಯಾತ್ಮನೇ ತಿಳಿದು ನೋಡೆಂದು ತಾನಿಂದು ಮಾತಾಡಲು, ಶತ್ರುವಂತಿಪ್ಪ ಪು 80 ಇಂದು ನಾವೊಂದು ಪೇಳುತ್ತಿರುತ್ತಿದ್ದರೊಂದಕ್ಕೆ ಹತ್ತಾಗಿ ನೀನೇವನೋ ವಿಷ್ಣುವೆಂಬಾತ ಬೇರೊಬ್ಬ ತಾನಿಪ್ಪನೆಂದೂಹಿಸೂವೇಯ ಹೋ ಹೋಯೆಲಾಸಾವಿಗೀ ಬುದ್ಧಿ ನೀ ಸಿದ್ಧ ಮಾಡೀದಿ ಎಂಬೋದಿದಂ ವ್ಯಕ್ತವಂತೆಲ್ಲ ನಾಂ ಬಲ್ಲೆ ಇಂ 90 ತಲ್ಲದೇ ನಿನ್ನಗೀರೀತಿ ದುರ್ಬುದ್ಧಿ ಪುಟ್ಟೂವುದೇ ಮೃತ್ಯುಸಿದ್ಧರ್ಗೆ ವಿಷ್ಣುತ್ವ ಸಂಭಾಷೆಯಲ್ಲಿಚ್ಛೆ ಬೇಕಾಗಿ ಹೋದಲ್ಲದೇಬಲ್ಲೆನೆಲ್ಲಾ ಎಲೋ ಮಂದನೇ ಮಂದಭಾಗ್ಯೋಕ್ತಿಗಳ್ ಏಕೆ ನೀನಾಡುವೇ ಅಕ್ಕಟಾಎನ್ನಗಿನ್ನಾ ಜಗನ್ನಾಥನಿನ್ನಾವನೋಆತನೆಲ್ಲಿಪ್ಪ, ಸರ್ವತ್ರದಲ್ಲಿಪ್ಪ ನೀನೆಂದಡೇ ಡಿಂಭಕಾಡಂಭಕಾಡೋಣಗಳ್‍ಸಾಕು ಮಾಡಿನ್ನು ಮೇಲೀ ಸಭಾಸ್ತಂಭದಲ್‍ಶೀಘ್ರ ಸಂರಂಭದಲ್ ತೋರು ನೀ ತೋರದೇ 100 ಪೋದೆಯಾ ಇನ್ನು ನೀ ಮಾರುಮಾತಾಡದ್ಹಾಗೇ ಶಿರಚ್ಛೇದ ಮಾಡೂವೆನೋ ನಿನ್ನಗೀವೇಳೆಯಲ್ ವಿಷ್ಣುವೆಂತೆಂದದಾವಾತ ತಾನಡ್ಡ ಬಂದಾನೋ ನಾ ನೋಡುವೆಂ ವಿಷ್ಣುವೇಬೇಡಬೇಕಾದ ದಿಕ್ಕಾಗಿ ನಿನಗಿಪ್ಪಡೇಬೇಡಿಕೋ ಮೂರ್ಖನೇ ಎಂದು ಕ್ರೋಧಾಗ್ನಿಯಿಂದುರ್ಪಿ ದುರ್ಭಾಷೆಯಲ್ ತನ್ನ ಪುತ್ರನ್ನ ತಾದೂರುತಾ ಹಾರುತಾ ಕೈಲಿ ಖಟ್ ಪೆಟ್ಕವಂಖಡ್ಗವಂ ಕೊಂಡು ದುಷ್ಟಂ ಮಹಾದೋರ್ಬಲಿಷ್ಠಂ ಸ್ವಯಂ ಮುಷ್ಟಿಯಿಂದಲ್ಲಿ ಪೆಟ್ಟಿತ್ತನು. 110 ಆ ಭೀಕರಧ್ವಾನ ಸಂಭಿನ್ನ ದುಷ್ಟಾಸುರೀಗರ್ಭಸಂರಂಭವುಂ ಶುಂಭದಂಭೋದ ವೀಥೀ ಸಮಾರಂಭಿತೋ ಜೃಂಭವುಂ ವೈಷ್ಣವೋತ್ಕøಷ್ಟ ವಿಶ್ರಂಭವುಂ ಶಾತಕುಂಭೊಲ್ಲಸದ್ರತ್ನಚಿತ್ರಪ್ರಭಾಗುಂಭವುಂ ತತ್ಸಭಾಸ್ತಂಭವಂ ಆಗಲೇ ಬೇಗಲೇ ಘಳಾಘಳಾರಾವ ಉದ್ಭೂತವಾಗೆದ್ದು ಬ್ರಹ್ಮಾಂಡವೆಲ್ಲಾ ಪರಿಸ್ಫೋಟವಂ ಮಾಡುವಂತೊಪ್ಪೆ ಬ್ರಹ್ಮಾದಿಗಳ್ ತಮ್ಮ ಧಾಮಕ್ಕೆ ವ್ಯಾಘಾತವೇನಾದರುಂ ಬಾಹೋದೇನೋ ಇದೇನೆಂದು ವಿ 120 ಭ್ರಾಂತ ಚೇತಸ್ಕರಾಗಿಪ್ಪರಂತೇ ದುರಂತೇಕ್ಷಣಂಗಳ ಕುವರಾಗ್ರನಲ್ ತುಂಬುತಾಕತ್ತಿ ಕೈಹತ್ತಿ ಪುತ್ರನ್ನ ತಾ ಚಿತ್ರಹಿಂಸಿತ್ತು ಕೊಲ್ಲೂವೆನೆಂದಾಗ್ರಹೋಗ್ರ ಗ್ರಹಗ್ರಸ್ತನಾಗೇನು ಮೈತಿಳಿಯದೇ ಕೂಡಿಓಡ್ಯಾಡಿ ಬಾಹೋ ಹಿರಣ್ಯಾಖ್ಯಗಾ ವೇಳೆ ಕಾಲಾಡದದ್ಹಾಗೇ ಸಭಾಸ್ತಂಭದಲ್ ತನ್ಮಹಾರಾವ ತಾನಡ್ಡಕಟ್ಟಿಪ್ಪದಂತಾ ಮಹಾಧ್ವಾನ ಕೇಳುತ್ತಲೇ ನಿಂತನಾ ಹೇತುವಂ ಕಾಣದೇ ಆಗ ಆಯಾಸುರೀ ಹಿಂಡುಗಳ್ 130 ತುಂಬಿ ಕಾಳ್ಗಿಚ್ಚುಗಳ್ ಚೆಂದದಿಂಜಂತು ಸಂಘಕ್ಕೆ ಸಂತಾಪಗೈಸೇ ಛಿಟಾಛಿಟ್ ಛಿಟಾಂಗಾರಗಳ್ ಬೀಸೆ ಇದೇವುದೋಭೂತ ಉದ್ಭೂತವಾಗೊಪ್ಪಿತೆಂದಾಗ ಮೂರ್ಲೋಕವೆಲ್ಲಾ ಸಮುಲ್ಲೋಕವಾಗಿಪ್ಪುದಾವೇಳೆ ತದ್ಭøತ್ಯವಾಕ್ ಸತ್ಯವಂ ಮಾಡಬೇ 140 ಕಾಗಿ ಸರ್ವತ್ರ ತಾನ್ ತನ್ನ ವ್ಯಾಪ್ತತ್ವವಂಪಥ್ಯವಾಗಿಪ್ಪವೋಲ್ ಅದ್ಭುತಾಕಾರ ಪೊತ್ತಂ ಜಗದ್ಭರ್ತ ತಾನೊಂದೆ ಸಿಂಹಾಕೃತೀಯಾಗದೇ ಮತ್ರ್ಯಮೂತ್ರ್ಯಲ್ಲದೇ ತತ್ಸಭಾಸ್ತಂಭದಲ್ ಡಿಂಬ ಸಂಭಾವನಕ್ಕಾಗಿ ಸಂಭೂತನಾದಂ.