ಒಟ್ಟು 1890 ಕಡೆಗಳಲ್ಲಿ , 106 ದಾಸರು , 1489 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

[ಶ್ರೀ ಪ್ರಾಣದೇವರ ಅನುಗ್ರಹವಿಲ್ಲದೆ ಶ್ರೀ ಹರಿಯು ಎಂದಿಗೂ ಒಲಿಯನೆಂಬ ಪ್ರಮೇಯ. ಪೂರ್ವಜನ್ಮದಲ್ಲಿ ವಾಲಿ ಹನುಮಂತನ ಅನುಗ್ರಹವಿಲ್ಲದ ಕಾರಣ ರಾಮನು ನಿಗ್ರಹಿಸಿದ. ಅರ್ಜುನನಾದಾಗ್ಗೆ ಭೀಮನು ಅಗ್ರಜನಾಗಿ ದಯ ಮಾಡಿದುದಕ್ಕೆ ಕೃಷ್ಣನು ಸಖನಾದ. ಮೂರನೆ ಜನ್ಮ ಜಯತೀರ್ಥರಾದಾಗ್ಗೆ ಜ್ಞಾನವಿತ್ತು ಕುಮತಗಳ ನಿರಾಕರಿಸಿದಿ ಪ್ರಾಣನ ಕೃಪೆಯಿಂದ ಎಲ್ಲ ಸೌಖ್ಯ ಗಂಟು. ಈಗಾದರು ಹಿಂದಿನಂತೆ ಪೊರೆಯೊ ಎಂದು ಪ್ರಾರ್ಥನೆ.] ಧ್ರುವತಾಳ ಹಿತಮಾಳ್ಪ ಜನಕನಾಗಿ ರಕ್ಷಸು ಎಂದೆಂಬೆನೆಪಿತೃ ಸಮಾನ ಜೇಷ್ಠನೆಂದೆಂಬ ವಿಧದಿ ಪಿತನೆ ಸರಿ ಎನಗೆ ಉಪಕಾರವ್ಯಾತಕಿನ್ನುಮಾತರಿಶ್ವನೆ ದೂರ ನೋಳ್ಪದೇನೊಭಾತೃನಾಗಿ ಎನ್ನ ಪಾಲಿಸು ಎಂದೆಂಬೆನೆನೋತ ಪುಣ್ಯಗಳಿಂದ ಹರಿಯು ತಾನೆ ಸ್ವತ ಏವ ಮಾಡಿದ ಈಗ ನುಡಿವದೇನೊಮಾತೃ ನೀನೆ ದೇಹ ಪೊರೆಯುವಲ್ಲಿಅತುಳ ಗುರುವಾಗಿ ಬೋಧಿಸು ಎಂದೆಂಬೆನೆಆತ್ಮ ಗುರುವಿಗೆ ನಿಜ ಗುರುವೆನಿಸಿದೆ ನಿತ್ಯನೂತನವಾಗಿ ಯಿದನು ಬೇಡಿಕೊಂಬುವದೇನುವೀತಿ ಹೋತ್ರನೆ ದೈತ್ಯ ಸಂತತಿಗೆಪ್ರತ್ಯಂತರ ಜನುಮದ್ವಯದಿ ನಿಜ ಮುಖದಿಂದಲೆಮತಿಯು ನೀಡಿದ ಮುಖ್ಯ ಗುರು ನೀನೆ ಪ್ರತಿಯಿಲ್ಲದೆ ಇದ್ದ ಇಷ್ಟನೇನೊ ಎನಗೆಗತಿ ಪ್ರದಾತನು ನೀನೆ ಆವಕಾಲಆಪ್ತನಾಗಿ ನೀನು ಸಲಹಬೇಕೆಂಬೆನೆ ಗತ ಜನ್ಮಗಳಲಿ ನೀನು ಮಾಡಿದುಪ-ಕೃತಿಗಳೆಣಿಸೆ ಈಗ ನಿನಗಿಂದಧಿಕವಾದಆಪ್ತನಾವನು ಎನಗೆ ಅರಸಿ ನೋಡಾಮತಿಯು ರಹಿತವಾದ ಜನುಮಗಳು ಬರಲಿಅತಿ ಹಿತ ನೀನೆ ಎನಗೆ ಇಹ ಪರದಿಅತಿಶಯ ಕೃಪಾನಿಧೆ ಗುರು ವಿಜಯ ವಿಠ್ಠಲರೇಯಅತಿ ಪೀಯನಾಗುವನು ನಿನ್ನ ದಯದಿ 1 ಮಟ್ಟತಾಳ ಬಾಂಧವನು ನೀನೆ ಎರಡು ಬಗೆಯಿಂದ ತಂದೆ ನಿನ್ನುಪಕಾರ ಅನಂತ ಜನುಮದಲಿಮಂದನಾದವ ನನು ತೀರಿಸಬಲ್ಲೆನೆಬಂಧು ಅನಿಮಿತ್ಯ ಗುರು ವಿಜಯ ವಿಠ್ಠಲ ನಿ-ನ್ನಿಂದಲಿ ಎನಗೆ ಅನುಗ್ರಹ ಮಾಡುವನೊ 2 ತ್ರಿವಿಡಿತಾಳ ನಿನ್ನ ಕರುಣಪೇಕ್ಷ ಮಾಡದಲೆ ಒಂದುಜನುಮ ಹರಿ ಕರುಣವಿಲ್ಲದಲೆ ಕಳದೇಅನಂತರದಿ ಎನ್ನ ಪುಣ್ಯ ಸಾಸಿರದಿಂದಅನುಜನಾದೆ ನಿನ್ನ ಕೃಪೆಯಿಂದಲಿಮನುಜ ಕೃತಿಯಾದರು ಪ್ರತಿಮದಲ್ಲಿ ಘನ್ನ ಚೇಷ್ಟಾದಿಗಳು ತೋರಿದಂತೆ ಎನ್ನ ನಾಮಕನಾಗಿ ಎನ್ನ ರೂಪದಿಂದಎನ್ನ ಕೃತ್ಯಗಳೆಲ್ಲ ನೀನೆ ಮಾಡಿಉನ್ನತವಾದ ಕೀರ್ತಿ ತಂದು ಇತ್ತು ಎನ್ನಜನ್ನರ ಮಧ್ಯದಲಿ ಶ್ರೇಷ್ಠನೆನಸಿಪನ್ನಗ ತಲ್ಪನ್ನ ಕರವಶನೆನನಿಸಿದಿನಿನ್ನ ಕರುಣಕೆ ಎಣೆ ಆವದಯ್ಯಾಎನ್ನ ಸ್ವಭಾವದಿಂದ ಹರಿ ತಾನು ಇನಿತಾದ ಮನ್ನಣೆ ಮಾಡುವನೆ ಎಂದಿಗನ್ನನಿನ್ನುಪಕಾರವೆಂಬ ವನ್ನಧಿಯೊಳಗೆ ನಿರುತಮುಣಗಿ ಇಪ್ಪೆನಯ್ಯಾ ತೆರವಿಲ್ಲದೆ ಚನ್ನ ಪ್ರಸನ್ನ ಗುರು ವಿಜಯ ವಿಠ್ಠಲರೇಯನಿನ್ನಿಂದಲೆ ಎನಗೆ ಬಂಧುನಾದಾ 3 ಅಟ್ಟತಾಳ ದುರುಳ ಮತಗಳೆಂಬೊ ಮಾಯಿ ಗೋಮಾಯಿಗಳುಶಿರವೆತ್ತಿ ನೋಡದೆ ಪಲಾಯಧ್ವರಾದರು ಈತೆರವಾದ ಮಹತ್ಮಿ ನಿನ್ನದು ನಿನ್ನದುಮರಳೆ ಮಾತುಗಳನ್ನು ತೋರದಿದ್ದರನಿಗೆ (ರೆನಗೆ)ಕರುಣವಲ್ಲದೆ ಅನ್ಯಾಲೋಚನೆ ಇದಕ್ಕಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಪೊರೆವನು ನಿನ್ನಯ ಬಲದಿಂದಲಾವಾಗ 4 ಆದಿತಾಳ ಮೂರ್ತಿ ಗುರು ವಿಜಯ ವಿಠ್ಠಲರೇಯನಿನ್ನಿಂದ ಮಾಡಿಸುವ ವಸುಧಿಯ ವ್ಯಾಪಾರ 5 ಜತೆ ನಿಖಿಳ ಸೌಖ್ಯವೆ ಉಂಟುಉನ್ನತ ಮಹಿಮ ಗುರು ವಿಜಯ ವಿಠ್ಠಲ ಒಲಿವ || [ನಳ ನಾಮ ಸಂ|| ಚೈತ್ರ ಬ|| 12 ಆದಿತ್ಯವಾರ]
--------------
ಗುರುವಿಜಯವಿಠ್ಠಲರು
279ಹನುಮ ಭೀಮಾನಂದ ಮುನಿರಾಯ ಎನ್ನದು ಸಲಹೆಂದು ಬಿನ್ನೈಪೆವಿ ಜ್ಞಾನ ರೂಪ ವಿಜಿತಾತ್ಮ 1 280ತ್ರಿದಶವಿಂಶತಿ ರೂಪ ಸುದತಿಯಿಂದೊಡಗೊಡಿ ಪದುಮಜಾಂಡದೊಳು ಸರ್ವತ್ರ | ಸರ್ವತ್ರ ಭಕುತರಾ ಬದಿಗನಾಗಿದ್ದು ಸಲಹುವಿ 2 281ಕೋಟಿತ್ರಯ ಸ್ವರೂಪಿ ದಾಟಿಸು ಭವಾಬ್ಧಿಯ ನಿ ಭಯಹಾರಿ ರಣದೊಳು ಕಿ ರೀಟಿಯ ಕಾಯ್ದಿ ಧ್ವಜನಾಗಿ 3 282ಪ್ರಾಣನಾಯಕ ನಿನ್ನ ಕಾಣ ಬೇಕೆಂದೆನುತ ಸಾನುರಾಗದಲಿ ನಮಿಸುವೆ | ನಮಿಸುವೆನು ಮೂಜಗ ಪರಮೇಷ್ಟಿ 4 283ಚತುರವಿಂಶತಿ ತತ್ವ ಪತಿಗಳೊಳಗೆ ಗರುವ ನತಿಸುವೆನು ನಿನ್ನ ಚರಣಕ್ಕೆ | ಚರಣಕಮಲವ ತೋರಿ ಕೃತ ಕೃತ್ಯನೆನಿಸೊ ಕೃಪೆಯಿಂದ 5 284ಮೂರೇಳು ಸಾವಿರದ ಆರ್ನೂರು ಮಂತ್ರವ ಈರೇಳು ಜಗದಿ ಜನರೊಳು | ಜನರೊಳು ಮಾಡಿ ಉ ದ್ಧಾರ ಗೈಸುವಿಯೊ ಸುಜನರ 6 285ಪವಮಾನರಾಯ ನೀ ತ್ರಿವಿಧ ಜೀವರೊಳಿದ್ದು ವಿವಿಧ ವ್ಯಾಪಾರ ನೀ ಮಾಡಿ | ನೀ ಮಾಡಿ ಮಾಡಿಸಿ ಅವರವರ ಗತಿಯ ಕೊಡುತಿಪ್ಪ 7 286 ಮಿಶ್ರ ಜೀವ ರೊಳಿದ್ದು ಮಿಶ್ರಜ್ಞಾನವನಿತ್ತು ಮಿಶ್ರ ಸಾಧನವ ನೀ ಮಾಡಿ | ನೀ ಮಾಡಿ ಮಾಡಿಸಿ ಮಿಶ್ರಗತಿಗಳನೆ ಕೊಡುತಿಪ್ಪೆ 8 287ಅನಿಲದೇವನೆ ದೈತ್ಯದನುಜ ರಾಕ್ಷ ಸರೊಳಿದ್ದು ಅನುಚಿತ ಕುಕರ್ಮ ನೀ ಮಾಡಿ | ನೀ ಮಾಡಿ ಮೋಹಿಸಿ ದಣಿಸುವಿಯೊ ಅವರ ದಿವಿಜೇಶ 9 288ಕಾಲನಿಯಮಕನೆ ಕಾಲತ್ರಯಾದಿಗಳಲ್ಲಿ ಕಾಲ ಕರ್ಮ ಅನುಸಾರ | ಅನುಸಾರವಿತ್ತು ಪಾಲಿಸುವಿ ಜಗವ ಪವಮಾನ10 289ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ ಶ್ರೀಕಂಠ ಮುಖ್ಯ ಸುರರಿಗೆ | ಸುರರಿಗಿಲ್ಲವು ಭಾರ ತೀಕಾಂತ ನಿನಗೆ ಬಹದೆಂತೊ 11 290 ಕಲ್ಯಾದಿ ದೈತ್ಯಕುಲದಲ್ಲಣ ದಯಾಸಾಂದ್ರ ಬಲ್ಲಿದನು ಜಗಕೆ ಭಯದೂರ | ಭಯದೂರ ಭಕ್ತರ ನೆಲ್ಲ ಕಾಲದಲ್ಲಿ ಸಲಹಯ್ಯ 12 291ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ ದ್ಧಾರ ಮಾಡದಿರೆ ಭಕುತರ | ಭಕುತರನು ಕಾವ ರಿನ್ನಾರು ಲೋಕದಲಿ ಜಯವಂತ 13 292ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪಾದಾಂ ಬುಜ ಯುಗ್ಮಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಮನ್ಮನದಿ ನಿಜರೂಪ ತೋರಿ ಸಂತೈಸೊ 14 293ಅನಿಲದೇವನೆ ನಿನ್ನ ಜನುಮ ಜನುಮಗಳಲ್ಲಿ ಎಂದೆಂದು ವಿಷಯ ಚಿಂ ತನೆಯ ಕೊಡದೆನ್ನ ಸಲಹೆಂದು 15 294ತಾರತಮ್ಯ ಜ್ಞಾನ ವೈರಾಗ್ಯಭಕ್ತಿ ಧಾರಡ್ಯವಾಗಿ ಇರಲೆಂದು | ಇರಲೆಂದು ಬಿನ್ನೈಪೆ ಭಾರತೀರಮಣ ನಿನಗಾನು 16 295 ಮರಣ ಜನನಗಳು ಬಂದರೆ ಬರಲಿ ಪ್ರದ್ವೇಷ ಗುರು ಹಿರಿಯರಲ್ಲಿ ಹರಿಯಲ್ಲಿ | ಹರಿಯಲ್ಲಿ ಕೊಡದೆ ಉ ದ್ಧರಿಸಬೇಕೆನ್ನ ಪರಮಾಪ್ತ 17 296ವಿಷಯದಾಸೆಗಳ ಬಿಡಿಸಿ ಅಸುನಾಥ ಎನ್ನ ಪಾ ಲಿಸಬೇಕು ಮನವ ನಿನ್ನಲ್ಲಿ | ನಿನ್ನಲ್ಲಿ ನಿಲಿಸಿ ಸಂ ತಸದಿ ಕಾಯೆನ್ನ ಮರುದೀಶ 18 297 ವಾಯು ಹನುಮದ್ಭೀಮರಾಯ ಮಧ್ವರ ಸ್ತೋತ್ರ ಬಾಯೊಳುಳ್ಳವಗೆ ಜನ್ಮಾದಿ | ಜನ್ಮಾದಿ ರೋಗಭಯ ವೀಯನೆಂದೆಂದು ಭಗವಂತ 19 298ಮಾತರಿಶ್ವನೆ ಎನ್ನ ಮಾತುಗಳ ಲಾಲಿಸಿ ಜಗ ನ್ನಾಥ ವಿಠಲನ್ನ ಮನದಲ್ಲಿ | ಮನದಲ್ಲಿ ತೋರಿ ಭವ ಭೀತಿಯನು ಬಿಡಿಸೊ ಭವ್ಯಾತ್ಮ 20 299 ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಆ ಜನ್ಮ ಕೃತ ಪಾಪ ಪರಿಹಾರ | ಪರಿಹಾರವಾಗಿ ಸ ದ್ಬೊಮ್ಮಪದವಿಯಲಿ ಸುಖಿಸುವಿ 21 300ಮೂರೇಳು ಸಾವಿರದ ಆರುನೂರು ಹಂಸ ಮೂರು ಮಂತ್ರಗಳ ಜನರೊಳು | ಜನರೊಳು ಮಾಡ್ವ ಸ ಮೀರನ ಅಡಿಗೆ ಶರಣೆಂಬೆ 22 301ಅಂಜಿದವರಿಗೆ ವಜ್ರಪಂಜರನೆನಿಪ ಪ್ರ ಭಂಜನ ಪ್ರಭುವೆ ಪ್ರತಿದಿನ | ಪ್ರತಿದಿನ ನಮ್ಮ ಭಯ ಭಂಜಿಸಿ ಕಾಯೊ ಬಹುರೂಪ 23 302ಭವಿಷ್ಯದ್ವಿಧಾತನೆ ತವ ಚರಣ ಸೇವಿಪೆನು ಶ್ರವಣ ಮನನಾದಿ ಭಕುತಿಯ | ಭಕುತಿ ನಿನ್ನಲ್ಲಿ ಮಾ ಧವನಲ್ಲಿ ಕೊಟ್ಟು ಸಲಹಯ್ಯ24 303ಕಲಿಮುಖ್ಯ ದೈತ್ಯರುಪಟಳವ ಪರಿಹರಿಸಿ ಮ ಸಿಂಧು ನಿ ನ್ನೊಲುಮೆಯೊಂದಿ ಹರಿಕಾಯ್ವ 25 304 ಭಾರತೀ ರಮಣ ಮದ್ಭಾರ ನಿನ್ನದು ಎನ್ನ ಪಾರ ದೋಷಗಳ ಎಣಿಸದೆ | ಎಣಿಸದೆ ಸಂತೈಸೊ ಸಿಂಧು ಎಂದೆಂದು 26 305ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ ವಿಂಶತಿ ಸಹಸ್ರದಾರ್ನೂರು | ಆರ್ನೂರು ಹಗಲಿರುಳು ಶ್ವಾಸ ಜಪಮಾಡಿ ಹರಿಗೀವಿ 27 306ತಾಸಿಗೊಂಭೈ ನೂರು ಶ್ವಾಸಜಪಗಳ ಮಾಡಿ ಬೇಸರದೆ ನಮ್ಮ ಸಲಹುವಿ | ಸಲಹುವಿ ಶ್ರೀ ಭಾರ ತೀಶ ನಿನ್ನಡಿಗೆ ಶರಣೆಂಬೆ 28 307ಬಲದೇವ ನೀನೆ ಬೆಂಬಲವಾಗಿ ಇರಲು ದು ರ್ಬಲ ಕಾಲಕರ್ಮ ಕೆಡಿಸೋದೆ | ಕೆಡಿಸೋದೆ ನಿನ್ನ ಹಂ ಬಲು ಉಳ್ಳ ಜನರ ಜಗದೊಳು 29 308ಹಾಲಾಹಲವನುಂಡು ಪಾಲಿಸಿದೆ ಜಗವ ಕರು ಣಾಳು ಪವಮಾನ ವಿಜ್ಞಾನ | ವಿಜ್ಞಾನ ಭಕುತಿ ಶ್ರೀ ಲೋಲನಲಿ ಕೊಟ್ಟು ಸಲಹಯ್ಯ 30 309ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ ಪೊರೆದಂತೆ ಪೊರೆಯೆನ್ನ ನೀನಿಂತು ಕ್ಷಣದಿ ಕೃಪೆಯಿಂದ 31 310ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ ಸುಖವೀಯೊ ಭಾವಿ ಲೋ ಕಪಿತಾಮಹನೆ ಎನಗೆ ದಯವಾಗೊ 32 311 ಬುದ್ಧಿ ಬಲ ಕೀರ್ತಿ ಪರಿಶುದ್ದ ಭಕ್ತಿಜ್ಞಾನ ಸದ್ಧೈರ್ಯಾಜಾಡ್ಯ ಆಯುಷ್ಯ | ಆಯುಷ್ಯ ವಿತ್ತಭಿ
--------------
ಜಗನ್ನಾಥದಾಸರು