ದಿತೀಪುತ್ರನಾ ರೂಪವಂಕಂಡಿದೇನೋ ಮಹಾ ಚಿತ್ರವಾಗಿಪ್ಪುದೇಸಿಂಹದಂತಲ್ಲದೇ ಮತ್ರ್ಯನಂತಲ್ಲದೇಯಾವುದೀ ಭೂತವೆಂತೆಂದು ಮೀಮಾಂಸಮಾನಾತ್ಮನಾದಂ.ಜಗತ್ಸ್ಯಾಮಿ ತಾನಾಗಲೇ 150 ತಪ್ತಭಾಂಗಾರ ಶೃಂಗಾರವಲ್ಯಂತೆ ಕಂಗಳ್ ಸಮುದ್ಯತ್ಸಟಾ ಕೇಸರಂಗಳ್‍ವಿಜೃಂಭತ್ಕರಾಳಾಸ್ಪದಂ ಉಗ್ರನಾಸಾಸಮುಚ್ಚಾಸ್ವ ನಿಶ್ವಾಸಗಳ್ ಸಂಚಲದ್ವಸ್ತವ್ಯಾಳ ಕ್ಷುರಾಂತೋಗ್ರ ಜಿಹ್ವಾಗ್ರ ಲೇಲೀಹನಂಗಳ್ ಭ್ರಮದ್ಭ್ರೂಲ್ಪಲಂಗಳ್ ಹನೊರೋಷಭೀಷ್ಣಂಗಳುಂ ಊಧ್ರ್ವಕರ್ಣಂಗಳುಂ ಭೂಮಿ ಭೃ ತ್ಕಂದರಾಶ್ಚರ್ಯವವ್ಯಾತ ಘೋರಾಸ್ಯನಾಸಾಪುಟಂಗಳ್ ಅದೀರ್ಘೊನ್ನತಗ್ರೀವವುಂದೀರ್ಘದಂತೊಪ್ಪುವೋ ದೇಹವಂ ವಿಸ್ತøತೋ160 ಶುಂಡಾಲ ಶುಂಡಪ್ರಕಾಂ170 ಡ ಪ್ರಚಂಡೋಲ್ಲಸದ್ದೋಹ ಸಾಹಸ್ರ ದೀಪ್ತಾಯುಧಾಭೋ ನಖಾನೀಕವುಂ ಚಕ್ರ ಶಂಖಾದಿ ನಾನಾಯುಧ ಶ್ರೇಷ್ಠ ವಿದ್ರಾವಿತಾsಭದ್ರ ರಕ್ಷಃ ಪಿಶಾಚಾಸುರೋದ್ರೇಕವುಂಪ್ರೋನ್ನಿತಂಬೋರು ಸತ್ಸಾನು ಜಂಘಪ್ರದೇಶಾವೃತ ಪ್ರೋಲ್ಲಸತ್ಪೀತ ಕೌಶೇಯವುಂಬದ್ಧಕಾಂಚೀಕಟಿಸ್ಥಾನವುಂ ಮಂಜುಮಂಜೀರ ಸಂಚಿನ್ನನಾದಾಂಘ್ರಿಕಂಜಾತ ವಿನ್ಯಾಸವುಂ ಕೋಟಿ ಮಾರ್ತಾಂಡ ಸಂಕಾಶವುಂಪೋಲ್ವುದಂಥಾ ದುರಾಲೋಕವಂತಿಪ್ಪ ಜ್ವಾ180 ಲಾ ನೃಸಿಂಹಾಕೃತಿ ಸ್ವಾಮಿನಂ ನೋಡುತಾದೃಷ್ಟಿಗಳ್ ಬಾಗೆ ತಾ ನಿಂತು ನನ್ನ ವರಜಾರಾತಿಯಾದ ಸ್ವಯಂ ಜ್ಯೋತಿ ಈ ರೀತಿ ತಾನಿಂದಿಗೇ ನಾರಸಿಂಹಾಕೃತೀಯಾಗಿ ನಾಂಪುತ್ರಂ ಸಂಹಾರಕುದ್ಯುಕ್ತನಾಗಿಪ್ಪೊಡೇಎನ್ನ ಸಂಹಾರಕಾಗಿಲ್ಲಿಗೇ ಬಂದನೋಇನ್ನು ಮೇಲೀತನಿಂದೆನ್ನಗೇ ಮೃತ್ಯು ತಾಸಿದ್ಧವಾಂತಿಪ್ಪುದೇನೋ ಪುರಾಣ ಪ್ರಸಿದ್ಧೋಕ್ತ್ಯಭಿವ್ಯಕ್ತಿಗೈತೇನಹೋ ಎಂದು ಮಾತಾಡುತಾ ನಿಂತು ಉದ್ಯದ್ಗದಾಧಾರಿ ತ 190 ಪೂರ್ವದಲ್‍ಅಸ್ಯತೇಜೋಂಶದಿಂದಲ್ ಜಗಧ್ವಾಂತ ಯಾವತ್ತುಮಿಂ ತಾ ಸ್ವಯಂ ಪಾನಮಾಡಿಪ್ಪ ಸತ್ಯಾತ್ಮಗೀ ನಾರಸಿಂಹಾತ್ಮಗೇ ಈ ಹಿರಣ್ಯಾಸುರ ಶ್ರೇಷ್ಠ ಸಂಹಾರ ಹೆಚ್ಚಲ್ಲವಂತಾದರುಂ ಲೋಕದೃಷ್ಟ್ಯಾನುಸಾರ ಕ್ರಿಯಾಕಾರಿಯಾಗಿಪ್ಪ ನೃಸಿಂಹನುದ್ಯದ್ಗದಾಧಾರಿ ತಾನಾಗಿ ಸದ್ವಿದ್ಯುದಾಭ್ಯೋದ್ಯದು 200 ದ್ವೇಗವೇಗೋರು ಸಂಪದ್ಗದಾ ದಂಡವಂಕೊಂಡು ಯುದ್ಧಕ್ಕೆ ಬಾಹೋ ಮಹಾದೈತ್ಯವರ್ಯನ್ನ ತಾ ನೋಡಿ ರೋಷೋಜ್ವಲ ಜ್ವಾಲೆಗಳ್‍ಲೇಲಿಹಾನೋಲ್ಲ್ಲಸಜ್ಜಿಹ್ವೆಯಿಂದಲ್ ಪ್ರಕಾಶೈಸುತಾ ಚೀರುತಾಗಾಟ್ಟಹಾಸಕ್ರಮನ್ಯಾಸದಿ ಹಾರುತಾ ಕೋಟಿ ಸೂರ್ಯಪ್ರಭಾಬೀರುತಾ ಆ ಗರುತ್ಮಂತ ಕಾಳಾಹಿಂಪಿಡಿವನಂತೊಪ್ಪಿ ತಾನಾ ದಿತೀಪುತ್ರನಲ್‍ನೂಕಿದಂ ಶೀಘ್ರದಲ್ ಪಿಡಿದನಾ ದೈತ್ಯರಾಜೇಂದ್ರನಾವೇಳೆ ತದ್ಧಸ್ತದೋಳ್ ಸಿಕ್ಕದೇ 210 ಸುಕ್ಕದೇ ಘಕ್ಕನೇ ಬಿಡಿಸಿಕೊಂಡಾ ಗದಾದಂಡವಂ ಕೊಂಡು ಸನ್ನದ್ಧ ಸದ್ಯುದ್ಧವಂಮಾಡುವೋನಂತೆ ಯಾವಾಗ ನೃಸಿಂಹನಲ್‍ಸಿಕ್ಕಿ ಮತ್ತೇಬಿಡೂವಾದನಾ ವೇಳೆಯಲ್‍ಶರ್ವ ಶಕ್ರಾದಿ ದಿಕ್ಪಾಲಕಾನೀಕವುಂಸೂರ್ಯಚಂದ್ರಾದಿ ಸರ್ವಗ್ರಹಕ್ರ್ಷಾವಳೀಲೋಕವುಂ ಮೇಘಸಂತಾನದೋಳ್ ಲೀನವಾಗಿದ್ದು ಇನ್ನೇನು ಈ ದೇವತಾರಾತಿ ಈನಾರಸಿಂಹಾತ್ಮನಲ್ ಸಿಕ್ಕದೇ ದಕ್ಕದಂತಿಪ್ಪನೇ ಈತನೀ ದುಷ್ಟ ದೈತ್ಯನ್ನ ಗೆ 220 ಲ್ಲಾರನೋ ಗೆಲ್ವನೋ ಎಂದು ತದ್ವೀರ್ಯವಂತಿಳಿಯದೇ ಭ್ರಾಂತಚಿಂತಾಂತರಂಗೋದ್ಯದುದ್ವೇಗದಿಂ ಕಾಂಬಂತಿಪ್ಪುದು.ಆಮೇಲೆ ಢಾಲ್ ಕತ್ತಿ ಕೈಗೊಂಡು ಆಯಾಸದಿಂದಲ್ಲಿ ಆ ದೈತ್ಯನಾನಾರಸಿಂಹಾತ್ಮನಲ್ ಸಂಗರ ಶ್ರಾಂತಿ ಮತ್ತೇನು ತಾ ಕಾಣದೇ ದೂಕಿದಂ ತಾಕಿದಂಸೋಕಿದಂ ಅಂಘ್ರಿವಿನ್ಯಾಸಗಳ್ ಕೂಡಿ ತಾಮೇಲೆಯುಂ ಕೆಳಗೆಯುಂ ಶ್ಯೇನಪಕ್ಷಂತೆ ಸುತ್ತಾಡುತಾ ಛಿದ್ರವಂ ಕಾಣದೇ ತನ್ನನೇಪಿಡಿವುದಕ್ಕಾತನಂತೋಡುತಾ ಬಾಹೊ ಬ 230 ಲ್ಲಿಷ್ಠನಾ ಅಟ್ಟಹಾಸೈಸಿಯುಕ್ಕೇಸರಂಗಳ್ ಪ್ರಸಾದೈಸಿ ಕ್ರೂರಾಹಿತಾನಂದಘಗ್ರಾಹಿಯಂತೇ ಸ್ವಭಾ ಸಾಸಿರಂ ಸೂಸಿ ಜಂಘಾಲ ಲೀಲಾ ಸಮುಲ್ಲಂಘನಾ ಗೋಪದಿಂಹಾರಿಯಾ ನಾರಹರ್ಯಕ್ಷನಾ ದೈತ್ಯದಕ್ಷನ್ಪಿಡಿರ್ದಂ ಫಟಾಫಟ್ ತಲಾಘಾತವಂಗೈಲ್ಬಡಿರ್ದಂ ಥಟಾಥಟ್ ಪದಾಘಾತದಿಂ ದಲ್ ಹೊಡೆರ್ದಂ ಗದಾಘಾತದಿಂದಲ್ ಮಹೋರಸ್ಕಿಡಿರ್ದಂ ಸಭಾದ್ವಾರದಲ್ ಹಾಕಿ ಭಾಸ್ವನ್ನಖ ಶ್ರೇಣಿಯಿಂದಲ್ ಫಟಾಫಟ್ ಗುರು240 ತ್ಮಂತಕಾಲಾಹಿನಂ ಸೀಳುವೋ ರೀತಿ ಜಂಭಾರಿದಂಭೋಳಿಯಂತಾಗಲುಂ ಸೀಳುತಿರ್ದಾಮಹಾದೇವನ್ನಾ ಹಗಲ್ ರಾತ್ರಿಯೊಂದಲ್ಲದ್ಹಾಗೇ ದಿವಾಸಂಧಿಯಲ್ ಸೀಳಿದಂ.ಘೋರ ಸಂರಂಭ ದಂಷ್ಟ್ರೇಕ್ಷವ್ಯಾವೃತ್ಕರಾಳಾಕ್ಷನಾಗಿ ಸ್ವಜಿಹ್ಪಾಗ್ರದಿಂದಲ್ ಲಸದ್ವ್ಯಾತ್ತ ವಕ್ತ್ರಾಂತ ಶೋಣಿಯ ಮಾನಾಧರಾದ್ಯಂತವಂ ಲೇಲಿಹಾನೋಗ್ರವಂ ತೋರುತಾರಾಕ್ಷಸ ಶ್ರೇಷ್ಠನಂ ಪಿಡಿದು ವಕ್ಷೋನ್ನತಸ್ಥಾನವಂ ತೋಡಿ ಕಾಸಾರವಂ ಮಾಡುತಾ 250 ತುಂಬಿ ಶುಂಡಾಲ ಸಂಹಾರದಲ್ ಮುಂಚುವೋ ಘೋರ ಪಂಚಾನನೋದಾರ ಲೀಲೆಂಗಳಂ ಬೀರುತಾ ರಾಕ್ಷಸಾಧ್ಯಕ್ಷ ವಕ್ಷಸ್ಸಿನೋಳ್ ಕಿತ್ತುತಾ ಹಾರಗಳ್‍ಮಾಡಿಕೊಂಡೊಪ್ಪಿ ತದ್ರಕ್ತ ಸಿಕ್ತಾನನೋದ್ಯಚ್ಛಟಾ ಕೇಸರಂಗಳ್ ಪ್ರಕಾಶೈಸುತಾ 260 ದೈತ್ಯರಾಜೇಂದ್ರನಾ ಪ್ರಾಣಗಳ್‍ಗೊಂಡನಾಮೇಲೆ ಸುತ್ತಿದ್ದ ತದ್ಭಂಧು ಸಂದೋಹದಲ್ಲಿದ್ದನೇಕಾಸುರೀನೀಕವಂ ಸಾಯುಧೋದ್ರೇಕವಂ ಅಲ್ಲಕಲ್ಲೋಲವಂ ಮಾಡಿ ಚಂಚನ್ನಖಶ್ರೇಣಿಯಿಂ ಸಂಹರಂ ಮಾಡಿದಂ.ಆಗ ತದ್ಭೀಕರಾಕಾರವಂ ಕಾಂಬ ಶಕ್ತ್ಯಾವುದಂ ಕಾಣದೇ ತತ್ಸಟಾ ಕೇಸರೋದ್ಭೂತ ಸಂಘಾತಗಳ್ ಘೋರ ಜೀಮೂತಗಳ್‍ಸರ್ವವಂ ನೋಡುತಾ ಮತ್ರ್ಯಸಿಂಹೋಗ್ರದೃಷ್ಟಿಜ್ವಲಜ್ವಾಲೆಗಳ್ ಸೈಸದೇ ಸೂರ್ಯಚಂ270 ಪಾದ ಸಂಘಟ್ಟದಿಂದಲ್ ಧರಾಚಕ್ರವಲ್ಲಾಡಿತಾಘೋರ ತೇಜಸ್ಸಿಗವಕಾಶಂಗಳಾಕಾಶವೂಬಾಡಿತಾ ಶಾಕಿನೀ ಡಾಕಿನೀ ಮುಖ್ಯ ದು 280 ಷ್ಟಗ್ರಹಾನೀಕವುಂ ಭೀತಿಗೊಂಡೋಡಿತಾಮೇಲೆ ಉದ್ಯತ್ಸಭಾ ಮಧ್ಯೆ ದೈತ್ಯೇಂದ್ರ ಸಿಂಹಾಸನಸ್ಥಾನದಲ್ ನಾರಸಿಂಹಂ ಸಮಾಸೀನನಾಗಿಪ್ಪನಾ ತೇಜ ಓಜ ಪ್ರಭಾಪುಂಜರಂಜನ್ನ ಭಾಸ್ವತ್ಕರಾಳೋಗ್ರ ಜಿಹ್ವ ಸ್ಫುರದ್ದಂಷ್ಟ್ರ ವಕ್ತ್ರನ್ನ ಬಿಭ್ರಲ್ಲಸದ್ಭ್ರೂತನಂ ಆ ಮಹಾಕೋಪ ಸಂರಂಭ ಗಂಭೀರ ನೇತ್ರನ್ನ ಕಣ್ಣೆತ್ತಿ ಕಾಂಬೋದರಲ್‍ಬ್ರಹ್ಮ ರುದ್ರಾದಿಗಳ ಶಕ್ತಿಯುಂ ಸಾಲದೇದೂರದಲ್ ಪಾಶ್ರ್ವ ಭಾಗಸ್ಥರಾಗಿಪ್ಪರಂತೇ.290 ಆಗ ಮೂರ್ಲೋಕ ಸಂತಾಪಿಯಾಗಿಪ್ಪ ದೈತ್ಯನ್ನ ನಾರಾಯಣಂ ನಾರಸಿಂಹಾಕೃತೀಯಾಗಿ ಸಂಹಾರವಂ ಮಾಡಿದಂ ಎಂಬುದಾವಾರ್ತೆ ಕೇಳುತ್ತಲೇ ದೇವನಾರೀಜನಂಗಳ್ ಪ್ರಹರ್ಷಾನನೋತ್ಪುಲ್ಲರುಲ್ಲಾಸದಿಂವಾಸಿತಾಮೋದ ಮಂದಾರ ಕುಂದಾರವಿಂದಾದಿ ಸತ್ಪುಷ್ಟ ಸಂತಾನ ವರ್ಷÀಂಗಳಂವರ್ಷಿಸುತ್ತಿಪ್ಪರಾಕಾಲಾವಾಕಾಶದಲ್‍ನಿಂತು ಕಾಣೂವರಾ ದೇವದೇವೀ ಸಮೂಹಂಗಳಾಯಾವಿಮಾನಂಗಳೆಲ್ಲಾ ಮಹಾ 300 ಸಂಕುಲೀ ಭೂತವಾಗಿಪ್ಪವಾ ದೇವತಾದುಂದುಭಿಧ್ವಾನ ಇಂಬಾಗಿ ತಾ ದೇವಗಂಧರ್ವ ಸಂಗೀತ ನಾಟ್ಯಂಗಳಿಂದಪ್ಸರಾಕಾಮಿನೀ ತಾನ ಗಾನಂಗಳಿಂದಾಗ ಆಕಾಶವುಂ ತುಂಬಿತಾ ಬ್ರಹ್ಮರುದ್ರೇಂದ್ರ ಮುಖ್ಯಾಮರ ಶ್ರೇಣೀಗಳ್ ಪಿತೃಗಳ ಮನ್ವುಗಳ್‍ಸಿದ್ಧ ವಿದ್ಯಾಧರಾನೀಕಗಳ್À ಅಪ್ಸರಾ ಕಾಮಿನೇರಾ ಪ್ರಜಾಪಾಲ ಗಂಧರ್ವರಾಯಕ್ಷ ಕಿಂಪುರುಷರಾ ಚಾರಣಾನೀಕವಾಕಿನ್ನರಸ್ತೋಮ ನಂದಾ ಸುನಂದಾದಿ ತ 310 ತ್ಪಾರ್ಷದಾನೀಕವೆಲ್ಲಾ ಶಿರೋಭಾಗದಲ್‍ಪಾಣಿಗಳ್ ಜೋಡಿಸೀತೆಲ್ಲ ಮುನ್ನಾತಿ ದೂರಸ್ಥರಾಗಿದ್ದು ನಿಂತಾಮೃಗೇಂದ್ರಾಸನಾಸೀನನಾಗಿಪ್ಪ ಅತ್ಯುಗ್ರ ತೇಜಸ್ವಿನಂಮೆಲ್ಲನೇ ಬೇರೆ ಬೇರಾಗಿ ಕೊಂಡಾಡುತಾನಿಂತರಾವೇಳೆಯಲ್ ಬ್ರಹ್ಮ ತಾ ಭಾಷಿಪಂನಿನಗೆ ವಂದೀಸುವೆಂ ತಂದೆ ನೀನೆ ಅನಂತಂ ದುರಂತ್ಯೋರು ಶಕ್ತ್ಯುಳ್ಳವಂ ಲೋಕಪಾವಿತ್ರ್ಯ ಕಮ್ರ್ಯಂ ಮಹಾಶ್ಚರ್ಯ ವೀರ್ಯ ಜಗತ್ಸøಷ್ಟಿ ಸಂರಕ್ಷ ಸಂಹಾರಗಳ್ ಲೀಲೆಯಿಂ320 ದಲ್ ಸದಾ ಮಾಳ್ಪೆಯೋ ಅವ್ಯಯಾತ್ಮನ್ನೆ ನೀ ನೆಂದನು.ಈಶ ತಾ ಬಂದೆಲೋ ತಾತನೇನಿನ್ನಗೀ ಕೋಪ ಬಾಹೋದಕಿಂದಾ ಯುಗಾಂತಾಖ್ಯ ವೇಳ್ಯಲ್ಲವೋ ಕ್ಷುಲ್ಲನೀ ದೈತ್ಯನೀವೇಳೆ ನಿನ್ನಿಂದ ತಾನ್ ಮೃತ್ಯುಪಾಲಾದನಂತಿನ್ನುಮೇಲ್ ಕೋಪ ಸಂಕ್ಷೇಪ ಮಾಡಯ್ಯ ಈದೈತ್ಯ ಪುತ್ರನ್ನ ಪ್ರಹ್ಲಾದನಂ ಸರ್ವದಾನಿನ್ನ ಭಕ್ತನ್ನ ಸಂರಕ್ಷಿಸೋ ಭಕ್ತವಾತ್ಸಲ್ಯದಿಂದೆಂದನು.ಇಂದ್ರ ತಾ ನಿಂತೆಲೋ ಸ್ವಾಮಿಯೇ ಅಣ್ಣತಮ್ಮಂದ್ರ ದೀಟಾಗಿ ನೀನೇ ಸದಾ ನಮ್ಮ ಸಂ330 ರಕ್ಷಿಸೂವೇಯೊ ನಿನ್ನಿಂದಲಾ ಯಜ್ಞ ಭಾಗಂಗಳುಂ ನಮ್ಮಗೇ ಮತ್ತೆ ಉಂಟಾದವಯ್ಯಾ ಹಿರಣ್ಯಾಸುರಂಗಾದುದೀಗೆಮ್ಮ ಸುಸ್ವಾಂತಗಳ್ ನಿನ್ನಗಾವಾಸಯೋಗ್ಯತ್ವ ಪೊಂದಿಪ್ಪುವಂತೆ ವಿಕಾಸ್ಯೆಸಿತೋ ನಿನ್ನ ಶುಶ್ರೂಷೆ ಬೇಕೆಂಬ ಲೋಕಾಳಿಗೇ ಕಾಲಸಂಗ್ರಸ್ತವಂತಿಪ್ಪ ಲೋಕಾಳಿಯಲ್ ಯಾವದೂಲಕ್ಷ್ಯವಿಲ್ಲಂತೆ ಮುಕ್ತ್ಯಾದರುಂ ಹೆಚ್ಚು ನಿಶ್ಬೈಸುವಂತೇ ನೃಹರ್ಯಾತ್ಮನೇ ಮಿಕ್ಕ ಸಂಭೂತಿಯಿಂದಾಗಬೇಕಾದುದೇ ನಿಪ್ಪುದೆಂದಂ.340 ಬೊಮ್ಮ ನೀನೆಮ್ಮ ಶ್ರೇಯಸ್ಸಿಗೆ ಮುನ್ನ ನಿನ್ನ ಸ್ವತೇಜಾಂಶವನ್ನೇ ತಪೋಯೋಗವಂ ನಮ್ಮಗೇಕೊಟ್ಟೆಯೊ ಆ ತಪಸ್ಸಿಂದ ನಿನ್ನಲ್ಲಿಹೋವಿಶ್ವವೆಲ್ಲಾ ಬಹೀರಂಗ ಮಾಡೀದೆಯೋನಮ್ಮದಂಥಾ ತಪಸ್ಸಂ ಹಿರಣ್ಯಾಸುರಶ್ರೇಷ್ಠತಾ ಕದ್ದನಂತಿದ್ದನೇ ಈಗ ನೀನೀ ಜಗದ್ರಕ್ಷಣಕ್ಕಾಗಿಯೇ ಭಕ್ತ ಸಂರಕ್ಷನೇ ನಾರಹರ್ಯಕ್ಷನಾಗಿನ್ನು ರಕ್ಷೋಗಣಾಧ್ಯಕ್ಷ ವಕ್ಷಸ್ಕವಂ ಸೀಳಿ ನೀ 350 ನಮ್ಮಗೆಲ್ಲಾ ತಪೋಯೋಗವಂ ಮತ್ತೆ ತಂದಿತ್ತೆಯಂತೆಂದರು.ಪಿತೃಗಳ್ ನಿಂತೆಲೋಧರ್ಮರೂಪೀಯೆ ಇಂಥಾ ಕ್ರಿಯಾಲಾಪಗಳ್‍ಪುತ್ರರಿಂದಲ್ ತಿಲೋದಂಗಳಿಂದಲ್ ಮಹಾಪುಣ್ಯ ತೀರ್ಥಂಗಳಲ್ ಕ್ಷೇತ್ರ ಪಾತ್ರಂಗಳಲ್‍ನಮ್ಮ ನಮ್ಮಲ್ಲಿ ಇಂತಿತ್ತ ಶ್ರಾದ್ಧಂಗಳಂತನ್ನ ಪ್ರೀತ್ಯರ್ಥವೆಂತಿರ್ದನೈ ನಾಥ ಸಂಪೂರ್ಣ ಸೌಭಾಗ್ಯ ಸಂಸ್ಥಾನಿಯೋ ನೀನು ಭಾಸ್ವನ್ನಖ ಶ್ರೇಣಿಯಿಂದಲ್ ಮಹಾ ದೈತ್ಯವಕ್ಷಸ್ಕವಂ ಸೀಳಿ ಇತ್ತಾವ ಪಾಂತ್ರಾತ್ಮಿಕಾ 360 ಶ್ರಾದ್ಧ ನಮ್ಮಲ್ಲಿ ತಾ ಸೇರಿತೈ ನಾರಹರ್ಯಾತ್ಮನೇ ನಿನ್ನಗೇ ನಾವು ಸಾಷ್ಟಾಂಗ ಪ್ರಣಾಮಗಳ ಮಾಡುವೇವೆಂದರು.ಸಿದ್ದರೆಲ್ಲಾಂಜಲೀಬದ್ಧರಾಗೆದ್ದೆಲೋಅಷ್ಟಸಿದ್ಧಾತ್ಮನೇ ನಮ್ಮಲಿದ್ದಾ ಮಹಾಯೋಗ ಸಿದ್ಧಿಂಗಳೆಲ್ಲಾ ತಪೋಯೋಗಸಾಮರ್ಥ್ಯದಿಂ ಕದ್ದನೇ ಗೆದ್ದೆನೆಂತಿದ್ದ ದೈತ್ಯ ಪ್ರಬುದ್ಧನ್ನ ವಕ್ಷಸ್ಕ ಸಂಭಿನ್ನವಂಮಾಡಿಯಾ ನಮ್ಮಗಾಧಾರವಾಗಿದ್ದ ಸದ್ಯೋಗ ಸಿದ್ಧಿಂಗಳಂ ಮತ್ತೆ ನೀನಿತ್ತೆಯೋ 370 ನಾರಸಿಂಹಾತ್ಮ ನಾವೆಲ್ಲರುಂ ನಿನ್ನಗೇವಂದನಂಗಳ್À ಸಮರ್ಪೀಂಸುವೇವೆಂದರು.ಆಮೇಲೆ ವಿದ್ಯಾಧರಾನೀಕಗಳ್ ನಿಂತೆಲೋಸರ್ವ ವಿದ್ಯಾತ್ಮನೇ ನಮ್ಮಲಿದ್ದಾ ಪೃಥಕ್‍ಧಾರಣಾಯೋಗ ಸಂಪಾದ್ಯಗಳ್ ವಿದ್ಯೆಗಳ್‍ನಷ್ಟಗೈಸಿದ್ದನತ್ಯಂತ ದರ್ಪಿಷ್ಠನೀಅಜ್ಞ ದೈತ್ಯೇಂದ್ರನಾ ಯಜ್ಞದೋಳ್‍ಬದ್ಧ ಪಶ್ವಂತೆ ತಾನಿಂದು ನಿನ್ನಿಂದಲಾ ಮೃತ್ಯುಪಾಲಾದನೇ ನಮ್ಮ ಸದ್ವಿದ್ಯೆಗಳ ಮತ್ತೆ ನಮ್ಮಲ್ಲೆ ಬಂದಿಪ್ಪುದಯ್ಯಾ ನೃಹರ್ಯಾತ್ಮ ತು 380 ನಾಗರಾವೇಳೆಲೋsನಂತನೇ ನಮ್ಮಲಿದ್ದಾ ಮಹಾರತ್ನಗಳ್‍ಮಾನಿನೀ ರತ್ನಗಳ್ ತಾ ಬಲಾತ್ಕಾರದಿಂಗೊಂಡನೀ ಪಾಪಿ ದೈತ್ಯನ್ನ ವಕ್ಷಸ್ಕವಂಸೇದಿ ಈ ರತ್ನಗಳ್ ಮತ್ತೆ ನೀ ನಮ್ಮಗೇಸೇರುವಂತೇ ದಯಾಮಾಡಿದೀಯೈ ನಮಸ್ತೇ ನಮೋ ಎಂದರು.ಮನ್ವುಗಳ್‍ನಿಂತೆಲೋಧರ್ಮ ಸಂರಕ್ಷನೇ ನಾವು ನಿನ್ನಾಜ್ಞೆಯಿಂದೀ ಪ್ರಜಾನೀಕಕೇರ್ಪಾಟು ಮಾಡಿದ್ದ ಮರ್ಯಾದೆಗಳ್ ಸರ್ವವೀ ದೈತ್ಯ ತಾ ಕೆಡಿಸಿ ಕ390 ಲ್ಲೋಲವಂ ಮಾಡಿ ನಿನ್ನಿಂದಲೀ ಈಗ ಸಂಹಾರಿಸಲ್ಪಟ್ಟನೇ ಇನ್ನು ಮೇಲ್ ನಾವು ನಿಮ್ಮುಟ್ಟಕ್ತಿಗಳ್ ನಡೆಸುವೇವೆಮ್ಮಗಾಜ್ಞಾಪಿಸೋನಾವು ತ್ವದ್ದಾಸ್ಯವಂ ಬಯಸಿದೇವೆಂದರು.