3. ಎಲ್ಲ ಆಳ್ವಾರರು ಆಳ್ವಾರ್ ತಿರುವಡಿಗಳೆ ಶರಣೆನ್ನುತ ಬಾಳ್ವರು ಭಜಿಪುದು ಬಕುತಿಯಲಿ ಪ ಕೇಳ್ವರು ಕಥೆಗಳ ಮಮತೆಯಿಂದಲಿ ಮಾಳ್ವರು ಮನೆ ವೈಕುಂಠದಲಿ ಅ.ಪ ಮೊದಲಿನ ಮೂವರು ಮಾಧವನೆನುತ್ತ ಪದುಮನಾಭನೊಡನಾಡಿದರು ಅದುಭುತ ಮಹಿಮಾ ತಿರುಮೊಳಿಶಯ್ಯರ ಮುದದಿಂ ಶಿವ ಕೊಂಡಾಡಿದನು 1 ಮಧುರಕವಿಗಳು ನಮ್ಮಾಳ್ವಾರರ ಪದಗಳ ಪೂಜಿಸಿ ಹಾಡಿದರು ತದುಪರಿ ತಿರುವಾಯ್ಮೊಳಿಯನು ಅವರಿಂ ದಧಿಕರಿಸುತ ಹಿತವೆಸಗಿದರು 2 ಪೆರಿಯಾಳ್ವಾರರು ಹರಿಯನು ಪಾಡುತ ವರವೇದಕೆ ತಾವ್ ಮೊದಲಿಗರು ಪರಮಪಾವನೆ ಗೋದಾದೇವಿಯು ದೊರೆ ಶ್ರೀರಂಗನ ಕೈವಿಡಿದಳ್ 3 ಪೆರಿಯ ತಿರುಮೊಳಿಯ ತಿರುಮಂಗೈಯ್ಯರು ತಿರುಪ್ಪಾಣ ವಿಪ್ರನಾರಾಯಣ ತಿರುವನಂತಪುರದ ಕುಲಶೇಖರರು ಸಿರಿಯರಸನ ತೇರ ಮಾಡಿದರು 4 ಪರಮಾತ್ಮನ ಸನ್ನಿಧಿಯಿಂದಲ್ಲಿಗೆ ತೆರಳುತ ಮಹಿಮೆಯ ತೋರಿದರು ನಿರುತ ದೇವರೆಡೆ ಪೂಜೆಗೊಂಬರು ವರಜಾಜೀಶನ ಸೇವಕರು 5
--------------
ಶಾಮಶರ್ಮರು
5. ಅಹೋಬಲದಾಸರ ತೆಲುಗು-ಹಿಂದಿಮಿಶ್ರಿತ ಕೃತಿಗಳು ತಾನು ಹೇಳಿದನರ್ಜುನಗೇ ಪ ಷಡ್ವೈರಿ ವಿಸರ್ಜನೆಗೆ ಅ.ಪ ಅಪದಾರ್ಥವನ್ನಡಿಯೆನೊಂದಿಪೆ- ಕೋಪಮು ವಿಡಿಚಿತಿಳಿ ಸಮಜ ತಾ ವೊಯಾಪರ್‍ವರ್ದಿಗಾರನೆ ಬಲುಕುಟಿ ನಾಪನ್‍ವಳಿಯೊ ಭಲಾ 1 ಸತ್ವರಜೋಗುಣ ತಾಮಸರೂಪಿದು ಮತ್ವರಿತದಿ ನೋಡೊ ಯೀ ತತ್ವದ ಅರ್ಥವಳಿದವನಿಪ್ಪಡುಗು ಭಜನೆಯ ಮಾಡೋ 2 ವಿಜಯಪುರೀವರ ಅಜಪಿತನಹುದಲೊ ಭುಜಗಾಸನೆಧೀರಾ ಸಮಜತಾಕೇ ಳಜ ಮಹರಾಜನೆ ನಿಡಿಜಗುರು ತುಲಸಿ- ಮಣಿ ಆಧಾರಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಅ. ಗಣೇಶಸ್ತುತಿ ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆನಂದಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ಪ ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ 1 ಪಾಶಾಂಕುಶಧರನೆ ಸುಂದರ ಮೂಷಕವಾಹನನೆಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ 2 ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 3 ಭಾರತ ಬರೆದವನೆ ವ್ಯಾಸರ ಭಾಷಿತದಿಳೆದವನೆಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 4 ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ 5
--------------
ಇಂದಿರೇಶರು
ಅ. ಶ್ರೀಹರಿಸ್ತುತಿಗಳು ಉಯ್ಯಾಲೆಯ ನೀರಜೋದರನಾಡಿದಾ ನಿಗಮಾಂತ ನಾರೀಜನರು ಪಾಡಲೂ ಪ ಮೆರೆವ ಯೌವನದ ವಸಂತಾ ನಾದ ಶ್ರೀ ಧರಣಿಯರ ಮಧ್ಯದಲ್ಲೀ1 ಭಿಸುವೊಡಲ ನೀಡು ಮಾಡೀ 2 ಮೈಯನುರದಾ ಲೊರಗಿಸೀ ಕೈಯೊಡನೆ ತನುವ ತೀಡೇ 3 ಎಡದ ಧರಣಿಯ ನೋಡಲೂ ಬಲದ ರಮೆ ಕಡುಮುನಿಯೆ ಸಂತವಿಸುತಾ ಒಡನೆ ಭೂದೇವಿ ಮುನಿಯೇ ಮನ್ನಿಸುವ ಸಡಗರದಿ ಜಗವ ಮೋಹಿಸೀ 4 ಎಡದ ಕೈಯಿಂದಿಂದಿರೇ ಧರಣಿ ತಾ ಪಿಡಿದು ಬಲಗೈಯಿಂದಲೇ ಕಡಲ ಮಧ್ಯದಿ ಮುಳುಗುತಾ 5 ಅರಿ ಶಂಖ ಕೌಮೋದಕೀ ಸರಸಿರುಹ ವರಕರ ಚತುಷ್ಟಯಗಳೂ ಕುಂಡಲ ಕಿರೀಟಾ ನಗೆಮೊಗದ ಸುರರತಾತನ ಜನಕನೂ 6 ಅಂಬುಜಾಂಘ್ರಿಯ ತಡೆಯದಾ ಪೊಂಬಣ್ಣ ದಂಬರದ ಸಿರಿಯ ನಡುವಿನಾ ಕಂಬುಕಂಠದ ಚೆನ್ನಿಗಾ 7 ಹರಿಯ ಮೈಸೋಂಕಿನಿಂದಾ ಶರೀರಗಳ ಗೊರೆವನ್ನಲು ಪರಿಶೋಭಿಸೀ 8 ಹೂತ ಹೊಂಬಳ್ಳಿಗಳನೇ ತೊಡಿಗೆಯಿಂ ಜೋತೊರಗುತಿಕ್ಕೆಲದಲೀ ಶ್ರೀತರುಣಿ ಧರಣಿ ಮೆರೆಯೇ ವೈಕುಂಠ ಪ್ರೀತ ಚನ್ನನಾಡಿದನುಯ್ಯಲಾ 9
--------------
ಬೇಲೂರು ವೈಕುಂಠದಾಸರು
ಅಂಕಿತನಾಮ ಪದಗಳು ಅಚ್ಯುತಾನಂತವಿಠಲ | ಸಲಹ ಬೇಕಿವನಾ ಪ ಸ್ವಚ್ಛಶಪಥದಿ ಹರಿಯ | ನಾಮ ನಂಬಿಹನಾ ಅ.ಪ. ಜೀವಕಾರಣವೆನೆ | ಆವನ ವಿದ್ಯಾಪಟಲಓವಿಕಡಿಯಲು ಸಾಧ್ಯ | ನಾಮ ಸಾಧನದೀಈ ವಿಧದ ಸಂಪ್ರಜ್ಞೆ | ಭಾವ ಉಳ್ಳವನೀತತೀವರದಿ ಕೈಪಿಡಿದು | ಕಾಯೋ ಕೃಪ ಸಾಂದ್ರ 1 ಗುರು ಭಕ್ತಿಯುಳ್ಳವನು | ಸುಜ್ಞಾನಕಾಂಕ್ಷಿತನುಇರುವನೀತನು ಎಂದು | ವರ ಸು ಉಪದೇಶಹರಿಯ ನಾನಿತ್ತಿಹೆನು | ಸ್ವಪ್ನ ಸೂಚೀಯಂತೆಕರುಣದಿಂ ನಿಜತೋರೊ | ಮರುತಂತಾರಾತ್ಮ 2 ಹರಿ ನಾಮ ವೆಂಬಂಥ | ವಜ್ರಾಂಗಿ ತೊಡಿಸಿವಗೆದುರಿತರಾಶಿಗಳಳಿದು | ಪೊರೆಯ ಬೇಕಿವನಾಸುರು ಭೂರಹವು ಆಗಿ | ಪರಿಪರಿಯ ವರಗಳನುಗೆರೆಯುತ್ತ ಹರ್ಷವನೆ | ಸುರಿಸೊ ಶ್ರೀಹರಿಯೇ 3 ಸತ್ಸಂಗವನೆ ಕೊಟ್ಟು | ದುಸ್ಸಂಗವನೆ ಕಳೆಯೊಮತ್ಸಕೇತನ ಜನಕ | ಸಚ್ಚಿದಾನಂದಾತ್ಮಾವತ್ಸಾರಿ ಕೃಷ್ಣ ಗೋ | ವತ್ಸ ದನಿಗಾವು ಬಹುಉತ್ಸವದಿ ಬರುವಂತೆ | ನೀನೆ ಪೊರೆ ಇವನಾ4 ಭಾವಜ್ಞ ನೀನಿರುವೆ | ಪೇಳ್ವದೇನಿಹುದೆನಗೆದೇವ ದೇವೇಶನೆ | ಹರಿ ಸಾರ್ವಭೌಮಗೋವರ್ಧನೊದ್ಧಾರನೆ | ಗೋವಿಂದ ಪತಿಯೆ ಗುರುಗೋವಿಂದ ವಿಠಲ ಮದ್ | ಭಿನ್ನಪವ ಸಲಿಸೊ 5
--------------
ಗುರುಗೋವಿಂದವಿಠಲರು
ಅಕ್ಷವಿದ್ಯಾನಿಪುಣ ಅಕ್ಷಯಾತ್ಮಕ ಸುಗುಣ ಅಕ್ಷಯತರ ಸುವಚನ ಲಸಿತವದನ ದ್ಯೂತೋದ್ಯೋಗತರ ಖ್ಯಾತ ಸುಗುಣೋಪೇತ ದೈತ್ಯ ಸಂಕುಲಘಾತ ಪ್ರಾಣನಾಥ ಸುರಸಿದ್ಧ ಸಂಪ್ರೀತ ಮಾರತಾತ ಗೋಪಾಲ ಕುಲರತ್ನದೀಪ ಗೋಕುಲ ಶರಣ ಗೋಪಿಕಾಜನಮನದ ತಾಪಶಮನ ಲೀಲಾ ವಿಭೂತಿಯುಗನಿರತ ಸುಹಿತ ನೀಲಾಂಬರಾವರಜ ರಾಜರಾಜ ಕಾಲಾಂಬುದಾಕಾರ ಖಲಕುಠಾರ ಪಾಹಿಮಾಂ ಶ್ರೀಶೇಷಗಿರಿವಿವಿಭಾಕ್ಷ
--------------
ನಂಜನಗೂಡು ತಿರುಮಲಾಂಬಾ
ಅಚ್ಯುತಾನಂತನೆ ನಿನ್ನ ನೆಚ್ಚಿಕೊಂಡಿಹೆನು ಇಚ್ಛಾರೂಪ ಸ್ವಚ್ಛಾಭೂಪ ಸ್ವೇಚ್ಛೋಪಾತ್ತ ಸಗುಣ ರೂಪ ಪ. ನಾಮತ್ರಯ ಮಂತ್ರ ಜಪಿಸಿ ಸೋಮಧರನು ತಾನು ಆ ಮಹಾ ಹಲಾಹಲವನು ನೇಮದಿಂದ ಜಯಿಸಿರುವನು ಕಾಮಚಾರ ಕುಮತಿ ಮನುಜರಾ ಮಾಯಾದಿಗಳನು ಶ್ರೀಮಹೀಶ ಸಿಂಧುವಾಸ ನೀ ಮನ್ನಿಸಲು ನಿಲುವದೇನು 1 ನಗಧರ ನಿನ್ನಂಘ್ರಿಕಮಲಯುಗಳ ಒಂದೆ ಸಾಕು ಎನಗೆ ತ್ರಿಗುಣ ವಿಷಯವಾದ ಸರ್ವ ನಿಗಮಕರ್ಮವ್ಯಾಕೊ ಅಗಣಿತಾತ್ಮ ಅಮೃತಾಂಧಸರ ಮಗುವಿನಂತೆ ಪೊರೆವಿ ನಗುತಲೆನ್ನ ನೀ ಕಾಯ್ದದಕೆ ಪೊಗಳಲು ನಾ ಶಕ್ತನಹುದೆ 2 ಪೋರ ಕೆಟ್ಟುಹೋದನೆಂದು ಊರಜನರು ನುಡಿದಾ ಕ್ರೂರ ಮಾತ ಕೇಳಿ ತಾಳಲಾರದೆ ನಾ ಬಂದು ವಾರಿಜಾಕ್ಷ ನಿನ್ನ ಪದಕೆ ದೂರ ಪೇಳಲಂದು ಶ್ರೀರಮಣಿಯ ಸಹಿತಲೆನಗಾಧಾರವಾದಿ ದೀನಬಂಧು 3 ಇಂದ್ರಿಯಂಗಳೆನ್ನ ವಿಷಯಬಂಧದಿಂದ ಬಿಡಲು ಒಂದು ಕರ್ಮದಲು ಸಾಂಗದಿಂದಲೆನಗೆ ನಿಲಲು ಇಂದಿರೇಶ ಈ ಕಾರಣದಿ ಕುಂದಮನಕೆ ತಾರದಿರೊ ತಂದೆ ನೀನೆ ಶರಣನೆಂದು ಹೊಂದಿರುವದನೆಣಿಸಿ ಸಲಹೊ 4 ನಾಮಸ್ಮರಣವಿತ್ತು ಕಾಯಿ ಕಾಮಿತಾರ್ಥದಾಯಿ ನೇಮ ಒಂದು ನಡೆಸದಂಥ ಪಾಮರನಾಗಿಹೆನು ಸೋಮಧರನ ಶುದ್ಧಿಕರಿಸ ಭೂಮಿತೀರ್ಥ ಜನಕರಾಮಕೃಷ್ಣ ವೇದವ್ಯಾಸ ಸ್ವಾಮಿ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಜಭವಾದಿ ವಂದ್ಯ ಚರಣೇ | ತಾಯಿನಿಜ ಜನರ ಪೊರೆವ ಕರುಣೇ ಪ ರಜತಮನ ಕಳೆವ ಹೊಣೇ | ಅಜನಮ್ಮ ನಿನ್ನ ಹವಣೇ ಅ.ಪ. ದಿವಿಜ ಪತಿ | ಪದ್ಮ ಪದಹವ | ನುದ್ಭವ ಗೈ 1 ಗುಣ ಮೂರ ಮಾನಿನಿಯೆ | ಗುಣ ದೊರೆ ಅಂಭ್ರಣೀಯೆಗುಣ ಜಡವ ಕಳೆಯದಿರೆಯೆ | ಘನವೇನೆ ನಿನಗೆ ತಾಯೇ ||ವಾನರನು | ನಾನಾ ದುರ್ | ಯೋನಿಯಲಿ | ಜನೀಸಿಹೆಮಾನೀಸನು | ಧ್ಯಾನಿಲ್ಲವು | ಏನುಗತಿ | ನೀನೇ ಪೊರಿ 2 ಭವ ನೀ ಕಳೆರಮೆ 3 ಅವ್ಯಕ್ತಾಭಿಮಾನಿ ಕಾಯೋ ಭವ್ಯಮೂರ್ತಿ ಹರಿಯ ಜಾಯೇ |ತ್ರಯ್ಯ ಗೋಚರ ಶ್ರೀ ಹರಿಯೇ | ಗಮ್ಯನೆಂಬುದ ತೋರಿ ಪೊರೆಯೆಶ್ರೋತವ್ಯನ | ಮಂತವ್ಯನ | ಧ್ಯಾತವ್ಯನ | ಸ್ಮರ್ತವ್ಯನಅಗಮ್ಯನೆ | ಪೂಜ್ಯನನೆ | ಶ್ರೀ ಸ್ತವ್ಯನ | ತೋರಯ್ಯೆನ 4 ತಾಪ ಇಂದಿರೆ ಸಿರಿ ಸಿರಿ ಸಿರಿ ಸಿರಿ ಸಿರಿ ಸಿರಿ ಮಾಯೆ | ಶ್ರೀ ಪೊರೆಯೇ... 5
--------------
ಗುರುಗೋವಿಂದವಿಠಲರು
ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು ಪ ಅಂಜಿಸೊದ್ಯಾಕ‌ಘ ಭಂಜಕನೆನಿಸಿ ನೀ ಕಂಜನಾಭನ ಭಕ್ತಿ ಪಂಜರದೊಳಿಡದೇ ಅ.ಪ ಹೊಂದÀದೀ ನರಜನ್ಮವ ಇಂದಿರೇಶನು ಎಲ್ಲ ಹೊಂದೀ ಹೊದರಿಯದ ಮಂದಮತಿಯನು 1 ಬಿಂಬ ಮೂಡಲು ಪ್ರತಿಬಿಂಬ ಮಾಡುವುದೆಂದು ಶಂಬರಾರಿಯ ಪಿತನ ನಂಬದ ಢಂಬಿಯೊಳಂ ಜಿಸೋದ್ಯಾತಕಯ್ಯಾ2 ಶ್ರೀ ನರಹರಿಪಾದ ಧ್ಯಾನವ ಮಾಡದೆ ಬುದ್ಧಿ ಹೀನನಾದವಗೆ ಸುಜ್ಞಾನ ಕೊಡದೆ ಸುಮ್ಮನಂ ಜಿಸೋದ್ಯಾತಕಯ್ಯಾ 3
--------------
ಪ್ರದ್ಯುಮ್ನತೀರ್ಥರು
ಅಂಜ್ಯಾಕೆ ಎಲೆ ಮನುಜ ಭಯವಿಲ್ಲ ನಿನಗೆ ಕಂಜನಾಭನ ಧ್ಯಾನವಿರಲಿ ಮನದೊಳಗೆ ಪ ತಾಪತ್ರ ಬಂದೊದಗೆ ಪಾಂಡುಪ್ರಿಯನೆಂದೆನ್ನು ಶಾಪವೊದಗಲು ಅಂಬರೀಷನ್ವರದೆನಲೋ ಭೂಪತಿಗಳು ಮುನಿಯೆ ಪಾಂಚಾಲಿಪಾಲಕನೆನ್ನು ಆಪಾರ ಕಷ್ಟದಲಿ ಕರಿವರದೆನೆನಲೋ 1 ಮಾತೃ ವೈರ್ಯಾದರೆ ಧ್ರುವಪಾಲನೆನಲೋ ಭ್ರಾತೃವೈರ್ಯಾದರೆ ಸುಗ್ರೀವಸಖನೆನ್ನು ಖಾತ್ರಿಯಿಂ ಸತತದಿ ಸೂತ್ರಧಾರೆನಲೋ 2 ಸೆರೆಮನೆಯು ಒದಗಿರಲು ಪಿತಮಾತೆರ್ವರದೆನ್ನು ಧುರದೊಳಗೆ ಪೊಕ್ಕಿರಲು ನರಸಹಾಯನೆನಲೋ ಬರಿ ಮಳೆಯೊಳ್ಸಿಕ್ಕಿರಲು ಗಿರಿಯೆತ್ತಿದವನೆನ್ನು ದುರುಳರ್ಹಾವಳಿಯೊಳಗೆ ದನುಜಹರನೆನಲೋ 3 ಕವಿಯಲು ವೈರಿಗಳು ಕಂಸಮರ್ದನನೆನ್ನು ಶಿವನ ಕಾಯ್ದವನೆನ್ನು ಉರಿಹತ್ತಿಸುಡಲು ಭವಿಜನುಮ ಬಂದಿರಲು ಭವರೋಗಹರನೆನ್ನು ದಿವನಿಶೆಯು ಎಡೆಬಿಡದೆ ಭಯದೂರನೆನಲೋ 4 ಸ್ಥೂಲಭ್ರಷ್ಟನಾದರೆ ಬಲಿದ್ವಾರಪಾಲಕನೆನ್ನು ಕುಲಭ್ರಷ್ಟನಾದರಜಮಿಳನ್ವರದನೆನಲೋ ಇಳೆಮೂರು ಸಂರಕ್ಷ ಚೆಲುವ ಶ್ರೀರಾಮನಂ ಹಲವು ವಿಧದಲಿ ಭಜಿಸಿ ಫಲಗಳಿಸು ಬಿಡದೆ 5
--------------
ರಾಮದಾಸರು
ಅಥ ಹನುಮದ್ವ್ರತ ಕಥಾ ಸುಳಾದಿ ಧ್ರುವ ತಾಳ ವೃತವೆ ಉತ್ತಮ ವೃತವೆಂದು ಪೇಳಿಹರು ಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳು | ಸತತ ಅಧ್ಯಾತುಮ ಅನಂತ ವೃತವೆಂದು | ಕ್ಷಿತಿಯೊಳು ಈ ವೃತಕೆÀ ಸರಿಗಾಣೆನೊ | ಪತಿತ ಮಾನವರ ಉದ್ಧಾರಗೋಸುಗವಾಗಿ ದ್ವಿತಿಯ ಉತ್ತಮ ವೃತವು ಹನುಮದ್ಪ್ರತವೂ | ಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತ | ಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯವೃತವೊ | ಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದು | ಮತಿವಂತರು ಮನಕೆ ತಂದು ತಿಳಿದು | ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವೃತವೊ | ಪತಿಭಕುತಿಯುಕುತಳಾದ ದ್ರೌಪದಿಯು | ಪತಿ ಮೂರ್ಲೋಕದ ಶ್ರೀ ಕೃಷ್ಣನುಪದೇಶದಂತ್ಯೆ | ಮಿತ ಜ್ಯಾನದಿಂದ ಚರಿತ ವ್ರತವೊ | ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಆ | ಚ್ಯುತನಾದ ರಾಮನುಮತಿವಾನ್ ಹನು | ಮಂತನ ಭಕುತಿಗೊಲಿದು ಮಾಡ್ಡ ವೃತವೊ | ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ | ಮಿತಿ ಇಲ್ಲದೇ ಪೇಳಿ ಮಾಡಿಸಿದ ವೃತವೊ | ವೃತತಿಜಾಸನ ಪ್ರಿಯ ಸುತ ಸುಂದರ ವಿಠಲನ ಭ | ಕುತಿ ಜ್ಞಾನವೀವ ಮಹಾ ಶ್ರೇಷ್ಠ ವೃತವೊ 1 ಮಟ್ಟತಾಳ ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು | ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ | ಮೇಣು ಭಕುತಿಯಿಂದ ಙÁ್ಞನವಂತರೆ ನಿಮ್ಮಿಂ | ನಿತ್ಯ | ಧೇನಿಸುವೆವು ಹರಿಯಾ ಪುನೀತರ ಮಾಡುವಾ | ಕಾಣೋವನ್ಯ ವೃತವು ಆವುದುಪೇಳೆನಲು | ನಿತ್ಯ ಶೂದ್ರಾದಿ ನಾಲ್ಕು | ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ | ಏನು ಬೇಡಿದರೆ ತಡಿಯದೆ ಕೊಡುವುದೊ | ಜ್ಞಾನಿ ಜನಗಳಿಗೆಲ್ಲ ಮಂಗಳತಮ ವೃತವು | ಪುತ್ರಾದಿಗಳೀವುದು ಶ್ರೇಣಿ ದಿನ ಪ್ರತಿ ದಿನದಲ್ಲಿ ವರವಿದ್ಯ ಪ್ರದವೊ ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ | ಮಾನನಿಧಿ ಸುತ ಸುಂದರ ವಿಠಲನ | ಧ್ಯಾನ ಧಾರಣವೀವ ಉತ್ತುಮಾಮಹವೃತವೊ 1 ರೂಪಕ ತಾಳ ಒಂದಾನೊಂದು ಸಮಯದಲ್ಲಿ ಶ್ರೀ ವ್ಯಾಸ ಶಿಷ್ಯ | ವೃಂದದಿಂದೊಡಗೂಡಿ ಯುಧಿಷ್ಠರನ ನೋಡಲು | ಅಂದುಳ್ಳ ದ್ವೈತ ವನಕೆ ನಡೆತಂದರು ಏನಂಬೆ | ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ | ಕುಂದ ಮಂದಾರಾದಿ ಪುಷ್ಪಫಲ ವೃಕ್ಷಗಳಿಂ ಶೋಭಿಪ | ಕುಂದು ದೂರೋಡಿಸಿದ ಜ್ಞಾನಿಗಳ ಸಮೂಹವು | ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ | ಮುಂದೆ ಅಧ್ಯಯನ ಶ್ರುತಸಂಪನ್ನರಾದವರು | ಒಂದೊಂದು ವೇದ ಋಗು ಯಜು:ಸಾಮಾಥರ್ವಣ ಒಂದೋಂದು ಶಾಖಾಶಾಸ್ತ್ರದಿ ಪ್ರವಚನಾಸಕ್ತರು | ಮಿಂದು ಹರಿಪದಜಲದಿ ಚತುರ ವೇದ ಘೋಷದಿ | ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ | ಎಂದೆಂಬುವ ಹರಿಕಥಾಮೃತ ಪಾನ ಮಾಡುವ | ಸಂದೋಹ ಮುನಿಗಳಿಗೆ ನಿತ್ಯನ್ನದಾನವ ಮಾಡಿ | ಬಂಧುಗಳಿಂ ಸಹಿತ ಇರುವ ಯುಧಿಷ್ಟರನನ್ನು | ಸುಂದರ ವಿಠಲಾತ್ಮಕ ವ್ಯಾಸದೇವನು | ಅಂದು ದ್ವೈತವನದಲ್ಲಿ ಕೃಪಾ ದೃಷ್ಟಿಯಿಂದ ನೋಡಿದನು 3 ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ | ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ | ಜೇಷ್ಠನಾದ ಯುಧಿಷ್ಠರನು ತಾ ದೂರ ನಡೆತಂದುವಾ | ಸಿಷ್ಟ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ | ರ್ದಿಷ್ಟವಾದೆಕಾಂತ ಸ್ಥಳಕೆ ಕರೆತಂದು | ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ | ಜೇಷ್ಟಾದಿಕೃಷ್ಣೇಯೊಡನೆ ಉತ್ಕøಷ್ಠ ಪೂಜೆಯ ಮಾಡೆ ಪರ ಮೇಷ್ಠಿ ಜನಕನು ತಾನು ತುಷ್ಟ ನಾಹೆ | ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ | ರ್ದುಷ್ಟ ಭೀಮಾರ್ಜುನರೆ ಅಶ್ವಿನಿಯರೇ ಮನ | ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೇ? ಧಿಟ್ಟತನದಲೆ ತಪವನೆಸಗಿ ಕಿರಿಟಯು | ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು | ತ್ಕøಷ್ಟಾಸ್ತ್ರ ಸಂಪಾದನೆಯ ಮಾಡಿದದು ಕೇಳಿ | ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ | ಕಷ್ಟಬಡುತಿರುವ ನಿನ ದುಃಖ ಶಾಂತ್ಯರ್ಥ | ಇಷ್ಟವೀವುದಕಾಗಿ ಬಂದಿಹನು ರಾಜಾಯು | ದ್ಯಿಷ್ಟರನೆ ಕೇಳುತ್ತಮ ವೃತವು ನಿನಗೋಸುಗ | ನಿಷ್ಠಿಯಿಂದಲಿ ಧರ್ಮತನಯ ನುಡಿದನು 4 ತ್ರಿವಿಡಿ ತಾಳ ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ | ನಮೊ ನಮೊ ನಮೊ ಎಂದು ಬಿನ್ನೈಸುವೆ | ಶ್ರಮ ಪರಿಹರವೃತವಾವುದದÀರ ಮಹಿಮೆ | ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ | ಕುಮತಿ ಪರಿಹರಿಸುವ ದೇವತೆ ಆರು ಉ | ತ್ತಮ ನಿಯಮ ಆವುದು ಪೂಜಾ ಕ್ರಮವು | ಶಮೆ ದಮೆವೀವ ನಿಯಮ ತಿಥಿ ಆವುದು | ರಮೆ ರಮಣನೆÉ ಆವ ಮಾಸದಲಿ ಮಾಡೋದು | ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ | ಗಮನವು ಎಮ್ಮಯ ಕಷ್ಟ ದೊರೋಡಿಸಲು | ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ | ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು | ಭ್ರಮಣ ಮತಿಯ ಕಳೆವ ಹನುಮಾನ್ ಹ ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು | ಆಮಮ ಪೇಳಲೇನೊ ಹನುಮದ್ವ್ರತವೋ | ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ | ಸಮಸ್ತ ಕಾರ್ಯ ಸಿದ್ದಿಪದು ಸಂಶಯ ಬ್ಯಾಡಿ | ಆ ಮಹಾ ದುಷ್ಟ ಗ್ರಹೋಚ್ಛಾಟನ ಜ್ವರಾದಿ | ತಾಮಸ ರೋಗ ನಿವರಣವಾಗುವದು | ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ? ಸೀಮೆಗಾಣದ ಅಭೀಷ್ಟಪ್ರದಾಯಕವೊ ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ ಶ್ರೀ ಮದ್ವಿಷ್ಣುವೆ ಕೃಷ್ಣ ಪಾಂಚಾಲಿಯನಿ ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ ನುಮದ್ವ್ರತವನ್ನು ಉಪದೇಶಿಸಿ | ನೇಮದಿಂದಲೀ ವ್ರತವು ಮಾಡಿರೆನಲು ಕಾಮಿತಫಲವೀವಾ ವ್ರತದ ಮಹಿಮೆ ಆ | ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯದಿ ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ | ಈ ಮಹಾ ವೃತ ಮಹಿಮೆ ತಿಳಿಯದ ಪಾರ್ಥನು ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ ಹೇ ಮಹಿಷಿಯೆ ಇದೆನೆನ್ನಲಾಗಿ | ತಾಮರಸನಯನೆ ಶ್ರೀ ಹನುಮದ್ದೋರವನ್ನೆ | ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ | ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ | ಕಾಮಿತ ಫಲ ಕೊಡಬಲ್ಲದೆ ಕೇಳಿನ್ನು ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು ಕಾಮಿ ಜನರ ತೆರದಿಂದಲಿ ಅರ್ಜುನನು ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ ಆ ಮುದದ ದೋರವನು ಹರಿದು ಬಿಸಾಟಲು ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ | ಶ್ರಿಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು | ಪರಿಯಂತ | ರಾಮ ಮನೊರಮನು ಇನಿತು ನುಡಿಯೆ | ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು | ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು 5 ಧ್ರುವ ತಾಳ ಕೇಳಯ್ಯಾ ಧರ್ಮರಾಜ ಆಲಸ ಮಾಡದೆ | ಪೇಳುವೆ ನಿನಗೊಂದು ಪುರಾತನ ಕಥೆಯು | ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು | ಶೀಲೆ ಸೀತೆಯ ನೋಡುವ ಇಚ್ಛಾಉಳ್ಳ ಮಾ ನಿತ್ಯ ಲಕ್ಷ್ಮಣನೊಡಗೂಡಿ | ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ ಹಾಳ ಮತಿಯುಳ್ಳ ವಾಯುಜ ಮಾಡಿಸೆ | ಮಾಸ ಮಳೆಗಾಲವು ವಾಸ ಮಾಡ್ಡ | ಕಾಲದಲಿ ಹನುಮನು ರಾಮದೇವಗೆ ನಮಿಸಿ | ನೀಲ ಮೇಘ ಶ್ಯಾಮ ಶ್ರೀ ರಾಮ ನೀನಿನ್ನ | ಬಾಲನ ಬಿನ್ನಪ ಮನಕೆ ತರಲು | ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ ಮೇಲುಸಿಲೆಯನದ್ಧರಿಸಿದ ಶ್ರೀರಾಮ ನೀನಙ್ಞನೆ | ಕಾಲ ಜನನದಲಿ ಇಂದ್ರನಿಂದಲಿ ಎನ್ನ ಮೇಲಾದ ವಜ್ರಾಯುಧದಿಂದ ಹನುಘಾತಿಸಲು ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗಿ | ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ | ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು | ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ | ಈ ಲೀಲೆಯ ತಿಳಿದು ಲೋಕ ಶಿಕ್ಷಣ ಗೋಸುಗ | ಕಾಲವಜ್ರಾಯುಧದಿಂದ ಹೊಡೆಯಲು ಮೂರ್ಛಿತ | ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ | ಲೋಲನ ಸಖನಾದ ವಾಯುದೇವನು ಎನ್ನ | ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ | ಕಾಲನಾಮಕ ಭಗವಾನಿಚ್ಛೆಯಂತ ತೃಟಿ | ಕಾಲಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ | ಲೋಲನಿಂದನ್ನ ಪುತ್ರನ ಕೆಡಹಿರಲವನನ್ನು ಈ | ಕಾಲಲವದಲ್ಲಿ ಕೆಡಹೆನೆನಲು ಆ | ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ | ಓಲೈಸಿ ಪೆಳ್ದ ಮಾತು ಎನಗೋಸುಗ ಆಂಜನೇಯಾ | ಬಾಲನೆ ಚಿರಜೀವಿಯಾಗು ನೀನೆ ಪರಾಕ್ರಮಿ | ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ | ಬಾಲ ಹನುಮನ ಪೂಜೆ ಮಾಡ್ಡರು ದೇವತೆಗಳು | ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ | ಕಾಲ ಅಭಿಜಿನ್ ಮೂಹೂರ್ತದಲ್ಲಿ ಆರು ಪೂಜಿಪರೊ | ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು | ತಾಳ ಮ್ಯಾಳರೊಡನೆ ವರವ ನೀಡಿ ಪೋದರು | ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ | ಪೇಳೆ ಸುಂದರ ವಿಠಲ ರಘುರಾಮನು ನಸುನಗೆ | ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು 6 ಮಟ್ಟತಾಳ ಭಕುತ ವತ್ಸಲ ನೀನು ಭಕುತರಿಚ್ಛವ ನೀನು | ಭಕುತ ಭಾಂಧವ ನೀನು ಭಕುತರೊಡಿಯ ನೀನು | ಭಕುತ ಪಾಲಕನೆಂಬ ಬಿರುದುಳ್ಳವ ನೀನು | ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು | ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ | ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು | ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ ವ್ಯಕುತವಾಗ್ವದು ಸತ್ಯ ಸರ್ವಙ್ಞನು ನೀನು | ಭಕುತರ ಮನದಿಂಗಿತ ತಿಳಿಯದವನೆ ನೀನು | ಅಖಿಳ ಬ್ರಹ್ಮಾಂಡÀರಸನೆ ನಮೊ ನಮೊ ನಮೊ ನಮೊ | ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು | ಭಕುತರು ನಿನ್ನಿಂದಲೆ ಕೀರ್ತಿವಂತರÀಹರು | ಅಕುಟಿಲ ಪ್ರಭೋ ನೀನು ನಾ ನಿನ ನಿಜ ಭಕ್ತ | ಸಕಲ ಕಾಲದಲ್ಲಿ ನಿನ್ನನಾ ಮರೆಯದಲೇ | ಮಾಳ್ಪದು ನಿಜವಾಗೆ | ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ | ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ | ಭಕುತ ಹನುಮಂತ ಇನಿತು ವಿಙÁ್ಞಪಿಸಿ ನಿಲಲು | ಪ್ರಕಟಿತ ಅಶರೀರ ವಾಕ್ಯವು ಬಿಡದಲೆ | ಸಕಲ ನುಡಿ ಹನುಮಾ ಸತ್ಯನಾಡಿದನೆನಲು | ಸುಕರ ಏಕಮೇವ ದ್ವಿತಿಯ ಸುಂದರವಿಠಲ ತುಷ್ಟನಾಹೆ 7 ಝಂಪಿತಾಳ ಮಾಸಮಾರ್ಗಶೀರ್ಷ ಶುದ್ಧ ತ್ರೊಯೋದಶಿ | ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ | ಶ್ರೀಶರಾಮನು ಹನುಮದ್ವ್ರತವ ಮಾಡ್ಡ ತ್ರಯೋ | ದಶ ಗ್ರಂಥಿüಯುತ ಹರಿದ್ರಾದೋರಗಳಲಿ | ಭಾಸುರಾಮತಿವೀವ ಹನುಮನಾವ್ಹಾನಿಸಿ | ಪೇಶಲಾಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ | ಶ್ರೀಸೀತೆವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ | ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದನೇನೆಂಬೆ | ಲೇಶಬಿಡದೇ “ಓಂ ನಮೋಭಗವತೇ ವಾಯುನಂದನಾಯ” | ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ಡನೋ | ದೇಶಪರಿಮಿತ ಪ್ರಸ್ಥತ್ರಯೋಶಗೋಧೂಮವನು | ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತದಾನ | ಮೀಸಲಾ ಮನದಿ ಈ ಸತ್ಕಥೆಯನು