ಆ ಪ್ರಜೇಶ್ಯಾಳಿಗಳ್À ನಿಂತು ಕೇಳೋ ``ಪ್ರಜೇಶಾ ವಯಂ ತೇ ಪರೇಶಾಭಿಸೃಷ್ಟಾ ನ ಯೇನ ಪ್ರಜಾ ವೈ ಸೃಜಾಮೋ ನಿಷಿದ್ಧಾಃ ಸ ಯೇಷ ತ್ವಯಾ ಭಿನ್ನವÀಕ್ಷಾನು ಶೇತೇ ಜಗನ್ಮಂಗಲಂ ಸತ್ವಮೂರ್ತೇವತಾರಃ’’ ಪ್ರಭೋಎಂದರು. ಆಗ ಗಂಧರ್ವರೆಲ್ಲಾ ಎಲೋ 400 ಸ್ವಾಮಿಯೇ ನಾವು ನಿಮ್ಮ ಪ್ರಸನ್ನಾವತಾರೈಕ ಲೀಲಾ ಕಥಾಸೂಕ್ತಿಗಳ್ ನಾಟ್ಯ ಶೃಂಗಾರ ಚೇಷ್ಟಾ ಕಳಾದರ್ಶನಾದ್ಯಭಿನಯಾವ್ಯಕ್ತಿಗಳ್ ತಾನ ಗಾನಾನುಸಂಧಾನ ಸಮ್ಮೋಹಿನೀ ಶಕ್ತಿಗಳ್ ಕೂಡಿ ಆಶ್ರಾಂತವುಂನಿನ್ನ ಕೊಂಡಾಡುತಾ ಗಾಯಕಶ್ರೇಷ್ಠರಂತಿಪ್ಪೆವೇ ತನ್ನ ಸದ್ವೀರ್ಯ ತೇಜೋಬಲೋಜಸ್ಕದಿಂದಲ್ ಪ್ರಭೋ ನಮ್ಮ ಸಾಮಥ್ರ್ಯಗಳ್‍ತನ್ನಗಾಧೀನ ಮಾಡಿಟ್ಟುಕೊಂಡಿದ್ದನೀದೈತ್ಯನೀ ವೇಳೆ ನಿನ್ನಿಂದ ಪಂಚತ್ವವಂ 410 ಆ ಯಕ್ಷರೆಲ್ಲಾ ಎಲೋ- 420 ಧ್ಯಕ್ಷನೇ ತ್ವನ್ಮನೋಭಿಜ್ಞ ಕರ್ಮಂಗಳಿಂದಲ್ ಸದಾ ನಿನ್ನಗೇ ಭೃತ್ಯರಾಗಿಪ್ಪ ನಾವೆಲ್ಲರುಂ ದೈತ್ಯಗೇ ಪಾಲಕೀ ಹೊರ್ವರಂತಾದೆವೇ ನಮ್ಮ ಸಂತಾಪಗಳ್ ಬಲ್ಲ ನಿನ್ನಿಂದಲೀ ದೈತ್ಯನೀ ವೇಳೆ ಪಂಚತ್ವವಂಹೊಂದಿದಂ ನಾವು ಸಂತೋಷವಂ ಕಂಡೆವಯ್ಯಾ ನೃಪಂಚಾಸ್ಯನೇ ಪಂಚವಿಂಶಾಖ್ಯ ನೀ ನೆಂದರು. ಆಮೇಲೆ ಕಿಂಪೂರುಷಾನೀಕವುಂಬಂದೆಲೋ ಪುರುಷನೇ ನಾವು ಕಿಂಪೂರುಷರ್‍ನೀಂ ಮಹಾಪೂರುಷಂ ಈಶ್ವರಂ ನಿನ್ನ ಕೈ 430 ನಿತ್ಯ ಕೊಂಡಾಡುತಾಭೂರಿಯೂಟಂಗಳಂ ಉಣ್ಣುತಾಲಿದ್ದೆವೇತಾನಿವೆಲ್ಲಾ ಪರಿಗ್ರಾಹಿಸೀ ದೈತ್ಯ ನಿನ್ನಿಂದ ಪೆಟ್ಟಾಂತು ತಾ ಪೋದನೇ ದೈವದಿಂ440 ಕಿನ್ನರ ಪ್ರಾಣಿಗಳ್‍ಪೂರ್ವದಲ್ ನಿನ್ನ ದಾಸಾನುದಾಸರ್ಗಳಾಗಿಪ್ಪೆವೀ ದೈತ್ಯ ನಮ್ಮಿಂದ ತಾ ಬಿಟ್ಟಿಕಾರ್ಯಂಗಳೆಲ್ಲಾ ಸದಾ ಮಾಡಿಸೂವಂ ವiಹಾದು:ಖಗೋಣಿಸುವಂ ಇಂಥ ಪಾಪಿಷ್ಠ ದೈತ್ಯನ್ನ ಸಂಹಾರ ವಂ ಮಾಡಿದೀ ಇನ್ನು ನೀನಮ್ಮಗೆಲ್ಲಾ ಸಮುಲ್ಲಾಸಗಳ ಶ್ರೇಯಗಳಕೊಟ್ಟು ಸಂರಕ್ಷಿಸೋ ನಾರಹರ್ಯಕ್ಷನೇ ಎಂದರು. 450 ಅಚ್ಯುತದ್ವಾರಪಾಲಾಳುಗಳ್‍ನಿಂತೆಲೋ ಭೂಮನೇ ಕಂಡೆವೋ ಇಂದಿಗೇನಾರಹರ್ಯದ್ಭುತಾಕಾರವಂ ಲೋಕಕೆಲ್ಲಾ ಸುಖಾನಂದವಂ ನಮ್ಮಗಾಧಾರ ನೀನಲ್ಲದಿನ್ನಿಲ್ಲವೋ ಈಗ ವೈಕುಂಠದಲ್‍ನಿನ್ನ ದ್ವಾರಸ್ಥನಾಗಿಪ್ಪನಾ ವಿಪ್ರರಿಂದಲ್ ಮಹಾದೈತ್ಯಜನ್ಮಕ್ಕೆ ತಾ ಬಂದನೇ ಬಂದನಂತಿಂದಿಗೇ ವೈರಮಾರ್ಗಕ್ಕೆ ನೀನಿಂದು ಗೈದಂಥ ಈ ದೈತ್ಯಸಂಹಾರ ವ್ಯಾಪಾರವೆಮ್ಮಲ್ ಮಹಾನುಗ್ರಹಕ್ಕಾಗಿ ನೀ ಬಂದೆ ನಾವ್ 460 ಸ್ವಾಂತ ಸಂತೋಷ ಮಾಡೆಂದು ಬಿನ್ನಾಹಗಳ ಮಾಳ್ಪರು.ಆಮೇಲೆ ಆ ಬಾಲೆ ಸಾಕ್ಷಾಜ್ಜಗನ್ಮೋಹಿನೀ ಲೀಲೆಗಳ್ ಮಿಂಚುತಾ 470 ಪೂಂಚುತಾ ಬಂದು ಸಿಂಹಾಸನಸ್ಥಾನದಲ್‍ಉಗ್ರನಂತಿಪ್ಪನೃಸಿಂಹ ಮೂತ್ರ್ಯುಗ್ರವಂಕಂಡತಿವ್ಯಗ್ರಳಂತಾಗಿ ಆ ತಾಯಿ ಹಿಂದಕ್ಕೆ ತಾ ಬಂದಳಮ್ಮಮ್ಮ ಏಂ ಗುಮ್ಮನಂತಪ್ಪÀನೇ ಸ್ವಾಮಿ ಮುನ್ನಿಂತು ಆಶ್ಚರ್ಯವಂಈಸು ವಿಕ್ರಮ್ಯವಂ ಎಂದಿಗಾನೆಲ್ಲಿ ಕಂಡಿಲ್ಲವಲ್ಲಾ ಕಿವಿಲ್ಯಾದರುಂ ಕೇಳಲೇ ಇಲ್ಲವಲ್ಲಾ ಇದೇನೋ ವಿಚಿತ್ರಾಕÀೃತೀಯಂತೆ ತೋರೂವನೆಂದಂಜಿಕೇಗೊಂಡ ರೀತಿಂದ ತಾ ಹೆಜ್ಜೆ ಕಾಲ್ಗೆಜ್ಜೆಗಳ್ ಸಪ್ಪುಳಂ480 ಮಾಡದೇ ಮೆಲ್ಲನೇ ಪಾಶ್ರ್ವದಲ್ ನಿಂತಳುಆಮೇಲೆ ಪ್ರಹ್ಲಾದನಂ ಕಂಡು ಸಂಭಾಷಿಪಂಬ್ರಹ್ಮ ಬಾರೈ ಎಲೋ ವತ್ಸ ನೀನೀ ನೃಸಿಂಹಾತ್ಮನಲ್ ಮೆಲ್ಲನೇ ಸೇರಿ ನಿಮ್ಮಪ್ಪಗಾ ಗಿಂದು ನಮ್ಮಪ್ಪನಲ್ಲಿಪ್ಪ ತತ್ಕೋಪ ಸಂಕ್ಷೇಪ ಗೈಸೆನ್ನೆ ತದ್ವಾಣಿಗಳ ಕೇಳುತಾಮೆಲ್ಲನೇ ಪಿಲ್ಲೆ ಪ್ರಹ್ಲಾದನಾಹ್ಲಾದದಲ್‍ವೈಷ್ಣವಶ್ರೇಷ್ಠ ತಾನಾಗ ಬಂದಂ ಮಹಾಭಕ್ತಿಯಿಂದಲ್ ಮಹೀಮಂಡಲೀ ಮೇಲೆ ಸಾಷ್ಟಾಂಗ ಬಿದ್ದಂ ನಮೋ ಎಂದು ದಂಡಪ್ರಣಾ 490 ಮಂಗಳಂ ಮಾಡುವೋ ವೇಳೆ ತನ್ನಂಘ್ರಿಕಂಜಾತದಲ್ ಬಿದ್ದ ಬಾಲನ್ನ ಬಾಳಾ ಸುಶೀಲನ್ನ ಕಂದನ್ನ ದೃಷ್ಟಿಂದ ತಾ ಕಾಣುತಾಚಕ್ರ ಶಂಖಾಂಕಿತಾ ಶ್ರೀಲಸದ್ಬಾಹುಗಳ್‍ಚಾಚಿ ಭಕ್ತನ್ನ ತಾನೆತ್ತಿ ತನ್ಮಸ್ತಕಸ್ಥಾನದಲ್ ಪೋಕಲಾಗಿನ್ನು ಸಂಸ್ರಸ್ತ ಚೇತೋಭಯಧ್ವಸ್ಥವಂ ಸ್ವಸ್ತಿದಾನ ಕ್ರಿಯಾಭ್ಯಸ್ತವಂ ಶ್ರೀ ಸತೀ ಸ್ತಂಬಕವಿನ್ಯಸ್ತವಂಹಸ್ತವನ್ನಿತ್ತನವ್ಯಾಹತ ಸ್ಪರ್ಶದಿಂದಲ್ ವಿಧೂತಾ ಶುಭವ್ರಾತನಾಗೀಯಭಿ 500 ವ್ಯಕ್ತ ಲಕ್ಷ್ಮೀವಿಲಾಸಾತ್ಮ ಸಂದರ್ಶನೈಶ್ವರ್ಯವಂ ಕೂಡಿ ತತ್ಪಾದ ಪದ್ಮಂಗಳಂಚಿತ್ತದಿಂದಿತ್ತನಾನಂದದಿಂದಲ್ ಪ್ರಹೃಷ್ಯತ್ತನು ಕ್ಲಿನ್ನ ಚಿತ್ತಾಶ್ರುನೇತ್ರಾಬ್ಜನಾಗಿದ್ದು ಪ್ರಹ್ಲಾದನುಂ ನಾರಸಿಂಹಾತ್ಮನಲ್‍ನಿಂತು ಸಂಸ್ತೋತ್ರಗಾರಂಭಿಪಂ. ಶ್ರೀರಮಾದೇವಿ ತಾನಾಗ ಸಮ್ಮೋಹಿನೀ ಸಂಪುಗಳ್‍ಕೂಡಿ ಬಂದಾ ನೃಸಿಂಹಾಂಕದಲ್ ನಿಂತಳಾಬ್ರಹ್ಮನಾವೇಳೆಯಲ್ ನಾರಸಿಂಹಾತ್ಮನಲ್‍ಸೇರಿ ಸುಕ್ಷೀರ ನೀರಾಭಿಷೇಕಂಗಳಂ 510 ಚೀನಿ ಚೀನಾಂಬರಂಗಳ್ ಮಹಾನಘ್ರ್ಯ ರತ್ನಾವಳೀ ಭೂಷಣಂಗಳ್ ಲಸನ್ಮೌಕ್ತಿಕಾಹೀರ ಹಾರಂಗಳಂ ಗಂಧ ಕಸ್ತೂರಿಕಾಲೇಪಗಳ್ ಶ್ರೀ ತುಳಸ್ಯಾಪ್ತ ಶಾಮಂತಿಕಾ
--------------
ಶ್ರೀಪಾದರಾಜರು
ಶ್ರೀ ಸತ್ಯಸಂಧರು ಸತ್ಯ ಬೋಧರ ಕಂಡ | ಯತಿವರ್ಯ ಸತ್ಯಸಂಧ ಕೃತ್ಯ ನಿಮ್ಮದು ಆನಂದಾ ಪ ಸ್ತುತ್ಯುಯತ್ಯಾಶ್ರಮವ ವಹಿಸುತಪ್ರತ್ಸಹತ ಸಚ್ಚಾಸ್ತ್ರ ಬೋಧಕಪ್ರತ್ಯರ್ಥಿ ಮಾಯ್ಗಳ ಖಂಡಿಸುತಭೃತ್ಯ ಜನಕಭೀಷ್ಟ ಗರೆವಾ ಅ.ಪ. ಗಂಗೆಮೀಯಲು ಸಾಧು ಸಂಗದಿ ತೆರಳುತ್ತಅಂಗಜಾರಿಯ ಪುರದೀ |ಮಂಗಳಾಂಗನು ಹರಿಪದಾಬ್ಜದಿಬೃಂಗರೆನಿಸುತ ಪೂಜೆಯ ಗೈಯ್ಯಲುರಂಗ ಹರಿಪಾದಾರವಿಂದವಕಂಗಳಿಂದಲಿ ಕಂಡಯತಿಯ 1 ಗಯ ಗಧಾದರ ನಂಘ್ರಿಪ್ರಿಯವಿಂದ ಭಜಿಸಲುನಯಸುತ್ತ ಪರಿವಾರವಾ |ಮಾಯಿಗಳ ದುರ್ವಾದ ಖಂಡಿಸಿಹೇಯಮತವಿದ್ವಂಸ ಗೈಯ್ಯುತರಾಯದಶರಥ ಸುತನು ರಾಮಗೆಜಯಪತ್ರಾರ್ಪಿಸಿದ ಮಹಿಮ 2 ವಿಷ್ಣುಪಾದವ ಮನ ಮುಟ್ಟಿ ಭಜಿಸಲು ಪೋಗೆದುಷ್ಟಗಯಾಳವಾರರು |ದಿಟ್ಟತನದಲಿ ಕದವಮುಚ್ಚಲು |ಶ್ರೇಷ್ಠ ಯತಿಗಳ ಭಕ್ತಿಗೊಲಿಯುತಥಟ್ಟನೇ ಕದತೆರೆಯಲಂದಿನಅಟ್ಟಹಾಸದಿ ಪೂಜೆಗೈದ 3 ಬಾಳಲಜ್ಜೆಲಿಗಯ | ವಾಳರು ಶರಣೆನ್ನೆಲಾಲಿಸುವರ ಭಿನ್ನ ಪ |ಮೂಲರಾಮರ ಸೇವೆಯನುಗಯೆವಾಳರೆಲ್ಲರು ಮಾಡಲೆನುತಲೀಲೆಯಿಂ ಮುದ್ರಾಂಕಗೈದಘಜಾಲವನು ತಾ ಕಳೆದ ಯತಿಯ 4 ಮಹಿಷಿ ಕ್ಷೇತ್ರದಿಅಂಗವೃಂದಾವನವ ಪೊಗಿಸುತರಂಗಗುರು ಗೋವಿಂದ ವಿಠಲನಮಂಗಳ ಧ್ಯಾನದಲಿರುತಿಹ 5
--------------
ಗುರುಗೋವಿಂದವಿಠಲರು
ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ ಪ. ಪಾಕಶಾಸನವಂದ್ಯ ಪರಮ ಕಾರುಣ್ಯನಿಧಿ ಜೋಕೆಯಿಂ ಭಕ್ತರನು ರಕ್ಷಿಸಲು ಬಂದೆಯೊ ಅ.ಪ. ಸಿರಿ ಆಲದೆಲೆಯ ಮೇ- ಲೊಂದು ಬೆರಳನೆ ಚೀಪುತ ಮುಂದೆ ಶೇಷಶಯನನಾಗಿ ಬ್ರಹ್ಮನ ಪಡೆದು ಮಂದಹಾಸದಿ ನಲಿಯುತ ಇಂದಿರೆ ಸಹಿತಲಿರೆ ಭಕ್ತರೆಲ್ಲರು ಆಗ ನೋಡಲಿಲ್ಲೆಂದೆನುತ ಇಂದು ಈ ನಾಗರಾಜನ ಮಂಚವನೆ ಏರಿ ಸಿಂಧುಶಯನನೆ ಮಲಗಿದ್ಯಾ ಸ್ವಾಮಿ 1 ಅಜಗೆ ವೇದವನಿತ್ತು ಅಸುರನ್ನ ಕೊಂದು ನೀ ಭುಜಗಶಯನನೆ ಮಲಗಿದ್ಯಾ ಋಜುಗಣವಂದಿತನೆ ಬೆನ್ನಲಿ ಗಿರಿಪೊತ್ತ ಆಯಾಸದಿಂ ಮಲಗಿದ್ಯಾ ದ್ವಿಜಧ್ವಜನೆ ಭೂಮಿಯನು ಮೇಲೆತ್ತಿ ತಂದು ಸಾಕಾಗಿಲ್ಲಿ ಶಯನಿಸಿದೆಯಾ ಭಜಿಸಿದ ಬಾಲಕನ ಪಿತನೊಡನೆ ಕಾದಾಡಿ ಬಳಲಿ ನೀ ಪವಡಿಸಿದೆಯಾ ಸ್ವಾಮಿ 2 ಇಂದ್ರ ಪದವಿಗೆ ಬಂದ ಬಲೀಂದ್ರನ ನೆಲಕೊತ್ತಿ ಬಂದಿಲ್ಲಿ ಮಲಗಿಪ್ಪೆಯಾ ಕೊಂದು ಜನನಿಯ ಚಿಂತೆಯಿಂದ ಮನದಿನೊಂದು ಬಂದಿಲ್ಲಿ ಮಲಗಿಪ್ಪೆಯಾ ತಂದೆ ತಾಯಿ ಆಜ್ಞೆಯಿಂದ ಅಡವಿಯ ಅಲೆದು ಬಂದಿಲ್ಲಿ ಮಲಗಿಪ್ಪೆಯಾ ಮಂದರೋದ್ಧರ ಶ್ರೀಶ ಮಾವನ್ನ ಕೊಂದು ನೀ ಬಂದಿಲ್ಲಿ ಪವಡಿಸಿದೆಯಾ ಸ್ವಾಮಿ 3 ನಾರಿಯರ ವ್ರತ ಕೆಡಿಸಿ ನಾಚಿಕೆಯಿಂ ಬಂದು ಏರಿ ಮಂಚವÀ ಮಲಗಿದ್ಯಾ ಏರಿ ಕುದುರೆಯನು ದುಷ್ಟರ ಶಿರವ ತರಿಯುತ್ತ ಸೇರಿ ಶೇಷನ ಮಲಗಿದ್ಯಾ ಬಾರಿ ಬಾರಿಗೆ ಇಂಥ ಕಾರ್ಯಗಳ ಮಾಡಿಸಿ ಬಳಲಿಲ್ಲಿ ಮಲಗಿಪ್ಪೆಯಾ ನಾರದಾದ್ಯರ ಗಾನ ಕೇಳುತಾನಂದದಿಂ ನಿದ್ರೆಗೈಯುತ ಮಲಗಿದ್ಯಾ ಸ್ವಾಮಿ 4 ಭಕ್ತ್ರರಾಡುವ ಸಲಿಗೆ ಬಿನ್ನಪಕೆ ಬ್ಯಾಸತ್ತು ಯುಕ್ತಿಯಿಂ ಪವಡಿಸಿದೆಯಾ ಮುಕ್ತರ ಸ್ತುತಿಗೆ ನಿದ್ರೆಯು ಬಾರದೆಂತೆಂದು ಮುಕ್ತೇಶ ಇಲ್ಲಿ ಮಲಗಿದೆಯಾ ಎತ್ತ ನೋಡಲು ಮಾರ್ಗಬಿಡಳು ಕಾವೇರಿ ಎಂದು ಸೋತಿಲ್ಲಿ ಮಲಗಿಪ್ಪೆಯಾ ಚಿತ್ತಜಾಪಿತ ಸ್ವಾಮಿ ಭಕ್ತರೆಬ್ಬಿಸಲೆಂದು ಚಿತ್ತದಲಿ ಇಪ್ಪದೇನೋ ದೇವ 5 ಅಸುರರ ಕಾಟ ವೆಗ್ಗಳವಾಗೆ ಬಂದಿಲ್ಲಿ ಅಡಗಿ ನೀ ಮಲಗಿಪ್ಪೆಯಾ ಬಿಸಜನಾಭನೆ ನಿನ್ನ ಬಗೆಯರಿತು ಎಬ್ಬಿಸುವ ಬಲವಂತರನ್ಯಾರೆಲೊ ಶಶಿವದನ ಭಕ್ತರನುದ್ಧರಿಸಲೋಸುಗದಿ ಬಂದಿಲ್ಲಿ ಮಲಗಿಪ್ಪೆಯಾ ಭವ ಬಂಧನವ ಪರಿಹರಿಸಿ ಘಸನಗೊಳಿಸದಲೆ ಕಾಯೊ ಜೀಯ 6 ಏಳು ಫಣೆಯ ಸರ್ಪನ ಮೇಲೆ ಮಲಗಿ ಏಳು ಕಣ್ದೆರದು ನೋಡೋ ತಾಳಲಾರೆನೊ ನಿನ್ನ ಸೇವೆಯಗಲಿದ ದುಃಖ ಏಳು ಮನ್ನಿಸಿ ಪಾಲಿಸೊ ವ್ಯಾಳಶಯನನೆ ನಿನ್ನ ಸೇವೆಯನು ಎನ್ನಿಂದ ಲೀಲೆಯಿಂ ಸ್ವೀಕರಿಸೆಲೊ ಭಾಳ ಬೇಡುವದೇನೊ ಗೋಪಾಲಕೃಷ್ಣವಿಠ್ಠಲ ಈ ವ್ಯಾಳೆ ಎನ್ನ ಸಲಹೊ ಸ್ವಾಮಿ 7
--------------
ಅಂಬಾಬಾಯಿ