ಕೇಳಿ | ಭೇಶಮುಖಿ ಸೀತಿಯಳ ಕೊಡ್ದನೆಂಬದು ಖ್ಯಾತಿ | ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ | ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ | ತೋಷದಲಿ ವಿಭೀಷಣ ಶ್ರೀರಾಮನಾಙÉ್ಞಯಿಂ ಮಾಡ್ಡು | ದೇಶಲಂಕೆಯ ರಾಜ್ಯವನು ಪಡೆದನು | ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ | ಲೇಸುವಿಶ್ರುತವಾದಿತೈ ಹನುಮದ್ವ್ರತವೂ | ಪರಿಯಂತ ಮಾಡ್ಡುದ ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೆ | “ಮಾಸಾನಾಂ ಮಾರ್ಗಶೀರ್ಷೋಹಂ” ಎಂದು ಗೀತೆÀಯಲಿ ಆ ಸ್ವಾಮಿ ದಿವ್ಯನುಡಿಯುಂಟು ಕೇಳ್ ಧರ್ಮಜನೆ | ಸ್ತ್ರೀಸಹಿತ ಅನುಜರೊಡನೇ ಈ ವ್ರತವನು | ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ | ಕೋಶ ಭಾಂಡಾರಪ್ರಾಪ್ತಿಯಾಗುವದು | ಲೇಶ ಸಂಶಯ ಬ್ಯಾಡೆನಲು ಶ್ರೀ ವ್ಯಾಸ | ಆ ಸುಂದರ ವಿಠಲನ ಭಕುತರು ಮುದಭರಿತರಾಗೆ 8 ರೂಪತಾಳ ರವಿಯು ವೃಶ್ಚಿಕ ರಾಶಿಗೆ ಬರಲಾಗಿ | ಸವೆಯಾದ ಪದವೀವ ವ್ರತವಮಾಡುವದಕ್ಕೆ | ಕವಳಾ ಅಜ್ಞಾನಾಖ್ಯ ರಾತ್ರಿಕಳೆದು | ಸುವಿಮಲಾಜ್ಞಾನಾಖ್ಯ ಪ್ರಾತಃ ಕಾಲದಲೆದ್ದು | ಕವಿವ್ಯಾಸರ ಮುಂದೆ ಮಾಡಿ ಧರ್ಮಜನು | ಸುವಿವೇಕಬುದ್ಧಿಯಿಂ ಸ್ನಾನಾದಿಗಳ ಮಾಡಿ | ಹವಿಷಾದಿ ದ್ರÀ್ರವ್ಯಗಳಲಿ ಹರಿಯಚಿಂತಿಸಿ ಮಾ | ಧವÀನಾಜ್ಞೆಯಂತೆ ಉದ್ಯಾಪನವಂಗೈದು | ಕವ್ಯವಾಹನನಲ್ಲಿ ಮೂಲಮಂತ್ರದಿಂದ | ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ | ನವಭಕುತಿಯಲಿ ಹನುಮಂತನ ವ್ರತಾಚರಿಸಲು | ಹವಣಿಸಿ ಸಂವತ್ಸರವು ಪೋಗಲು ಪಾಂಡವರು | ಬವರದಲ್ಲಿ ಕೌರವರಗೆ
--------------
ಸುಂದರವಿಠಲ
ಅಧಮನಲ್ಲವೆ ಅವನು ಅಧಮನಲ್ಲವೆ | ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ ಕರವ ಮುಗಿದು ಜಿಹ್ವೆಯಲ್ಲಿ | ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು 1 ಕುಡತಿ ಜಲವ ಕೊಂಡು ರವಿಗೆ | ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು 2 ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು | ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು 3 ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ | ಕೊಳದ ಯಿದ್ದ ಹೀನ ನರನು 4 ಪೊಡವಿಯರಸ ಕೇಶವನ್ನ | ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು |5 ಸಿರಿ | ವಿಠ್ಠಲನ ಮುಂದೆ ತಂದು | ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು6 ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ | ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು 7 ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ | ಕಂಸಾರಿ ಎನದ ಹೀನ ನರನು 8 ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು | ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು 9 ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ | ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು 10 ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ | ಸೊಲ್ಲು ಪೇಳಿ ಬಾಳದವನು 11
--------------
ವಿಜಯದಾಸ
ಅಧೀನ ಸ್ತೋತ್ರ ನಿನ್ನಧೀನವು ಎಲ್ಲ ಘನ್ನ ಸುಮಹಿಮನೆ ಪ ಬೊಮ್ಮನ ಪಿತ ನೀನು ಅಮ್ಮ ಲಕುಮಿಪತೆ ಎಮ್ಮನು ಪೊರೆ ಶ್ರೀನಿವಾಸ 1 ಬೃಹದಣುರೂಪನೆ ಮಹದಣು ಸರ್ವದಿ ಬಹಿರಂತರದಿ ಇಹ ಮಹಾವಿಷ್ಣು ಪರಮಾತ್ಮ 2 ಸಿರಿಯು ನಿನ್ನೊಡಗೂಡಿ ಚರಿಪಳು ಎಲ್ಲೆಲ್ಲೂ ಸರಿ ಯಾರು ನಿನಗಿಲ್ಲ ಪರರುಂಟೆ ಸಿರಿಸೇವ್ಯ 3 ಅಜ ನರಹರೇ ನಮೋ ಸೃಜಾಸೈಜ ಅಂಗಗಳೊಳ್ ಜ್ವಲಿಸುವೆ ಶಕ್ತೀಶ 4 ಪೋಷ ಕಲುಷಹ ಶೇಷಗಿರೀಶನೆ ದೋಷವೇನಿಲ್ಲದ ಹೃಷೀಕೇಶ ಕ್ಷೇತ್ರಜ್ಞ 5 ಏಕಮಾದ್ವಿತೀಯ ಸರ್ವೋತ್ತಮ ಭೂಮನ್ ಸಾಕಲ್ಯ ನಿನ್ನ ತಿಳಿಯಲು ಅಶಕ್ಯ 6 ಪ್ರಾರ್ಥಿಸಲರಿಯೆ ನಾ ದಯದಿ ನೀ ಸಲಹೆನ್ನ ವೃತತಿಜಾಸನ ತಾತ ಪ್ರಸನ್ನ ಶ್ರೀನಿವಾಸ 7
--------------
ಪ್ರಸನ್ನ ಶ್ರೀನಿವಾಸದಾಸರು